Saturday 27 April 2024

ಭಗವದ್ಗೀತೆ/ಗೀತಾ ಪಠಣ/
ತತ್ಸಂಬಂಧಿತ ಕಾರ್ಯಕ್ರಮಗಳು/ಶ್ರೀ ಸುಗುಣೇಂದ್ರ ಸ್ವಾಮಿಗಳಿಂದ ಪ್ರೇರಿತ
ವಿಶೇಷ ಕಾರ್ಯಕ್ರಮಗಳು/ಅವುಗಳ ಲ್ಲಿ ಭಾಗಿಯಾಗುವ ಸುಯೋಗ/ ಅದರಿಂದ ದೊರೆತ ಕೃತಕೃತ್ಯತೆಯ ಭಾವ ಎಲ್ಲವುಗಳ ಸವಿವರಗಳನ್ನೊಳ ಗೊಂಡ ಇಂದಿನ ತೋರಣವು ವಿಶೇಷ ಅನುಭವ ನೀಡಿತು...ನನಗನಿಸುವ ಮಟ್ಟಿಗೆ ಭಾರತೀಯ ಸಂಸ್ಕ್ರತಿ ಈ ಹತ್ತು
ವರ್ಷಗಳಲ್ಲಿ ಹೆಚ್ಚು ವೇಗ- ಗತಿಯನ್ನು
ಪಡೆದು ಭಾರತ ವಿಶ್ವಗುರುವಾಗುವ
ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ. ಇದಕ್ಕೆ ವಿಶ್ವದ ಬೇರೆಡೆಗಳಿಂದಲೂ ತಕ್ಕ
ಸಹಕಾರ ಸಿಗುತ್ತಿರುವುದು ಅತ್ಯಂತ ಆನಂದದ ವಿಷಯ...

Sunday 7 April 2024

      ನಮಗೆ 'ಅನಾರೋಗ್ಯ'- ಅನ್ನೋ ಶಬ್ದಾನೂ ಹೊಸದೆನಿಸಿದ ಕಾಲ ವೊಂದಿತ್ತು.' ಆರಾಮಿಲ್ಲಾ'-ಅನ್ನೋದು
ಮಾಮೂಲು ಹೇಳಿಕೆ...ಅಂದ್ರೆ ಸ್ವಲ್ಪು ಮೈ ಬಿಸಿ/ ಊಟ ಹೋಗ್ತಿಲ್ಲ/ ಕಫ ಕಟ್ಟಿದ ಹಾಗಿದೆ /ಸತತವಾಗಿ ಸೀನು ಬರುತ್ತಿವೆ/ಎಲ್ಲೋ ಬಿದ್ದು ಹಣೆ- ಮಂಡಿ ತರಚು, ಹೀಗೇ...ಇಂಥವೇ...
               ಅದು ಎಷ್ಟು ಮಾಮೂಲು
ಅಂದರೆ ಅಕ್ಕ ಬಾಟಲಿ ಹಿಡಿದು ಪಕ್ಕದ
ಆಯುರ್ವೇದ cum ಸಕಲ ವಿದ್ಯಾ ಪಾರಂಗತ ಡಾಕ್ಟರ್ ಅನಿಸಿಕೊಂಡವರ ಬಳಿ ಔಷಧಿ ತರುವುದು/ ಅಜ್ಜಿಯ ಮೆಣಸು, ಜೀರಿಗೆ ಮರಳಿಸಿ 'ಕಾಡೆ'-
ಊಟಕ್ಕೆ ಗಂಜಿಯಂಥ ಅಳ್ಳಕ ಅನ್ನ/ತಿಳಿ ಮೆಣಸಿನ ' ಗೊಡ್ಡು ಸಾರು' -ಊಟ, ಒಂದು ಮೂಲೆಯಲ್ಲಿ ಹಾಸಿಗೆ ಹಾಸಿ"ಹೊದ್ದು  ಗಡದ್ದು ಮಲಗು, ಬೆವರು ಬಿಟ್ಟು ಹುಶಾರಾಗ್ತೀಯಾ"- ಅಂತನ್ನುವ ಅವ್ವ, ಹೀಗೆ ನೂರಕ್ಕೆ ನೂರು, organic treatment...
ಅದೇ ಸರಿಯಾಗಿತ್ತೋ/ ಜಡ್ಡಿಗೇನೇ
ಮಜಾ ಸಿಗ್ತಿರ್ಲಿಲ್ವೋ/ ಮಕ್ಕಳೇ ಅದನ್ನು 'ಇಲ್ಲ' ಅನಿಸಿ ಓಡಿಬಿಡುತ್ತಿದ್ದ ರೋ ಅಂತೂ ಅದು ಎಂದಿಗೂ ದೊಡ್ಡ
ಸಂಗತಿಯಂತಾಗುತ್ತಿರಲೇ ಇಲ್ಲ.
ಆರ್ಥಿಕ ಸಧೃಡತೆ ಇಲ್ಲದ ಕುಟುಂಬ ಗಳೆಂದೋ/ ಹೆಚ್ಚು ಮಕ್ಕಳು, ಇಂಥವು‌ ಒಂದರ ಹಿಂದೆ ಒಂದು ಬಂದೇ ಬರು ತ್ತವೆ ಎಂಬ ಸಾಮಾನ್ಯ ಅನಿಸಿಕೆಯೋ/ ಅದೇ ಸಾರ್ವತ್ರಿಕವಾಗಿ ರೂಢಿಯಲ್ಲಿ ತ್ತೆಂದೋ ಯಾರೂ ವಿಶೇಷ ಸಂದರ್ಭ ಗಳನ್ನು ಹೊರತು ಪಡಿಸಿ ಆತಂಕಿತರಾ ಗುತ್ತಿರಲಿಲ್ಲ ಎಂದು ನನ್ನ ಅನಿಸಿಕೆ.
               ಧಾರವಾಡಕ್ಕೆ ಬಂದ ನಂತರವೂ ನಮ್ಮ ಮಕ್ಕಳ ಕಾಲಕ್ಕೂ
ಹೇಳಿಕೊಳ್ಳುವಂಥ ವ್ಯತ್ಯಾಸ ಕಂಡಿರ ಲಿಲ್ಲ.ಒಬ್ಬ MBBS ಡಾಕ್ಟರೊಬ್ಬರು- ಕೆಲವೊಮ್ಮೆ ಇಬ್ಬರು- ಕುಟುಂಬ ವೈದ್ಯರ ದರ್ಜೆಯಲ್ಲಿರುತ್ತಿದ್ದುದು ಮಾಮೂಲು. ಅವರು ಹೇಳಿದ್ದೇ ವೇದ, ಅಪ್ಪಿತಪ್ಪಿಯೂ ಅಪನಂಬಿಕೆಗಳು ಅವರ ಕುರಿತಾಗಿ ಇರುತ್ತಿರಲಿಲ್ಲ. ಔಷಧಿಗಳಿಗಿಂತಲೂ ಅವರ ಮೇಲಿನ ನಂಬಿಕೆಯೇ ಕೆಲಸಮಾಡುತ್ತಿತ್ತು
ಅಕಸ್ಮಾತ್ ಸ್ವಲ್ಪಮಟ್ಟಿಗೆ ಗಂಭೀರ ಅನಿಸಿದರೆ ಸ್ವತಃ ತಾವೇ ಫೋನು
ಮಾಡಿಯೋ/ ಪತ್ರ ಬರೆದೋ ಬೇರೊಬ್ಬರ ಬಳಿ ಕಳಿಸುತ್ತಿದ್ದರು. ನಂತರದ್ದು ದೇವರಿಗೆ ಬಿಟ್ಟದ್ದು...
   ‌ ‌           ಮೊಮ್ಮಕ್ಕಳ ಹೊತ್ತಿಗೆ Medical field ಹೆಚ್ಚು ಹೆಚ್ಚು organized/ commercialised
 ಆಯಿತು ಎನ್ನಬಹುದೇನೋ!ಆರೋಗ್ಯ ವಿಮಾ - ಎಂಬುದು ಎಷ್ಟರ ಮಟ್ಟಿಗೆ ಸಾರ್ವಜನಿಕರಿಗೆ ಸಹಾಯವಾ ಯಿತೋ, ಅಷ್ಟೇ ವಿಮಾಧಾರಿತ treatment  ಕೂಡ ಸುರುವಾಯಿತು
ಎಂಬುದು ನಿಜವಾ, ಗೊತ್ತಿಲ್ಲ...
              ಈಗಂತೂ ಪ್ರತಿಯೊಂದಕ್ಕೂ
specialist ಗಳು ಇದ್ದು ಯಾರಿಗೂ
ಏನೂ ತಿಳಿಯದ ಅಯೋಮಯತೆ...
ಒಮ್ಮೆ ದಾಖಲಾಗಿ/ Insurance ನ ವಿವರ ಕೊಟ್ಟರೆ ಅದು ನೆಗಡಿಯೇ ಇರಲಿ, ಅಷ್ಟು ಮೊತ್ತ ಖರ್ಚಾಗಲೇ ಬೇಕು.ನೀವು ಅನಾರೋಗ್ಯದಿಂದ ಹೊರ ಬರುವುದಿಲ್ಲ ಅಂತಲ್ಲ, ಆ ಮೊತ್ತಕ್ಕೆ ಆಗಬಹುದಾದ ಎಲ್ಲ test
Report ಗಳು ಆಗಿ/ ಎಲ್ಲ ಮಾಮೂಲಿ ಯಾಗಿದೆ ಎಂದು ಅನಿಸಿಕೊಂಡು ಮನೆಗೆ ಬರಬೇಕು...
           ಒಟ್ಟಿನಲ್ಲಿ ಇತ್ತೀಚೆಗೆ ಸಾಮಾನ್ಯ ಮಧ್ಯಮ ವರ್ಗದ ಜನರ ಅನಾರೋಗ್ಯ ಅವರಿಗೆ ಅಪಾಯಕಾರಿ...ಆತಂಕ ಕಾರಿ...





Monday 1 April 2024

You may like the song
Song by Johnny Stimson

    Lyrics
  ads is full of questions
And the sky is full of rain
When I'm worrying about what I can't change
I take a look in my reflection
And try to make a funny face
And for a second all my sorrows melt away
'Cause if we just smile
We can forget all of our troubles for a while
We can just live inside this moment
You and I get through the darkness
Knowing we'll find the light
If we just smile
If we just, if we just
If we just smile
Yeah, if we just smile
Maybe we focus on the future
No use in living in the past
Try to remember that the bad times never last
And if we take one step
One step at a time
We're gonna make it
Gonna make it alright
If we stick together we'll be fine
'Cause if we just smile
We can forget all of our troubles for a while
We can just live inside this moment
You and I get through the darkness
Knowing we'll find the light
If we just smile
If we just, if we just
If we just smile when the sky is falling
Smile, when the love comes calling
We can take tomorrow on with style
If we just smile
We can forget all of our troubles for a while
Yeah, we can just live inside this moment
You and I get through the darkness
Knowing we'll find the light
If we just smile
If we just, if we just
If we just smile
Yeah, if we just smile
If we just smile
Yeah, if we just smile
If we just smile                                                                       
With best wishes
Suri Shiva Kumar
ತಲೆ ತುಂಬಾ ಪ್ರಶ್ನೆಗಳು ಎದ್ದಾಗ,
ಮನದ ಮುಗಿಲಲ್ಲಿ ಮೋಡಗಳು 
ಗರ್ಭ ಕಟ್ಟಿದಾಗ,
ನಾನೇನನ್ನೂ ಬದಲಿಸಲಾರೆನೆಂದು
ಹತಾಶನಾ(ಳಾ)ದಾಗ,
ನನ್ನದೇ ಪ್ರತಿರೂಪ ನೋಡಿಕೊಂಡು
ತರತರಹದ ತಮಾಷೆಯ 
ಮುಖ ಮಾಡುತ್ತೇನೆ...
ಕ್ಷಣಮಾತ್ರದಲ್ಲಿ ನನ್ನೆಲ್ಲ ಕ್ಲೇಶಗಳು ಮಾಯವಾಗಿ ಮುಖದಲ್ಲಿ 
ಮುಗುಳ್ನಗೆ ಮೂಡುತ್ತದೆ...

ಈ ಸಂತಸ ಗಳಿಗೆಯಲ್ಲಿ
ನಾನು ಕಳೆದು ಹೋಗಿ, 
ಕತ್ತಲೆಯಿಂದ ಹೊರಬರುತ್ತೇನೆ...
ನಕ್ಕಾಗ 'ಭೂತ' ಕರಗುತ್ತದೆ,
'ಭವಿಷ್ಯ' ಭಯಹುಟ್ಟಿಸುವುದಿಲ್ಲ...
'ಕೆಟ್ಟ ಗಳಿಗೆಗಳು'- ನಿರಂತರವಲ್ಲ...
ಎಂಬ ಅರಿವಾಗುತ್ತದೆ...

ಒಂದು ಸಲಕ್ಕೆ ಒಂದೇ ಹೆಜ್ಜೆ,
ಆದರೆ ಸರಿಯಾದ ಹೆಜ್ಜೆ,
ಸರಿಯಾದ ರೀತಿಯಲ್ಲಿ ಇಟ್ಟರೆ
ಖಂಡಿತ ಏನನ್ನೂ ಸಾಧಿಸಬಲ್ಲೆವು,
ಗುರಿ ಮುಟ್ಟಿ ಕತ್ತಲೆ ಕರಗಿಸಬಲ್ಲೆವು.
ಮನಸಾರೆ ನಗಲು ಕಲಿತರೆ
ಕಷ್ಟಗಳನ್ನೂ ಕಡೆಗಣಿಸಬಲ್ಲೆವು.
ಯಶಸ್ಸು ನಮ್ಮದಾಗಿಸಬಲ್ಲೆವು...

ಆಕಾಶವೇ ಬೀಳಲಿ, ಕಳಚಿ-
ಪ್ರೀತಿಯ ಆಸರೆಯೊಂದಿದ್ದರೆ
ನಾವು ಮತ್ತೆ ನಗಬಲ್ಲೆವು...
ಸುತ್ತಲಿನ  ಕತ್ತಲೆಯ ಭೇದಿಸಿ
ಮುಂದೆ ಮುಂದೆ ಸಾಗಬಲ್ಲೆವು...

Johnny Stimson...






Thursday 28 March 2024

ಏ ಮುಲಾಕಾತ್ ಏಕ ಬಹಾನಾ ಹೈ...
    ‌   ‌  ‌  ಎಪ್ಪತ್ತೈದರ ನಂತರದ ಬದುಕೆಂದರೆ ಒಂದು ರೀತಿ  ಸಿನೆಮಾದ 
flash back reels ಇದ್ದ ಹಾಗೆ...ಕಳೆದ
ಬದುಕಿನ ಆಗುಹೋಗುಗಳ ನಿರಂತರ
ಪನರಾವಲೋಕನದ ಮುಗಿಯದ ಕಥೆ-ಬಾಲ್ಯದ ಹುಡುಗಾಟ/ಯೌವನದ ಹುಚ್ಚಾಟ/ಮಧ್ಯ ವಯಸ್ಸಿನಹೋರಾಟ ವೃದ್ಧಾಪ್ಯದ ಪೇಚಾಟ- ಹೀಗೇ ಸಾಗಿ ಬಂದ ಬದುಕಿನ ಹಳವಂಡಗಳ
ಹಸಿರು ಹಸಿರಾದ ನೆನಪುಗಳು ಸದಾ... ಹಾಗೇ ಜೊತೆಗಿಷ್ಟು ಫೋಟೋಗಳ ಸಂಗ್ರಹವಿದ್ದರಂತೂ ಕೇಳುವುದೇಬೇಡ. ಆ ದಿನಗಳನ್ನು ಅಕ್ಷರಶಃ ಯಾವಾಗ ಅಂದರೆ ಆಗ ಮತ್ತೆ ಜೀವಿಸಿಬಿಡಬಹು ದು...ಹಾಗೆ ಮಾಡುವುದು ನನ್ನ ಅತಿ ಮೆಚ್ಚಿನ hobby...

           ನಾವು- ಅಣ್ಣ ತಮ್ಮ/ ಅಕ್ಕತಂಗಿ ಯರು ಏಳು ಜನ.ನಮ್ಮವರು
ಹತ್ತೊಂಬತ್ತು...ಅವರಿಗೆ ಇಪ್ಪತ್ತಾರು...
( ಸಧ್ಯಕ್ಕೆ).ಹೀಗಾಗಿ baby shower/ naming ceremony/ birthdays/ anniversaries-ಅದು ,ಇದೂ ಅಂತ ಚಿಕ್ಕಪುಟ್ಟ ಸಂಭ್ರಮಗಳು ಕಾಯಂ... ಆದರೆ ಅವರಲ್ಲಿ ಅರ್ಧಕ್ಕೂ ಹೆಚ್ಚು ಜನ ವಿದೇಶವಾಸಿಗಳಾದ್ದರಿಂದ‌ ಭಾರತಕ್ಕೆ ಬಂದಾಗಲೇನೇ ಕೆಲವು ಬಾಕಿ ಇದ್ದ ಭೇಟಿಗೆ ನೆವ ಹುಡುಕಿ ನಾವೆಲ್ಲಾ ಕೂಡುವುದುಂಟು-ಕನಿಷ್ಠ ಎರಡು ಬಾರಿ .ಒಮ್ಮೆ ಅವರ ಹುಟ್ಟೂರು ಧಾರವಾಡ ದಲ್ಲಿ,ಇನ್ನೊಮ್ಮೆಬೆಳೆದ(ಬೆಳೆಯುತ್ತಿರುವ) ಬೆಂಗಳೂರಿನಲ್ಲಿ...ಜಾಗ ಯಾವುದೇ ಆಗಲಿ ಒಂದು ದಿನ ಜಗಮಗಿಸಲು ಚಂದದ ಒಂದು'' ನೆಪ'ವಷ್ಟೇ ನಮಗೆ ಬೇಕಾದದ್ದು...

           ನಿನ್ನೆಯೂ ಒಂದು ಅಂಥದೇ
ಸಂದರ್ಭ...ಅಣ್ಣನ ಮಗಳ ಮನೆಯಲ್ಲಿ
-ಅವಳ ಮೊದಲ ಮಗನ ಹದಿನೆಂಟನೆ ಯ birthday ಹಾಗೂ  ಬಳಗಕ್ಕೆ ತಮ್ಮನ ಎರಡನೇ ಮೊಮ್ಮಗ- -ಕುಟುಂಬದ ಹೊಚ್ಚ ಹೊಸ ಅತಿಥಿ-
'ಮಿಹಾರ' ನಿಗೆ ನಮ್ಮೆಲ್ಲರ‌ ಹಾರ್ದಿಕ‌ ಸ್ವಾಗತ...( ಅವನು Canada ವಾಸಿ.)  ಮಿಕ್ಕಂತೆ ಒಂದಿಷ್ಟು ಬಾಕಿ ಉಳಿದ ಹರಟೆ/ ಉಭಯ ಕುಶಲೋಪರಿ/ ಸ್ವಾದಿಷ್ಟ ಉಪಹಾರ/ಎರಡು ಮೂರು
ಗಂಟೆಗಳಿಗೂ ಮಿಕ್ಕಿ ' Chat'- Masala
ಅಷ್ಟೇ...










Sunday 24 March 2024


        ‌ನಾನು ಬೆಂಗಳೂರಿಗೆ ಬಂದಾಗ ನನ್ನನ್ನು ಮೂಲೆ ಮೂಲೆ ಸುತ್ತಾಡಿಸಿ
ರೂಢಿ ಮಾಡಿಸಿದ್ದು ಶಾಲಿನಿ...ನಾನು ಅವರನ್ನು ಅಂತಃಪುರಕ್ಕೆ ಪರಿಚಯಿಸಿ ದಾಗ ಇಬ್ಬರೂ ಅದರ ಕಾರ್ಯಕ್ರಮಗ ಳಿಗೆ ಭೇಟಿ ನೀಡುತ್ತಾ, ಸ್ನೇಹಿತರ ವಲಯದ ವಿಸ್ತಾರ ಹೆಚ್ಚಿಸುತ್ತಾ ಹೊಸ ಹೊಸ ಗೆಳತಿಯರನ್ನು ತೆಕ್ಕೆಗೆ ಸೇರಿಸುತ್ತ
ಬದುಕು ವರ್ಣಮಯ ಮಾಡಿಕೊಂಡ ದ್ದಾಯಿತು...ಅದರ ರಂಗು ಏರುತ್ತಿದ್ದಾಗ ಲೇ ಬಂದ ಎರಡು ಕೋವಿಡ್ ಅವಧಿ
ಗಳು ನಮ್ಮ ಭೇಟಿಗಳನ್ನು ಕಿರಿದು ಗೊಳಿಸುತ್ತಾ/ಸಂಖ್ಯೆಗಳನ್ನು ಇಳಿಸುತ್ತಾ
ಹೋಗಿ, ಅದೂ ಒಂದು ರೂಢಿಯಾಗಿ
ಭೇಟಿಗಳು fb /WA/ messenger
ಮೂಲಕ ಮಾತ್ರ ಉಳಿದು ಪರಸ್ಪರ ಭೇಟಿಗಳೂ ತುಟ್ಟಿಯಾಗತೊಡಗಿದವು.
ನನ್ನಂಥ ಹಿರಿಯ ನಾಗರಿಕರಿಗಂತೂ
ಒಂದೊಂದು ಭೇಟಿಯೂ ಒಂದೊಂದು
ಸವಾಲು...
             ಇಂಥದರಲ್ಲಿ ಜಯಲಕ್ಷ್ಮಿ
ಪಾಟೀಲರ 'ಈ ಹೊತ್ತಿಗೆ'ಕಾರ್ಯಕ್ರಮ ಒಂದು Oasis...ಮೂರೂವರೆ ತಾಸಿನ
ಈ ಸುಂದರ ಕಾರ್ಯಕ್ರಮದಿಂದ ಆದ
ಪ್ರಾಪ್ತಿ ಬಹಳಷ್ಟು.ಜಯಶ್ರೀ ದೇಶಪಾಂಡೆ, ಮೀರಾ, ಸಂಗೀತಾ, ಪೂರ್ಣಿಮಾ, ರೇಖಾ,ಇನ್ನೂ ಅನೇಕರ
ಜೊತೆಗೆ ಕಳೆದ ಒಂದು ದಿನ ನಮಗಿನ್ನೂ
ಒಂದು ತಿಂಗಳ ಮೆಲುಕಿಗೆ ಆಹಾರ. ಅಚ್ಚುಕಟ್ಟಾಗಿ ನಡೆದ ಈ ಕಾರ್ಯಕ್ರಮ ದಲ್ಲಿ ವಿದ್ವತ್ಪೂರ್ಣ ಭಾಷಣ/ವಿವಿಧ ವಿಷಯಗಳ ಕುರಿತು ಚರ್ಚೆ/ ಸಂವಾದ
ರುಚಿಕಟ್ಟಾದ ಭೋಜನ/ಎಷ್ಟೇ ದಣಿವು
ಮುಖದ ಮೇಲಿದ್ದರೂ ಪಾದರಸದಂತೆ 
ಓಡಾಡಿ ಎಲ್ಲವನ್ನೂ ಅಚ್ಚುಕಟ್ಟಾಗಿ
ನಿರ್ವಹಿಸುತ್ತಿದ್ದ ಜಯಲಕ್ಷ್ಮಿ/ವೇದಿಕೆಗೆ
ಭೂಷಣಪ್ರಾಯರಾದ  ದೇವೂ ಪತ್ತಾರ/ ಜಯಶ್ರೀ ದೇಶಪಾಂಡೆ/ ಶಶಿಕಲಾ ವಸ್ತ್ರದ/ಆಶಾದೇವಿಯಂಥ
ಹಿರಿಯರ ಉಪಸ್ಥಿತಿಯ ಮೆರುಗು -
ಇವುಗಳಿಂದಾಗಿ ಮೂರು ತಾಸು ಕಳೆದದ್ದೇ ತಿಳಿಯಲಿಲ್ಲ...
           ‌ ನನಗೆ ನನ್ನ ಕಾಲುನೋವಿನ 
ಸಮಸ್ಯೆ ಇತ್ತೀಚೆಗೆ ಹೆಚ್ಚಾಗಿದ್ದು ಹತ್ತು
ಬಾರಿ ಯೋಚಿಸಿ, ಜಯಶ್ರೀಯವರ 
ಬೆಂಬಲದ ಭರವಸೆಯ ಮೇಲೆ ಹೋಗಿದ್ದು ಸಾರ್ಥಕವಾಗಿದ್ದಲ್ಲದೇ ಅನೇಕ ಗೆಳತಿಯರ ಭೇಟಿ ಒಂದು
ಅಲಭ್ಯ ಲಾಭವೇ!!!


Saturday 23 March 2024

ನನಗೆ ಓದಿದಮೇಲೆ ಹೆಚ್ಚೆಚ್ವು ನೆನಪಿಟ್ಟುಕೊಳ್ಳಲಾಗದಿದ್ದರೂ. ಆಸಕ್ತಿಯನ್ನು ಗಟ್ಟಿಯಾಗಿ ಹಿಡಿದಿಡುವ ಶ್ರೇಷ್ಠತೆ ನಿಮ್ಮ ಬರಹಗಳ ವಿಶೇಷತೆ...
ಆ ಕಾರಣಕ್ಕೆ ಶನಿವಾರ ಕಾದು,ಬಂದ ತಕ್ಷಣ ಆಡಿಯೋ ಕೇಳುವ ಸತ್ಸಂಪ್ರದಾ ಯವನ್ನು ಮಾತ್ರ ನಿರ್ವಿಘ್ನವಾಗಿ ನಡೆಸಿಕೊಂಡು ಬಂದದ್ದೇ ನನಗೆ ಖುಶಿ.
ಲೇಖನ ಆಸಕ್ಕಿಕರ,ಮಾಹಿತಿಪೂರ್ಣ.



Thursday 21 March 2024

"International Day of Happiness..." 

ಇಂದು ಅಂತರ್ರಾಷ್ಟ್ರೀಯ ಆನಂದದ ದಿನವಂತೆ.Happiness - ಸಂತೋಷ- ಆನಂದ- ಖುಶಿ...ಏನೆಲ್ಲ ಹೆಸರಿನಿಂದ ಕರೆದರೂ ಹಿಂದಿನ ಭಾವವೊಂದೇ...
Happiness is a state of mind.- 
ಅದು ಸ್ಥಿರವಿರುವುದಿಲ್ಲ, ಸದಾ ಬದಲಾ ಗುತ್ತಿರುತ್ತದೆ.ಚಳಿಗಾಲದಲ್ಲಿ ಒಂದು ಕಪ್ ಬಿಸಿ ಚಹದಲ್ಲಿ/ಬೇಸಿಗೆಯಲ್ಲಿ ಐಸ್ಕ್ರೀಮ್ನಲ್ಲಿ/ಮಳೆಗಾಲದಲ್ಲಿ ಸಕಾಲಕ್ಕೆ ದೊರಕುವ ಸೂರಿನಡಿಯಲ್ಲಿ ಕಾಣುವ ಆನಂದ ಕೆಲವೊಮ್ಮೆ ಬದುಕಿಡೀ  ಕಾಯಂ 'ಮರೀಚಿಕೆ'ಯಾಗಿ ಕಾಡುತ್ತದೆ. ಅದಕ್ಕೆ ಒಂದು ಸರ್ವ ಸಮ್ಮತವಾದ ವ್ಯಾಖ್ಯಾನ ಇಲ್ಲದಿರುವುದೇ ದುರಂತ...

ನನಗೆ ಹೊಳೆದ ವ್ಯಾಖ್ಯೆಗಳು:
ಮೇಲೆ ಮೇಲೆ ಹೊಳೆದವುಗಳು...
ಭಿನ್ನಾಭಿಪ್ರಾಯಕ್ಕೆ ಯಾವುದೇ ಅಭ್ಯಂತರವಿಲ್ಲ...

*ಅ-ಅದೊಂದು ಮನಸ್ಥಿತಿ ಮಾತ್ರ.ಇದೆ ಅಂದ್ರೆ ಇದೆ, ಇಲ್ಲ ಅಂದ್ಕೊಂಡ್ರೆ ಇಲ್ಲ...
*ಆ- ಆರೋಗ್ಯವೇ ಆನಂದ...
*ಇ- ಇಚ್ಛೆ ಪಟ್ಟದ್ದು ದಕ್ಕಿದ ಖುಶಿ.
*ಈ- ಈರ್ಷೆಯಿಲ್ಲದ ಸರಳ ಜೀವನ.
*ಉ-ಉಂಡುಟ್ಟು ಕಳೆವ ಸ್ವಸ್ಥ ಬದುಕು.
*ಊ-ಊರು ಉಸಾಬರಿ ಇಲ್ಲದ ಬಾಳು. 
*ಋ- ಋಣವಿಲ್ಲದ ಬಾಳು...
*ಎ-ಎಷ್ಟಿದೆಯೋ, ಅಷ್ಟರದೇ- ಖುಶಿ...
*ಏ- ಏನಿದೆಯೋ ಅದರಲ್ಲಿ ತೃಪ್ತಿ...
*ಐ-ಐಬುಗಳಿಲ್ಲದ ಇರುವಿಕೆ.
*ಒ- ಒಲವು ತುಂಬಿದ ಜೀವನ.
*ಓ-ಓಟದ ರೇಸಿನಲ್ಲಿ ಇರದಿರುವುದು.
* ಔ- ಔಷಧಿ ಮುಕ್ತ ಆರೋಗ್ಯ.
* ಅಂ-ಅಂದುಕೊಂಡದ್ದರ ಸಾಧನೆ...    
*ಅಃ- 'ಅಹಮಿಕೆ'ಯ - ನಿಯಂತ್ರಣ.

ಭಗವದ್ಗೀತೆ/ಗೀತಾ ಪಠಣ/ ತತ್ಸಂಬಂಧಿತ ಕಾರ್ಯಕ್ರಮಗಳು/ಶ್ರೀ ಸುಗುಣೇಂದ್ರ ಸ್ವಾಮಿಗಳಿಂದ ಪ್ರೇರಿತ ವಿಶೇಷ ಕಾರ್ಯಕ್ರಮಗಳು/ಅವುಗಳ ಲ್ಲಿ ಭಾಗಿಯಾಗುವ ಸುಯೋಗ/ ಅದರಿಂದ ದೊರೆತ ...