Thursday, 21 May 2026

ಬಿಡಿಸಿಕೊಳ್ಳದ ಬೇಸರ
ದಿಕ್ಕರಿಸಲಾಗದ ದುಃಖ
ನೀಗಿಕೊಳ್ಳಲಾಗದ ನಿರ್ಲಿಪ್ತತೆ 
ಅಸಂಬದ್ಧ ನಿಶಬ್ದದೊಡನೆ
ತಣ್ಣಗೆ ತಡವರಿಸುವ ಒಂದು ಏಕಾಂತ..!

Wednesday, 20 May 2026

      ನನ್ನ ಮಕ್ಕಳು ತಮ್ಮ ಅಪ್ಪಾಜಿಯನ್ನು
ಕಳೆದುಕೊಂಡಾಗ ತುಂಬ ಚಿಕ್ಕವರು. ನನಗೂ 37 ವಯಸ್ಸು...ಅಷ್ಟೇ...ನನ್ನ ನೌಕರಿ/ಮನೆ/ಮಕ್ಕಳು ಎಲ್ಲವನ್ನೂ ತೂಗಿಸಿಕೊಂಡು ನೌಕರಿ ಮಾಡುತ್ತಾ
ಹತ್ತಾರು ವರ್ಷಗಳನ್ನು ಕಳೆದರೂ ಮನೆ- ಹೊಲ ಇವುಗಳನ್ನು ನಿಭಾಯಿಸಲು ಸಹಜವಾಗಿ ಕಷ್ಟವಾಗುತ್ತಿತ್ತು. ಯಾರ್ಯಾರದೋ ಸಹಾಯದಿಂದ ಕೆಲ
ವರ್ಷಗಳನ್ನು ಕಳೆದಮೇಲೆ ಒತ್ತಡ ನಿಭಾಯಿಸಲಾಗದೇ ಹೊಲ ಮಾರಲೇ
ಬೇಕಾಯಿತು.ಆ ನೋವು ನನಗೆ ಆಗಾಗ 
ಕಾಡುತ್ತಿತ್ತು...
           ಈಗ ಅದು ಉಪಶಮನವಾಗಿದೆ.
ಹಿರಿಯ ಅಳಿಯ ಐಚ್ಛಿಕ ನಿವೃತ್ತಿ ಪಡೆದ 
ಮೇಲೆ ಮೈಸೂರಿನ ಸುಂದರ ವಾತಾವರಣದಲ್ಲಿ ಮಾವಿನ ತೋಪು 
ಖರೀದಿಸಿ/ಒಂದು ಪುಟ್ಟ Farm house
ನಿರ್ಮಿಸಿ/ಬಹಳ ದಿನಗಳ ತನ್ನ ಕನಸನ್ನು
ನನಸನ್ನಾಗಿಸಿದ್ದಾನೆ ಅಷ್ಟೇ ಅಲ್ಲ,
ಮೂವತ್ತು ವರ್ಷ ಬ್ಯಾಂಕಿನಲ್ಲಿ ಕಳೆದ
ದಿನಗಳನ್ನು ಸಂಪೂರ್ಣ ಮರೆತು ಪ್ರಕೃತಿ ಯ ಮಧ್ಯದಲ್ಲಿ ಬೇರೆಯದೇ ನೈಸರ್ಗಿಕ 
ಜೀವನ ತನ್ನದಾಗಿಸಿಕೊಂಡಿದ್ದಾನೆ. ಅವನಿಗೆ ಭುಜಬಲವಾಗಿ ಮೈಸೂರಿನಲ್ಲೇ
ಇಂಜಿನಿಯರಿಂಗ್ ಮಾಡುತ್ತಿರುವ ಎರಡನೇ ಮಗನ ಸಾಥ್...
          'ಸುಮೇರು-ವನ' ಇದೀಗ ಮೈಸೂರು ಮಗಳ ಮನೆಗಿಂತ ಆಪ್ತ...
           Try ಮಾಡಿ...

         ಈಗ ಬರೆಯುವುದನ್ನು ಬಿಟ್ಟಿದ್ದೇನೆ.
ಬೇಡವೆಂದಲ್ಲ- ಕಣ್ಣಿನ ಸಮಸ್ಯೆಯಿಂದ...
ಮನೆಯಲ್ಲಿ ಕೆಲಸಗಳೂ ಕಡಿಮೆಯಾಗಿವೆ
ಕೋರಮಂಗಲದಲ್ಲಿ ಜಾಗಗಳು/ಜನಗಳು
ಹತ್ತಿರವಾಗಿಲ್ಲ...ದೂರದರ್ಶನ ನನಗೆ ದೂರವೇ!!ಬಹಳ ಹತ್ತಿರವಾಗಿಲ್ಲ!!!ಹಾಗೇ ಏನಾದರೂ ವಿಶೇಷವಿದ್ದಾಗ ಸ್ಲಲ್ಪು ಆಪತ್ಬಾಂಧವ್ಯ.
                  ಇದು ನನ್ನ ಸಧ್ಯದ ಸಮಸ್ಯೆ. 
Face - book ಆಗಾಗ ಸ್ವಲ್ಪ ನಿರಾಳತೆ
ಕೊಡುತ್ತದೆ.ಆದರೆ AI ಬಳಕೆ ಶುರುವಾದ
ಅದೂ ಸ್ವಲ್ಪ ಲಯ ತಪ್ಪಿದೆ.ಯಾವುದು
ನಿಜ/ಯಾವುದು ಸುಳ್ಳು ತಿಳಿಯುವುದಿಲ್ಲ
Things are not what they seem to BE...ಹೀಗಾಗಿ ಏನೇ ನೋಡಿದರೂ
ಹಿಂದೆಯೇ ಒಂದು ಸಣ್ಣ ಅನುಮಾನ!!
ಆದರೆ ಅದರ ಪರಿಣಾಮ ಸಣ್ಣದಲ್ಲ...
               ನಾನು ಯಾವಾಗಲೂ Negative ಬರೆಯುವುದನ್ನು like ಮಾಡುವುದಿಲ್ಲ.ಆದರೆ ಈಗ positive
ಬರೆಯಲು ಬಹಳವಿಲ್ಲ ಅನಿಸುತ್ತದೆ.
ಜಗದ ಹರಹು ದೊಡ್ಡದು...ಆದರೆ ನನ್ನದೇ ದಿನದಿನಕ್ಕೆ ಚಿಕ್ಕದಾಗುತ್ತಿದೆ...

Thursday, 14 May 2026

      ಈ ಸಂಗೀತಾ ಚಿಕ್ಕ ಹುಡುಗಿಯಾಗಿ ಇದ್ದಾಗಿನಿಂದ ಗೊತ್ತು.ಅವರ ಅಮ್ಮ/ನಾನು ಒಂದೇ ಶಾಲೆಯ ಶಿಕ್ಷಕಿಯರು/ಇವಳ ತಂದೆ+ ನನ್ನ ಅಣ್ಣ ಗೆಳೆಯರು. ಇವಳು ಒಂಬತ್ತನೇ ಇಯತ್ತೆಯಲ್ಲಿ ನನ್ನ ವಿದ್ಯಾರ್ಥಿನಿ. ಅವಧಿಯ ಸಮಯದಲ್ಲಿ 
ಅಕಸ್ಮಾತ್ ಧಿಡೀರ್ ಎಂದು on spot
ಏನಾದರೂ notes ಬರೆಸಿದರೆ ನನಗೆ ಅದರ copy ಮಾಡಿಕೊಟ್ಟದ್ದೂ ಉಂಟು.
ಒಂದು ಹಂತದಲ್ಲಿ ಬೀಗರೂ ಆದದ್ದು ಆ ನಂತರ...

            ಚಿಕ್ಕಂದಿನಿಂದಲೇ ಸಂಗೀತದ
ಹುಚ್ಚು ಹತ್ತಿ ಅವಳು ಬಹುಬೇಗನೇ ರಾಜ್ಯ/ ರಾಷ್ಟ್ರ/ಅಂತರ್ ರಾಷ್ಟೀಯ ಮಟ್ಟದಲ್ಲಿ ಮನೆ ಮಾತಾದ ಮೇಲೆ, ನಾನೂ ಬೆಂಗಳೂರಿಗೆ ವಲಸೆ ಬಂದ ಕಾರಣ ನನ್ನ ಅವಳ ಭೇಟಿ ಮಾಧ್ಯಮದ ಮೂಲಕ/ face book ನಲ್ಲಿ/ಅಪರೂಪಕ್ಕೆ ಫೋನ್ ಮಾಡಿದಾಗ...

          ಮನೆಗೆ 'ಬನ್ನಿ '- ಟೀಚರ್ ಎಂದು
ಆಗಾಗ ಔತಣ ಬಂದರೂ ಸಮಯ ಕೂಡಿ ಬಂದಿರಲಿಲ್ಲ.ಈ ಸಲ ಅವಳ ಹೊಸ ಮನೆಯ ಗೃಹಪ್ರವೇಶದ ಔತಣ ಬಂದಾಗ ಅನುಮಾನಿಸದೇ ನಿಶ್ಚಯಿಸಿ ಕೊಂಡೆ- ತಪ್ಪಿಲೇಕೂಡದು ಅಂತ...

           ಅಂದುಕೊಂಡದ್ದು ಆಗಿಯೇ
ಬಿಡುತ್ತಿದೆ ಅಂತ ಅಂದುಕೊಂಡರೆ ನಾವು ಮೂರ್ಖರೇ!!!ಮೊಮ್ಮಗನ JEE-Advance- ಪರೀಕ್ಷೆಗಾಗಿ ಮಗಳು, ಅಳಿಯ ಬೆಳಿಗ್ಗೆ ಹೋದಕಾರಣ ನಾನು
ಒಬ್ಬಳೇ ಅಷ್ಟುದೂರ ಹೋಗುವದಕ್ಕೆ
ಹಿಂಜರಿದೆ,ಸಂಗೀತಾಳಿಗೆ ಫೋನು ಮಾಡಿ
Apology ಕೇಳಿ,ಇನ್ನೊಮ್ಮೆ ಅವಕಾಶ  ಪಡೆದುಕೊಂಡೆ...

         ಇದು ದೊಡ್ಡ ವಿಷಯವಲ್ಲ ಬಿಡಿ-
ಸಹಜದ್ದೇ.ಆದರೆ ಇಂದು Instagram 
ನಲ್ಲಿ ಅವಳ ಬಹು ಮಹಡಿ ಕಟ್ಟಡ ನೋಡಿಯೇ ಹತ್ತಿದ ದಮ್ಮು ಇನ್ನೂ ಇಳಿದಿಲ್ಲ.ಅದು ಕಾರ್ಯಕ್ರಮದ ದಿನ ಹೋಗಿ/ಜನರ ಮಧ್ಯೆ ಅಡ್ಡಾಡಿ/ಹಾಜರಿ ಹಾಕುವ ಸಂಗತಿಯಲ್ಲ...ನಾಲ್ಕು floor ಹತ್ತಿ ಇಳಿಯುವ ದಮ್ ಬೇಕು/ ಎಲ್ಲವನ್ನೂ ಸಹನೆಯಿಂದ ನೋಡಿ ಅನಂದಿಸುವ ವಯಸ್ಸು ಬೇಕು/ಅಷ್ಟು
ಸಮಯ ಬೇಕು...ಒಬ್ಬರು ಜೊತೆಯೂ
ಇರಬೇಕು...

           ಇದು ತಲೆಗೆ ಬಂದಾಗ ನನ್ನ ಹಳಹಳಿ/ಚಡಪಡಿಕೆ ಸ್ವಲ್ಪವೇ ಕಡಿಮೆ ಯೂ ಆಯ್ತು...ಏನೂ ತಪ್ಪಾಗಿಲ್ಲ...
Next time- ಅನ್ನೋದು ಇಂಥ ಪ್ರಸಂಗಕ್ಕೆ ಹೆಚ್ಚು ಸೂಕ್ತ...

    

         ‌‌
  ‌‌‌‌‌   


Wednesday, 13 May 2026

One thought that...     
   "All my children have crossed fifty/all celebrated their silver Jubilee year of marriage/ All the Kids are now adults- on their tracks...Almost 90% of my part is already OVER...There is nothing I could do now..."
            This comes to my mind
very often now a days.I remember Appaji more.My promises to him- I have fulfilled-
His purpose of making me do my BEd after ten years of marriage - taking the responsibility of kids was perhaps God's plan- not his...
All worked well to our efforts/ satisfaction...
                 Eighty is not a small
number...Now thinking gets slow.Eyes get tired.Hands don't 
permit me work.Legs strike sometimes... Soooooo-
                 Now time to leave...I 
THINK...


Friday, 8 May 2026

Thursday, 7 May 2026

#ಕಾಲಿಂದಿ 
(ಕಿರುಕಾದಂಬರಿ)

(ನಿವೇದನೆ: ಸಮಾಜ ಆರೋಗ್ಯಕರ ಸಮಾಜವಾಗಿ ಉಳಿಯಬೇಕಾದರೆ ಅದನ್ನು ಕಟ್ಟಿ ನಿಲ್ಲಿಸುವ ನಾಗರಿಕರು ತಮ್ಮ ಹಕ್ಕು ಬಾಧ್ಯತೆಗಳನ್ನು, ಅರಿತು ಬಾಳಬೇಕು.‌ ಯಾರದೋ ಒಬ್ಬರ ಸ್ವಾರ್ಥವು ಅಮಾಯಕ ಜೀವವೊಂದನ್ನು ಬಲಿ ಪಡೆದರೆ ಅದು ಸ್ವಸ್ಥ ಸಮಾಜವಲ್ಲ. ದಶಕಗಳ ಹಿಂದೆ ನಡೆದ ಸತ್ಯ ಘಟನೆಯೊಂದು ಈ ಕಾದಂಬರಿಯ ಮೂಲವಸ್ತು. ಅಂದಿನಿಂದ ಇಲ್ಲಿಯ ವರೆಗೆ ಗಂಗೆಯಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ, ಪರಿವರ್ತನೆಗಳ ಹೊಸ ಗಾಳಿ ಬೀಸಿದೆ ಆದರೂ ದುರಂತವೊಂದರ ಇನ್ನೊಂದು ಮುಖ ಹೀಗೂ ಇರುತ್ತದೆ ಎಂದರೆ ಆಶ್ಚರ್ಯವಾಗದು)

           **********

          ಕಾಲಿಂದಿ‌

ಹಾಲ್ ನಲ್ಲಿ ಇದ್ದ ಗೋಡೆಗಡಿಯಾರ ಹತ್ತು ಬಾರಿ ಗಂಟೆ ಹೊಡೆದು ಸಮಯ ಎಷ್ಟಾಗಿದೆ ಎಂಬುದನ್ನು ಸೂಚಿಸಿತು. ಕ್ಯಾಲೆಂಡರ್ ನಲ್ಲಿ ಕಾಣಿಸುತ್ತಿದ್ದ ತಾರೀಖು 22ಅಕ್ಟೋಬರ್ 1998 ಎಂದು ಸೂಚಿಸುತ್ತಿತ್ತು. ಇಂದು ಯಾವೆಲ್ಲ ಮಹತ್ವದ ಕೆಲಸಗಳನ್ನು ಪೂರೈಸಬೇಕು ಎಂಬ ಯೋಚನೆಯಲ್ಲೇ ಮನಸ್ಸು ಮುಳುಗಿರುತ್ತಿದ್ದರೂ ಆದಷ್ಟು ಬೇಗ ಆಫೀಸಿಗೆ ಹೊರಟುಬಿಡುವ  ಇರಾದೆಯಿಂದ ಸಿದ್ಧರಾಗುತ್ತಿದ್ದ  ಶ್ರೀನಿವಾಸಮೂರ್ತಿ ಟೈ ಗಂಟು ಹಾಕಿಕೊಳ್ಳುತ್ತ ಹೊರಬಂದು, "ಅಮ್ಮಾ ನನಗೆ ಹೊತ್ತಾಗಿದೆ ಬರಲೇ ನಾನು?'' ಎನ್ನುತ್ತ ತಮ್ಮ ಬ್ರೀಫ್ ಕೇಸನ್ನು ಎತ್ತಿಕೊಂಡರು.

"ಆಗಲೇ ಹತ್ತು ಗಂಟೆ ಆಯ್ತೇನೋ ಶೀನೂ'’ ಎನ್ನುತ್ತ ಹೊರಬಂದರು ತಾಯಿ ಅಂಬುಜಮ್ಮ.

'’ಹೌದಮ್ಮ, ತುಂಬಾ ಕೆಲಸವಿದೆ. ಈ ವಾರದಲ್ಲೇ ಟೂರಿಗೆ ಬೇರೆ ಹೋಗಬೇಕಿದೆ" ಎಂದವರು ಹೊರಬಾಗಿಲು ದಾಟುವಷ್ಟರಲ್ಲೇ ಪೋಸ್ಟ್ ಮ್ಯಾನ್ ಬಂದಿದ್ದ. 'ಟೆಲಿಗ್ರಾಂ ಸರ್' ಎಂದು ಅವರೆದುರು ಪೆನ್ನು ಚಾಚಿದ ಸಹಿಗಾಗಿ.(ಟೆಲಿಗ್ರಾಂ ಇನ್ನೂ ಮಹತ್ವದ ಸಂಪರ್ಕ ಸಾಧನವಾಗಿದ್ದ ಸಮಯವದು)

"ಕಾಲಿಂದಿ ಸೀರಿಯಸ್ ತಕ್ಷಣ ಬರಬೇಕು" ಎಂದಿತ್ತು ತಂತಿಯಲ್ಲಿ, ಒಂದುಕ್ಷಣ ಏನೂ ತೋಚದಂತಾಗಿ ಸುಮ್ಮನೆ ನಿಂತರು ಶ್ರೀನಿವಾಸಮೂರ್ತಿ,

"ಏನೋ ತುರ್ತು ಟೆಲಿಗ್ರಾಂ ಬಂದಿದೆಯಾ?''

ಅಂಬುಜಮ್ಮ ಅವರ ಬದಿಯಲ್ಲೇ ಬಂದು ನಿಂತು ಕೇಳಿದಾಗ, "ಹೌದಮ್ಮಾ ಕಾಲಿಂದಿಗೆ ಹುಶಾರಿಲ್ಲವೆಂದು ಅವರ ಮಾವ ತಂತಿ ಕಳಿಸಿದ್ದಾರೆ" ಎಂದರು.

"ಎಂಟತ್ತು ದಿನದ ಹಿಂದೇನೇ ಅಲ್ಲವೇನೋ ನೀನು ಬೆಂಗಳೂರಿಗೆ ಹೋಗಿ ಅವರನ್ನೆಲ್ಲ ಮಾತನಾಡಿಸಿ ಬಂದಿದ್ದೆ ಕಾಲಿಂದಿ ಚೆನ್ನಾಗಿದ್ದಾಳೆ, 'ಇಲ್ಲಿಗೆ ಬಾಮ್ಮಾ' ಅಂತ ಕರೆದರೂ ಅತ್ತೆಮಾವನ್ನ ಬಿಟ್ಟು ಬರ್ಲಿಕ್ಕೆ ಒಲ್ಲೆ ಅಂದಳೂಂತ ಹೇಳಿದೆ. ಈಗ ಇದ್ದಕ್ಕಿದ್ದಂತೆ ಏನಾಯ್ತಪ್ಪಾ ಮಗೂಗೆ?"

ಶ್ರೀನಿವಾಸಮೂರ್ತಿಯೂ ಯೋಚನೆಯಲ್ಲಿ ಸಿಲುಕಿದ್ದರು. ಮೊನ್ನೆಯಷ್ಟೇ ಭೇಟಿಯಾಗಿತ್ತು. ಆರೋಗ್ಯವಾಗಿ ನಗುನಗುತ್ತಿದ್ದ ಮಗಳು, "ನಾನೀಗ ಅತ್ತೆ ಮಾವನ್ನ ಬಿಟ್ಟು ತುಮಕೂರಿಗೆ ಬಂದರೆ ಅವರಿಗೆ ತುಂಬ ಕಷ್ಟವಾದೀತು ಅಪ್ಪ. ನಾವೀ ಹೊಸ ಮನೆಗೆ ಬಂದು ಇನ್ನೂ ಹದಿನೈದು ದಿನವೂ ಕಳೆದಿಲ್ಲ. ಸಾಮಾನು ಸಹ ಎಲ್ಲ ಸರಿಯಾಗಿ ಜೋಡಿಸಿದ್ದಾಗಿಲ್ಲ. ಎಲ್ಲಾ ಹೊಸ ವಾತಾವರಣ, ಹೊಂದಿಕೊಳ್ಳಲು ಸಮಯಬೇಕು. ನೋಡೋಣ ಸಾಧ್ಯವಾದ್ರೆ ಮುಂದಿನ ತಿಂಗಳು ಬತ್ತೇನೆ" ಎಂದಿದ್ದಳು. 

ಈ ಹೆಣ್ಣು ಮಕ್ಕಳೇ ಹೀಗೆ, ಹುಟ್ಟಿದ ಮನೆ ತೊರೆದು ಸೇರಿದ ಮನೆಯಲ್ಲಿ ಎಷ್ಟು ಬೇಗ ಬೆರೆತುಹೋಗ್ತಾರೆ? ಮದುವೆಯಾಗಿ ಇನ್ನೂ ಒಂದೇ ವರ್ಷವಾಗಿದೆ. ಆಗಲೇ ಅತ್ತೆ ಮಾವನನ್ನು ಹೇಗೆ ನಯವಿನಯದಿಂದ ಗೆದ್ದುಕೊಂಡಿದ್ದಾಳೆ. ಪತಿ ಇಲ್ಲಿಲ್ಲ, ವಿದೇಶದಲ್ಲಿದ್ದಾನೆ ಎಂದು ಹಾಯಾಗಿ ತವರಿಗೆ ಬಂದಿರಲು ಮನಸ್ಸು ಮಾಡಲಿಲ್ಲ ಕಾಲಿಂದಿ. ತಾವೇ ಬಲವಂತ ಮಾಡಿದ್ದರು. "ಒಂದು ಹದಿನೈದು ದಿನವಾದರೂ ಬಾಮ್ಮ ತುಮಕೂರಿಗೆ, ನಿನ್ನ ಅಜ್ಜಿ ಹಂಬಲಿಸ್ತಾಳೆ ನಿನ್ನ ನೋಡಲಿಕ್ಕೆ" ಕಾಲಿಂದಿ ನಕ್ಕಿದ್ದಳು. “ಅಜ್ಜಿಯ ನೆನಪು ನನಗೂ ತುಂಬ ಆಗುತ್ತೆ ಅಪ್ಪ. ಬೇಗನೇ ಬರುತ್ತೇನಂತ ಹೇಳಿ ಅವಳಿಗೆ ನಗುನಗುತ್ತಲೇ ಬೀಳ್ಕೊಟ್ಟಿದ್ದಳು ತಮ್ಮನ್ನು. ಈಗ ಇದ್ದಕ್ಕಿದ್ದಂತೆ ನರ್ಸಿಂಗ್ ಹೋಮಿಗೆ ಸೇರಿಸುವಂಥ ಕಾಯಿಲೆ ಏನಾಗಿರಬೇಕು ಅವಳಿಗೆ?

"ಶೀನೂ" ತಾಯಿ ಕರೆದಾಗ ಬೆಚ್ಚಿ ಯೋಚನೆಯ ಗುಂಗಿನಿಂದ ಹೊರಬಂದರು. 'ಅಂ, ಅದು... ಅವರು ಹಳೆಮನೆ ಬದಲಾಯಿಸಿ ಜಯನಗರದ ಹೊಸ ಮನೆಗೆ ಹೋಗಿದ್ದಾರಲ್ಲಮ್ಮಾ, ನೀರುಗೀರು ಬದಲಾಯಿಸಿ ಜ್ವರ-ಪರ ಬಂದಿರಬೇಕು. ಮನೆಯಲ್ಲಿ ಅವಳ ಅತ್ತೆ ಮಾವ ಇಬ್ಬರೇ ಇರುವದಲ್ಲವ? ಅದಕ್ಕೇ ನನಗೆ ತಿಳಿಸಿದ್ದಾರೆ. ಯಾವುದಕ್ಕೂ ನಾನೊಮ್ಮೆ ಹೋಗಿ ನೋಡಿಕೊಂಡು ಬತ್ತೇನೆ... ನೀನು ಚಿಂತೆ ಮಾಡೋದು ಬೇಡ ಮ್ಮ" ಎಂದರು. ಮಗಳಿಗೆ ಸೀರಿಯಸ್ ಎಂಬ ವಿಷಯವನ್ನು ತಾಯಿಗೆ ಈಗಲೇ ಹೇಳುವದು ಬೇಡ ಸುಮ್ಮನೆ ಒದ್ದಾಡುತ್ತಾಳೆ ಎಂದು ಯೋಚಿಸುತ್ತಾ ಬ್ರೀಫ್ ಕೇಸಿನಲ್ಲಿ ಒಂದೆರಡು ಬಟ್ಟೆಗಳನ್ನು ತುಂಬಿಸಿಕೊಂಡು ಹೊರಡಲಣಿಯಾದರು.

"ಮಗು ಬೇಗ ಗುಣವಾಗಲಪ್ಪಾ, ತಾಯಿ ಇಲ್ಲದ ಕಂದ, ಶೀನೂ, ಬರುವಾಗ ಅವಳನ್ನ ಹೇಗಾದ್ರೂ ಮಾಡಿ ಇಲ್ಲಿಗೇ ಕಕ್ಕೊಂಡು ಬಾರಪ್ಪ. ಇಲ್ಲೇ ಡಾಕ್ಟರಿಗೆ ತೋರಿಸೋಣ ಬೇಕಾದ್ರೆ ನಾಕುದಿನ ಎಣ್ಣೆನೀರು ಹಾಕಿ. ಒಳ್ಳೆ ಊಟತಿಂಡಿ ಮಾಡಿ ಹಾಕ್ತಿನಿ ಸುಧಾರಿಸಿಕೊಂಡ ಮೇಲೆ ಬೇಕಾದ್ರೆ ಮತ್ತೆ ಕರೊಂಡು ಹೋಗಿಬಿಡುವೆಯಂತೆ" ಎಂದರು ಅಂಬುಜಮ್ಮ.

"ಆಗಲಮ್ಮಾ' ಎಂದರು. ದೇವರ ಕೋಣೆಯತ್ತ ನಡೆದ ಅಂಬುಜಮ್ಮ ತುಪ್ಪದ ದೀಪವೊಂದನ್ನು ಹಚ್ಚಿಟ್ಟು ಕಾಲಿಂದಿಗೆ 'ಆರೋಗ್ಯಭಾಗ್ಯ ನೀಡು ದೇವ' ಎಂದು  ಕೈ ಮುಗಿದರು.

{ಮುಂದುವರಿಯುತ್ತದೆ}

ಜಯಶ್ರೀ ದೇಶಪಾಂಡೆ
          ************

ಬಿಡಿಸಿಕೊಳ್ಳದ ಬೇಸರ ದಿಕ್ಕರಿಸಲಾಗದ ದುಃಖ ನೀಗಿಕೊಳ್ಳಲಾಗದ ನಿರ್ಲಿಪ್ತತೆ  ಅಸಂಬದ್ಧ ನಿಶಬ್ದದೊಡನೆ ತಣ್ಣಗೆ ತಡವರಿಸುವ ಒಂದು ಏಕಾಂತ..!