Sunday, 21 June 2026

ಧನ್ಯವಾದಗಳು ಕುಸುಮಾ...ನಿಮ್ಮಂಥ ಸಹೃದಯರ ಸಹಾಯ/ಸಹಕಾರ/ಸದಿಚ್ಛೆ ಗಳಿಂದ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದೇನೆ...ಅದು ದೈವ ಸಂದೇಶ...ಎಲ್ಲರೂ settle ಆಗಿದ್ದಾರೆ. ಮಕ್ಕಳ ಮಕ್ಕಳೂ ನೆಲೆಕಂಡುಕೊಂಡಿದ್ದಾರೆ...ಮೊದಲ ಮೂರು ಜನರ ನೌಕರಿ ಶುರುವಾಗಿದೆ.
ಉಳಿದ ಮೂವರದು ಮೂರು- ನಾಲ್ಕು ವರ್ಷಗಳ ಅವಧಿಯಲ್ಲಿ ಮುಗಿಯುತ್ತದೆ...ನನಗೂ ಹೆಮ್ಮೆ. ಕೊನೆಯ ಮೊಮ್ಮಗ-football- player ಗೆ IIT Bombay ಸಿಕ್ಕಿದೆ. ಮುಂದಿನ ವಾರ ಕಳಿಸಲು ಬರುತ್ತಾರೆ...ಇದು  ದೊಡ್ಡ ಸಾಧನೆಯಲ್ಲದಿದ್ದರೂ ಇಳಿ ವಯಸ್ಸಿನ ಖುಶಿಗೆ/ಧನ್ಯತೆಗೆ ಬೇಕಾದ
ಕಾರಣ.ನಾನೂ ಅದನ್ನೇ ಯೋಚಿಸಿ ಕಣ್ಣೀರಾಗಿದ್ದೆ. ನಿಮ್ಮ ಸಂದೇಶ ಬಂತು...ಉತ್ತರ ಬರೆಯಲೇ ಬೇಕು ಅನಿಸಿತು...ಧನ್ಯವಾದಗಳು ನಿಮಗೆ..

Friday, 19 June 2026

ಹಾಗೇ ಸುಮ್ಮನೇ ಅಲ್ಲ...

ಹೀಗೊಬ್ಬ  'ಕನಸು'ಗಾರ ಶಿಕ್ಷಕನಾದ ಕಥೆ..

                      ಅದೊಂದು ಕಾಲವಿತ್ತು.ಆಸಕ್ತಿ,ಅರ್ಹತೆ,ಅನುಕೂಲಗಳು ಇದ್ದವರು ಮಾತ್ರ ಶಿಕ್ಷಣದ ಬಗ್ಗೆ  ಯೋಚಿಸುತ್ತಿದ್ದರು.ಬಹುತೇಕ ಜನ ಕುಲಕಸುಬನ್ನು ಅಲಿಖಿತ ಒಪ್ಪಂದದಂತೆ ಸ್ವೀಕರಿಸಿ ಬದುಕುವವರೇ ಜಾಸ್ತಿ.ನಮ್ಮ ಮನೆಯಲ್ಲಿ ಬಹಳಷ್ಟು ಆಸಕ್ತಿ, ಒಂದಿಷ್ಟು ಅರ್ಹತೆ ಬಿಟ್ಟರೆ ಅನುಕೂಲಗಳು ಶೂನ್ಯ.

           ‌"ಒಂದೂರಿನಲ್ಲಿ ಒಬ್ಬ ಬಡ ಬ್ರಾಮ್ಹಣನಿದ್ದ.. ಅವನಿಗೆ ಮನೆತುಂಬ ಮಕ್ಕಳು" ಎಂದು ಕಥೆ ಸುರುವಾದರೆ " ನಮ್ಮದಲ್ಲ ತಾನೇ" ಅನಿಸಿಬಿಡುವಷ್ಟು ಸಾಮ್ಯತೆ.  ನಮ್ಮ ಅಣ್ಣನಿಗೋ ಹೇಗಾದರೂ ಕಲಿಯಲೇ ಬೇಕು ಎಂಬ ಹಟ.  ಊರಲ್ಲಿ ಹೈಸ್ಕೂಲ್ ಇರಲಿಲ್ಲವಾದ್ದರಿಂದ ಪರ ಊರುಗಳಲ್ಲಿ ಇರಬೇಕು. ಅವನು ತಯಾರಿದ್ದರೂ ಇಟ್ಟುಕೊಳ್ಳುವವರು ಬೇಕಲ್ಲ.!ಕೊನೆಗೆ ಕೈಹಿಡಿದದ್ದು ವಾರಕರಿ.  ದಿನಕ್ಕೊಬ್ಬರ ಮನೆಯಲ್ಲಿ ಊಟ.  ಕೆಲವರು ನಿಜವಾದ ಸಹಾನುಭೂತಿಯಿಂದ ಊಟ ಹಾಕಿದರೆ, ಇನ್ನು ಕೆಲವರಿಗೆ ಅದು ಒತ್ತಾಯದ ಮಾಘಸ್ನಾನ. ಅತ್ತ ಯೋಚಿಸುವ ಹಾಗೇ ಇಲ್ಲ. ಕಠಿಣ ಪಯಣಕ್ಕೆ ಸಿದ್ಧನಾಗಲೇ ಬೇಕಾದ ಅನಿವಾರ್ಯತೆ  .ಆದದ್ದೂ ಆಯಿತು.  ಅಣ್ಣ ಊರು ಬಿಟ್ಟು  ರಾಣೇಬೆನ್ನೂರು ಸೇರಬೇಕಾಯಿತು..

               ವಿವಿಧ ಜನ..ವಿವಿಧ ಮನಸ್ಸುಗಳು..ವಿವಿಧ ಪರಿಸರ..ಜೊತೆಗೆ ಆರ್ಥಿಕ ಮುಗ್ಗಟ್ಟು..ಆದರೂ ಒಂದನ್ನೂ  ಮನೆಯವರೆಗೆ ತರದೇ ಎಲ್ಲವನ್ನೂ ಸದ್ದಿಲ್ಲದೇ ನುಂಗಿ  ನಂಜುಂಡನಾಗಿ  ಅದ್ಹೇಗೆ  ಹೈಸ್ಕೂಲ್ ಮುಗಿಸಿದನೋ ಗೊತ್ತಿಲ್ಲ. 

                    ಮುಂದೇನು??? ಬಗೆಹರಿಯದ ಪ್ರಶ್ನೆ.  ಕೊನೆಗೆ ಬೆಳಗಾವಿಯಲ್ಲಿ ದೂರದ ಬಂಧುಗಳೊಬ್ಬರ ಮನೆಯಲ್ಲಿದ್ದು  ಅವರಿವರ ಅಲ್ಪ ಸ್ವಲ್ಪು ಸಹಾಯ, ಟ್ಯೂಶನ್, scholorship ಮುಂತಾದ  ಹತ್ತು ಹಲವು  ಮಾರ್ಗಗಳಿಂದ ಕಾಲೇಜು  
ಶಿಕ್ಷಣದ  ಪ್ರಾರಂಭವಾಯಿತಾದರೂ
ದಿನವೊಂದು ಕಳೆದರೆ ಸಾಕಪ್ಪಾ ಎಂಬ ಅನಿಸಿಕೆ. ಬೇಕಾಗಿ ಆಯ್ದುಕೊಂಡ ದಾರಿ, ಗೊಣಗುವಂತಿಲ್ಲ..ಫೀ ತುಂಬುವ ವೇಳೆಗೆ ಪ್ರತಿವರ್ಷ ಮನೆಯಲ್ಲಿದ್ದ ಒಂದೇ ಒಂದು ಪಿತ್ರಾರ್ಜಿತ ಬೆಳ್ಳಿಯ ತಟ್ಟೆ ಅಕ್ಕಸಾಲಿಗರ  ಅಂಗಡಿ ಕಂಡು, ಅಣ್ಣನ  scholarship ಹಣ ಕೈಗೆ ಬಂದ ತಕ್ಷಣ ಪುನಃ  ಮನೆ ಸೇರುತ್ತಿತ್ತು.  ಅಪ್ಪ ಅದನ್ನು ಪಂಜೆಯಲ್ಲಿ ಸುತ್ತಿ ಬಗಲಲ್ಲಿಟ್ಟು ಹೊರಟರೆ  ಪರೀಕ್ಷೆ ಬಂತು ಎಂಬುದರ ಸೂಚಕ.

       ‌‌     ಕಾಲ ಯಾರಿಗಾಗಿಯೂ, ಯಾವತ್ತಿಗೂ  ನಿಂತ ಉದಾಹರಣೆಯಿಲ್ಲ.degree ಮುಗಿಯಿತು. ಅಣ್ಣನ ಕಲಿಕೆಯ  ದಾಹತೀರಲಿಲ್ಲ.

                ಆದರೆ ಈಗ ಅವನು ಕಷ್ಟಗಳಿಗೆ ಪಕ್ವವಾಗಿದ್ದ. ಅವುಗಳ ಜೊತೆ ತಕರಾರಿಲ್ಲದೇ  ಬದುಕುವದನ್ನು ರೂಢಿಸಿಕೊಂಡಿದ್ದ. ಕಲಿಯಬೇಕೆಂಬ ಹಟವೊಂದಕ್ಕೆ ಏನು ಬೇಕಾದರೂ ಮಾಡಲು ಸಿದ್ಧನಿದ್ದ.

                 ಅರ್ಜಣಗಿ ರಾಮಣ್ಣ ಅವರ ವಿದ್ಯಾರ್ಥಿ ನಿಲಯ  ಮಾಳಮಡ್ಡಿ ಧಾರವಾಡ ಅವನ ಮುಂದಿನ ನೆಲೆಯಾಯ್ತು. MSc ಯ ಹುಡುಗ,ದೊಡ್ಡವನಾಗಿದ್ದ. ಅಡ್ಡಾಡಿ ಚಂದಾ ವಸೂಲಿ ಮಾಡಲಾಗದೇ ನಿಲಯದ ವಿದ್ಯಾರ್ಥಿಗಳ  ಅಡಿಗೆ ಜವಾಬ್ದಾರಿ ವಹಿಸಿಕೊಂಡು ಬಾಣಸಿಗನಾದ. ಕಲಿಯಲೇಬೇಕೆಂಬ ದುರ್ಯೋಧನನ ಛಲ ಅವನಿಗೆ ಬದುಕಿನ ಹಲವು ಮಜಲುಗಳನ್ನು ಪರಿಚಯಿಸಿ ಅಗ್ನಿಯಲ್ಲಿ ಹಾಯಿಸಿ ಅಪರಂಜಿಯಾಗಿಸಿತು.ಯಾವ ಕಷ್ಟವೂ ಕಷ್ಟವೇಅಲ್ಲ, ಒಳ್ಳೆಯದಕ್ಕೇ ಎಂಬ ಭಾವ ಎಲ್ಲ ಅಗ್ನಿ ಪರೀಕ್ಷೆಗಳಲ್ಲೂ ಕಡೆಹಾಯಿಸಿ ಕಲಿತ ಕಾಲೇಜಿನಲ್ಲೇ ಉಪನ್ಯಾಸಕನಾದ.

               ಆದರೆ ಆಗಿನ್ನೂ JSS college ಧರ್ಮಸ್ಥಳದ ಆಡಳಿತಕ್ಕೆ ಒಳಪಟ್ಟಿರಲಿಲ್ಲ. ಸಂಸ್ಥೆ  ಆರ್ಥಿಕ ಮುಗ್ಗಟ್ಟಿನಲ್ಲಿದ್ದು ಹಲವಾರು ತಿಂಗಳುಗಳ ವರೆಗೆ ವೇತನವೇ ಸಿಗುತ್ತಿರಲಿಲ್ಲ.  ಆದರೂ ನೌಕರಿಯಿದೆ ಎಂಬ ಸಮಾಧಾನದಲ್ಲಿ ಅಲ್ಲಿಲ್ಲಿ ಕೈಗಡ ಮಾಡಿ ಕೆಲವರ್ಷಗಳನ್ನು ಹಾಗೂ ಹೀಗೂ  ಕಳೆದು,ತಮ್ಮ- ತಂಗಿಯರಿಗಲ್ಲದೇ ಊರಿಂದ ಬರುವ ಅರ್ಹ,ಬಡ ವಿದ್ಯಾರ್ಥಿಗಳನ್ನೂ ತೆಕ್ಕೆಗೆಳೆದುಕೊಂಡು ದಡ ಕಾಣಿಸಿ ಅವರವರ ಬದುಕು ಕಟ್ಟಿಕೊಳ್ಳಲು , ಗಟ್ಟಿಗೊಳ್ಳಲು ಆಸರೆಯಾಗಿ ನಿಂತ  ದೊಡ್ಡತನ ಅವನದು.

           ಮತ್ತೆ ಕೆಲವೇ ವರ್ಷಗಳಲ್ಲಿ ತನ್ನದೇ ಟ್ಯೂಶನ್ class ಗಳನ್ನು ಪ್ರಾರಂಭಿಸಿ ಅದು ಸರಿಯಾದ ಲಯ ಕಂಡುಕೊಂಡಮೇಲೆ ಇನ್ನೂ ಸಾಕಷ್ಟು ವರ್ಷ ಕೆಲಸ ವಿದ್ದರೂ ಸ್ವಯಂ ನಿವೃತ್ತಿ ಪಡೆದು ತನ್ನದೇ ಒಂದು ಕಾಲೇಜು ಪ್ರಾರಂಭಿಸಿದ.ಅದಕ್ಕಾಗಿ , ವಿದ್ಯಾರ್ಥಿಗಳಿಗಾಗಿ  ತನ್ನ ಸ್ವಂತ ಮನೆಯನ್ನು ಬಿಟ್ಟು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ರೂಮ್ ಮಾಡಿಕೊಂಡು ವಾಸ್ತವ್ಯವನ್ನೇ ಕಾಲೇಜಿಗೆ ಸ್ಥಳಾಂತರಿಸಿದ.ಈಗ ಕಾಲೇಜೇ ಅವನ ಮನೆ. ಸಾವಿರಾರು ವಿದ್ದಾರ್ಥಿಗಳೂ ಸ್ವಂತ ಮೂರು ಮಕ್ಕಳ ಜೊತೆಗೆ ಸೇರ್ಪಡೆಯಾಗಿದ್ದಾರೆ.

             ಹೋದ ವರ್ಷವಷ್ಟೇ ವಿಜಯಕರ್ನಾಟಕದ " ಶಿಕ್ಷಣ ಕ್ಷೇತ್ರದಲ್ಲಿ ಸಾಧಕ"ರ ಪಟ್ಟಿಯಲ್ಲಿ ಸ್ಥಾನ ಪಡೆದು ಪ್ರಶಸ್ತಿ ಪಡೆದದ್ದು ಅವನಿಗೆ ವೈಯಕ್ತಿಕ ನೆಲೆಯಲ್ಲಿ ವ್ಯತ್ಯಾಸವೆನಿಸದಿದ್ದರೂ ನಮಗೆಲ್ಲ ಹೆಮ್ಮೆ.

     ‌‌‌‌‌        ಹಲವಾರು legendary figures  ಗಳಲ್ಲಿ ನಮ್ಮ ಅಣ್ಣನನ್ನೂ ಸೇರಿಸುವಂತಾದುದು ನಮ್ಮ ಸುದೈವ. ಇತ್ತೀಚೆಗೆ ಆರೋಗ್ಯ ಮೊದಲಿನಂತಿಲ್ಲ. ಆದರೂ ತನ್ನ class ಗಳ ಸಂಖ್ಯೆಯಲ್ಲಿ ಕಡಿತವಿಲ್ಲ.  ದಿನಚರಿಯಲ್ಲಿ ವ್ಯತ್ಯಾಸವಿಲ್ಲ. ಅಂತಃಕರಣದಲ್ಲಿ ಬೇರಾರೂ ಸಾಟಿಯಿಲ್ಲ. ಅವನೊಂದು ದೊಡ್ಡ‌ ಆಲದಮರ..ಅದರ ಕೆಳಗೆ ನಮ್ಮಂಥ ಲಕ್ಷಾನುಗಟ್ಟಲೇ ದಾರಿಹೋಕರು. ತಂಪೋ ತಂಪು.
             ಇಂದು ಶಿಕ್ಷಕರ ದಿನ.  ನಮ್ಮೆಲ್ಲರಿಂದ ಈ ಸಾಧಕನಿಗೆ ಎರಡೂ ಕೈಯೆತ್ತಿ ಸಾಷ್ಟಾಂಗ ನಮಸ್ಕಾರಗಳು.ಅವನಂಥ
ವರ  ಸಂತತಿ ಊರ್ಜಿತವಾಗಲಿ.  ನಮ್ಮ ಅಣ್ಣ ನಮ್ಮೆಲ್ಲರ ಹೆಮ್ಮೆ.🙏🙏🙏🙏🙏🙏

Monday, 15 June 2026

      2007 ನೇ ಇಸ್ವಿ.ನಾವು electronic city ಯಲ್ಲಿ ಮನೆ ಕೊಂಡು,ಮನೆ G+2 floors ಇದ್ದುದರಿಂದ ಒಬ್ಬ ಕಾಯಮ್ ಮನೆಗೆಲಸದವರನ್ನು ಹುಡುಕುತ್ತಿದ್ದೆವು.
ಆಗ ಪರಿಚಯದವರಿಂದ ಕವಿತಾ ಪರಿಚಯವಾದಳು.ಸತತ ಕೃಷಿಯಲ್ಲಿ
ಹಾನಿ/ಮಗಳ ಮದುವೆ/ಭಾಗಾದಿಗಳ+
ಮನೆಮಂದಿಯ ತಕರಾರು ಇದರಿಂದಾಗಿ
ಅತಿಯಾದ ಸಾಲವಾಗಿ ಇಡಿ ಕುಟುಂಬ
ಸಂಕಷ್ಟದಲ್ಲಿತ್ತು.ನಮ್ಮಲ್ಲಿಗೆ ಬಂದಾಗ 
ಸಂಪೂರ್ಣ ಸೋತು ಹತಾಶಳಾದ ಕವಿತಾ
ವಿಧೇಯಳಾಗಿ/ಕೆಲಸ,ಹಣವೇ ಎಲ್ಲವಾಗಿ
ದುಡಿಮೆಯಲ್ಲಿ ಲೀನವಾಗಿ ಬದುಕು ಎತ್ತಿ
ಹಿಡಿದಳು.ಅವಳ ಪ್ರಾಮಾಣಿಕತೆಗೆ ನಾವು
ಮಾಡಿದ ಸಹಾಯವನ್ನೆಲ್ಲ ಪರಿಗಣಿಸಿ
ನಮ್ಮ ಮನೆಯಲ್ಲಿ ನಾವು ಹೇಳದೇ ಎಲ್ಲ
ಜವಾಬ್ದಾರಿ ಹೊತ್ತು ನೆರವಾಗಿ/ತನ್ನ ಚಾಕ ಚಕ್ಯತೆಯಿಂದ ಸಾಲವನ್ನೆಲ್ಲ ಪೂರ್ತಿಯಾ ಗಿ ತೀರಿಸಿಕೊಂಡು ಒಂದೆಕರೆ ಜಮೀನು/ ಮಗಳ ಮದುವೆ/ ಕಳೆದುಕೊಂಡ ಬಂಗಾರ ಖರೀದಿ ಎಲ್ಲವನ್ನೂ ಮರಳಿ
ಪಡೆದು/ಇಬ್ಬರೂ ಗಂಡುಮಕ್ಕಳನ್ನು ಬೆಂಗಳೂರಿಗೇನೇ ಕರೆಸಿಕೊಂಡು cab
ಖರೀದಿಸಿ ನೆಲೆಗೆ ಹಚ್ಚಿದಳು..ಅವಳ ಪ್ರಾಮಾಣಿಕ ಪ್ರಯತ್ನಕ್ಕೆ ಯಶಸ್ಸು ಸಿಕ್ಕು
ಇದೀಗ ತಮ್ಮೂರಲ್ಲಿ ನಾಲ್ಕು bedrooms
ಇರುವ ಎರಡಂತಸ್ತಿನ ಮನೆ ಕಟ್ಟಿದ್ದಾಳೆ.
ಇದರಿಂದ ಖುಶಿಯಾದ ಗಂಡ+ ಮಕ್ಕಳು
ಅವಳೊಂದಿಗೆ ಸೇರಿ ಅಷ್ಟಭುಜಳನ್ನಾಗಿ
ಮಾಡಿ ಅಚ್ಚರಿಯ ರೀತಿಯಲ್ಲಿ ಸತತವಾಗಿ ಮೇರೇರುತ್ತಿದ್ದಾರೆ.

         ‌ ನಾವು ಕೋರಮಂಗಲಕ್ಕೆ ಬಂದಿದ್ದರೂ ಒಂದೇ ಒಂದು  ಫೋನ್
Callನಿಂದ ನಮಗೆ ಹತ್ತಿರವಾಗಿದ್ದಾರೆ. ಪ್ರತಿ ಸಂತಸದ ಗಳಿಗೆಗಳನ್ನೂ ಹಂಚಿಕೊಳ್ಳುತ್ತಾರೆ...ಒಂದು ಅನುಕೂಲ
ಮುಗಿದಕೂಡಲೇ ಎಲ್ಲರೂ ಹೊಸದರಲ್ಲಿ
ತೊಡಗುತ್ತಾರೆ...

       ‌      ಹಿಂದೆ ಕಾಡಿದವರು ಕರುಬು ತ್ತಿದ್ದಾರೆ.ಬದುಕು ಸರಿದಾರಿಯಲ್ಲಿದೆ...

Saturday, 6 June 2026

ಬಾಲ್ಯದ ಒಂದು
ಕಾಲ ಇತ್ತು...
ಆಗ ಸಂತೋಷದ
ಒಂದು ಭಂಡಾರವೇ ಇತ್ತು...

ಚಂದಿರನ ಪಡೆವ
ಬಯಕೆಯಿತ್ತು..
ಮನಸ್ಸಿಗೆ ಚಿಟ್ಟೆಯ
ಹಂಬಲವಿತ್ತು!!...

ಬೆಳಗಿನ ಸುದ್ದಿಯ 
ಸದ್ದಿರಲಿಲ್ಲ- 
ಸಂಜೆಯ ಠಿಕಾನಾ
ತಿಳೀತಿರಲಿಲ್ಲ...!!!

ಶಾಲೆಯಿಂದ ದಣಿದು 
ಬಂದರೂ
ಆಟ ಬಿಡುತ್ತಿರಲಿಲ್ಲ-

ಅಮ್ಮನ ಕಥೆಗಳಲ್ಲಿ
ಅಪ್ಸರೆಯರ ಕೈದು ಇತ್ತು-


ಬಾಲ್ಯದ ಒಂದು
ಕಾಲ ಇತ್ತು...
ಆಗ ಸಂತೋಷದ
ಒಂದು ಭಂಡಾರವೇ ಇತ್ತು...

ಚಂದಿರನ ಪಡೆವ
ಬಯಕೆಯಿತ್ತು..
ಮನಸ್ಸಿಗೆ ಚಿಟ್ಟೆಯ
ಹುಚ್ಚು ಇತ್ತು...

ಬೆಳಗಿನ ಸುದ್ದಿಯ ಸದ್ದು ಇರಲಿಲ್ಲ- 
ಸಂಜೆಯ ಠಿಕಾನಾ
ತಿಳೀತಿರಲಿಲ್ಲ-

Friday, 8 May 2026

Monday, 6 April 2026

Dr ,Raju' s prescriptions...

Raju' s prescription...

Morning - 18 units

Start at 4 units and increase until fasting reaches 100-110

Food constitent 
160-180

1 to 1.5 chapati
Sarina battla anna/ jolada muddi

Gastroantologist
Haemoglobin

Sunday, 18 January 2026

Follow healthy routine...

ಡಾಕ್ಟರ್ ಇಲ್ಲದ ಕಾಲದಲ್ಲಿ ನಮ್ಮ ಪೂರ್ವಿಕರು ಪಾಲನೆ ಮಾಡಿದ ಆರೋಗ್ಯದ ಗುಟ್ಟು. ಆಯುರ್ವೇದದ ಈ ದಿನಚರಿ ಪಾಲನೆ ಮಾಡಿದವರು ನೂರಾರು ವರ್ಷ ಕಾಯಿಲೆ ಇಲ್ಲದೇ ಬದುಕಿದರು. ನೂರರ ಸಮೀಪದಲ್ಲೂ ಗಟ್ಟಿಯಾಗಿ ಆರೋಗ್ಯವಂತರಾಗಿದ್ದರು.

ಆಯುರ್ವೇದದ ಪ್ರಕಾರ ದಿನಚರಿ (Daily Routine) ಎಂದರೆ ಕೇವಲ ಕೆಲಸ ಮಾಡುವುದಲ್ಲ, ಅದು ಪ್ರಕೃತಿಯೊಂದಿಗೆ ನಮ್ಮ ದೇಹವನ್ನು ಹೊಂದಿಸಿಕೊಳ್ಳುವ ವಿಧಾನವಾಗಿದೆ. ಆಯುರ್ವೇದದ ಪ್ರಕಾರ ನಿಮ್ಮ ದಿನವನ್ನು ಹೇಗೆ ಕಳೆಯಬೇಕು ಎಂಬ ಮಾಹಿತಿ ಇಲ್ಲಿದೆ:

​1. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು (Early Morning)
​ಸೂರ್ಯೋದಯಕ್ಕೆ ಸುಮಾರು 1.5 ಗಂಟೆಗಳ ಮೊದಲು (ಅಂದರೆ ಬೆಳಿಗ್ಗೆ 4:30 ರಿಂದ 5:30 ರ ನಡುವೆ) ಏಳುವುದು ಅತ್ಯುತ್ತಮ. 
ಈ ಸಮಯದಲ್ಲಿ ವಾತಾವರಣವು ಶುದ್ಧವಾಗಿರುತ್ತದೆ ಮತ್ತು ಮನಸ್ಸು ಶಾಂತವಾಗಿರುತ್ತದೆ.

​2. ಮುಖ ಪ್ರಕ್ಷಾಲನ ಮತ್ತು ಹಲ್ಲುಜ್ಜುವುದು
​ಕಣ್ಣುಗಳು: ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ.
​ಹಲ್ಲುಜ್ಜುವುದು: ಕಹಿ ಅಥವಾ ಒಗರು ರುಚಿಯ ಗಿಡಮೂಲಿಕೆಗಳ ಪುಡಿ ಅಥವಾ ಪೇಸ್ಟ್ ಬಳಸಿ.

​ನಾಲಿಗೆ ಸ್ವಚ್ಛತೆ: ನಾಲಿಗೆಯ ಮೇಲಿರುವ ಬಿಳಿ ಪದರವನ್ನು (ಆಮ) ತೆಗೆಯಲು ನಾಲಿಗೆಯನ್ನು ಸ್ವಚ್ಛಗೊಳಿಸಿ. ಇದು ಜೀರ್ಣಕ್ರಿಯೆಗೆ ಸಹಕಾರಿ.

​3. ಅಭ್ಯಂಗ (ತೈಲ ಮಸಾಜ್)
​ಸ್ನಾನಕ್ಕೆ ಮೊದಲು ಇಡೀ ದೇಹಕ್ಕೆ ಮೃದುವಾಗಿ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯುತ್ತದೆ.

​4. ವ್ಯಾಯಾಮ ಮತ್ತು ಸ್ನಾನ
​ನಿಮ್ಮ ಶಕ್ತಿಯ ಅರ್ಧದಷ್ಟು ಮಾತ್ರ ವ್ಯಾಯಾಮ ಮಾಡಿ (ಬೆವರುವವರೆಗೆ). ಯೋಗಾಸನ ಮತ್ತು ಪ್ರಾಣಾಯಾಮ ಅತ್ಯಂತ ಶ್ರೇಷ್ಠ.
​ನಂತರ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ತಲೆಗೆ ಅತಿ ಬಿಸಿ ನೀರನ್ನು ಹಾಕಬೇಡಿ.

​5. ಆಹಾರ ಪದ್ಧತಿ
​ಉಪಹಾರ: ಬೆಳಿಗ್ಗೆ ಹಸಿವಾದಾಗ ಹಗುರವಾದ ಮತ್ತು ಪೌಷ್ಟಿಕಾಂಶಯುಕ್ತ ಉಪಹಾರ ಸೇವಿಸಿ.
​ಮಧ್ಯಾಹ್ನದ ಊಟ: ಇದು ದಿನದ ಅತಿ ಮುಖ್ಯ ಮತ್ತು ದೊಡ್ಡ ಆಹಾರವಾಗಿರಲಿ. ಏಕೆಂದರೆ ಮಧ್ಯಾಹ್ನ ಸೂರ್ಯನು ಪ್ರಬಲವಾಗಿರುವಾಗ ನಮ್ಮ ಜೀರ್ಣಶಕ್ತಿ (ಜಠರಾಗ್ನಿ) ಹೆಚ್ಚಿರುತ್ತದೆ.
​ರಾತ್ರಿ ಊಟ: ಸೂರ್ಯಾಸ್ತದ ನಂತರ ಅಥವಾ ಮಲಗುವ 2-3 ಗಂಟೆಗಳ ಮೊದಲು ಹಗುರವಾದ ಆಹಾರ ಸೇವಿಸಿ.

​6. ನಿದ್ರೆ (ಸರಿಯಾದ ಸಮಯಕ್ಕೆ ವಿಶ್ರಾಂತಿ)
​ರಾತ್ರಿ 10 ಗಂಟೆಯೊಳಗೆ ಮಲಗುವುದು ಸೂಕ್ತ. ಚೆನ್ನಾಗಿ ನಿದ್ರೆ ಮಾಡುವುದರಿಂದ ದೇಹದ ಅಂಗಾಂಶಗಳು ಪುನಶ್ಚೇತನಗೊಳ್ಳುತ್ತವೆ.

​ಗಮನಿಸಬೇಕಾದ ಪ್ರಮುಖ ಅಂಶಗಳು:
​ನೀರು: ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯಿರಿ. ಬೆಳಿಗ್ಗೆ ಎದ್ದ ತಕ್ಷಣ ಉಗುರುಬೆಚ್ಚಗಿನ ನೀರು ಕುಡಿಯುವುದು (ಉಷಾಪಾನ) ಮಲಬದ್ಧತೆಯನ್ನು ತಡೆಯುತ್ತದೆ.
​ಮನಸ್ಥಿತಿ: ಊಟ ಮಾಡುವಾಗ ಮತ್ತು ಕೆಲಸ ಮಾಡುವಾಗ ಶಾಂತವಾಗಿರಿ.

​ನೆನಪಿಡಿ: ಆಯುರ್ವೇದವು ಪ್ರತಿಯೊಬ್ಬರ ದೇಹದ ಪ್ರಕೃತಿಗೆ (ವಾತ, ಪಿತ್ತ, ಕಫ) ಅನುಗುಣವಾಗಿ ಬದಲಾಗುತ್ತದೆ.

ಕೂತರೇ ನಿಂತರೇ ಡಾಕ್ಟರ್ ಬಳಿ ಓಡ ಬೇಡಿ: ಅಂಗೈಯಲ್ಲಿ ಆರೋಗ್ಯ, ನಿಮ್ಮ ಆರೋಗ್ಯ ನಿಮ್ಮ ಕೈಲಿ ಇರುವಾಗ ಕಾಪಾಡ್ಕೋಳ್ಳಿ:

▪️ಬಿಕ್ಕಳಿಕೆ ಬರುವುದೇ:    ಹುರುಳಿ ಕಷಾಯ ಸೇವಿಸಿರಿ.
▪️ಕಫ ಬರುವುದೇ:      ಶುಂಠಿ ಕಷಾಯ ಸೇವಿಸಿರಿ.
▪️ಹೊಟ್ಟೆಯಲ್ಲಿ ಹರಳಾದರೇ:    ಬಾಳೆದಿಂಡಿನ ಪಲ್ಯ ಸೇವಿಸಿರಿ.
▪️ಬಿಳಿ ಕೂದಲು:   ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.
▪️ಮರೆವು ಬರುವುದೇ:     ನಿತ್ಯ ಸೇವಿಸಿ ಜೇನು.
▪️ಕೋಪ ಬರುವುದೇ:   ಕಾಳು ಮೆಣಸು ಸೇವಿಸಿ.
▪️ಮೂಲವ್ಯಾಧಿಯೇ:    ನಿತ್ಯ ಸೇವಿಸಿ ಎಳ್ಳು.
▪️ಮುಪ್ಪು ಬೇಡವೇ:   ಗರಿಕೆ ರಸ ಸೇವಿಸಿ.
▪️ನಿಶಕ್ತಿಯೇ:     ದೇಶಿ ಆಕಳ ಹಾಲು ಸೇವಿಸಿ.
▪️ಇರುಳುಗಣ್ಣು ಇದೆಯೇ:   ತುಲಸಿ ರಸ ಕಣ್ಣಿಗೆ ಹಾಕಿ.
▪️ಕುಳ್ಳಗಿರುವಿರೇ:   ನಿತ್ಯ ಸೇವಿಸಿ ನಿಂಬೆ ಹಣ್ಣು.
▪️ತೆಳ್ಳಗಿರುವಿರೆ:   ನಿತ್ಯ ಸೇವಿಸಿ ಸೀತಾ ಫಲ.
▪️ತೆಳ್ಳಗಾಗಬೇಕೇ:   ನಿತ್ಯ ಸೇವಿಸಿ ಬಿಸಿ ನೀರು.
▪️ಹಸಿವಿಲ್ಲವೇ:   ನಿತ್ಯ ಸೇವಿಸಿ ಓಂ ಕಾಳು.
▪️ತುಂಬಾ ಹಸಿವೇ:   ಸೇವಿಸಿ ಹಸಿ ಶೇಂಗಾ.
▪️ಬಾಯಾರಿಕೆಯೇ:    ಸೇವಿಸಿ ತುಳಸಿ.
▪️ಬಾಯಾರಿಕೆ ಇಲ್ಲವೇ:   ಸೇವಿಸಿ ಬೆಲ್ಲ.
▪️ಸಕ್ಕರೆ ಕಾಯಿಲೆಯೇ:   ಬಿಡಿ ಸಕ್ಕರೆ, ಸೇವಿಸಿ ರಾಗಿ.
▪️ರಕ್ತ ಹೀನತೆಯೇ:    ನಿತ್ಯ ಸೇವಿಸಿ ಪಾಲಕ್ ಸೊಪ್ಪು.
▪️ತಲೆ ಸುತ್ತುವುದೇ:    ಬೆಳ್ಳುಳ್ಳಿ ಕಷಾಯ ಸೇವಿಸಿ.
▪️ಬಂಜೆತನವೇ:      ಔದುಂಬರ ಚಕ್ಕೆ ಕಷಾಯ
▪️ಸ್ವಪ್ನ ದೋಷವೇ:   ತುಳಸಿ ಕಷಾಯ ಸೇವಿಸಿ.
▪️ಅಲರ್ಜಿ ಇದೆಯೇ:   ಅಮೃತ ಬಳ್ಳಿ ಕಷಾಯ ಸೇವಿಸಿ.
▪️ಹೃದಯ ದೌರ್ಬಲವೇ:   ಸೋರೆಕಾಯಿ ರಸ ಸೇವಿಸಿ.
▪️ರಕ್ತ ದೋಷವೇ:    ಕೇಸರಿ ಹಾಲು ಸೇವಿಸಿ.
▪️ದುರ್ಗಂಧವೇ:     ಹೆಸರು ಹಿಟ್ಟು ಸ್ನಾನ ಮಾಡಿ.
▪️ಕೋಳಿ ಜ್ವರಕ್ಕೆ:   ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.
▪️ಕಾಲಲ್ಲಿ ಆಣಿ ಇದೆಯೇ: ಉತ್ತರಾಣಿ ಸೊಪ್ಪು ಕಟ್ಟಿರಿ.
▪️ಮೊಣಕಾಲು ನೋವು:    ನಿತ್ಯ ಮಾಡಿ ವಜ್ರಾಸನ.
▪️ಸಂಕಟ ಆಗುವುದೇ:   ಎಳನೀರು ಸೇವಿಸಿ.
▪️ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ:        ನಿತ್ಯ ಕೊಡಿ ಜೇನು.
▪️ಜಲ ಶುದ್ಧಿ ಮಾಡಬೇಕೇ:  ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ, ಅದರಲ್ಲಿ ತುಳಸಿ ಎಲೆ ಹಾಕಿರಿ.
▪️ವಾಂತಿಯಾಗುವುದೇ:    ಎಳನೀರು-ಜೇನು ಸೇವಿಸಿ.
▪️ಭೇದಿ ತುಂಬಾ ಆಗುವುದೇ:  ಅನ್ನ ಮಜ್ಜಿಗೆ ಊಟ ಮಾಡಿ.
▪️ಹಲ್ಲು ಸಡಿಲವೇ:   ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.
▪️ಕಾಮಾಲೆ ರೋಗವೇ:     ನಿತ್ಯ ಮೊಸರು ಸೇವಿಸಿ.
▪️ಉಗುರು ಸುತ್ತು ಇದೆಯೇ:    ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.
▪️ಎದೆ ಹಾಲಿನ ಕೊರತೆಯೇ:   ನಿತ್ಯ ಸೇವಿಸಿ ಎಳ್ಳು.
▪️ಎಲುಬುಗಳ ನೋವೇ:   ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.
▪️ತುಟಿ ಸೀಳಿದಿಯೇ:   ಹಾಲಿನ ಕೆನೆ ಹಚ್ಚಿರಿ.
▪️ಪಿತ್ತವೇ:    ಚಹಾ ಬಿಟ್ಟುಬಿಡಿ.
▪️ಉಷ್ಣವೇ:   ಕಾಫಿ ಬಿಟ್ಟುಬಿಡಿ.
▪️ಚಂಚಲವೇ:    ನಾಸಿಕದಲ್ಲಿ ದೇಶಿ ತುಪ್ಪ ಹಾಕಿ.
▪️ಬಹು ಮೂತ್ರವೇ:    ದಾಲ್ಚಿನ್ನಿ ಕಷಾಯ ಸೇವಿಸಿ.
▪️ಮೂತ್ರ ತಡೆಗೆ:    ಜೀರಿಗೆ ಕಷಾಯ ಸೇವಿಸಿ.
▪️ಆಯಾಸವೇ:   ಅಭ್ಯಂಗ ಸ್ನಾನ ಮಾಡಿ
▪️ಹಿಮ್ಮಡಿ ಸೀಳುವುದೇ:   ಔಡಲ ಎಣ್ಣೆ ಸುಣ್ಣ ಕಲಸಿ ಲೇಪಿಸಿ.

ಆರೋಗ್ಯವೇ ಭಾಗ್ಯ🌹
ಸಸ್ಯಸಂಪತ್ತು ನಮ್ಮಲ್ಲಿ ವಿರಳವಾಗಿ ಕಂಡುಬರುತ್ತಿದೆ. ಇತ್ತೀಚೆಗೆ ನಮಗೆ ಅವುಗಳ ಹೆಸರಾಗಲಿ ಉಪಯೋಗವಾಗಲಿ ಗೊತ್ತಾಗುತ್ತಿಲ್ಲ.

ಇಂದು ಬಹುತೇಕ ಜನತೆ ಚಿಕ್ಕಪುಟ್ಟ ರೋಗಗಳಿಗೂ ಮಾತ್ರೆಗಳನ್ನು ಸಿಕ್ಕಾಪಟ್ಟೆ ತಿನ್ನುತ್ತಾರೆ.

ನಮ್ಮ ಸುತ್ತಮುತ್ತಲೂ ಇರುವ ಅನೇಕ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳನ್ನು ಕಡೆಗಣಿಸುತ್ತಾರೆ.

ಏಕೆಂದರೆ, ಬಹುತೇಕ ಜನರಿಗೆ ಆ ಗಿಡಗಳ ಹೆಸರಾಗಲಿ ಅದರ ಉಪಯೋಗಗಳಾಗಲಿ ತಿಳಿದಿಲ್ಲ.

ಕೇವಲ ಸಸ್ಯಗಳು ಮತ್ತು ಅವುಗಳಿಗೆ ಕನ್ನಡದಲ್ಲಿ ಬಳಸುವ ಹೆಸರುಗಳಿವೆ. 

ನಿಖರವಾಗಿ ಇದರ ಉಪಯೋಗ ಗೊತ್ತಿದ್ದವರು ಅದರ ವಿವರಣೆಯನ್ನು - ಉಪಯೋಗವನ್ನು ತಿಳಿಸಬಹುದು.

ಕೆಲವು ಜನರು ನೋಡಿಲ್ಲ, ಇನ್ನು ಕೆಲವರು ಹೆಸರುನೇ ಕೇಳಿಲ್ಲಾ ಆದ್ದರಿಂದ ಶೇರ್ ಮಾಡಿ  🙏.

ಮತ್ತಷ್ಟು ಉಪಯುಕ್ತ ಮಾಹಿತಿಗಳಿಗಾಗಿ-

 #krishikaipidi #bhusresta #onicaproject #onicafarming 
 #homemade #herbs #homeotheraphy #krishijagran #24RsClub

ಧನ್ಯವಾದಗಳು ಕುಸುಮಾ...ನಿಮ್ಮಂಥ ಸಹೃದಯರ ಸಹಾಯ/ಸಹಕಾರ/ಸದಿಚ್ಛೆ ಗಳಿಂದ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದೇನೆ...ಅದು ದೈವ ಸಂದೇಶ...ಎಲ್ಲರೂ settle ಆಗಿದ್ದಾರೆ. ಮಕ್ಕಳ ಮಕ...