Sunday, 7 June 2026

ಬಾಲ್ಯದ ಒಂದು
ಕಾಲವಿತ್ತು- ಸಂತೋಷದ 
ಬಹು ಭಾರೀ 
ಭಂಡಾರವೇ ಇತ್ತು-

ಚಂದಿರನ ಪಡೆವ
ಬಯಕೆಯಿತ್ತು-ಮನಸ್ಸಿಗೆ,
ಬಣ್ಣದ ಚಿಟ್ಟೆಗಳ
ಹುಚ್ಚು ಹಂಬಲವಿತ್ತು-

ಬೆಳಗಿನ ಸುದ್ದಿಗಳ
ಸದ್ದಿರಲಿಲ್ಲ-
ಸಂಜೆಯ ಠಿಕಾಣಾದ
ಅರಿವಿರಲಿಲ್ಲ-

ಶಾಲೆಯಿಂದ 
ದಣಿದು ಬಂದರೂ
ಆಟದ ಬಯಲು
ಕರೆಯುತ್ತಿತ್ತು-

ಮಳೆಯ ನೀರಿನಲ್ಲಿ
ಕಾಗದದ ದೋಣಿಯಿತ್ತು-
ಎಷ್ಟು ಆಡಿ ದಣಿದರೂ
ಮರುದಿನದ ಬೋಣಿಯಿತ್ತು!!!

ಆಡಿ ಬಂದಮೇಲೆ
ಅಜ್ಜಿಯ ಕಥೆಯಿತ್ತು-
ಕಥೆಗಳಲ್ಲಿ-ನಿದ್ದೆಗೊಯ್ತುವ
ಸುಖದ ಮೋಡಿ- ಇತ್ತು-

ಪ್ರತಿ ರುತುವಿಗೂ
ತನ್ನದೇ ಸೊಬಗಿತ್ತು-
ಅಳಲೊಂದು ಕಾರಣ-
ನಗಲೊಂದು ನೆಪ ಬೇಕಿರಲಿಲ್ಲ!!!

ನಾವೇಕೆ ದೊಡ್ಡವರಾದೆವು??!!
ಆ ಬಾಲ್ಯದ ದಿನಗಳೇ ಚಂದಾಗಿದ್ದವು!!?

Saturday, 6 June 2026

ಬಾಲ್ಯದ ಒಂದು
ಕಾಲ ಇತ್ತು...
ಆಗ ಸಂತೋಷದ
ಒಂದು ಭಂಡಾರವೇ ಇತ್ತು...

ಚಂದಿರನ ಪಡೆವ
ಬಯಕೆಯಿತ್ತು..
ಮನಸ್ಸಿಗೆ ಚಿಟ್ಟೆಯ
ಹಂಬಲವಿತ್ತು!!...

ಬೆಳಗಿನ ಸುದ್ದಿಯ 
ಸದ್ದಿರಲಿಲ್ಲ- 
ಸಂಜೆಯ ಠಿಕಾನಾ
ತಿಳೀತಿರಲಿಲ್ಲ...!!!

ಶಾಲೆಯಿಂದ ದಣಿದು 
ಬಂದರೂ
ಆಟ ಬಿಡುತ್ತಿರಲಿಲ್ಲ-

ಅಮ್ಮನ ಕಥೆಗಳಲ್ಲಿ
ಅಪ್ಸರೆಯರ ಕೈದು ಇತ್ತು-


ಬಾಲ್ಯದ ಒಂದು
ಕಾಲ ಇತ್ತು...
ಆಗ ಸಂತೋಷದ
ಒಂದು ಭಂಡಾರವೇ ಇತ್ತು...

ಚಂದಿರನ ಪಡೆವ
ಬಯಕೆಯಿತ್ತು..
ಮನಸ್ಸಿಗೆ ಚಿಟ್ಟೆಯ
ಹುಚ್ಚು ಇತ್ತು...

ಬೆಳಗಿನ ಸುದ್ದಿಯ ಸದ್ದು ಇರಲಿಲ್ಲ- 
ಸಂಜೆಯ ಠಿಕಾನಾ
ತಿಳೀತಿರಲಿಲ್ಲ-

Wednesday, 3 June 2026

ಕಳೆದವರು ಸಿಕ್ಕಿದ್ದಾರೆ...

            ಮೊಮ್ಮಕ್ಕಳು ಕಾಲೇಜಿಗೆ ಬರುವ
ಮೊದಲು ಎಲ್ಲರೂ ಒಬ್ಬರಿಗೊಬ್ಬರು ಸಮೀಪದಲ್ಲಿದ್ದು ಬೇಕೆಂದಾಗ  ಬೇಕಾದವರನ್ನು ಭೇಟಿಯಾಗುವದು/ ಮನೆಗೆ ಹೋಗುವದು ಸಾಧ್ಯತೆ ಇತ್ತು. ಈಗ ಕಲಿಕೆ/ನೌಕರಿ ಎಂದು ಮೂರು-ಜನ 
ಹೊರದೇಶಗಳಿಗೆ ಹೋಗಿ/ಇದ್ದ ಮೂವರು ಕಾಲೇಜುಗಳಲ್ಲಿ,ಸ್ಪರ್ಧಾತ್ಮಕ
ಪರೀಕ್ಷೆಗಳಲ್ಲಿ/foot ball tournament match ಗಳಲ್ಲಿ busy ಇದ್ದು ಕಳೆದು ಹೋಗಿದ್ದರು.ನಾವೂ ಅಸಹಾಯಕರಾಗಿ
ಅವರಷ್ಟಕ್ಕೆ ಅವರನ್ನು ಇರಗೊಟ್ಟು ಆಗಾಗ ಗೊಣಗುತ್ತ ಕೆಲ ವರ್ಷಗಳನ್ನು
ಕಳೆದಾಯಿತು...

           ಇದೀಗ ಸ್ವಲ್ಪಮಟ್ಟಿಗೆ ಬದಲಾವಣೆಯ ಗಾಳಿ ಬೀಸಿದೆ.ಒಬ್ಬ IIT Madras ನಲ್ಲಿ MTech ಮುಗಿಸಿ BCG
ಗೆ join ಆಗಲಿದ್ದಾನೆ.ಇನ್ನೊಬ್ಬ IISC ಯಲ್ಲಿ Internship ಗೆ ಸೇರಿದ್ದಾನೆ... ಕೊನೆಯ ಮೊಮ್ಮಗ IIT ಗೆ ಈ ವರ್ಷ‌ select ಆಗಿದ್ದು ವಿಷಯ/ಕಾಲೇಜು
ಮುಂತಾಗಿ ತಲೆಕೆಡಿಸಿಕೊಳ್ಳುತ್ತಿದ್ದಾನೆ.
ಇನ್ನೆರಡು ತಿಂಗಳಿಗೆ ಎಲ್ಲ decide ಆಗುವ ಲಕ್ಷಣಗಳಿದ್ದು ಅವನೂ ತನ್ನ suitcase ರೆಡಿ ಮಾಡಿಕೊಳ್ಳುತ್ತಿದ್ದಾನೆ.
ಹೀಗಾಗಿ ಸಧ್ಯ ಎರಡು ತಿಂಗಳ ಮಟ್ಟಿಗೆ
ಮನೆ ತುಂಬಿದೆ.ಎಲ್ಲಿಗೇ ಹೋದರೂ ಮನೆಗೆ ಹಿಂದಿರುಗುವುದನ್ನು ತಪ್ಪದೇ ಕಾಯುತ್ತೇವೆ.ಮಾತುಗಳಾಗುತ್ತವೆ/ ಆಯ್ಕೆಯ ಅಡುಗೆಯ ಪ್ರಯೋಗಗ ಳಾಗುತ್ತವೆ...ಪಡಸಾಲೆಯಲ್ಲಿ ಎಲ್ಲರೂ
ನೆರೆದು ಅರ್ಧ ಗಂಟೆಯಾದರೂ ತಲೆ- ಬುಡವಿಲ್ಲದ ಸುಂದರ,ಚಟಪಟಿ ಹರಟೆಗಳಾಗುತ್ತವೆ...ಸಂಯೋಗದಿಂದ
ಅಮೇರಿಕಾದಿಂದ ಬಂದ ಮಗನದೂ
ಅಷ್ಟಿಷ್ಟು ಸಾಥ್ ಸಿಗುತ್ತದೆ...

           ಇದು ಬಹಳವೆಂದರೆ ಎರಡು ತಿಂಗಳು ಅಷ್ಟೇ...ನಂತರ ಮತ್ತೆ Race/ ಭಾಗದೌಡ್/traffic ರಗಳೆ/ತೀರದ
ಪರೀಕ್ಷೆಗಳು/ಫಲಿತಾಂಶಗಳು/ನೌಕರಿ ಬೇಟೆ/ಭೇಟಿಯಾದವರಿಗೆ ಕೊಡಲು
ವೇಳೆಯ ಕೊರತೆ/ಬಾರದವರನ್ನು ನೆನೆಯುತ್ತ ನಾವು ಇಲ್ಲಿ...ಅವರೆಲ್ಲ ಇದ್ದಲ್ಲಿ...ಮತ್ತದೇ ಹಳೆಯ ಹಾಡಲಾರದ/ಹಾಡಲಾಗದ ಟೇಪ್ ಗಳು...

   
      
  


Wednesday, 13 May 2026

One thought that...     
   "All my children have crossed fifty/all celebrated their silver Jubilee year of marriage/ All the Kids are now adults- on their tracks...Almost 90% of my part is already OVER...There is nothing I could do now..."
            This comes to my mind
very often now a days.I remember Appaji more.My promises to him- I have fulfilled-
His purpose of making me do my BEd after ten years of marriage - taking the responsibility of kids was perhaps God's plan- not his...
All worked well to our efforts/ satisfaction...
                 Eighty is not a small
number...Now thinking gets slow.Eyes get tired.Hands don't 
permit me work.Legs strike sometimes... Soooooo-
                 Now time to leave...I 
THINK...


Friday, 8 May 2026

Monday, 6 April 2026

Dr ,Raju' s prescriptions...

Raju' s prescription...

Morning - 18 units

Start at 4 units and increase until fasting reaches 100-110

Food constitent 
160-180

1 to 1.5 chapati
Sarina battla anna/ jolada muddi

Gastroantologist
Haemoglobin

Sunday, 18 January 2026

Follow healthy routine...

ಡಾಕ್ಟರ್ ಇಲ್ಲದ ಕಾಲದಲ್ಲಿ ನಮ್ಮ ಪೂರ್ವಿಕರು ಪಾಲನೆ ಮಾಡಿದ ಆರೋಗ್ಯದ ಗುಟ್ಟು. ಆಯುರ್ವೇದದ ಈ ದಿನಚರಿ ಪಾಲನೆ ಮಾಡಿದವರು ನೂರಾರು ವರ್ಷ ಕಾಯಿಲೆ ಇಲ್ಲದೇ ಬದುಕಿದರು. ನೂರರ ಸಮೀಪದಲ್ಲೂ ಗಟ್ಟಿಯಾಗಿ ಆರೋಗ್ಯವಂತರಾಗಿದ್ದರು.

ಆಯುರ್ವೇದದ ಪ್ರಕಾರ ದಿನಚರಿ (Daily Routine) ಎಂದರೆ ಕೇವಲ ಕೆಲಸ ಮಾಡುವುದಲ್ಲ, ಅದು ಪ್ರಕೃತಿಯೊಂದಿಗೆ ನಮ್ಮ ದೇಹವನ್ನು ಹೊಂದಿಸಿಕೊಳ್ಳುವ ವಿಧಾನವಾಗಿದೆ. ಆಯುರ್ವೇದದ ಪ್ರಕಾರ ನಿಮ್ಮ ದಿನವನ್ನು ಹೇಗೆ ಕಳೆಯಬೇಕು ಎಂಬ ಮಾಹಿತಿ ಇಲ್ಲಿದೆ:

​1. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು (Early Morning)
​ಸೂರ್ಯೋದಯಕ್ಕೆ ಸುಮಾರು 1.5 ಗಂಟೆಗಳ ಮೊದಲು (ಅಂದರೆ ಬೆಳಿಗ್ಗೆ 4:30 ರಿಂದ 5:30 ರ ನಡುವೆ) ಏಳುವುದು ಅತ್ಯುತ್ತಮ. 
ಈ ಸಮಯದಲ್ಲಿ ವಾತಾವರಣವು ಶುದ್ಧವಾಗಿರುತ್ತದೆ ಮತ್ತು ಮನಸ್ಸು ಶಾಂತವಾಗಿರುತ್ತದೆ.

​2. ಮುಖ ಪ್ರಕ್ಷಾಲನ ಮತ್ತು ಹಲ್ಲುಜ್ಜುವುದು
​ಕಣ್ಣುಗಳು: ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ.
​ಹಲ್ಲುಜ್ಜುವುದು: ಕಹಿ ಅಥವಾ ಒಗರು ರುಚಿಯ ಗಿಡಮೂಲಿಕೆಗಳ ಪುಡಿ ಅಥವಾ ಪೇಸ್ಟ್ ಬಳಸಿ.

​ನಾಲಿಗೆ ಸ್ವಚ್ಛತೆ: ನಾಲಿಗೆಯ ಮೇಲಿರುವ ಬಿಳಿ ಪದರವನ್ನು (ಆಮ) ತೆಗೆಯಲು ನಾಲಿಗೆಯನ್ನು ಸ್ವಚ್ಛಗೊಳಿಸಿ. ಇದು ಜೀರ್ಣಕ್ರಿಯೆಗೆ ಸಹಕಾರಿ.

​3. ಅಭ್ಯಂಗ (ತೈಲ ಮಸಾಜ್)
​ಸ್ನಾನಕ್ಕೆ ಮೊದಲು ಇಡೀ ದೇಹಕ್ಕೆ ಮೃದುವಾಗಿ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯುತ್ತದೆ.

​4. ವ್ಯಾಯಾಮ ಮತ್ತು ಸ್ನಾನ
​ನಿಮ್ಮ ಶಕ್ತಿಯ ಅರ್ಧದಷ್ಟು ಮಾತ್ರ ವ್ಯಾಯಾಮ ಮಾಡಿ (ಬೆವರುವವರೆಗೆ). ಯೋಗಾಸನ ಮತ್ತು ಪ್ರಾಣಾಯಾಮ ಅತ್ಯಂತ ಶ್ರೇಷ್ಠ.
​ನಂತರ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ತಲೆಗೆ ಅತಿ ಬಿಸಿ ನೀರನ್ನು ಹಾಕಬೇಡಿ.

​5. ಆಹಾರ ಪದ್ಧತಿ
​ಉಪಹಾರ: ಬೆಳಿಗ್ಗೆ ಹಸಿವಾದಾಗ ಹಗುರವಾದ ಮತ್ತು ಪೌಷ್ಟಿಕಾಂಶಯುಕ್ತ ಉಪಹಾರ ಸೇವಿಸಿ.
​ಮಧ್ಯಾಹ್ನದ ಊಟ: ಇದು ದಿನದ ಅತಿ ಮುಖ್ಯ ಮತ್ತು ದೊಡ್ಡ ಆಹಾರವಾಗಿರಲಿ. ಏಕೆಂದರೆ ಮಧ್ಯಾಹ್ನ ಸೂರ್ಯನು ಪ್ರಬಲವಾಗಿರುವಾಗ ನಮ್ಮ ಜೀರ್ಣಶಕ್ತಿ (ಜಠರಾಗ್ನಿ) ಹೆಚ್ಚಿರುತ್ತದೆ.
​ರಾತ್ರಿ ಊಟ: ಸೂರ್ಯಾಸ್ತದ ನಂತರ ಅಥವಾ ಮಲಗುವ 2-3 ಗಂಟೆಗಳ ಮೊದಲು ಹಗುರವಾದ ಆಹಾರ ಸೇವಿಸಿ.

​6. ನಿದ್ರೆ (ಸರಿಯಾದ ಸಮಯಕ್ಕೆ ವಿಶ್ರಾಂತಿ)
​ರಾತ್ರಿ 10 ಗಂಟೆಯೊಳಗೆ ಮಲಗುವುದು ಸೂಕ್ತ. ಚೆನ್ನಾಗಿ ನಿದ್ರೆ ಮಾಡುವುದರಿಂದ ದೇಹದ ಅಂಗಾಂಶಗಳು ಪುನಶ್ಚೇತನಗೊಳ್ಳುತ್ತವೆ.

​ಗಮನಿಸಬೇಕಾದ ಪ್ರಮುಖ ಅಂಶಗಳು:
​ನೀರು: ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯಿರಿ. ಬೆಳಿಗ್ಗೆ ಎದ್ದ ತಕ್ಷಣ ಉಗುರುಬೆಚ್ಚಗಿನ ನೀರು ಕುಡಿಯುವುದು (ಉಷಾಪಾನ) ಮಲಬದ್ಧತೆಯನ್ನು ತಡೆಯುತ್ತದೆ.
​ಮನಸ್ಥಿತಿ: ಊಟ ಮಾಡುವಾಗ ಮತ್ತು ಕೆಲಸ ಮಾಡುವಾಗ ಶಾಂತವಾಗಿರಿ.

​ನೆನಪಿಡಿ: ಆಯುರ್ವೇದವು ಪ್ರತಿಯೊಬ್ಬರ ದೇಹದ ಪ್ರಕೃತಿಗೆ (ವಾತ, ಪಿತ್ತ, ಕಫ) ಅನುಗುಣವಾಗಿ ಬದಲಾಗುತ್ತದೆ.

ಕೂತರೇ ನಿಂತರೇ ಡಾಕ್ಟರ್ ಬಳಿ ಓಡ ಬೇಡಿ: ಅಂಗೈಯಲ್ಲಿ ಆರೋಗ್ಯ, ನಿಮ್ಮ ಆರೋಗ್ಯ ನಿಮ್ಮ ಕೈಲಿ ಇರುವಾಗ ಕಾಪಾಡ್ಕೋಳ್ಳಿ:

▪️ಬಿಕ್ಕಳಿಕೆ ಬರುವುದೇ:    ಹುರುಳಿ ಕಷಾಯ ಸೇವಿಸಿರಿ.
▪️ಕಫ ಬರುವುದೇ:      ಶುಂಠಿ ಕಷಾಯ ಸೇವಿಸಿರಿ.
▪️ಹೊಟ್ಟೆಯಲ್ಲಿ ಹರಳಾದರೇ:    ಬಾಳೆದಿಂಡಿನ ಪಲ್ಯ ಸೇವಿಸಿರಿ.
▪️ಬಿಳಿ ಕೂದಲು:   ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.
▪️ಮರೆವು ಬರುವುದೇ:     ನಿತ್ಯ ಸೇವಿಸಿ ಜೇನು.
▪️ಕೋಪ ಬರುವುದೇ:   ಕಾಳು ಮೆಣಸು ಸೇವಿಸಿ.
▪️ಮೂಲವ್ಯಾಧಿಯೇ:    ನಿತ್ಯ ಸೇವಿಸಿ ಎಳ್ಳು.
▪️ಮುಪ್ಪು ಬೇಡವೇ:   ಗರಿಕೆ ರಸ ಸೇವಿಸಿ.
▪️ನಿಶಕ್ತಿಯೇ:     ದೇಶಿ ಆಕಳ ಹಾಲು ಸೇವಿಸಿ.
▪️ಇರುಳುಗಣ್ಣು ಇದೆಯೇ:   ತುಲಸಿ ರಸ ಕಣ್ಣಿಗೆ ಹಾಕಿ.
▪️ಕುಳ್ಳಗಿರುವಿರೇ:   ನಿತ್ಯ ಸೇವಿಸಿ ನಿಂಬೆ ಹಣ್ಣು.
▪️ತೆಳ್ಳಗಿರುವಿರೆ:   ನಿತ್ಯ ಸೇವಿಸಿ ಸೀತಾ ಫಲ.
▪️ತೆಳ್ಳಗಾಗಬೇಕೇ:   ನಿತ್ಯ ಸೇವಿಸಿ ಬಿಸಿ ನೀರು.
▪️ಹಸಿವಿಲ್ಲವೇ:   ನಿತ್ಯ ಸೇವಿಸಿ ಓಂ ಕಾಳು.
▪️ತುಂಬಾ ಹಸಿವೇ:   ಸೇವಿಸಿ ಹಸಿ ಶೇಂಗಾ.
▪️ಬಾಯಾರಿಕೆಯೇ:    ಸೇವಿಸಿ ತುಳಸಿ.
▪️ಬಾಯಾರಿಕೆ ಇಲ್ಲವೇ:   ಸೇವಿಸಿ ಬೆಲ್ಲ.
▪️ಸಕ್ಕರೆ ಕಾಯಿಲೆಯೇ:   ಬಿಡಿ ಸಕ್ಕರೆ, ಸೇವಿಸಿ ರಾಗಿ.
▪️ರಕ್ತ ಹೀನತೆಯೇ:    ನಿತ್ಯ ಸೇವಿಸಿ ಪಾಲಕ್ ಸೊಪ್ಪು.
▪️ತಲೆ ಸುತ್ತುವುದೇ:    ಬೆಳ್ಳುಳ್ಳಿ ಕಷಾಯ ಸೇವಿಸಿ.
▪️ಬಂಜೆತನವೇ:      ಔದುಂಬರ ಚಕ್ಕೆ ಕಷಾಯ
▪️ಸ್ವಪ್ನ ದೋಷವೇ:   ತುಳಸಿ ಕಷಾಯ ಸೇವಿಸಿ.
▪️ಅಲರ್ಜಿ ಇದೆಯೇ:   ಅಮೃತ ಬಳ್ಳಿ ಕಷಾಯ ಸೇವಿಸಿ.
▪️ಹೃದಯ ದೌರ್ಬಲವೇ:   ಸೋರೆಕಾಯಿ ರಸ ಸೇವಿಸಿ.
▪️ರಕ್ತ ದೋಷವೇ:    ಕೇಸರಿ ಹಾಲು ಸೇವಿಸಿ.
▪️ದುರ್ಗಂಧವೇ:     ಹೆಸರು ಹಿಟ್ಟು ಸ್ನಾನ ಮಾಡಿ.
▪️ಕೋಳಿ ಜ್ವರಕ್ಕೆ:   ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.
▪️ಕಾಲಲ್ಲಿ ಆಣಿ ಇದೆಯೇ: ಉತ್ತರಾಣಿ ಸೊಪ್ಪು ಕಟ್ಟಿರಿ.
▪️ಮೊಣಕಾಲು ನೋವು:    ನಿತ್ಯ ಮಾಡಿ ವಜ್ರಾಸನ.
▪️ಸಂಕಟ ಆಗುವುದೇ:   ಎಳನೀರು ಸೇವಿಸಿ.
▪️ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ:        ನಿತ್ಯ ಕೊಡಿ ಜೇನು.
▪️ಜಲ ಶುದ್ಧಿ ಮಾಡಬೇಕೇ:  ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ, ಅದರಲ್ಲಿ ತುಳಸಿ ಎಲೆ ಹಾಕಿರಿ.
▪️ವಾಂತಿಯಾಗುವುದೇ:    ಎಳನೀರು-ಜೇನು ಸೇವಿಸಿ.
▪️ಭೇದಿ ತುಂಬಾ ಆಗುವುದೇ:  ಅನ್ನ ಮಜ್ಜಿಗೆ ಊಟ ಮಾಡಿ.
▪️ಹಲ್ಲು ಸಡಿಲವೇ:   ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.
▪️ಕಾಮಾಲೆ ರೋಗವೇ:     ನಿತ್ಯ ಮೊಸರು ಸೇವಿಸಿ.
▪️ಉಗುರು ಸುತ್ತು ಇದೆಯೇ:    ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.
▪️ಎದೆ ಹಾಲಿನ ಕೊರತೆಯೇ:   ನಿತ್ಯ ಸೇವಿಸಿ ಎಳ್ಳು.
▪️ಎಲುಬುಗಳ ನೋವೇ:   ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.
▪️ತುಟಿ ಸೀಳಿದಿಯೇ:   ಹಾಲಿನ ಕೆನೆ ಹಚ್ಚಿರಿ.
▪️ಪಿತ್ತವೇ:    ಚಹಾ ಬಿಟ್ಟುಬಿಡಿ.
▪️ಉಷ್ಣವೇ:   ಕಾಫಿ ಬಿಟ್ಟುಬಿಡಿ.
▪️ಚಂಚಲವೇ:    ನಾಸಿಕದಲ್ಲಿ ದೇಶಿ ತುಪ್ಪ ಹಾಕಿ.
▪️ಬಹು ಮೂತ್ರವೇ:    ದಾಲ್ಚಿನ್ನಿ ಕಷಾಯ ಸೇವಿಸಿ.
▪️ಮೂತ್ರ ತಡೆಗೆ:    ಜೀರಿಗೆ ಕಷಾಯ ಸೇವಿಸಿ.
▪️ಆಯಾಸವೇ:   ಅಭ್ಯಂಗ ಸ್ನಾನ ಮಾಡಿ
▪️ಹಿಮ್ಮಡಿ ಸೀಳುವುದೇ:   ಔಡಲ ಎಣ್ಣೆ ಸುಣ್ಣ ಕಲಸಿ ಲೇಪಿಸಿ.

ಆರೋಗ್ಯವೇ ಭಾಗ್ಯ🌹
ಸಸ್ಯಸಂಪತ್ತು ನಮ್ಮಲ್ಲಿ ವಿರಳವಾಗಿ ಕಂಡುಬರುತ್ತಿದೆ. ಇತ್ತೀಚೆಗೆ ನಮಗೆ ಅವುಗಳ ಹೆಸರಾಗಲಿ ಉಪಯೋಗವಾಗಲಿ ಗೊತ್ತಾಗುತ್ತಿಲ್ಲ.

ಇಂದು ಬಹುತೇಕ ಜನತೆ ಚಿಕ್ಕಪುಟ್ಟ ರೋಗಗಳಿಗೂ ಮಾತ್ರೆಗಳನ್ನು ಸಿಕ್ಕಾಪಟ್ಟೆ ತಿನ್ನುತ್ತಾರೆ.

ನಮ್ಮ ಸುತ್ತಮುತ್ತಲೂ ಇರುವ ಅನೇಕ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳನ್ನು ಕಡೆಗಣಿಸುತ್ತಾರೆ.

ಏಕೆಂದರೆ, ಬಹುತೇಕ ಜನರಿಗೆ ಆ ಗಿಡಗಳ ಹೆಸರಾಗಲಿ ಅದರ ಉಪಯೋಗಗಳಾಗಲಿ ತಿಳಿದಿಲ್ಲ.

ಕೇವಲ ಸಸ್ಯಗಳು ಮತ್ತು ಅವುಗಳಿಗೆ ಕನ್ನಡದಲ್ಲಿ ಬಳಸುವ ಹೆಸರುಗಳಿವೆ. 

ನಿಖರವಾಗಿ ಇದರ ಉಪಯೋಗ ಗೊತ್ತಿದ್ದವರು ಅದರ ವಿವರಣೆಯನ್ನು - ಉಪಯೋಗವನ್ನು ತಿಳಿಸಬಹುದು.

ಕೆಲವು ಜನರು ನೋಡಿಲ್ಲ, ಇನ್ನು ಕೆಲವರು ಹೆಸರುನೇ ಕೇಳಿಲ್ಲಾ ಆದ್ದರಿಂದ ಶೇರ್ ಮಾಡಿ  🙏.

ಮತ್ತಷ್ಟು ಉಪಯುಕ್ತ ಮಾಹಿತಿಗಳಿಗಾಗಿ-

 #krishikaipidi #bhusresta #onicaproject #onicafarming 
 #homemade #herbs #homeotheraphy #krishijagran #24RsClub

ಬಾಲ್ಯದ ಒಂದು ಕಾಲವಿತ್ತು- ಸಂತೋಷದ  ಬಹು ಭಾರೀ  ಭಂಡಾರವೇ ಇತ್ತು- ಚಂದಿರನ ಪಡೆವ ಬಯಕೆಯಿತ್ತು-ಮನಸ್ಸಿಗೆ, ಬಣ್ಣದ ಚಿಟ್ಟೆಗಳ ಹುಚ್ಚು ಹಂಬಲವಿತ್ತು- ಬೆಳಗಿನ ಸುದ್ದಿಗಳ ಸ...