Thursday, 25 March 2021
ಬುಧವಾರ ರಾತ್ರಿ ನನ್ನ ಮೂರನೇ ಮೊಮ್ಮಗ ನಿಕ್ಷೇಪನ JEE ಪರೀಕ್ಷೆಯ ಎರಡನೇಯ attempt ನ ಫಲಿತಾಂಶ ಬಂತು. 99.78 ರಷ್ಟು ಗುಣಗಳು ಸಿಕ್ಕಿದ್ದವು. ಆ ಸಂಭ್ರಮ ಮರುದಿನವೂ ಇದ್ದು ಮನೆಯಲ್ಲಿ ಕೆಲಕಾಲ ಹರಕೆ, ಹಾರೈಕೆ,' ಅಭಿನಂದನೆಗಳ 'ಗಲಗಲ' ಗಳೆಲ್ಲ ಮುಗಿದಮೇಲೆ ಅವನನ್ನು ನಾನು ಕೇಳಿದೆ " ಬಹಳಷ್ಟು ಜನ ನಮ್ಮನ್ನು ನಿನ್ನ ಅಭ್ಯಾಸಕ್ರಮ, ಅಭ್ಯಾಸದ ಅವಧಿ, ಮುಂತಾಗಿ ಕುರಿತು ಕೇಳುತ್ತಿದ್ದಾರೆ, ನಾನು ಹಲವು ಪ್ರಶ್ನೆಗಳನ್ನು ಕೇಳುತ್ತೇನೆ, ನೀನು ಅವುಗಳನ್ನು ಉತ್ತರಿಸು, ಅದರ ವೀಡಿಯೋ ಕೇಳಿದವರಿಗೆ ಕಳಿಸುತ್ತೇನೆ ಅಂದೆ."ಅದೆಲ್ಲ ಬೇಡ, ಅವುಗಳ ಬಗ್ಗೆ ನನಗನಿಸಿದ್ದು ನಾಲ್ಕು points ಗಳನ್ನು ಹೇಳುತ್ತೇನೆ, ನಿನಗೆ ಸರಿಯನಿಸಿದಂತೆ ಎಲ್ಲಿ ಬೇಕಾದರೂ ಹಾಕಿಕೋ" ಎಂದಾಗ ಅದೂ ಸರೀನೇ ಅನಿಸಿತು ನನಗೆ.'ಸರಿ ಸರಿ' ಅಂದೆ. ಅವನು ಹೇಳಿದ್ದು ಈ ಕೆಳಗಿದೆ... ಯಾವುದೇ ಕಾರಣಕ್ಕೂ ಮಕ್ಕಳ ಅಭ್ಯಾಸದ ಕ್ರಮ, ಹಾಗೂ ವೇಳೆಯನ್ನು ಕುರಿತು ಚರ್ಚಿಸಲಾಗದು . ಅವರಿಗೆ ಸರಿಕಂಡ ರೀತಿಯಲ್ಲಿ ಅಭ್ಯಾಸ ಮಾಡುವ , ಅದನ್ನು ಬೇಕೆಂದಾಗ ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯ ಅವರಿಗೇ ಬಿಡಬೇಕು. ಮುಂದೆ ಆಯ್ದುಕೊಳ್ಳುವ ವಿಷಯಗಳ ಬಗ್ಗೆ ಬೇರೆಯವರು ಸಲಹೆ ನೀಡಬಹುದೇ ಹೊರತು ಒತ್ತಾಯ ಖಂಡಿತ ಕೂಡದು. ಅವರನ್ನು ಅವರಿಗಿಂತ ಹೆಚ್ಚು ,ಕಡಿಮೆ ಇದ್ದವರೊಡನೆ ತುಲನೆ ಮಾಡಿ ಅಭಿಪ್ರಾಯಗಳನ್ನು ಅವರು ತಲೆಯಲ್ಲಿ ತುಂಬಬಾರದು. ಪರೀಕ್ಷೆಯ ಸಮಯದಲ್ಲಿ ಮುಗಿದು ಹೋದ ವಿಷಯಗಳ ಪೋಸ್ಟಮಾರ್ಟಂ ಯಾವಕಾಲಕ್ಕೂ ಸಲ್ಲದು. ಓದಿದ್ದನ್ನು ಅದರ ಪಾಡಿಗೆ ಅದನ್ನು ಬಿಟ್ಟು ಮುಂದಿನದ್ದು ಕಡೆ ಗಮನ ಹರಿಸಲು ಹೇಳುವದು ಉತ್ತಮ. ಕೊನೆಯದಾಗಿ ಪರೀಕ್ಷಾ ದಿನಗಳಲ್ಲಿ ಮನೆಯ ವಾತಾವರಣ ಅಧ್ಯಯನ ಯೋಗ್ಯವಾಗಿರಬೇಕು. ಇಲ್ಲಸಲ್ಲದ ಗಲಾಟೆ, ವಾದ ವಿವಾದ, ಬಿಸಿಬಿಸಿ ವಿಷಯಗಳ ಚರ್ಚೆ ಮನೆಯ ವಾತಾವರಣವನ್ನು ಕೆಡಿಸುವದೇ ಹೆಚ್ಚು. ಕೊನೆಯದಾಗಿ ಮನೆಯ ಸದಸ್ಯರೆಲ್ಲರ ಸಹಕಾರ, ಅತಿಮುಖ್ಯವಾದ ಅಂಶ. ತಪ್ಪು ಮಾಡಿದಾಗ ಹೇಳುವುದನ್ನು ಹಿತಮಿತವಾಗಿ ಹೇಳಬೇಕೇ ಹೊರತು ಮಕ್ಕಳ ಮೂಡು ಕೆಡುವಂತೆ ಮಾಡಬಾರದು. ಹಾಗೆ ಮಾಡುವುದರಿಂದ ಅದರ ಪರಿಣಾಮ ಋಣಾತ್ಮಕ ( negative) ಸಾಗುವುದೇ ಹೆಚ್ಚು. ಮಕ್ಕಳು ಪ್ರಶಂಸಾರ್ಹವಾದದ್ದೇನಾದರೂ ಮಾಡಿದರೆ ಕಂಜೂಷತನ ತೋರಿಸದೇ ಅವರನ್ನು ಪ್ರೋತ್ಸಾಹದ ಮಾತುಗಳಿಂದ ಉತ್ತೇಜಿಸುವ ಕೆಲಸ ಮಾಡಬೇಕು. ಕೊನೆಯದಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನದೇ ಆದ ವ್ಯಕ್ತಿತ್ವ ಅಥವಾ ವ್ಯಕ್ತಿತ್ವ ದೋಷವಿರುತ್ತದೆ. ಕಾರಣ ಎಲ್ಲರನ್ನೂ ಏಕರೀತಿಯಲ್ಲಿ ಸಂಭಾಳಿಸುವ ಸಿದ್ಧ ಸೂತ್ರವಿಲ್ಲಿ ಕೆಲಸ ಮಾಡಲಾರದು .ಅಂಥ ವೇಳೆಯಲ್ಲಿ ನಿಗದಿತ ವಿದ್ಯಾರ್ಥಿಯ ವಿಷಯವನ್ನು ಪ್ರತ್ಯೇಕವಾಗಿ ಗಮನದಲ್ಲಿಟ್ಟುಕೊಂಡು ವ್ಯವಹರಿಸುವದು ಮುಖ್ಯವಾಗುತ್ತದೆ. ಇಂಥ
Subscribe to:
Post Comments (Atom)
How to treat wet cough?
🟣 How to Treat Wet Cough (Productive Cough) A wet cough is a cough that produces mucus or phlegm. It is the body’s natural way of clearing ...
-
'ಹಬ್ಬ'ಗಳೇ 'ಹುಟ್ಟಿದ ದಿನ' ಗಳಾಗುತ್ತಿದ್ದ 'ಕಾಲಮಾನ' ನಮ್ಮದು... ಒಮ್ಮೆ ಒಬ್ಬ ಹಿರಿಯ ಸಾಧಕರಿಗೆ ನೂರು ತುಂಬಿದ ಸಂದರ್ಭದಲ್ಲಿ ...
-
ಈ ಹಿಂದೆ ಎರಡು ವರ್ಷಗಳ ಕಾಲ ಕೊರೋನಾ ಹೆಸರಿನಲ್ಲಿ ಸಾರ್ವಜನಿಕರಿಗೆ ಸ್ಥಾನ ಬದ್ಧತೆಯ ಶಿಕ್ಷೆ ಯಾಗಿತ್ತು.ಅದು ಜನರನ್ನು ಎಷ್ಟು ತಟಸ್ಥರಾಗಿಸಿತ್ತೆಂದರೆ ಅದಕ...
-
ನಾನೂ ಧಾರವಾಡದಲ್ಲಿ ಅವರ ಅಷ್ಟಾವಧಾನ ಕಾರ್ಯಕ್ರಮಗಳನ್ನು ನೋಡಿದ್ದೇನೆ.ಒಂದಂತೂ ನಮ್ಮ school ನಲ್ಲೇ ಆಯೋಜಿತವಾಗಿತ್ತು. ಸಂಸ್ಕೃತದಲ್ಲಿ ನನಗೆ ಹೆಚ್ಚಿನ ಜ್ಞಾನ ವಿಲ್ಲದಿದ...
No comments:
Post a Comment