Sunday, 17 May 2026

ಎಲ್ಲರೂ ಹೇಳುತ್ತಾರೆ-
"ನೀನು ತುಂಬಾ ಬದಲಾಗಿದ್ದೀಯಾ"
ಇರಬಹುದು.

ಮೊದಲು ಎಲ್ಲವನ್ನೂ ಮನಸ್ಸಿಗೆ ತೆಗೆದುಕೊಳ್ಳುತ್ತಿದ್ದೆ-
ಈಗ,
ಹೆಚ್ಚು ತಿಳಿದುಕೊಳ್ಳುತ್ತೇನೆ.

ಮೊದಲು-
ಯಾರನ್ನಾದರೂ ಕಳೆದುಕೊಂಡರೆ--
ಎಂದು ಭಯವಾಗುತ್ತಿತ್ತು...
ಈಗ,
ನನ್ನನ್ನು ನಾನು ಕಳೆದುಕೊಂಡರೆ
ಎಂದು ಭಯವಾಗುತ್ತದೆ...

ಮೊದಲು 
ಎಲ್ಲರನ್ನೂ ಖುಶಿಯಾಗಿಡಲು ಒದ್ದಾಡುತ್ತಿದ್ದೆ--
ಈಗಿನ್ನು ಎಂದಿಗೂ ಸುಳ್ಳು ಸಾಕಲಾರೆ...

ನಾನೀಗ ಮೌನವಾಗಿರುತ್ತೇನೆ-
ಆದರೆ ಮಜಬೂರಿ ನನಗಿಲ್ಲ-
ನಾನು ಎಲ್ಲರಿಗೂ ಸ್ವಲ್ಪ ದೂರವಾಗಿದ್ದೇನೆ.
ಅಸಹಾಯಕಳಾಗಿಲ್ಲ...

ಈಗ ಬರಿ ನನ್ನ ಅವಶ್ಯಕತೆ ಇದ್ದು, ಮರ್ಯಾದೆ ಇಲ್ಲದಲ್ಲಿ
ನಾನಿರುವುದಿಲ್ಲ---

ಈಗ-
ಮುಗುಳ್ನಕ್ಕರೆ  ಕಾರಣವಿರುತ್ತದೆ-
ಮೌನವಾಗಿದ್ದರೆ ಕಲಿಕೆಯಿರುತ್ತದೆ-

ಏನನ್ನೂ ನಾನೀಗ 
ಸಾಧಿಸಿ ತೋರಿಸಬೇಕಿಲ್ಲ-
ಸತ್ಯ  ತಿಳಿದುಕೊಂಡರೆ
ಸಾಕೇ ಸಾಕು...

Thursday, 14 May 2026

      ಈ ಸಂಗೀತಾ ಕೂಸು ಇದ್ದಾಗಿನಿಂದ ಗೊತ್ತು.ಅವರ ಅಮ್ಮ/ನಾನು ಒಂದೇ ಶಾಲೆಯ ಶಿಕ್ಷಕಿಯರು/ಇವಳ ತಂದೆ+ ನನ್ನ ಅಣ್ಣ ಗೆಳೆಯರು...ಇವಳು ಒಂಬತ್ತನೇ ಇಯತ್ತೆಯಲ್ಲಿ ನನ್ನ ವಿದ್ಯಾರ್ಥಿನಿ. ಅವಧಿಯ ಸಮಯದಲ್ಲಿ 
ಅಕಸ್ಮಾತ್ ಧಿಡೀರ್ ಎಂದು on spot
ಏನಾದರೂ notes ಬರೆಸಿದರೆ ನನಗೆ ಅದರ copy ಮಾಡಿಕೊಟ್ಟದ್ದೂ ಉಂಟು.
ಒಂದು ಹಂತದಲ್ಲಿ ಬೀಗರೂ ಆದದ್ದು ಆ ನಂತರ...
            ಚಿಕ್ಕಂದಿನಿಂದಲೇ ಸಂಗೀತದ
ಹುಚ್ಚು ಹತ್ತಿ ಅವಳು ಬಹುಬೇಗನೇ ರಾಜ್ಯ/ ರಾಷ್ಟ್ರ/ಅಂತರ್ ರಾಷ್ಟೀಯ ಮಟ್ಟದಲ್ಲಿ ಮನೆ ಮಾತಾದ ಮೇಲೆ, ನಾನೂ ಬೆಂಗಳೂರಿಗೆ ವಲಸೆ ಬಂದ ಕಾರಣ ನನ್ನ ಅವಳ ಭೇಟಿ ಮಾಧ್ಯಮದ ಮೂಲಕ/ face book ನಲ್ಲಿ/ಅಪರೂಪಕ್ಕೆ ಫೋನ್ ಮಾಡಿದಾಗ...
          ಮನೆಗೆ 'ಬನ್ನಿ '- ಟೀಚರ್ ಎಂದು
ಆಗಾಗ ಔತಣ ಬಂದರೂ ಸಮಯ ಕೂಡಿ ಬಂದಿರಲಿಲ್ಲ.ಈ ಸಲ ಅವಳ ಹೊಸ ಮನೆಯ ಗೃಹಪ್ರವೇಶದ ಔತಣ ಬಂದಾಗ ಅನುಮಾನಿಸದೇ ನಿಶ್ಚಯಿಸಿ ಕೊಂಡೆ- ತಪ್ಪಿಲೇಕೂಡದು ಅಂತ...
  ‌‌‌‌‌   


Wednesday, 13 May 2026

One thought that...     
   "All my children have crossed fifty/all celebrated their silver Jubilee year of marriage/ All the Kids are now adults- on their tracks...Almost 90% of my part is already OVER...There is nothing I could do now..."
            This comes to my mind
very often now a days.I remember Appaji more.My promises to him- I have fulfilled-
His purpose of making me do my BEd after ten years of marriage - taking the responsibility of kids was perhaps God's plan- not his...
All worked well to our efforts/ satisfaction...
                 Eighty is not a small
number...Now thinking gets slow.Eyes get tired.Hands don't 
permit me work.Legs strike sometimes... Soooooo-
                 Now time to leave...I 
THINK...


Friday, 8 May 2026

Thursday, 7 May 2026

#ಕಾಲಿಂದಿ 
(ಕಿರುಕಾದಂಬರಿ)

(ನಿವೇದನೆ: ಸಮಾಜ ಆರೋಗ್ಯಕರ ಸಮಾಜವಾಗಿ ಉಳಿಯಬೇಕಾದರೆ ಅದನ್ನು ಕಟ್ಟಿ ನಿಲ್ಲಿಸುವ ನಾಗರಿಕರು ತಮ್ಮ ಹಕ್ಕು ಬಾಧ್ಯತೆಗಳನ್ನು, ಅರಿತು ಬಾಳಬೇಕು.‌ ಯಾರದೋ ಒಬ್ಬರ ಸ್ವಾರ್ಥವು ಅಮಾಯಕ ಜೀವವೊಂದನ್ನು ಬಲಿ ಪಡೆದರೆ ಅದು ಸ್ವಸ್ಥ ಸಮಾಜವಲ್ಲ. ದಶಕಗಳ ಹಿಂದೆ ನಡೆದ ಸತ್ಯ ಘಟನೆಯೊಂದು ಈ ಕಾದಂಬರಿಯ ಮೂಲವಸ್ತು. ಅಂದಿನಿಂದ ಇಲ್ಲಿಯ ವರೆಗೆ ಗಂಗೆಯಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ, ಪರಿವರ್ತನೆಗಳ ಹೊಸ ಗಾಳಿ ಬೀಸಿದೆ ಆದರೂ ದುರಂತವೊಂದರ ಇನ್ನೊಂದು ಮುಖ ಹೀಗೂ ಇರುತ್ತದೆ ಎಂದರೆ ಆಶ್ಚರ್ಯವಾಗದು)

           **********

          ಕಾಲಿಂದಿ‌

ಹಾಲ್ ನಲ್ಲಿ ಇದ್ದ ಗೋಡೆಗಡಿಯಾರ ಹತ್ತು ಬಾರಿ ಗಂಟೆ ಹೊಡೆದು ಸಮಯ ಎಷ್ಟಾಗಿದೆ ಎಂಬುದನ್ನು ಸೂಚಿಸಿತು. ಕ್ಯಾಲೆಂಡರ್ ನಲ್ಲಿ ಕಾಣಿಸುತ್ತಿದ್ದ ತಾರೀಖು 22ಅಕ್ಟೋಬರ್ 1998 ಎಂದು ಸೂಚಿಸುತ್ತಿತ್ತು. ಇಂದು ಯಾವೆಲ್ಲ ಮಹತ್ವದ ಕೆಲಸಗಳನ್ನು ಪೂರೈಸಬೇಕು ಎಂಬ ಯೋಚನೆಯಲ್ಲೇ ಮನಸ್ಸು ಮುಳುಗಿರುತ್ತಿದ್ದರೂ ಆದಷ್ಟು ಬೇಗ ಆಫೀಸಿಗೆ ಹೊರಟುಬಿಡುವ  ಇರಾದೆಯಿಂದ ಸಿದ್ಧರಾಗುತ್ತಿದ್ದ  ಶ್ರೀನಿವಾಸಮೂರ್ತಿ ಟೈ ಗಂಟು ಹಾಕಿಕೊಳ್ಳುತ್ತ ಹೊರಬಂದು, "ಅಮ್ಮಾ ನನಗೆ ಹೊತ್ತಾಗಿದೆ ಬರಲೇ ನಾನು?'' ಎನ್ನುತ್ತ ತಮ್ಮ ಬ್ರೀಫ್ ಕೇಸನ್ನು ಎತ್ತಿಕೊಂಡರು.

"ಆಗಲೇ ಹತ್ತು ಗಂಟೆ ಆಯ್ತೇನೋ ಶೀನೂ'’ ಎನ್ನುತ್ತ ಹೊರಬಂದರು ತಾಯಿ ಅಂಬುಜಮ್ಮ.

'’ಹೌದಮ್ಮ, ತುಂಬಾ ಕೆಲಸವಿದೆ. ಈ ವಾರದಲ್ಲೇ ಟೂರಿಗೆ ಬೇರೆ ಹೋಗಬೇಕಿದೆ" ಎಂದವರು ಹೊರಬಾಗಿಲು ದಾಟುವಷ್ಟರಲ್ಲೇ ಪೋಸ್ಟ್ ಮ್ಯಾನ್ ಬಂದಿದ್ದ. 'ಟೆಲಿಗ್ರಾಂ ಸರ್' ಎಂದು ಅವರೆದುರು ಪೆನ್ನು ಚಾಚಿದ ಸಹಿಗಾಗಿ.(ಟೆಲಿಗ್ರಾಂ ಇನ್ನೂ ಮಹತ್ವದ ಸಂಪರ್ಕ ಸಾಧನವಾಗಿದ್ದ ಸಮಯವದು)

"ಕಾಲಿಂದಿ ಸೀರಿಯಸ್ ತಕ್ಷಣ ಬರಬೇಕು" ಎಂದಿತ್ತು ತಂತಿಯಲ್ಲಿ, ಒಂದುಕ್ಷಣ ಏನೂ ತೋಚದಂತಾಗಿ ಸುಮ್ಮನೆ ನಿಂತರು ಶ್ರೀನಿವಾಸಮೂರ್ತಿ,

"ಏನೋ ತುರ್ತು ಟೆಲಿಗ್ರಾಂ ಬಂದಿದೆಯಾ?''

ಅಂಬುಜಮ್ಮ ಅವರ ಬದಿಯಲ್ಲೇ ಬಂದು ನಿಂತು ಕೇಳಿದಾಗ, "ಹೌದಮ್ಮಾ ಕಾಲಿಂದಿಗೆ ಹುಶಾರಿಲ್ಲವೆಂದು ಅವರ ಮಾವ ತಂತಿ ಕಳಿಸಿದ್ದಾರೆ" ಎಂದರು.

"ಎಂಟತ್ತು ದಿನದ ಹಿಂದೇನೇ ಅಲ್ಲವೇನೋ ನೀನು ಬೆಂಗಳೂರಿಗೆ ಹೋಗಿ ಅವರನ್ನೆಲ್ಲ ಮಾತನಾಡಿಸಿ ಬಂದಿದ್ದೆ ಕಾಲಿಂದಿ ಚೆನ್ನಾಗಿದ್ದಾಳೆ, 'ಇಲ್ಲಿಗೆ ಬಾಮ್ಮಾ' ಅಂತ ಕರೆದರೂ ಅತ್ತೆಮಾವನ್ನ ಬಿಟ್ಟು ಬರ್ಲಿಕ್ಕೆ ಒಲ್ಲೆ ಅಂದಳೂಂತ ಹೇಳಿದೆ. ಈಗ ಇದ್ದಕ್ಕಿದ್ದಂತೆ ಏನಾಯ್ತಪ್ಪಾ ಮಗೂಗೆ?"

ಶ್ರೀನಿವಾಸಮೂರ್ತಿಯೂ ಯೋಚನೆಯಲ್ಲಿ ಸಿಲುಕಿದ್ದರು. ಮೊನ್ನೆಯಷ್ಟೇ ಭೇಟಿಯಾಗಿತ್ತು. ಆರೋಗ್ಯವಾಗಿ ನಗುನಗುತ್ತಿದ್ದ ಮಗಳು, "ನಾನೀಗ ಅತ್ತೆ ಮಾವನ್ನ ಬಿಟ್ಟು ತುಮಕೂರಿಗೆ ಬಂದರೆ ಅವರಿಗೆ ತುಂಬ ಕಷ್ಟವಾದೀತು ಅಪ್ಪ. ನಾವೀ ಹೊಸ ಮನೆಗೆ ಬಂದು ಇನ್ನೂ ಹದಿನೈದು ದಿನವೂ ಕಳೆದಿಲ್ಲ. ಸಾಮಾನು ಸಹ ಎಲ್ಲ ಸರಿಯಾಗಿ ಜೋಡಿಸಿದ್ದಾಗಿಲ್ಲ. ಎಲ್ಲಾ ಹೊಸ ವಾತಾವರಣ, ಹೊಂದಿಕೊಳ್ಳಲು ಸಮಯಬೇಕು. ನೋಡೋಣ ಸಾಧ್ಯವಾದ್ರೆ ಮುಂದಿನ ತಿಂಗಳು ಬತ್ತೇನೆ" ಎಂದಿದ್ದಳು. 

ಈ ಹೆಣ್ಣು ಮಕ್ಕಳೇ ಹೀಗೆ, ಹುಟ್ಟಿದ ಮನೆ ತೊರೆದು ಸೇರಿದ ಮನೆಯಲ್ಲಿ ಎಷ್ಟು ಬೇಗ ಬೆರೆತುಹೋಗ್ತಾರೆ? ಮದುವೆಯಾಗಿ ಇನ್ನೂ ಒಂದೇ ವರ್ಷವಾಗಿದೆ. ಆಗಲೇ ಅತ್ತೆ ಮಾವನನ್ನು ಹೇಗೆ ನಯವಿನಯದಿಂದ ಗೆದ್ದುಕೊಂಡಿದ್ದಾಳೆ. ಪತಿ ಇಲ್ಲಿಲ್ಲ, ವಿದೇಶದಲ್ಲಿದ್ದಾನೆ ಎಂದು ಹಾಯಾಗಿ ತವರಿಗೆ ಬಂದಿರಲು ಮನಸ್ಸು ಮಾಡಲಿಲ್ಲ ಕಾಲಿಂದಿ. ತಾವೇ ಬಲವಂತ ಮಾಡಿದ್ದರು. "ಒಂದು ಹದಿನೈದು ದಿನವಾದರೂ ಬಾಮ್ಮ ತುಮಕೂರಿಗೆ, ನಿನ್ನ ಅಜ್ಜಿ ಹಂಬಲಿಸ್ತಾಳೆ ನಿನ್ನ ನೋಡಲಿಕ್ಕೆ" ಕಾಲಿಂದಿ ನಕ್ಕಿದ್ದಳು. “ಅಜ್ಜಿಯ ನೆನಪು ನನಗೂ ತುಂಬ ಆಗುತ್ತೆ ಅಪ್ಪ. ಬೇಗನೇ ಬರುತ್ತೇನಂತ ಹೇಳಿ ಅವಳಿಗೆ ನಗುನಗುತ್ತಲೇ ಬೀಳ್ಕೊಟ್ಟಿದ್ದಳು ತಮ್ಮನ್ನು. ಈಗ ಇದ್ದಕ್ಕಿದ್ದಂತೆ ನರ್ಸಿಂಗ್ ಹೋಮಿಗೆ ಸೇರಿಸುವಂಥ ಕಾಯಿಲೆ ಏನಾಗಿರಬೇಕು ಅವಳಿಗೆ?

"ಶೀನೂ" ತಾಯಿ ಕರೆದಾಗ ಬೆಚ್ಚಿ ಯೋಚನೆಯ ಗುಂಗಿನಿಂದ ಹೊರಬಂದರು. 'ಅಂ, ಅದು... ಅವರು ಹಳೆಮನೆ ಬದಲಾಯಿಸಿ ಜಯನಗರದ ಹೊಸ ಮನೆಗೆ ಹೋಗಿದ್ದಾರಲ್ಲಮ್ಮಾ, ನೀರುಗೀರು ಬದಲಾಯಿಸಿ ಜ್ವರ-ಪರ ಬಂದಿರಬೇಕು. ಮನೆಯಲ್ಲಿ ಅವಳ ಅತ್ತೆ ಮಾವ ಇಬ್ಬರೇ ಇರುವದಲ್ಲವ? ಅದಕ್ಕೇ ನನಗೆ ತಿಳಿಸಿದ್ದಾರೆ. ಯಾವುದಕ್ಕೂ ನಾನೊಮ್ಮೆ ಹೋಗಿ ನೋಡಿಕೊಂಡು ಬತ್ತೇನೆ... ನೀನು ಚಿಂತೆ ಮಾಡೋದು ಬೇಡ ಮ್ಮ" ಎಂದರು. ಮಗಳಿಗೆ ಸೀರಿಯಸ್ ಎಂಬ ವಿಷಯವನ್ನು ತಾಯಿಗೆ ಈಗಲೇ ಹೇಳುವದು ಬೇಡ ಸುಮ್ಮನೆ ಒದ್ದಾಡುತ್ತಾಳೆ ಎಂದು ಯೋಚಿಸುತ್ತಾ ಬ್ರೀಫ್ ಕೇಸಿನಲ್ಲಿ ಒಂದೆರಡು ಬಟ್ಟೆಗಳನ್ನು ತುಂಬಿಸಿಕೊಂಡು ಹೊರಡಲಣಿಯಾದರು.

"ಮಗು ಬೇಗ ಗುಣವಾಗಲಪ್ಪಾ, ತಾಯಿ ಇಲ್ಲದ ಕಂದ, ಶೀನೂ, ಬರುವಾಗ ಅವಳನ್ನ ಹೇಗಾದ್ರೂ ಮಾಡಿ ಇಲ್ಲಿಗೇ ಕಕ್ಕೊಂಡು ಬಾರಪ್ಪ. ಇಲ್ಲೇ ಡಾಕ್ಟರಿಗೆ ತೋರಿಸೋಣ ಬೇಕಾದ್ರೆ ನಾಕುದಿನ ಎಣ್ಣೆನೀರು ಹಾಕಿ. ಒಳ್ಳೆ ಊಟತಿಂಡಿ ಮಾಡಿ ಹಾಕ್ತಿನಿ ಸುಧಾರಿಸಿಕೊಂಡ ಮೇಲೆ ಬೇಕಾದ್ರೆ ಮತ್ತೆ ಕರೊಂಡು ಹೋಗಿಬಿಡುವೆಯಂತೆ" ಎಂದರು ಅಂಬುಜಮ್ಮ.

"ಆಗಲಮ್ಮಾ' ಎಂದರು. ದೇವರ ಕೋಣೆಯತ್ತ ನಡೆದ ಅಂಬುಜಮ್ಮ ತುಪ್ಪದ ದೀಪವೊಂದನ್ನು ಹಚ್ಚಿಟ್ಟು ಕಾಲಿಂದಿಗೆ 'ಆರೋಗ್ಯಭಾಗ್ಯ ನೀಡು ದೇವ' ಎಂದು  ಕೈ ಮುಗಿದರು.

{ಮುಂದುವರಿಯುತ್ತದೆ}

ಜಯಶ್ರೀ ದೇಶಪಾಂಡೆ
          ************

Monday, 6 April 2026

Dr ,Raju' s prescriptions...

Raju' s prescription...

Morning - 18 units

Start at 4 units and increase until fasting reaches 100-110

Food constitent 
160-180

1 to 1.5 chapati
Sarina battla anna/ jolada muddi

Gastroantologist
Haemoglobin

Sunday, 18 January 2026

Follow healthy routine...

ಡಾಕ್ಟರ್ ಇಲ್ಲದ ಕಾಲದಲ್ಲಿ ನಮ್ಮ ಪೂರ್ವಿಕರು ಪಾಲನೆ ಮಾಡಿದ ಆರೋಗ್ಯದ ಗುಟ್ಟು. ಆಯುರ್ವೇದದ ಈ ದಿನಚರಿ ಪಾಲನೆ ಮಾಡಿದವರು ನೂರಾರು ವರ್ಷ ಕಾಯಿಲೆ ಇಲ್ಲದೇ ಬದುಕಿದರು. ನೂರರ ಸಮೀಪದಲ್ಲೂ ಗಟ್ಟಿಯಾಗಿ ಆರೋಗ್ಯವಂತರಾಗಿದ್ದರು.

ಆಯುರ್ವೇದದ ಪ್ರಕಾರ ದಿನಚರಿ (Daily Routine) ಎಂದರೆ ಕೇವಲ ಕೆಲಸ ಮಾಡುವುದಲ್ಲ, ಅದು ಪ್ರಕೃತಿಯೊಂದಿಗೆ ನಮ್ಮ ದೇಹವನ್ನು ಹೊಂದಿಸಿಕೊಳ್ಳುವ ವಿಧಾನವಾಗಿದೆ. ಆಯುರ್ವೇದದ ಪ್ರಕಾರ ನಿಮ್ಮ ದಿನವನ್ನು ಹೇಗೆ ಕಳೆಯಬೇಕು ಎಂಬ ಮಾಹಿತಿ ಇಲ್ಲಿದೆ:

​1. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು (Early Morning)
​ಸೂರ್ಯೋದಯಕ್ಕೆ ಸುಮಾರು 1.5 ಗಂಟೆಗಳ ಮೊದಲು (ಅಂದರೆ ಬೆಳಿಗ್ಗೆ 4:30 ರಿಂದ 5:30 ರ ನಡುವೆ) ಏಳುವುದು ಅತ್ಯುತ್ತಮ. 
ಈ ಸಮಯದಲ್ಲಿ ವಾತಾವರಣವು ಶುದ್ಧವಾಗಿರುತ್ತದೆ ಮತ್ತು ಮನಸ್ಸು ಶಾಂತವಾಗಿರುತ್ತದೆ.

​2. ಮುಖ ಪ್ರಕ್ಷಾಲನ ಮತ್ತು ಹಲ್ಲುಜ್ಜುವುದು
​ಕಣ್ಣುಗಳು: ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ.
​ಹಲ್ಲುಜ್ಜುವುದು: ಕಹಿ ಅಥವಾ ಒಗರು ರುಚಿಯ ಗಿಡಮೂಲಿಕೆಗಳ ಪುಡಿ ಅಥವಾ ಪೇಸ್ಟ್ ಬಳಸಿ.

​ನಾಲಿಗೆ ಸ್ವಚ್ಛತೆ: ನಾಲಿಗೆಯ ಮೇಲಿರುವ ಬಿಳಿ ಪದರವನ್ನು (ಆಮ) ತೆಗೆಯಲು ನಾಲಿಗೆಯನ್ನು ಸ್ವಚ್ಛಗೊಳಿಸಿ. ಇದು ಜೀರ್ಣಕ್ರಿಯೆಗೆ ಸಹಕಾರಿ.

​3. ಅಭ್ಯಂಗ (ತೈಲ ಮಸಾಜ್)
​ಸ್ನಾನಕ್ಕೆ ಮೊದಲು ಇಡೀ ದೇಹಕ್ಕೆ ಮೃದುವಾಗಿ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯುತ್ತದೆ.

​4. ವ್ಯಾಯಾಮ ಮತ್ತು ಸ್ನಾನ
​ನಿಮ್ಮ ಶಕ್ತಿಯ ಅರ್ಧದಷ್ಟು ಮಾತ್ರ ವ್ಯಾಯಾಮ ಮಾಡಿ (ಬೆವರುವವರೆಗೆ). ಯೋಗಾಸನ ಮತ್ತು ಪ್ರಾಣಾಯಾಮ ಅತ್ಯಂತ ಶ್ರೇಷ್ಠ.
​ನಂತರ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ತಲೆಗೆ ಅತಿ ಬಿಸಿ ನೀರನ್ನು ಹಾಕಬೇಡಿ.

​5. ಆಹಾರ ಪದ್ಧತಿ
​ಉಪಹಾರ: ಬೆಳಿಗ್ಗೆ ಹಸಿವಾದಾಗ ಹಗುರವಾದ ಮತ್ತು ಪೌಷ್ಟಿಕಾಂಶಯುಕ್ತ ಉಪಹಾರ ಸೇವಿಸಿ.
​ಮಧ್ಯಾಹ್ನದ ಊಟ: ಇದು ದಿನದ ಅತಿ ಮುಖ್ಯ ಮತ್ತು ದೊಡ್ಡ ಆಹಾರವಾಗಿರಲಿ. ಏಕೆಂದರೆ ಮಧ್ಯಾಹ್ನ ಸೂರ್ಯನು ಪ್ರಬಲವಾಗಿರುವಾಗ ನಮ್ಮ ಜೀರ್ಣಶಕ್ತಿ (ಜಠರಾಗ್ನಿ) ಹೆಚ್ಚಿರುತ್ತದೆ.
​ರಾತ್ರಿ ಊಟ: ಸೂರ್ಯಾಸ್ತದ ನಂತರ ಅಥವಾ ಮಲಗುವ 2-3 ಗಂಟೆಗಳ ಮೊದಲು ಹಗುರವಾದ ಆಹಾರ ಸೇವಿಸಿ.

​6. ನಿದ್ರೆ (ಸರಿಯಾದ ಸಮಯಕ್ಕೆ ವಿಶ್ರಾಂತಿ)
​ರಾತ್ರಿ 10 ಗಂಟೆಯೊಳಗೆ ಮಲಗುವುದು ಸೂಕ್ತ. ಚೆನ್ನಾಗಿ ನಿದ್ರೆ ಮಾಡುವುದರಿಂದ ದೇಹದ ಅಂಗಾಂಶಗಳು ಪುನಶ್ಚೇತನಗೊಳ್ಳುತ್ತವೆ.

​ಗಮನಿಸಬೇಕಾದ ಪ್ರಮುಖ ಅಂಶಗಳು:
​ನೀರು: ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯಿರಿ. ಬೆಳಿಗ್ಗೆ ಎದ್ದ ತಕ್ಷಣ ಉಗುರುಬೆಚ್ಚಗಿನ ನೀರು ಕುಡಿಯುವುದು (ಉಷಾಪಾನ) ಮಲಬದ್ಧತೆಯನ್ನು ತಡೆಯುತ್ತದೆ.
​ಮನಸ್ಥಿತಿ: ಊಟ ಮಾಡುವಾಗ ಮತ್ತು ಕೆಲಸ ಮಾಡುವಾಗ ಶಾಂತವಾಗಿರಿ.

​ನೆನಪಿಡಿ: ಆಯುರ್ವೇದವು ಪ್ರತಿಯೊಬ್ಬರ ದೇಹದ ಪ್ರಕೃತಿಗೆ (ವಾತ, ಪಿತ್ತ, ಕಫ) ಅನುಗುಣವಾಗಿ ಬದಲಾಗುತ್ತದೆ.

ಕೂತರೇ ನಿಂತರೇ ಡಾಕ್ಟರ್ ಬಳಿ ಓಡ ಬೇಡಿ: ಅಂಗೈಯಲ್ಲಿ ಆರೋಗ್ಯ, ನಿಮ್ಮ ಆರೋಗ್ಯ ನಿಮ್ಮ ಕೈಲಿ ಇರುವಾಗ ಕಾಪಾಡ್ಕೋಳ್ಳಿ:

▪️ಬಿಕ್ಕಳಿಕೆ ಬರುವುದೇ:    ಹುರುಳಿ ಕಷಾಯ ಸೇವಿಸಿರಿ.
▪️ಕಫ ಬರುವುದೇ:      ಶುಂಠಿ ಕಷಾಯ ಸೇವಿಸಿರಿ.
▪️ಹೊಟ್ಟೆಯಲ್ಲಿ ಹರಳಾದರೇ:    ಬಾಳೆದಿಂಡಿನ ಪಲ್ಯ ಸೇವಿಸಿರಿ.
▪️ಬಿಳಿ ಕೂದಲು:   ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.
▪️ಮರೆವು ಬರುವುದೇ:     ನಿತ್ಯ ಸೇವಿಸಿ ಜೇನು.
▪️ಕೋಪ ಬರುವುದೇ:   ಕಾಳು ಮೆಣಸು ಸೇವಿಸಿ.
▪️ಮೂಲವ್ಯಾಧಿಯೇ:    ನಿತ್ಯ ಸೇವಿಸಿ ಎಳ್ಳು.
▪️ಮುಪ್ಪು ಬೇಡವೇ:   ಗರಿಕೆ ರಸ ಸೇವಿಸಿ.
▪️ನಿಶಕ್ತಿಯೇ:     ದೇಶಿ ಆಕಳ ಹಾಲು ಸೇವಿಸಿ.
▪️ಇರುಳುಗಣ್ಣು ಇದೆಯೇ:   ತುಲಸಿ ರಸ ಕಣ್ಣಿಗೆ ಹಾಕಿ.
▪️ಕುಳ್ಳಗಿರುವಿರೇ:   ನಿತ್ಯ ಸೇವಿಸಿ ನಿಂಬೆ ಹಣ್ಣು.
▪️ತೆಳ್ಳಗಿರುವಿರೆ:   ನಿತ್ಯ ಸೇವಿಸಿ ಸೀತಾ ಫಲ.
▪️ತೆಳ್ಳಗಾಗಬೇಕೇ:   ನಿತ್ಯ ಸೇವಿಸಿ ಬಿಸಿ ನೀರು.
▪️ಹಸಿವಿಲ್ಲವೇ:   ನಿತ್ಯ ಸೇವಿಸಿ ಓಂ ಕಾಳು.
▪️ತುಂಬಾ ಹಸಿವೇ:   ಸೇವಿಸಿ ಹಸಿ ಶೇಂಗಾ.
▪️ಬಾಯಾರಿಕೆಯೇ:    ಸೇವಿಸಿ ತುಳಸಿ.
▪️ಬಾಯಾರಿಕೆ ಇಲ್ಲವೇ:   ಸೇವಿಸಿ ಬೆಲ್ಲ.
▪️ಸಕ್ಕರೆ ಕಾಯಿಲೆಯೇ:   ಬಿಡಿ ಸಕ್ಕರೆ, ಸೇವಿಸಿ ರಾಗಿ.
▪️ರಕ್ತ ಹೀನತೆಯೇ:    ನಿತ್ಯ ಸೇವಿಸಿ ಪಾಲಕ್ ಸೊಪ್ಪು.
▪️ತಲೆ ಸುತ್ತುವುದೇ:    ಬೆಳ್ಳುಳ್ಳಿ ಕಷಾಯ ಸೇವಿಸಿ.
▪️ಬಂಜೆತನವೇ:      ಔದುಂಬರ ಚಕ್ಕೆ ಕಷಾಯ
▪️ಸ್ವಪ್ನ ದೋಷವೇ:   ತುಳಸಿ ಕಷಾಯ ಸೇವಿಸಿ.
▪️ಅಲರ್ಜಿ ಇದೆಯೇ:   ಅಮೃತ ಬಳ್ಳಿ ಕಷಾಯ ಸೇವಿಸಿ.
▪️ಹೃದಯ ದೌರ್ಬಲವೇ:   ಸೋರೆಕಾಯಿ ರಸ ಸೇವಿಸಿ.
▪️ರಕ್ತ ದೋಷವೇ:    ಕೇಸರಿ ಹಾಲು ಸೇವಿಸಿ.
▪️ದುರ್ಗಂಧವೇ:     ಹೆಸರು ಹಿಟ್ಟು ಸ್ನಾನ ಮಾಡಿ.
▪️ಕೋಳಿ ಜ್ವರಕ್ಕೆ:   ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.
▪️ಕಾಲಲ್ಲಿ ಆಣಿ ಇದೆಯೇ: ಉತ್ತರಾಣಿ ಸೊಪ್ಪು ಕಟ್ಟಿರಿ.
▪️ಮೊಣಕಾಲು ನೋವು:    ನಿತ್ಯ ಮಾಡಿ ವಜ್ರಾಸನ.
▪️ಸಂಕಟ ಆಗುವುದೇ:   ಎಳನೀರು ಸೇವಿಸಿ.
▪️ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ:        ನಿತ್ಯ ಕೊಡಿ ಜೇನು.
▪️ಜಲ ಶುದ್ಧಿ ಮಾಡಬೇಕೇ:  ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ, ಅದರಲ್ಲಿ ತುಳಸಿ ಎಲೆ ಹಾಕಿರಿ.
▪️ವಾಂತಿಯಾಗುವುದೇ:    ಎಳನೀರು-ಜೇನು ಸೇವಿಸಿ.
▪️ಭೇದಿ ತುಂಬಾ ಆಗುವುದೇ:  ಅನ್ನ ಮಜ್ಜಿಗೆ ಊಟ ಮಾಡಿ.
▪️ಹಲ್ಲು ಸಡಿಲವೇ:   ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.
▪️ಕಾಮಾಲೆ ರೋಗವೇ:     ನಿತ್ಯ ಮೊಸರು ಸೇವಿಸಿ.
▪️ಉಗುರು ಸುತ್ತು ಇದೆಯೇ:    ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.
▪️ಎದೆ ಹಾಲಿನ ಕೊರತೆಯೇ:   ನಿತ್ಯ ಸೇವಿಸಿ ಎಳ್ಳು.
▪️ಎಲುಬುಗಳ ನೋವೇ:   ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.
▪️ತುಟಿ ಸೀಳಿದಿಯೇ:   ಹಾಲಿನ ಕೆನೆ ಹಚ್ಚಿರಿ.
▪️ಪಿತ್ತವೇ:    ಚಹಾ ಬಿಟ್ಟುಬಿಡಿ.
▪️ಉಷ್ಣವೇ:   ಕಾಫಿ ಬಿಟ್ಟುಬಿಡಿ.
▪️ಚಂಚಲವೇ:    ನಾಸಿಕದಲ್ಲಿ ದೇಶಿ ತುಪ್ಪ ಹಾಕಿ.
▪️ಬಹು ಮೂತ್ರವೇ:    ದಾಲ್ಚಿನ್ನಿ ಕಷಾಯ ಸೇವಿಸಿ.
▪️ಮೂತ್ರ ತಡೆಗೆ:    ಜೀರಿಗೆ ಕಷಾಯ ಸೇವಿಸಿ.
▪️ಆಯಾಸವೇ:   ಅಭ್ಯಂಗ ಸ್ನಾನ ಮಾಡಿ
▪️ಹಿಮ್ಮಡಿ ಸೀಳುವುದೇ:   ಔಡಲ ಎಣ್ಣೆ ಸುಣ್ಣ ಕಲಸಿ ಲೇಪಿಸಿ.

ಆರೋಗ್ಯವೇ ಭಾಗ್ಯ🌹
ಸಸ್ಯಸಂಪತ್ತು ನಮ್ಮಲ್ಲಿ ವಿರಳವಾಗಿ ಕಂಡುಬರುತ್ತಿದೆ. ಇತ್ತೀಚೆಗೆ ನಮಗೆ ಅವುಗಳ ಹೆಸರಾಗಲಿ ಉಪಯೋಗವಾಗಲಿ ಗೊತ್ತಾಗುತ್ತಿಲ್ಲ.

ಇಂದು ಬಹುತೇಕ ಜನತೆ ಚಿಕ್ಕಪುಟ್ಟ ರೋಗಗಳಿಗೂ ಮಾತ್ರೆಗಳನ್ನು ಸಿಕ್ಕಾಪಟ್ಟೆ ತಿನ್ನುತ್ತಾರೆ.

ನಮ್ಮ ಸುತ್ತಮುತ್ತಲೂ ಇರುವ ಅನೇಕ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳನ್ನು ಕಡೆಗಣಿಸುತ್ತಾರೆ.

ಏಕೆಂದರೆ, ಬಹುತೇಕ ಜನರಿಗೆ ಆ ಗಿಡಗಳ ಹೆಸರಾಗಲಿ ಅದರ ಉಪಯೋಗಗಳಾಗಲಿ ತಿಳಿದಿಲ್ಲ.

ಕೇವಲ ಸಸ್ಯಗಳು ಮತ್ತು ಅವುಗಳಿಗೆ ಕನ್ನಡದಲ್ಲಿ ಬಳಸುವ ಹೆಸರುಗಳಿವೆ. 

ನಿಖರವಾಗಿ ಇದರ ಉಪಯೋಗ ಗೊತ್ತಿದ್ದವರು ಅದರ ವಿವರಣೆಯನ್ನು - ಉಪಯೋಗವನ್ನು ತಿಳಿಸಬಹುದು.

ಕೆಲವು ಜನರು ನೋಡಿಲ್ಲ, ಇನ್ನು ಕೆಲವರು ಹೆಸರುನೇ ಕೇಳಿಲ್ಲಾ ಆದ್ದರಿಂದ ಶೇರ್ ಮಾಡಿ  🙏.

ಮತ್ತಷ್ಟು ಉಪಯುಕ್ತ ಮಾಹಿತಿಗಳಿಗಾಗಿ-

 #krishikaipidi #bhusresta #onicaproject #onicafarming 
 #homemade #herbs #homeotheraphy #krishijagran #24RsClub

ಎಲ್ಲರೂ ಹೇಳುತ್ತಾರೆ- "ನೀನು ತುಂಬಾ ಬದಲಾಗಿದ್ದೀಯಾ" ಇರಬಹುದು. ಮೊದಲು ಎಲ್ಲವನ್ನೂ ಮನಸ್ಸಿಗೆ ತೆಗೆದುಕೊಳ್ಳುತ್ತಿದ್ದೆ- ಈಗ, ಹೆಚ್ಚು ತಿಳಿದುಕೊಳ್ಳುತ್ತೇನೆ...