Monday, 31 August 2026

ಇಪ್ಪತ್ತನೇ ಶತಮಾನದ ನಂತರ ಬರಿ ವರ್ಷ ಬದಲಾಗಲಿಲ್ಲ...ಇಡೀ ಬದುಕೇ ಬದಲಾಯಿತು.ನಮ್ಮ ಅವ್ವ- ಅಪ್ಪ/ ಅಜ್ಜ- ಅಜ್ಜಿ ನಮ್ಮನ್ನು ಬರೀ ಬೆಳೆಸಲಿಲ್ಲ- ಬದುಕು ಅನುಭವಸುವುದನ್ನು ಕಲಿಸಿದರು.ಅವರ ಹೆಜ್ಜೆಗಳಿಂದ ಅವರ mood ನ್ನೂ,ಅವರ ಮೌನದಿಂದ ಮನಸ್ಸನ್ನೂ ಅಳೆಯುವುದು ನಮಗೆ
ಗೊತ್ತಾಗುತ್ತಿತ್ತು.ಅವರು ಸಿಟ್ಟಿಗೆದ್ದಿದ್ದರೂ
ಅವರ ಹಿಂದೆ- ಮುಂದೆಯೇ ಸುತ್ತುತ್ತಿದ್ದೆವು.ಆದರೆ ಈಗಿನ ಮಕ್ಕಳಿಗೆ ಮೂಡಿಲ್ಲದಿದ್ದರೆ ಹೊರಳಿ ಕೂಡ ನೋಡುವುದಿಲ್ಲ, ಬಯ್ದರೆ ಕಿವಿಗೆ earphones ಸಿಕ್ಕಿಸಿಕೊಳ್ಳುತ್ತಾರೆ ಇಲ್ಲವೇ ಫೋನ್- laptop ನಲ್ಲಿ ಕಳೆದು ಹೋಗುತ್ತಾರೆ.ಅದರಿಂದ ಅವರು ಬೇಗ ಹೊರಬರುವುದಿಲ್ಲ, ಜನರ ಕಷ್ಟ- ಸುಖ ಅರ್ಥೈಸಿಕೊಳ್ಳುವುದಿಲ್ಲ,ಅನುಭವಿಸುವುದಿಲ್ಲ,ಅವರಲ್ಲಿ ಭಾವನೆಗಳು ತುಂಬ slow ಆಗಿರುತ್ತದೆ.ಆದರೆ ಬದುಕು ಇದಾವುದಕ್ಕೂ ಕಾಯುವುದಿಲ್ಲ.ಇದೆಲ್ಲ ಒಂದು ರೀತಿಯ ಭಯ ಹುಟ್ಟಿಸುತ್ತದೆ.
ಸತ್ತಾಗ ನಾಲ್ಕು ಮಂದಿ ಎತ್ತುವುದು/ ನಾಲ್ಕು ಜನ ಹಿಂದೆ ನಾಲ್ಕು ಹೆಜ್ಜೆ ಹಾಕುವುದೂ ಉಳಿದಿಲ್ಲ- ಉಳಿಯುವುದಿಲ್ಲ ಅನಿಸುತ್ತದೆ.ಯಾವ ಯಂತ್ರ-  ತಂತ್ರಗಳೂ- ತಾಂತ್ರಿಕತೆಯೂ  ಕೆಟ್ಟವಲ್ಲ...ಆದರೆ ಒಂದು ಪುಟ್ಟ ಮೊಬೈಲ್ ನಿಮ್ಮ ಒಳಗನ್ನು ಪ್ರವೇಶಿಸಿ ನಿಮ್ಮನ್ನೇ ಪೂರ್ತಿಯಾಗಿ ಆಹ್ವಾನಿಸಿ ಕೊಂಡರೆ!!!! ಹೆತ್ತವರು ಹೆಚ್ಚೇನೂ ನಿಮ್ಮಿಂದ ನಿರೀಕ್ಷಿಸುವುದಿಲ್ಲ...ಮೊಬೈಲ್/ ಲ್ಯಾಪ್ಟಾಪ್ ಗಳಿಗೆ ಕೊಡುವದರ ಅರ್ಧದಷ್ಟಾದರೂ ಗಮನ ಆಗಾಗ ಕೊಡಬಹುದಲ್ಲವೇ!!!
ಇದೇ ಪ್ರಶ್ನೆ...

Sunday, 30 August 2026

ಇಂದಿಗೆ ನೂರು ವರ್ಷಗಳ ನಂತರ
ನಾವು ಯಾರೂ ಬದುಕಿರುವುದಿಲ್ಲ.
ನಾವು ಒದ್ದಾಡಿ ಕಟ್ಟಿದ ಮನೆಗಳಲ್ಲಿ ಯಾರೋ ಅಪರಿಚಿತರು 
ವಾಸಿಸುತ್ತಿರಬಹುದು.ಈಗ ನಮ್ಮದಾಗಿರುವ/ ನಾವು ಜೀವಕ್ಕಿಂತಲೂ ಹೆಚ್ಚಿನದೆಂದು ಅಂದುಕೊಂಡ ಎಲ್ಲವೂ ಯಾರದೋ ಕೈಸೇರಿರಬಹುದು.
ನಮ್ಮ ಆಢ್ಯದ ದುಬಾರಿ ಕಾರು ಯಾವುದೋ ಹಳೆಯ ಗೋಡೌನ  ಮೂಲೆಯೊಂದರಲ್ಲಿ ಬಿಕರಿಗಿರಬಹುದು.ನಮ್ಮ ಪೀಳಿಗೆಗೆ ನಮ್ಮ ಹೆಸರುಗಳೂ ಗೊತ್ತಿರಲಿಕ್ಕಿಲ್ಲ.ಗೋಡೆಯ  ಮೇಲೆ ಒಂದು ಕಾಲಕ್ಕೆ ನೇತಾಡುತ್ತಿದ್ದ ನಮ್ಮ ಫೋಟೋ ಕೂಡ  ಯಾವ ಕಸದ ಮೂಲೆಯ ಭಾಗವಾಗಿದೆಯೋ!!!
      ಒಂದು ಕ್ಷಣ ಯೋಚಿಸಿದರೂ
ಇದುವರೆಗೆ ನಾವು ಬೆನ್ನು ಬಿದ್ದು ಗಳಿಸಿದ ಎಲ್ಲದರದೂ ಖಾಲಿತನದ ಅರಿವಾಗುತ್ತದೆ.
ಒಮ್ಮೆ ನೋಡಿ- ಯೋಚಿಸಿ- ಇನ್ನು ಐದು ವರ್ಷಗಳಿಗೇನೆ
ಉಪಯೋಗ ಬರದ ವಸ್ತುಗಳ ಬಗ್ಗೆ  ಂಓಹ ಕಳೆದುಕೊಳ್ಳಿ- ನಿಮಗಿಂತಲೂ ಹೆಚ್ಚು ಅಗತ್ಯವಿದ್ದವರಿಗೆ
ಕೊಟ್ಟು ನೋಡಿ...
       ಕೆಲವರು ನಮ್ಮ ಜಗತ್ತಿನಿಂದ ದೂರ ಹೊರಟುಹೋಗುತ್ತಾರೆ- ಮತ್ತೆಂದೂ ಬರದಂತೆ...ಅವರು ಜೊತೆಗೆ ಇರುವುದಿಲ್ಲ - ಅವರ ದನಿ ಕೇಳುವುದಿಲ್ಲ- ಆದರೆ ಅವರ ನೆನಪು!!!?? ಹೃದಯದಾವುದೋ ಮೂಲೆಯಲ್ಲಿ ತಮ್ಮನ್ನೇ ಸ್ಥಾಪಿಸಿಕೊಂಡು, ನಮ್ಮ ಬದುಕು ನಮ್ಮನ್ನು ಕಾಡಿದಾಗ ಎಲ್ಲಿಂದಲೋ ದಾಳಿ ಇಡುತ್ತವೆ.ರಾತ್ರಿ ಯಲ್ಲಿ ಇಡೀ ಜಗವೇ ಗಾಢವಾಗಿ ಮಲಗಿದ್ದಾಗ ನಮ್ಮನ್ನು ಎಚ್ಚರಿಸುತ್ತವೆ.
ಅವು ನಿದ್ದೆಗಿಂತಲೂ ಶಕ್ತಿಶಾಲಿ,  ಬದುಕಿನ ಆರಾಮಿಗಿಂತಲೂ ಪ್ರಭಾವಶಾಲಿ...
ನೀನು ಒಂದು ದಿನ ಬರೀ ನೆನಪಾಗಿ ಉಳಿಯುತ್ತೀ ಎಂದೂ ಅನ್ನಿಸಿರಲಿಲ್ಲ.
ಆದರೆ ಬದುಕು ನಮ್ಮ ಆಲೋಚನೆ ಯಂತೆ ನಡೆಯುವುದಿಲ್ಲ-ಅದಕ್ಕೆ ತನ್ನದೇ ಮರ್ಜಿಯೊಂದು ಇರುತ್ತದೆ...ನಾನು ಅಂದುಕೊಂಡೆ-ಎಲ್ಲವೂ ಸರಿಹೋಗುತ್ತದೆ - ಮೊದಲಿನಂತೆ ಸರಾಗವಾಗುತ್ತದೆ-ಎಂದು.ಹಾಗಾಗಲೇ ಇಲ್ಲ-ಕೆಲವು ಹಳೆಯ ನೆನಪುಗಳು ಹೊಸ ನೋವಿಗಿಂತ ಹೆಚ್ಚು ಗಾಢವಾಗಿರುತ್ತವೆ- ಹೆಚ್ಚು ನೋವು ಕೊಡುತ್ತವೆ...ಹೃದಯಕ್ಕೆ ಹತ್ತಿರವಾದವ ರನ್ನು ಮರೆಯಲಾಗುವುದೇ ಇಲ್ಲ. ಈಗಲೂ ಒಮ್ಮೊಮ್ಮೆ ನೀನು ಬಳಿ ಇದ್ದಂತೆ/ ನಿನ್ನ ಉಸಿರು ಕೇಳಿದಂತೆ/ ನನ್ನನ್ನು ಕರೆದಂತೆ ಭಾಸವಾಗುತ್ತದೆ.
ಅದು ನಿಜವಲ್ಲ - ನನ್ನ ಭ್ರಮೆ ಮಾತ್ರ ಎಂದು ತಿಳಿದಿದ್ದರೂ ಬಿಡಲಾಗುತ್ತಿಲ್ಲ- ಎಂಬುದು ಅರ್ಥವಾಗುತ್ತದೆ. ಒಮ್ಮೆಲೇ ಮೂಕಳಾಗುತ್ತೇನೆ,ಏಕಾಂಗಿಯಾಗುತ್ತೇನೆ. ಯೋಚಿಸುತ್ತೇನೆ,ಬಹುಶಃ ಇನ್ನೂ ಇರುವುದು ನಿನ್ನ ಭಾಗ್ಯದಲ್ಲೇ ಬರೆದಿರಲಿಕ್ಕಿಲ್ಲ- ಎಂದು..ಅಥವಾ ನನ್ನ ಹಣೆಯಲ್ಲಿ ಬರೆದಿರಲಿಲ್ಲ ಎಂದು....

          ಇಂದು ನನಗೆ ತಿಳಿದಿದೆ- ಬದುಕಿನ ಬಹು ದೊಡ್ಡ ಭಾಗ್ಯ- ಹಣವಲ್ಲ-ಮನಕ್ಕೊ
ಪ್ಪಿದ- ಒಳ್ಳೆಯ- ಸಹೃದಯದ ಒಬ್ಬ ವ್ಯಕ್ತಿಯ ಉಪಸ್ಥಿತಿ...

ಇಪ್ಪತ್ತನೇ ಶತಮಾನದ ನಂತರ ಬರಿ ವರ್ಷ ಬದಲಾಗಲಿಲ್ಲ...ಇಡೀ ಬದುಕೇ ಬದಲಾಯಿತು. ನಮ್ಮ ಅವ್ವ- ಅಪ್ಪ/ ಅಜ್ಜ- ಅಜ್ಜಿ ನಮ್ಮನ್ನು  ಬರೀ ಬೆಳೆಸಲಿಲ್ಲ- ಬದುಕು ಅನುಭವಸುವುದನ್ನು ...