Monday 29 March 2021

‌ ನಿನ್ನೆ ಪೇಪರ್ ಓದುತ್ತಿದ್ದೆ, print ದೋಷವೋ,ನನ್ನ ಕಣ್ಣಿನ ಆಭಾಸವೋ ಕೆಲ ಭಾಗ ಸ್ಪಷ್ಟವೆನಿಸಲಿಲ್ಲ. ಆ ಭಾಗವನ್ನು ZOOM ಮಾಡಲು ನೋಡಿ ವಿಫಲಳಾದೆ. ಅದು ಪೇಪರ್, ಅದನ್ನು zoom ಮಾಡಲಾಗದು ಎಂಬುದು ನಂತರ ಹೊಳೆಯಿತು .ಮೊನ್ನೆ ಒಂದು ದಿನ mobile ಕೈಲಿ ಹಿಡಿದು TV on ಮಾಡುವ ಪ್ರಯತ್ನ ಮಾಡಿಯೂ ಆಗಿತ್ತು. ಹಿಂದೆಂದೋ ಒಂದಿನ ಕೂದಲು ಬಾಚುತ್ತ ಮುಖ ಕಾಣುವದಿಲ್ಲ ಎಂದು ಪೇಚಾಡಿದೆ. ನಿಂತದ್ದು ಕನ್ನಡಿಯ ಮುಂದಲ್ಲ, ಬಟ್ಟೆಯ cupboard ಮುಂದೆ. ಎದುರಿಗಿದ್ದ ಕುಕ್ಕರ್ ಸೀಟಿ ಹೊಡೆದರೆ, ಯಾರದಾದರೂ ಕರೆಗಂಟೆ ಬಾರಿಸಿದರೆ mobile ರಿಂಗಣಿಸಿತೆಂದು ಗೋಡೆ ಗೋಡೆ ಹಾಯುವದು.. ‌‌ಈ ಅಭ್ಯಾಸ ಹೊಸದಲ್ಲ. ನಾನು ನೌಕರಿ ಮಾಡುವಾಗ ನನ್ನ ಶಾಲೆಯಲ್ಲಿ ಮರೆವಿಗೆ ನನ್ನ ಹೆಸರು ಪರ್ಯಾಯವಾಗಿ ಬಳಕೆಯಾಗುತ್ತಿತ್ತು. ಹಲವಾರು ಸಲ ಮೋಜಿಗೆ, ಕೆಲವೊಮ್ಮೆ ಪೇಚಿಗೆ ಸಿಗಿಸುತ್ತಿತ್ತು. ನನ್ನ ಸಣ್ಣ ಪುಟ್ಟ ದೋಷಗಳು ಸಲೀಸಾಗಿ ಇತರರಿಂದ ಮಾನ್ಯವಾಗಿಬಿಡುತ್ತಿದ್ದವು. ನನಗೇ ಮುಜುಗರವಾಗುತ್ತಿತ್ತು. ನನ್ನ ಲೋಪವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದೇನೆಂದು ಅವರು ಅರ್ಥೈಸಿದರೆ ಎಂದು ಒಂದು ರೀತಿಯ ಮುಜುಗರವೆನಿಸುತ್ತಿತ್ತು. ರಿಟೈರ್ ಆಗುವವರೆಗೂ ಅಂಥ ಅವಘಡ ವೇನೂ ಸಂಭವಿಸದೇ ನನ್ನನ್ನು ಸರಳವಾಗಿ ನಿವೃತ್ತಿಯಾಗುವಂತೆ ಆಗಿದ್ದು ನನ್ನ ಪುಣ್ಯ. ಸಹೋದ್ಯೋಗಿಗಳ ದಯೆ.. ‌ಇದೇಕೆ ಹೀಗಾಗುತ್ತದೆ??. ಆಗಿನದು ಅರ್ಥವಾಗುತ್ತದೆ. ಏಕಾಏಕಿ single parent ಆಗಿ ಮೂರು ಚಿಕ್ಕಚಿಕ್ಕ ಮಕ್ಕಳನ್ನು ನಿಭಾಯಿಸಬೇಕಾಗಿ ಬಂದಾಗಿನ ಮಾನಸಿಕ ಗೊಂದಲ, ಅಧೈರ್ಯ, ಅನಿವಾರ್ಯತೆಯಿಂದ ಹಾಗಾಗುತ್ತಿತ್ತು ಎಂದು ಅರ್ಥೈಸಬಹುದಿತ್ತು. ಈಗ ಆ ಕಾರಣ ಕೊಡುವಂತೆಯೇ ಇಲ್ಲ. ಈಗಿನದೇ ಬೇರೆ...ಆಧುನಿಕ ಶೈಲಿಯ ಜೀವನದಿಂದಾಗಿ multi task life style ನ ಪರಿಣಾಮವಿದು...ಇದು ನಾನು ಹೇಳಿದಾಗಲೆಲ್ಲ ನನ್ನ ಪರಿಚಯಸ್ಥರು ಅಚ್ಚರಿಪಡುವದಿಲ್ಲ..ಅಸಡ್ಡೆ ಮಾಡುವದಿಲ್ಲ...ನನ್ನದೂ ಇದೇ ಹಣೆಬರಹ ಎಂದು ಸಮ್ಮತಿಸುತ್ತಾರೆ...ಅದೇ ಸಮಾಧಾನ..ಎಲ್ಲರ ಬದುಕಿಗೂ ತನ್ನದೇ ವೇಗ...ಧಾವಂತ...ಕೆಲಸದ ದರ್ದು...traffic ಬೇಗ ದಾಟುವ ತರಾತುರಿ....ಮಕ್ಕಳ ದಿನಚರಿಯ follow ಮಾಡುವಿಕೆ, ಆಗಾಗ ಕಾಣಿಸಿಕೊಳ್ಳುವ ಅತಿಥಿಗಳ ಉಪಚಾರ.... ಹೀಗಾಗಿ ಬೇಕಾಗಿಯೋ,ಬೇಡವಾಗಿಯೋ ಎಲ್ಲರೂ ಚಕ್ರವ್ಯೂಹದ ಅಭಿಮನ್ಯುಗಳೇ...ಒಳಹೋದವರಿಗೆ ಹೊರಬರುವ ದಾರಿಕಾಣದೇ ಕಂಗಾಲು...ಆಗ ಬೇಡವಾದ ಸರಕುಗಳ ಗೋಡೌನ್ ಆದ ತಲೆ ಕಾರ್ಯ ನಿರ್ವಹಣೆಯಲ್ಲಿ ಎಡುಹುವದು ಸಹಜ.... ‌ ಮೇಲಿನ ಯಾವೂ ಕಾರಣಗಳು ನನಗೀಗ ನೆವಗಳಲ್ಲ..ಅದು ನನಗೆ ಗೊತ್ತು..." ಕೃಷ್ಣಾ,ನಿನಗೆ ವಯಸ್ಸಾಯ್ತು"_ ಎಂಬುದರ ಸ್ಪಷ್ಟ ಸೂಚನೆ ಒಂದು ಕಡೆಯಾದರೆ, ಏಕ ಕಾಲಕ್ಕೆ ಹಲವು ಕೆಲಸಮಾಡಬಲ್ಲೆವೆಂಬ over-confidence ಸಮಯಕ್ಕೆ ಸರಿಯಾಗಿ ಕೈ ಕೊಡುವದು ಇನ್ನೊಂದು ಕಾರಣ...ನನಗೆ ಈ ಬಗ್ಗೆ ಅಪಮಾನವಾಗಲಿ,ಅಸಡ್ಡೆಯಾಗಲಿ ಖಂಡಿತ ಇಲ್ಲ...ದೇಹ,ಮನಸ್ಸು,ಇಚ್ಛಾಶಕ್ತಿ,ಮನಸ್ಸಿದ್ದರೂ ಮಾಡಲಾಗದ ಅಸಹಾಯಕತೆ, ದೇಹ- ಮನಸ್ಸುಗಳ 'ಜಗಳ'ಬಂದಿ ಇಂಥ ,ಹೇಳಬಲ್ಲ,ಹೇಳಲಾಗದ ಹತ್ತು ಹಲವು ಕಾರಣಗಳು...ಹೀಗಾದಾಗಲೆಲ್ಲ ನನ್ನ ತಲೆಯನ್ನು ನಾನೇ ಮೊಟಕಿಕೊಂಡು,ಒಮ್ಮೆ ಹುಸಿನಗೆ ನಕ್ಕು, ಹಗುರಾಗಿ ಮುನ್ನಡೆದು ಕಂಡಕ್ಟರನಂತೆ ' right...right..' ಅನ್ನುವದನ್ನು ರೂಢಿಸಿಕೊಂಡಿದ್ದೇನೆ...' ಕಾಲಾಯ ತಸ್ಮೈನಮಃ'...

Thursday 25 March 2021

ಬುಧವಾರ ರಾತ್ರಿ ನನ್ನ ಮೂರನೇ ಮೊಮ್ಮಗ ನಿಕ್ಷೇಪನ JEE ಪರೀಕ್ಷೆಯ ಎರಡನೇಯ attempt ನ ಫಲಿತಾಂಶ ಬಂತು. 99.78 ರಷ್ಟು ಗುಣಗಳು ಸಿಕ್ಕಿದ್ದವು. ಆ ಸಂಭ್ರಮ ಮರುದಿನವೂ ಇದ್ದು ಮನೆಯಲ್ಲಿ ಕೆಲಕಾಲ ಹರಕೆ, ಹಾರೈಕೆ,' ಅಭಿನಂದನೆಗಳ 'ಗಲಗಲ' ಗಳೆಲ್ಲ ಮುಗಿದಮೇಲೆ ಅವನನ್ನು ನಾನು ಕೇಳಿದೆ " ಬಹಳಷ್ಟು ಜನ ನಮ್ಮನ್ನು ನಿನ್ನ ಅಭ್ಯಾಸಕ್ರಮ, ಅಭ್ಯಾಸದ ಅವಧಿ, ಮುಂತಾಗಿ ಕುರಿತು ಕೇಳುತ್ತಿದ್ದಾರೆ, ನಾನು ಹಲವು ಪ್ರಶ್ನೆಗಳನ್ನು ಕೇಳುತ್ತೇನೆ, ನೀನು ಅವುಗಳನ್ನು ಉತ್ತರಿಸು, ಅದರ ವೀಡಿಯೋ ಕೇಳಿದವರಿಗೆ ಕಳಿಸುತ್ತೇನೆ ಅಂದೆ."ಅದೆಲ್ಲ ಬೇಡ, ಅವುಗಳ ಬಗ್ಗೆ ನನಗನಿಸಿದ್ದು ನಾಲ್ಕು points ಗಳನ್ನು ಹೇಳುತ್ತೇನೆ, ನಿನಗೆ ಸರಿಯನಿಸಿದಂತೆ ಎಲ್ಲಿ ಬೇಕಾದರೂ ಹಾಕಿಕೋ" ಎಂದಾಗ ಅದೂ ಸರೀನೇ ಅನಿಸಿತು ನನಗೆ.'ಸರಿ ಸರಿ' ಅಂದೆ. ಅವನು ಹೇಳಿದ್ದು ಈ ಕೆಳಗಿದೆ... ಯಾವುದೇ ಕಾರಣಕ್ಕೂ ಮಕ್ಕಳ ಅಭ್ಯಾಸದ ಕ್ರಮ, ಹಾಗೂ ವೇಳೆಯನ್ನು ಕುರಿತು ಚರ್ಚಿಸಲಾಗದು . ಅವರಿಗೆ ಸರಿಕಂಡ ರೀತಿಯಲ್ಲಿ ಅಭ್ಯಾಸ ಮಾಡುವ , ಅದನ್ನು ಬೇಕೆಂದಾಗ ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯ ಅವರಿಗೇ ಬಿಡಬೇಕು. ಮುಂದೆ ಆಯ್ದುಕೊಳ್ಳುವ ವಿಷಯಗಳ ಬಗ್ಗೆ ಬೇರೆಯವರು ಸಲಹೆ ನೀಡಬಹುದೇ ಹೊರತು ಒತ್ತಾಯ ಖಂಡಿತ ಕೂಡದು. ಅವರನ್ನು ಅವರಿಗಿಂತ ಹೆಚ್ಚು ,ಕಡಿಮೆ ಇದ್ದವರೊಡನೆ ತುಲನೆ ಮಾಡಿ ಅಭಿಪ್ರಾಯಗಳನ್ನು ಅವರು ತಲೆಯಲ್ಲಿ ತುಂಬಬಾರದು. ಪರೀಕ್ಷೆಯ ಸಮಯದಲ್ಲಿ ಮುಗಿದು ಹೋದ ವಿಷಯಗಳ ಪೋಸ್ಟಮಾರ್ಟಂ ಯಾವಕಾಲಕ್ಕೂ ಸಲ್ಲದು. ಓದಿದ್ದನ್ನು ಅದರ ಪಾಡಿಗೆ ಅದನ್ನು ಬಿಟ್ಟು ಮುಂದಿನದ್ದು ಕಡೆ ಗಮನ ಹರಿಸಲು ಹೇಳುವದು ಉತ್ತಮ. ಕೊನೆಯದಾಗಿ ಪರೀಕ್ಷಾ ದಿನಗಳಲ್ಲಿ ಮನೆಯ ವಾತಾವರಣ ಅಧ್ಯಯನ ಯೋಗ್ಯವಾಗಿರಬೇಕು. ಇಲ್ಲಸಲ್ಲದ ಗಲಾಟೆ, ವಾದ ವಿವಾದ, ಬಿಸಿಬಿಸಿ ವಿಷಯಗಳ ಚರ್ಚೆ ಮನೆಯ ವಾತಾವರಣವನ್ನು ಕೆಡಿಸುವದೇ ಹೆಚ್ಚು. ಕೊನೆಯದಾಗಿ ಮನೆಯ ಸದಸ್ಯರೆಲ್ಲರ ಸಹಕಾರ, ಅತಿಮುಖ್ಯವಾದ ಅಂಶ. ತಪ್ಪು ಮಾಡಿದಾಗ ಹೇಳುವುದನ್ನು ಹಿತಮಿತವಾಗಿ ಹೇಳಬೇಕೇ ಹೊರತು ಮಕ್ಕಳ ಮೂಡು ಕೆಡುವಂತೆ ಮಾಡಬಾರದು. ಹಾಗೆ ಮಾಡುವುದರಿಂದ ಅದರ ಪರಿಣಾಮ ಋಣಾತ್ಮಕ ( negative) ಸಾಗುವುದೇ ಹೆಚ್ಚು. ಮಕ್ಕಳು ಪ್ರಶಂಸಾರ್ಹವಾದದ್ದೇನಾದರೂ ಮಾಡಿದರೆ ಕಂಜೂಷತನ ತೋರಿಸದೇ ಅವರನ್ನು ಪ್ರೋತ್ಸಾಹದ ಮಾತುಗಳಿಂದ ಉತ್ತೇಜಿಸುವ ಕೆಲಸ ಮಾಡಬೇಕು. ಕೊನೆಯದಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನದೇ ಆದ ವ್ಯಕ್ತಿತ್ವ ಅಥವಾ ವ್ಯಕ್ತಿತ್ವ ದೋಷವಿರುತ್ತದೆ. ಕಾರಣ ಎಲ್ಲರನ್ನೂ ಏಕರೀತಿಯಲ್ಲಿ ಸಂಭಾಳಿಸುವ ಸಿದ್ಧ ಸೂತ್ರವಿಲ್ಲಿ ಕೆಲಸ ಮಾಡಲಾರದು .ಅಂಥ ವೇಳೆಯಲ್ಲಿ ನಿಗದಿತ ವಿದ್ಯಾರ್ಥಿಯ ವಿಷಯವನ್ನು ಪ್ರತ್ಯೇಕವಾಗಿ ಗಮನದಲ್ಲಿಟ್ಟುಕೊಂಡು ವ್ಯವಹರಿಸುವದು ಮುಖ್ಯವಾಗುತ್ತದೆ. ಇಂಥ

Wednesday 24 March 2021

ಬಹಳ ದಿನಗಳ ಹಿಂದೆ, ಮರಾಠಿ ಮೂಲದ ಕನ್ನಡ ಅನುವಾದ ,' ನಮ್ಮ ಮನೆ ನಮ್ಮದೆಷ್ಟು ' ಲೇಖನವನ್ನು ಕಸ್ತೂರಿ ಮಾಸ ಪತ್ರಿಕೆಯಲ್ಲಿ ಓದಿದ್ದೆ. ಅಷ್ಟೊಂದು ಆಸೆಪಟ್ಟು, ದುಡಿದ ಹಣವನ್ನೆಲ್ಲ ವ್ಯಯಿಸಿ, ಕಟ್ಟಿಸಿದ ಮನೆಯಲ್ಲಿ ಒಬ್ಬ ಮನುಷ್ಯ ಎಷ್ಟು ಕಾಲ ಇರುತ್ತಾನೆ ಎಂಬುದರ ವಿಶ್ಲೇಷಣೆಯಿತ್ತು ಅದರಲ್ಲಿ. ಒಬ್ಬ ಮನುಷ್ಯ ಪೂರ್ಣವಾಗಿ ನೂರು ವರ್ಷ ಬದುಕಿದರೂ ಬದುಕಿನ ಹೋರಾಟ, ಬದುಕಿಗಾಗಿ ಸಂಪಾದನೆ, ಅನ್ನುತ್ತ ಬೆಳಿಗ್ಗೆ ಹತ್ತರಿಂದ ಸಾಯಂಕಾಲ ಆರರವರೆಗೆ ಅಂದರೆ ಮೂರರ ಒಂದು ಭಾಗ ( ಇಪ್ಪತ್ನಾಲ್ಕು ಗಂಟೆಗಳಲ್ಲಿ ಎಂಟು ಗಂಟೆಗಳು) ಮನೆಯಿಂದ ಹೊರಗೆ ಇರುತ್ತಾನೆ. ಆಗ ಅವನ ಬದುಕಿನ ಮೂವತ್ಮೂರು ವರ್ಷಗಳು ಲೆಕ್ಕ ಕಳೆದುಕೊಳ್ಳುತ್ತವೆ. ರಾತ್ರಿ ಹತ್ತರಿಂದ ಬೆಳಗಿನ ಆರು ಗಂಟೆಯ ವರೆಗೆ ನಿದ್ರೆಯ ಸಮಯ. ನಿದ್ರೆಯೆಂದರೆ 'ತಾತ್ಕಾಲಿಕ ಸಾವು' ಇದ್ದ ಹಾಗೆ...ಸಾವು 'ದೀರ್ಘ ನಿದ್ರೆ'. ಅದಕ್ಕೇ ವರಕವಿ ಬೇಂದ್ರೆಯವರು :ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ" ಎಂದಿರಬೇಕು...ಆ ಸುಷುಪ್ತಿ ಸ್ಥಿತಿಯಲ್ಲಿ ಐಷಾರಾಮೀ ಮಹಲಿನಲ್ಲಿ ಮಲಗುವವನಿಗೂ, ಫುಟ್ಪಾತ ಮೇಲೆ ಮಲಗಿರುವವನಿಗೂ ವ್ಯತ್ಯಾಸವೇ ಇರುವುದಿಲ್ಲ. ಹೊರಗಿನ ಅರಿವಿಗೆ ಹೊರತಾದ 'ಅವಸ್ಥೆ 'ಯದು. ಅಲ್ಲಿಗೆ ಮತ್ತೆ ಮೂರರಲ್ಲಿ ಒಂದರಷ್ಟು ಅಂದರೆ ಮೂವತ್ಮೂರು ವರ್ಷಗಳು ನಮ್ಮವಲ್ಲ. ಇನ್ನು ಉಳಿದ ಮೂರರ ಕೊನೆಯ ಭಾಗದಲ್ಲಿಯೂ ಎಲ್ಲ ಗಳಿಗೆಗಳೂ ನಮ್ಮವೇ ಆಗಿ ಮನೆಯಲ್ಲಿ ಕಾಲುಚಾಚಿ ನಿಶ್ಚಿಂತೆಯಾಗಿ ,ಮನೆಯವರೊಂದಿಗೆ ಕಳೆದ ದಿನಗಳಾಗಿ ನಮಗೆ ದಕ್ಕುತ್ತವೆ ಎಂಬ ಮಾತು ಸುಳ್ಳು. ನಮ್ಮ ಸ್ವಂತದ, ಇತರರ ,ಅನಿವಾರ್ಯ ಕೆಲಸ , ಕಾರ್ಯಗಳಿಗಾಗಿಯೂ ಮನೆಯಿಂದ ದೂರವಿರುವ ಪ್ರಸಂಗಗಳು ಬರದಿರುತ್ತವೆಯೇ? ಅದರಲ್ಲಿ ಅಷ್ಟಿಷ್ಟು ಕಳೆದರೆ ನಮ್ಮವೆಂದು ಉಳಿದ ಗುಣಾತ್ಮಕ ಬದುಕಿನ ವರ್ಷಗಳೆಷ್ಟೆಂದು ನೋಡಿದರೆ ಬೆಚ್ಚಿ ಬೀಳಬಹುದು. ಎಷ್ಟೋ ಮನೆಗಳಲ್ಲಿ ಮಾಲಿಕರಿಗಿಂತ ಆಳು ಕಾಳುಗಳು, ಅವರು ಸಾಕಿದ ನಾಯಿ , ಬೆಕ್ಕುಗಳೇ ಹೆಚ್ಚು ಆರಾಮವಾಗಿ ಇರುವದು ಕಾಣ ಬರುತ್ತದೆ ಎಂಬುದು ಲೇಖನದ ಉದ್ದೇಶವಾಗಿತ್ತು. ಇದು ಸಧ್ಯದ soft ware ಜನಕ್ಕಂತೂ ನಿತ್ಯದ ಗೋಳು. ಮನೆ , ಆಫೀಸಿಗಿಂತ ಬೆಂಗಳೂರಿನ ರಸ್ತೆಗಳ ಸಿಗ್ನಲ್ಗಳಲ್ಲೇ ಬದುಕು ಕಳೆದು ಹೋಗಿಬಿಡುತ್ತದೆ ಎಂದೆನಿಸಿದ್ದು ಕನಿಷ್ಟ ನೂರು ಸಲ. ವಿಶ್ವದಾದ್ಯಂತ ಕೊರೋನಾ ವೈರಸ್ ಎಬ್ಬಿಸಿದ ಬಿರುಗಾಳಿ ಏನೆಲ್ಲ ಅನಿಷ್ಟಗಳಿಗೆ ಜನರನ್ನು ಗುರಿಯಾಗಿಸಿದೆ. ನಿಜ. ಆದರೆ ಎಲ್ಲೋ ಕಳೆದುಕೊಂಡಿದ್ದ ಮನೆಯ ,ಮನೆಜನರೊಂದಿಗಿನ ಸಹವಾಸದ ಸುಖವನ್ನು ಅಪರೂಪಕ್ಕೆ ಮರಳಿಸಿದೆ. Every thing happens with a reason ಎಂಬುದೊಂದು ಮಾತಿದೆ. ನಾವು ಚಿಕ್ಕವರಿದ್ದಾಗ ಯಾವುದೋ ಹನುಮಪ್ಪನ ಮೂರ್ತಿಯೊಂದು ಬೆಳೆಯುತ್ತ ಹೋಯಿತು.ಅದನ್ನು ತಡೆಯಲು ನೆತ್ತಿಗೆ ಹಾರಿ ಬಡೆಯಬೇಕಾಯಿತು ಎಂದು ಹೇಳುತ್ತಿದ್ದುದನ್ನು ಕೇಳಿದ್ದು ನೆನಪಿದೆ. ಅದು ಸುಳ್ಳೋ,ನಿಜವೋ ಜಿಜ್ಞಾಸೆ ಬಿಟ್ಟುಬಿಡೋಣ. ಆಧುನಿಕ ಮನುಷ್ಯನು ವಿಜ್ಞಾನದ ಸಹಾಯದಿಂದ ಪ್ರಕೃತಿಯಮೇಲೆ ನಡೆಸಿದ, ಈಗಲೂ ನಡೆಸುತ್ತಿರುವ ಅತಿಯಾದ ಅತ್ಯಾಚಾರಕ್ಕೊಂದು ಪ್ರತಿಭಟನೆ ಈಗೀಗ ಅನೇಕ ರೂಪಗಳಲ್ಲಿ ವ್ಯಕ್ತವಾಗುತ್ತಿದೆ, ಹಲವಾರು ಪ್ರಕ್ರತಿ ವಿಕೋಪಗಳ ಮುಖಾಂತರ... ಕೊರೋನಾ ಅಂಥದೇ ಒಂದು ನೈಸರ್ಗಿಕ ಪ್ರತಿರೋಧ ಎನ್ನಬಹುದು...ಕಣ್ಣಿಗೆ ಕಾಣದ ವೈರಸ್ಸೊಂದು ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಕೈಬೆರಳುಗಳಲ್ಲಿ ತನಗೆ ಬೇಕಾದಂತೆ ಕುಣಿಸುತ್ತಿದೆ. ಮನೆಬಿಟ್ಟು ಅಲ್ಲಾಡದಂತೆ ನಿಯಂತ್ರಿಸುತ್ತಿದೆ. ಸ್ವಲ್ಪು ಅವಿಧೇಯರಾದರೂ ಅಂಥವರ ಬಲಿ‌ ನಿರ್ದಯವಾಗಿ ನಡೆಯುತ್ತಿದೆ. ‌‌ಗೃಹಬಂಧನಕ್ಕೆ ಬೇಸತ್ತು ಮನೆಯಲ್ಲಿ ಕೈದು ಆಗಿ ಒದ್ದಾಡುತ್ತಿರುವವರು ಈ ಲೇಖನದ ಪೂರ್ವ ಭಾಗ ಓದಿ ನೋಡಿ ಮತ್ತೊಮ್ಮೆ. ಕಷ್ಟಪಟ್ಟು , ಸಾಲಮಾಡಿ, ಅನೇಕ ಕನಸುಗಳ ಹೊತ್ತು ಕಟ್ಟಿಸಿದ ಮನೆಗಳಲ್ಲಿ ಕಾಲುಚಾಚಿ ಹೊತ್ತು ಕಳೆವ ಸದವಕಾಶ ಮತ್ತೆ ಮತ್ತೆ ನಿಮಗೆ ಬರಲಾರದು ಎಂಬುದನ್ನು ಮನಗಂಡು, ಅಲಭ್ಯ ಲಾಭ ಎಂದು ತಿಳಿದು Enjoy ಸಿ. ನಮ್ಮ ಮನೆ ನಮ್ಮದೆಷ್ಟು ಅನ್ನದೇ, ನಮ್ಮ ಮನೆ ಪೂರಾ ನಮ್ಮದೇ ಎನ್ನಿ..

Monday 22 March 2021

೪೩ . ಪುಷ್ಟಿ ಮೈಗಾಗುವದು, ಹೊಟ್ಟೆ ಜೀರ್ಣಿಸುವಷ್ಟೇ... ' ಗದ್ಯಂ ವದ್ಯಂ ಪದ್ಯಂ ಹೃದ್ಯಂ ' ಎಂಬ ತತ್ವವನ್ನು ಓದಿ ನಿಜವೆನಿಸಿ ಒಪ್ಪಿ ಅಪ್ಪಿಕೊಂಡದ್ದು ನಾನು. ನಮ್ಮನೆಯಲ್ಲಿ ಎಲ್ಲರಿಗೂ ಸಾಹಿತ್ಯಾಸಕ್ತಿ ನಮ್ಮಪ್ಪನ ಬಳುವಳಿ. ಎಲ್ಲರಿಗೂ ವಿಪರೀತ ಓದಿನ ಹುಚ್ಚು. ಮನೆಯಲ್ಲಿ ಎಷ್ಟೇ ಇತರ ಕೊರತೆ ಇದ್ದರೂ ಪುಸ್ತಕಗಳ ಕೊರತೆ ಇರಲಿಲ್ಲ. ತಮ್ಮ ತಮ್ಮ ಓದಿನ ಆಸಕ್ತಿಯನ್ನು ಮನೆಯವರೆಲ್ಲರೂ ತಮ್ಮ ತಮ್ಮ ಆಸಕ್ತಿಯ ಹವ್ಯಾಸಗಳಿಗಾಗಿ ಬಳಸಿಕೊಂಡರು. ತಮ್ಮ , ಭಾಷಣಕ್ಕೆ ಒತ್ತು ಕೊಟ್ಟರೆ, ತಂಗಿ 'ಸಣ್ಣ ಕಥಾ' 'ಪ್ರಕಾರವನ್ನು ಆಯ್ದುಕೊಂಡಳು . ನಾನು ಕವನಕ್ಕೆ ಒಲಿದೆ. ನನ್ನ SSLC ಬೀಳ್ಕೊಡುಗೆ ಸಮಾರಂಭದಲ್ಲಿ ನಾ ಬರೆದ ಕವನವೊಂದನ್ನು ನನ್ನೊಬ್ಬ ಆತ್ಮೀಯ ಗೆಳತಿ ಹಾಡಿ ಇಬ್ಬರೂ ಬೆನ್ನು ತಟ್ಟಿಸಿಕೊಂಡಾಗ ನನ್ನ ಆಶೆ ಮೊಳಕೆಯೊಡೆಯಿತು. ಕವನ ಸಂಕಲನಗಳನ್ನು ಕೂಡಿಸುವುದು, ಅವುಗಳನ್ನು ಅನುಸರಿಸಿ ಕವನದ ಸಾಲುಗಳನ್ನು ಗೀಚುವುದು, ಯಾರೋ ಒಬ್ಬರು ನೋಡಿ ಮೆಚ್ಚಿದರೆ ಕವಯಿತ್ರಿ ಯಾಗಿ ಬಿಟ್ಟಂತೆ, ಸತ್ಕಾರ ಸಮಾರಂಭಗಳಾದಂತೆ ಕನಸು ಕಾಣುವುದು , ಮುಂತಾದ ಎಲ್ಲ 'ಹದಿನಾರರ ಹುಚ್ಚು ಖೋಡಿ ಮನಸ್ಸಿನ ಮಂಗಾಟಗಳನ್ನೂ' ಆಡುತ್ತಿದ್ದೆ. ಎಂಟನೇ ಕ್ಲಾಸಿನಲ್ಲಿ ABCD ತಿದ್ದಿದವಳು ನಾನು .ಇಂಗ್ಲಿಷ್ ಸಾಹಿತ್ಯದ ಅಭ್ಯಾಸಕ್ಕೆ ಒಲಿಯುವ ಭಂಡಧೈರ್ಯ ಮಾಡಿದೆ. ಆಗ class ನಲ್ಲಿ ಒಟ್ಟು ಬರಿ ಹತ್ತು ಗಂಡು ಹುಡುಗರು,ನಾನೊಬ್ಬಳೇ ವಿದ್ಯಾರ್ಥಿನಿ. ಆದರೂ ನನ್ನ ನಿರ್ಧಾರ ಸಡಿಲಾಗಲಿಲ್ಲ. ಅಣ್ಣನೂ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು ಅವನ ಗೆಳೆಯರು ನನ್ನ ಗುರುಗಳಾದದ್ದು ಒಂದು ಹೆಚ್ಚುವರಿ ಅನುಕೂಲವಾಗಿತ್ತು . ಮನಸ್ಸಿಗೆ ಬಂದದ್ದು ಗೀಚುವುದು ಬೇರೆ. ಬರೆಯುವುದೇ ಬೇರೆ, ಬರೆಯುವುದಕ್ಕೂ ಮೊದಲು ಹೆಚ್ಚು ಹೆಚ್ಚು ಓದಬೇಕು, ಅರಗಿಸಿಕೊಳ್ಳಬೇಕು, ಅನುಭವಗಳೂ ಬೆಂದು ಗಟ್ಟಿ ಪಾಕವಾಗಬೇಕು, ಎಂಬ ಅಂಶಗಳು ಕ್ರಮೇಣ ಅರ್ಥವಾಗತೊಡಗಿದವು. ನನ್ನ ಕಲಿಕೆ ಹಳ್ಳಿಯಲ್ಲಿ ಆದ್ದರಿಂದ ಇಂಗ್ಲೀಷ್ ತುಂಬಾ ತುಟ್ಟಿಯಾಗಿತ್ತು. ಓದಿದ್ದೆಲ್ಲವನ್ನೂ ಮೊದಲು ಕನ್ನಡಕ್ಕೆ ಮನಸ್ಸಿನಲ್ಲೇ ಭಾಷಾಂತರಿಸಿಕೊಂಡು, ನನಗೆ ತಿಳಿದಂತೆ ಸಾದಾ ಇಂಗ್ಲೀಷ್ನಲ್ಲಿ ಕಾಪಿ ಮಾಡುತ್ತಿದ್ದೆ. ನನ್ನ ಪ್ರಯತ್ನ ಪ್ರಾಮಾಣಿಕವಾಗಿತ್ತೋ, ಒಬ್ಬಳೇ ಹುಡುಗಿ ಎಂಬ ಅನುಕಂಪದ ಪರಿಣಾಮವೋ ಯಾವುದೋ ಒಂದು ಕೆಲಸಮಾಡಿ ನನ್ನ ಆಸಕ್ತಿ ಉಸಿರು ಕಳೆದುಕೊಳ್ಳದಂತೆ ಸಹಕರಿಸಿದವು. ಮೊದಲೇ ಹೇಳಿದಂತೆ ನಾನು ಕವಿತೆಯ ಕಡೆಗೆ ಹೆಚ್ಚು ವಾಲಿದೆ. ಆದರೆ ಅದು ಸುಲಭವಲ್ಲ ಎಂಬ ಸತ್ಯ ಗೊತ್ತಿದ್ದರೂ ಹಿಂಜರಿಯಲಿಲ್ಲ. ಆಗಿನ ಕಾಲದಲ್ಲಿ ಅನಾವಶ್ಯಕ ಪೈಪೋಟಿ ಇರಲಿಲ್ಲ ಎಂಬುದೊಂದು ಧನಾತ್ಮಕ ಅಂಶ ನನಗೆ. ಆಂಗ್ಲ ಕವಿ Keats ಹೇಳಿದಂತೆ," poetry is a spontaneous overflow of feelings recollected in TRANQUILITY ಎಂಬುದನ್ನು ನಮ್ಮ ಆಂಗ್ಲ ಶಿಕ್ಷಕರು ಮನಸ್ಸಿಗೆ ನಾಟುವಂತೆ ಮಾಡಿದ್ದರಿಂದ ನನ್ನ ಕಲಿಕೆಗೂ ವೇಗವಿರಲಿಲ್ಲ. ಅಂತೂ ಒಮ್ಮೆಯೂ ನಪಾಸ ಆಗದಂತೆ ಪದವಿ ಮುಗಿಯುತ್ತಿದ್ದಂತೆಯೇ ಅಲ್ಪ- ಸ್ವಲ್ಪ poetic vocabulary, ಪ್ರಾಸ ಬದ್ಧ ರಚನೆ, Meter, Rythm ಗಳ ಜ್ಞಾನವಿಲ್ಲದೇ ಕೆಲಸ ಸುಲಭವಿಲ್ಲ ಎಂಬ ಅರಿವು ನನ್ನ ಧೈರ್ಯಗುಂದಿಸಿತ್ತು. ನನಗೆ ಬಂದ ರೀತಿಯಲ್ಲಿ ಬರೆದು ಬಲ್ಲವರಿಗೆ ತೋರಿಸಿ ಸಲಹೆ ಪಡೆಯುವುದು, ಇತರ ಭಾಷೆಗಳ ಅನುವಾದ ,ಇಂಥ ಕೆಲಸವಲ್ಲದ ಕೆಲಸದಲ್ಲಿ ತೊಡಗಿಕೊಂಡು ಕ್ರಮೇಣ ಅಂಬೆಗಾಲಿಡುವದನ್ನು ಸುರು ಮಾಡಿದೆ. ನಂತರ ಶಿಕ್ಷಕಿಯಾಗಿ ಮಕ್ಕಳಿಗೆ ಕಲಿಸುತ್ತ, ಜೊತೆಜೊತೆಗೆ ಕಲಿಯುತ್ತಾ ಈಗ ಎಡವುತ್ತ ನಡೆಯುತ್ತಿದ್ದೇನೆ. ಅಷ್ಟಕ್ಕೂ ಇಂದಿಗೂ ಈ ನನ್ನ ಹವ್ಯಾಸ ನನ್ನ fb ಗೆ ಸೀಮಿತವಾಗುವಷ್ಟಾದರೂ ಕೈಹಿಡಿದು ನಡೆಸಿದ್ದು ಆಕಾಶವಾಣಿ ಹಾಗೂ 'ಸ್ವರಚಿತ ಕವನವಾಚನ' ಕಾರ್ಯಕ್ರಮಗಳು .ನವ್ಯ ಪದ್ಯಗಳನ್ನು ಆಸ್ವಾದಿಸುತ್ತೇನಾದರೂ ನನ್ನ ವೈಯಕ್ತಿಕ ಆಯ್ಕೆ ಗೇಯಪದ್ಯಗಳು. ಕಾವ್ಯ ವಾಚನ ಕ್ಕಿಂತಲೂ ಕಾವ್ಯ ಗಾಯನಕ್ಕೆ ನನ್ನ ಆದ್ಯತೆ. ಪ್ರಾಸ-ಪ್ರಸ್ತಾರದ ಕಡೆಗೆ ಒಲವು. ನಾವು ಎಷ್ಟೇ ಹೇಳಲಿ, ಬರೆಯಲೀ, ಪ್ರತಿಯೊಬ್ಬರಿಗೂ ಅವರದೇ ಆಯ್ಕೆಯ ಸ್ವಾತಂತ್ರ್ಯವನ್ನಂತೂ ಎಂದಿಗೂ ಅಲ್ಲಗಳೆಯಲಾಗದು.'ಕವಿತಾ ದಿನ ' ಅಂದ ಕೂಡಲೇ ನನ್ನ ಕವಿತಾಯಾನದ( ಹಾಗೆಂದು ಕರೆಯಬಹುದೇ- ಅನ್ನುವುದೂ ಒಂದು ಪ್ರಶ್ನೆ) ಒಂದು ಝಲಕ್ ಮನಸ್ಸಿನಲ್ಲಿ ಬಂದು ಕ್ಷಣಕಾಲ ಕಾಡಿದ್ದು ಹೀಗೇ...

Friday 19 March 2021

ಉಗ್ರ ಪ್ರತಾಪಿಯ ಭುಜಬಲದ
ಪರಾಕ್ರಮ??

         ಮೊನ್ನೆ ಮೈಸೂರಿಗೆ ಒಂದು ವಾರ ಹೋಗಿದ್ದೆ. ಕೊರೋನಾ ಗಲಾಟೆಯಿಂದಾಗಿ ಮರಳಿ ಬರುವ ವರೆಗೂ ಇಡೀ  ಊರು ಒಂದು ರೀತಿಯ ಜಡತ್ವದಲ್ಲಿತ್ತು .  ಅದು ನಮ್ಮನ್ನು ನಿಯಂತ್ರಿಸಲು  ತೊಡಗಿದಾಗ  ಮುಂಜಾಗ್ರತಾ ಕ್ರಮವಾಗಿ ಮೈ ಕೊಡವಿಕೊಂಡು ಏಳುವ ದಾರಿ ಹುಡುಕಲೇ ಬೇಕಾಯಿತು. ಸಿನೆಮಾಗಳಿಲ್ಲ, ನೆಂಟರ ಮನೆ ಮಾತೆತ್ತುವ  ಹಾಗಿಲ್ಲ, ಹೋಟೆಲು, ಪಾರ್ಕುಗಳೂ safe ಅಲ್ಲ.ಉಳಿದದ್ದು ಪೇಟೆಯಲ್ಲಿ ಒಂದು ರೌಂಡು ."ಕತ್ತೆ ತಪ್ಪಿಸಿಕೊಂಡರೆ ಹಾಳುಗೋಡೆ"  _ ಹೆಂಗಸರು ಕಾಣದಿದ್ದರೆ  ಸೀರೆ ಅಂಗಡಿ _ ಎಂತಾಯ್ತು, ಒಂದು ರೌಂಡು ಸೀರೆಗಳನ್ನಾದರೂ  ನೋಡಿದರಾಯಿತು, ಎಂದುಕೊಂಡು ಮಗಳೊಂದಿಗೆ ಒಂದು ಅಂಗಡಿಗೆ ಹೋದದ್ದಾಯಿತು  . ವ್ಯಾಪಾರ ಮಂದವಾಗಿದ್ದ ಕಾರಣ  sales boy ಆರಾಮಾಗಿ ತುಂಬ variety ಸೀರೆಗಳನ್ನು ಒಂದೊಂದಾಗಿ  ತಂದು ನಮಗೆ ತೋರಿಸುತ್ತಿದ್ದ. ನಮಗೋ ಅವನು ತೋರಿಸುತ್ತಿದ್ದ ಆದರ,  ಆಸಕ್ತಿ ಕಂಡು ಏನೋ VIP feelingಉ. ಅದನ್ನು ಸ್ವಲ್ಪ ಹೆಚ್ಚಾಗಿಯೇ ಆನಂದಿಸಿ ಬಿಡುವ ಲಾಲಚಿ ಮನಸ್ಸಾದದ್ದು ಸ್ವಾಭಾವಿಕ. ಆಗ ಅದೆಲ್ಲಿಂದ ಒಕ್ಕರಿಸಿತೋ  _ ಬಹುಶಃ  ನನಗಿದ್ದ AC/ FAN,  ಅಲರ್ಜಿ ಕಾರಣದಿಂದಾಗಿ ಇರಬೇಕು_ ಜೋರಾಗಿ ಸೀನು ಬಂತು. ತಗೊಳ್ಳಿ, ಜೇನು ಹುಟ್ಟಿಗೆ ಬೆಂಕಿ ಬಿದ್ದಂತೆ ಎಲ್ಲರೂ  ಕ್ಷಣಾರ್ಧದಲ್ಲಿ ಚೆಲ್ಲಾಪಿಲ್ಲಿ... ದೂರ  ಓಡಿಹೋಗಿ ನನ್ನನ್ನೇ 'ಕೊರೋನಾ virus' ನಂತೆ ಭಯಭೀತರಾಗಿ ಕಣ್ಣು ಅರಳಿಸಿ ನೋಡತೊಡಗಿದರು. ಕರೆದರೆ ಪ್ರತಿಕ್ರಿಯೆನೇ ಇಲ್ಲ.' ಎಲ್ಲ ಅಲ್ಲೇ ಇವೆ,  ನೋಡಿಕೊಳ್ಳಿ,  ನೀವು ಹೇಳಿದ range ನಲ್ಲಿ ಅಷ್ಟೇ ಇರೋದು' ಎಂದು ಹೇಳುವದರಲ್ಲಿ ಬೆವರಿಟ್ಟರು. ಇನ್ನು ಲಕ್ಷಗಟ್ಟಲೇ ಖರೀದಿಸಿದರೂ ಅವರಾರೂ ಸಮೀಪ ಸುಳಿಯುವದಿಲ್ಲ ಎಂಬುದು ಖಾತ್ರಿಯಾಗಿ  ನಾವೂ  ಮೆಟ್ಟಲು ಇಳಿಯಲೇಬೇಕಾಯಿತು..

           ‌‌‌ ' ಸಮಾನರಾರಿಹರು? ನಮ್ಮ ಸಮಾನರಾರಿಹರು? ಸಮಸ್ತ ಜಗದಲಿ, ಯುಗ ಯುಗಗಳಲಿ ನಮ್ಮ 
ಸಮಾನರಾರಿಹರು? ಹಳೆ ಚಿತ್ರಗೀತೆ ನೆನಪಾಗಿ, ನಗುಬಂತು. 

"ನಾನಾದರೂ 
ಏನು ಮಾಡಲೀ?
'ನಾನು'_ 
ಯಾವಾಗಲೂ
'ಉತ್ತಮ (ಪ್ರಥಮ)
ಪುರುಷ"...
ಎಂಬ ,

ಎಂದೋ ಓದಿದ ಹನಿಗವನ ನೆನಪಾಯ್ತು. ಸದಾ ' ಅಹಂ ಬ್ರಹ್ಮಾಸ್ಮಿ'
Pose ಕೊಟ್ಟು ಕೊಂಡಿರುವ ಮನುಷ್ಯ
ಪ್ರಾಣಭಯದ  ಮುಂದೆ ಎಷ್ಟೊಂದು ಅಲ್ಪನಾಗಿಬಿಡುತ್ತಾನೆ  ಎಂಬುದರ ಸಜೀವ ದೃಷ್ಟಾಂತ ಕಣ್ಣೆದುರಿಗೇ ಇತ್ತು.
ಬರಿಗಣ್ಣಿಗೆ ಕಾಣದ virus ಒಂದು ಇಂಥ ಭೂಪರನ್ನು ಮಂಡಿಯೂರಿಸಿದ ಪರಿ ನೋಡಿ, ಹೇಗಿದೆ?

           ‌   ಲೈಫು ಇಷ್ಟೇನೆ...

Friday 12 March 2021

26.ಆ ಸಮಯ... ಆನಂದಮಯ...



"ಎಷ್ಟೊತ್ತಾಯ್ತು ಬಂದು?'

" ಚಹ ಅಥವಾ ಕಾಫಿ?"

"ಇಲ್ಲ , ಇಲ್ಲ, ಬೇಡ..."

"ಮಜ್ಜಿಗೆಯಾದರೂ ತೆಗೆದುಕೊಳ್ಳಿ"

"ನಾಯಿಗೆ  ಹೆದರುತ್ತೀರಾ?  ಇಲ್ಲಾಂದ್ರೆ 'ಗೋಪೀ'ನ  ಇಲ್ಲಿಗೇ  ಕರೆಸಿಕೊಳ್ಳುತ್ತೇನೆ'

   ‌‌           ಹೀಗೆ ಪ್ರಾರಂಭವಾದ  , ನಮ್ಮ ಮಾತುಕತೆಯನ್ನು  ನಿರಾಳವಾಗಿ ಮುಗಿಸಿ ಹೊರಬಂದಾಗ  ಅರ್ಧ ಗಂಟೆ ಮೀರಿತ್ತು. "ದೊಡ್ಡವರ ಭೇಟಿ,  ಹೇಗೆ ನಡೆದುಕೊಂಡರೆ  ಹೇಗೋ ಏನೋ ಎಂಬ ಅಳುಕು ಅದಾಗಲೇ ಮಾಯವಾಗಿ  ಹೋಗಿತ್ತು. ಅಲ್ಲಿದ್ದಷ್ಟು ಹೊತ್ತೂ ಒಂದೇ ಒಂದು ನಿಮಿಷ ಅವರ ಸ್ಥಾನಮಾನದ ಅರಿವು ಮೂಡದಂತೆ, ಎಷ್ಟೋ ವರ್ಷಗಳ ಪರಿಚಯವಿದ್ದವರ ಹಾಗೆ,  ತಮ್ಮ ಹಣ, ಅಧಿಕಾರ,
ಅಂತಸ್ತು, ವಿದ್ಯೆ, ಬಿಸಿನೆಸ್ ಯಾವುದರ ಬಗ್ಗೆ ಒಂದಕ್ಷರವೂ  ಅವರ ಮಾತುಗಳಲ್ಲಿ ಇಣುಕದಂತೆ , ನಮ್ಮ ಬಗ್ಗೆ, ನಾನು ಅವರಿಗೆ  ಕೊಟ್ಟ' ನೀರ ಮೇಲೆ ಅಲೆಯ ಉಂಗುರ ' ಪುಸ್ತಕದ ಬಗ್ಗೆ, ನಮ್ಮೂರು  ಹುಬ್ಬಳ್ಳಿ ,  ಶಿಗ್ಗಾಂವ ಬಗ್ಗೆ, ಆಶ್ಚರ್ಯವೆಂದರೆ  ನನ್ನೂರು ರಟ್ಟೀಹಳ್ಳಿಯಲ್ಲಿರುವ ತಮ್ಮ ಪರಿಚಿತರ ಬಗ್ಗೆ,  ಅಲ್ಲಿಯ ಕುಮದ್ವತಿ ನದಿ, ಕದಂಬೇಶ್ವರ ದೇವಸ್ಥಾನಗಳ ಬಗ್ಗೆ, ಶಿಗ್ಗಾಂವಿಯ ತಮ್ಮ ಜೀವನದ ಬಗ್ಗೆ ತುಂಬ nostalgic ಆಗಿ ಮಾತನಾಡಿದ್ದಲ್ಲದೇ  ನಮಗೂ ಭೇಟಿಯನ್ನು ಅತ್ಯಂತ ಸರಳ, ಸುಲಭ, ಸಹಜವಾಗಿಸಿದ್ದು ಅವರ  ವಿಶೇಷ." ನಾನು ಕೊಟ್ಟ  ಪುಸ್ತಕವನ್ನು ಒಂದರೆಕ್ಷಣ ತಿರುವಿಹಾಕಿ " ನೀರ ಮೇಲೆ ಅಲೆಯ ಉಂಗುರ '_ಇದು "ಬೇಡಿ ಬಂದವಳು " ಚಿತ್ರಗೀತೆಯ ಸಾಲು. ಚಂದ್ರಕಲಾ ಅದರ ನಾಯಕಿ ,ಆ ಚಿತ್ರ ____ ಇಂಗ್ಲಿಷ  ಸಿನೆಮಾದ ( ಹೇಳಿದ ಹೆಸರು ನೆನಪಿಲ್ಲ) ಕನ್ನಡ 
ರೂಪಾಂತರ  ಆಧಾರಿತ  ಎಂದು ನೆನೆಸಿ ಆ ಹಾಡಿನ ಇನ್ನೂ ಎರಡು ,ಮೂರು ಸಾಲುಗಳನ್ನು  ಹಾಡಿದರು." ಖಂಡಿತ ಓದುತ್ತೇನೆ, ಪೂರ್ತಿಯಾಗಿಯೇ ಓದುತ್ತೇನೆ , ನಾನು ಓದುವದು  ನನ್ನ ವಿಮಾನ ಪಯಣದಲ್ಲಿ  ಮಾತ್ರ, ಉಳಿದಂತೆ  ಸಮಯದ ಕೊರತೆ' ಎಂದು ಹೇಳಿ, ತಮ್ಮ  ಇತ್ತೀಚೆಗಿನ ' soft ಮನ'  ಪುಸ್ತಕವನ್ನು ಸಹಿಯೊಂದಿಗೆ  ನನ್ನ ಕೈಗಿತ್ತರು.
               ‌ಇದಿಷ್ಟೂ ಯಾರ ಬಗ್ಗೆ ಎಂಬುದು ನಿಮಗೀಗ ಅರ್ಥವಾಗಿರಬಹುದು ಎಂದುಕೊಳ್ಳುತ್ತೇನೆ. ಅವರೇ ನಮ್ಮ ನಿಮ್ಮೆಲ್ಲರ ಹೆಮ್ಮೆಯ ಕನ್ನಡತಿ ಶ್ರೀಮತಿ ಸುಧಾ ಮೂರ್ತಿಯವರು.
 ನಾನವರ ಊರು ಶಿಗ್ಗಾಂವಿಗೆ  ತೀರಾ ಹತ್ತಿರದವಳು. ಅವರದೇ ಹುಬ್ಬಳ್ಳಿ_ ಧಾರವಾಡದ ಗಂಡು ಕನ್ನಡದಲ್ಲಿ ಮಾತು. ಅದೇ ಕಾರಣಕ್ಕೆ  ನನಗೂ ಅವರಿಗೂ ಹೋಲಿಕೆ  ಕಂಡ ಹಲವರಿದ್ದಾರೆ. ಅದರ ಬಗ್ಗೆ ಹೇಳಿ ನಕ್ಕಾಗ ಅವರು ," ನನಗೂ ಒಂದಿಬ್ಬರು  ನೀವು  ಥೇಟ್  ಸುಧಾ ಮೂರ್ತಿಯವರಂತೆಯೇ ಕಾಣುತ್ತೀರಿ ಎಂದು ಹೇಳಿದ್ದಿದೆ'  ಎಂದು  ನಸುನಕ್ಕರು. ನಾನು  ಅವರ  ಗುಂಪಿನ follower. ಅವರ ಭಾಷಣ, ವಿಡಿಯೋಗಳನ್ನು
ತಪ್ಪದೇ  follow  ಮಾಡುತ್ತೇನೆ. ಅವರ ಅನೇಕ ಪರಿಚಯಸ್ಥರು ನಮಗೂ ಚನ್ನಾಗಿ ಪರಿಚಯ. ಆದರೂ ಭೇಟಿಗೆ ಮೊದಲು ಕೊಂಚ ಅಳುಕಿತ್ತು. ಮಾತನಾಡಲು ಪ್ರಾರಂಭಿಸಿದ ಮೇಲೆ ಆ ಅಡ್ಡಗೋಡೆಯೂ ಬಿದ್ದುಹೋಗಿ ನಿರಾಳವಾಗಿ ನಡೆದ  ಅವರೊಂದಿಗಿನ ಸಂಭಾಷಣೆಯ  ಒಂದೊಂದು ಮಾತೂ ಒಂದೊಂದು ಮುತ್ತು. ಮತ್ತೊಂದು ನಾನು ಅವರಲ್ಲಿ  ಗಮನಿಸಿದ ಅಂಶವೆಂದರೆ,  ಅವರ ಬಗೆಗೆ ಅಕಸ್ಮಾತ್ತಾಗಿ  ಬಂದ ಯಾವುದೇ  ಪ್ರಶಂಸೆಯ  ಮಾತುಗಳನ್ನು  ಪ್ರಯತ್ನ ಪೂರ್ವಕವಾಗಿ ಜಾಣತನದಿಂದ ಮರೆಸಿ ಮಾಡುತ್ತಿದ್ದ  ವಿಷಯಾಂತರ. ಅಂಥ ವಿಷಯಗಳಿಗೆ ಮುದ್ದಾಂ ಆಗಿ ತೋರುತ್ತಿದ್ದ ನಿರಾಸಕ್ತಿ.  ನಮ್ಮ  ಅತ್ಯಂತ  ಚಿಕ್ಕ ಸಾಧನೆಯನ್ನೂ ಹಿರಿದಾಗಿಸಿ, ವೈಭವೀಕರಿಸಿ, ಹೆಚ್ಚು ಮಹತ್ತರವಾಗಿ ಪ್ರದರ್ಶಿಸುವ 'ರೋಗ' ಇದ್ದ ನಮ್ಮಂಥವರು ಕಲಿಯಬೇಕಾದ್ದು ಬೆಟ್ಟದಷ್ಟಿದೆ." ಎಂಬುದನ್ನು ಕಂಡುಕೊಂಡೆ ." ಅವರೇ ಸ್ವಂತಕ್ಕೆ ಒಂದು ವಿಶ್ವ ವಿದ್ಯಾಲಯವಿದ್ದಂತೆ"  ಎಂಬುವ ಮಾತನ್ನು  ಓದಿದ್ದೆ...ಕೇಳಿದ್ದೆ... ಇಂದು ಕಣ್ಣಾರೆ ಕಂಡೆ...ಹತ್ತು ಪುಸ್ತಕಗಳ ಓದು ಕೊಡಲಾರದಷ್ಟು ಬಂಡವಾಳವನ್ನು ನನ್ನ ಇಂದಿನ  ಭೇಟಿ  ಕೊಟ್ಟದ್ದು  ಮಾತ್ರ ನಿಜ...ನಮಗೆ ಕೊಟ್ಟ ಹದಿನೈದು ನಿಮಿಷದ ಅವಧಿ  ಇಮ್ಮಡಿಯಾಗಿ  ಅರ್ಧಗಂಟೆ  ಅದಾಗಲೇ ಮಿಕ್ಕಿ ಹೋದದ್ದು  ಗೊತ್ತಾದದ್ದು ಅವರ ಮುಂದಿನ ಭೇಟಿಯ schedule  ಅವರ ಗಮನಕ್ಕೆ ಅವರ ಸೆಕ್ರೆಟರಿ   ತಂದಾಗಲೇ. ' ಇನ್ನು ಸಾಕು' 'ಹೋಗಿಬನ್ನಿ' 'Time ಆಯ್ತು'  'ಮತ್ತೆ ಭೇಟಿಯಾಗೋಣ' ಇಂಥ  ಯಾವ ಮಾತುಗಳಿಲ್ಲದೇ ನಿಧಾನವಾಗಿ  ಸೋಫಾದಿಂದ  ಎದ್ದು , ಕೈಮುಗಿದು, ಬಾಗಿಲವರೆಗೆ ಬಂದು   ಸೌಜನ್ಯದಿಂದ  ಬೀಳ್ಕೊಟ್ಟದ್ದರಲ್ಲೂ  ನಮಗೊಂದು  ಘನವಾದ  ಕಲಿಕೆ...

               ಈ ಜನ್ಮದಲ್ಲಿ ಕಲಿಕೆಗೆ ಕೊನೆಯಿಲ್ಲ, ನಾವಿನ್ನೂ  ಏನೂ ಕಲಿತೇಯಿಲ್ಲ, ಅಥವಾ ಇನ್ನೂ ಕಲಿಯುವುದು ಸಾಕಷ್ಟಿದೆ   ಎಂಬ ನಮ್ರ ಭಾವವನ್ನು ಬಿತ್ತಿದ ಇಂಥ ಭೇಟಿಗಳು ನನಗೆ ಲಭಿಸುತ್ತಲೇ  ಇರಲಿ ಎಂಬ  ಸದಾಶಯ ಹೊತ್ತು ಸುಧಾ ತಾಯಿಯಿಂದ ಬೀಳ್ಕೊಂಡು ಬಂದೆ. ನಾನು 'ನೀರಮೇಲೆ ಅಲೆಯ ಉಂಗುರ ' ಬರೆಯುವಾಗ ಪ್ರೇರಣೆಯಾದದ್ದು ಅವರ ' ಸಾಮಾನ್ಯರಲ್ಲಿ ಅಸಾಮಾನ್ಯರು' ಕೃತಿ. ಅದರಲ್ಲಿ 'ನಾನೂ ಅವರಾಗಬಾರದಿತ್ತೇ?' ಹಾಗೂ' ಕಡಲೆ ಮತ್ತು ಹಲ್ಲುಗಳು' ಇವೆರಡೂ ಲೇಖನಗಳಿಗೆ ಅವರದೇ  ಬದುಕಿನ ಪ್ರೇರಣೆಯಿದೆ. ಮುದ್ರಣವಾದ ಕೂಡಲೇ ಅದರದೊಂದು ಪ್ರತಿ ಅವರ ಕೈಗಿತ್ತು ಆಶೀರ್ವಾದ ಪಡೆಯುವ ಚಿಕ್ಕ ಹಂಬಲವಿತ್ತು. ಆದರೆ ಅವರು ಇನ್ಫೋಸಿಸ್ ಪ್ರತಿಷ್ಠಾನದ ಕಾರ್ಯಕ್ರಮವೊಂದರಲ್ಲಿ ಸಂಪೂರ್ಣ ವ್ಯಸ್ತರಾದ್ದರಿಂದ ಭೇಟಿ ಸಾಧ್ಯವಾಗಿರಲಿಲ್ಲ. ಪುಸ್ತಕ ಬಿಡುಗಡೆಗೆ ನನ್ನ ಹುಟ್ಟುಹಬ್ಬ ಮೊದಲೇ ತಳುಕು ಹಾಕಿಕೊಂಡದ್ದರಿಂದ ಮುಂದೆ ಹಾಕುವಂತಿರಲಿಲ್ಲ. ಕಾರಣ ಅವರಿಗೆ ಪ್ರತಿ ಕೊಡುವದಾಗದೇ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಕೊಟ್ಟು ಮುಗಿಸಿ ಸಾಂಕೇತಿಕ ಬಿಡುಗಡೆ ಮಾಡಿ ಆಯಿತು. ನಂತರ ಅವರ ಭೇಟಿಯ ದಿನಾಂಕ ನಿಗದಿಯಾಗಿ  ಅವರಿಗೆ ಭೇಟಿಯಾಗಿ ಪ್ರತಿಕೊಟ್ಟು ಬಂದೆ. ಆದರೆ ಕೆಲವೇ ಕೆಲವು ನಿಮಿಷಗಳ  ಈ ಭೇಟಿಯ ಗುಂಗು ಸುಲಭವಾಗಿ ಮನಸ್ಸಿನಿಂದ ಅಳಿಯುವಂಥದ್ದಲ್ಲ. Thank you Sudha Murthy Madam...

ಬದುಕು ಜಟಕಾ ಬಂಡಿ...ವಿಧಿ ಅದರ ಸಾಹೇಬ...

"ಬದುಕು ಜಟಕಾ ಬಂಡಿ...ವಿಧಿಯದರ ಸಾಹೇಬ..."

        " ನಾಳೆ ನಮ್ಮನೆಯಲ್ಲಿ  ಶಿವರಾತ್ರಿಯ  ವಿಶೇಷ ಕಾರ್ಯಕ್ರಮ. ಬೆಳಿಗ್ಗೆ ಬೇಗನೇ ಕೆಲವು ಪೂಜೆಗಳನ್ನು 
 ಇಟ್ಟುಕೊಂಡಿದ್ದೇವೆ  ನೀವು ಹಿರಿಯರು ಮುಂದೆ ನಿಂತು ನಡೆಸಿಕೊಡಬೇಕು, ಆದಷ್ಟು ಬೇಗನೇ ಮುಗಿಸುವ ವಿಚಾರವಿದೆ, ಇಲ್ಲದಿದ್ದರೆ ಯಾರಿಗೂ ವಿಶ್ರಾಂತಿಯಾಗುವದಿಲ್ಲ. ಬೇಗನೇ ಬಂದು ಬಿಡಿ." 

            ಇದು ನಮ್ಮಕ್ಕನಿಗೆ ಬಂದ ಆಗ್ರಹದ ಆಮಂತ್ರಣ. ಅವಳಿಗೋ ಇಂಥದಕ್ಕೆಲ್ಲ ಸಂಭ್ರಮವೋ ಸಂಭ್ರಮ. ಅತಿ ಅನಿವಾರ್ಯ ಕಾರಣಗಳಿಲ್ಲದೇ ಯಾವುದನ್ನೂ ತಪ್ಪಿಸಿಕೊಳ್ಳುವ ಸ್ವಭಾವ ಅವಳದಲ್ಲವೇ ಅಲ್ಲ. ಬರುವದಾಗಿ ಭರವಸೆ ಕೊಟ್ಟು, ಮರುದಿನ ಉಡಬೇಕಿದ್ದ ಸೀರೆ, ಕುಪ್ಪುಸಗಳನ್ನು ಗಳದ ಮೇಲೆ ಕೊಡವಿ ಹಾಕಿಯಾಯಿತು.

             ಮರುದಿನ ಐದು ಗಂಟೆಗೇ ಮನೆಯ ದೀಪ ಹತ್ತಿದವು. ಮನೆಯಂಗಳ ಗುಡಿಸಿ, ಸಾರಿಸಿ ಗುಡಿಗೆ ಬೇಗ ಹೋಗಬೇಕು. ಮಾಸೂರಿನಲ್ಲಿ ಅವರದೇ ಮನೆತನದ ಒಂದು ದೇವಸ್ಥಾನವಿದೆ. ಸೋದರರು ಪಾಳಿಯ ಮೇಲೆ ಪೂಜೆ, ಉತ್ಸವಗಳ ಜವಾಬ್ದಾರಿ ಹೊರುವದು ರೂಢಿ. ಆ ವರ್ಷ ಅವರದೇ ಸರದಿ. ನಸುಕಿನಲ್ಲಿಯೇ ಎದ್ದು, ಗರ್ಭಗುಡಿ , ಒಳಾಂಗಣ ಹೊರಾಂಗಣಗಳನ್ನು ಉಡುಗಿ, ತೊಳೆದು, ರಂಗೋಲಿ ಹಾಕಿ, ನಂದಾ ದೀಪಕ್ಕೆ ಎಣ್ಣೆ ಎರೆದು ಬಂದು ಬಿಟ್ಟರೆ ಮುಂದಿನ ಪೂಜೆಯ ಜವಾಬ್ದಾರಿ ಮನೆಯ ಗಂಡಸರಿಗೆ ರವಾನೆ.
            ‌ಬೇಗಕಾರ್ಯಕ್ರಮಕ್ಕೆ ಸಿದ್ಧವಾಗುವ ಯೋಚನೆ-
ಯೊಂದಿಗೆ ಮನೆಯ ಬಾಗಿಲು ತೆರೆದಾಯಿತು. ಆಗ ಕಾಲ್ಬೆರಳುಗಳಿಗೆ ಏನೋ ಚುಚ್ಚಿದ ಹಾಗಾಗಿ, ಫಕ್ಕನೇ ದೀಪ ಹೊತ್ತಿಸಿ ನೋಡಿದರೆ ಏನೇನೂ ಇಲ್ಲ. ಮಣ್ಣಿನ ಮನೆ, ಕಮತದ ಹಿತ್ತಲು, ಕಾಳುಕಡಿಗಳ ದಾಸ್ತಾನು, ಇಲಿಗಳಿಗೇನೂ ಬರವಿಲ್ಲ. ಒಳಗೆ ಹೋಗಿ, ರಕ್ತ ಒರೆಸಿ, ಅದಕ್ಕಿಷ್ಟು ಅರಿಷಿಣ ಬಳಿದು, ಒಂದು ಬಟ್ಟೆ ಸುತ್ತಿ , ಗುಡಿಗೆ ಹೋಗಿ ಸಾಂಗವಾಗಿ ಅಂದುಕೊಂಡದ್ದು, ಮಾಡ- ಬೇಕಾದ್ದು ಮಾಡಿಮುಗಿಸಿ ಮನೆಗೆ ಹೊರಡಬೇಕು, ಏನೋ ಸಂಕಟ, ಗಲಿಬಿಲಿ, ಅರ್ಥವಾಗದ ಕಳವಳ, ಕಣ್ಣು ಪಟಪಟ ಹೊಡೆಯುವದು ಎಲ್ಲ ಸುರುವಾಯ್ತು. ಎರಡು ಹೆಜ್ಜೆ ಹೇಗೋ ಬಂದವಳಿಗೆ ಮನೆಯವರೆಗೂ ನಡೆಯಲಾಗಿಲ್ಲ. ಯಾರದೋ ಕಟ್ಟೆಗೆ ಸುಧಾರಿಸಿಕೊಳ್ಳಲು ಕುಳಿತಾಗ ಅವರಿವರು ವಿಷಯ ತಿಳಿದು ತುರ್ತಾಗಿ ದವಾಖಾನೆಗೆ ಒಯ್ಯುವ ಸಿದ್ಧತೆ ನಡೆದಾಗ ಅವಳು ಹೇಳಿದ್ದು," ನನಗೇನೂ ಆಗಿಲ್ಲ, ಒಬ್ಬರು ನನ್ನ ಜೊತೆ ಸಾಕು, ಬೆಳಗಿನ ಹೊತ್ತು, ನಿಮ್ಮ ನಿಮ್ಮ ಕೆಲಸ ಮಾಡಿಕೊಳ್ಳಿ". 
                ಅವಳ ಹೆಸರೇ ' ವಸುಮತಿ', ಭೂಮಿ ತೂಕದ ತಾಳ್ಮೆ. ಮಾತಿನಲ್ಲೂ. ಕೃತಿಯಲ್ಲೂ...

    ‌ ಆದರೆ ಕೆಲವರು ತುರ್ತು ಅವಳನ್ನು ಆಟೋ ದಲ್ಲಿ ಕರೆದುಕೊಂಡು ಹೊರಟಾಗ ನಿಧಾನವಾಗಿ ಕಣ್ಣುಮುಚ್ಚಿ ಪ್ರಜ್ಞೆ ತಪ್ಪಿದವಳನ್ನು ದವಾಖಾನೆಗೆ ಕರೆದೊಯ್ದಾಗ ಏನೂ ಉಳಿದಿರಲೇ ಇಲ್ಲ, ಅವಳ ಉಸಿರು, ಕರೆದೊಯ್ದವರ ಭರವಸೆ, ಉಪಚಾರದ ಯಾವುದೇ ವಿಧಾನ, ಎಲ್ಲವೂ ವ್ಯರ್ಥವಾಗಿತ್ತು. ನೂರಾರು ಜನರನ್ನು ಹಾವಿನ ಕಡಿತದ  ನಂತರವೂ  ಬದುಕಿಸಿದ  ಸ್ವ್ವ್ವ್
ಡಾಕ್ಟರ್,  ಮನೆಮಗಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಪರಿತಪಿಸಿದ ರೀತಿ ಎಲ್ಲರನ್ನೂ ಕಂಗೆಡಿಸಿತ್ತು.
             ಕಡಿದದ್ದು ಏನು ಎಂಬುದು ಮೊದಲೇ ತಿಳಿಯದಿದ್ದುದು, ಎಂದೂ ಯಾವುದಕ್ಕೂ,ಯಾರನ್ನೂ
ಬೇಡದ ನಮ್ಮಕ್ಕನ ಅಂತರ್ಮುಖಿ ಸ್ವಭಾವ, ಅಂಥ ಹಳ್ಳಿಯ ಮನೆಗಳಲ್ಲಿ ಅದೂ ಇದೂ ಕಚ್ಚುವದು ಅತ್ಯಂತ ಸಾಮಾನ್ಯವೆಂಬ ಅನಿಸಿಕೆ ಇವುಗಳಲ್ಲಿ ಯಾವುದಕ್ಕೆ ಅವಳ ಜೀವ ಬೇಕಿತ್ತೋ ಇಂದಿಗೂ ಅರ್ಥವಾಗಿಲ್ಲ. ವಿಷಯವೆಂದರೆ, ಅಂದು ಅವಳ ಉಸಿರು ನಿಲ್ಲಿಸಿದ್ದು ಹಾವೋ, ವಿಷದ ಚೇಳೋ, ಅಥವಾ ಬೇರಿನ್ನೇನು ಎಂಬುದು ನಮಗಿನ್ನೂ ಗೂಢ. ಕಣ್ಣಿಗೆ ಕಂಡಿದ್ದರೆ 
ಏನಾದರೂ ಮಾಡಬಹುದಿತ್ತು. ಅದರಲ್ಲೇ ಅವಳ ಕೊನೆ ಇರುವಾಗ ದೈವ ಅವಳಿಗೆ ಆ ಅವಕಾಶವನ್ನೂ ಬಿಟ್ಟುಕೊಡಲಿಲ್ಲ. ಅನಸ್ಥೇಸಿಯಾ Dose ಹೆಚ್ಚಾದರೆ ನಿದ್ರೆಗೆ ಜಾರಿದವರು ಚಿರನಿದ್ರೆಗೆ ಜಾರಿದಂತೆ ,ಅವಳು ಹಾಕಿದ ಅಂಗಳದ ನೀರು ಆರುವ ಮೊದಲೇ, ಇಟ್ಟ ರಂಗೋಲಿ ಅಳಿಸುವ ಮೊದಲೇ, ತೆಗೆದಿಟ್ಟ ಸೀರೆಯುಟ್ಟು ಸಂಭ್ರಮಿಸುವ ಮೊದಲೇ, ಪೂರ್ವದಲ್ಲಿ ಕಂಡ ಸೂರ್ಯ ಇಡಿಯಾಗಿ ಮೇಲೇಳುವ ಮೊದಲೇ ,ಎಲ್ಲರಿಗೂ ಇದು ಏನಾಗಿದೆ, ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಸದಾ ಶಾಂತಸ್ವಭಾವದ,
ಯಾವುದೇ ಸದ್ದು ಗದ್ದಲ ಗೊತ್ತಿರದ, ಆಳ ನೀರಿನಂತೆ ಗಂಭೀರವಾಗಿಯೇ ಇದ್ದು, ಇಲ್ಲವಾದವಳ ಕಥೆ
ನಮ್ಮ ಬದುಕಿನ ದುರಂತ ಅಧ್ಯಾಯವಾದದ್ದು ಮಾತ್ರ ನಮ್ಮನ್ನು ಸತತ ಕಾಡದೇ ಬಿಡದು.
          ಇದು ನಡೆದದ್ದು ೨೦೦೭ ರಲ್ಲಿ. ಹದಿಮೂರು ವರ್ಷಗಳ ಹಿಂದೆ. ಮುಂದೆ ಹರಿಯುವ ನೀರು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವದಿಲ್ಲ. ಕೆಲವೊಮ್ಮೆ ಬೇಡವಾದುದನ್ನು ನಮ್ಮೆದುರೇ ದಂಡೆಗೆ ಎಳೆದು ಹಾಕಿ ನಮ್ಮನ್ನು ಕಾಡುತ್ತಲೇ ಇರುತ್ತದೆ.
         ನಿಜ, ಬದುಕು ಜಟಕಾಬಂಡಿ...ವಿಧಿಯದರ ಸಾಹೇಬ, ಮದುವೆಗೋ...
ಮಸಣಕೋ ಅದರದೇ ಚಿತ್ತ...😒😒😒😒😒. ನೀವು ಹಿರಿಯರು, ಮುಂದೆ ನಿಂತು ನಡೆಸಿಕೊಡಬೇಕು, ಆದಷ್ಟು ಬೇಗನೇ ಮುಗಿಸುವ ವಿಚಾರವಿದೆ, ಇಲ್ಲದಿದ್ದರೆ ಯಾರಿಗೂ ವಿಶ್ರಾಂತಿಯಾಗುವದಿಲ್ಲ. ಬೇಗನೇ ಬಂದು ಬಿಡಿ." 

            ಇದು ನಮ್ಮಕ್ಕನಿಗೆ ಬಂದ ಆಗ್ರಹದ ಆಮಂತ್ರಣ. ಅವಳಿಗೋ ಇಂಥದಕ್ಕೆಲ್ಲ ಸಂಭ್ರಮವೋ ಸಂಭ್ರಮ. ಅತಿ ಅನಿವಾರ್ಯ ಕಾರಣಗಳಿಲ್ಲದೇ ಯಾವುದನ್ನೂ ತಪ್ಪಿಸಿಕೊಳ್ಳುವ ಸ್ವಭಾವ ಅವಳದಲ್ಲವೇ ಅಲ್ಲ. ಬರುವದಾಗಿ ಎಂದುಭರವಸೆ ಕೊಟ್ಟು, ಮರುದಿನ ಉಡಬೇಕಿದ್ದ ಸೀರೆ, ಕುಪ್ಪುಸಗಳನ್ನು ಗಳದ ಮೇಲೆ ಕೊಡವಿ ಹಾಕಿಯಾಯಿತು.

             ಮರುದಿನ ಐದು ಗಂಟೆಗೇ ಮನೆಯ ದೀಪ ಹತ್ತಿದವು. ಮನೆಯಂಗಳ ಗುಡಿಸಿ, ಸಾರಿಸಿ ಗುಡಿಗೆ ಬೇಗ ಹೋಗಬೇಕು. ಮಾಸೂರಿನಲ್ಲಿ ಅವರದೇ ಮನೆತನದ ಶ್ರೀರಾಮ ದೇವಸ್ಥಾನವಿದೆ. ಸೋದರರು ಪಾಳಿಯ ಮೇಲೆ ಪೂಜೆ, ಉತ್ಸವಗಳ ಜವಾಬ್ದಾರಿ ಹೊರುವದು ರೂಢಿ. ಆ ವರ್ಷ ಅವರದೇ ಸರದಿ. ನಸುಕಿನಲ್ಲಿಯೇ ಎದ್ದು, ಗರ್ಭಗುಡಿ , ಒಳಾಂಗಣ ಹೊರಾಂಗಣಗಳನ್ನು ಉಡುಗಿ, ತೊಳೆದು, ರಂಗೋಲಿ ಹಾಕಿ, ನಂದಾ ದೀಪಕ್ಕೆ ಎಣ್ಣೆ ಎರೆದು ಬಂದು ಬಿಟ್ಟರೆ ಮುಂದಿನ ಪೂಜೆಯ ಜವಾಬ್ದಾರಿ ಮನೆಯ ಗಂಡಸರಿಗೆ ರವಾನೆ.
            ‌ಬೇಗಕಾರ್ಯಕ್ರಮಕ್ಕೆ ಸಿದ್ಧವಾಗುವ ಯೋಚನೆ-
ಯೊಂದಿಗೆ ಮನೆಯ ಬಾಗಿಲು ತೆರೆದಾಯಿತು. ಆಗ ಕಾಲ್ಬೆರಳುಗಳಿಗೆ ಏನೋ ಚುಚ್ಚಿದ ಹಾಗಾಗಿ, ಫಕ್ಕನೇ ದೀಪ ಹೊತ್ತಿಸಿ ನೋಡಿದರೆ ಏನೇನೂ ಇಲ್ಲ. ಮಣ್ಣಿನ ಮನೆ, ಕಮತದ ಹಿತ್ತಲು, ಕಾಳುಕಡಿಗಳ ದಾಸ್ತಾನು, ಇಲಿಗಳಿಗೇನೂ ಬರವಿಲ್ಲ. ಒಳಗೆ ಹೋಗಿ, ರಕ್ತ ಒರೆಸಿ, ಅದಕ್ಕಿಷ್ಟು ಅರಿಷಿಣ ಬಳಿದು, ಒಂದು ಬಟ್ಟೆ ಸುತ್ತಿ , ಗುಡಿಗೆ ಹೋಗಿ ಸಾಂಗವಾಗಿ ಅಂದುಕೊಂಡದ್ದು, ಮಾಡ- ಬೇಕಾದ್ದು ಮಾಡಿಮುಗಿಸಿ ಮನೆಗೆ ಹೊರಡಬೇಕು, ಏನೋ ಸಂಕಟ, ಗಲಿಬಿಲಿ, ಅರ್ಥವಾಗದ ಕಳವಳ,ಕಣ್ಣು ಪಟಪಟ ಹೊಡೆಯುವದು ಎಲ್ಲ ಸುರುವಾಯ್ತು. ಎರಡು ಹೆಜ್ಜೆ ಹೇಗೋ ಬಂದವಳಿಗೆ ಮನೆಯವರೆಗೂ ನಡೆಯಲಾಗಿಲ್ಲ. ಯಾರದೋ ಕಟ್ಟೆಗೆ ಸುಧಾರಿಸಿಕೊಳ್ಳಲು ಕುಳಿತಾಗ ಅವರಿವರು ವಿಷಯ ತಿಳಿದು ತುರ್ತಾಗಿ ದವಾಖಾನೆಗೆ ಒಯ್ಯುವ ಸಿದ್ಧತೆ ನಡೆದಾಗ ಅವಳು ಹೇಳಿದ್ದು," ನನಗೇನೂ ಆಗಿಲ್ಲ, ಒಬ್ಬರು ನನ್ನ ಜೊತೆ ಸಾಕು, ಬೆಳಗಿನ ಹೊತ್ತು, ನಿಮ್ಮ ನಿಮ್ಮ ಕೆಲಸ ಮಾಡಿಕೊಳ್ಳಿ". 
                ಅವಳ ಹೆಸರೇ ' ವಸುಮತಿ', ಭೂಮಿ ತೂಕದ ತಾಳ್ಮೆ...ಮಾತಿನಲ್ಲೂ...ಕೃತಿಯಲ್ಲೂ...

    ‌ ಆದರೆ ಕೆಲವರು ತುರ್ತು ಅವಳನ್ನು ಆಟೋ ದಲ್ಲಿ ಕರೆದುಕೊಂಡು ಹೊರಟಾಗ ನಿಧಾನವಾಗಿ ಕಣ್ಣುಮುಚ್ಚಿ ಪ್ರಜ್ಞೆ ತಪ್ಪಿದವಳನ್ನು ದವಾಖಾನೆಗೆ ಕರೆದೊಯ್ದಾಗ ಏನೂ ಉಳಿದಿರಲೇ ಇಲ್ಲ,ಅವಳ ಉಸಿರು, ಕರೆದೊಯ್ದವರ ಭರವಸೆ, ಉಪಚಾರದ ಯಾವುದೇ ವಿಧಾನ, ಎಲ್ಲವೂ ವ್ಯರ್ಥವಾಗಿತ್ತು. ನೂರಾರು ಜನರನ್ನು ಬದುಕಿಸಿದ ಸ್ವತಃ ಡಾಕ್ಟರ್,ಮನೆಮಗಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಪರಿತಪಿಸಿದ ರೀತಿ ಎಲ್ಲರನ್ನೂ ಕಂಗೆಡಿಸಿತ್ತು.
             ಕಡಿದದ್ದು ಏನು ಎಂಬುದು ಮೊದಲೇ ತಿಳಿಯದಿದ್ದುದು, ಎಂದೂ ಯಾವುದಕ್ಕೂ,ಯಾರನ್ನೂ
ಬೇಡದ ನಮ್ಮಕ್ಕನ ಅಂತರ್ಮುಖಿ ಸ್ವಭಾವ, ಅಂಥ ಹಳ್ಳಿಯ ಮನೆಗಳಲ್ಲಿ ಅದೂ ಇದೂ ಕಚ್ಚುವದು ಅತ್ಯಂತ ಸಾಮಾನ್ಯವೆಂಬ ಅನಿಸಿಕೆ ಇವುಗಳಲ್ಲಿ ಯಾವುದಕ್ಕೆ ಅವಳ ಜೀವ ಬೇಕಿತ್ತೋ ಇಂದಿಗೂ ಅರ್ಥವಾಗಿಲ್ಲ. ವಿಷಯವೆಂದರೆ, ಅಂದು ಅವಳ ಉಸಿರು ನಿಲ್ಲಿಸಿದ್ದು ಹಾವೋ, ವಿಷದ ಚೇಳೋ, ಅಥವಾ ಬೇರಿನ್ನೇನು ಎಂಬುದು ನಮಗಿನ್ನೂ ಗೂಢ. ಕಣ್ಣಿಗೆ ಕಂಡಿದ್ದರೆ 
ಏನಾದರೂ ಮಾಡಬಹುದಿತ್ತು. ಅದರಲ್ಲೇ ಅವಳ ಕೊನೆ ಇರುವಾಗ ದೈವ ಅವಳಿಗೆ ಆ ಅವಕಾಶವನ್ನೂ ಬಿಟ್ಟುಕೊಡಲಿಲ್ಲ. ಅನಸ್ಥೇಸಿಯಾ Dose ಹೆಚ್ಚಾದರೆ ನಿದ್ರೆಗೆ ಜಾರಿದವರು ಚಿರನಿದ್ರೆಗೆ ಜಾರಿದಂತೆ ,ಅವಳು ಹಾಕಿದ ಅಂಗಳದ ನೀರು ಆರುವ ಮೊದಲೇ, ಇಟ್ಟ ರಂಗೋಲಿ ಅಳಿಸುವ ಮೊದಲೇ, ತೆಗೆದಿಟ್ಟ ಸೀರೆಯುಟ್ಟು ಸಂಭ್ರಮಿಸುವ ಮೊದಲೇ, ಪೂರ್ವದಲ್ಲಿ ಕಂಡ ಸೂರ್ಯ ಇಡಿಯಾಗಿ ಮೇಲೇಳುವ ಮೊದಲೇ ,ಎಲ್ಲರಿಗೂ ಇದು ಏನಾಗಿದೆ, ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಸದಾ ಶಾಂತಸ್ವಭಾವದ,
ಯಾವುದೇ ಸದ್ದು ಗದ್ದಲ ಗೊತ್ತಿರದ, ಆಳ ನೀರಿನಂತೆ ಗಂಭೀರವಾಗಿಯೇ ಇದ್ದು, ಇಲ್ಲವಾದವಳ ಕಥೆ
ನಮ್ಮ ಬದುಕಿನ ದುರಂತ ಅಧ್ಯಾಯವಾದದ್ದು ಮಾತ್ರ ನಮ್ಮನ್ನು ಸತತ ಕಾಡದೇ ಬಿಡದು.
          ಇದು ನಡೆದದ್ದು ೨೦೦೭ ರಲ್ಲಿ. ಹದಿಮೂರು ವರ್ಷಗಳ ಹಿಂದೆ. ಮುಂದೆ ಹರಿಯುವ ನೀರು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವದಿಲ್ಲ. ಕೆಲವೊಮ್ಮೆ ಬೇಡವಾದುದನ್ನು ನಮ್ಮೆದುರೇ ದಂಡೆಗೆ ಎಳೆದು ಹಾಕಿ ನಮ್ಮನ್ನು ಕಾಡುತ್ತಲೇ ಇರುತ್ತದೆ.
         ನಿಜ, ಬದುಕು ಜಟಕಾಬಂಡಿ...ವಿಧಿಯದರ ಸಾಹೇಬ, ಮದುವೆಗೋ...
ಮಸಣಕೋ ಅದರದೇ ಚಿತ್ತ...😒😒😒😒😒ರ್ಯಕ್ರಮ. ನೀವು ಹಿರಿಯರು, ಮುಂದೆ ನಿಂತು ನಡೆಸಿಕೊಡಬೇಕು, ಆದಷ್ಟು ಬೇಗನೇ ಮುಗಿಸುವ ವಿಚಾರವಿದೆ, ಇಲ್ಲದಿದ್ದರೆ  ಯಾರಿಗೂ ವಿಶ್ರಾಂತಿಯಾಗುವದಿಲ್ಲ. ಬೇಗನೇ ಬಂದು ಬಿಡಿ." 

            ಇದು ನಮ್ಮಕ್ಕನಿಗೆ  ಬಂದ ಆಗ್ರಹದ ಆಮಂತ್ರಣ. ಅವಳಿಗೋ ಇಂಥದಕ್ಕೆಲ್ಲ ಸಂಭ್ರಮವೋ ಸಂಭ್ರಮ. ಅತಿ ಅನಿವಾರ್ಯ ಕಾರಣಗಳಿಲ್ಲದೇ ಯಾವುದನ್ನೂ ತಪ್ಪಿಸಿಕೊಳ್ಳುವ ಸ್ವಭಾವ ಅವಳದಲ್ಲವೇ ಅಲ್ಲ. ಬರುವದಾಗಿ ಭರವಸೆ ಕೊಟ್ಟು, ಮರುದಿನ ಉಡಬೇಕಿದ್ದ ಸೀರೆ, ಕುಪ್ಪುಸಗಳನ್ನು  ಗಳದ ಮೇಲೆ ಕೊಡವಿ ಹಾಕಿಯಾಯಿತು.

             ಮರುದಿನ ಐದು ಗಂಟೆಗೇ ಮನೆಯ ದೀಪ ಹತ್ತಿದವು. ಮನೆಯಂಗಳ ಗುಡಿಸಿ, ಸಾರಿಸಿ ಗುಡಿಗೆ ಬೇಗ ಹೋಗಬೇಕು. ಮಾಸೂರಿನಲ್ಲಿ ಅವರದೇ ಮನೆತನದ ಶ್ರೀರಾಮ ದೇವಸ್ಥಾನವಿದೆ. ಸೋದರರು ಪಾಳಿಯ ಮೇಲೆ ಪೂಜೆ, ಉತ್ಸವಗಳ ಜವಾಬ್ದಾರಿ ಹೊರುವದು ರೂಢಿ. ಆ ವರ್ಷ ಅವರದೇ ಸರದಿ. ನಸುಕಿನಲ್ಲಿಯೇ ಎದ್ದು, ಗರ್ಭಗುಡಿ , ಒಳಾಂಗಣ ಹೊರಾಂಗಣಗಳನ್ನು ಉಡುಗಿ, ತೊಳೆದು, ರಂಗೋಲಿ ಹಾಕಿ, ನಂದಾ ದೀಪಕ್ಕೆ ಎಣ್ಣೆ ಎರೆದು ಬಂದು ಬಿಟ್ಟರೆ ಮುಂದಿನ ಪೂಜೆಯ ಜವಾಬ್ದಾರಿ ಮನೆಯ ಗಂಡಸರಿಗೆ ರವಾನೆ.
            ‌ಬೇಗಕಾರ್ಯಕ್ರಮಕ್ಕೆ ಸಿದ್ಧವಾಗುವ  ಯೋಚನೆ-
ಯೊಂದಿಗೆ ಮನೆಯ ಬಾಗಿಲು ತೆರೆದಾಯಿತು. ಆಗ ಕಾಲ್ಬೆರಳುಗಳಿಗೆ ಏನೋ ಚುಚ್ಚಿದ ಹಾಗಾಗಿ, ಫಕ್ಕನೇ ದೀಪ ಹೊತ್ತಿಸಿ ನೋಡಿದರೆ  ಏನೇನೂ ಇಲ್ಲ. ಮಣ್ಣಿನ ಮನೆ, ಕಮತದ ಹಿತ್ತಲು, ಕಾಳುಕಡಿಗಳ ದಾಸ್ತಾನು, ಇಲಿಗಳಿಗೇನೂ ಬರವಿಲ್ಲ. ಒಳಗೆ ಹೋಗಿ, ರಕ್ತ ಒರೆಸಿ, ಅದಕ್ಕಿಷ್ಟು ಅರಿಷಿಣ ಬಳಿದು, ಒಂದು ಬಟ್ಟೆ ಸುತ್ತಿ , ಗುಡಿಗೆ  ಹೋಗಿ ಸಾಂಗವಾಗಿ ಅಂದುಕೊಂಡದ್ದು, ಮಾಡ- ಬೇಕಾದ್ದು ಮಾಡಿಮುಗಿಸಿ ಮನೆಗೆ ಹೊರಡಬೇಕು, ಏನೋ ಸಂಕಟ, ಗಲಿಬಿಲಿ, ಅರ್ಥವಾಗದ  ಕಳವಳ,ಕಣ್ಣು ಪಟಪಟ ಹೊಡೆಯುವದು ಎಲ್ಲ ಸುರುವಾಯ್ತು. ಎರಡು ಹೆಜ್ಜೆ ಹೇಗೋ ಬಂದವಳಿಗೆ ಮನೆಯವರೆಗೂ ನಡೆಯಲಾಗಿಲ್ಲ. ಯಾರದೋ ಕಟ್ಟೆಗೆ ಸುಧಾರಿಸಿಕೊಳ್ಳಲು ಕುಳಿತಾಗ ಅವರಿವರು ವಿಷಯ ತಿಳಿದು ತುರ್ತಾಗಿ ದವಾಖಾನೆಗೆ ಒಯ್ಯುವ ಸಿದ್ಧತೆ ನಡೆದಾಗ ಅವಳು ಹೇಳಿದ್ದು," ನನಗೇನೂ ಆಗಿಲ್ಲ, ಒಬ್ಬರು  ನನ್ನ ಜೊತೆ ಸಾಕು, ಬೆಳಗಿನ ಹೊತ್ತು, ನಿಮ್ಮ ನಿಮ್ಮ ಕೆಲಸ  ಮಾಡಿಕೊಳ್ಳಿ". 
     ‌‌‌           ಅವಳ ಹೆಸರೇ ' ವಸುಮತಿ', ಭೂಮಿ ತೂಕದ ತಾಳ್ಮೆ...ಮಾತಿನಲ್ಲೂ...ಕೃತಿಯಲ್ಲೂ...

    ‌‌‌‌      ‌‌‌    ಆದರೆ  ಕೆಲವರು ತುರ್ತು ಅವಳನ್ನು ಆಟೋ ದಲ್ಲಿ  ಕರೆದುಕೊಂಡು ಹೊರಟಾಗ ನಿಧಾನವಾಗಿ ಕಣ್ಣುಮುಚ್ಚಿ  ಪ್ರಜ್ಞೆ ತಪ್ಪಿದವಳನ್ನು  ದವಾಖಾನೆಗೆ ಕರೆದೊಯ್ದಾಗ  ಏನೂ ಉಳಿದಿರಲೇ ಇಲ್ಲ,ಅವಳ ಉಸಿರು, ಕರೆದೊಯ್ದವರ ಭರವಸೆ, ಉಪಚಾರದ ಯಾವುದೇ ವಿಧಾನ, ಎಲ್ಲವೂ ವ್ಯರ್ಥವಾಗಿತ್ತು. ನೂರಾರು ಜನರನ್ನು ಬದುಕಿಸಿದ ಸ್ವತಃ ಡಾಕ್ಟರ್,ಮನೆಮಗಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಪರಿತಪಿಸಿದ ರೀತಿ ಎಲ್ಲರನ್ನೂ ಕಂಗೆಡಿಸಿತ್ತು.
             ಕಡಿದದ್ದು ಏನು ಎಂಬುದು ಮೊದಲೇ ತಿಳಿಯದಿದ್ದುದು, ಎಂದೂ ಯಾವುದಕ್ಕೂ,ಯಾರನ್ನೂ
ಬೇಡದ ನಮ್ಮಕ್ಕನ ಅಂತರ್ಮುಖಿ ಸ್ವಭಾವ, ಅಂಥ ಹಳ್ಳಿಯ ಮನೆಗಳಲ್ಲಿ ಅದೂ ಇದೂ ಕಚ್ಚುವದು ಅತ್ಯಂತ ಸಾಮಾನ್ಯವೆಂಬ ಅನಿಸಿಕೆ ಇವುಗಳಲ್ಲಿ ಯಾವುದಕ್ಕೆ ಅವಳ ಜೀವ ಬೇಕಿತ್ತೋ  ಇಂದಿಗೂ ಅರ್ಥವಾಗಿಲ್ಲ. ವಿಷಯವೆಂದರೆ, ಅಂದು ಅವಳ ಉಸಿರು ನಿಲ್ಲಿಸಿದ್ದು ಹಾವೋ, ವಿಷದ ಚೇಳೋ, ಅಥವಾ ಬೇರಿನ್ನೇನು ಎಂಬುದು ನಮಗಿನ್ನೂ ಗೂಢ. ಕಣ್ಣಿಗೆ ಕಂಡಿದ್ದರೆ 
ಏನಾದರೂ ಮಾಡಬಹುದಿತ್ತು. ಅದರಲ್ಲೇ  ಅವಳ ಕೊನೆ ಇರುವಾಗ  ದೈವ ಅವಳಿಗೆ ಆ ಅವಕಾಶವನ್ನೂ ಬಿಟ್ಟುಕೊಡಲಿಲ್ಲ. ಅನಸ್ಥೇಸಿಯಾ Dose ಹೆಚ್ಚಾದರೆ ನಿದ್ರೆಗೆ ಜಾರಿದವರು ಚಿರನಿದ್ರೆಗೆ ಜಾರಿದಂತೆ ,ಅವಳು ಹಾಕಿದ ಅಂಗಳದ ನೀರು ಆರುವ ಮೊದಲೇ, ಇಟ್ಟ ರಂಗೋಲಿ ಅಳಿಸುವ ಮೊದಲೇ, ತೆಗೆದಿಟ್ಟ ಸೀರೆಯುಟ್ಟು ಸಂಭ್ರಮಿಸುವ ಮೊದಲೇ, ಪೂರ್ವದಲ್ಲಿ ಕಂಡ ಸೂರ್ಯ ಇಡಿಯಾಗಿ ಮೇಲೇಳುವ ಮೊದಲೇ ,ಎಲ್ಲರಿಗೂ ಇದು ಏನಾಗಿದೆ, ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಸದಾ ಶಾಂತಸ್ವಭಾವದ,
ಯಾವುದೇ ಸದ್ದು ಗದ್ದಲ ಗೊತ್ತಿರದ, ಆಳ ನೀರಿನಂತೆ ಗಂಭೀರವಾಗಿಯೇ ಇದ್ದು, ಇಲ್ಲವಾದವಳ  ಕಥೆ
ನಮ್ಮ ಬದುಕಿನ ದುರಂತ ಅಧ್ಯಾಯವಾದದ್ದು ಮಾತ್ರ ನಮ್ಮನ್ನು ಸತತ ಕಾಡದೇ ಬಿಡದು.
      ‌‌‌    ಇದು ನಡೆದದ್ದು ೨೦೦೭ ರಲ್ಲಿ. ಹದಿಮೂರು ವರ್ಷಗಳ ಹಿಂದೆ. ಮುಂದೆ ಹರಿಯುವ ನೀರು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವದಿಲ್ಲ. ಕೆಲವೊಮ್ಮೆ  ಬೇಡವಾದುದನ್ನು ನಮ್ಮೆದುರೇ ದಂಡೆಗೆ ಎಳೆದು ಹಾಕಿ  ನಮ್ಮನ್ನು ಕಾಡುತ್ತಲೇ ಇರುತ್ತದೆ.
         ನಿಜ, ಬದುಕು ಜಟಕಾಬಂಡಿ...ವಿಧಿಯದರ ಸಾಹೇಬ, ಮದುವೆಗೋ...
ಮಸಣಕೋ  ಅದರದೇ ಚಿತ್ತ...😒😒😒😒😒. ನೀವು ಹಿರಿಯರು, ಮುಂದೆ ನಿಂತು ನಡೆಸಿಕೊಡಬೇಕು, ಆದಷ್ಟು ಬೇಗನೇ ಮುಗಿಸುವ ವಿಚಾರವಿದೆ, ಇಲ್ಲದಿದ್ದರೆ  ಯಾರಿಗೂ ವಿಶ್ರಾಂತಿಯಾಗುವದಿಲ್ಲ. ಬೇಗನೇ ಬಂದು ಬಿಡಿ." 

            ಇದು ನಮ್ಮಕ್ಕನಿಗೆ  ಬಂದ ಆಗ್ರಹದ ಆಮಂತ್ರಣ. ಅವಳಿಗೋ ಇಂಥದಕ್ಕೆಲ್ಲ ಸಂಭ್ರಮವೋ ಸಂಭ್ರಮ. ಅತಿ ಅನಿವಾರ್ಯ ಕಾರಣಗಳಿಲ್ಲದೇ ಯಾವುದನ್ನೂ ತಪ್ಪಿಸಿಕೊಳ್ಳುವ ಸ್ವಭಾವ ಅವಳದಲ್ಲವೇ ಅಲ್ಲ. ಬರುವದಾಗಿ ಎಂದುಭರವಸೆ ಕೊಟ್ಟು, ಮರುದಿನ ಉಡಬೇಕಿದ್ದ ಸೀರೆ, ಕುಪ್ಪುಸಗಳನ್ನು  ಗಳದ ಮೇಲೆ ಕೊಡವಿ ಹಾಕಿಯಾಯಿತು.

             ಮರುದಿನ ಐದು ಗಂಟೆಗೇ ಮನೆಯ ದೀಪ ಹತ್ತಿದವು. ಮನೆಯಂಗಳ ಗುಡಿಸಿ, ಸಾರಿಸಿ ಗುಡಿಗೆ ಬೇಗ ಹೋಗಬೇಕು. ಮಾಸೂರಿನಲ್ಲಿ ಅವರದೇ ಮನೆತನದ ಶ್ರೀರಾಮ ದೇವಸ್ಥಾನವಿದೆ. ಸೋದರರು ಪಾಳಿಯ ಮೇಲೆ ಪೂಜೆ, ಉತ್ಸವಗಳ ಜವಾಬ್ದಾರಿ ಹೊರುವದು ರೂಢಿ. ಆ ವರ್ಷ ಅವರದೇ ಸರದಿ. ನಸುಕಿನಲ್ಲಿಯೇ ಎದ್ದು, ಗರ್ಭಗುಡಿ , ಒಳಾಂಗಣ ಹೊರಾಂಗಣಗಳನ್ನು ಉಡುಗಿ, ತೊಳೆದು, ರಂಗೋಲಿ ಹಾಕಿ, ನಂದಾ ದೀಪಕ್ಕೆ ಎಣ್ಣೆ ಎರೆದು ಬಂದು ಬಿಟ್ಟರೆ ಮುಂದಿನ ಪೂಜೆಯ ಜವಾಬ್ದಾರಿ ಮನೆಯ ಗಂಡಸರಿಗೆ ರವಾನೆ.
            ‌ಬೇಗಕಾರ್ಯಕ್ರಮಕ್ಕೆ ಸಿದ್ಧವಾಗುವ  ಯೋಚನೆ-
ಯೊಂದಿಗೆ ಮನೆಯ ಬಾಗಿಲು ತೆರೆದಾಯಿತು. ಆಗ ಕಾಲ್ಬೆರಳುಗಳಿಗೆ ಏನೋ ಚುಚ್ಚಿದ ಹಾಗಾಗಿ, ಫಕ್ಕನೇ ದೀಪ ಹೊತ್ತಿಸಿ ನೋಡಿದರೆ  ಏನೇನೂ ಇಲ್ಲ. ಮಣ್ಣಿನ ಮನೆ, ಕಮತದ ಹಿತ್ತಲು, ಕಾಳುಕಡಿಗಳ ದಾಸ್ತಾನು, ಇಲಿಗಳಿಗೇನೂ ಬರವಿಲ್ಲ. ಒಳಗೆ ಹೋಗಿ, ರಕ್ತ ಒರೆಸಿ, ಅದಕ್ಕಿಷ್ಟು ಅರಿಷಿಣ ಬಳಿದು, ಒಂದು ಬಟ್ಟೆ ಸುತ್ತಿ , ಗುಡಿಗೆ  ಹೋಗಿ ಸಾಂಗವಾಗಿ ಅಂದುಕೊಂಡದ್ದು, ಮಾಡ- ಬೇಕಾದ್ದು ಮಾಡಿಮುಗಿಸಿ ಮನೆಗೆ ಹೊರಡಬೇಕು, ಏನೋ ಸಂಕಟ, ಗಲಿಬಿಲಿ, ಅರ್ಥವಾಗದ  ಕಳವಳ,ಕಣ್ಣು ಪಟಪಟ ಹೊಡೆಯುವದು ಎಲ್ಲ ಸುರುವಾಯ್ತು. ಎರಡು ಹೆಜ್ಜೆ ಹೇಗೋ ಬಂದವಳಿಗೆ ಮನೆಯವರೆಗೂ ನಡೆಯಲಾಗಿಲ್ಲ. ಯಾರದೋ ಕಟ್ಟೆಗೆ ಸುಧಾರಿಸಿಕೊಳ್ಳಲು ಕುಳಿತಾಗ ಅವರಿವರು ವಿಷಯ ತಿಳಿದು ತುರ್ತಾಗಿ ದವಾಖಾನೆಗೆ ಒಯ್ಯುವ ಸಿದ್ಧತೆ ನಡೆದಾಗ ಅವಳು ಹೇಳಿದ್ದು," ನನಗೇನೂ ಆಗಿಲ್ಲ, ಒಬ್ಬರು  ನನ್ನ ಜೊತೆ ಸಾಕು, ಬೆಳಗಿನ ಹೊತ್ತು, ನಿಮ್ಮ ನಿಮ್ಮ ಕೆಲಸ  ಮಾಡಿಕೊಳ್ಳಿ". 
     ‌‌‌           ಅವಳ ಹೆಸರೇ ' ವಸುಮತಿ', ಭೂಮಿ ತೂಕದ ತಾಳ್ಮೆ...ಮಾತಿನಲ್ಲೂ...ಕೃತಿಯಲ್ಲೂ...

    ‌‌‌‌      ‌‌‌    ಆದರೆ  ಕೆಲವರು ತುರ್ತು ಅವಳನ್ನು ಆಟೋ ದಲ್ಲಿ  ಕರೆದುಕೊಂಡು ಹೊರಟಾಗ ನಿಧಾನವಾಗಿ ಕಣ್ಣುಮುಚ್ಚಿ  ಪ್ರಜ್ಞೆ ತಪ್ಪಿದವಳನ್ನು  ದವಾಖಾನೆಗೆ ಕರೆದೊಯ್ದಾಗ  ಏನೂ ಉಳಿದಿರಲೇ ಇಲ್ಲ,ಅವಳ ಉಸಿರು, ಕರೆದೊಯ್ದವರ ಭರವಸೆ, ಉಪಚಾರದ ಯಾವುದೇ ವಿಧಾನ, ಎಲ್ಲವೂ ವ್ಯರ್ಥವಾಗಿತ್ತು. ನೂರಾರು ಜನರನ್ನು ಬದುಕಿಸಿದ ಸ್ವತಃ ಡಾಕ್ಟರ್,ಮನೆಮಗಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಪರಿತಪಿಸಿದ ರೀತಿ ಎಲ್ಲರನ್ನೂ ಕಂಗೆಡಿಸಿತ್ತು.
             ಕಡಿದದ್ದು ಏನು ಎಂಬುದು ಮೊದಲೇ ತಿಳಿಯದಿದ್ದುದು, ಎಂದೂ ಯಾವುದಕ್ಕೂ,ಯಾರನ್ನೂ
ಬೇಡದ ನಮ್ಮಕ್ಕನ ಅಂತರ್ಮುಖಿ ಸ್ವಭಾವ, ಅಂಥ ಹಳ್ಳಿಯ ಮನೆಗಳಲ್ಲಿ ಅದೂ ಇದೂ ಕಚ್ಚುವದು ಅತ್ಯಂತ ಸಾಮಾನ್ಯವೆಂಬ ಅನಿಸಿಕೆ ಇವುಗಳಲ್ಲಿ ಯಾವುದಕ್ಕೆ ಅವಳ ಜೀವ ಬೇಕಿತ್ತೋ  ಇಂದಿಗೂ ಅರ್ಥವಾಗಿಲ್ಲ. ವಿಷಯವೆಂದರೆ, ಅಂದು ಅವಳ ಉಸಿರು ನಿಲ್ಲಿಸಿದ್ದು ಹಾವೋ, ವಿಷದ ಚೇಳೋ, ಅಥವಾ ಬೇರಿನ್ನೇನು ಎಂಬುದು ನಮಗಿನ್ನೂ ಗೂಢ. ಕಣ್ಣಿಗೆ ಕಂಡಿದ್ದರೆ 
ಏನಾದರೂ ಮಾಡಬಹುದಿತ್ತು. ಅದರಲ್ಲೇ  ಅವಳ ಕೊನೆ ಇರುವಾಗ  ದೈವ ಅವಳಿಗೆ ಆ ಅವಕಾಶವನ್ನೂ ಬಿಟ್ಟುಕೊಡಲಿಲ್ಲ. ಅನಸ್ಥೇಸಿಯಾ Dose ಹೆಚ್ಚಾದರೆ ನಿದ್ರೆಗೆ ಜಾರಿದವರು ಚಿರನಿದ್ರೆಗೆ ಜಾರಿದಂತೆ ,ಅವಳು ಹಾಕಿದ ಅಂಗಳದ ನೀರು ಆರುವ ಮೊದಲೇ, ಇಟ್ಟ ರಂಗೋಲಿ ಅಳಿಸುವ ಮೊದಲೇ, ತೆಗೆದಿಟ್ಟ ಸೀರೆಯುಟ್ಟು ಸಂಭ್ರಮಿಸುವ ಮೊದಲೇ, ಪೂರ್ವದಲ್ಲಿ ಕಂಡ ಸೂರ್ಯ ಇಡಿಯಾಗಿ ಮೇಲೇಳುವ ಮೊದಲೇ ,ಎಲ್ಲರಿಗೂ ಇದು ಏನಾಗಿದೆ, ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಸದಾ ಶಾಂತಸ್ವಭಾವದ,
ಯಾವುದೇ ಸದ್ದು ಗದ್ದಲ ಗೊತ್ತಿರದ, ಆಳ ನೀರಿನಂತೆ ಗಂಭೀರವಾಗಿಯೇ ಇದ್ದು, ಇಲ್ಲವಾದವಳ  ಕಥೆ
ನಮ್ಮ ಬದುಕಿನ ದುರಂತ ಅಧ್ಯಾಯವಾದದ್ದು ಮಾತ್ರ ನಮ್ಮನ್ನು ಸತತ ಕಾಡದೇ ಬಿಡದು.
      ‌‌‌    ಇದು ನಡೆದದ್ದು ೨೦೦೭ ರಲ್ಲಿ. ಹದಿಮೂರು ವರ್ಷಗಳ ಹಿಂದೆ. ಮುಂದೆ ಹರಿಯುವ ನೀರು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವದಿಲ್ಲ. ಕೆಲವೊಮ್ಮೆ  ಬೇಡವಾದುದನ್ನು ನಮ್ಮೆದುರೇ ದಂಡೆಗೆ ಎಳೆದು ಹಾಕಿ  ನಮ್ಮನ್ನು ಕಾಡುತ್ತಲೇ ಇರುತ್ತದೆ.
         ನಿಜ, ಬದುಕು ಜಟಕಾಬಂಡಿ...ವಿಧಿಯದರ ಸಾಹೇಬ, ಮದುವೆಗೋ...
ಮಸಣಕೋ  ಅದರದೇ ಚಿತ್ತ...😒😒😒😒😒

Saturday 6 March 2021

 "ಅವಳ ತೊಡಿಗೆ ಇವಳಿಗಿಟ್ಟು ನೋಡಬಯಸಿದೆ..."
        ‌‌‌‌‌    
          ‌‌‌‌‌  ಸುಮಾರು ಎರಡು ದಿನಗಳ ಹಿಂದೆ ಬೆಳಿಗ್ಗೆ ನನ್ನ  mobile ಸದ್ದಾಯಿತು. ಎತ್ತಿ 'ಹಲೋ' ಎಂದೆ.

" ನಮಸ್ಕಾರ ಮ್ಯಾಡಮ್, ಕೃಷ್ಣಾ ಕೌಲಗಿಯವರು ಬೇಕಾಗಿತ್ತು".

" ನಮಸ್ಕಾರ ಸರ್, ನಾನೇ ಮಾತಾಡ್ತಿರೋದು, ಹೇಳಿ"

" ನಿಮ್ಮ  ಪುಸ್ತಕ ಬಂದು ಮುಟ್ಟಿದೆ  ಮ್ಯಾಡಮ್. ತುಂಬ ಚನ್ನಾಗಿದೆ. ಸುಲಭವಾಗಿ  ಓದಿಸಿಕೊಂಡು  ಹೋಗ್ತಿದೆ. ಅಭಿನಂದನೆಗಳು ನಿಮಗೆ".

" ಸರ್, ಧನ್ಯವಾದಗಳು , ನಿಮ್ಮ ಅಭಿಪ್ರಾಯಕ್ಕೆ. ಖುಶಿಯಾಯ್ತು".

" ಇನ್ನೊಂದು ಮಾತು ಹೇಳಬಹುದಾ ಮ್ಯಾಡಮ್, ತಪ್ಪು ಭಾವಿಸಬಾರದು".

" ಇಲ್ಲ , ದಯವಿಟ್ಟು  ಹೇಳಿ"

"ನೀವು ಕನ್ನಡ ಲೇಖನಗಳಲ್ಲಿ ಇಂಗ್ಲಿಷ/ ಹಿಂದಿ ಶೀರ್ಷಿಕೆ, ಹಾಗೂ  ಪದಗಳ ಬಳಕೆ ಮಾಡಬಾರದಿತ್ತು" .

"ಊಟ  ಅಚ್ಚ  ಕನ್ನಡದ್ದೇ ಸರ್.  ಭಾಷೆಯ ಬಳಕೆ ಬರಿ  ಉಪ್ಪಿನಕಾಯಿ/ ಚಟ್ನಿಯಿದ್ದ ಹಾಗೇ".

" ಅದೂ ಬೇಡವಾಗಿತ್ತು. ನೀವು ಶಿಕ್ಷಕಿ. ಮೇಲಾಗಿ  ಹಿರಿಯರು.
ನೀವೇ ಕನ್ನಡ ಪೋಷಿಸದಿದ್ದರೆ ಹೇಗೆ? ಅಲ್ವಾ?"

" ಅದು ಕನ್ನಡದ ಅವಗಣನೆ ಅಲ್ಲ ಸರ್. ಕನ್ನಡಕ್ಕಿಷ್ಟು ಅಲಂಕಾರ. ಅಲ್ಲದೇ ಪ್ರತಿವರ್ಷ ಸಾವಿರಾರು ಕನ್ನಡ ಪದಗಳು ಆಕ್ಸಫರ್ಡ ಶಬ್ದಕೋಶದಲ್ಲಿ
ಇದ್ದ ರೀತಿಯಲ್ಲೇ ಒಪ್ಪಿತವಾಗುತ್ತಿವೆ. ಸರ್ವಸಮ್ಮತವೆನಿಸುತ್ತವೆ.  ವಿವಿಧ ಭಾಷೆಗಳ ನಡುವಣ ಅಡ್ಡಗೋಡೆ ಶಿಥಿಲವಾಗ್ತಿದೆ. ರೈಲು ನಿಲ್ದಾಣ, ದ್ವಿಚಕ್ರವಾಹನ, ಮಹಾವಿದ್ಯಾಲಯ, ಉಗಿಬಂಡಿ ,ವರ್ತಮಾನ ಪತ್ರಿಕೆಗಳು  ಹೀಗೆ ಬಳಸಿದರೆ ಸುಲಭಕ್ಕೆ ಅರ್ಥವಾಗದಷ್ಟು railway station, bicycle, college, University, Train , ಪೇಪರ್ಗಳು  ಕನ್ನಡದಲ್ಲಿ  ಹಾಸು ಹೊಕ್ಕಾಗಿವೆ. ಅಲ್ವಾ?"

"ಇರಬಹುದು  ಮ್ಯಾಡಮ್, ಆದರೂ ಅವೇ ಶಬ್ದಗಳನ್ನು ಕನ್ನಡ ಲಿಪಿಯಲ್ಲಿ ಬರೆಯೋಣ, ನಮ್ಮ ಊರಲ್ಲಿ ಸರಕಾರೀ ಕನ್ನಡ ಶಾಲೆಯಲ್ಲಿ ಇಂಗ್ಲಿಷ ಅಂಕಿಗಳನ್ನು ಬರೆಯುತ್ತಿದ್ದರು, ನಾನು ದಿನಾಲೂ ಶಾಲೆಗೆ ಹೋಗಿ ಕನ್ನಡದಲ್ಲಿ  ಕಲಿಸಲೇ
ಬೇಕೆಂದು ಆಗ್ರಹಿಸಿದೆ. ಈಗ ಅದನ್ನು  ಮಾಡುತ್ತಿದ್ದಾರೆ.
ನಾವು ಕೆಲ ಹಿರಿಯರಾದರೂ ಕನ್ನಡ ಉಳಿಸಲು ಪ್ರಯತ್ನಿಸೋಣ ಮ್ಯಾಡಮ್, ನಾಳಿನ ಪೀಳಿಗೆಗೆ ' ಬಿತ್ತಲು ಕನ್ನಡದ ಬೀಜಗಾಳುಗಳನ್ನು ಕಾಯ್ದಿಡೋಣ. ಇಲ್ಲದಿದ್ದರೆ  ನಮ್ಮ ಕನ್ನಡ ಬಹುಕಾಲ
ಉಳಿಯುವುದಿಲ್ಲ ಅಲ್ಲವೇ
ಮ್ಯಾಡಮ್?."

              ‌ನಿಜವಾದ ಅರ್ಥದಲ್ಲಿ ಯಾವುದೇ ಪ್ರಚಾರದ ಗೀಳಿಗೆ ಬೀಳದೇ  ಮನದಾಳದಿಂದ ಕನ್ನಡಕ್ಕಾಗಿ ಮಿಡಿಯುವ  ಹಿರಿಯ ,ಪ್ರಬುದ್ಧ ಹೃದಯವೊಂದನ್ನು ವೈಚಾರಿಕವಾಗಿ ವಾದಕ್ಕಿಳಿಸಿ  ಗಾಸಿಗೊಳಿಸಲು ಮನಸ್ಸಾಗಲಿಲ್ಲ. ಅವರು "' ನವೆಂಬರ್ ತಿಂಗಳಿಗೆ" ಮಾತ್ರ ಸೀಮಿತರಾದ ಕನ್ನಡಿಗರಾಗಿರಲಿಲ್ಲ. ಹುಟ್ಟಾ ಕನ್ನಡಿಗರಾಗಿದ್ದರು. ಅವರನ್ನು ಎದುರಿಸುವ ಯಾವುದೇ ಸಮರ್ಥವಾದ ಅಸ್ತ್ರ ನನ್ನ ಬತ್ತಳಿಕೆಯಲ್ಲಿ ಇರಲಿಲ್ಲ.ಬುದ್ಧಿ ಮಾತಾಡಿದ್ದರೆ ನನ್ನಮೆದುಳೂ ಉತ್ತರಿಸುತ್ತಿತ್ತು .ಅಲ್ಲಿ ಮಾತಾಡಿದ್ದು ಹೃದಯ. ಎರಡಕ್ಕೂ ತಾಳಮೇಳವಿರುವದಿಲ್ಲ ಎಂದೆನಿಸಿ ಅವರಿಗೆ ' ಆಯಿತು' ಎಂದು ಹೇಳಿ ಮಾತು ಮುಗಿಸಿ ಫೋನಿಟ್ಟೆ.
              'ಇಂಗ್ಲಿಷ  ಗೀತಗಳು' ಎಂಬ ಹೆಸರಿನಲ್ಲಿ ಅನೇಕ ಇಂಗ್ಲಿಷ ಭಾಷೆಯ ಅತ್ಯಮೂಲ್ಯ ಕವನಗಳನ್ನು ಕನ್ನಡಕ್ಕೆ ಕೊಟ್ಟ ಬಿ.ಎಮ್.ಶ್ರೀಯವರೇ ' ಅವಳ ತೊಡುಗೆ ಇವಳಿಗಿಟ್ಟು ನೋಡಬಯಸಿದೆ'_ ಎಂದಿದ್ದಾರೆ. ಇಂಗ್ಲಿಷ್ ಬೀಜಗಳನ್ನು ಬಿತ್ತಿ ಕನ್ನಡದ ಸಮೃದ್ಧ ಫಸಲು ತೆಗೆಯುವ ಕೆಲಸ ಮಾಡಿದ್ದಾರೆ. "ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು" ದಂಥ ಹಲವಾರು ಕವನಗಳು ಇಂಥ ಪ್ರಯತ್ನಗಳ ಫಲಶ್ರುತಿ.    ನಾನು ಅವರ ಪರಮ ಭಕ್ತೆ. ನನಗೆ ಕನ್ನಡದ ಬಗ್ಗೆ ಅಸಡ್ಡೆ ಇಲ್ಲ. ಇಂಗ್ಲಿಷ/ ಹಿಂದಿ  ನನ್ನ ಪದವಿಯ ವಿಷಯಗಳಾದರೂ ನನ್ನ ಬರಹಗಳಿಗೆ  ಕನ್ನಡವೇ ಆದ್ಯ.
ಏನಾದರೂ ಬೇರೆ ಭಾಷೆಯ ಒಲವಿದ್ದರೆ ಅದು ನನ್ನ ಕನ್ನಡವನ್ನು ಅಲಂಕರಿಸಿ ಚಂದಗೊಳಿಸಲಿಕ್ಕೆ ಮಾತ್ರ.
ಅನೇಕರು ' ನೀರ  ಮೇಲೆ ಅಲೆಯ ಉಂಗುರ" ದ ಅನ್ಯ ಭಾಷೆಯ ಶೀರ್ಷಿಕೆಗಳನ್ನು  ಮನಸಾರೆ ಮೆಚ್ಚಿದ್ದಾರೆ. ಪ್ರಶಂಶಿಸಿದ್ದಾರೆ. ಹಾಗೆಂದ ಮಾತ್ರಕ್ಕೆ  ನನಗೆ ಫೋನು ಮಾಡಿ ಸಲಹೆಯೊಂದನ್ನು ಕೊಟ್ಟ ಹಿರಿಯರನ್ನು ಧಿಕ್ಕರಿಸಿದೆ ಅಂತಲ್ಲ. ಅವರಿಗೆ  ನತಮಸ್ತಕಳಾಗಿ ಒಂದು ಮಾತು, _
   ‌‌‌     ಸರ್, ನೀವು ನೂರಕ್ಕೆ ನೂರು ಸರಿ...ನಿಮಗೆ ನತಮಸ್ತಕಳಾಗಿ ವಂದನೆಗಳನ್ನು ಸಲ್ಲಿಸುತ್ತೇನೆ, ಆದರೆ ನನ್ನದೂ ತಪ್ಪಲ್ಲ...🙏🙏🙏🙏🙏

                ‌ಭಾಷೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಅರಳಿಸುತ್ತವೆ. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಜಗತ್ತೇ ಒಂದು ಹಳ್ಳಿಯಂತೆ ಬದಲಾಗುತ್ತಿರುವ ಈ  ಪರ್ವಕಾಲದಲ್ಲಿ ಕಾಲ ಹಾಗೂ ಸಮಯದ ಜೊತೆ ಹೆಜ್ಜೆ ಹಾಕಲು ಸಹಕಾರಿಯಾಗಲಿವೆ. ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯ ಅಂಗವಾಗಿ ಕ್ರಮೇಣ ಕಿರಿದಾಗುತ್ತ ಹೊರಟು Global village ಎಂದು ಗುರುತಿಸಿಕೊಂಡಿರುವ  ಹೊಸ ಜಗತ್ತನ್ನು ಎಲ್ಲರಿಗೂ ಸರಿ ಸಮಾನ
ವಾಗಿ ತೆರೆದಿಡುವ ಬೆಳಕಿಂಡಿಗಳಾಗಿವೆ. ಬಡ, ಪ್ರಾಚೀನ, ಹಿಂದುಳಿದ,ಎಂಬ ಸಲ್ಲದ ನಾಮಾಂಕಿತಗಳಿಂದ ಒಂದು ಕಾಲಕ್ಕೆ ಅವಹೇಳನಕ್ಕೆ ಗುರಿಯಾಗುತ್ತಿದ್ದ ಭಾರತವೀಗ ವಿಶ್ವಗುರುವಾಗಿ ಗುರುತಿಸಿ ಕೊಳ್ಳುತ್ತಿದೆ. ಅನೇಕ ದೇಶಗಳಲ್ಲಿ ಭಾರತೀಯರೇ ಆಯಕಟ್ಟಿನ ಪ್ರಮುಖ ಹುದ್ದೆಗಳಿಗೆ  ಆಯ್ಕೆಯಾಗಿರುವದನ್ನು
ನೋಡುತ್ತಿದ್ದೇವೆ. ಸಂಸ್ಕೃತ , ಆಯುರ್ವೇದ ಚಿಕಿತ್ಸಾ ಪದ್ಧತಿ, ಯೋಗಾಭ್ಯಾಸಗಳು Indian Image ಕಳಚಿಕೊಂಡು ವಿಶ್ವ ಮಾನ್ಯವಾಗುತ್ತಿವೆ.
ಇಂತಹ ವೇಳೆಯಲ್ಲಿ ಕಣ್ಣುಮುಚ್ಚಿ ಕುಳಿತರೆ ನಷ್ಟ ನಮಗೇ ಹೊರತು ಅನ್ಯರಿಗಲ್ಲ. 
         
‌   ಕಾರಣ ಎಲ್ಲವೂ ಬೇಕು. ನಮ್ಮದನ್ನು
ಭದ್ರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ಯೊಂದಿಗೆ ಅನ್ಯರದು ಎಷ್ಟು? ಎಲ್ಲಿ? ಏಕೆ? ಹೇಗೆ? ಯಾವಾಗ? ಎಂಬುದನ್ನು ಚೆನ್ನಾಗಿ ಅರಿತು ನಡೆದರೆ ಯಾರೂ ನಮ್ಮನ್ನು, ನಮ್ಮದನ್ನು, ನಮ್ಮಿಂದ ಯಾವಕಾಲಕ್ಕೂ ಕಸಿಯಲಾರರು... 

  ಇದು ನನ್ನ ಅನಿಸಿಕೆ...

Monday 1 March 2021

ಉಯಿಲು...

ಉಯಿಲು...

ನನ್ನ ಮರಣದ ನಂತರ
ನನ್ನ ಮನೆಯಲ್ಲಿ,
ನನ್ನ ಕೋಣೆಯಲ್ಲಿ
ಅಲ್ಲಿಲ್ಲಿ ಚದುರಿ ಬಿದ್ದ 
ನನ್ನದೆನ್ನುವ ಎಲ್ಲವನ್ನೂ 
ಒಮ್ಮೆ  ಜಾಲಾಡಿಬಿಡಿ ...

ಶತ ಶತಮಾನಗಳಿಂದ
ಹೊರಜಗತ್ತನ್ನೇ ಮರೆತು
ಅಡಿಗೆ ಹಾಗೂ ಮಲಗುವ 
ಕೋಣೆಗಳಲ್ಲಿ ಬಂದಿಯಾಗಿ
ಸ್ವಂತ ಬದುಕನ್ನೇ  ಮರೆತ
ಮಹಿಳೆಯರಿಗೆ 
ನನ್ನೆಲ್ಲ ಕನಸುಗಳನ್ನು 
ದಾನ ಮಾಡಿಬಿಡಿ ...

ದೇಶ-ವಿದೇಶಗಳ 
ಥಳಕು ಬಳಕಿಗೆ 
ಮನಸೋತು,
ವೃದ್ಧಾಶ್ರಮದಲ್ಲಿ
ಹೆತ್ತವರನ್ನು ಅನಾಥರನ್ನಾಗಿಸಿ 
ಹಾರಿಹೋದ  ಮಕ್ಕಳ
ತಾಯಂದಿರಿಗೆ ನನ್ನ
ಮುಕ್ತ ನಗೆಯನ್ನಿಷ್ಟು
ಸಮನಾಗಿ
ಹಂಚಿಬಿಡಿ...

ನಿನ್ನೆಯ ದಿನವಷ್ಟೇ
'ತ್ರಿವರ್ಣ ಧ್ವಜ' ದಲ್ಲಿ
ಸುತ್ತಿ ತಂದ ಆ ತರುಣ
ಯೋಧನ ಹೆಂಡತಿಯ 
ಸೀರೆಯ ತುದಿಗಂಟಿದ
ರಕ್ತದ ಕಲೆಗಳು ಕಾಣದಂತೆ
ನನ್ನ ಮೇಜಿನ ಮೇಲಿನ
ಬಣ್ಣಗಳಿಂದ ರಂಗು
ಬಳಿದು ಬಿಡಿ...

ನನ್ನ ಪ್ರತಿ ಕಣ್ಣಹನಿಯನ್ನೂ
ಸುಂದರ ಕವನವಾಗಿಸಬಲ್ಲ
ಕವಿಮನಸುಗಳಿಗೆ
ನನ್ನ ಕಂಬನಿಗಳನೆಲ್ಲ
ಬಿಟ್ಟು ಬಿಡಿ...

ನಾ ಹಿಡಿದಿಟ್ಟ ಕ್ರೋಧವನ್ನೆಲ್ಲ
ಯುವಜನತೆಯಲ್ಲಿ ತುಂಬಿ
ಸಕಾರಣವೊಂದಕ್ಕೆ
 ಕ್ರಾಂತಿಕಾರಿಯಾಗಿ 
ಹೊರಹೊಮ್ಮುವಂತೆ
ಅವರನ್ನು 
ಹುರಿದುಂಬಿಸಿಬಿಡಿ...

ಕೊನೆಗೆ ಉಳಿದದ್ದು,
ನನ್ನ-

ಮತ್ಸರ. 
ದುರಾಸೆ.
ಸಿಟ್ಟು.
ಸುಳ್ಳುಗಳು.
ಸ್ವಾರ್ಥ.

ಇವುಗಳನ್ನು ನನ್ನೊಂದಿಗೆ
ಆಳದಲ್ಲಿ 
ಹೂಳಿಬಿಡಿ...

(ಹಿಂದಿ ಕವನವೊಂದರ  ಕನ್ನಡ ಭಾವಾನುವಾದ...
ಶ್ರೀಮತಿ, ಕೃಷ್ಣಾ ಕೌಲಗಿ)

ಜೀವನ ದೃಷ್ಟಿ...



* ನನಗೆ ಆಹಾರವೆಂದರೆ ತುಂಬಾ ಪ್ರೀತಿ.

* ಚಿಕ್ಕ ಮಕ್ಕಳು ಭಗವಂತನ ಅದ್ಭುತ ಸೃಷ್ಟಿ.

*ನಾನು ನಕ್ಕು, ನಕ್ಕು ಸಾಯುತ್ತೇನೆ ಎಂದು ಅನಿಸುತ್ತದೆ.

* ದೇವರು ನನ್ನನ್ನು ಹುಟ್ಟಿಸಿ ಮರೆತೇ ಬಿಟ್ಟಿದ್ದಾನೆ.

* ನಾನು ಎಷ್ಟು ನಗುತ್ತೇನೆ  ಅಂದ್ರೆ ಕೊನೆಗೆ ಅದು ಅಳುವಿನಲ್ಲಿ ಮುಗಿಯುತ್ತದೆ.

* ನಿಮಗೆ ಜೀವನದಲ್ಲಿ ಏನಾದರೂ ಬದಲಾಯಿಸಲಾಗದಿದ್ದರೆ ಅದನ್ನು ಮರೆತುಬಿಡಿ.

* ಸದಾಕಾಲವೂ ಇರುವ ನನ್ನ ಮುಖದ ಮೇಲಿನ ಮುಗುಳ್ನಗೆಯೇ ನನ್ನ ದೀರ್ಘ ಆಯುಷ್ಯದ ಗುಟ್ಟು.

* ನನಗೀಗ ಕಣ್ಣು ಕಾಣುವುದಿಲ್ಲ, ಕಿವಿ ಕೇಳಿಸುವುದಿಲ್ಲ, ಆದರೂ ಚೆನ್ನಾಗಿಯೇ
ಇದ್ದೇನೆ.

* ಸಾವು ತಾನಾಗಿಯೇ ಬರುವವರೆಗೂ ನಾನು ಬದುಕಬೇಕು. 

* ನನ್ನವು ಉಕ್ಕಿನ 
ಕಾಲುಗಳು, ಆದರೆ ಇತ್ತೀಚಿಗೆ ಸ್ವಲ್ಪವೇ ಜಂಗು ಹಿಡಿಯುತ್ತಿವೆ.

* ನಾನು ಇದುವರೆಗೂ ಸ್ವಚ್ಛ, ಪಶ್ಚಾತ್ತಾಪ ರಹಿತ  ಆನಂದದ ಬದುಕನ್ನೇ ಬದುಕಿದ್ದೇನೆ. ಈ ವಿಷಯದಲ್ಲಿ ನಾನು ಅದೃಷ್ಟವಂತೆ.

* ಮಾನಸಿಕವಾಗಿ ಸದಾ ತಾರುಣ್ಯದಿಂದಿರುವದು
ಸಾಧ್ಯ .ನಾನೀಗಲೂ ತರುಣಿಯೇ. ಈಗ 70 ವರ್ಷಗಳಿಂದ ಸ್ವಲ್ಪ ಹಾಗೆ ಕಾಣುತ್ತಿಲ್ಲ ಅಷ್ಟೇ.

ಇದು 122ವರ್ಷ,164 ದಿನಗಳ ಕಾಲ (  ಇತಿಹಾಸದಲ್ಲೇ ಇದುವರೆಗಿನ ದೀರ್ಘ ಆಯುಷ್ಯ...)  ಬದುಕಿದ , ಮ್ಯಾಡಮ್ ಜೇನ್ ಲೂಯಿಸ್ ಕಾರ್ಮೆಲ್ ಎಂಬ ಫ್ರೆಂಚ್ ಮಹಿಳೆಯ  ಜೀವನದೃಷ್ಟಿ.

ಅವಳ  ಮರಣ ಪೂರ್ವ ಸಂದರ್ಶನವೊಂದರ ವೇಳೆಯಲ್ಲಿ ಸಂದರ್ಶನಕಾರ 
"ಆಯ್ತು ಮೇಡಮ್, ಮತ್ತೊಮ್ಮೆ ಭೇಟಿಯಾಗೋಣ ಅಂದಾಗ ,
ಅವಳು ಹೇಳಿದ್ದು," ಅವಶ್ಯವಾಗಿ ಆಗೋಣ, ನಿನಗೇನೂ ಇನ್ನೂ ಅಷ್ಟು  ಹೆಚ್ಚು  ವಯಸ್ಸಾಗಿಲ್ಲ, ನೀನಿನ್ನೂ ಕೆಲವರ್ಷ ಬದುಕಬಲ್ಲೆ."

*****   *****   *****   *****   *****
 
ಎಂತಹ positive thinking!!!
ಗೊತ್ತು, ಇದು ಎಲ್ಲರ ಅಂಗೈ ನೆಲ್ಲಿಯಲ್ಲ. ಹಾಗಿರುವದಕ್ಕೆ ತುಂಬಾ ಧೈರ್ಯ, ಮನೋಸ್ಥೈರ್ಯ ಬೇಕು. ಅದನ್ನು ಗಳಿಸುವುದಕ್ಕೆ ತಪಸ್ಸು ಬೇಕು. ಆದರೆ ಇಂಥ ವಿಚಾರಗಳನ್ನು ಬೆಳೆಸಿಕೊಳ್ಳುವುದೂ ಅಥವಾ ಅದರ ಬಗ್ಗೆ ಯೋಚಿಸುವುದೂ ಕೂಡ ಕಡಿಮೆಯೇನೂ ಅಲ್ಲ... ಸ್ವಲ್ಪರ ಮಟ್ಟಿಗಿನ ಪ್ರಯತ್ನ ಕೂಡ ಧನಾತ್ಮಕ ಬದಲಾವಣೆಯೇ. ನಮ್ಮಲ್ಲಿ ನಮಗೇ ಗೊತ್ತಾಗದೇ ಬೆಳೆಯುವ ನಕಾರಾತ್ಮಕ ಯೋಚನೆಗಳನ್ನು ತಡೆದರೂ ಮೊದಲ ಹೆಜ್ಜೆಯಾಗಿ ಬೇಕಾದಷ್ಟಾಯಿತು. ನಾನು ಇಂತಹದನ್ನು ಯೋಚಿಸುವುದು, ಅಂತಹದೊಂದರ ಬಗ್ಗೆ ಬರೆಯುವದು ನನಗಾಗಿಯೇ. ಸಾಧ್ಯವಾದರೆ ಇತರರಿಗೂ ಸಹಾಯವಾಗಲಿ ಎಂಬ ಕಾರಣಕ್ಕೆ ಮಾತ್ರ Loud thinking ಈ ರೂಪದ ಬರಹಗಳಲ್ಲಿ... ನಿಜವಾಗಿಯೂ ಅದು ನನಗೆ ನೆಮ್ಮದಿ ತರುತ್ತದೆ. ಎಪ್ಪತೈದರ ಬೆಂಗಳೂರಿನ ವಾಸ್ತವ್ಯವನ್ನು
ಸಹನೀಯವಾಗಿಸಿದೆ. Covid ಕಾರಣದಿಂದಾಗಿ ಒಂದು ವರ್ಷದಿಂದ ನಡೆದಿರುವ ವನವಾಸ/ ಅಜ್ಞಾತವಾಸಗಳು ನನ್ನನ್ನು ಕಿಂಚಿತ್ತೂ ಬೆದರಿಸಿಲ್ಲ. ಬದಲಿಗೆ ವಿವಿಧ ಚಟುವಟಿಕೆಗಳಲ್ಲಿ ಮನಸ್ಸು ತೊಡಗಿಸುವಂತೆ ಪ್ರಚೋದಿಸುತ್ತಿವೆ.
ಹಾಗೆ ತೊಡಗಿಸಿಕೊಂಡಾಗ ನಾ ಕಂಡ  ಸುಲಭ, ಸರಳ, ಸತ್ಯಗಳನ್ನು ಸಹೃದಯರೊಂದಿಗೆ  ಹಂಚಿಕೊಳ್ಳಲು  
ನಮ್ಮ "ಧಾರವಾಡದ ಬೆಸುಗೆ" ಒಂದು 
ವೇದಿಕೆಯಾಗಿ ನನ್ನ ಜೊತೆಗಿದೆ. ಅನೇಕರ ಧನಾತ್ಮಕವಾದ  ಪ್ರತಿಕ್ರಿಯೆಗಳು  ನನ್ನ ಹುರುಪನ್ನು ಹೆಚ್ಚಿಸಿವೆ...

ಮತ್ತೇನೂ ಬೇಕೆನಿಸುವದಿಲ್ಲ ನನಗೆ...


      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...