Thursday 18 February 2021

೪೦: ನಿಲ್ಲಿ ನೆನಪುಗಳೇ, ಎಲ್ಲಿ ಹೋಗುವಿರಿ...

.    
                                      ‌   ‌ಒಂದು  ಪದ್ಯವನ್ನು  ಭಾಮಿನಿ ಷಟ್ಪದಿಯಲ್ಲಿ  ಬರೆಯಲು ಪ್ರಯತ್ನಿಸುತ್ತಿದ್ದೆ. ಅದೇ ಆಗ ಆ  ಕಾವ್ಯ ಪ್ರಕಾರ  ಕಲಿಯುತ್ತಿರುವ  ನನಗೆ      ಅದರಲ್ಲಿ  ತಿದ್ದುಪಡಿಗಳು  ಜಾಸ್ತಿ ಇರುತ್ತಿದ್ದವು . ನಾನು  direct   type ಮಾಡುವದೇ ಹೆಚ್ಚು,  ಆದರೆ ಈ  ಪದ್ಯ ಪ್ರಕಾರ ಕಠಿಣವಾದುದರಿಂದ ಹಾಳೆಯ ಮೇಲೆ  ಬರೆದು, ಬೇಕಾದ ತಿದ್ದು ಪಡಿಗಳು ಮುಗಿದಮೇಲೆ post ಮಾಡುವದನ್ನು ಮಾಡಬೇಕಿತ್ತು .ಇಂದು ಬರೆದಾದಮೇಲೆ ನೋಡುತ್ತೇನೆ , ಕೈಯ ಬೆರಳು ಸಂದುಗಳಲ್ಲಿ ಪೆನ್ನು ಸೋರಿ ಮಸಿ ಇಳಿದಿದೆ. ಒಮ್ಮೆಲೇ ಅದು ಏನು ಕಲೆ ಹೊಳೆಯಲಿಲ್ಲ.  ಹೊಳೆದಾಗ  ಕಂಗಳಲ್ಲಿ ಝಗ್ಗನೇ  ಮಿಂಚು. ಏನೇನೋ ನೆನಪುಗಳ ಸರಮಾಲೆ.  ಅರವತ್ತು ವರ್ಷಗಳ  ಹಿಂದಿನ  flash back ಲೀಲೆ... ಮನದ ಪರದೆಯ ಮೇಲೆ...  

ಆಗಿನ್ನೂ refill pen ಗಳ ಬಳಕೆ ಬಂದಿರಲಿಲ್ಲ. ಮಸಿಯ pen ಎಂಥದೇ ಖರೀದಿಸಿದರೂ  ಪೆನ್ನಿನ 'ನಾಲಿಗೆ' ಗೆ ಇನ್ನಿಲ್ಲದ ಚಪಲ. ಬೆರಳು ಸೋಂಕಿದರೆ  ಸಾಕು, 'ಜೊಲ್ಲು' ಸುರಿಸಿಯೇ ಬಿಡುತ್ತಿತ್ತು...ಊಟದ ವೇಳೆ "ಸ್ವಚ್ಛವಾಗಿ  ಕೈ ತೊಳೆದುಕೊಂಡು ಬಂದರೆ ಮಾತ್ರ ಊಟ" ಇದು ಅವ್ವನ ತಾಕೀತು. ಎಷ್ಟು  ಉಜ್ಜಿದರೂ ಹೋಗದ ಮಸಿಯ ಕಲೆ . ನೆನಪಿದ್ದ ಹಾಗೆ ಮಲ್ಲಿಗೆಯಂತೆ  ಅರಳಿದ  ಬಿಳಿ ಅನ್ನ ಉಂಡ ನೆನಪೇಯಿಲ್ಲ. ಪ್ರತಿನಿತ್ಯ ನೀಲಿ, ಕೆಂಪು ಬಣ್ಣಗಳ ಓಕುಳಿಯಾಟ ತಪ್ಪಿದ್ದೇ ಇಲ್ಲ.  ಇದೂ ಅಲ್ಲದೇ ಸರಿಯಾಗಿ ಟಿಪ್ಪಣಿ ಬರೆದುಕೊಳ್ಳಬೇಕೆನ್ನುವಾಗಲೇ  ಮಸಿ ತೀರುವದು ಅತಿ ಸಾಮಾನ್ಯ. ಅವರಿವರ ಪೆನ್ನಿನಿಂದ ಒಂದಿಷ್ಟು ಎರವಲು ಪಡೆಯುವ ಪ್ರಯತ್ನ ಮಾಡುವದು, ಅದು ಇಬ್ಬರಿಗೂ ದಕ್ಕದಂತೆ desk ಮೇಲೆ ಚಲ್ಲಿಹೋಗಿ ಹಾಳಾಗುವದು ಏನೇನೋ  ಅವಾಂತರಗಳು. ಆಗಲೂ ಮೂಡದಿದ್ದರೆ ಪೆನ್ ಮತ್ತೆ ಮತ್ತೆ  ಝಾಡಿಸಿ, ಮುಂದೆ  ಕುಳಿತವರ  ಯುನಿಫಾರ್ಮ್ಗೆ ಅದು ಸಿಡಿದು, ಪುಟ್ಟದೊಂದು 'ಪಾಣಿಪತ್ ' ಯುದ್ಧವಾಗಿ ಶಿಕ್ಷಕರ  ' ಜನತಾ ನ್ಯಾಯಾಲಯ' ದಲ್ಲಿ 'ನ್ಯಾಯ ' ಖುಲಾಸೆಯಾಗಬೇಕು. ಒಮ್ಮೊಮ್ಮೆ ಶಿಕ್ಷಕರ mood ಕೈಕೊಟ್ಟರೆ ಮಸಿ ಸಿಡಿಸಿದವರನ್ನು  ತಿರುಗಿಸಿ ನಿಲ್ಲಿಸಿ, ಮಸಿ ಸಿಡಿಸಿಕೊಂಡವರಿಂದ ಅವರಿಗೆ  ತಿರುಗಿ ಮಸಿ ಪ್ರೋಕ್ಷಣೆ ಮಾಡಿಸಿದ  ಅನೇಕ ಪ್ರಕರಣಗಳೂ  ಉಂಟು. ಅದರ ನೋವು ಇಬ್ಬರಿಗೂ ಸರಿಸಮವಾಗಿ ಹಂಚುವ ಪ್ರಾಮಾಣಿಕ ಪ್ರಯತ್ನದ ‌ ‌‌‌ಅಂಗವಾಗಿ... ಇನ್ನು ಯಾರಾದರೂ  ಮಕ್ಕಳು desk ಮೇಲೆ ಮಲಗಿ ಅರೆಗಳಿಗೆ  ಕಣ್ಮುಚ್ಚಿದರೋ ಆಯಿತು ಅವರ ಅವಸ್ಥೆ...ಮಸಿ ಪೆನ್ನು ಬಳಸಿ  ಅವರು ಕಣ್ಣು ಬಿಡುವದರಲ್ಲಿ ಪಾಕಿಸ್ತಾನದ ಭಯೋತ್ಪಾದಕರಂತೆ ಗಡ್ಡ, ಮೀಸೆ   ಬರೆದು , ಕಣ್ಣು ತೆರೆದಾಗ' ತಾನಾರೆಂದು ' ಅವರಿಗೇನೇ  ತಿಳಿಯದ' ಅಯೋಮಯ ಸ್ಥಿತಿಯುಂಟಾಗುವದೂ ಇತ್ತು. ಹುಡುಗಿಯರ desk ಮೇಲೆ ಕಂಡೂ ಕಾಣದಂತೆ ಕೆಂಪು ಮಸಿ ಸಿಡಿಸಿ ,ಅದರ ಮೇಲೆ ಕುಳಿತಮೇಲೆ ಹೇಗೋ ಗೊತ್ತಾಗಿ ,ಅವರನ್ನು ಗಾಬರಿಗೆ ಸಿಲುಕಿಸಿ ಸಮೀಪದ ಗೆಳತಿಯರ ಮನೆಗೆ ಹೋಗಿ ಯುನಿಫಾರ್ಮ್ ಬದಲಿಸಿ ಬರಬೇಕಾದ ಸಂದರ್ಭಗಳೂ ಅಪರೂಪಕ್ಕೆ ಆದದ್ದುಂಟು . 
ಇನ್ನು ವಾರ್ಷಿಕ ಪರೀಕ್ಷೆ ಮುಗಿಯಿತೋ  ಕೊನೆಯ ದಿನ ಎರಡು ಮೂರು ಪೆನ್ನುಗಳಿಗೆ ಮಸಿ ತುಂಬಿಸಿ ತರುತ್ತಿದ್ದುದೂ ಉಂಟು. ಕೊನೆಯ ಗಂಟೆ ಯಾಗುತ್ತಲೇ ಹುಡುಗರು ಶಾಲೆಯ ಮುಂದೆ ಜಮಾಯಿಸಿ ಒಬ್ಬರಿಗೊಬ್ಬರು ಮಸಿ ಎರಚಾಟ ಅತಿ ಸಾಮಾನ್ಯ ವಿಷಯ...  ಕೆಲವು ಬಡಮಕ್ಕಳು Uniform ಮುಂದಿನ ವರ್ಷಕ್ಕೆ ಕಾಪಾಡಿಕೊಳ್ಳುವ ಉದ್ದೇಶದಿಂದ  ಸ್ವಲ್ಪು ಮೊದಲೇ paper ಕೊಟ್ಟು ಹೋದರೆ, ಕೆಲವು ಜಾಣ ಮಕ್ಕಳು ಓಕಳಿಗೆ ಸಿದ್ಧರಾಗಿ ಬರುವಂತೆ ಒಂದು  ವರ್ಷ  ಹಳೆಯ uniform ಕಾದಿರಿಸಿದ್ದುಕೊಂಡು ಆ ದಿನ ಧರಿಸಿ ಬರುತ್ತಿದ್ದುದೂ ಇತ್ತು.  ಬಹುತೇಕ  ಇಂದಿನ ಬಹಳಷ್ಟು ಪ್ರಸಿದ್ಧ cartoonist/ ಚಿತ್ರಕಾರರ ತರಬೇತಿ , ಮಸಿಯಿಂದ desk ಮೇಲೆ ಗೀಚಿದ ಹುಡುಗಿಯರ/ ಗುರುಗಳ caricatures ದಿಂದಲೇ ಶುರುವಾದದ್ದು ಎಂಬ  ಅನುಮಾನ ನನಗೆ. ಬೇಸರ ತರಿಸುವ ಅಥವಾ ಕಬ್ಬಿಣದ ಕಡಲೆಯಂತಹ  ಕಠಿಣ ವಿಷಯಗಳನ್ನು ಕಡ್ಡಾಯವಾಗಿ ಕೇಳಲೇಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತೋ ಶುರು, ಅವರ ಸೃಜನ ಶೀಲತೆಗೆ ಬಾಗಿಲು ಮುಕ್ತವಾಗಿ ತೆರೆದಂತೆ...ಅವಧಿಯೊಂದು ಕಳೆಯುವದರಲ್ಲಿ desk ಗಳ ಮೇಲೆ , ನೋಟಪುಸ್ತಕಗಳಲ್ಲಿ , ಕೆಲವೊಮ್ಮೆ ಅಪರೂಪಕ್ಕೆ ಮುಂದೆ ಕುಳಿತವರ ಬಿಳಿ ಶರ್ಟು ಗಳ ಮೇಲೂ  ಕುಜರಾಹೋ, ಅಜಂತಾ, ಕೊನಾರ್ಕ, ಬೇಲೂರು, ಹಳೆಬೀಡುಗಳಲ್ಲೂ ನೋಡಲು ಸಿಗದ ಕಲಾಕೃತಿಗಳ  ಸೃಷ್ಟಿಗಳು... ' ಮಸಿ ಬಳಿಯುವ ಕೆಲಸ' ಅನ್ನುವದು ಅಲ್ಲಿಯವರೆಗೆ ಬಯ್ಗಳು ಎನ್ನುವದು ನಮಗೆ ಗೊತ್ತಿತ್ತು. ಅದೂ ಒಂದು 'ಕಲೆ' ಎಂಬುದು ಅರಿವಾದದ್ದು ವಿದ್ಯಾರ್ಥಿಯಾಗಿದ್ದಕ್ಕೂ ಹೆಚ್ಚಾಗಿ ಶಿಕ್ಷಕಿಯಾದ ಮೇಲೇಯೇ ಹೆಚ್ಚು.         ಕುಂಕುಮ ಮರೆತುಬಂದರೆ ಕೆಲವು ಶಿಕ್ಷಕ, ಶಿಕ್ಷಕಿಯರ  ಹೆದರಿಕೆಗಾಗಿ ಮಸಿಯಿಂದ ಹಣೆಯಮೇಲೆ Red ink ನಿಂದ ಗುರುತು ಮಾಡುವದು, ಕೂದಲಿಗೇನಾದರೂ ಎದ್ದು ಕಾಣುವಂಥ ಕಲೆ ಹತ್ತಿದರೆ ನೀಲಿ  ಅಥವಾ ಕಪ್ಪು  ಮಸಿಯಿಂದ ಅದನ್ನು ಮುಚ್ಚುವದೂ ಮುಂತಾದ ' ಮುದ್ದಾಂ' ತುರ್ತು ಉಪಯೋಗಗಳೂ ಇಲ್ಲದಿರಲಿಲ್ಲ. "ಒಂದು ಹನಿ ಮಸಿ ಚಿತ್ತಾರ ನುಂಗಿತು"  ಎಂಬ ಗಾದೆ ಮಾತು ಗೊತ್ತಿತ್ತು, ಆದರೆ ಒಂದು ಮಸಿ ಪೆನ್ನಿನಿಂದ ನೂರು ಚಿತ್ತಾರಗಳು ರೂಪುಗೊಳ್ಳುತ್ತಿದ್ದುದನ್ನು ಪ್ರತಿನಿತ್ಯ ಕಾಣುವ ಭಾಗ್ಯ ಶಿಕ್ಷಕ, ಶಿಕ್ಷಕಿಯರ  ಪಾಲಿಗೆ ಲಭ್ಯವಿರುತ್ತಿತ್ತು.

    ‌ಇಂದು ಅಕಾಸ್ಮಾತ್ ಆಗಿ ಬೆರಳುಗಳ ಸಂದು ಮಸಿಯಿಂದ ನೀಲಿಯಾದಾಗ ಅದು ಮಸಿಯ ನೀಲಿಯಾಗಿ ಕಾಣಲೇಯಿಲ್ಲ. ಹೃದಯಕ್ಕೆ ಹತ್ತಿರವಾದ ಆಕಾಶದ ನೀಲಿ, ಶಾಂತ ಸಮುದ್ರದ ಮನ ಮುದದ ನೀಲಿಯಾಗಿ ಕಂಡದ್ದು ರೋಮಾಂಚಕ ಅನುಭವಲ್ಲದೇ ಮತ್ತೇನು?? 
 
ಮನಸ್ಸಿನ ಮೇಲೆ  ಮಾಯದ ' ಕಲೆ' ಅಂದರೆ ಇದೇನಾ????

Friday 12 February 2021

೩೯- 'ಬಹುರೂಪ ದರ್ಶಕ'ದ ಸಪ್ತವರ್ಣ ಬಿಂಬಗಳು...



ಬಿಂಬ-೧
ಗೆಲುವು...

ನನ್ನ  ಮನಶ್ಯಾಸ್ತ್ರದ  ಸಂಶೋಧನೆಯ ಭಾಗವಾಗಿ ನನ್ನ ಅಜ್ಜಿಯ ಸಂದರ್ಶನ ತೆಗೆದುಕೊಳ್ಳುತ್ತಿದ್ದೆ."ಯಶಸ್ಸು ಅಂದ್ರೆ  ನಿನ್ನ ದೃಷ್ಟಿಯಲ್ಲಿ ಯಾವುದು?" ನಿನ್ನ ಕಳೆದುಹೋದ ಬದುಕನ್ನೊಮ್ಮೆ ನೀನೇ ಹಿಂದಿರುಗಿ ನೋಡಿದಾಗ 
ಆ ನೆನಪುಗಳು ನಿನ್ನ ಮುಖದ ಮೇಲೆ  ಒಂದು ಸುಂದರವಾದ ಮುಗುಳ್ನಗೆ ಮೂಡಿಸಬೇಕು". ಅದು ಗೆಲುವು. ಯಶಸ್ಸು...

ಬಿಂಬ -೨.
ನೋವು...

ನನ್ನ ಸಾಕು ನಾಯಿ ಒಂದು ಕಾರಿನ ಗಾಲಿಗೆ ಸಿಕ್ಕು ಕೊನೆಯ  ಉಸಿರು ಎಳೆಯುವಾಗ ಅದನ್ನು ಅಪ್ಪಿ  ರಸ್ತೆಯ ಬದಿಗೆ ಕುಳಿತು  ಅಳುತ್ತಿದ್ದೆ. ಸಾಯುವ ಕೊನೆಯ ಗಳಿಗೆಯಲ್ಲಿ ಅದು ಕಷ್ಟ ಪಟ್ಟು,  ನನ್ನ ಗಲ್ಲದ ಮೇಲೆ ಇಳಿಯುತ್ತಿದ್ದ ಕಣ್ಣೀರು ನೆಕ್ಕಿ ಒರೆಸಲು  ಹವಣಿಸುತ್ತಿತ್ತು.

ಬಿಂಬ-೩.
ಒಂದುಗೂಡುವಿಕೆ...

ನನ್ನ ತಂದೆ, ಅವರ ಮೂರು ಜನ ಅಣ್ಣ-ತಮ್ಮಂದಿರು, ಇಬ್ಬರು ಅಕ್ಕ ತಂಗಿಯರು ಆಸ್ಪತ್ರೆಯಲ್ಲಿ  ನಮ್ಮಮ್ಮನ  ಹಾಸಿಗೆಯ ಸುತ್ತ ನೆರೆದಿದ್ದರು. "ನನ್ನ  ಮನಸ್ಸಿಗೆ ಎಷ್ಟೊಂದು ಹಿತವೆನಿಸುತ್ತಿದೆ ಈಗ . ಈ ಮೊದಲೂ ಹೀಗೆಯೇ ಹಲವು ಬಾರಿ  ನಾವೆಲ್ಲರೂ ಕೂಡ ಬಹುದಿತ್ತು." - ಇವು ನಮ್ಮಮ್ಮನ ನುಡಿಗಳು...

ಬಿಂಬ-೪.
ಪ್ರೀತಿ...
 
ದವಾಖಾನೆಯ ಹಾಸಿಗೆಯಲ್ಲಿ ನನ್ನ ತಂದೆಯ ಪಾರ್ಥಿವ ಶರೀರ ಇನ್ನೂ  ಇತ್ತು .ಕೊನೆಗೆ ಎಂಬಂತೆ  ನಾನು ಅವರ ಮುಖವನ್ನೊಮ್ಮೆ ಚುಂಬಿಸಿದೆ.ಆಗಲೇ ನನಗೆ ನೆನಪಾಗಿದ್ದು, ನನ್ನ ಬಾಲ್ಯ ಕಳೆದ ಮೇಲೆ ನಾನವರಿಗೆ ಕೊಟ್ಟ ಮೊತ್ತ ಮೊದಲ ,ಹಾಗೂ ಕಟ್ಟ ಕಡೆಯ ಮುತ್ತು ಅದಾಗಿತ್ತು😒😒😒

ಬಿಂಬ-೫.
ಖುಶಿ...

ಇಪ್ಪತ್ತೇಳು ವರ್ಷಗಳ ಕ್ಯಾನ್ಸರ್ ಪೀಡಿತ ಯುವಕನೊಬ್ಬ ತನ್ನ ಎರಡು ವರ್ಷಗಳ ಮಗಳ ತುಂಟಾಟಗಳನ್ನು ನೋಡುತ್ತಾ ಗಹಗಹಿಸಿ ನಗುತ್ತಿದ್ದ. ಇನ್ನು ನನ್ನ ಬದುಕಿನ ಅಪಸವ್ಯಗಳ ಬಗ್ಗೆ ಗೊಣಗುಟ್ಟದೇ ಅದನ್ನು ಇದ್ದಂತೆಯೇ ಆನಂದಿಸಬೇಕೆಂದು  ಆಗಲೇ ನಿರ್ಧರಿಸಿದೆ.


ಬಿಂಬ-೬.
ಕರುಣೆ...

ನಾನು ಎರಡೂ ಬಗಲಲ್ಲಿ 
ಊರುಗೋಲುಗಳನ್ನು ,ಹಾಗೂ  ಪುಸ್ತಕ ಗಳನ್ನು ಹಿಡಿದು ಕೊಂಡು fracture ಆದ ಕಾಲಿನೊಂದಿಗೆ ನಡೆಯುವುದಕ್ಕೆ ಹೆಣಗುತ್ತಿರುವದನ್ನು ಕಂಡ  ಗಾಲಿ ಕುರ್ಚಿಯಲ್ಲಿ ಹೋಗುತ್ತಿದ್ದ ಎರಡೂ ಕಾಲಿಲ್ಲದ ವಿದ್ಯಾರ್ಥಿ ನನ್ನ  ಪುಸ್ತಕಗಳನ್ನು ಹಾಗೂ ಬೆನ್ನು ಮೇಲಿದ್ದ ಚೀಲವನ್ನು ನನ್ನಿಂದ ಪಡೆದು ನನ್ನನ್ನು ನನ್ನ ವರ್ಗದ ಕೋಣೆಯವರೆಗೂ ತಲುಪಿಸಿ ಮರಳಿ ಹೋಗುವಾಗ ನನಗೆ ಹೇಳಿದ," ಚಿಂತಿಸಬೇಡಿ, ಬೇಗನೇ ಗುಣವಾಗಿ ಮೊದಲಿನಂತೆ ನಡೆಯುತ್ತೀರಿ."

ಬಿಂಬ-೭.
ಹಂಚಿಕೊಳ್ಳುವಿಕೆ...

ನಾನು ಕೆನ್ಯಾದ ಪ್ರವಾಸದಲ್ಲಿದ್ದೆ. ಒಮ್ಮೆ ಜಿಂಬಾಬ್ವೆಯಿಂದ ವಲಸೆ ಬಂದ ಪ್ರವಾಸಿಯೊಬ್ಬನ ಭೇಟಿಯಾಯಿತು. ತುಂಬಾ ತೆಳ್ಳಗೆ, ತೀರಾ ಅಶಕ್ತನಂತೆ ಕಂಡ ಅವನು ಮೂರು ದಿನಗಳಿಂದ ಏನನ್ನೂ ತಿಂದಿಲ್ಲ ಎಂಬುದು ತಿಳಿದು ಬಂದಾಗ, ನನ್ನ ಗೆಳೆಯ ತನ್ನ ಕೈಯಲ್ಲಿದ್ದ  ಅರ್ಧ sandwichನ್ನು  ಅವನಿಗೆ ಕೊಟ್ಟ. ತಕ್ಷಣ  ಆ ಮನುಷ್ಯ ಹೇಳಿದ್ದು,"
ನಾವಿದನ್ನು ಹಂಚಿಕೊಂಡು ತಿನ್ನಬಹುದು."😍

(ಇಂಗ್ಲಿಷ ಮೂಲ)

Thursday 11 February 2021

೩೮ . Relationships...As you sow, so you may not reap...

In1990 ,we the family members had gone on a tour.
Our daughter Maitri was  of only ten months baby at the time. Many people wondered how we could manage that.

After a week Maitri became sick. She used to cry all the time when ever we got into our Van and it was non-stop till we came back to our home. but to our surprise, after coming home she used be happy enough to crawl around the whole house and we could not make her sleep easily.

This is how we develope  attachements  in life right from our childhood . Many times some relationships disappear by themselves.In some case new relationships take over the old ones automatically. What ever may be the cause, ultimate ly we are the ones, who suffer emotionally.

 Our childhood experiences find their roots deep into our hearts and make us feel comfortable and cool  when ever we visit  those places ,meet those childhood friends, revive  those childhood memories. It will be still more intense if the life ,we are leading now is totally of different kind.

Especially those people, who are more emotional kind of persons, suffer more, feel more, fear more as and when  nothing works according to their expectations.

FEAR means something  like  our inability to face a new situation and skill to handle it. The only way to get rid of it  is ," to get into it and tackle boldly".

That FEAR is like a ghost which we have never seen, but always think it is THERE and may harm us ANY TIME/ANYWAY.

To get ourselves free from this fear ,there are only TWO WAYS.

One, to be ready physically and mentally to face ,and fight it whatever may come next .

 Second, to accept what ever comes on our way,( to  leave it to our fate or destiny) when we could do nothing about it.

While doing this, two things matter a lot. Do the family members ,whom we claim as OURS,  support us, or stand against our policy. How  they behave, how they analyse  our  stand , affect us EMOTIONALLY.

*  Difference between husband and wife.

* Differences between in laws.

* Differences between colleagues in workplaces.

* Non acceptance with friends.

* Fights with Neighbours.

* Lack of trust between lovers

All these are day- today  happenings  of our lives.

More threatening is, when OUR OWN PEOPLE  cheat us  by  supporting  the other group and joining  in their foul play.

Now it is THE RIGHT TIME  to  decide whether or how much we have to be in such relationships.

It's very difficult to decide it when/ if we are driven by emotions. One more difficult thing is to get into someone's shoes.We don't think from their angle most of the times, but get stuck into self woven webs. We will be successful when we are un biased ,more so in relationships.Then only relationships can last long

There is not any thing new in it, we know it ,but don't adapt it easily. We don't think, what we expect from others, may be vice versa . We  forget  such things intentionally or otherwise.

 This is life. All relationships are bound to perish one or the other day. It's BARE TRUTH. We have to accept it, and act accordingly. Memories are the  "only companions" till death
In life. We should know it.

Our life has " priorities " They go on changing as life goes on. Nothing is permanent in life. Everything just adds to our experiences ands helps us to move on...
 
That's how life is to be  moulded into shape. Take the example of Mahatma Gandhi.
His recklass childhood, western life style in South Africa, experience of being thrown out
from the railway bogi, all such experiences  moulded him into a totally different person.

 It's clear, we can't aim at such a big thing, but definitely
can dream of something within our capacity level and do whatever best we can...

So , not crying anymore for the relationships  gone,
doing whatever  possible for a 
 happy and healthy life, utilising the the time the WAY WE WANT is the only possible solution to solve such problems permanent ly.

(My Translation of Kannada article, "Sabmbandhagalu" by. Shri Nagesh-.a columnist, on 
a demand by a friend.)

Monday 8 February 2021

೩೭.' ಹಬ್ಬ'ಗಳೇ 'ಹುಟ್ಟಿದ ದಿನ'ಗಳಾಗುತ್ತಿದ್ದ ' ಕಾಲ' ನಮ್ಮದು...

ಒಮ್ಮೆ ಒಬ್ಬ ಹಿರಿಯ ಸಾಧಕರನ್ನು ,ಅವರ ' ಶತಾಯುಷ್ಯದ'  ಗುಟ್ಬಿನ ಬಗ್ಗೆ ಸಂದರ್ಶಕನೊಬ್ಬ  ಪ್ರಶ್ನಿಸಿದಾಗ ಅವರು ಹೇಳಿದ್ದು," ಗುಟ್ಟೂ ಇಲ್ಲ, ಮಣ್ಣೂ ಇಲ್ಲ, ನನ್ನ  ಶತಾಯುಷ್ಯದ ಗುಟ್ಟೆಂದರೆ ನೂರು ವರ್ಷಗಳ ಹಿಂದೆ ನಮ್ಮವ್ವ ನನ್ನನ್ನು ಹಡೆದದ್ದು" ಎಂದಿದ್ದರಂತೆ.

" ಒಂದು ವರ್ಷ ನಮ್ಮ  ಆಯುಷ್ಯದಲ್ಲಿ ಹೆಚ್ಚಾಗುವದೆಂದರೆ ನಮ್ಮ ಸಾವಿಗೆ  ಒಂದು ವರ್ಷ ನಾವು ಹತ್ತಿರವಾದಂತೆ. ಆಗ ಸಂಭ್ರಮ ವಿಚಿತ್ರವಲ್ಲವೇ? _ಹೀಗೆಂದು ನಮ್ಮ ಗುರುಗಳನ್ನು ಕೇಳಿದ್ದೆ.
" ಎಷ್ಟೋ ಮಕ್ಕಳು ಹುಟ್ಟುತ್ತವೆ, ಬೆಳಕು ಕಾಣುವ ಮೊದಲೇ ಕಣ್ಣು ಮುಚ್ಚುತ್ತವೆ.
ಅನೇಕ ಮಕ್ಕಳಿಗೆ ತಾಯಿ ,ತಂದೆಯ ಭಾಗ್ಯವಿರುವದಿಲ್ಲ. ಲಾಲಿಸಿ, ಪಾಲಿಸುವವರಿರುವದಿಲ್ಲ.ಅನೇಕ ಮಕ್ಕಳು ಹುಟ್ಟುವಾಗಲೋ, ನಂತರ ವೋ  ಅಂಗವಿಕಲರಾಗಿರುತ್ತಾರೆ.
ಇದಾವುದೂ ಇಲ್ಲದೇ ದೈವೀ ಕೃಪೆಯಿಂದ
ಕೆಲವರ್ಷಗಳನ್ನು ಕಳೆಯುವಂತಾದರೆ
ಅದು ಸಂಭ್ರಮವಲ್ಲವೇ?"- ಎಂದಿದ್ದರು
ಗುರುಗಳು. ಮರುಮಾತಾಡದೇ ಒಪ್ಪಿಕೊಂಡಿದ್ದೆ.

ಅಪರೂಪಕ್ಕೆ ಒಂದು ಮಗುವಾದರೆ ನಿತ್ಯ ಸಂಭ್ರಮ. ಹತ್ತು/ಹನ್ನೆರಡು ಮಕ್ಕಳ ಮಧ್ಯೆ ಇನ್ನೊಂದಾದರೆ ಅದು ಆಕಸ್ಮಿಕ. ನಮ್ಮ ವೇಳೆಯಲ್ಲಿ ಆಗುತ್ತಿದ್ದುದು ಅದೇ. 'ಬರಗಾಲದಲ್ಲಿ  ಅಧಿಕಮಾಸ' ಅಂದ ಹಾಗೆ, 'ಹತ್ತರ ಕೂಡ ಹನ್ನೊಂದು' ಅಂದ ಹಾಗೆ , ನಮ್ಮನ್ನು ನಮ್ಮ ಪಾಲಕರು ಬಹುಶಃ ಸ್ವೀಕಾರ ಮಾಡಿದ್ದು. ಅಂದಮೇಲೇ 'ಹುಟ್ಟು' 'ಹಬ್ಬ'ವಾಗುವದು ಕಲ್ಪನಾತೀತ. ಇದು ಆಗಿನ ಕಾಲದ ಬಹುತೇಕ ಮನೆಗಳಲ್ಲೂ ಕಂಡುಬಂದ ಸತ್ಯ.( ಕನಿಷ್ಠ ನನ್ನ ಪಾಲಿಗೆ).

  ನಮ್ಮ ಹೆಸರಲ್ಲೂ ಹುಟ್ಟುಹಬ್ಬ- ಗಳಾಗುತ್ತಿದ್ದವು.  ಆದರೆ ಅದಕ್ಕೆ ಮುಂಬರುವ ಹಬ್ಬಕ್ಕಾಗಿ ನಾವು ಕಾಯಬೇಕಾಗುತ್ತಿತ್ತು.
'ಎರೆದುಕೊಳ್ಳುವವರ ನಡುವೆ ಡೊಗ್ಗಿದಂತೆ'  ಅಂದೊಂದು ದಿನ ನಮ್ಮನ್ನು ಕೂಡಿಸಿ ,ನೆತ್ತಿಗೆ ಎಣ್ಣೆವೊತ್ತಿ,
'ಆಯುಷ್ಯವಂತಳಾಗು.
'ಭಾಗ್ಯವಂತಳಾಗು.
'ಕಲ್ಲು ಖನಿಯಾಗು.
'ಕರಕಿ ಬೇರಾಗು.
-'ಮೂಡಿ'ದ್ದರೆ ಇನ್ನೂ ಇಷ್ಟು'ಏನೇನೋ ' ಆಶೀರ್ವದಿಸಿ ಸ್ವಲ್ಪ ಹೆಚ್ಚು ನೀರು ಹಾಕಿ  ಎರೆದರೆ ಅದೇ ಹಬ್ಬ.ಅಂದು ಧಾರ್ಮಿಕ ಹಬ್ಬವೂ ಆದದ್ದರಿಂದ  ಸಹಜವಾಗಿಯೇ ಮಾಡುವ ಸಿಹಿ ತಿಂಡಿಯೇ  ನಮ್ಮ' ಹುಟ್ಟು ಹಬ್ಬದ' ಮೆನ್ಯೂ'.

ಆಶ್ಚರ್ಯವೆಂದರೆ ಯಾವ ಕಾಲಕ್ಕೂ ನಾವು ಹೆಚ್ಚು ಏನನ್ನೂ  ಬಯಸುತ್ತಲೇ ಇರಲಿಲ್ಲ ಎಂಬುದು.ಒಂದು ರೀತಿಯಲ್ಲಿ ಬದುಕನ್ನೇ  'pre - programming ' ಮಾಡಿಟ್ಟ ಹಾಗೆ. ' ನಿರೀಕ್ಷೆ ಇಲ್ಲದೆಡೆ ನಿರಾಶೆಯೂ' ಇರುವುದಿಲ್ಲ ಎಂದು ಯಾರೂ ಹೇಳಿಕೊಡದಿದ್ದರೂ  ನಾವು ಕಲಿತಿದ್ದು ನಮ್ಮ ಪಾಲಕರನ್ನು ,ಅವರ ಬದುಕನ್ನು , ನೋಡಿಯೇ...

ಇಂದು ಚಿತ್ರ ಸಂಪೂರ್ಣ ತದ್ವಿರುದ್ಧವಾಗಿ ಬದಲಾಗಿದೆ. ಆಗ  'scarcity' (ಕೊರತೆ) ಯ ಸಮಸ್ಯೆಯಿತ್ತು. ಇಂದು 'abundance'- 'ವಿಪುಲತೆ'ಯ  ಸಮಸ್ಯೆ. Software  ಕ್ರಾಂತಿಯಿಂದಾಗಿ   ಎಲ್ಲರಿಗೂ, ಯಾವುದಕ್ಕೂ ಒಂದಿಷ್ಟೂ ಕಡಿಮೆಯಿಲ್ಲ. ಎಲ್ಲರಿಗೂ ತಮ್ಮ, ತಮ್ಮ status ತೋರಿಸುವ ಹಂಬಲ. ಹೀಗಾಗಿ ಅವಶ್ಯಕತೆ ಇರಲಿ, ಬಿಡಲಿ  ವಿಪರೀತ ಖರ್ಚು  ಮಾಡಬೇಕೆಂಬ ಹುಚ್ಚು. ಹೀಗಾಗಿ ಮದುವೆ, ಮುಂಜಿವೆಗಳಂತೆ  ಹುಟ್ಟು ಹಬ್ಬವೂ ಒಂದು Event ಅನ್ನುವ ಮಟ್ಟಕ್ಕೆ ಬಂದು ತಲುಪಿದೆ. ಖಂಡಿತ ನಾನದನ್ನು ಟೀಕಿಸುತ್ತಿಲ್ಲ. ಆದರೆ  ಸಾಧ್ಯವಿರಲಿ, ಬಿಡಲಿ, ಒದ್ದಾಡಿ ಕೊಂಡಾದರೂ ಮಾಡಲೇಬೇಕು ಅನ್ನುವವರು ಒಮ್ಮೆ ಯೋಚಿಸುವುದು ಒಳಿತು ಎಂಬುದು ನನ್ನ ಅನಿಸಿಕೆ. ಅಲ್ಲದೇ ಕೌಟುಂಬಿಕ ನೆಲೆಯಲ್ಲಿ , ಮನೆ ಜನರ ಸಮ್ಮುಖದಲ್ಲಿ  ಆಚರಿಸುವ ಹಬ್ಬದ ಆಪ್ತತೆ ಇಂಥ Big and Fat function ಗಳಲ್ಲಿ ಕಂಡುಬರುವುದಿಲ್ಲ ಎಂಬುದು ಮಾತ್ರ ಅನುಭವ ವೇದ್ಯ...

ಇಂದಿಗೆ ನಾನು  'ಎಪ್ಪತ್ತೈದು' ಮುಗಿಸಿ ಎಪ್ಪತ್ತಾರಕ್ಕೆ ಕಾಲಿಟ್ಟೆ. ನಿನ್ನೆಯಿಂದ ಮನೆಯಲ್ಲಿ ಮೊಮ್ಮಕ್ಕಳ ಚರ್ಚೆ,"ಅಜ್ಜಿ, ಏನು ಮಾಡೋಣ?" ಎಂದು. ಈ  ೭೫ ರ ಅವಧಿಯಲ್ಲಿ ನಾನು ಕಂಡ  ಎಲ್ಲ ರೀತಿಯ ಹುಟ್ಟುಹಬ್ಬಗಳ ಒಂದು ಚಿತ್ರಣ 
ಹಾಗೆಯೇ ಕಣ್ಣಮುಂದೆ ಸುಮ್ಮನೇ ಹಾದು ಹೋದದ್ದು ಹೀಗೆ, ಇದೇ  ಸಮಯದಲ್ಲಿ.  ಸುಮ್ಮನಿರಲಾರದೇ ಅದಕ್ಕೊಂದು ಶಬ್ದರೂಪ ಕೊಟ್ಟೆ.
ಅಷ್ಟೇ  ವಿಷಯ, ಬೇರಿನ್ನೇನೂ ಇಲ್ಲ..
ಒಟ್ಟಿನಲ್ಲಿ, ಹುಟ್ಟುಹಬ್ಬವೆಂದರೆ,
10 % Functions...
90% Emotions...ಇದು ನನ್ನ ಭಾವನೆ.

ಒಂದು ಹೊಸ ಉಡುಪು,
ಎರಡು ಮನ್ ಪಸಂದ್ ಖಾದ್ಯಗಳು...
ಮೂರು/ನಾಲ್ಕು  ಆತ್ಮೀಯ ಕರೆಗಳು...
ಮನೆ ಜನರೊಡನೆ ಒಂದಿಷ್ಟು  ರಸಗಳಿಗೆಗಳು...
THAT'S  IT...





Tuesday 2 February 2021

೩೬..'ಅಳಿದ' ಮೇಲೆ ಉಳಿವುದೇನು???

" ನನ್ನ ತಂದೆ ಸದಾ  ಹಸನ್ಮುಖಿ. ಎಂಥ ಕಷ್ಟಗಳಲ್ಲೂ  ಮುಖ ಮುದುಡಿದವರಲ್ಲ.
ಸದಾ ವಿನೋದಪ್ರಿಯರು. ನಗುವ, ನಗಿಸುವ   ಅತಿಶಯದ ಧರ್ಮ ಅವರದು. ನಗುತ್ತಾ ಈ ಲೋಕ ತೊರೆದು ಹೋದವರು. ಅಂಥವರ ಪುಣ್ಯತಿಥಿಗೆ ಜನ ಬಿಳಿ ಬಟ್ಟೆಯಲ್ಲಿ ಬಂದು ತಲೆ ಕೆಳಗೆ ಹಾಕಿ  ಸಂತಾಪದ ನುಡಿಯಾಡುವದು ಬೇಡ. ನಕ್ಕು ,ನಗಿಸಿ, ಖುಶಿಯಿಂದ ಹೋಗುವಂತಾಗಲಿ.ಅಂದರೆ ನನ್ನ ತಂದೆಗೂ ತೃಪ್ತಿಯಾಗುತ್ತದೆ ಅಂದೆ. ಮನೆಯವರೆಲ್ಲರೂ  ತಕ್ಷಣ ಅನುಮೋದಿಸಿದರು. ಅದಕ್ಕಾಗಿಯೇ ಈ ಹಾಸ್ಯ ಗೋಷ್ಠಿ. ನಮ್ಮ ತಂದೆಯವರ
ಪರೋಕ್ಷ ಸಾನಿಧ್ಯದಲ್ಲಿ..."

ಇದು ಹಿಂದಿ ನಟ ಅನುಪಮ್ ಖೇರ್ ತಮ್ಮ ತಂದೆಯ ಮರಣಾನಂತರದ ಹದಿಮೂರನೇ ದಿನ  ಮಾಡಿದ ಭಾಷಣ.

ಹಾಗೆಯೇ ನಮ್ಮ ದೂರದ ಸಂಬಂಧಿಕರೊಬ್ಬರಿದ್ದರು. ಗಂಡ ,ಹೆಂಡತಿ ಆದರ್ಶ ದಾಂಪತ್ಯಕ್ಕೊಂದು ಅದ್ಭುತ ಮಾದರಿ. ಅನಿವಾರ್ಯತೆ ಹೊರತುಪಡಿಸಿದರೆ ಅವರನ್ನು ಬೇರೆ ಬೇರೆ ಕಂಡಿದ್ದೇ ಇಲ್ಲ.ಅಷ್ಟು ಹೊಂದಾಣಿಕೆ  ಅವರಲ್ಲಿ.ಜಗಳವಂತೂ ಕಂಡರಿಯದ್ದು. ಮಕ್ಕಳೇ ಅವರಿಗೆ forever honeymoon pair ಎಂದು ಛೇಡಿಸುತ್ತಿದ್ದರು. ಕೆಲವರ್ಷಗಳ ನಂತರ ಗಂಡ ಹೃದಯ ಸ್ಥಂಬನದಿಂದ ತೀರಿಕೊಂಡಾಗ ಕೆಲ ದಿನ ಸ್ವಾಭಾವಿಕ ವಾಗಿಯೇ ಹೊರಗೆ ಕಾಣಿಸಿಕೊಳ್ಳಲಿಲ್ಲ. ಕೊನೆಗೊಮ್ಮೆ ಹೊರಬಂದಾಗ ಅವರಲ್ಲಿ ಕಿಂಚಿತ್ತೂ ಬದಲಾವಣೆ ಇರಲಿಲ್ಲ. ಅದೇ ಶಾಂತ ಮುಖ, ಅದೇ ಇರುವಿಕೆ, ಅದೇ ಆರ್ದ್ರತೆ...ಎಲ್ಲರಿಗೂ ತೀವ್ರ ಅಚ್ಚರಿ. ಬೇರೆಯದನ್ನೇ ಊಹಿಸಿಕೊಂಡು ಸಂತೈಸಲು ತಯಾರಾದವರು  ಕಂಗಾಲು.

" ಹೌದು, ನನಗೆ ದುಃಖವಾಗಿದೆ. ಅದು ನನ್ನ ಸ್ವಂತ ಭಾವನೆ. ಅದನ್ನು ಸದಾ ಮುಖದ ಮೇಲೆ  ಹೊತ್ತು  ಇತರರ ಮೇಲೂ ಹೇರುವ ಅಧಿಕಾರ ನನಗಿಲ್ಲ. ಅದೆಲ್ಲ ನನ್ನ ವೈಯಕ್ತಿಕ ವಲಯಕ್ಕೆ / ಅತಿ ಆತ್ಮೀಯರೊಂದಿಗೆ  ಸೀಮಿತ.  ನನ್ನ ಖಿನ್ನ ಮುಖ, ಕಣ್ಣೀರು, ಅಸ್ತವ್ಯಸ್ತ ಇರುವಿಕೆ
ಹೊರಗಿನ ಜನಕ್ಕೆ  ತಪ್ಪು ಅಂದಾಜನ್ನೇ 
ಕೊಡಬಹುದು. " ಪಾಪ, ಎಷ್ಟು ಚನ್ನಾಗಿದ್ದರು, ಈಗ ನೋಡಿ ಏನು ಅವಸ್ಥೆ!!  ಮಕ್ಕಳು ಒಂದಿಷ್ಟು ಚನ್ನಾಗಿ  ನೋಡಿ ಕೊಳ್ಳಬಾರದೇ?" ಅಂದರೆ  ನಾನು  ಇದ್ದೂ ಸತ್ತಂತೆ. ಮೊದಲ ಸಲ ಹೃದಯಾಘಾತವಾದಾಗಲೇ  ನನ್ನವರು ನನ್ನಿಂದ ವಚನ ತೆಗೆದುಕೊಂಡಿದ್ದರು. ಅವರ ಇಚ್ಛೆಯಂತೆ ಇರಬೇಕಾದ್ದು ನನ್ನ ಮೊದಲ ಆದ್ಯತೆ." - ಇದು ಆತ್ಮೀಯರೆದುರು  ಅವರು ತೆರೆದಿಟ್ಟ ಸತ್ಯ.

ಮೇಲಿನ ಎರಡೂ ನಿಲುವುಗಳು ಮೇಲ್ನೋಟಕ್ಕೆ ಅಸಂಗತ. ಆದರೆ ಸ್ವಲ್ಪವೇ ಒಳಹೊಕ್ಕರೂ  ಇದನ್ನೇ ಅಲ್ಲವೇ ನಮ್ಮ ದಾರ್ಶನಿಕರು ,ತಿಳಿದವರು, ಪುರಾಣಗಳು ಹೇಳಿದ್ದು, ಹೇಳುತ್ತಲೇ ಬಂದಿದ್ದು. ನಿಜ, ಬದುಕು ಪುಸ್ತಕ ಓದಿ, ಪುರಾಣ ಕೇಳಿ , ರೂಪಿಸಿಕೊಳ್ಳವಷ್ಟು ಸುಲಭ ಸಾಧ್ಯವಲ್ಲ.ಆದರೆ ಕೆಲವರಾದರೂ ಆ ಮಟ್ಟಕ್ಕೆ ತಲುಪುವ ಸಾಮರ್ಥ್ಯ ತೋರಿಸಿದರೆ ಖಂಡಿತ ಖಂಡಿಸಬಾರದು.
ಒಳಹೊಕ್ಕು ಬೇರೆ ಬೇರೆ ಆಯಾಮದಿಂದಲೂ ಯೋಚಿಸಿ, ನಮಗಾಗದ್ದನ್ನು ಅವರು  ಮಾಡಿ ತೋರಿಸಿದ್ದಕ್ಕಾಗಿ ಅಭಿನಂದಿಸಬೇಕು.
"ಪರಿವರ್ತನೆ ಜಗದ ನಿಯಮ"  ಎಂದು
ಭಗವದ್ಗೀತೆಯ ಸಾರವೇ ಹೇಳಿದ್ದನ್ನು ನಾವು  ಒಪ್ಪಲಿ, ಬಿಡಲಿ, ಒಪ್ಪಿದವರನ್ನು 
ಪ್ರಶ್ನಿಸುವ ಹಕ್ಕಂತೂ ಖಂಡಿತ  ನಮಗಿಲ್ಲ.

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...