Thursday, 1 November 2018

ಭಿನ್ನ...

ನಿನ್ನ ಗುಣಗಳನ್ನು
ನೀ ಪೋಷಿಸು...
ದೋಷ ಗುರುತಿಸಲು ಜನರಿದ್ದಾರೆ....

ಹೆಜ್ಜೆ ಇಡುವದಾದರೆ
ಮುಂದೆ ಮುಂದೆ ಇಡು...
ಹಿಂದೆ ಎಳೆಯಲು
ಜನರಿದ್ದಾರೆ....

ಕನಸು ಕಾಣುವದಾದರೆ
ಎತ್ತರಕ್ಕೇರುವ ಕನಸು ಕಾಣು...
ಕೆಳಗಿಳಿಸುವ ಜನರಿದ್ದಾರೆ....

ಹೊತ್ತಿಸುವದಾದರೆ
ಮನದಲ್ಲಿ ಚೈತನ್ಯದ ಕಿಡಿ ಹೊತ್ತಿಸು...
ಮನದಲ್ಲಿ ಕುದಿಯುವ
ಸಾಕಷ್ಟು ಜನರಿದ್ದಾರೆ...

ಕಟ್ಟಿಕೊಳ್ಳುವದಾದರೆ
ಸವಿನೆನಪುಗಳ ಕಟ್ಟಿಕೋ...
ಮಾತಿನ ಮಹಲು ಕಟ್ಟುವ
ಜನವಿದ್ದಾರೆ...

ಪ್ರೀತಿಸುವಿಯಾದರೆ
ನಿನ್ನ ನೀ ಪ್ರೀತಿಸು...
ದ್ವೇಷಿಸಲು ಜನರಿದ್ದಾರೆ...

ಇರುವಿಯಾದರೆ ಮುಗ್ಧಮನದ
ಮಗುವಿನಂತೆ ಇರು..
ತಿಳುವಳಿಕೆ ಕೊಡಲು ಸಾಕಷ್ಟು
ಜನರಿದ್ದಾರೆ...

ನಂಬಿಗೆ ಇಡುವದಾದರೆ
'ಸ್ವಂತ' ದ ಮೇಲಿಡು....
ಸಂಶಯಿಸಲು ಜನರಿದ್ದಾರೆ...

ನಿನ್ನನ್ನು ನೀನು ಬೆಳೆಸಿಕೋ
ಕನ್ನಡಿ ತೋರಿಸಲು
ಜನರಿದ್ದಾರೆ...

ಇತರರಿಗೆ ಭಿನ್ನನಾಗಿ ಬೆಳೆ...
ಗುಂಪಿನಲ್ಲಿ ಗೋವಿಂದ
ಎನ್ನಲು ಜನರಿದ್ದಾರೆ...

ಬದುಕಲ್ಲಿ ಏನನ್ನಾದರೂ
ಸಾಧಿಸಿ ತೋರಿಸು...
ಚಪ್ಪಾಳೆ ತಟ್ಟಲು ಬೇಕಾದಷ್ಟು
ಜನರಿದ್ದಾರೆ..

( WhatsApp ಹಿಂದಿ ಸಂದೇಶದ ಅನುವಾದ- ಕೃಷ್ಣಾ ಕೌಲಗಿ)

No comments:

Post a Comment

ರಕ್ಷಾ ಬಂಧನ... ಕೈಗೆ ಕಟ್ಟುವ ಎಳೆಗೆ ನೂರೆಂಟು ನೂಲುಗಳು.. ಮೇಲೆರೆಡು ಗಂಟುಗಳು ಬಿಗಿಯಾಗಲು... ನೂರಾರು ನೂಲುಗಳೆ ನೂರಾರು ಭಾವಗಳು.. ಹೃದಯ- ಹೃದಯದ ಬೆಸುಗೆಗಣಿಯಾಗಲು......