Thursday 28 December 2023

Topics of New book...

೧) ಹೊಸ ವರ್ಷದ ಹೊಸಿಲಲ್ಲಿ ನಿಂತು...
A-೧) ಮೈ ಐಸಾ ಕ್ಯೂಂ ಹೂಂ?
೨)ಬಿಸಿಲಾದರೇನು? ನೆರಳಾದರೇನು?
೩) ಮನಸು ಬೆಳೆಯಲಿ...
೪)ಆರತಿ ಬೆಳಗಿರೇ ನಾರಿಯರೂ ಬೇಗ.
೫)ನನ್ನನ್ನು ' ದಿವಾಳಿ' ಮಾಯಾಗಿಸಿದ ಆ ದೀಪಾವಳಿ...
೬) ಕಂಚುಗಾರರ ಅಂಗಡಿಯಂದದಿ...
೭)ಮಾತು ಬೆಳ್ಳಿಯೂ ಅಲ್ಲ, ಮೌನ 
ಬಂಗಾರವೂ ಅಲ್ಲ...
೮)ಚುಕ್ಕಿಗಳ ಚಿತ್ತಾರ ಈ ಬದುಕು...
೯) ಪರಕಿಸಿದೊಡದು ಲಾಭ...
೧೦)ಬಾಳದಾರಿಯಲ್ಲಿ ಇರುಳು ಕವಿದ ಹೊತ್ತಲಿ...
೧೧) ಹೃದಯವೇ ನಿನ್ನ ಹೆಸರಿಗೆ...
೧೨)Unsung hero...
೧೩) please, ನನ್ನನ್ನು ನಂಬಿ...
೧೪) ಯಾವ 'ಗುರು' ವೂ ಲಘುವಲ್ಲ...
೧೫) ರಾಖಿಯ ಹಂಗಿಲ್ಲದ ಬಂಧನ...
೧೬)ಉಡಾವಣೆ- ಬಾಲ ವಿಜ್ಞಾನಿಗಳಿಂದ-
೧೭)ನನಗೊಬ್ಬಳೇ ಸೋದರತ್ತೆ...
೧೮)ನೀವೆಳೆದ ಗೆರೆ ಚಿಕ್ಕದಾಗಬೇಕೆ?
೧೯) ಕೊಳ್ಳುವುದೋ- ಬಿಡುವುದೋ
ನೀವೇ ಹೇಳಿ...
೨೦)ಆವ ರೂಪದೊಳು ಬಂದರೂ ಸರಿಯೇ...
೨೧) ಮನಸಿನ ಪುಟಗಳ ನಡುವೆ...
೨೨) ಬಚ್ಚೆ ಮನಕೆ ಸಚ್ಚೆ...
೨೩) ಬದುಕನ್ನು ಮೀರಿಸಿದ ಗುರುವಿಲ್ಲ.
೨೪)ನಾನೇಕೆ ಬರೆಯುತ್ತೇನೆ...?
೨೫)ಶುಭ- ಅಶುಭಗಳ ನಡುವೆ...
೨೬)ಒಂದು Shooting ಕಥೆ...
೨೭) ಸಂತೆಯೊಳಗೊಂದು ಮನೆಯಾ
 ಮಾಡಿ...
೨೮)ನನ್ನ ಚಿಕ್ಜಮ್ಮ- ನನ್ನ ಎರಡನೇ  ‌  ‌ತಾಯಿ...
೨೯)ಹಳ್ಳಿ ಮುದುಕಿಯೂ...ಬಗಲ ಕೋಳಿಯೂ...
೩೦)ಒಂದಾನೊಂದು ಕಾಲದಾಗ...
೩೧) ಒಂದು ದಿನದ ಮಟ್ಟಿಗೆ ಹೆಣವಾದ
   ಕಥೆ.
೩೨) ನಿಮಗೇನು ಬೇಕು?
     ಫೇಡೆಯೋ? ಅವಲಕ್ಕಿಯೋ?
೩೩) ಸಮಾ( ಜ) ಸೇವೆ?
೩೪) ಗುರು ಸಾಕ್ಷಾತ್ ಪರಬ್ರಹ್ಮ...
೩೫) ನಮ್ಮಮ್ಮ- ಹಣಕಾಸು ಮಂತ್ರಿ...
೩೬) ಇದೇನೂ ' ಯಕ್ಷ ಪ್ರಶ್ನೆ'- ಯಲ್ಲ...
೩೭) ಉಡುಗೊರೆಯೊಂದಾ ತಂದಾ...
೩೮) ತರ್ಕಕ್ಕೆ ಸಿಲುಕದ ತತ್ವ...
೩೯) ವಯಸ್ಸಾದಂತೆ ಹೆಚ್ಚು ಮಾತಾಡಿ.
೪೦) ನಗುತ್ತಲೇ ಏಳುವದೊಂದು
       'ಬೆಳಗು' ಇತ್ತು.
೪೧) ಸುಹಾನಾ ಸಫರ್ ಔರ್     ಮೌಸಮ್ ಹಸೀನ್...
೪೨) ಬಣ್ಣದ ಕನಸುಗಳ ಬೆನ್ನ ಹತ್ತಿ...
೪೩) ಜೀವನವೇ ಒಂದು ಅನು     ಸಂಧಾನ.
೪೪)ಅತಿ ಪರಿಚಯಾತ್...ಅವಜ್ಞಾತ್...
೪೫)ಶತಪದಿಯೂ...ಕಪ್ಪೆಯೂ...
೪೬) ನವರಂಗ್- ಹರಿಶ್ಚಂದ್ರ ಘಾಟ್ ಗಳ ನಡುವೆ...
೪೭) ಬದಲಾವಣೆಯೊಂದೇ ಶಾಶ್ವತ...
೪೮)ಯಾವುದೂ ಮೊದಲಿನಂತಿಲ್ಲ.
( ಕಿತನಾ ಬದಲ್ ಗಯಾ...)
೪೯) ಅತಿಥಿ, ತುಮ್ ಕಬ್ ಜಾವೋಗೆ?
೫೦)ಆಡಿದ್ದನ್ನು ಮಾಡಿದ ಮಧ್ಯಮಳು
ನಾನು...
೫೧) ಜೀವೇತ್ ಶರದಃ ಶತಮ್...
೫೨) ಆಗ ಸಂಜೆಯಾಗಿತ್ತಾ...
೫೩) ನಮ್ಮ ಸರದಿ ನಮ್ಮದು...
೫೪) ಕಟ್ಟಡದ ಪರಿಯ ಇಟ್ಟಿಗೆಯು ಅರಿತೀತೇ!?
೫೫)ಭವವೆಂದರೆ ನೂರು- ನೂರಾನು      ಭವ...
೫೬)

Monday 25 December 2023

M Y MEDICAL KIT...

 A.
Emergency medicines...

*Tofisopam( toficalm)-50 mg.
30. (Relaxation+ anxiety free)

*Pantodac DSR 1-0-0 ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ.(Acute Acidity...)

*Cough syrup -Ascoril SF .
( Allergy cough)

*Ketorol- DT- 10 mg (toothache.)

B.
Regular prescription medicines

*1) Glycomet SR - 500 mg.- 60.
SUGAR PILLS.

2) Mixtard 30- penfills-INSULIN
A box - set of Five.

3) Telma AM - 40/5.( B.P. tablets)

4) Rozavel- 10 mg.( Blood thinner).

6) Mouth wash-Dentin 91.
7) METROHEX- Gum- gel...
8) Stolin- (Astringent...Gum Lotion)

9) Thyronorm-75 mg.( Thyroid).

10) Neurobion Forte.( General
Prescription for Nerves.).

11) sterile Lancets.

12) Blood testing strips.

Saturday 9 December 2023

When You Are Old 

When you are old and grey and full of sleep, And nodding by the fire, take down this book,
And slowly read, and dream of the soft look, Your eyes had once, and of their shadows deep;

How many loved your moments of glad grace, And loved your beauty with love false or true, But one man loved the pilgrim soul in you, 
And loved the sorrows of your changing face,

And bending down beside the glowing bars, Murmur, a little sadly, how Love fled,  
And paced upon the mountains overhead, 
And hid his face amid a crowd of stars.


-  William Butler Yeats. 
Pic: Nafisa Ali

ನಿಮಗೆ ವಯಸ್ಸಾಗಿ ಕೂದಲು
ಬಿಳಿಯಾದಾಗ,
ಕಣ್ಣುಗಳಲ್ಲಿ ನಿದ್ದೆ ಆವರಿಸಿದಾಗ,
ಕೈಲೊಂದು ಪುಸ್ತಕ ಹಿಡಿದು-
ನಿಧಾನವಾಗಿ ಅದರಲ್ಲಿಳಿದಾಗ,
ಒಂದು ಕಾಲದ ಕನಸುಗಂಗಳ
ನವಿರಾದ ನೋಟದ ಮಾಯೆ,
ಇಂದಿಗೂ ಉಳಿದುಕೊಂಡ 
ಅದರ ನಿರಂತರ ಛಾಯೆ...

ನಿನ್ನ ಗಾಂಭೀರ್ಯ, ಘನತೆಯ
ನೋಟವನ್ನು ಮೆಚ್ಚಿದವರೆಷ್ಟೋ!!
ಸುಳ್ಳೋ,ನಿಜವೋ ತಿಳಿಯದಲೇ ಆರಾಧಿಸಿದವರೆಷ್ಟೋ...!!
ಆದರೆ ಒಬ್ಬ ಮಾತ್ರ ನಿನ್ನಂತರಾಳವ
ಹೊಕ್ಕು ನುರಿತವನಾದ...
ಬದಲಾಗುತ್ತಿರುವ ಬದುಕಿನ‌
ಭಾವಗಳ ತಲ್ಲಣಗಳ ಅರಿತವನಾದ...!!

ಥಳಕು - ಬಳುಕುಗಳ ನಡುವೆ,
ನಲ್ನುಡಿ- ಪಿಸುನುಡಿಗಳ ಮಧ್ಯೆ,
ಬಳಲಿ- ಬಾಗಿ ಎಲ್ಲಿಗೆ, ಹೇಗೆ
ಹಾರಿತೋ ಪ್ರೀತಿ!!
ಯಾವ ಗಿರಿ ಶಿಖರಗಳನೇರಿ
ಮೇಲಣ ತಾರಾಗಣದಲ್ಲಿ ಮುಖ
ಮರೆಸಿಕೊಂಡಿರುವ ರೀತಿ...






Saturday 2 December 2023

      ಒಗಟುಗಳೆಂದರೆ ನಮಗೆ ಅಂದರೆ ಹೆಣ್ಣುಮಕ್ಕಳಿಗೆ ಮದುವೆ ಕಾಲದ 'ಉರುಟಣೆ ' ನೆನಪಾದಷ್ಟುಬಾಕಿಯದು ನೆನಪಾಗದು.ಅದನ್ನು ಬಿಟ್ಟರೆ time passಗೆ Riddles- ಮಕ್ಕಳಿಗೆ ಮನೆ ಯಲ್ಲೂ/ಶಾಲೆಗಳಲ್ಲೂ ಇರುತ್ತಿದ್ದುದೂ ಹೌದು.ಆದರೆ ಅವೆಲ್ಲ ಅಭ್ಯಾಸದ ಭಾಗವಾಗಿರದೇ/ಅಭ್ಯಾಸ ಬೇಸರ ವಾದಾಗ ತಮಾಷೆಗೆ ಮಾಡುತ್ತಿದ್ದುದು ರೂಢಿ-ಇನ್ನು ನೀವು ಪ್ರಸ್ತಾಪಿಸಿದ High Level ದೇವ ಭಾಷೆಯ ಒಗಟುಗಳು (ಸಂಧಿ/ ಸಮಾಸ ಒಳಗೊಂಡಂತೆ ಇರುವಂಥವು) ನಮಗೆ ಪಚನಕ್ಕೆ ಜಡ...ಸಧ್ಯಕ್ಕೆ ನೆನಪಿಗೂ ಭಾರ... ಕಾರಣ ಯಥಾಶಕ್ತಿ ಓದಿ, ಯಥಾಶಕ್ತಿ ಸ್ವೀಕರಿಸಿವುದಷ್ಟೇ ನಮಗುಳಿದ ದಾರಿ...

Thursday 30 November 2023

ಹೇಳು, ಸಾಕು...

ನೀನು ಹೇಗೆ ಬದುಕುತ್ತಿ- ಹೇಳಬೇಡ,
ಇತರರ ನೋವು ನಿನ್ನನ್ನೂ ನೋಯಿಸುತ್ತಾ? ಹೇಳು,ಸಾಕು...
ನಿನ್ನ ವಯಸ್ಸೆಷ್ಟು-ನನಗೆ ಬೇಡ,
ನಿನ್ನ ಪ್ರೀತಿ,ಕನಸಿಗೆ'ನಿಜದ ಬದುಕು' ಬದುಕುವ 'ಹುಂಬ'ಎನಿಸಿಕೊಳ್ಳುವ  ಧೈರ್ಯ ಉಂಟಾ?- ಹೇಳು ಸಾಕು...

ನಿನ್ನ ಬದುಕಿನ ಪರಿಭ್ರಮಣದ 
ಕಥೆ ನನಗೆ ಬೇಡ..
ನಿನ್ನ ಮನದಾಳದ ದುಃಖದ ಮೂಲ ಅರಿತಿದ್ದೀಯಾ,?
ಬದುಕಿನ ಕಷ್ಟಗಳ ಎದುರಿಸಬಲ್ಲೆಯಾ- ಹೇಳು ಸಾಕು...

ದುಃಖ ನನ್ನದಿರಲಿ,ನಿನ್ನದೇ ಇರಲಿ,
ಅಡಗಿಸದೇ,ಕಂಗೆಡಿಸದೇ,
ಸಂತೋಷದ ಗಳಿಗೆ, 
ನಿನ್ನದಿರಲಿ,ನನ್ನದೇ ಇರಲಿ,
ಮಾನವ ಮಿತಿಗಳ ಉಪದೇಶಿಸದೇ
ಟೊಳ್ಳು- ಗಟ್ಟಿಗಳ ನಿರ್ದೇಶಿಸದೇ ನನ್ನೊಡನೆ ಇರಬಲ್ಲೆಯಾ?
ಹೇಳು ಸಾಕು...

ನೀ ಹೇಳುವ ಮಾತು ಸತ್ಯವಾ?
ಸುಳ್ಳಾ?-ನನಗೆ ಬೇಕಿಲ್ಲ...
ನೀನು ನಿನ್ನಾತ್ಮವನ್ನು ವಂಚಿಸಿ
ನಿನ್ನದಲ್ಲದ ರೂಪ ತಾಳುವುದಿಲ್ಲ ತಾನೇ ಹೇಳು,ಸಾಕು...

ಎಲ್ಲ ದಿನಗಳೂ ನಮ್ಮವೇ ಆಗಿರಲಿಕ್ಕಿಲ್ಲ
ಎಲ್ಲ ಗೆಲುವೂ ಸದಾ ಜೊತೆಗಿರಲಿಕ್ಕಿಲ್ಲ
ಈ ಎಲ್ಲ ಜಯಾಪಜಯಗಳ ಮೀರಿ
ನನ್ನೊಡನಿರಬಲ್ಲೆಯಾ? 
ಹೇಳು,ಸಾಕು...

ಕೆಲವೊಮ್ಮೆ ಏಕಾಕಿಯಾಗಿಯೂ
ಖುಶಿಯಿಂದಿರಬಲ್ಲೆಯಾ?
'ಶೂನ್ಯಗಳಿಗೆ'-ಗಳಲ್ಲೂ ನಿನ್ನನ್ನು
ನೀನು ಸಂಭಾಳಿಸಬಲ್ಲೆಯಾ?
ಹೇಳು ಸಾಕು...


Thursday 23 November 2023

It doesn’t interest me what you do for a living.

I want to know what you ache for
and if you dare to dream
of meeting your heart’s longing.

It doesn’t interest me how old you are.
I want to know if you will risk looking like a fool
for love
for your dream
for the adventure of being alive.

It doesn’t interest me what planets are
squaring your moon...
I want to know if you have touched
the center of your own sorrow
if you have been opened
by life’s betrayals
or have become shriveled and closed
from fear of further pain.

I want to know
if you can sit with pain mine or your own
without moving to hide it
or fade it
or fix it.

I want to know
if you can be with joy
mine or your own.
if you can dance with wildness
and let the ecstasy fill you
to the tips of your fingers and toes
without cautioning us
to be careful
to be realistic
to remember the limitations
of being human.

It doesn’t interest me
if the story you are telling me
is true.
I want to know if you can
disappoint another
to be true to yourself.
If you can bear the accusation of betrayal
and not betray your own soul.
If you can be faithless
and therefore trustworthy.

I want to know if you can see Beauty
even when it is not pretty
every day.
And if you can source your own life
from its presence.

I want to know
if you can live with failure
yours and mine
and still stand at the edge of the lake
and shout to the silver of the full moon,
“Yes.”

It doesn’t interest me to know where you live or how much money you have.
I want to know if you can get up after the night of grief and despair, weary and bruised to the bone
and do what needs to be done
to feed the children.

It doesn’t interest me who you know
or how you came to be here.
I want to know if you will stand
in the center of the fire
with me
and not shrink back.

It doesn’t interest me where or what or with whom you have studied.
I want to know what sustains you
from the inside
when all else falls away.
 
I want to know
if you can be alone
with yourself
and if you truly like
the company you keep
in the empty moments.

~ Oriah Mountain Dreamer - The Invitation

ನೀನು ಹೇಗೆ ಬದುಕುತ್ತಿ- ಹೇಳಬೇಡ,
ಇತರರ ನೋವು ನಿನ್ನನ್ನೂ ನೋಯಿಸುತ್ತಾ? ಹೇಳು,ಸಾಕು...

ನಿನ್ನ ವಯಸ್ಸೆಷ್ಟು-ನನಗೆ ಬೇಡ,
ನಿನ್ನ ಪ್ರೀತಿ,ಕನಸಿಗೆ'ನಿಜದ ಬದುಕು' ಬದುಕುವ'ಹುಂಬ' ಎನಿಸಿಕೊಳ್ಳುವ ' ಧೈರ್ಯ ಉಂಟಾ?- ಹೇಳು ಸಾಕು...

ನಿನ್ನ ಬದುಕಿನ ಪರಿಭ್ರಮಣದ 
ಕಥೆ ಬೇಡ..
ನಿನ್ನ ಮನದಾಳದ ದುಃಖದ ಮೂಲ ಅರಿತಿದ್ದೀಯಾ,?
ಬದುಕಿನ ಕಷ್ಟಗಳ ಎದುರಿಸಬಲ್ಲೆಯಾ- ಹೇಳು ಸಾಕು...

ದುಃಖ ನನ್ನದಿರಲಿ,ನಿನ್ನದೇ ಇರಲಿ,
ಅಡಗಿಸದೇ,ಕಂಗೆಡಿಸದೇ,
ಸಂತೋಷದ ಗಳಿಗೆ, 
ನಿನ್ನದಿರಲಿ,ನನ್ನದೇ ಇರಲಿ,
ಮಾನವ ಮಿತಿಗಳ ಉಪದೇಶಿಸದೇ
ಟೊಳ್ಳು- ಗಟ್ಟಿಗಳ ನಿರ್ದೇಶಿಸದೇ ನನ್ನೊಡನೆ ಇರಬಲ್ಲೆಯಾ?
ಹೇಳು ಸಾಕು...

ನೀ ಹೇಳುವ ಮಾತು ಸತ್ಯವಾ? ಸುಳ್ಳಾ?-ನನಗೆ ಬೇಕಿಲ್ಲ...
ನೀನು ನಿನ್ನಾತ್ಮವನ್ನು ವಂಚಿಸಿ
ನಿನ್ನದಲ್ಲದ ರೂಪ ತಾಳುವುದಿಲ್ಲ ತಾನೇ? ಹೇಳು,ಸಾಕು...

ಎಲ್ಲ ದಿನಗಳೂ ನಮ್ಮವೇ 
ಆಗಿರಲಿಕ್ಕಿಲ್ಲ
ಎಲ್ಲ ಗೆಲುವೂ ಸದಾ 
ಜೊತೆಗಿರಲಿಕ್ಕಿಲ್ಲ
ಈ ಎಲ್ಲ ಜಯಾಪಜಯಗಳ ಮೀರಿ
ನನ್ನೊಡನಿರಬಲ್ಲೆಯಾ? 
ಹೇಳು,ಸಾಕು...

ಕೆಲವೊಮ್ಮೆ ಏಕಾಕಿಯಾಗಿಯೂ
ಖುಶಿಯಿಂದಿರಬಲ್ಲೆಯಾ?
'ಶೂನ್ಯ ಗಳಿಗೆ'ಗಳಲ್ಲೂ ನಿನ್ನನ್ನು
ನೀನು ಸಂಭಾಳಿಸಬಲ್ಲೆಯಾ?
ಹೇಳು ಸಾಕು...






Wednesday 22 November 2023

 ಸಿಂಹದ ಮರಿ ಕುರಿಮರಿಯಾದ ಕಥೆ..
            
             ‌‌‌   ಒಂದು ಸುಂದರ ಬೆಳಗು... Walking ಮುಗಿಸಿ ಮನೆಗೆ ಬಂದ ಆ ಮನೆಯವರಿಗೆ  ಮನೆಯಂಗಳದಲ್ಲಿ ಕಂಡದ್ದು ಕಾಲು ಗಾಯಮಾಡಿಕೊಂಡು
ಮುದುಡಿ ಮಲಗಿ ' ಒಂದೇ ಸವನೇ ಕುಯ್ ಕುಯ್ಗುಡುತ್ತಿದ್ದ ಒಂದು ನಾಯಿ ಮರಿ.ನೋಡಿದರೆ ಗಾಯ ತೀವ್ರವಾಗಿ ತ್ತು.ಮನೆಯೊಳಗೆ ಕೊಂಡೊಯ್ದು
ಪ್ರಥಮೋಪಚಾರ ಮುಗಿಸಿ ತಕ್ಷಣ ದವಾಖಾನೆಗೆ ಕರೆದೊಯ್ದು ಉಪಚಾರ ಮಾಡಿಸಿಯಾಯ್ತು.ಸ್ವಲ್ಪಮಟ್ಟಿಗೆ ಪರವಾಗಿಲ್ಲ‌ ಅನಿಸಿದಾಗ ಅದರ ಫೋಟೋ ತೆಗೆದು face book ಗೂ
ಹಾಕಿ ಅದರ ಮಾಲಿಕರ ಗಮನ ಸೆಳೆಯಲು ಮಾಡಿದ ಪ್ರಯತ್ನವೂ ಫಲ
ಕಾಣಲಿಲ್ಲ.ಯಾರಿಗಾದರೂ ಬೇಕಿದ್ದರೆ
ಕೊಂಡೊಯ್ಯಬಹುದೆಂಬ ವಿನಂತಿಗೂ
ಪ್ರತಿಕ್ರಿಯೆ ಬರಲಿಲ್ಲ.ಅಷ್ಟು ಹೊತ್ತಿಗಾಗ ಲೇ ಮನೆಯವರಿಗೆ ಅದೂ ಕುಟುಂಬದ ಒಂದು ಭಾಗವೇ-ಅನಿಸತೊಡಗಿ ಆಪ್ತತೆ
ಬೆಳೆದಿತ್ತು.ಮುಖ್ಯವಾಗಿ ಆ ಮರಿಯೇ
ಹಾಗೆಂದುಕೊಂಡಾಗಿತ್ತು.ಸಣಕಲಾಗಿದ್ದ
ಆ ಮರಿ ಮನೆಯವರ 'ರಾಜಾತಿಥ್ಯ' ದಿಂದ ಮುದ್ದು ಮುದ್ದಾಗಿ ಬೆಳೆದು, ಬೆಳ್ಳಗೆ ನೋಡಿದವರ ಕಣ್ಣು ಕುಕ್ಕುತ್ತಿತ್ತು.
ಕೈಯಲ್ಲಿ ಹಿಡಿದರೆ ಮೃದುವಾಗಿ,ತುಂಬ
ಹಿತವಾಗಿ feel ಆಗುತ್ತಿದ್ದುದಕ್ಕೋ ಏನೋ ಎಲ್ಲರೂ ಅದನ್ನು ' ಮೊಮೊ'
ಎಂದು ಕರೆಯಲಾರಂಭಿಸಿದ್ದರು ಕೂಡ.
ಹೊರ ಗೇಟಿನಿಂದ ಇಂಚು ಇಂಚೂ ತನ್ನದೇ ಎಂಬಂತೆ, ಮನೆಗೆ ಬರುವವರು
ತನ್ನಪ್ಪಣೆಯಿಲ್ಲದೇ ಒಳಗೆ ಬರಲಾಗದು
ಎಂಬಂತೆ ನಡೆದುಕೊಳ್ಳುತ್ತಿತ್ತು.ಗೊತ್ತಿದ್ದ ವರೇ ಬಂದರೂ ಯಾರಾದರೊಬ್ಬರು
ಅದನ್ನು ಎತ್ತಿಕೊಂಡು ಅದರ ಜಾಗ ಸೇರಿಸಿ ಕಬ್ಬಿಣದ ಬಾಗಿಲ ಹಿಂದೆ ಕೂಡಿ ಹಾಕಿದರೂ ಅದರ ಧ್ವನಿಯೇ ಎದೆ
ನಡುಗಿಸುತ್ತಿತ್ತು.ಮನೆ ಬಿಟ್ಟು ಬರುವ ವರೆಗೂ ಅಂಗೈಯಲ್ಲಿಯೇ ಜೀವ ಹ ಹಿಡಿದು ಕೊಂಡ ಭಾವ...
     ‌ ‌          ಯಾವು ಯಾವುದೋ ಕಾರಣಕ್ಕೆ ಇತ್ತೀಚೆಗೆ ಅವರ ಮನೆಗೆ
ನನಗೆ ಹೋಗಲಾಗಿರಲಿಲ್ಲ.ಮೊನ್ನೆ
ಅವಕಾಶ ಒದಗಿ ಬಂತು.ಹೋದಾಗ
ಅಚ್ಚರಿಯಾದದ್ದು ಅಲ್ಲಿ ಬೇರೆಯದೇ
ನಾಯಿ ಇದ್ದ ಹಾಗೆ ಅನಿಸಿದ್ದು.ತುಂಬ ಬೆಳೆದು/ಮೈತುಂಬ ಕೂದಲುಗಳುಳ್ಳ
ದೊಡ್ಡ ಗಾತ್ರದ ಜಾತಿಯ ನಾಯಿಯ
ರೂಪ.ಆದರೆ ಸದ್ದೇಯಿಲ್ಲ.ಸದಾ ಯಾರಾದರೂ ಒಬ್ಬರ ಹಿಂದೆ ಅಂಟಿ ಕೊಂಡೇ ನಡೆಯುವುದು ಯಾರೂ ಇಲ್ಲದಿದ್ದರೆ ಕಂಗಾಲಾದಂತೆ ಹುಡುಕಾಡುವುದು/ ಇಲ್ಲವೇ ಕುರ್ಚಿ/
ಸೋಫಾ ಹುಡುಕಿ ಭಯಭೀತ ಕಣ್ಣುಗಳಿಂದ ಮುದುಡಿ ಮಲಗುವದು
ನೋಡಿ ನನಗೋ ಒಗಟು...ಅಂಗೂಲಿ ಮಾಲ ' ಬೌದ್ಧ ಬಿಕ್ಷು'ವಾದ feeilngಉ
                ನನ್ನಿಂದ ಸುಮ್ಮನಾಗಿರಲಾ ರದೇ ಕೇಳಿಯೇ ಬಿಟ್ಟೆ.ಕೇಳಿದ ನಂತರ
ಕಸಿವಿಸಿಯಾಯ್ತು.ಕಳೆದ ದೀಪಾವಳಿ ಯಲ್ಲಿ ಒಂದು ವಾರಕ್ಕೂ ಮೀರಿ
ಯಾವುದೇ ಅಂಕೆಯಿಲ್ಲದೇ ಹಾರಿದ 
ಸಿಡಿ ಮದ್ದುಗಳು/ಆಟಂಬಾಂಬ್ಗಳ
ಎದೆ ನಡುಗಿಸುವ ಸದ್ದುಗಳು ಅದರ ಧ್ವನಿಯನ್ನೂ ಅಡಗಿಸಿಬಿಟ್ಟಿದ್ದವು.
ಆ ಅವಧಿ ಮುಗಿಯುವವರೆಗೂ ಬೆಚ್ಚಿ ಬೆದರಿ ಮುದುಡಿಕೊಂಡು,ಮನೆಯಲ್ಲಿ
ಇದ್ದೂ ಇಲ್ಲದ ಹಾಗೇ ಇದ್ದು, ಹಬ್ಬದ ನಂತರವೂ ಆ ಭಯ ಎಷ್ಟು ಬೇರು ಬಿಟ್ಟಿತ್ತೆಂದರೆ ಇಂದಿಗೂ ಅದು ಅದರಿಂದ ಹೊರ ಬರಲಾಗಿಲ್ಲ.ಅಲ್ಲದೇ ಮನೆಯವರೆಲ್ಲರ ಸಾಂಘಿಕ ಪ್ರಯತ್ನದ ನಂತರವೂ ಅದು  ಮೊದಲಿನ 'ಮೊಮೊ' ಆಗಿಯೇಯಿಲ್ಲ...
              ಅದರದಿನ್ನು ಹೆದರಿಕೆಯಿಲ್ಲ
ಎಂಬ ನಿರಾಳ ಭಾವ ಬರಬೇಕಿತ್ತು. ಆದರೆ ಹಾಗಾಗಲೇಯಿಲ್ಲ.ಪ್ರತಿ ದೀಪಾವಳಿಗೂ ಮೂರು ವರ್ಷಗಳ ವರೆಗೆ ಮಗನನ್ನು ಬಗಲಲ್ಲೆತ್ತಿ/ಸೆರಗು
ಮುಚ್ಚಿ/ಮನೆಯ ಮೂಲೆಯೊಂದರಲ್ಲಿ
ಹೆದರಿಕೆಯಿಂದ ನಡುಗುತ್ತಿದ್ದ ನನ್ನ ಈಗಿನ ಐವತ್ತೆರಡು ವರ್ಷದ ಮಗನ
ಬಾಲ್ಯದ ದಿನಗಳಿಗೆ ಇದನ್ನು ಸಮೀಕರಿಸಿಕೊಂಡು ಸಂಕಟವಾಯಿತು
ಒಮ್ಮೆ, ಕೇವಲ ಒಂದೇ ಒಂದು ಸಲ ಮೋಮೋದ ಆ ಮೊದಲಿನ ಸಿಂಹಧ್ವನಿ
ಕೇಳುವ ತವಕದೊಂದಿಗೇ ಮನೆಗೆ ವಾಪಸ್ ಆದೆ.
          ‌ಎಷ್ಟೊಂದು ಮಕ್ಕಳ/ಹಿರಿಯರ,
ಅಶಕ್ತರ/ ಮೂಕ ಪ್ರಾಣಿಗಳ ಪ್ರತಿನಿಧಿ ಯೋ ಈ 'ಮೊಮೋ' ಅನಿಸಿತು ನನಗೆ.
ಎಲ್ಲವೂ ಅತಿರೇಕಕ್ಕಿಟ್ಟುಕೊಂಡ ಈ
ಆಡಂಬರದ ಜಗತ್ತಿನಲ್ಲಿ 'ಮೊಮೊ'ದ
ಈ ನೋವನ್ನು 'ಬುದ್ಧಿವಂತ'ರೆನಿಸಿಕೊಂ ಡವರಿಗೆ ತಿಳಿಯ ಪಡಿಸುವದಾದರೂ ಹೇಗೆ???
     





Sunday 19 November 2023

    ಅದು 1970 ದಶಕ...ಧಾರವಾಡದ
ಗಲ್ಲಿಗಲ್ಲಿಗಳಲ್ಲಿ/ ಪುಟ್ಟ ಪುಟ್ಟ ಬಯಲು ಗಳಲ್ಲಿ ಮೂರು ಕೋಲುಗಳನ್ನು ಊರಿ
ಇಲ್ಲವೇ ಊಟಕ್ಕೆ ಕೂಡುವ ಮಣೆಗಳ ನ್ನು ಹೇಗೋ ಆಸರೆ ಕೊಟ್ಟು ನಿಲ್ಲಿಸಿ ಮಕ್ಕಳು cricket ಆಡುತ್ತಿದ್ದರು.ಸ್ವಲ್ಪ- ಸ್ವಲ್ಪವೇ ಆ ಆಟ ಜನಪ್ರಿಯವಾಗತೊ ಡಗಿತ್ತು.TV ಇನ್ನೂ ಬಂದಿರಲಿಲ್ಲವಾಗಿ
ಅದರ ಪ್ರಭಾವ ಕೆಲವೇ ಮಕ್ಕಳ ಮೇಲೆ ಮಿತಿಯೊಳಗಿತ್ತು...
                ನನ್ನ ಮಗ ಸ್ನಾನ ಮಾಡಲು
ತೆಗೆದ ಬನಿಯನ್ ಅನ್ನು  ಉಂಡೆ ಕಟ್ಟಿ
ಓಡಿ ಬಂದು ಬಾಲ್ ಹಾಕುವಂತೆ ಬಕೆಟ್ಟಿನೊಳಗೆ ಹಾಕಿ ಕೇಕೆ ಹಾಕುತ್ತಿದ್ದ.
ಯಾರಾದರೂ ಏನಾದರೂ ಕೊಡಲು ಹೋದರೆ ಅದನ್ನು ಎಸೆಯಲು ಹೇಳಿ ಎದ್ದು/ಬಿದ್ದು/ಕೆಳಗೆ ಮಲಗಿ ಕಠಿಣ Catchವೊಂದನ್ನು ಹಿಡಿದಂತೆ ಅದನ್ನು ತೆಗೆದುಕೊಂಡು ಸುಖಿಸುತ್ತಿದ್ದ.೧೯೮೪ ರಲ್ಲಿ TV ಬಂದ ಮೇಲೆ  ನಮ್ಮ Black and White T Vಯಲ್ಲಿಯ Match ಗಳನ್ನೇ ಈಗಿನ‌ WORLD CUP ರೇಂಜ ನಲ್ಲಿ ವೈಭವೀಕರಣಗೊಳಿಸಲಾ ಗುತ್ತಿತ್ತು.ಚಹಾ/juice/ಚುರುಮರಿ/ ಮಿರ್ಚಿಗಳ ಸಮಾರಾಧನೆ, ಗಂಟಲು  ಹರಿಯುವಂತೆ ಕೇಕೆ/ಬೇಕಾದ ಟೀಮ್  ಗೆದ್ದರೆ ನಿಬ್ಬಣದ ಮುಂದಿನ ಕುಣಿತದ
ಗದ್ದಲ...ಉಫ್ ಮನೆ - ಮನಸ್ಸುಗಳ
ತುಂಬಾ ನವಿಲ ನರ್ತನ.ನಿರೀಕ್ಷೆಗಳು
ಕಡಿಮೆ ಹೀಗಾಗಿ ಶುದ್ಧ ಆನಂದಕ್ಕೇನೇ
ಸಿಂಹಪಾಲು...ನಾವು ಹಿರಿಯರು
ಮಕ್ಕಳನ್ನು ಕಾಡಿ/ಕೇಳಿ ಆ ಆಟವನ್ನು 
ತಿಳಿದುಕೊಂಡು ಅವರು ನಕ್ಕಾಗ ನಕ್ಕು,
ಖಿನ್ನರಾದಾಗ ಚು.ಚು.ಚು ಲೊಚಗುಟ್ಟಿ ಅವರನ್ನು ಬೆಂಬಲಿಸುವುದಿತ್ತು. Innocence is Bliss- ಅನ್ನುವುದು ಅದಕ್ಕೇ ಇರಬೇಕು
           ಈಗ ಎಲ್ಲೆಲ್ಲೂ ಜ್ಞಾನ ಸ್ಫೋಟ,
ಕಿರುಬೆರಳಿನಲ್ಲಿ ಮಾಹಿತಿ ಕಣಜ.ಅದೇ
ಮಾತನಾಡಲು ಕಲಿತ ಮಕ್ಕಳಿಗೂ
ತಮ್ಮವೇ ಅಭಿಪ್ರಾಯಗಳು.ತಮ್ಮದೇ
ರೀತಿಯಲ್ಲಿ ಅವುಗಳನ್ನು ವ್ಯಕ್ತ ಪಡಿಸುವ ಚಾಕಚಕ್ಯತೆ...ಆಟವನ್ನು ಆಟವಾಗಿ ನೋಡದೇ ಅಭಿಮಾನದ
ಅತಿರೇಕ, ಅತಿರೇಕದ ಪ್ರತಿಕ್ರಿಯೆಗಳು,
ಅಭಿಪ್ರಾಯ ಭೇದಗಳನ್ನೇ ಮೂಲಕ್ಕೆ ಗಂಭೀರವಾಗಿಸಿ - ವಾದ-ವಿವಾದಗಳು,
ಔಚಿತ್ಯವನ್ನು ಮೀರಿದ‌ ಪದ ಬಳಕೆ, ಅನವಶ್ಯಕ ಮಾನಸಿಕ ಕ್ಲೇಶಗಳು,
ಇವುಗಳನ್ನೇ ಕಾಣುತ್ತೇವೆ.ಆದರೆ ಅಲ್ಲಿ ಕೆಲಸ ಮಾಡುವುದು AAA( ಅರ್ಹತೆ- ಅವಕಾಶ- ಅದೃಷ್ಟ)ಗಳೇ ಹೊರತು
ಮಿಕ್ಕ ಯಾವ ವಿಷಯಗಳೂ ಅಲ್ಲ.
ಹತ್ತಾರು ಟೀಮ್ ಗಳು ಆಡಲು ಬಂದಾಗ ಎಲ್ಲರೂ ಚನ್ನಾಗಿ ಆಡಲೆಂ ದೇ,ಗೆಲ್ಲಲೆಂದೇ,ಬಂದಿರುತ್ತಾರೆ.
ಅದೃಷ್ಟ ಕೈಕೊಟ್ಟರೆ ಯಾವ ಅರ್ಹತೆ ಯೂ ಏನೂ ಮಾಡಲಾಗುವುದಿಲ್ಲ. ಕರ್ಣನ‌ ಕೌಶಲ್ಯದಂತೆ ಕೊನೆ ಗಳಿಗೆ ಯಲ್ಲಿ ನೆನಪು ಕೈಕೊಟ್ಟು ದುರಂತಕ್ಕೆ ಏನೋ ಒಂದು ಕೊನೆಗೆ ಕಾರಣೀಭೂತ ವಾಗುತ್ತದೆ...ಆಗ ಯಾವ ಸಚಿನ್/ ಯಾವ ಕೊಹಲಿಯೂ ಏನನ್ನೂ ಮಾಡಲಾಗದೇ ನಡೆಯುತ್ತಿರುವುದಕ್ಕೆ 
ಮೂಕ ಸಾಕ್ಷಿಯಾಗಯತ್ತಾರೆ...
ನಿನ್ನೆಯಾದದ್ದೂ ಅಂಥ ಪ್ರಸಂಗಗಳಲ್ಲಿ ಒಂದು...

ಅಷ್ಟೇ...

.


       ‌

                      

ಈ ಲಿಮರಿಕ್ ಗಳು
ಪಂಚುಗಳುಳ್ಳ ಗಿಮಿಕ್ ಗಳು...
ಪದ್ಯಗಳು/ಗದ್ಯಗಳು...
ಎರಡಕ್ಜೂ ಸಲ್ಲುವ ಪದ ನೈವೇದ್ಯಗಳು.
ಒಟ್ಟಿನಲ್ಲಿ ಪಂಚ್ ಪದಿಗಳ
ಒಲ್ಲದವರಿಗೆ ಪದ ' ಕಿರಿಕ್' ಗಳು...



Saturday 18 November 2023

   ‌‌‌      " ಒಬ್ಬ ಹೆಣ್ಣುಮಗಳು/ತಾಯಿ/ ಟೀಚರ್-ಆದವರು ಮಾತನಾಡುವದು 
ಹೆಚ್ಚು...ನಾನು ಮೂರೂ ಆದವಳು... ಮಾತು ಮುಗಿಸುವವರೆಗೂ ಕೈಯಲ್ಲಿ
ಹಿಡಿದ ಮೈಕು ನಂದೇ-"ಎಂದು ಸುಧಾ ಮೂರ್ತಿಯವರು ಒಮ್ಮೆ ಒಂದು function ನಲ್ಲಿ ತಮಾಷೆ ಮಾಡಿಯೇ
Stage ಏರಿದ್ದರು...ನಾನೂ ಆ ಮೂರು
ಆದವಳೇ...ಆದರೆ ಮೈಕಿಗೂ/ ನನಗೂ
ಆಗಿಬರುವುದಿಲ್ಲ.ಆ ಗಳಿಗೆಗೆ ಬೇಕಾದ
Presence of mind ನನಗಿಲ್ಲ.ಕಾರಣ
Stage ಹತ್ತಿದ್ದು ಇಲ್ಲವೇ ಇಲ್ಲ ಅನ್ನುವ ಷ್ಟು ಕಡಿಮೆ...ಆದರೆ ನೌಕರಿಯಲ್ಲಿದ್ದಾಗ
ವರ್ಷವಿಡೀ ಶಾಲಾ ಕಾರ್ಯಕ್ರಮಗಳ ಲ್ಲಿ ಹಿನ್ನೆಲೆಯಲ್ಲಿ ಕೆಲಸ ನಿರ್ವಹಿಸಿ ಗೊತ್ತಿದೆಯಾದ್ದರಿಂದ 'ಸಂತೆಯಲ್ಲಿ ಮನೆ ಮಾಡುವುದು'- ಅಂದರೇನು ಎಂಬುದು ಗೊತ್ತಿದೆ.ಹೀಗಾಗಿ ಆ ಬಗ್ಗೆ ದೂರು/ತಕರಾರು ಎಂಬುದು ಇರಲಿಲ್ಲ ಇದುವರೆಗೆ...
             ಈ ಮಾತು ಹಳೆಯದು. ಇದೀಗ ನನ್ನದು ' ಸಂಧ್ಯಾ ಪರ್ವ'...
ಎಲ್ಲ ಅವಯವಗಳೂ 50%  off...
ಕಣ್ಣಿಗೆ ನೋಡುವ/ಕಿವಿಗೆ ಕೇಳುವ/ ಮೆದುಳಿಗೆ ಅರ್ಥೈಸಿಕೊಳ್ಳುವ ತಾಕತ್ತು
ಕ್ಷೀಣಿಸಿದೆ,ಅದು ಸರ್ವೇ ಸಾಮಾನ್ಯ
ಎಂಬುದನ್ನು ಯಾವಾಗಲೋ ಒಪ್ಪಿ ಕೊಂಡು ನನ್ನ ಸಾಮರ್ಥ್ಯಕ್ಕೆ ಅನುಗುಣ ವಾಗಿ ದಿನಚರಿ ಬದಲಿಸಿಕೊಂಡೂ ಆಗಿದೆ...
    ‌‌        ಆದರೂ ಕೆಲವೊಮ್ಮೆ ನಮಗೆ
ಪರೀಕ್ಷಾಕಾಲ ಎಂಬುದು ಬರುವುದೂ. ಉಂಟು, ನಮ್ಮದು ಬಹುದೊಡ್ಡ Gated community.ವರ್ಷಕ್ಕೊಮ್ಮೆ
annual day ಆಗುತ್ತದೆ.ನಾನೂ ಅದರಲ್ಲಿ ಸ್ವಂತ ಖುಶಿಯಿಂದ ಭಾಗವ ಹಿಸಿದ್ದೇನೆ.ಆದರೆ ಈ ಸಲ stage ದೊಡ್ಡದಾಗಿ ನನ್ನ ರೂಮಿಗೆ ಹೊಂದಿ ಕೊಂಡೇ ಆಗಿದೆ.ಬೆಳಗಿನಿಂದಲೇ ಅದರ
ತಯಾರಿ ಅದ್ಧೂರಿಯಾಗಿ ನಡೆದಿದೆ. ಚಿಕ್ಕಪುಟ್ಟ ಮಕ್ಕಳ rearsals ನಡೆದಿವೆ. ನೋಡಲು ಹಬ್ಬ...ಒಂದೇ ಹೆದರಿಕೆ.  ಆರು ಗಂಟೆಯಿಂದ dinner
ಮುಗಿಯುವವರೆಗೆ ಅಂದರೆ ಸುಮಾರು
ಹತ್ತೂವರೆಯವರೆಗೆ ಸತತವಾದ ಸದ್ದು
ಸಹಿಸುವ ಕ್ಷಮತೆಯ ಕೊರತೆ ಇರುವುದೇ ಸಧ್ಯಕ್ಕೆ ನನ್ನ ಸಮಸ್ಯೆ...

           'ಅಕ್ಕಿಯ ಮೇಲೂ ಇಷ್ಟ.ಇತ್ತ ನೆಂಟರ ಮೇಲೂ ಪ್ರೀತಿ.ಕಾರ್ಯಕ್ರಮ
ನೋಡುವಾಸೆ.ಆದರೆ ನನ್ನ‌ ಮಿತಿಗೆ 
ಕಾಯಂ ಅಲ್ಲೇ ಇದ್ದು ಭಾಗವಹಿಸು ವದೂ ಸಾಧ್ಯವಿಲ್ಲದ ಮಾತು.ಆ ಕಾರಣಕ್ಕೆ ಆತ್ಮೀಯ ಶಾಲಿನಿಯೊಂದಿಗೆ
ಒಂದು ಸುಂದರ ಸಂಜೆ ಕಳೆದು ಬಹುದಿನಗಳಿಂದ ಬಾಕಿಯಿದ್ದ ಹರಟೆ
ಹೊಡೆದು ಮುಗಿಸಿ ಬಂದದ್ದು ನನಗೆ
ಕನಿಷ್ಟ ಮುಂದಿನ ಒಂದು ತಿಂಗಳ  ಟಾನಿಕ್ಕು...
 ‌             


 

Sunday 12 November 2023

           ಒಂದು ದಿನ ಮೊದಲೇ ಆಕಳ ಸಗಣಿಯಿಂದ ಸಾರಿಸಿದ ನೆಲ/ ಅದರ ಅಂಚಿಗೆಲ್ಲ ಕೆಂಪು ಮಣ್ಣಿನ (ಹುರಮಂಜು ಎಂಬುದರ)  ಢಾಳವಾದ ಪಟ್ಟಿಗಳು/ ನಟ್ಟ ನಡುವೆ ಸಿಕ್ಕ ಜಾಗದ ಅಳತೆಗೆ ಹೊಂದುವ ರಂಗೋಲಿ ಎಳೆಗಳು/ ನಡುನಡುವೆ ಅರಿಷಿಣ- ಕುಂಕುಮದ ಲೇಪನ/ನಸುಕು ಮೂಡುವ ಮುನ್ನವೇ ಮನೆಮುಂದೆ ದೀಪಗಳ ಬಹು ಸಾಲು/ನಸುಕಿನಲ್ಲೆದ್ದು ಆಲಸಿ ಗಂಡ- ಏಳಲೊಪ್ಪದ ಮಕ್ಕಳನ್ನು
ರಮಿಸಿ, ಮರ್ಜಿ ಹಿಡಿದು,ಬಯ್ಯಲಾರ ದೇ ಬಯ್ದಂತೆ ಮಾಡಿ ಹಾಸಿಗೆ ಬಿಟ್ಟು
ಎಬ್ಬಿಸಿ ಆರತಿಗೆ ತಯಾರಾಗಲು 
ಕಳಿಸಿ/ಅಕ್ಕ ಪಕ್ಕದವರು ಲಭ್ಯವಿದ್ದರೆ ಅವರನ್ನೂ ಆಮಂತ್ರಿಸಿ ಮನೆಯ ನಡುವಿನ ಹಾಲಿನಲ್ಲಿ ಬ್ರಹತ್ ಆಕಾರದ
ಜಮಖಾನೆಯೊಂದನ್ನು ಹಾಸಿ, ಬಾಗಿಲ
ಮುಂದೆ ನಿಂತು ಪರಿಚಯದವರನ್ನು
ಒಳಗೆ ಕರೆದು ಕೂಡಿಸುವ ಅಮ್ಮ- ಅಪ್ಪಂದಿರು...
            ಅರೆನಿದ್ದೆಯಲ್ಲಿ ಕಣ್ಣುಜ್ಜುತ್ತ
ಏಳಲಾರದೇ ಎದ್ದು ಗಳಿಗೆಗೊಮ್ಮೆ ಅಮ್ಮನ ಎಚ್ಚರಿಕೆಯ ದನಿಗೆ ಸಣ್ಣಗೆ ಹೂಗುಡುತ್ತ,ಅರೆಮನಸ್ಸಿನಲ್ಲಿಯೇ
ತಯಾರಾಗುವ ನಾವು - ಮಕ್ಕಳು...
             ನಾವು ಆರತಿಗೆ ಹೋದರೆ ಅವರೂ ನಮ್ಮನೆಗೆ ಬರುತ್ತಾರೆ ಎಂಬ ಸದ್ಭಾವನೆಯಿಂದ ಕರೆಗೆ ಓಗೊಟ್ಟು
ಬೆಳಗಿನ ಆರತಿಯಲ್ಲಿ ಸಂಭ್ರಮದಿಂದ ‌
ಪಾಲ್ಗೊಳ್ಳುವ ನೆರೆಹೊರೆಯ ಹಿರಿ- ಕಿರಿಯರು...ಆರತಿಯ ಹಾಡು ಹಾಡುತ್ತಲೇ ಒಬ್ಬೊಬ್ಬರಿಗೂ ತಿಲಕ
ಹಚ್ಚಿ,ಹಣೆಗೆ ಎಣ್ಣೆಯೊತ್ತಿ ಆಶೀರ್ವದಿ ಸುವ ಮುತೈದೆಯರು, ಆರತಿಯ ತಟ್ಟೆಗೆ ಹಾಕಿದ ರೊಕ್ಕದ ಮೇಲೊಂದು
ಕಣ್ಣಿಟ್ಟುಕೊಂಡೇ ಆರತಿಯ ನಂತರದ
ಹಣ ಹಂಚಿಕೊಳ್ಳಲು ಆತುರರಾದ
ಅಕ್ಕ ತಂಗಿಯರು,ಕೆಲಸವಲ್ಲಿ ಏನೇ ನಡೆದಿರಲಿ ಹಸೆಗೆ ಕರೆಯುವ ಹಾಡು/ ಆರತಿ ಹಾಡು/ ಎಣ್ಣೆ ಶಾಸ್ತ್ರದ ಹಾಡು/ ಆಶಿರ್ವಾದದ ಹಾಡು ಎಂದು ಪದ್ಧತಿಗೆ
ಚ್ಯುತಿ ಬಾರದಂತೆ ಹಿನ್ನೆಲೆಯಲ್ಲಿ ಸುರಾಗವಾಗಿ ಹಾಡುವ ಅಜ್ಜಿಯಂದಿರು,ಅವರಿಗೆಲ್ಲ ಆರತಿಯ ನಂತರ ಸರದಿಯಲ್ಲಿ ನಿಂತು ಸಾಷ್ಟಾಂಗ ನಮಸ್ಕಾರ ಮಾಡಲು ಕಾದಿರುವ ಕಿರಿಯರ ಸಾಲು...
             " ಬೇಗ ಬೇಗ ಸ್ನಾನ ಮಾಡಿ, ಗುಡಿಗೆ ಹೋಗಿಬನ್ನಿ- ಫಲಹಾರಕ್ಕೆ ಬರಲು ಒತ್ತಾಯ ಮುಂದಿನ ಹೆಜ್ಜೆ...ಅದೂ ತೈಲಾಭ್ಯಂಜನ- ಎಣ್ಣೆ ಸ್ನಾನ...ಅದು ಮುಗಿಯಿತೋ ವಾರ ಮೊದಲೇ ಮಾಡಿಟ್ಟ ಸಿಹಿ- ಕಾರದ ತಿಂಡಿಗಳ ಸಮಾರಾಧನೆ...ನಮ್ಮ ನಮ್ಮ ಮನೆಯಲ್ಲಿ ಎಂಬ ಕಟ್ಟಳೆಯೇ ಇಲ್ಲ.
ಹಸಿದ ಹೊತ್ತಿಗೆ ಯಾರ ಮನೆಯಲ್ಲಿ ಇರುತ್ತೀರೋ ಆ ಮನೆಯ ತಟ್ಟೆಯ ಮುಂದೆ ಕೂತರೂ ಆದೀತು...
                ಇದು ನರಕ ಚತುರ್ದಶಿ
ಒಂದೇ ದಿನದ ರಿವಾಜಲ್ಲ.ಪೂರ್ತಿ ಮೂರು ನಾಲ್ಕು ದಿನಗಳ ನಿತ್ಯ ಸಮಾರಾಧನೆ.ಆ ದಿನಗಳಲ್ಲಿ ಫಲಹಾರವೇ ಪರಿಹಾರ... ಊಟ ವೆಂಬುದು ಕಾಟಾಚಾರಕ್ಕೆ... ಬೇಕಾದಾಗ...ಬೇಕಾದಷ್ಟು...ಸಾಯಂಕಾಲ, ಪಟಾಕ್ಷಿಗಳ ಹಾವಳಿ,ಮಿತ್ರ ಕೂಟಗಳು,ಉದ್ದೇಶ ರಹಿತ ತಿರುಗಾಟ,
ದಣಿವಾದಾಗ ನಿದ್ದೆಯ ಚಿಂತೆ...
              ಇದು ನಮ್ಮ ಬಾಲ್ಯದ ದೀಪಾವಳಿ...ಈಗ ನನ್ನ ಯಾವ ಮಕ್ಕಳಿಗೂ ಹೆಣ್ಣುಮಕ್ಕಳಿಲ್ಲ...ರಜೆಯ ಅಭಾವವೋ/ಬರಲಾರದ ಯಾವುದೋ ಒಂದು ಅನಿವಾರ್ಯತೆ
ಯೋ ಹಬ್ಬದಾಚರಣೆ King Size ದಿಂದ Nuclear Size ಗೆ ಇಳಿದಿದೆ. ಆರತಿ ಹಿಡಿಯಲೂ ಇಬ್ಬರು ಹೆಣ್ಣುಮಕ್ಕಳ ಕೊರತೆ...ಗಂಡ - ಮಕ್ಕಳು ಯಾರನ್ನೋ ಜೊತೆಗೂಡಿಸಿ
ಮಾಡಿ ಮುಗಿಸುವ ಅನಿವಾರ್ಯತೆ...
ಇಂದು ಬೆಳಿಗ್ಗೆ ಆದದ್ದೂ ಅದೇ...ಆದರೆ
ಸಂಭ್ರಮ ಸಂಭ್ರಮವೇ ತಾನೆ!!! ಅದು
ಈಗ ' ಜನ-ಜನಿತ'ವಲ್ಲ- ' ಮನ ಜನಿತ'...
        ಒಪ್ಪಿಕೊಳ್ಳ‌ಬೇಕಾದ್ದೇ ತಾನೇ!!!


Saturday 11 November 2023

       ಸಡಗರ/ಸಿಹಿ- ಕಾರದ ತಿಂಡಿ/ ಸಹಕಾರ ಎನ್ನುತ್ತಾ ಮಹಿಳಾ ಸ್ನೇಹಿ 
ಶಬ್ದಗಳ ಬಳಕೆ ಮಾಡಿ ನೀವು ಉದಾಹರಿಸಿದ ತಿಂಡಿಗಳಲ್ಲಿ ಕನಿಷ್ಟ ಕಾಲುಭಾಗವಾದರೂ ಡಬ್ಬಿಗಳ ನ್ನಲಂಕರಿಸಿ ಕುಳಿತ ದಿನದಂದೇ Quiz ನ ಪ್ರಶ್ನೆಗಳನ್ನು ಕೇಳಿ ಉತ್ತರಿಸುವವರ ಶ್ರಮವನ್ನು ಅರ್ಧವಾಗಿಸಿದ್ದೀರಿ. ಎಂದೆಂದು ಏನೇನು ಮಾಡಬೇಕು ಎಂದು plan ಮಾಡಿಕೊಂಡವರಿಗಂ ತೂ ಮತ್ತೂ ಅರ್ಧ ನೆನಪಿನಲ್ಲಿರಲು ಸಾಕು. " ನಿಮ್ಮನೆಯಲ್ಲಿ ಏನಡಿಗೆ?" ಎಂದು ಕೇಳಿದರೆ ಕೆಲವು ಹೊರಬೀಳು  ತ್ತವೆ.ಕೆಲವಕ್ಕೆ ನೀವು ಕೊಟ್ಟ clue ಗಳೇ
ಸಾಕು...ಒಟ್ಟಿನಲ್ಲಿ ಸಿಹಿ- ಕಾರ ತಿಂಡಿಗಳ
ಹೆಸರುಗಳ ಅನ್ವೇಷಣೆ ಅಷ್ಟೇನೂ ಕಠಿಣವೇನೂ ಇಲ್ಲ ಬಿಡಿ.ನೆನಪು ಕೈ-ಕೊಟ್ಟರೆ ಮನೆಯಲ್ಲಿಯ ತಿಂಡಿಗಳ
ಸುವಾಸನೆಗಳೇ ನೆನಪಿಸಲು ನೆರವಾಗುತ್ತವೆ...

Thursday 9 November 2023

ನನ್ನನ್ನು 'ದಿವಾಳಿ'-ಯಾಗಿಸಿದ ಒಂದು
ದೀಪಾವಳಿ...
    
         ನಾವು ಚಿಕ್ಕವರಾಗಿದ್ದಾಗ (ನಮ್ಮ ಕಡೆಗೆ) ಪಟಾಕ್ಷಿ ಹಾರಿಸುವುದು ಕೇವಲ ಗಣೇಶ ಚತುರ್ಥಿಗೆ ಮಾತ್ರ ಮೀಸಲಾ ಗಿತ್ತು. ಅದು ಹೇಗೆ/ಯಾವಾಗ/ಎಲ್ಲಿಂದ ದೀಪಾವಳಿಗೂ ಹಬ್ಬಿತೋ ನೆನಪಿಲ್ಲ. ಈಗ ಬಿಡಿ, ಎಲೆಕ್ಶನ್ ಗೆದ್ದರೆ/ಕ್ರಿಕೆಟ್
Match ಗೆದ್ದರೆ/ಮದುವೆ ನಿಬ್ಬಣಗಳಲ್ಲಿ
/ಯಾರಾದರೂ ತೀರಿಕೊಂಡಾಗಲೂ
ಪಟಾಕ್ಷಿ ಹಾರಿಸುವ ರೂಢಿಯುಂಟು...

      ‌‌       ಅಂಥ ಸಂಭ್ರಮ ಅಪರೂಪ ವಾಗಿದ್ದ ಕಾಲದ ಮಾತಿದು...ರೂಢಿಗತ ವೋ/ಹಣದ ಅಭಾವವೋ ಅಂತೂ
ನಾವೆಲ್ಲಾ ಆ ಪ್ರಸಂಗಕ್ಕೆ ವರ್ಷವಿಡೀ ದಾರಿ ಕಾಯುತ್ತಿದ್ದುದು ಚನ್ನಾಗಿಯೇ ನೆನಪಿದೆ...ದೊಡ್ಡವರಿಗೆ/ಚಿಕ್ಕವರಿಗೆ
ಬೇರೆ ಬೇರೆ ರೀತಿಯ ಪಟಾಕಿಗಳ ಹಂಚಿಕೆ... ಸಣ್ಣ ಸಣ್ಣ ಕೇಪಿನ ಡಬ್ಬಿ/ಚಿಕ್ಕ ಚಿಕ್ಕ ಪಟಾಕಿ ಸರಗಳು/ಸುರು ಸುರು ಬತ್ತಿಗಳು/ಚಕ್ರ/ಹೂಕುಂಡಗಳು /ಮತಾಪು ಕಡ್ಡಿ/ಚುಚೇಂದ್ರಿಯಂಥ ಹೂ ಕಡ್ಡಿಗಳು - ಇವು ಚಿಕ್ಕಮಕ್ಕಳಿಗೆ... ಮನೆಯಲ್ಲಿ/ ಅಂಗಳದಲ್ಲಿ ಹಾರಿಸ ಬಹುದಾದ ನಿರುಪದ್ರವಿ ಗುಂಪಿಗೆ ಇವು ಸೇರಿದರೆ, ಅಟಂಬಾಂಬು/ಲಕ್ಷ್ಮಿ ಪಟಾಕಿ/ ಧಡಾಕಿಗಳು/ ದೊಡ್ಡ ದೊಡ್ಡ ಪಟಾಕಿ ಸರಗಳು/ರಾಕೆಟ್ಗಳು ಇಂಥವು, ದೊಡ್ಡವರಿಗೆ..."ಎಲ್ಲರಿಗೂ ಸರಿಯಾಗಿ ಹಂಚುತ್ತೇವೆ, adjustments ನೀವೇ ಮಾಡಿಕೊಳ್ಳಿ. ಯಾವುದೇ ತಕರಾರು ನಮ್ಮ ಬಳಿ ಬರುವಂತಿಲ್ಲ - ಇದು ಹಿರಿಯರೆಲ್ಲರ ಕಾಯಂ ಕರಾರು...

             ಒಮ್ಮೆ'ಪಟಾಕಿ'ಗಳ ಬಟವಡೆ ಯಾದ ನಂತರವೇ ನಮ್ಮ ಗುಪ್ತ ಕಾರ್ಯಾಚರಣೆ ಪ್ರಾರಂಭ.ಕಿರಿಯರ ನ್ನು ಪುಸಲಾಯಿಸಿ/ಹೇಗೋ ಒಪ್ಪಿಸಿ
ಅವರಿಂದ ನಮಗೆ ಬೇಕಾದ ದೊಡ್ಡ ದೊಡ್ಡ ಪಟಾಕಿಗಳನ್ನು ಲಪಟಾಯಿಸು
ವುದೂ ಒಂದು ಚಾಕಚಕ್ಯತೆಯಾಗಿತ್ತು
ನಮಗೆ...ಎಲ್ಲರಕ್ಕಿಂತ ಮೊದಲು/ 
ಯಾರಿಗೂ ಗೊತ್ತಾಗದಂತೆ/ಒಂದು
ಗುಪ್ತ ಸ್ಥಳವನ್ನಾಯ್ದು ' ವ್ಯಾಪಾರ ಕುದುರಿಸುವುದು' ನಡೆಯಬೇಕಿತ್ತು...

               ಒಂದು ವರ್ಷ ಇವೆಲ್ಲ ಹಂತ ಗಳನ್ನು ಹಾಯ್ದು/ಬೇಡದ ಪಟಾಕ್ಷಿಗಳ ನ್ನು ಸಾಗಿಸಿ/ ಬೇಕಾದವುಗಳನ್ನು ಶೇಖರಿಸಿ ಇಟ್ಟುಕೊಂಡೆ...ಹಬ್ಬದ ಹಿಂದಿನ ದಿನ ಅವುಗಳನ್ನೆಲ್ಲ ಸ್ವಲ್ಪು ಬೆಚ್ಚಗೆ ಮಾಡಿಕೊಳ್ಳಬೇಕು- ಹಳೆಯ ವಿದ್ದು, ತಂಪಾಗಿದ್ದರೆ ' ಠುಸ್ಸ್' ಆಗುವುದು ಗ್ಯಾರಂಟಿ.ಆ ಕಾರಣಕ್ಕೆ
ಒಂದು ದೊಡ್ಡ ರೊಟ್ಟಿಯ ಹಂಚನ್ನು
ಬಿಸಿಯಾಗಿದ್ದ ಒಲೆಯ ಮೇಲಿಟ್ಟು ಎರಡು ಸಲ ಮೇಲೆ ಕೆಳಗೆ ಮಾಡಿ ತೆಗೆಯಬೇಕೆಂದು ಯೋಚಿಸಿದವಳು
ಊಟಕ್ಕೆ ಕರೆದರೆಂದು ಹೋದೆ.ಅರ್ಧ ಊಟವಾಗಿತ್ತು, ಒಮ್ಮಿಂದೊಮ್ಮೆಲೇ
ಭಯಂಕರ ಶಬ್ದ...ಎಲ್ಲರಿಗೂ ಗಾಬರಿ.
ಹಿತ್ತಲ ಗೋಡೆ ಬಿತ್ತೇನೋ ಎಂದು ಕೊಳ್ಳುವಾಗಲೇ ಕಿವಿ ಗಡಚಿಕ್ಕುವಂತೆ ಶುರುವಾದ ಶಬ್ದ ಎಲ್ಲರನ್ನೂ ಕಕ್ಕಾವಿಕ್ಕಿ ಯಾಗಿಸಿ/ ಚಿಕ್ಕಮಕ್ಕಳನ್ನು ಚೀರಾಡಿಸಿ/ಅಪ್ಪನ ಕೂಗಾಟವನ್ನೂ ಮೀರಿಸಿ ಹತ್ತು ನಿಮಿಷಗಳಾದ ಮೇಲೆ ಕ್ರಮೇಣ ಸಣ್ಣದಾಗುತ್ತಾ ಹೋಯಿತು.ಎದ್ದು ಹೋಗಿ ನೋಡಿದರೆ ಏನೊಂದೂ ಕಾಣದಷ್ಟು ಹೊಗೆ/ನೀರು ತುಂಬುವ ಹಬ್ಬಕ್ಕೆಂದು ತುಂಬಿಸಿಟ್ಟ ಪಾತ್ರೆಗಳ  ನೀರಿನೊಳಗೆಲ್ಲ ಮದ್ದಿನ ತುಂಡುಗಳು/ಹಂಚಿನ ಮೇಲೆ ಹೇಳಲೂ ಒಂದೂ ಪಟಾಕ್ಷಿ ಇರಲಿಲ್ಲ.ಬಹುಶಃ ಒಲೆಯಲ್ಲಿ ಹೆಚ್ಚಿನಾಂಶ ಕೆಂಡವಿದ್ದಿರಬಹುದು. ಅಥವಾ ನಾನು ಕೊಟ್ಟ ವೇಳೆ ಹೆಚ್ಚಾಗಿರ ಬಹುದು. ಅಂತೂ ಅನಾಹುತವೊಂದು ನಡೆದು ಹೋಗಿತ್ತು...ನನ್ನ ಸ್ವಾರ್ಥಕ್ಕೆ/ ಅತಿಯಾದ ಆಸೆಗೆ/ಮಕ್ಕಳಿಗೆ ಮಾಡಿರಬಹುದಾದ 'ಮೋಸ'ಕ್ಕೆ ಪಾಠ
ಕಲಿಸಲು ದೇವರು ಕಿಂಚಿತ್ತೂ ಕೂಡ ತಡಮಾಡಿರಲಿಲ್ಲ...

           ಆಮೇಲೆ ಒಂದು ದಿನದ ಛೇಡಿಸುವಿಕೆ/ಹಿಡಿಯಷ್ಟು ಬೈಗಳು/
ಮತ್ತೆ ಪಟಾಕಿ ನನಗೆ ಸಿಗಬಹುದಾ- ಇಲ್ಲವಾ ಗೊಂದಲ/ಅಪ್ಪನ ಸಿಡಿ ಮುಖ/ಮತ್ತೆ ಪಾತ್ರೆಗಳಿಗೆ ಹೊಸ ನೀರು ತುಂಬಬೇಕಾದಾಗಿನ ಅನಿವಾರ್ಯತೆ/
ಸಧ್ಯಕ್ಕೆ ಹೆಚ್ಚಿನ ಅನಾಹುತವಾಗಲಿಲ್ಲ ವಲ್ಲ- ಎಂಬುದೊಂದು ಸಮಾಧಾನ/ 'ಇನ್ನೊಮ್ಮೆ  ಹೀಗೇನಾದರೂ ಮತ್ತೆ ಮಾಡಿದರೆ ನೋಡಿ'- ಎಂಬ ಬಾಂಬ್ ನ
ಸದ್ದನ್ನೂ ಮೀರಿಸಿದ ಅಪ್ಪನ ಗುಡುಗಿನ ಎಚ್ಚರಿಕೆ- ಇವೆಲ್ಲವುಗಳೊಂದಿಗೆ ಆ ವರ್ಷದ ದೀಪಾವಳಿ ಸಾಂಗವಾಗಿ ನಡೆದದ್ದು ಎಪ್ಪತ್ತು ವರ್ಷಗಳ ನಂತರ ವೂ ಇಂದೇ ಎನ್ನುವಂತೆ ನೆನಪಾಗಿ ಉಳಿದಿದೆ...

   
        







             
               

Wednesday 8 November 2023

ಕಂಚುಗಾರರ ಅಂಗಡಿಯಂದದಿ---
ಕಂಚು- ಹಿತ್ತಾಳೆಯ ಪಾತ್ರೆಗಳ್ಹರಡಿ...        
    ‌‌   ಧಾರವಾಡದ ನಮ್ಮ ಮನೆ ಒಂದು ಚಿಕ್ಕ ವಾಡೆಯಂತಿತ್ತು.'ಮೂಡಲ
ಮನೆ'ಯ ಧಾರಾವಾಹಿಯ ಮನೆಯಂತೆ.ನಮ್ಮತ್ತೆ/ಇಬ್ಬರೇ ಮಕ್ಕಳು
ಆದ್ದರಿಂದ ಒಂದುಭಾಗವನ್ನು ಬಾಡಿಗೆಗೆ
ಕೊಡುವುದು ಅವಶ್ಯಕ/ಅನಿವಾರ್ಯ
ಎರಡೂ ಆಗಿದ್ದು ನಾನು ಬಂದಮೇಲೂ
ಅದು ಮುಂದುವರೆದಿತ್ತು.
                ಮನೆಯಲ್ಲಿ ತಾಮ್ರ/ ಹಿತ್ತಾಳೆಯ ಪಾತ್ರೆಗಳ ಅಂಗಡಿಯನ್ನೇ 
ಇಡುವಷ್ಟುಸಾಮಾನು.ಕಡಿಮೆಯಂದರೆ
ಇನ್ನೂರು ಜನರಿಗೆ ಅಡಿಗೆ ಮಾಡಿ ಬಡಿಸುವಷ್ಟು; ಹಂಡೆ/ತಪ್ಪಲೆ/ಕೊಳಗ/
 ಡಬರಿಗಳು/ಪರಾತಗಳು ಏನೆಲ್ಲಾ...
ಆಗ ಮನೆಯ ಮುಂದೆಯೇ ಮದುವೆ ಮಾಡುವ ಪದ್ಧತಿ ಹೆಚ್ಚಿತ್ತು.ಹಾಗೆ ಮಾಡುವವರಿಗೆಲ್ಲ ನಮ್ಮಲ್ಲಿಂದಲೇ 
ಪಾತ್ರೆಗಳ ಸರಬರಾಜು.ಅದರಲ್ಲೂ
ಪುಕ್ಕಟೆ ಎಂದರೆ ನನಗೂ/ ನಮ್ಮಪ್ಪನಿ
ಗೂ ಆದೀತು ಎಂಬ ಭಾವ.ನಾಲ್ಕು ದಿನಗಳ ಮೊದಲೇ ಒಯ್ದು ಕಾರ್ಯ ಕ್ರಮಗಳು ಮುಗಿದು ವಾರವಾದರೂ ವಾಪಸ್ ಬರುತ್ತಿರಲಿಲ್ಲ.ಮನೆಯಲ್ಲಿ
ಜನರಿದ್ದರು/ಸಮಯ ಸಿಗಲಿಲ್ಲ/ ಮತ್ತೊಮ್ಮೆ ಸ್ವಚ್ಛಗೊಳಿಸಬೇಕಿತ್ತು
ದಂಥಹ ಹೊಸಹೊಸ ನೆಪಗಳು. ಸಾಮಾನುಗಳ ಎರಡು ಲಿಸ್ಟ್ ತಯಾರಿಸಿ, ನಾವು ಒಂದಿಟ್ಟುಕೊಂಡು/
ಇನ್ನೊಂದು ಅವರಿಗೆ ಕೊಟ್ಟಮೇಲೂ
ಪರತ ಪಡೆಯುವಾಗ ಯಾದಿ ಇದ್ದರೆ ಇತ್ತು, ಇಲ್ಲದಿದ್ದರೆ ಇಲ್ಲ.ನಮ್ಮದನ್ನು ಎದುರಿಗೆ ಹಿಡಿದರೂ ಅವರಿವರನ್ನು 
ಕೇಳುತ್ತೇನೆ ಎಂದು ದೊಣ್ಣೆ ಬೀಸದ ಹಾಗೊಂದು ಉಪಾಯ ಮಾಡಿ ಪಾರಾಗಿ ಹೋಗಿಬಿಟ್ಟರೆ ಕಥೆ ಮುಗಿದ ಹಾಗೆ...ಬಂದ ಪಾತ್ರೆಗಳೂ ಸ್ವಚ್ಛವಿರುವ ಹಾಗೇ ಇಲ್ಲ, ಅಲ್ಲಲ್ಲಿ ನೆಗ್ಗು/ ತಗ್ಗು... ಕಲಾಯಿ ಇಲ್ಲವೇ ಇಲ್ಲ ಎನ್ನುವಷ್ಟು ಬಳಸುವುದು.ಪ್ರತಿ ಬಾರಿಯೂ ' ಇನ್ನು ಸಾಕು,ಇನ್ನುಮೇಲೆ 'ಕೊಡುವುದಿಲ್ಲ'
ಎಂದೇ ಹೇಳುವದು ಎನ್ನುವ ಭೀಷ್ಮನನ್ನು ಮೀರಿಸಿದ ಪ್ರತಿಜ್ಞೆ. ಯಾರಾದರೂ ಪುನಃ ಬಂದಾಗ 'ಪಾಪ! 
ಅವರಿಗೆ ಅನುಕೂಲವಿದ್ದರೆ ನಮ್ಮ ಕಡೆ
ಯಾಕೆ ಬರುತ್ತಿದ್ದರು ಎಂಬ ಭಾವ+ ಹಾಗೆ ಮಾಡುವುದರಿಂದ ನಮಗೆ ವಿಪರೀತ 'ಪುಣ್ಯಸಂದಾಯ'ವಾಗಿ
ಆ ಸ್ವರ್ಗದಲ್ಲಿ ಆ ದೇವರು ನಮ್ಮನ್ನು
ಒಮಿಲ್ಲ ಒಮ್ಮೆ ತನ್ನ ಪಕ್ಕದ ಸೀಟಿನಲ್ಲೇ
ಕೂಡಿಸಿಕೊಳ್ಳುತ್ತಾನೆ ಎಂಬಂಥ‌ ಭ್ರಮೆ.
ಆದರೆ ಅದು ಅತಿಯಾಗಿ ಆಗಾಗ ನಾವಿದ್ದಲ್ಲೇ ಬದುಕು ' ನರಕವಾಗುತ್ತಿದೆ'
ಅನಿಸತೊಡಗಿದಾಗ ನಾವು ಜಾಣರಾಗ
ತೊಡಗಿದರೂ ಸಮಯ ಮೀರಿಹೋಗಿ ತ್ತು.ಪಾತ್ರೆಗಳ ಸಂಖ್ಯೆ ಗೊತ್ತಾಗದಂತೆ
ಕಡಿಮೆಯಾಗಿತ್ತು.ಒಂದಕ್ಕೂ ಕಲಾಯಿ
ಇರಲಿಲ್ಲ.ನನ್ನ ಮಕ್ಕಳದೂ ಮದುವೆ
ಮುಗಿದಿತ್ತು .ಆಗ ದೊಡ್ಡ ಪಾತ್ರೆಗಳನ್ನು
ಅಂಗಡಿಗೆ ಹಾಕಿ ಸಂಕಷ್ಟದಿಂದ ಪಾರಾಗುವ ಒಂದೇ ದಾರಿಯನ್ನು ಕಂಡು ಕೊಂಡಾಯಿತು.ಚಿಕ್ಕ ಪುಟ್ಟವುಗಳನ್ನು ಉಳಿಸಿಕೊಂಡು ನಾವು ಧಾರವಾಡದ ಮನೆ ತೆಗೆಯುವ ವರೆಗೆ ಇಟ್ಟುಕೊಂಡು ಬರುವಾಗ ಒಂದು ಗುಡಿಗೆ ದಾನ ಕೊಟ್ಟು ಬಂದೆವು.
            ಈಗ ನಮ್ಮಣ್ಣನ ತೊಟ್ಟಿಯ ಮನೆಯಲ್ಲಿ ತಾಮ್ರ/ ಹಿತ್ತಾಳೆಗಳು 
ಬಂಗಾರದ ಮೌಲ್ಯವನ್ನೂ ಮೀರಿ ಸ್ಥಾನ ಪಡೆದದ್ದು/ಇಡೀ ಮನೆಗೆ ಅದರಿಂದ ಬಂದ ಶೋಭೆ ನೋಡಿದಾಗ ಎಲ್ಲೋ ಎದೆಯ ಮೂಲೆಯಲ್ಲಿ ' ಚಳಕು' ಹಿಡಿದ ಅನುಭವವಾಗುತ್ತದೆ...
             ಎಂದೋ ಮಳೆಯಾಗಿ ಭೂಮಿ ಸಮೃದ್ಧವಾಗಬಹುದೆಂಬ ಹಗಲುಗನಸಿನಲ್ಲಿ ಭೂಮಿ ಹದಗೊಳಿಸಿ
ಬೀಜ ಕಾಯ್ದಿಟ್ಟು/ ಮುಗಿಲುನೋಡುತ್ತ
ದಿನ- ರಾತ್ರಿಗಳನ್ನು ಕಳೆಯುವ‌ ರೈತ ನಾಗಬಾರದೆಂದು ತೆಗೆದುಕೊಂಡ
ಒಂದು ನಿರ್ಧಾರದಿಂದ ನಾವು ಪಡೆದು ಕೊಂಡೆವೋ ಕಳೆದುಕೊಂಡೆವೋ ಎಂಬುದು ನನಗಿನ್ನೂ ಸ್ಪಷ್ಟವಾಗಿ ತಿಳಿಯಲಾಗಿಲ್ಲ...

Friday 3 November 2023

ಪನ್ನು ಎಂಬ ಹುಡುಗನೂ...
ಯಶೋದಾ ಎಂಬ ತಾಯಿಯೂ...
              
              ಇದು ಒಂದು ವಿಭಿನ್ನ ರೀತಿಯ ಕಥೆ...ಮುಖ್ಯವಾಗಿ ಎರಡೇ ಪಾತ್ರಗಳು...ಯಶೋದಾ...ಅವಳ ಮಾನಸ ಪುತ್ರ ಪ್ರಣೀತ್...ಕಥಾವಸ್ತು
ಕೂಡ ಜಟಿಲವಾಗಿಲ್ಲ.ಅರ್ಥೈಸಿಕೊಳ್ಳ ಲೂ ತುಂಬ ಸರಳ: ಮೆದುಳಿಗೆ ಹೆಚ್ಚಿನ ಕೆಲಸವಿಲ್ಲ, ಹೃದಯ ಬಿಚ್ಚಿ ಹರಡಿದರೆ
ಸಾಕು,ನೇರವಾಗಿ ತುಂಬಿಕೊಳ್ಳಬಹು ದು.
              ಒಂದು ಕೌಟುಂಬಿಕ ಉಚಿತ
ಸಲಹಾ ಕೇಂದ್ರ.ಕೌಟುಂಬಿಕ ಸ್ವಾಸ್ಥ್ಯ
ಕಾಪಾಡುವುದೇ ಅದರ ಗುರಿ...ಹೀಗಾಗಿ
ಯಾರೇ ಕರೆ ಮಾಡಿದರೂ ಹಾರ್ದಿಕ
ಸ್ವಾಗತ...ಹೆಸರು ಕೂಡ ಬೇಕಿಲ್ಲ. ಸಮಸ್ಯೆ/ ಪರಿಹಾರಕ್ಕೆ ನೇರ ಸಂಬಂಧ.
ಇಂಥದೇ ಒಂದು ಫೋನ್ ಕರೆ ಒಂದು
ಮಗುವಿನಿಂದ ಬಂದಾಗ ಇತ್ತಕಡೆ ಯಿದ್ದ ಇದ್ದವಳಿಗೆ ಆನಂದ/ ಆಶ್ಚರ್ಯ/ ಕುತೂಹಲ ದಿಂದಾಗಿ ಮಾತು ಮುಂದುವರಿಯುತ್ತದೆ.ಸ್ವಂತದ್ದೊಂದು
ಕುಟುಂಬದ ಆಸರೆಯಿಲ್ಲದ ಏಕಾಕಿ
ಮಹಿಳೆ ಬಹುಶಃ ತನಗೂ ಅತ್ಯವಶ್ಯಕ ವಾದ ಸಂವಹನಕ್ಕೆಂತಲೇ ತೆರೆದ ಸೇವೆಯದು-ಹಾಗೇ ಇರಬಹುದಾದ ಇನ್ನೊಬ್ಬ ಗೆಳತಿಯ ಸಹಯೋಗ ದೊಂದಿಗೆ...
  ‌‌‌              ಮನೆಯಲ್ಲಿ ಯಾರೂ ಇಲ್ಲದೇ ಬೇಸರವೆನಿಸಿದ ಎಂಟು ವರ್ಷಗಳ‌ ಮಗುವೊಂದು ಅಮ್ಮ ಆಗಾಗ ಕರೆ ಮಾಡುವ ನಂಬರಿಗೆ ಮೋಜಿಗೆಂದು ಕರೆ ಮಾಡುತ್ತಾನೆ.
ಅವನಿಗೆ ಸಿಕ್ಕ ಪ್ರೋತ್ಸಾಹ/ಪ್ರೀತಿಗೆ
ಮರುಳಾಗಿ ದಿನಾಲೂ ಮಾಡತೊಡಗಿ
ಅವರಿಬ್ಬರ ಮಧ್ಯೆ ಅವಿನಾಭಾವ ಸಂಬಂಧವೊಂದು ಬೆಳೆಯುತ್ತದೆ. ನಂತರ ಅವರ ಕುಟುಂಬ ವಿದೇಶಕ್ಕೆ
ನೌಕರಿಗಾಗಿ ದೇಶ ಬಿಟ್ಟು ಹೋಗಿ ಮತ್ತೆ ಮರಳಿ ಬಂದಾಗ ಹನ್ನೆರಡು ವರ್ಷಗಳು ಉರುಳಿ ಇಪ್ಪತ್ತರ ಯುವಕನಾದ ಹುಡುಗನಿಗೆ ಎಲ್ಲವೂ ನೆನಪಿಗೆ ಬಂದು
ಆ ಸಲಹಾ ಕೇಂದ್ರಕ್ಕೆ ಹೋದಾಗ ಅವನ ಆಂಟಿಯ ಬದಲಿಗೆ ಅವಳ ಪತ್ರ
ಅವನಿಗೆ ಕಾದಿರುತ್ತದೆ.
  ‌       ‌‌‌‌‌   ‌ಸಂಬಂಧಗಳ ಕೊಡುಕೊಳ್ಳು ವಿಕೆಗೆ ಸಂಬಂಧಿತ ಅತ್ಯಂತ ಸರಳ ಸೂತ್ರವನ್ನಾಧರಿಸಿದ/ ಹೃದಯ ಹೃದಯಗಳ ಭಾಷೆ ಬಳಸಿದ/ನಾವೂ
ಸೇರಿದಂತೆ ಯಾರೂ ಕಥೆಯ ಪಾತ್ರಗಳಾಗಬಹುದಾದ ಪವಾಡರೂಪಿ
ಕಥಾವಸ್ತುವಿದು...
                   ತಾಯಿಯಲ್ಲದೆಯೂ
ಒಬ್ಬ ತಾಯಿ ಕೊಡಬಹುದಾದ ವಾತ್ಸಲ್ಯವನ್ನು ಮೊಗೆಮೊಗೆದು ಕೊಟ್ಟ ಪಾತ್ರಕ್ಕೆ ಅನ್ವರ್ಥಕ ಹೆಸರು 'ಯಶೋದಾ'. ಮಗುವಿನ ಹೆಸರೂ 
' ನಂದನ'-ಆಗಿದ್ದರೆ ಅಲ್ಲೊಂದು ಪುಟ್ಟ
ಗೋಕುಲವೇ ಸೃಷ್ಟಿಯಾಗಬಹುದಿತ್ತು...


ವಿಲೋಮ...
                  ‌"ಹೂಗಳ ಪಕಳೆಗಳನ್ನು ಉದುರಲು ಬಿಡಬಾರದು...ಹಾಗಾದರೆ
ಹಾರ ಬೇಗನೇ ಒಣಗುತ್ತದೆ"- ಎಂದು ಗಾಢವಾಗಿ ನಂಬಿದವರು 'ದೊಡ್ಡಮನೆ' ಯ ಆಯಿ.ಆ ಕಾರಣಕ್ಕೇನೆ ಸ್ವತಃ ಮಾಲೆ ಕಟ್ಟುವಾಗ ಇನ್ನಿಲ್ಲದ ಮುತುವರ್ಜಿ...ಅವರ ಲೆಕ್ಕದಲ್ಲಿ ಕೂಡು ಕುಟುಂಬದ ಸಾರವೂ ಅದೇ. ಹಾಗೆಂತಲೇ ಇಳಿವಯಸ್ಸಿನ ವರೆಗೂ ತುಂಬಿದ ಮನೆಯ ಜವಾಬ್ದಾರಿ ಹೆಗಲಿಗೇರಿಸಿಕೊಂಡು ಹಣ್ಣಾದವರು.. ಆದರೆ ಕಾಲಕ್ಕೆಲ್ಲಿಯ ಕರುಣೆ?! ಅದರ 
ಮುಂದೆ ಯಾವ ತರ್ಕಗಳೂ ಲೆಕ್ಕಕ್ಕಿಲ್ಲ. ಅದು ಬದುಕಿನ 'ಬಾಗಿನ' ಆಗಾಗ 
ಬದಲಿಸುತ್ತದೆ.ಅದನ್ನು ಅನುಸರಿಸಿ
ಬಾಗಬೇಕೋ/ಎದುರಿಸಿ ನಿಂತು ಬಾಳಬೇಕೋ ಅವರವರಿಗೆ ಬಿಟ್ಟದ್ದು...
           'ವಿಲೋಮ'-ಈ ಎರಡೂ ನಿಲುವುಗಳ/ಎರಡು ತಲೆಮಾರುಗಳ
ಕಥೆ. ಕಾಲಮಾನ ೧೯೭೯ ಹಾಗೂ ೨೦೨೦ ರದು...ಅಂದರೆ ಸುಮಾರು 
ನಲವತ್ತು ವರ್ಷಗಳ ಅಂತರದ ವಿದ್ಯಮಾನಗಳದು...ಅಷ್ಟು ಅವಧಿಯ
ವರೆಗೆ ತಾಳಿ ಬಾಳುವ ' ಮಾಲೆ ಕಟ್ಟುವುದು' ಯಾವ ಆಯಿಯಿಂದಲೂ ಆಗದ  ಮಾತು.ಹೀಗಾಗಿ ಪಕಳೆಗಳು 
ಉದುರುವುದೇ ವಿಧಿನಿಯಮವಾಗುವ
ಅನಿವಾರ್ಯವೇ ಕಥೆಯ ಸಾರ...
              ಆದದ್ದೂ ಅದೇ... ಮನೆಮಕ್ಕ ಳು ದೊಡ್ಡವರಾಗಿ,ಅವರ ನಿಲುವುಗಳು ಬದಲಾಗಿ,ಆಗಬಹುದಾದ ಪರಿಣಾಮ ಗಳಿಗನುಗುಣವಾಗಿ ಘಟನೆಗಳು ಘಟಿಸುತ್ತ ಹೋಗುವುದಕ್ಕಮೂಕಸಾಕ್ಷಿ
ಯಾಗುವದರ ಹೊರತು ಬೇರೆ ದಾರಿ ಇಲ್ಲದಿರುವುದು...
               ಮೀರಾಕಾಕು ಹೆರಿಗೆಯ ನಂತರದ ' ಬಾಣಂತಿ ಸನ್ನಿ'ಗೆ ಒಳಗಾಗುವುದು/ ನಾನಿಕಾಕಾ ಅಹಮದಾಬಾದಿಗೆ ನೌಕರಿಗೆ ಹೋಗಿ,ಹೇಗೋ ತಾರಾಳ ಸುಳಿಯೊಳ ಗೆ  ಸಿಕ್ಕು ಒದ್ದಾಡುವುದು/ಅವರಿವರ ಆರೈಕೆಯಲ್ಲಿ ಮುದ್ದಿನಲ್ಲಿ ಬೆಳೆದು, ಜಾಣಳಾಗಿ ಸಾಧನೆ/ಮಹತ್ವಾಕಾಂಕ್ಷೆ ಯ ಮಾಯಾಮೃಗದ ಬೆನ್ನು ಹತ್ತಿ, 
ನ್ಯೂಯಾರ್ಕ್ ನ ಅಪರಿಚಿತ ನೆಲದಲ್ಲಿ ತನ್ನವರಿಲ್ಲದೇ ಮಾನಸಿಕ ದೌರ್ಬಲ್ಯಕ್ಕೆ
ಒಳಗಾಗಿ, ಚನ್ನಾಗಿ ಪರಕಿಸದೇ ಇದ್ದ ಮೂರ್ಖತನದಿಂದಾಗಿ/ದಿನೇಶನ ಅವಕಾಶವಾದಿತನಕ್ಕೆ  ಬಲಿಯಾಗಿ ಅವನ ಪಿಂಡವನ್ನು ಹೊಟ್ಟೆಯಲ್ಲಿಟ್ಟು ಕೊಂಡು ಭಾರತೀಪುರಕ್ಕೆಮರಳುವಲ್ಲಿಗೆ
ಕಥೆ ಮುಗಿಯುತ್ತದೆ.
    ‌ ‌            ಬದುಕಿನಲ್ಲಿ ಸವ್ಯ/ ಅಪಸವ್ಯಗಳೆರಡೂ ಇರುವುದು ಸ್ವಾಭಾವಿಕ.ಅಂದಮೇಲೆ ಅನುಲೋಮ -ವಿಲೋಮಗಳೆರಡೂ
ಇರುವದೂ ಅಚ್ಚರಿಯೇನೂ ಅಲ್ಲ... ಬಂದುದನ್ನು ಸ್ವೀಕರಿಸಲೇಬೇಕು-
ಎನ್ನುವುದೊಂದು 'ಅಲಿಖಿತ ಒಪ್ಪಂದವಷ್ಟೇ...

    ‌‌‌‌   

               

ದೇವರಂಥ ಹುಡುಗರು...

ದೇವರಂಥ ಹುಡುಗರು...
   ‌‌‌        ' ಜಿಂದಗಿ ಏಕ ಸಫರ ಹೈ
ಸುಹಾನಾ, ಯಹಾ ಕಲ್ ಕ್ಯಾ ಹೋ ಕಿಸನೆ ಜಾನಾ' - ಎಂಬ ಹಾಡು ನೆನಪಿಸಿಕೊಳ್ಳುತ್ತಲೇ ಈ ಕತೆಯನ್ನು ಓದುತ್ತಾ ಹೋದೆ.ಒಮ್ಮೆ ಹೃದಯಾ ಘಾತವಾಗಿ, ಹದಗೆಟ್ಟ ಆರೋಗ್ಯದ 
ವಯಸ್ಕ ತಾಯಿಯ ಮಾನಸಿಕ ತುಮುಲವನ್ನು ಕಟ್ಟಿಕೊಡುವ ಮುಖ್ಯ 
ವಿಷಯವಸ್ತುವನ್ನು ಆಯ್ದುಕೊಂಡಾಗ
ಸಹಜವಾಗಿಯೇ ಅವಳ ಗತ ಜೀವನ/ ಮಕ್ಕಳ ಬದುಕು/ ಜೀವನದಲ್ಲಿಯ   
ಸವಾಲುಗಳು/ಅವುಗಳನ್ನು ಎದುರಿಸಲಾಗದ ಅಸಹಾಯಕತೆ ಅಷ್ಟಿಷ್ಟು  ಇರಬಹುದಾದ ಆತ್ಮವಿಶ್ವಾಸ ವನ್ನೂ  ಆಪೋಶನ ತೆಗೆದುಕೊಂಡು
ಬಿಡುತ್ತವೆ ಎಂಬುದನ್ನು ಒಂದು ರೈಲಿನ
ಕೂಪೆಯಲ್ಲಿ ಆರಂಭವಾಗಿ ಗಮ್ಯ ತಲುಪಿದೊಡನೇ ಮುಗಿಯುವ ಈ ಕಥೆ
ಕಟ್ಟಿಕೊಟ್ಟ ರೀತಿ ಮಾತ್ರ ಮನಸ್ಸನ್ನು
ಒದ್ದೆಯಾಗಿಸುತ್ತದೆ.ಪಯಣದ ಉದ್ದಕ್ಕೂ ತನ್ನದೇ ಬೋಗಿ ಹತ್ತಿದ ಇಬ್ಬರು ಯುವಕರ ಸಹಪಯಣದ ಜೊತೆಜೊತೆಗೇನೇ ಅವರೊಂದಿಗೇನೆ ಸಮೀಕರಣಗೊಂಡ, ತಾನು ಈಗಾಗಲೇ ಕಳೆದುಕೊಂಡ ಒಬ್ಬ ಮದ್ಯ
ವ್ಯಸನಿ ಮಗನ ಬದುಕು ತಾಳೆಯಾಗುತ್ತ ಹೋಗಿ ಕೊನೆಯಲ್ಲಿ
ಅದೇ ಮದ್ಯ ಸಾಗಾಣಿಕೆಯ ವಿಷಯವಾಗಿ ಅವರಿಬ್ಬರ ಬಂಧನವಾದದ್ದು ನೂರಕ್ಕೆ ನೂರು ಅನಿರೀಕ್ಷಿತವಾದದ್ದು..ಕಲ್ಪನೆಗೂ  ಮೀರಿದ್ದು... ಕಾರಣ, ಪ್ರಯಾಣ ಸಂದರ್ಭದಲ್ಲಿ, ಅನಿರೀಕ್ಷಿತವಾಗಿ ಅಸ್ವಸ್ಥಳಾದ ಆ ಮಹಿಳೆಗೆ, ಮಕ್ಕಳು
ಜೊತೆಗಿದ್ದರೆ ತೆಗೆದುಕೊಳ್ಳಬಹುದಾದ
ಕಾಳಜಿಯನ್ನು ಮೀರಿ ಕಾಳಜಿ ಮಾಡಿ
ಬದುಕಿಸಿಕೊಂಡವರು ಒಂದು ಸಮಾಜ ನಿಷೇಧಿತ ಕಾರಣಕ್ಕೆ ಬಂಧಿತರಾಗುವು ದು ಓದುಗರನ್ನೂ ದಂಗು ಬಡಿಸುವುದು
ಸಹಜವೇ...
            ಒಬ್ಬ ವಯಸ್ಕ ‌ಪ್ರತಿಭಾವಂತ ಮಗನನ್ನು ಅನ್ಯಾಯವಾಗಿ ಕಳೆದು ಕೊಂಡ ತಾಯಿಯ ದುಃಖ/ ದೀರ್ಘ ಪ್ರವಾಸದ ಆಕಸ್ಮಿಕ ಆಗುಹೋಗುಗಳು
 ಮಕ್ಕಳ ಕುರಿತಾಗಿ ತಾಯಿಯ ಅಂತಃಕರಣ/ಮನುಷ್ಯನ ಸ್ವಭಾವದ
ಆಳ, ವೈಚಿತ್ರ್ಯಗಳು/ ಶೀಘ್ರ ಗತಿಯಲ್ಲಿ
ಬದಲಾಗುತ್ತಿರುವ ಸಮಾಜದ ರೀತಿ ನೀತಿಗಳು/ಸರಿಯಾದ ಮಾರ್ಗದರ್ಶನ ವಿಲ್ಲದ ಇಂದಿನ ಯುವ ಪೀಳಿಗೆಯ 
ಹಾದಿಯ ತೊಡಕುಗಳು ಹೀಗೆ ಹತ್ತು ಹಲವು ಸಮಕಾಲೀನ ಸಮಸ್ಯೆಗಳಿಗೆ
ಹಿಡಿದ ಕನ್ನಡಿ ಈ ಕತೆ ಅಂದರೆ ಹೆಚ್ಚು
ಸಮಂಜಸವೇನೋ!!!


ದೇವರಂಥ ಹುಡುಗರು...

ದೇವರಂಥ ಹುಡುಗರು...
   ‌‌‌        ' ಜಿಂದಗಿ ಏಕ ಸಫರ ಹೈ
ಸುಹಾನಾ, ಯಹಾ ಕಲ್ ಕ್ಯಾ ಹೋ ಕಿಸನೆ ಜಾನಾ' - ಎಂಬ ಹಾಡು ನೆನಪಿಸಿಕೊಳ್ಳುತ್ತಲೇ ಈ ಕತೆಯನ್ನು ಓದುತ್ತಾ ಹೋದೆ.ಒಮ್ಮೆ ಹೃದಯಾ ಘಾತವಾಗಿ, ಹದಗೆಟ್ಟ ಆರೋಗ್ಯದ 
ವಯಸ್ಕ ತಾಯಿಯ ಮಾನಸಿಕ ತುಮುಲವನ್ನು ಕಟ್ಟಿಕೊಡುವ ಮುಖ್ಯ 
ವಿಷಯವಸ್ತುವನ್ನು ಆಯ್ದುಕೊಂಡಾಗ
ಸಹಜವಾಗಿಯೇ ಅವಳ ಗತ ಜೀವನ/ ಮಕ್ಕಳ ಬದುಕು/ ಜೀವನದಲ್ಲಿಯ   
ಸವಾಲುಗಳು/ಅವುಗಳನ್ನು ಎದುರಿಸಲಾಗದ ಅಸಹಾಯಕತೆ ಅಷ್ಟಿಷ್ಟು  ಇರಬಹುದಾದ ಆತ್ಮವಿಶ್ವಾಸ ವನ್ನೂ  ಆಪೋಶನ ತೆಗೆದುಕೊಂಡು
ಬಿಡುತ್ತವೆ ಎಂಬುದನ್ನು ಒಂದು ರೈಲಿನ
ಕೂಪೆಯಲ್ಲಿ ಆರಂಭವಾಗಿ ಗಮ್ಯ ತಲುಪಿದೊಡನೇ ಮುಗಿಯುವ ಈ ಕಥೆ
ಕಟ್ಟಿಕೊಟ್ಟ ರೀತಿ ಮಾತ್ರ ಮನಸ್ಸನ್ನು
ಒದ್ದೆಯಾಗಿಸುತ್ತದೆ.ಪಯಣದ ಉದ್ದಕ್ಕೂ ತನ್ನದೇ ಬೋಗಿ ಹತ್ತಿದ ಇಬ್ಬರು ಯುವಕರ ಸಹಪಯಣದ ಜೊತೆಜೊತೆಗೇನೇ ಅವರೊಂದಿಗೇನೆ ಸಮೀಕರಣಗೊಂಡ, ತಾನು ಈಗಾಗಲೇ ಕಳೆದುಕೊಂಡ ಒಬ್ಬ ಮದ್ಯ
ವ್ಯಸನಿ ಮಗನ ಬದುಕು ತಾಳೆಯಾಗುತ್ತ ಹೋಗಿ ಕೊನೆಯಲ್ಲಿ
ಅದೇ ಮದ್ಯ ಸಾಗಾಣಿಕೆಯ ವಿಷಯವಾಗಿ ಅವರಿಬ್ಬರ ಬಂಧನವಾದದ್ದು ನೂರಕ್ಕೆ ನೂರು ಅನಿರೀಕ್ಷಿತವಾದದ್ದು..ಕಲ್ಪನೆಗೂ  ಮೀರಿದ್ದು... ಕಾರಣ, ಪ್ರಯಾಣ ಸಂದರ್ಭದಲ್ಲಿ, ಅನಿರೀಕ್ಷಿತವಾಗಿ ಅಸ್ವಸ್ಥಳಾದ ಆ ಮಹಿಳೆಗೆ, ಮಕ್ಕಳು
ಜೊತೆಗಿದ್ದರೆ ತೆಗೆದುಕೊಳ್ಳಬಹುದಾದ
ಕಾಳಜಿಯನ್ನು ಮೀರಿ ಕಾಳಜಿ ಮಾಡಿ
ಬದುಕಿಸಿಕೊಂಡವರು ಒಂದು ಸಮಾಜ ನಿಷೇಧಿತ ಕಾರಣಕ್ಕೆ ಬಂಧಿತರಾಗುವು ದು ಓದುಗರನ್ನೂ ದಂಗು ಬಡಿಸುವುದು
ಸಹಜವೇ...
            ಒಬ್ಬ ವಯಸ್ಕ ‌ಪ್ರತಿಭಾವಂತ ಮಗನನ್ನು ಅನ್ಯಾಯವಾಗಿ ಕಳೆದು ಕೊಂಡ ತಾಯಿಯ ದುಃಖ/ ದೀರ್ಘ ಪ್ರವಾಸದ ಆಕಸ್ಮಿಕ ಆಗುಹೋಗುಗಳು
 ಮಕ್ಕಳ ಕುರಿತಾಗಿ ತಾಯಿಯ ಅಂತಃಕರಣ/ಮನುಷ್ಯನ ಸ್ವಭಾವದ
ಆಳ, ವೈಚಿತ್ರ್ಯಗಳು/ ಶೀಘ್ರ ಗತಿಯಲ್ಲಿ
ಬದಲಾಗುತ್ತಿರುವ ಸಮಾಜದ ರೀತಿ ನೀತಿಗಳು/ಸರಿಯಾದ ಮಾರ್ಗದರ್ಶನ ವಿಲ್ಲದ ಇಂದಿನ ಯುವ ಪೀಳಿಗೆಯ 
ಹಾದಿಯ ತೊಡಕುಗಳು ಹೀಗೆ ಹತ್ತು ಹಲವು ಸಮಕಾಲೀನ ಸಮಸ್ಯೆಗಳಿಗೆ
ಹಿಡಿದ ಕನ್ನಡಿ ಈ ಕತೆ ಅಂದರೆ ಹೆಚ್ಚು
ಸಮಂಜಸವೇನೋ!!!


Thursday 2 November 2023

     ಶ್ರೀಮತಿ ಜಯಶ್ರೀ ದೇಶಪಾಂಡೆ ಯವರು ಸಾಹಿತ್ಯ ಕ್ಷೇತ್ರದ ಹಳೆಯ ಹುಲಿ.ಎಷ್ಟೋ ವರ್ಷಗಳ ಹಿಂದೆಯೇ
ತಮ್ಮ ದಿಗ್ಗಜ ಪಟ್ಟಕ್ಕೆ ಒಂದು ಸ್ಥಾಯೀ ಸ್ಥಾನ ಒದಗಿಸಿ ಕೊಟ್ಟವರು.ಅವರು ಕೈಯಾಡಿಸದ ಸಾಹಿತ್ಯ ಕ್ಷೇತ್ರವೇ ಇಲ್ಲವೆನ್ನಬಹುದು.ಕಾದಂಬರಿ/ ಕವನ/ 
ಕಥೆಗಳು/ ಪ್ರವಾಸ ಕಥನಗಳು/ಲಘು ಹಾಸ್ಯದ ಬರಹಗಳು/ ಕಾಕಾ- ಉವಾಚ ಗಳು/ಮನೆತನದ ಹಿರಿಯರು ನಡೆದು ಬಂದ ಹಾದಿಯ ಹೆಗ್ಗುರುತುಗಳನ್ನು ಬಿಂಬಿಸುವ ಲಘು ಬರಹಗಳ ಸಂಗ್ರಹಗಳು...ಏನುಂಟು!!ಏನಿಲ್ಲ!!!
ಅವರ ಅಗಾಧ ಪ್ರತಿಭೆಯ ಆಳವಾದ ಗಣಿಯನ್ನು ಅಗೆದಷ್ಟೂ ಶ್ರೀಮಂತ...!!! ಎಲ್ಲ ಸ್ತರದ ಓದುಗರನ್ನೂ ಸಂತುಷ್ಟ ಗೊಳಿಸುವ ತಾಕತ್ತು ಅವರ ಪೆನ್ನಿಗಿದೆ.
ಒಂದೇ ಲೇಖನದಲ್ಲಿ ಹಲವು ದೇಶಗಳನ್ನು/ ವಿವಿಧ ಭಾಷೆಗಳನ್ನು/ 
ವಿವಿಧ ಬದುಕಿನ ಮಜಲುಗಳನ್ನು/ 
ಬದುಕಿನ ಹೊಸಹೊಸ ಬಣ್ಣಗಳನ್ನು
ಚಿತ್ರಿಸಿ ಅದನ್ನು ಅದ್ಭುತವಾಗಿ ಅಂದ ಗೊಳಿಸುವ ಅವರ ಪರಿ ನನಗೊಂದು ತೀರದ ಅಚ್ಚರಿ.ಮನುಷ್ಯ ಪಾತ್ರಗಳ ನ್ನೂ ಮೀರಿ ನಿಲ್ಲುವ ಪ್ರಾಣಿ ಪ್ರಪಂಚ ಅವರ ಲೇಖನಿಗಳಲ್ಲಿ ಬಿಚ್ಚಿಕೊಳ್ಳುವ ಪವಾಡ ನೋಡಬೇಕು.ಪ್ರಪಂಚದ ಮೂಲೆ ಮೂಲೆಗಳು/ ಬಸ್ಸು ,ರೇಲ್ವೆಗಳು,ಗದ್ದಲ- ಮೌನಗಳೂ
ಒಟ್ಟಿನಲ್ಲಿ ಕಣ್ಣಿಗೆ ಬೀಳುವ ಒಂದು ಕಡ್ಡಿ
ಕೂಡ ಅವರ ಅಚ್ಚಿನಲ್ಲಿ ಹೊಕ್ಕು ಏನೋ ಹೊಸ ರೂಪದಲ್ಲಿ/ಹೊಸ ವೇಷದಲ್ಲಿ ನಮ್ಮ ಮುಂದೆ ಬಂದು ನಿಲ್ಲುತ್ತವೆ.

          ‌‌‌   ಅವರ ಕಥೆ 'ಸೀಮಾಂತರ' ದಲ್ಲಿ ಬರುವ  generation gap ನ ಸಮಸ್ಯೆಗಳು/ಇರುವುದೆಲ್ಲವ ಬಿಟ್ಟು
ಇರದಿರುವದರ ಕಡೆಗಿನ ತುಡಿತದ
ಪಾರ್ಶ್ವಪರಿಣಾಮಗಳು/  ಹಳೆಯದ ನ್ನು ಧಿಕ್ಕರಿಸಿ ,ಬೇಕೆಂದುದನ್ನು ಬೆನ್ನಟ್ಟಿ
ಆಯ್ದ ದಾರಿಯಲ್ಲೇ ನಡೆದರೂ ಸಿಗದ ತೃಪ್ತಿ,ಪರಿಣಾಮವಾಗಿ ನಿರಂತರವಾದ
' ಹುಡುಕಾಟ'/ ಅಸಹಾಯಕತೆ/ ಹೊಂದಾಣಿಕೆಯ ಕೊರತೆ/ ಕಾಣದ
ಪ್ರೀತಿಯ ಒರತೆ/ ಗಳಿಗೆ ಗಳಿಗೆಗೂ ಸಡಿಲಾಗುವ ' ಬಂಧ' ಗಳೂ ಎಲ್ಲವೂ ಸೇರಿ ಬದುಕೇ ' ಪ್ರಪಂಚ ಪಾಣಿಪತ್' ಆಗುವ ದುರಂತ...
               ಒಟ್ಟಿನಲ್ಲಿ ಪುಟ್ಟ ಕೃಷ್ಣನ ತೆರೆದ ಬಾಯಲ್ಲಿ ಯಶೋದೆಗೆ ವಿಶ್ವದ ವಿರಾಟ ದರ್ಶನವಾದಂತೆ ಮೂರು- ನಾಲ್ಕು ಪುಟಗಳ 'ಸೀಮಾಂತರ' ಕಥೆ
ಬಿಚ್ಚಿಟ್ಟ ಹರಹು ಮುಗಿಲಗಲ/ ಮನದಗಲ/ಜಗದಗಲವಾಗಿದೆ.

        ‌ ‌  ' ಬಿಂಬ'- ಪ್ರಚಲಿತ ಜಗತ್ತಿನ 
ಒಂದು ಕ್ಷ - ಕಿರಣ-X Ray ಕಥೆ. ..Things are not what they seem to be ಅಂತಾರಲ್ಲಾ ಹಾಗೆ.ಕೆಲವೊಮ್ಮೆ ಕನ್ನಡಿಯೂ ಇದ್ದುದನ್ನು ಇದ್ದಂತೆ ತೋರಿಸುವುದಿಲ್ಲ, ಅದೂ ಮನಸ್ಸನ್ನು ಭೇದಿಸಿ ಆಳದ ಗಾಯಗಳನ್ನೇ ವೈಭೀಕರಿಸುತ್ತದೆ. ಭೂಮಿ,ಅವನು ಸಮೀರ.ಒಬ್ಬರಿಗೆ 
ಇನ್ನೊಬ್ಬರು ದೂರವೇನಲ್ಲ.ಆದರೆ ಈ ಯಾಂತ್ರಿಕ ಬದುಕಿನಲ್ಲಿ,ಯಂತ್ರಗಳ ಜಗತ್ತಿನಲ್ಲಿ ಮಶಿನ್ಗಳಂತೆಯೇ ಕೂಡಬಲ್ಲರು/ ಮುರಿಯಬಲ್ಲರು. ಅವರಷ್ಟೇ ಏಕೆ ಶಮಾ/ ಈಶಾ/ ಎಲ್ಲರದೂ ಒಂದು ರೀತಿಯಲ್ಲಿ ಅನಾಥ ಬದುಕೇ...ನಿತ್ಯದ ಕೀ ಬೋರ್ಡ್/ ತಿಂಗಳಿನ ಕೊನೆಗಿನ ಚೆಕ್- ಇವುಗಳ ನಡುವಣ ನಿಲ್ದಾಣವೆಂದರೆ ವಿಸ್ಕಿಯ ಗ್ಲಾಸುಗಳೊಂದಿಗಿನ ಜನ್ಮಾಂತರದ
ನೋವುಗಳ ಅನಾವರಣ... ಸಂಪೂರ್ಣವಾಗಿ drain out ಆದ/ ಸದಾ tension ಗಳಿಗೆ ಪಕ್ವವಾಗಿ ಇದ್ದ ಬದುಕನ್ನೂ ಆಸ್ವಾದಿಸಲಾಗದ,ಇಂಥ ನತದೃಷ್ಟ  ಬದುಕಿಗೊಂದು ಸಾಂತ್ವನದ ರೂಪದಲ್ಲಿ ಒಂದು ಮಗುವನ್ನೂ ಮಡಿಲು ತುಂಬಿಕೊಳ್ಳಲಾಗದ /
ಲಿವ್ ಇನ್ ರೆಲೇಶನ್ ಶಿಪ್ನಲ್ಲೇ ಸುಖದ ಭ್ರಮೆಯರಸುವ ಅನಿವಾರ್ಯ ಬದುಕಿನಲ್ಲಿ ಮಾನಸಿಕ ಸಮತೋಲನ ಕಳೆದುಕೊಳ್ಳುವಂತಾಗುವ ದುರಂತ, ಇವುಗಳನ್ನು ಕಂಡಾಗ ' ಕ್ಷಣಕಾಲ ಉಬ್ಬಿ
,ಬಣ್ಣಬಣ್ಣದ ಲೋಕದ ಭ್ರಮೆ ಹುಟ್ಟಿಸಿ,ಅದರಲ್ಲೇ ಮುಳುಗಿ ನಕ್ಕ ನಗೆ
ಮಾಸುವ ಮೊದಲೇ ಕರಗಿ ,ಕಾಣದಾಗುವ ಸೋಪು ನೀರಿನ ' ಗುಳ್ಳೆಗಳಂತೆ ಬದುಕು ಅನಿಸಿ ಬಿಡುತ್ತದೆ.

ದೇವರಂಥ ಹುಡುಗರು...

   ‌‌‌        ' ಜಿಂದಗಿ ಏಕ ಸಫರ ಹೈ
ಸುಹಾನಾ, ಯಹಾ ಕಲ್ ಕ್ಯಾ ಹೋ ಕಿಸನೆ ಜಾನಾ' - ಎಂಬ ಹಾಡು ನೆನಪಿಸಿಕೊಳ್ಳುತ್ತಲೇ ಈ ಕತೆಯನ್ನು ಓದುತ್ತಾ ಹೋದೆ.ಒಮ್ಮೆ ಹೃದಯಾ ಘಾತವಾಗಿ, ಹದಗೆಟ್ಟ ಆರೋಗ್ಯದ 
ವಯಸ್ಕ ತಾಯಿಯ ಮಾನಸಿಕ ತುಮುಲವನ್ನು ಕಟ್ಟಿಕೊಡುವ ಮುಖ್ಯ 
ವಿಷಯವಸ್ತುವನ್ನು ಆಯ್ದುಕೊಂಡಾಗ
ಸಹಜವಾಗಿಯೇ ಅವಳ ಗತ ಜೀವನ/ ಮಕ್ಕಳ ಬದುಕು/ ಜೀವನದಲ್ಲಿಯ   
ಸವಾಲುಗಳು/ಅವುಗಳನ್ನು ಎದುರಿಸಲಾಗದ ಅಸಹಾಯಕತೆ ಅಷ್ಟಿಷ್ಟು  ಇರಬಹುದಾದ ಆತ್ಮವಿಶ್ವಾಸ ವನ್ನೂ  ಆಪೋಶನ ತೆಗೆದುಕೊಂಡು
ಬಿಡುತ್ತವೆ ಎಂಬುದನ್ನು ಒಂದು ರೈಲಿನ
ಕೂಪೆಯಲ್ಲಿ ಆರಂಭವಾಗಿ ಗಮ್ಯ ತಲುಪಿದೊಡನೇ ಮುಗಿಯುವ ಈ ಕಥೆ
ಕಟ್ಟಿಕೊಟ್ಟ ರೀತಿ ಮಾತ್ರ ಮನಸ್ಸನ್ನು
ಒದ್ದೆಯಾಗಿಸುತ್ತದೆ.ಪಯಣದ ಉದ್ದಕ್ಕೂ ತನ್ನದೇ ಬೋಗಿ ಹತ್ತಿದ ಇಬ್ಬರು ಯುವಕರ ಸಹಪಯಣದ ಜೊತೆಜೊತೆಗೇನೇ ಅವರೊಂದಿಗೇನೆ ಸಮೀಕರಣಗೊಂಡ, ತಾನು ಈಗಾಗಲೇ ಕಳೆದುಕೊಂಡ ಒಬ್ಬ ಮದ್ಯ
ವ್ಯಸನಿ ಮಗನ ಬದುಕು ತಾಳೆಯಾಗುತ್ತ ಹೋಗಿ ಕೊನೆಯಲ್ಲಿ
ಅದೇ ಮದ್ಯ ಸಾಗಾಣಿಕೆಯ ವಿಷಯವಾಗಿ ಅವರಿಬ್ಬರ ಬಂಧನವಾದದ್ದು ನೂರಕ್ಕೆ ನೂರು ಅನಿರೀಕ್ಷಿತವಾದದ್ದು..ಕಲ್ಪನೆಗೂ  ಮೀರಿದ್ದು... ಕಾರಣ, ಪ್ರಯಾಣ ಸಂದರ್ಭದಲ್ಲಿ, ಅನಿರೀಕ್ಷಿತವಾಗಿ ಅಸ್ವಸ್ಥಳಾದ ಆ ಮಹಿಳೆಗೆ, ಮಕ್ಕಳು
ಜೊತೆಗಿದ್ದರೆ ತೆಗೆದುಕೊಳ್ಳಬಹುದಾದ
ಕಾಳಜಿಯನ್ನು ಮೀರಿ ಕಾಳಜಿ ಮಾಡಿ
ಬದುಕಿಸಿಕೊಂಡವರು ಒಂದು ಸಮಾಜ ನಿಷೇಧಿತ ಕಾರಣಕ್ಕೆ ಬಂಧಿತರಾಗುವು ದು ಓದುಗರನ್ನೂ ದಂಗು ಬಡಿಸುವುದು
ಸಹಜವೇ...
            ಒಬ್ಬ ವಯಸ್ಕ ‌ಪ್ರತಿಭಾವಂತ ಮಗನನ್ನು ಅನ್ಯಾಯವಾಗಿ ಕಳೆದು ಕೊಂಡ ತಾಯಿಯ ದುಃಖ/ ದೀರ್ಘ ಪ್ರವಾಸದ ಆಕಸ್ಮಿಕ ಆಗುಹೋಗುಗಳು
 ಮಕ್ಕಳ ಕುರಿತಾಗಿ ತಾಯಿಯ ಅಂತಃಕರಣ/ಮನುಷ್ಯನ ಸ್ವಭಾವದ
ಆಳ, ವೈಚಿತ್ರ್ಯಗಳು/ ಶೀಘ್ರ ಗತಿಯಲ್ಲಿ
ಬದಲಾಗುತ್ತಿರುವ ಸಮಾಜದ ರೀತಿ ನೀತಿಗಳು/ಸರಿಯಾದ ಮಾರ್ಗದರ್ಶನ ವಿಲ್ಲದ ಇಂದಿನ ಯುವ ಪೀಳಿಗೆಯ 
ಹಾದಿಯ ತೊಡಕುಗಳು ಹೀಗೆ ಹತ್ತು ಹಲವು ಸಮಕಾಲೀನ ಸಮಸ್ಯೆಗಳಿಗೆ
ಹಿಡಿದ ಕನ್ನಡಿ ಈ ಕತೆ ಅಂದರೆ ಹೆಚ್ಚು
ಸಮಂಜಸವೇನೋ!!!

ವಿಲೋಮ...
                  ‌"ಹೂಗಳ ಪಕಳೆಗಳನ್ನು ಉದುರಲು ಬಿಡಬಾರದು...ಹಾಗಾದರೆ
ಹಾರ ಬೇಗನೇ ಒಣಗುತ್ತದೆ"- ಎಂದು ಗಾಢವಾಗಿ ನಂಬಿದವರು 'ದೊಡ್ಡಮನೆ' ಯ ಆಯಿ.ಆ ಕಾರಣಕ್ಕೇನೆ ಸ್ವತಃ ಮಾಲೆ ಕಟ್ಟುವಾಗ ಇನ್ನಿಲ್ಲದ ಮುತುವರ್ಜಿ...ಅವರ ಲೆಕ್ಕದಲ್ಲಿ ಕೂಡು ಕುಟುಂಬದ ಸಾರವೂ ಅದೇ. ಹಾಗೆಂತಲೇ ಇಳಿವಯಸ್ಸಿನ ವರೆಗೂ ತುಂಬಿದ ಮನೆಯ ಜವಾಬ್ದಾರಿ ಹೆಗಲಿಗೇರಿಸಿಕೊಂಡು ಹಣ್ಣಾದವರು.. ಆದರೆ ಕಾಲಕ್ಕೆಲ್ಲಿಯ ಕರುಣೆ?! ಅದರ 
ಮುಂದೆ ಯಾವ ತರ್ಕಗಳೂ ಲೆಕ್ಕಕ್ಕಿಲ್ಲ. ಅದು ಬದುಕಿನ 'ಬಾಗಿನ' ಆಗಾಗ 
ಬದಲಿಸುತ್ತದೆ.ಅದನ್ನು ಅನುಸರಿಸಿ
ಬಾಗಬೇಕೋ/ಎದುರಿಸಿ ನಿಂತು ಬಾಳಬೇಕೋ ಅವರವರಿಗೆ ಬಿಟ್ಟದ್ದು...
           'ವಿಲೋಮ'-ಈ ಎರಡೂ ನಿಲುವುಗಳ/ಎರಡು ತಲೆಮಾರುಗಳ
ಕಥೆ. ಕಾಲಮಾನ ೧೯೭೯ ಹಾಗೂ ೨೦೨೦ ರದು...ಅಂದರೆ ಸುಮಾರು 
ನಲವತ್ತು ವರ್ಷಗಳ ಅಂತರದ ವಿದ್ಯಮಾನಗಳದು...ಅಷ್ಟು ಅವಧಿಯ
ವರೆಗೆ ತಾಳಿ ಬಾಳುವ ' ಮಾಲೆ ಕಟ್ಟುವುದು' ಯಾವ ಆಯಿಯಿಂದಲೂ ಆಗದ  ಮಾತು.ಹೀಗಾಗಿ ಪಕಳೆಗಳು 
ಉದುರುವುದೇ ವಿಧಿನಿಯಮವಾಗುವ
ಅನಿವಾರ್ಯವೇ ಕಥೆಯ ಸಾರ...
              ಆದದ್ದೂ ಅದೇ... ಮನೆಮಕ್ಕ ಳು ದೊಡ್ಡವರಾಗಿ,ಅವರ ನಿಲುವುಗಳು ಬದಲಾಗಿ,ಆಗಬಹುದಾದ ಪರಿಣಾಮ ಗಳಿಗನುಗುಣವಾಗಿ ಘಟನೆಗಳು ಘಟಿಸುತ್ತ ಹೋಗುವುದಕ್ಕಮೂಕಸಾಕ್ಷಿ
ಯಾಗುವದರ ಹೊರತು ಬೇರೆ ದಾರಿ ಇಲ್ಲದಿರುವುದು...
               ಮೀರಾಕಾಕು ಹೆರಿಗೆಯ ನಂತರದ ' ಬಾಣಂತಿ ಸನ್ನಿ'ಗೆ ಒಳಗಾಗುವುದು/ ನಾನಿಕಾಕಾ ಅಹಮದಾಬಾದಿಗೆ ನೌಕರಿಗೆ ಹೋಗಿ,ಹೇಗೋ ತಾರಾಳ ಸುಳಿಯೊಳ ಗೆ  ಸಿಕ್ಕು ಒದ್ದಾಡುವುದು/ಅವರಿವರ ಆರೈಕೆಯಲ್ಲಿ ಮುದ್ದಿನಲ್ಲಿ ಬೆಳೆದು, ಜಾಣಳಾಗಿ ಸಾಧನೆ/ಮಹತ್ವಾಕಾಂಕ್ಷೆ ಯ ಮಾಯಾಮೃಗದ ಬೆನ್ನು ಹತ್ತಿ, 
ನ್ಯೂಯಾರ್ಕ್ ನ ಅಪರಿಚಿತ ನೆಲದಲ್ಲಿ ತನ್ನವರಿಲ್ಲದೇ ಮಾನಸಿಕ ದೌರ್ಬಲ್ಯಕ್ಕೆ
ಒಳಗಾಗಿ, ಚನ್ನಾಗಿ ಪರಕಿಸದೇ ಇದ್ದ ಮೂರ್ಖತನದಿಂದಾಗಿ/ದಿನೇಶನ ಅವಕಾಶವಾದಿತನಕ್ಕೆ  ಬಲಿಯಾಗಿ ಅವನ ಪಿಂಡವನ್ನು ಹೊಟ್ಟೆಯಲ್ಲಿಟ್ಟು ಕೊಂಡು ಭಾರತೀಪುರಕ್ಕೆಮರಳುವಲ್ಲಿಗೆ
ಕಥೆ ಮುಗಿಯುತ್ತದೆ.
    ‌ ‌            ಬದುಕಿನಲ್ಲಿ ಸವ್ಯ/ ಅಪಸವ್ಯಗಳೆರಡೂ ಇರುವುದು ಸ್ವಾಭಾವಿಕ.ಅಂದಮೇಲೆ ಅನುಲೋಮ -ವಿಲೋಮಗಳೆರಡೂ
ಇರುವದೂ ಅಚ್ಚರಿಯೇನೂ ಅಲ್ಲ... ಬಂದುದನ್ನು ಸ್ವೀಕರಿಸಲೇಬೇಕು-
ಎನ್ನುವುದೊಂದು 'ಅಲಿಖಿತ ಒಪ್ಪಂದವಷ್ಟೇ...

    ‌‌‌‌ಪನ್ನು ಎಂಬ ಹುಡುಗನೂ...
ಯಶೋದಾ ಎಂಬ ತಾಯಿಯೂ...
              
              ಇದು ಒಂದು ವಿಭಿನ್ನ ರೀತಿಯ ಕಥೆ...ಮುಖ್ಯವಾಗಿ ಎರಡೇ ಪಾತ್ರಗಳು...ಯಶೋದಾ...ಅವಳ ಮಾನಸ ಪುತ್ರ ಪ್ರಣೀತ್...ಕಥಾವಸ್ತು
ಕೂಡ ಜಟಿಲವಾಗಿಲ್ಲ.ಅರ್ಥೈಸಿಕೊಳ್ಳ ಲೂ ತುಂಬ ಸರಳ: ಮೆದುಳಿಗೆ ಹೆಚ್ಚಿನ ಕೆಲಸವಿಲ್ಲ, ಹೃದಯ ಬಿಚ್ಚಿ ಹರಡಿದರೆ
ಸಾಕು,ನೇರವಾಗಿ ತುಂಬಿಕೊಳ್ಳಬಹು ದು.
              ಒಂದು ಕೌಟುಂಬಿಕ ಉಚಿತ
ಸಲಹಾ ಕೇಂದ್ರ.ಕೌಟುಂಬಿಕ ಸ್ವಾಸ್ಥ್ಯ
ಕಾಪಾಡುವುದೇ ಅದರ ಗುರಿ...ಹೀಗಾಗಿ
ಯಾರೇ ಕರೆ ಮಾಡಿದರೂ ಹಾರ್ದಿಕ
ಸ್ವಾಗತ...ಹೆಸರು ಕೂಡ ಬೇಕಿಲ್ಲ. ಸಮಸ್ಯೆ/ ಪರಿಹಾರಕ್ಕೆ ನೇರ ಸಂಬಂಧ.
ಇಂಥದೇ ಒಂದು ಫೋನ್ ಕರೆ ಒಂದು
ಮಗುವಿನಿಂದ ಬಂದಾಗ ಇತ್ತಕಡೆ ಯಿದ್ದ ಇದ್ದವಳಿಗೆ ಆನಂದ/ ಆಶ್ಚರ್ಯ/ ಕುತೂಹಲ ದಿಂದಾಗಿ ಮಾತು ಮುಂದುವರಿಯುತ್ತದೆ.ಸ್ವಂತದ್ದೊಂದು
ಕುಟುಂಬದ ಆಸರೆಯಿಲ್ಲದ ಏಕಾಕಿ
ಮಹಿಳೆ ಬಹುಶಃ ತನಗೂ ಅತ್ಯವಶ್ಯಕ ವಾದ ಸಂವಹನಕ್ಕೆಂತಲೇ ತೆರೆದ ಸೇವೆಯದು-ಹಾಗೇ ಇರಬಹುದಾದ ಇನ್ನೊಬ್ಬ ಗೆಳತಿಯ ಸಹಯೋಗ ದೊಂದಿಗೆ...
  ‌‌‌              ಮನೆಯಲ್ಲಿ ಯಾರೂ ಇಲ್ಲದೇ ಬೇಸರವೆನಿಸಿದ ಎಂಟು ವರ್ಷಗಳ‌ ಮಗುವೊಂದು ಅಮ್ಮ ಆಗಾಗ ಕರೆ ಮಾಡುವ ನಂಬರಿಗೆ ಮೋಜಿಗೆಂದು ಕರೆ ಮಾಡುತ್ತಾನೆ.
ಅವನಿಗೆ ಸಿಕ್ಕ ಪ್ರೋತ್ಸಾಹ/ಪ್ರೀತಿಗೆ
ಮರುಳಾಗಿ ದಿನಾಲೂ ಮಾಡತೊಡಗಿ
ಅವರಿಬ್ಬರ ಮಧ್ಯೆ ಅವಿನಾಭಾವ ಸಂಬಂಧವೊಂದು ಬೆಳೆಯುತ್ತದೆ. ನಂತರ ಅವರ ಕುಟುಂಬ ವಿದೇಶಕ್ಕೆ
ನೌಕರಿಗಾಗಿ ದೇಶ ಬಿಟ್ಟು ಹೋಗಿ ಮತ್ತೆ ಮರಳಿ ಬಂದಾಗ ಹನ್ನೆರಡು ವರ್ಷಗಳು ಉರುಳಿ ಇಪ್ಪತ್ತರ ಯುವಕನಾದ ಹುಡುಗನಿಗೆ ಎಲ್ಲವೂ ನೆನಪಿಗೆ ಬಂದು
ಆ ಸಲಹಾ ಕೇಂದ್ರಕ್ಕೆ ಹೋದಾಗ ಅವನ ಆಂಟಿಯ ಬದಲಿಗೆ ಅವಳ ಪತ್ರ
ಅವನಿಗೆ ಕಾದಿರುತ್ತದೆ.
  ‌       ‌‌‌‌‌   ‌ಸಂಬಂಧಗಳ ಕೊಡುಕೊಳ್ಳು ವಿಕೆಗೆ ಸಂಬಂಧಿತ ಅತ್ಯಂತ ಸರಳ ಸೂತ್ರವನ್ನಾಧರಿಸಿದ/ ಹೃದಯ ಹೃದಯಗಳ ಭಾಷೆ ಬಳಸಿದ/ನಾವೂ
ಸೇರಿದಂತೆ ಯಾರೂ ಕಥೆಯ ಪಾತ್ರಗಳಾಗಬಹುದಾದ ಪವಾಡರೂಪಿ
ಕಥಾವಸ್ತುವಿದು...
                   ತಾಯಿಯಲ್ಲದೆಯೂ
ಒಬ್ಬ ತಾಯಿ ಕೊಡಬಹುದಾದ ವಾತ್ಸಲ್ಯವನ್ನು ಮೊಗೆಮೊಗೆದು ಕೊಟ್ಟ ಪಾತ್ರಕ್ಕೆ ಅನ್ವರ್ಥಕ ಹೆಸರು 'ಯಶೋದಾ'. ಮಗುವಿನ ಹೆಸರೂ 
' ನಂದನ'-ಆಗಿದ್ದರೆ ಅಲ್ಲೊಂದು ಪುಟ್ಟ
ಗೋಕುಲವೇ ಸೃಷ್ಟಿಯಾಗಬಹುದಿತ್ತು...



      

Wednesday 1 November 2023

           ನಾನು ಬೆಂಗಳೂರಿಗೆ ಬಂದ ಹೊಸತು...ಇದ್ದದ್ದು ಒಂದು ದೊಡ್ಡ Gated community ಯಲ್ಲಿ.ಹೀಗಾಗಿ ಸಹಜವಾಗಿಯೇ ಕನ್ನಡೇತರರೂ
ಸಾಕಷ್ಟು ಜನರಿದ್ದರು...ಅವರಿಗೆ ಕನ್ನಡ ಮಾತ್ರ ಗೊತ್ತಿರುವ ಕೆಲಸದವರೊಂದಿಗೆ
ವ್ಯವಹರಿಸಲು ದಿನ ಬಳಕೆಯ ಕನ್ನಡ
ಕಲಿಯುವದು ಅವಶ್ಯಕವಾಗಿತ್ತು.ಆಗ ನಾನು/ ಶಾಲಿನಿ ಮೂರ್ತಿ ಸೇರಿಕೊಂಡು
Park ನ ಒಂದು area ದಲ್ಲಿ ಉಚಿತ ಕನ್ನಡ class ಗಳನ್ನು ಪ್ರಾರಂಭಿಸಿದಾಗ
ಅತ್ಯುತ್ತಮ ಪ್ರತಿಕ್ರಿಯೆ ಬಂದು ಎಲ್ಲರೂ ನಮ್ಮಿಬ್ಬರನ್ನೂ ' ಕನ್ನಡಿಗರು' ಎಂದು  ವಿಶೇಷವಾಗಿ ಗುರುತಿಸಲು ಪ್ರಾರಂಭಿಸಿ ದರು.
              ಹೀಗಿರುವಾಗ ಒಂದು ದಿನ
ಏಳನೇ ವರ್ಗದ convent ನ ಕೆಲವು ಮಕ್ಕಳು ನಮ್ಮನೆ ಬಾಗಿಲು ಬಡಿದರು. ತಮಗೆ ಕನ್ನಡ ಕಲಿಯುವುದು ಕಡ್ಡಾಯ ವಾದ ಕಾರಣ ನಾನು ಅವರಿಗೆ ಕನ್ನಡ special class ತೆಗೆದುಕೊಳ್ಳಬೇಕೆಂ ಬುದು ಅವರ ತೀವ್ರ ಆಶಯವಾಗಿತ್ತು.
ಈ ವರೆಗೆ ಏನು ಮಾಡಿದಿರಿ? ಎಂಬ ಪ್ರಶ್ನೆಗೆ 'ಒಬ್ಬರ' ಹೆಸರು ಹೇಳಿ ಅವರ ಬಳಿ ಮೂರು ವರ್ಷಗಳಿಂದ ಕನ್ನಡ ಕಲಿಯುತ್ತಿದ್ದುದಾಗಿಯೂ, ಈಗ ಅವರು ಮದ್ರಾಸ್ ಗೆ shift ಆಗುತ್ತಿ ರುವುದಾಗಿಯೂ ಹೇಳಿದಾಗ ನಾನು ತೆರೆದ ಬಾಯಿ ಮುಚ್ಚಲಿಲ್ಲ.ಕಾರಣ ಆ ಕನ್ನಡ ಟೀಚರ್ ಮಗ ಹಾಗೂ ನನ್ನ ಮೊಮ್ಮಗ ಪರಮಾಪ್ತ ಗೆಳೆಯರು...
ದಿನಾಲೂ ದಿನದ ಅರ್ಧ ಭಾಗ ನಮ್ಮನೆ ಯಲ್ಲಿಯೇ  ಕಳೆಯುತ್ತಿದ್ದ.ಅವರಮ್ಮನ ದೂ ತುಂಬಾ ಚನ್ನಾಗಿ ಪರಿಚಯ.ಆದರೆ
ಎರಡು/ಮೂರು ವರ್ಷಗಳ ಅವಧಿಯ ಲ್ಲಿ ಒಂದೇ ಒಂದು ಕನ್ನಡ ಶಬ್ದವನ್ನು
ಅವರು ಬಳಸಿರಲಿಲ್ಲ.ಅವರಿಗೆ ಕನ್ನಡ ಬರುತ್ತದೆ ಎಂಬ ಸುಳಿವೂ ಕೊಟ್ಟಿರಲೇ ಇಲ್ಲ.ಅಂಥವರು ಕನ್ನಡ ಕಲಿಸಿ ಹಣ ಸಂಪಾದನೆ ಮಾಡುತ್ತಿದ್ದರು!!!
                ಮರುದಿನ ಅವರ ಮಗ ಮನೆಗೆ ಬಂದ...ನಿಮ್ಮಮ್ಮನಿಗೆ ಕನ್ನಡ ಬರುತ್ತಾ?- ಎಂದು ಸಹಜವೆಂಬಂತೆ
ಕೇಳಿದೆ..."ಹಾ! ಆಂಟಿ ಚನ್ನಾಗಿಯೇ ಬರುತ್ತದೆ.ನಮ್ಮಮ್ಮ ಮೈಸೂರಿನವರು. ಮನೆಯಲ್ಲಿ ಕನ್ನಡ class ಗಳನ್ನು ತೆಗೆದುಕೊಳ್ಳುತ್ತಾರೆ-" ಎಂದು ಮುಗ್ಧವಾಗಿ ಉತ್ತರಿಸಿದ!!!

        ನಮ್ಮ ಕನ್ನಡ ಭಾಷೆಯ ಒಂದು ವಿಶೇಷತೆ ಗೊತ್ತಾ? ಕನ್ನಡದ ಅಂಕಿಗಳಿ ಗೂ ಕನ್ನಡದ ಅಕ್ಷರಗಳಿಗೂ ನೇರಾ ನೇರ ಸಂಬಂಧವಿದೆ.ಅವೆರಡೂ ಸೇರದೇ ಒತ್ತಕ್ಷರಗಳಾಗುವುದಿಲ್ಲ...

೧ - ಹಗ್ಗ/ ಮಗ್ಗ/ ಕಗ್ಗ. (ಗ್ ಒತ್ತು)
೨- ಹತ್ತು/ ಮುತ್ತು/ ಕುತ್ತು.( ತ್ ಒತ್ತು)
೩- ಅನ್ನ/ ಕನ್ನ/ ರನ್ನ.( ನ್)
೪- ಕಳ್ಳ/ ಸುಳ್ಳ/ ಹಳ್ಳ.( ಳ್ ಒತ್ತು)
೫- 
೬- ಅಮ್ಮ/ ತಮ್ಮ/ ನಮ್ಮ.( ಮ್ ಒತ್ತು)
೭- ಕಶ್ಯಪ/ ಉಶ್ಯಾಪ/ ( ಶ್ ಒತ್ತು)
೮ - ಕೈ/ಮೈ/ ನೈ( ಜ)..( ಐ ಒತ್ತು)
೯- ಕಾರ್ಯ/ ಸೂರ್ಯ/ ಆರ್ಯ...

Sunday 29 October 2023

Artificial

     Artificial Intelligence- ಇದರ
ಕಲ್ಪನೆ ಬಹಳ ಹಿಂದೆಯೇ ಹುಟ್ಟು ಕಂಡಿದ್ದರೂ Computer Science ನ
ಅಬ್ಬರದಲ್ಲಿ 

Saturday 28 October 2023

ಕೆಲವೊಮ್ಮೆ, ಮಾತು ಬೆಳ್ಳಿಯೂ ಅಲ್ಲ...ಮೌನ ಬಂಗಾರವೂ ಅಲ್ಲ..

ಕೆಲವೊಮ್ಮೆ- ಮಾತು ಬೆಳ್ಳಿಯೂ ಅಲ್ಲ,
ಮೌನ ಬಂಗಾರವೂ ಅಲ್ಲ...

   ‌‌    ಮದುವೆಯಾದ ಹೆಣ್ಣುಮಕ್ಕಳಿಗೆ
ಮದುವೆಯ ನಂತರದ ಐದುವರ್ಷಗಳ
ಕಾಲ ಶ್ರಾವಣ ಮಂಗಳವಾರಗಳಂದು- ಮಂಗಳ ಗೌರಿವ್ರತ- ಅಂತ ಇರುವುದು ಬಹುಶಃ ಎಲ್ಲರಿಗೂ ಗೊತ್ತು.ಹಾಗೆಯೇ ಕುಮಾರಿಯರಿಗೆ,ಅವರು'ದೊಡ್ಡವರಾಗುವುದಕ್ಕೂ- (mature)ಮೊದಲ ಐದುವರ್ಷಗಳ ಕಾಲ,,' ಮೌನಗೌರಿ ವ್ರತ'- ಅಂತ ಮಾಡುವುದು ನಮ್ಮ ಕಡೆ ಇತ್ತು.ಈಗಿಲ್ಲ ,ಮಾಘ ಮಾಸ ಪೂರ್ತಿ ಕುಮಾರಿಯರು ನಸುಕಿನಲ್ಲಿ ಎದ್ದು, ಕಡ್ಡಾಯ ತಲೆಸ್ನಾನ ಮಾಡಿ ಸೂರ್ಯೋದಯ/ಸೂರ್ಯಾಸ್ತದ ಹೊತ್ತಿಗೆ ಈ ಪೂಜೆ ಮಾಡಬೇಕು.ಆ ವೇಳೆಯಲ್ಲಿ ಮಾತನಾಡುವ ಹಾಗಿಲ್ಲ, ಕಟ್ಟು ನಿಟ್ಟಾಗಿ ಮೌನದಲ್ಲಿಯೇ ಪೂಜೆ ನಡೆಯಬೇಕು.ಪೂಜೆ ಮುಗಿಸಿ ಸೂರ್ಯನಿಗೆ ಅಕ್ಷತೆ ಹಾಕಿಯೇ ನಂತರ ಏನಾದರೂ ಆಹಾರ ಸೇವಿಸಬೇಕು. ಅಲ್ಲಿಯವರೆಗೂ ಎಲ್ಲ ವ್ಯವಹಾರವೂ ಕೈ ಸನ್ನೆ,ಬಾಯಿ ಸನ್ನೆ ಮುಖಾಂತರವೇ- ಅಪ್ಪಿ ತಪ್ಪಿ ಮಾತನಾಡಿದರೆ ಸಂಜೆಯ ವರೆಗೂ ಪೂರ್ತಿ ಉಪವಾಸವಿರುವು ದೇ ಪ್ರಾಯಶ್ಚಿತ್ತ...

    ‌‌‌‌      ಈ ವ್ರತದ interesting ಭಾಗ
ಇದಲ್ಲ.ಇದರ ಮುಂದಿನದು.ಅವರನ್ನು
ಹೇಗಾದರೂ ಮಾತನಾಡಿಸಿ ಅವರು ನಿಯಮ ಮುರಿಯುವಂತೆ ಮಾಡಿ, ವ್ರತವನ್ನು ಮಾಡುವವರನ್ನು ಉಪವಾಸ ಬೀಳುವಂತೆ ಮಾಡಲು ಮನೆಯಲ್ಲಿ ಉಡಾಳ ಪಡೆಯೊಂದು ಸದಾಕಾಲವೂ ಸಿದ್ಧವಿರುತ್ತಿತ್ತು. ಅವರೊಂದಿಗೆ ಸೆಣೆಸಲು ಹುಡುಗಿಯ ರು ಸಾಕಷ್ಟು ಎಚ್ಚರವಿದ್ದರೂ ಆಗಾಗ ಒಮ್ಮೊಮ್ಮೆ ಬಲಿಬೀಳುವದೂ ಇತ್ತು. ಆಗ ಕಿರಿಯರ ಕುಣಿತ/ ಹಿರಿಯರ ಕೂಗಾಟವೂ ದಾಖಲು ಯೋಗ್ಯವೇ...

               ಈಗ ಇದೆಲ್ಲ ನೆನಪಾಗಲು
ಮೊನ್ನೆ ಮೊನ್ನೆ ನಡೆದ ಉತ್ತರಭಾರತದ
'ಕನ್ಯಾಪೂಜೆ'ಯ ಚಿತ್ರಗಳು,ವೀಡಿಯೋ ಗಳು, ವರದಿಗಳು ಕಾರಣ...

                    ಅದಕ್ಕೂ ಮುಖ್ಯ ಕಾರಣವೆಂದರೆ ಇತ್ತೀಚೆಗೆ ಎಲ್ಲರ ಮನೆಗಳಲ್ಲಿ ಜನಗಳು ಕಡಿಮೆಯಾಗಿ/
ಇದ್ದವರು ವಿಪರೀತ busy ಯಾಗಿ/
ಹೆಚ್ಚಿನ ಮಕ್ಕಳು ವಿಪರೀತವಾಗಿ ಇಂಗ್ಲೀಷ್ ಮಯವಾಗಿದ್ದರಿಂದ ಹಿರಿಯರಿಗೆ ಮಾತನಾಡಬೇಕೆಂದರೂ ಜೊತೆಗಾರರಿಲ್ಲದೇ ' ಕಡ್ಡಾಯ ಮೌನವ್ರತ'ಕ್ಕೆ ಶರಣಾಗಬೇಕಾಗಿ ಬಂದಿರುವುದು ವಿಪರ್ಯಾಸ. ಅದೇ ಒಂದು ಸಮಸ್ಯೆಯೂ ಆಗಿ  ಹಿರಿ- ಕಿರಿಯರೆನ್ನದೇ ಬಹಳಷ್ಟು ಜನ
ಮಾನಸಿಕವಾಗಿ ಕುಗ್ಗಿ ಹೋಗುತ್ತಿರುವು ದೂ ಎಲ್ಲರಿಗೂ ಗೊತ್ತಿರುವ ಮಾತೇ...
ಈ ಹಿಂಸಾತ್ಮಕ ' ಮೌನವ್ರತ'- ಭಂಗ 
ಮಾಡಿ ಮೊದಲಿನ ಲವಲವಿಕೆಯನ್ನು
ಮರಳಿಸಲು ಆ ಮೊದಲಿನ‌ ತುಂಟ, 
ಹುಡುಗಾಟ ಪ್ರಿಯ ಮಕ್ಕಳ ದಂಡು
ಅರ್ಜಂಟಾಗಿ ಬೇಕಾಗಿದೆ...


      



Friday 27 October 2023

       ಬದುಕಿನ ಪುಟ್ಟ ಪುಟ್ಟ ಖುಶಿಗಳು-
ಅಂತ ಸದಾ ಅನ್ನುತ್ತೇವೆ.ದೊಡ್ದ ದೊಡ್ಡ ನಿರೀಕ್ಷೆಗಳ ಬೇಟೆಯಲ್ಲಿ ಅವುಗಳನ್ನು
ಕಳೆದುಕೊಳ್ಳಬಾರದು ಎಂಬುದೂ ಕೂಡ ಮತ್ತೆ ಮತ್ತೆ ಕೇಳಿಬರುವಂಥ ಮಾತು.ಅದೇನು ಅಂತ ಕೊಂಚ ಯೋಚಿಸುವಾ ಅಂತ ಆಳಕ್ಕಿಳಿದೆ, ಹೊಳೆದದ್ದಿಷ್ಟು ;-
        ‌    * ರಾತ್ರಿಯ ಸುಖ ನಿದ್ದೆಯಿಂದ 
ಎಚ್ಚತ್ತು ಬೆಳಿಗ್ಗೆ ಎರಡೂ ಕೈ ಅಗಲಿಸಿ 
ತೆಗೆದ 'ದೀರ್ಘ ಆಕಳಿಕೆ...
*ತಾಜಾ ಹಾಲಿನ ಕಾಫಿ/ಟೀ ಜೊತೆಗಿನ ಮೊಟ್ಟ ಮೊದಲ ಮೊಬೈಲ್ 'surfing'.
*ಕೋಣೆಯ ಕಿಟಕಿ ತೆರೆದಾಗ ಎದುರಿಗೆ ಕಂಡ ಅದೇ ಅರಳಿನಿಂತ ಹೂ/ಅದರ ಘಮ...
*ಸತತ ಕರೆಯುತ್ತಿರುವ ಅಮ್ಮನಿಗೆ ' ಬಂದೆ, ಬಂದೆ ಅನ್ನುತ್ತಲೇ ಕದಿಯುವ 
ಒಂದೆರಡು ಕ್ಷಣಗಳು...
*ಎರಡು ದಿನಗಳಿಂದ ಎಲ್ಲೋ ಮನದ ಮೂಲೆಯಲ್ಲಿ ಕುಳಿತು ಕಾಡುತ್ತಿರುವ
ಆಪ್ತರೊಬ್ಬರ ಆಕಸ್ಮಿಕ ಫೋನ್ ಕರೆ...
*ತುಂಬ ಹಸಿದಾಗ ಸಿಕ್ಕ ಬಿಸಿ ಬಿಸಿ ಅನ್ನ
/ ತಿಳಿಸಾರು/ ಹಪ್ಪಳ- ಉಪ್ಪಿನಕಾಯಿ ಊಟ...
*ರಾಶಿ ರಾಶಿಯಾಗಿ ಎದುರಿಗಿರುವುದ ನ್ನು ಬಿಟ್ಟು ಯಾರದೋ ಕೈಯಲ್ಲಿಂದ ಎಗರಿಸಿದ ಉಪ್ಪುಗಡಲೆ/ ಸೇಂಗಾ ಬೀಜಗಳನ್ನು ಬಾಯ್ತುಂಬ ಅಗಿಯುವ ಖುಶಿ... 
*ನಿಧಾನವಾಗಿ ತೆವಳುತ್ತಾ ಹೋಗಿ ಮೊದಲ ಬಾರಿ ಹೊಸಿಲು ದಾಟಿ ಒಮ್ಮೆ ಹೊರಳಿ  ನೋಡಿ ನಕ್ಕ ಮಗುವಿನ ವಿಜಯದ ನಗೆ...
*ಮಕ್ಕಳು ತಮ್ಮದೇ ದುಡಿಮೆಯಲ್ಲಿ
ಪ್ರಥಮ ಬಾರಿ ಕೊಂಡು ತಂದು ಕೈಗಿತ್ತ
ಪುಟ್ಟದೊಂದು ಉಡುಗೊರೆ...
*ಅಕಸ್ಮಾತ್ ಆಗಿ ಜೋಲಿ ತಪ್ಪಿದಾಗ  
ತಟ್ಟನೇ ಕೈ ನೀಡಿ ಆಧಾರಕ್ಕೆ ನಿಂತ ಮೊಮ್ಮಕ್ಕಳು...
*ಅತಿ ಕೆಲಸದ ಆಯಾಸದಿಂದ ಮನೆಗೆ
ಬಂದು ಕ್ಷಣಕಾಲ ಕಣ್ಣುಮುಚ್ಚಿ ವಿರಮಿಸುವಾಗ ಹಣೆಯ ಮೇಲಾಡುವ
(ಗಂಡ/ ಹೆಂಡತಿ/ ಅಮ್ಮ/ ಮಗಳು)
ಯಾವುದಾದರೂ ತಣ್ಣಗಿನ ಕೈ...
         
          ಉಫ್!!! ಹೌದಲ್ಲ,ಎಷ್ಟೊಂದಿವೆ!
ಬದುಕಿನಲ್ಲಿ ಬಾಚಿಕೊಳ್ಳಬಹುದಾದ/ 
ಬಾಚಿಕೊಳ್ಳಲೇಬೇಕಾದ ಅಸಂಖ್ಯಾತ
ಪುಟ್ಟ ಪುಟ್ಟ ಖುಶಿಗಳು...

              ಎಷ್ಟೂಂತ ಹೇಳುವುದು ಅವುಗಳನ್ನ!! ಅನುಭವಿಸುವುದೇ ಚನ್ನ!!!




Thursday 26 October 2023

ಪರಕಿಸಿದೊಡದು ಲಾಭ- ಮಂಕುತಿಮ್ಮ...        
            
              ನನ್ನ ಕೊನೆಯ ಮೊಮ್ಮಗ
ಅತೀವ ಕ್ರೀಡಾ ಪ್ರೇಮಿ. Foot ball ಆಟಗಾರ...Bengaluru Foot ball Club ಹಾಗೂ DPS School team 
ನ ಸಕ್ರಿಯ ಆಟಗಾರ...ಸ್ಕೂಲ್ ವತಿ ಯಿಂದ ಗೋವಾ/ಭೂಪಾಲ ಗಳಲ್ಲಿ ವಿವಿಧ ಹಂತತ matchಗಳನ್ನು ಗೆದ್ದು ಡಿಸೆಂಬರ್ನಲ್ಲಿ ನಡೆಯುವ Zonal level ತಯಾರಿ ನಡೆಸಿದ್ದಾನೆ.ಹೀಗೆ ಆಡುವಾಗ ಆಗಾಗ ಸಣ್ಣ ಪುಟ್ಟ ಅವಘಡಗಳಾಗುವುದು/ ಉಪಚಾರ ಪಡೆಯುವುದು ಅಪರೂಪವಲ್ಲ. ಆದರೆ ಈ ಸಲ ಸ್ವಲ್ಪು ಮಟ್ಟಿಗೆ ಹೆಚ್ಚಿನ 
ಪೆಟ್ಟು ತಗಲಿ ಎಡಗೈಗೆ surgery ಆಗ ಬೇಕಾಯಿತು.ಒಳಗೆ ಎರಡು ಚಿಕ್ಕ rod ಗಳನ್ನು ಕೂಡಿಸಿ ಮೇಲೆ ಕಾಸ್ಟ್ ಹಾಕಿ
ದ್ದಾರೆ...ಇನ್ನೆರಡು ವಾರದ ವಿಶ್ರಾಂತಿ...

              ಅದಲ್ಲ ವಿಷಯ...ಆಸ್ಪತ್ರೆಗೆ
ಹೋದಾಗ ಹೇಳಿದ್ದ ಅಂದಾಜು ವೆಚ್ಚ
70,000/- ಚೌಕಶಿ ಮಾಡುವ ಮಾತಂತೂ ಅಲ್ಲ,ಸರಿ, Operation ,ಮುಗಿಯಿತು,ಮರುದಿನ ಒಂದು/ಎರಡು ಗಂಟೆಯ ಹೊತ್ತಿಗೆ ಮನೆಗೆ ಬರುವುದು ಎಂದಾಯಿತು.ಆದರೆ ನಾಲ್ಕಾದರೂ ಬರಲೇಯಿಲ್ಲ.ನಮಗೋ ಆತಂಕ.ಎಲ್ಲವೂ ಮುಗಿದ ಮೇಲೇಕೆ
ತಡವಾಗಬೇಕು/ ಆದದ್ದಾದರೂ ಏನು?
ಎಂದು.ಬಂದಮೇಲೆ ತಿಳಿದ ವಿಷಯ
ಆತಂಕಕಾರಿ/ ನಂಬಲಾಗದ್ದು/ನಾವೆಲ್ಲಾ ಜಾಗ್ರತರಾಗಬೇಕಾದುದು...

                ಮನೆಗೆ ಬರಲು ಮಗಳು ತಯಾರಿ ನಡೆಸಿದರೆ ಅಳಿಯ ಬಿಲ್ ಪಾವತಿಸಲು ಹೋದ.Insurance ಎಲ್ಲ Clear ಆಗಿ ಬಿಲ್ ಸಹಿಗೆ ಬಂದಾಗ ಬರೋಬ್ಬರಿ Rs 50,000/-
ಹೆಚ್ಚು.ಒಂದು ಲಕ್ಷ ,ಇಪ್ಪತ್ತು ಸಾವಿರದ್ದು
ಮತ್ತೆ counter ಗೆ ಹೋಗಿ ತರಾಟೆಗೆ
ತೆಗೆದುಕೊಳ್ಳಲು ಹೋದಾಗ _ ಅಮಾಯಕರಂತೆ," Sorry Sir, ಎಲ್ಲೋ ಏನೋ  ತಪ್ಪಾಗಿದೆ ಎಂದು ತಿಪ್ಪೆ ಸಾರಿಸಿ
ಮತ್ತೆ ಎರಡು ಗಂಟೆ ತೆಗೆದುಕೊಂಡು
ಹೊಸ ಬಿಲ್ ತಯಾರಿಸಿ, ಅದನ್ನು ಪಾವತಿಸಿ ಬರಲು ಬಿಲ್ ಆದಂತೆಯೇ
ಸಮಯವೂ double ಆಗಿತ್ತು. ಎಲ್ಲರೂ ಸುಸ್ತೋ ಸುಸ್ತಾಗಿದ್ದು ನಮಗೆ ಆಶ್ಚರ್ಯಕರವಾಗಿ ಕಾಣಲಿಲ್ಲ.

                  ‌ಮತ್ತೆ ಮಾತಿನಲ್ಲಿ ತಿಳಿದು 
ಬಂದದ್ದು-ಪರಿಚಯದ ಇನ್ನೊಬ್ಬರಿಗೆ
ಎರಡು ಸ್ಟಂಟ್ಗಳನ್ನು ಕೂಡಿಸಿ/ನಾಲ್ಕರ
ಬಿಲ್ ಕೊಟ್ಟದ್ದೆಂದು/ ಗಮನಕ್ಕೆ ತಂದಾಗ SORRY ಯೊಂದಿಗೆ ಮತ್ತೊಮ್ಮೆ ಹೊಸದಾಗಿ ಬಿಲ್ ಕೊಟ್ಟದ್ದು ತೀರ ಇತ್ತೀಚೆಗೆ ನಡೆದದ್ದೇ...

               ಒಟ್ಟಿನಲ್ಲಿ ಈ ಕತೆಯ ತಾತ್ಪರ್ಯವಿಷ್ಟೇ, ಇವು ಖಂಡಿತ ಆಕಸ್ಮಿಕ ಘಟನೆಗಳಲ್ಲ...Well done plans...ಕಾರಣ ಯಾವುದೇ ಆಸ್ಪತ್ರೆ ಯಲ್ಲಿ ಬಿಲ್ ಪಾವತಿಸುವಾಗ ಮೈಯಲ್ಲಾ ಕಣ್ಣಾಗಿರಿ. ಸಹಿ ಹಾಕುವ ಮೊದಲು ಇನ್ನೊಬ್ಬರು ಪರಿಶೀಲಿಸಿ. Insurance ಮುಖಾಂತರ ಹಣವನ್ನು ಪಾವತಿಸಿದರಂತೂ ಹೆಚ್ಚು ಎಚ್ವರ ಅವಶ್ಯ.ಏಕೆಂದರೆ ಅದು ನಿಮ್ಮ ಪಾಲಸಿ ಯ ಮೇಲೆ ನಿರಂತರ ಪರಿಣಾಮವಾಗು ತ್ತದೆ...ಕಾರಣ,
            
        ನಂಬಿದಂತಿರಿ...ದೇವರಾಣೆಗೂ
ನಂಬದಿರಿ...



                

            
 





              

Sunday 22 October 2023

To who So Ever It May Concern..     

      ಕಿವುಡು/ಮೂಕರಿಗೆ ಅಂತಲೇ
ಒಂದು ಸಂಜ್ಞಾ ಭಾಷೆ ಇರುತ್ತದೆ... ಕುರುಡರಿಗೆ ಬ್ರೈಲ್ ಲಿಪಿ ಇರುತ್ತದೆ...
ಅನಕ್ಷರಿ( ಕಲಿಯದವರಿಗೆ)ಗಳಿಗೆ ಕಣ್ಣು ತಪಾಸಣೆಗೆ ಅಂತಲೇ ಪರದೆಯ ಮೇಲೆ ಬೇರೆ ಬೇರೆ ದಿಕ್ಕುಗಳನ್ನು ಸೂಚಿಸುವ ಬಾಣದ/ಹಸ್ತದ ಗುರುತು ಗಳು ಇರುತ್ತವೆ.ಅವುಗಳು ಎತ್ತ
ಕಡೆ ಮುಖ ಮಾಡಿರುತ್ತವೋ ಅತ್ತ ಕಣ್ಣುಗಳನ್ನು ತಿರುಗಿಸಬೇಕು...

                ಈಗ ಕೊನೆಯ ಕೆಟೆಗರಿ...
ಈ ಮೂರೂ ಗುಂಪುಗಳಿಗೆ ಅಷ್ಟಷ್ಟು
ಸಲ್ಲುವ ಎಪ್ಪತ್ತೈದು/ಎಂಬತ್ತರ ನಡುವಿನ ನನ್ನಂಥ ಹಿರಿಯ ನಾಗರಿಕರದು...ಯಾವದೇ ಒಂದೇ ಗುಂಪಿಗೆ ಸಲ್ಲದೇ,ಪೂರ್ತಿ ಕಾಣದು/ ಸರಿಯಾಗಿ ಕೇಳದು/ ಮಾತನಾಡಿದರೂ ಇತರರಿಗೆ ಸುಲಭವಾಗಿ ತಿಳಿಯದು ಎಂಬಂತೆ.ಅವರು ಒಂದು ರೀತಿ ಅಂಗನವಾಡಿ ಮಕ್ಕಳಿದ್ದಂತೆ... ಹೇಳಿದ್ದು ಕೇಳರು/ ಸ್ವಂತಕ್ಕೆ ತಿಳಿಯದು...ಸದಾ ಒಂದು ರೀತಿಯ ಗೊಂದಲ, ಹಿಂದಿದ್ದ, ಆದರೆ ಈಗಿಲ್ಲದ ಆತ್ಮವಿಶ್ವಾಸದ ಕೊರತೆಯೂ ಅದಕ್ಕೆ ಕಾರಣವಾಗಿರ ಬಹುದು. ಎಲ್ಲರೂ ಹಾಗೆಯೇ ಇಲ್ಲದಿರಬಹುದು ಆದರೆ  ಹಾಗೆ ಇದ್ದರೆ
ಅವರನ್ನು ಕೊಂಚ ಬೇರೆ ರೀತಿಯಲ್ಲಿ ಯೇ ಸಂಭಾಳಿಸಬೇಕಾಗುತ್ತದೆ .ಆರು ವರ್ಷಗಳಿಂದಲೂ Social Immersion Programme
Volunteering ಮುಖ್ಯವಾಗಿ ಇಟ್ಟುಕೊಂಡು ತನ್ನದೇ Company ತೆರೆದು Entrepreneur ಅನಿಸಿಕೊಂಡ ನನ್ನ ಮಗಳು ಆರು ದಿನಗಳ ಹಿಂದೆ Cataract Operation ಆಗಿರುವ ನನ್ನನ್ನು ತರಬೇತಿಗೊಳಿಸಿದ ರೀತಿ ಸ್ವಲ್ಪ ಹಾಗೇ ಇದೆ. ಅದಕ್ಕೂ ಮೊದಲೇ ಒಂದು ಮಾತು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಅವಳೇ  ಖುದ್ದಾಗಿ ನನ್ನನ್ನು ನೋಡಿ ಕೊಳ್ಳುತ್ತಿದ್ದಾಳೆ.ಅದಕ್ಕೆ ಅನುಗುಣವಾಗಿ ತನ್ನ ದಿನಚರಿ ಹೊಂದಿಸಿಕೊಳ್ಳುತ್ತಾಳೆ.ಆದರೂ  "ಯುದ್ಧಕಾಲೇನ ಶಸ್ತ್ರಾಭ್ಯಾಸಃ"- ಅಂತಾಗಬಾರದಲ್ಲಾ- ಅದಕ್ಕಾಗಿ ಒಂದು ಪೂರ್ವತಯಾರಿಯ ತರಬೇತಿಯಷ್ಟೇ ಇದು..ಇದನ್ನು ಹಂಚಿಕೊಂಡರೆ,  ಅದನ್ನು ಕೆಲವರಾದರೂ  ಬಳಸಿ ಕೊಂಡರೆ  ಉಪಯೋಗ/ಪರೋಪ ಕಾರ...ಹಾಗಾಗಲಿಲ್ಲವೋ ಸ್ವಕಾರ್ಯ...
              
                  ವಿಷಯ ಇಷ್ಟೇ-ಒಟ್ಟು
ಎಷ್ಟು Eye drops ಗಳ boxಇವೆಯೋ ಅವುಗಳ prominent colour ಗಳ ಫೋಟೋ ತೆಗೆದು crop ಮಾಡಿಟ್ಬು
ಕೊಳ್ಳಬೇಕು.ಅವುಗಳಿಗೆ 1/2/3 ಅಂತ ನಂಬರ್ ಕೊಡಬೇಕು.ಅವೇ ಬಣ್ಣಗಳ ನ್ನು ಬಳಸಿ time table chart ಮಾಡಿ ಕೊಳ್ಳಬೇಕು.ಅದರ ಮೇಲ್ಭಾಗದಲ್ಲಿ ಅವುಗಳ box ನಂಬರ್ ಕಾಣಿಸಿ, ಕೆಳಗಿನ ಖಾನೆಗಳಿಗೆ ಬಣ್ಣ ತುಂಬಿದರೆ
ಮುಗಿಯಿತು.ಒಮ್ಮೆ ಮಾಡಿಟ್ಟರೆ ಗೊಂದಲಕ್ಕೆ ಅವಕಾಶವಿಲ್ಲದೇ ಕೆಲಸ ಸುಲಭವಾಗುತ್ತದೆ.ನಮಗಂತೂ ಆಗಿದೆ.
ಸ್ವಂತ ಮಾಡಿಕೊಳ್ಳುವಷ್ಟು ಸಶಕ್ತರಿದ್ದರೆ
ಸಮಸ್ಯೆಯೇಇರುವುದಿಲ್ಲ.ಅವಲಂಬಿತರು ಅಂತಾದಾಗ/ ಮೊಬೈಲ್ ಬಳಕೆ ಗೊತ್ತಿಲ್ಲದವರೂ ಸಹ ಇದೆಲ್ಲದರ print copy ಮಾಡಿಸಿ ಹಾಸಿಗೆಯ ಪಕ್ಕ ಇಟ್ಟುಕೊಂಡರೆ ಹೆಚ್ಚು ಆತ್ಮವಿಶ್ವಾಸ ದಿಂದ ಕೆಲಸ ಬಗೆಹರಿಸಬಹುದು.Box ಗಳ ಮೇಲೆ/ ಬರೆದುಕೊಟ್ಟ ಹಾಳೆಗಳ
ಮೇಲಿನ ಅಕ್ಷರಗಳು ಅತಿ ಚಿಕ್ಕವಿದ್ದಾಗ/
ನಾವೇ ಗಡಿಬಿಡಿಯಲ್ಲಿದ್ದಾಗ ಅಥವಾ ಸಮಯದ ಅಭಾವದ ಸಂದರ್ಭಗಳಲ್ಲಿ
proscribed medicine ಗಳ‌ ಎಲ್ಲ ಹೆಸರುಗಳನ್ನು ಓದುತ್ತ ಕೂಡುವ ತೊಂದರೆ ಸ್ವಲ್ಪಮಟ್ಟಿಗೆ ಪರಿಹಾರ ವಾಗುತ್ತದೆ ಎಂಬುದು ಸ್ವಂತಕ್ಕೆ ಕಂಡುಕೊಂಡ ಅನುಭವ.

                  ‌ಇದು ಎಲ್ಲರಿಗೂ ಅಲ್ಲದಿದ್ದರೂ ಯಾರು ನಮ್ಮಂಥವ ರಿದ್ದಾರೋ ಅವರಿಗೆ ಸಹಾಯವಾಗ ಬಹುದೆಂಬ ಸದಾಶಯದಿಂದ ಮಾತ್ರವೇ ಹಂಚಿಕೊಂಡದ್ದು...
 
ಅಷ್ಟೇ...ಮತ್ತೇನಿಲ್ಲ...



ಮನಸಿನ ಪುಟಗಳ ನಡುವೆ...
ನೆನಪಿನ ನವಿಲುಗರಿ...
          ಸುಮಾರು ಒಂದು ವಾರದ ಹಿಂದೆ ನನ್ನ Whats App ಗೆ 
ಒಂದೆರಡು ಮೆಸೇಜುಗಳು ಬಂದಿದ್ದವು. ತುಂಬ ಉತ್ತಮ ಗುಣಮಟ್ಟದ ಸಂದೇಶಗಳು...ನಂಬರ್ ನೋಡಿದರೆ ಗುರುತು ಹಿಡಿಯಲಾಗಲಿಲ್ಲ.ಫೋಟೋ ಇರಲಿಲ್ಲ,ಬದಲಿಗೆ ಬೇರೇನೋ ಇತ್ತು.
ಅವರ ನಂಬರ್ ಕೂಡ ನನ್ನ ಲಿಸ್ಟನಲ್ಲಿ
ಇರಲಿಲ್ಲ.
             " ದಯವಿಟ್ಟು ತಪ್ಪು ತಿಳಿಯಬೇಡಿ, ತಾವು ಯಾರು? ಪ್ರೊಫೈಲ್ ನಿಂದ ಗುರುತು ಸಿಗುತ್ತಿಲ್ಲ"-
ಎಂದು ಬರೆದೆ.
             " ನಾನು S.N ಗುಬ್ಬಿ ಅಂತ.
ರಟ್ಟೀಹಳ್ಳಿಯ ಶ್ರೀ ಕುಮಾರೇಶ್ವರ ಮಾಧ್ಯಮಿಕ ಶಾಲೆಯ ೧೯೬೦-೬೪ ನೇ ಸಾಲಿನಲ್ಲಿ  ನಿಮ್ಮ class mate. ನಿಮಗೆ ನೆನಪಾಗಲಿಕ್ಕಿಲ್ಲ ಏಕೆಂದರೆ ನಾನು ಸದಾ ' ಕೊನೆಯ ಬೆಂಚಿನ ವಿದ್ಯಾರ್ಥಿ' - ಎಂದು ಬರೆದು ಒಂದಿಬ್ಬರ
ಹೆಸರುಗಳನ್ನು ಉಲ್ಲೇಖಿಸಿದ್ದರು.
ತಕ್ಷಣ ನನ್ನ ಸಂಗ್ರಹದಲ್ಲಿದ್ದ ಫೋಟೋ
ಸಂಗ್ರಹಕ್ಕೆ ಹೋಗಿ ನಮ್ಮSSC  annual day ದ ಫೋಟೋ ತೆಗೆದು
ನೋಡಿದೆ.ಶಿಕ್ಷಕರನ್ನು ಹೊರತುಪಡಿಸಿ ದರೆ ಎಲ್ಲರೂ 'ಚಿವ್ ಚಿವ್' ಗುಬ್ಬಿಗಳೇ-
ಸಂಪರ್ಕದಲ್ಲಿದ್ದ ಒಬ್ಬಿಬ್ಬರನ್ನು ಬಿಟ್ಟರೆ
ಯಾರೂ ಗುರುತೇ ಸಿಗಲಿಲ್ಲ. ಯಾಕೆಂದರೆ ಆಗ ಯಾರ ಬಳಿಯೂ camera ಗಳು ಇರುತ್ತಿರಲಿಲ್ಲ. ವಿಶೇಷವೇನಾದರೂ ಇದ್ದರೆ ಅವತ್ತೊಂದು ದಿನ ಶಾಲಾ ಮಂಡಳಿ photographer ನನ್ನು ಕರೆಸುತ್ತಿದ್ದರು. ಮೇಲಾಗಿ ನಮ್ಮದೇ ಎರಡನೇ batch...ಮೂರು ಕಾಲಿನ stand ಒಂದರ ಮೇಲೆ ಹೊತ್ತು ತಂದ camera ಇಟ್ಟು cameraman ಮುಖಕ್ಕೆ ಕರಿಬಟ್ಟೆ ಹಾಕಿಕೊಂಡು ಹತ್ತಾರು ಭಂಗಿಗಳಿಗೆ instructions ಕೊಟ್ಟು ,ಹತ್ತಾರು ಸಲ ಮುಖ ಹೊರಗೆ ಒಳಗೆ ಹಾಕಿ/ ತೆಗೆದು, pls one more ಆಂದಾಗ ಎಲ್ಲರೂ ಕಪಿಚೇಷ್ಟೆ ಮಾಡಿ ಚೀರಾಡುವುದೂ ಇತ್ತು. ಅಂಥ ಫೋಟೋಗಳಲ್ಲಿ ಮನುಷ್ಯರೇ ಕಾಣದಿದ್ದಾಗ ಮುಖ ಕಾಣುವುದನ್ನು
ಬಯಸುವುದಾದರೂ ಹೇಗೆ?
           ' ಸರಿ 'ಎಂದು ಅವರನ್ನು ಗುರುತಿಸುವ ಪಣದಿಂದ  ಹಿಂದೆ ಬಂದು
ಅವರಿಗೊಂದು ಧನ್ಯವಾದ ಹೇಳಿ
ವಿರಮಿಸಿದೆ...
             ಆದರೆ ಮನಸಿನ ಪುಟಗಳ ನಡುವಿನ ನವಿಲುಗರಿಗಳು ಅಗಾಧ ವೆಂಬಂತೆ ಬಿಚ್ಚಿಕೊಂಡಿದ್ದವು.' ಮರೆವು ನೋವುಗಳನ್ನು ಮರೆಸಿದರೆ,ನೆನಪು ಗಳು ಬದುಕಿನ ಸಂಧ್ಯಾಕಾಲದಲ್ಲಿ
' ಕಾಮನ ಬಿಲ್ಲುಗಳ ಕಮಾನು-'ಗಳನ್ನೇ
ಕಟ್ಟುತ್ತವೆ ನೋಡಿ.ಅವು ಬದುಕಿನ‌
ಬಣ್ಣಗಳು...


Saturday 21 October 2023

ಬಹುದಿನಗಳಿಂದ ಕಾಡುತ್ತಿದ್ದ ' ದೃಷ್ಟಿಯ ತಕರಾರಿನಿಂದಾಗಿ ಕಣ್ಣಿನ Operation ಮಾಡಿಸಿಕೊಂಡು drop ಹಾಕಿಸಿಕೊಂಡು ಮಲಗಿಕೊಂಡೇ ನಿಮ್ಮ 'ಮುಷ್ಟಿಯ' ಬಗೆಗಿನ ಆಡಿಯೋ ಕೇಳಿದೆ. ತಕ್ಷಣ ನೆನಪಾದದ್ದು ನಮ್ಮ ಅಂತಃಪುರ ಗುಂಪಿನ ವಿಜಯಕ್ಕ  ಅಜ್ಜಿಮನೆಯವರು (ನಿರ್ದೇಶನ+ ನಿರ್ಮಾಣ)ಮಾಡಿದ ' ಒಂದು ಮುಷ್ಟಿ ಆಕಾಶ'ನಾಟಕ ನೆನಪಾಯ್ತು.(ಮೂಲ
ಥೋಡೀಸಿ ಆಸಮಾನ್ - ಆಧಾರಿತ). ಬಾಕಿಯಂತೆ 'ಮುಷ್ಟಿ'ಯ ಬಗ್ಗೆ 'ದೃಷ್ಟಿ' ಯಾಗುವಷ್ಟು 'ಶಬ್ದ ವೃಷ್ಟಿ'ಯೇ 
'ಸೃಷ್ಟಿ:ಯಾಗಿ ಬಿಟ್ಟಿದೆ.ಇನ್ನು ರಾಜ ಶೆಟ್ಟಿಯವರಿಂದ' ಒಂದು 'ಮುಷ್ಟಿಯ ಕಥೆ' ಬರುವುದೊಂದೇ ಬಾಕಿ...

Tuesday 17 October 2023

Blood Sugar Reading

Blood sugar reading...                                     Fasting.    P. P.
Tuesday           131.       238
Wednesday.      91.   . ..211.
Thursday.        .112.      ‌‌‌ 209.
Fridy Operation Day
Saturday.           66.     146 
Sunday.              96.     157
Monday.             93.    144
Tuesday.           101.    135

Monday 9 October 2023

October- 9-2023

 " ನಾ 'ನಿನ'-ಗೆಂದೇ ಬರೆದಾ ಪ್ರೇಮದ ಓಲೆ..."  ‌‌‌
 
    ಅದು ೧೯೬೮-೬೯ ರ ಸಮಯ. ನನ್ನ B.A ಪದವಿಯ ಫಲಿತಾಂಶ ಅದೇ ತಾನೇ ಬಂದಿತ್ತು. ಪಾಸಾಗಿದ್ದೆ. ಮುಂದೇನು ಎಂಬ ಸಮಸ್ಯೆಯೇನೂ ಇರಲಿಲ್ಲ.ನೌಕರಿಯ ಸಂಭಾವ್ಯತೆ ಇಲ್ಲವೇ ಇಲ್ಲ ಎಂಬಷ್ಟು ದೂರದ ಮಾತು.ಆರು ತಿಂಗಳ ಹಿಂದೆ ಅಕ್ಕನ ಮದುವೆಯಾಗಿ ಮನೆ ನೋಡಿಕೊಳ್ಳುವ ಹೊರೆ ನನ್ನದಾಗಿತ್ತು. ಮನೆಯಲ್ಲಿ ಎಲ್ಲರೂ ದೊಡ್ಡವರೇ ಇದ್ದುದರಿಂದ ಹೆಚ್ಚಿನ ಹೊಣೆ ಏನೂ ಇರಲಿಲ್ಲ.ಆ ವೇಳೆಯನ್ನು ಬಳಸಿಕೊಳ್ಳಲು ಹಾಲಭಾವಿಯವರ school of arts ದಲ್ಲಿ painting class, ಗಾಂಧಿಚೌಕಿನ ಲ್ಲಿಯ ಹಳಪೇಟಿಯವರಲ್ಲಿ ಹೊಲಿಗೆಯ class ಗಳಿಗೆ ದಿನಾಲೂ ಹೋಗತೊಡಗಿದೆ.ನನ್ನದೇ ಒಂದು ಗೆಳತಿಯರ ಗುಂಪು  form ಆಯಿತು.  ಹೆಚ್ಚು ನಿರೀಕ್ಷೆಗಳಿಲ್ಲದೆ ದಿನಗಳು ಸದ್ದಿಲ್ಲದೇ ಸರಿದು ಹೋಗುತ್ತಿದ್ದವು.
             ‌‌‌‌     ಹೀಗಿರುವಾಗ ಒಬ್ಬ ಗೆಳತಿಯ ಮದುವೆ ಗೊತ್ತಾಯಿತು. ಆಗೆಲ್ಲ ವಧು ಪರೀಕ್ಷೆಗಳು ಯಾವುದೇ Board Examination, NEET, CET,IIT Mains ಗಳಿಗಿಂತ ಕಡಿಮೆ ಇರಲಿಲ್ಲ. ಕೂಡಿಸಿ, ನಡೆಸಿ, ಹಾಡಿಸಿ, ಓದಿಸಿ ಹಲವಾರು ಪ್ರಶ್ನೆಗಳ VIVA ಆದಮೇಲೆಯೇ ಪಾಸಾಗಬೇಕು.ಅದೂ ಹುಡುಗನ ಅಭಿಪ್ರಾಯಕ್ಕಿಂತ ಮನೆಯ ಇತರರ ಅಭಿಪ್ರಾಯಕ್ಕೇನೇ ತೂಕ.ಸರಿ ಆ ಎಲ್ಲ ಹಂತಗಳು ಮುಗಿದು ಅವಳ ಮದುವೆ ನಿಶ್ಚಿತವಾಯಿತು.ನಮಗೆಲ್ಲ ಖುಶಿಯೋ ಖುಶಿ.
                  ಇದಾಗಿ ಒಂದು ವಾರವಾಗಿರಬಹುದು.ನಮ್ಮ ಗೆಳತಿಯ  ಕಿಲಕಿಲ ಮುಖವನ್ನೇ ನೋಡುತ್ತ
ಮದುವೆಯ ದಿನಗಳ ಎಣಿಕೆ ನಡೆಸಿದ್ದೆವು. ಏಕಾಏಕಿ ಒಂದುದಿನ ಕೈಯಲ್ಲಿ ಅಂತರ್ದೇಶೀಯ ಪತ್ರ ಹಿಡಿದು ನಮ್ಮ ಮನೆಗೆ ಬಂದ ಅವಳ ಮುಖದಲ್ಲೇನೋಗಾಬರಿ.ಏನಾಯಿತಪ್ಪಾ ಎಂದು ನನಗೆ ದಿಗಿಲು.ಅವಳ ಮಾತು ಕಾಯುತ್ತ ಕುಳಿತೆ."-
-" ನಿನ್ನಿಂದ ಒಂದು ಸಹಾಯ ವಾಗಬೇಕು.ಇಲ್ಲ ಎನ್ನುವ ಹಾಗಿಲ್ಲ"
-" ಏನದು?"
- "ಅವರಿಂದ' ನನಗೆ ಪತ್ರ ಬಂದಿದೆ ಕಣೆ"
- "ಬಂದ್ರೆ? ಅದರಲ್ಲೇನೇ ವಿಶೇಷ?"
- "ವಿಶೇಷವೆಂದೇ ನಿನ್ನ ಕಡೆ ಬಂದಿದ್ದು".
-" ಏನು ಹಾಗಂದ್ರೆ?"
- "ಅವರು ಇಂಗ್ಲಿಷನಲ್ಲಿ ಬರೆದಿದ್ದಾರೆ, ನಾನೂ ಇಂಗ್ಲಿಷನಲ್ಲೇ ಉತ್ತರ ಬರೀಬೇಕಂತೆ".
-" ಬರಿ."
- "ನಿನಗೆ ಚಲ್ಲಾಟ, ನನಗೆ           ಪ್ರಾಣಸಂಕಟ".
- "ಹಾಗೆಂದು ನನಗೇಕೆ ಹೇಳ್ತೀಯಾ? ಆ ನಿನ್ನ ಪ್ರಾಣಕಾಂತನಿಗೆ ಹೇಳು".
-" ಹೇಳಿ ಆಯ್ತು, ಬಂದ ಹಾಗೆ ಬರಿ ಎಂದು ಒತ್ತಾಯಿಸುತ್ತಿದ್ದಾರೆ.ಮಾತು ಮೀರಿದರೆ ಸಿಟ್ಟು ಮಾಡಿಕೊಂಡರೆ..."
- " ಹಾಗಂದ್ರೆ ನಾನೇನೇ ಹೇಳಲಿ.?"
-" ನೀನು ಬರೆದು ಕೊಡು".
-" ತಲೆ ಸರಿಯಿಲ್ಲೆನು ನಿಂಗ?"
-" ಬೇರೆ ದಾರಿಯಿಲ್ಲ ಶ್ರೀಮತಿ, please."
  ‌        ಅವಳು ಕಲಿತದ್ದು ಬರಿ ಪಿ.ಯು.ಸಿ. ಅವರು degree ಆದವರು. ಬರೆದದ್ದು ತಪ್ಪಾದರೆ?ಹೆಚ್ಚು ಕಡಿಮೆಯಾದರೆ? ತನಗೇನಾದರೂ ಅಪಮಾನವಾದರೆ? ಏನೇನೋ ಹಳವಂಡಗಳು.ಕೆಲ ದಿನಗಳಿಂದ ಇದ್ದ ಅವಳ ಮುಖದ ಲವಲವಿಕೆ ಕಾಣೆಯಾಗಿತ್ತು.ಪತ್ರ ತಪ್ಪಾಗಿ ಮೊದಲ ತುತ್ತಿನಲ್ಲೇ ಕಲ್ಲು ಬಂದರೆ ಎಂಬ ಗಾಬರಿ. ಆಗೆಲ್ಲಾ mobile ಇರಲಿಲ್ಲ. ಟೆಲಿಫೋನ್ ಬೂತ್ ಗೆ ಹೋಗಿ ಪಾಳಿ ಹಚ್ಚಿ ಗಂಟೆಗಟ್ಟಲೇ ಕಾದು ಮಾತನಾಡ ಬೇಕಿತ್ತು.ಅದಂತೂ ಸರಳಆಯ್ಕೆ
ಯಾಗಿರಲಿಲ್ಲ,ಇನ್ನೂ ಮದುವೆಯಾಗದ ಕಾರಣಕ್ಕೆ.ಇಲ್ಲವೆನ್ನಲಾಗದ ಅಸಹಾಯ ಕತೆ.ಗಂಡನಾಗುವವನ 'ಮೊದಲ ಕೋರಿಕೆ ಬೇರೆ. ಅವಳು ಹೇಳಿದ ಹಾಗೆ ಮಾಡಿದರೆ ಸರೀನಾ, ತಪ್ಪಾ- ಅದೂ ಗೊತ್ತಿಲ್ಲದ ಮುಗ್ಧತೆ ನಮ್ಮೆಲ್ಲರದೂ. ನನಗವಳು ತೊಡಕಿನಲ್ಲಿ ಸಿಕ್ಕಿಹಾಕಿ ಕೊಂಡ ಒಬ್ಬ ಅಸಹಾಯಕ ಯುವತಿ, ಸಹಾಯ ಬೇಕಾಗಿದೆ ಎಂದಷ್ಟೇ ಯೋಚಿಸಿ ಅವಳಿಗೆ ಬಂದ ಪತ್ರ ತೆಗೆದುಕೊಂಡು ಅವರೆಷ್ಟು ಬರೆದಿದ್ದರೋ ಅಷ್ಟಕ್ಕೇ ನೀಟಾಗಿ ಸಂಕ್ಷಿಪ್ತವಾಗಿ ಉತ್ತರ ಬರೆದೆ, ಸಾಧಾರಣ ಶೈಲಿಯಲ್ಲಿ, ಅತ್ಯಂತ ಸರಳಭಾಷೆಯಲ್ಲಿ. ಹಾಗೆ ನೋಡಿದರೆ ಅವರೂ ಒಂದು ರೀತಿ ಅನುಮಾನಿಸು ತ್ತಲೇ ಅದನ್ನು ಬರೆದ ಹಾಗಿತ್ತು." ಒಂದೇ ವಾಕ್ಯದಲ್ಲಿ ಉತ್ತರಿಸಿರಿ"- ರೀತಿಯ ಪ್ರಶ್ನೆಗಳೇ ಇದ್ದವು.
-I am fine, How are you?
-How do you spend your time?
- What do you like most? 
-I want to send you a gift.- 

ಈ ತರಹದ ಪ್ರಶ್ನೆಗಳು.ನಾನು ಬರೆದದ್ದನ್ನು ತನ್ನದೇ ಕೈಬರಹದಲ್ಲಿ copy ಮಾಡಿ post ಮಾಡಿದಳು.
           ‌ಮತ್ತೊಂದು ವಾರ ಕಳೆಯಿತು. ಕೈಯಲ್ಲಿ ಮತ್ತೊಂದು ಪತ್ರ ಹಿಡಿದು ಅವಳು ನಮ್ಮನೆಗೆ ಬಂದಾಗ ಮುಖದಲ್ಲಿ ನಗುವಿತ್ತು." ಇದು ನನ್ನ ( ನಿನ್ನ) ಪತ್ರಕ್ಕೆ ಅವರ ಉತ್ತರ.ತುಂಬಾ ಚನ್ನಾಗಿ ಬರೆದಿದ್ದೀಯಾ.ಸುಮ್ಮನೇ ಹೆದರಿದೆ.ನನಗೆ ತುಂಬಾ ಖುಶಿಯಾಯ್ತು" ಎಂದು ಬರೆದಿದ್ದಾರೆ.ನೀನು ನನ್ನನ್ನು ಸಂಕಷ್ಟದಿಂದ ಬಚಾವ್ ಮಾಡಿದ್ದಕ್ಕೆ thanks ಎಂದಳು." Good,ಆದರೆ ಇನ್ನೊಮ್ಮೆ ಇಂಥ ಪೇಚಿಗೆ ನನ್ನ ಸಿಲುಕಿಸಬೇಡ ಎಂದು ನಕ್ಕು ಹೇಳಿ ಬೀಳ್ಕೊಟ್ಟೆ.
            ಪುಣ್ಯಕ್ಕೆ ಆ ಪ್ರಸಂಗ ಮತ್ತೆ ಬರಲಿಲ್ಲ.ಅವಳ ಗಂಡನಾಗುವವರಿಗೆ
Transfer ಆದ್ದರಿಂದ ಅವರು ಅಲ್ಲಿ ಹಾಜರಾಗುವದಕ್ಕೂ ಮೊದಲೇ ಮದುವೆ ಮುಗಿಸಬೇಕು, joining time ನ ರಜೆಯನ್ನು ಬಳಸಿಕೊಂಡು ಎಂದುಕೊಂಡು ಬೇಗನೇ ಮುಹೂರ್ತ ಗೊತ್ತು ಮಾಡಿದ್ದರಿಂದ...ಅವಳೇ ಮದುವೆಯಾಗಿ ಗಂಡನ ಮನೆಗೆ ಹೋದ ಕಾರಣದಿಂದಾಗಿ...

Monday 2 October 2023

ನಮಗೆ ಗಾಂಧೀಜಿ ಬೇಕು...

ನೂರು-ಸಾವಿರದ-
 ನೋಟುಗಳಲ್ಲಿ
ವೇದಿಕೆಯ 
ಮಾತುಗಳಲ್ಲಿ...

ಅವರ ಹೆಸರಿನ 
ಟೊಪ್ಪಿಗೆಯಲ್ಲಿ...
ಮುಚ್ಚಿ ಬಚ್ಟಿಟ್ಟ 
ಒಳಪೆಟ್ಟಿಗೆಯಲ್ಲಿ...

ಶಾಲೆಯ ಮಕ್ಕಳ 
ಪುಸ್ತಕಗಳಲ್ಲಿ...
ಆಷಾಢ ಭೂತಿಗಳ 
ಮಸ್ತಕಗಳಲ್ಲಿ...

ರಾಜಕೀಯದ 
ಮೇಲಾಟಗಳಲ್ಲಿ...
ಪಕ್ಷಾಂತರಿಗಳ 
ಹಾರಾಟಗಳಲ್ಲಿ...

ವೇದಿಕೆಗಳನ್ನು
ಅಲಂಕರಿಸಲು...
ಭಾಷಣಗಳಲ್ಲಿ
ಫೂಂಕರಿಸಲು...

ಸತ್ಯದ ಹೆಸರಿನಲ್ಲಿ
ಸುಳ್ಳು ಹೇಳಲು...
ಮುಖವಾಡಗಳಲ್ಲಿ 
ಜನರ ಮಳ್ಳು ಮಾಡಲು.

ಚುನಾವಣೆಗಳಲ್ಲಿ 
ಮತ ಬಿಕ್ಷೆಗೆಂದು...
ಅಧಿಕಾರ ಕಾಯಂ
ತಮ್ಮದೇ ಕಕ್ಷೆಗೆಂದು...

ನಮಗೆ ಗಾಂಧೀಜಿ ಬೇಕೇ ಬೇಕು...


















.
           ನಾನು ಹುಟ್ಟಿದ್ದು ಸ್ವಾತಂತ್ರ್ಯ ಸಿಗುವುದಕ್ಕೂ ಒಂದೂವರೆ ವರ್ಷ ಮೊದಲು...ಬಹುಶಃ ಆಗ ಸ್ವಾತಂತ್ರ್ಯ ಹೋರಾಟ ತುಂಬಾನೇ ಕಾವೇರಿತ್ತು.
ಎಲ್ಲರ ಮನೆ- ಮನಗಳಲ್ಲಿ ದೇಶಭಕ್ತಿಯ
ಜೋರಿತ್ತು ಅನಿಸುತ್ತದೆ. ನಮ್ಮಪ್ಪನನ್ನು
ನಾವು ನೋಡಿದ್ದು ಅಪ್ಪಟ ಖಾದಿಧಾರಿ ಯಾಗಿಯೇ,ಬಳಸುವ ಕರ್ಚೀಫಿನಿಂದ 
ಹಿಡಿದು...ಮನೆಯ ಗೋಡೆಗಳ ಮೇಲೆ
ನೆಹರು/ಗಾಂಧಿ/ ಚಿತ್ತರಂಜದಾಸ್/ 
ರವೀಂದ್ರರ ದೊಡ್ಡ ದೊಡ್ಡ ಫೋಟೋಗಳು.ನಾನು ಆರುವರ್ಷದವ ಳಾಗಿ ಶಾಲೆಗೆ ಹೋಗತೊಡಗಿದಾಗಲೂ
ಎಲ್ಲೆಡೆ ಸ್ವಾತಂತ್ರ್ಯದ ಸವಿ/ಸಂಭ್ರಮದ
ಕಾವು ಹಾಗೇ ಇತ್ತು.
    ‌‌        ದೇಶಭಕ್ತಿಯ ಯಾವುದೇ 
ಸಂದರ್ಭ ಬರಲಿ, ಎಲ್ಲರಲ್ಲೂ ಭರಪೂರ್ ಜೋಶ್ ಎದ್ದು ಕಾಣುತ್ತಿತ್ತು.
ಬೆಳಗಿನಲ್ಲೇ ಎದ್ದು,ಶಾಲೆಗೆ ಹೋಗುವುದು,ಸಾಲು ಸಾಲಾಗಿ, ಜೈಕಾರಗಳನ್ನು ಕೂಗುತ್ತ 'ಊರಿನ ಪ್ರಮುಖ ಬೀದಿಗಳಲ್ಲಿ ಸುತ್ತುವುದು
ನಮಗೆಲ್ಲ ಖುಶಿಯ ಸಂಗತಿ.ಅದಕ್ಕೆ  'ಪ್ರಭಾತ ಫೇರಿ'- ಎಂದೇ ಹೆಸರು.


Wednesday 20 September 2023

    ‌‌     ಅದು ಬಹುಶಃ ಎಂಬತ್ತನೇ
ದಶಕದ ಕೊನೆಯ ಭಾಗ.ಮಣ್ಣಿನ ಒಲೆ
ಸ್ಟೋ-ಗಳಿಗೆ Expiry date ಹತ್ತಿರವಾಗಿ
ಗ್ಯಾಸ್/ ಒಲೆಗಳ ಪ್ರವೇಶವಾಗಿತ್ತು. ಆದರೂ ಜನರಿಗೆ ಏನೋ ಅಗೋಚರ ಭಯ. ಹೀಗಾಗಿ ಭಾರತ/ಹಿಂದುಸ್ತಾನ್
(HP)/ Indane ಮುಂತಾದ ಕಂಪನಿಗಳ ಒಡೆಯರು ಎಲ್ಲೆಡೆಗೆ ಹೋಗಿ ಅವುಗಳ ಬಳಕೆ/ ಸುರಕ್ಷಿತತೆ/
ಮಿತವ್ಯಯ ಕುರಿತು ಕಾರ್ಯಕ್ರಮ ಮಾಡುತ್ತಿದ್ದರು...ಹಾಗೇ ಒಂದು ಸಲ ನಮ್ಮ ಶಾಲೆಯಲ್ಲೂ ಅದು ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ quiz
ಕಾರ್ಯಕ್ರಮವಿರುತ್ತಿತ್ತು.ಗೆದ್ದವರಿಗೆ
ಸೂಕ್ತ ಬಹುಮಾನ ಘೋಷಣೆಯ ಪ್ರೋತ್ಸಾಹ ಬೇರೆ...ಗ್ಯಾಸನ್ನು ಉಳಿತಾಯ ಮಾಡುವ ಐದು ವಿಶೇಷ 
ಸೂಚನೆಗಳ ಮಾರ್ಗ ಸೂಚಿಗಳನ್ನು
ತಿಳಿಸುವ ಕಾರ್ಯಕ್ರಮವದು.
 * ಆದಷ್ಟೂ ದೊಡ್ಡ burner ಗಳನ್ನು
ಅನವಶ್ಯಕವಾಗಿ ಬಳಸಬೇಡಿ...
* ಒಮ್ಮೆ ಪದಾರ್ಥಗಳು ಕುದಿಯುವ point ತಲುಪಿದ ಮೇಲೆ ಬರ್ನರ್ ಸಂಪೂರ್ಣ sim ಗೆ ಹಾಕಿ... ಏನೂ ವ್ಯತ್ಯಾಸವಾಗುವುದಿಲ್ಲ.
* ಎತ್ತರದ ಪಾತ್ರೆಗಳಿಗಿಂತ ಅಗಲವಾದ ಪಾತ್ರೆಗಳನ್ನು ಬಳಸುವದರಿಂದ gas ಉಳಿಸಬಹುದು.ಹಾಗೆ ಮಾಡುವದ
ರಿಂದ  ಸಮಯ ಕೂಡ ಉಳಿಸಬಹು 
ದು. 
*Direct cooking ಗಿಂತ cooker ನ
ಬಳಕೆಯಲ್ಲಿ ಹೆಚ್ಚು ಅಡಿಗೆಗಳನ್ನು ಕಡಿಮೆ ಸಮಯದಲ್ಲಿ ಮಾಡಬಹುದು.
* ಅಡಿಗೆಗೆ ಮೊದಲೇ ಎಲ್ಲ ಅವಶ್ಯಕ
ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ, ಅಕ್ಕಿ/ ಬೇಳೆಗಳನ್ನು ಮೊದಲೇ ನೆನೆಸಿಡಿ
ಒಲೆ ಹೊತ್ತಿಸಿಟ್ಟು ಅತ್ತಿತ್ತ ತಡಕಾಡುವು ದರಿಂದ gas ಹೆಚ್ಚು ಪೋಲಾಗುತ್ತದೆ-
       ‌‌     ‌ಇಂಥವೇ ಐದು ಮುಖ್ಯ ಸಲಹೆಗಳೊಂದಿಗೆ ಚಿಕ್ಕ ಪುಟ್ಟವನ್ನೂ ಸೇರಿಸಿ ಒಂದು Session ಆಯ್ತು. ಮುಖ್ಯ ಹೇಳಬೇಕಾದ ವಿಷಯವೆಂದರೆ
ಅಂದು ಕೊನೆಯಲ್ಲಿ ಎಲ್ಲವನ್ನೂ  ಚಾಚೂ ತಪ್ಪದೇ ಪುನರುಚ್ಚರಿಸಿ ಗೆದ್ದು, parker pen/ Letter pad ವೊಂದ
ನ್ನು  ಬಹುಮಾನವಾಗಿ ಪಡೆದು
ಬೀಗಿದ್ದು ನಾನು...
                 ಇದ್ದ ಮೂರು ಮಕ್ಕಳ ಹೆಸರುಗಳನ್ನು ಆರು ನಮೂನೆಯಲ್ಲಿ ಕರೆದು ನಗೆಪಾಟಲಾಗುವ ನನಗೂ ಒಂದು ಕಾಲವಿತ್ತು...ಒಂದಿಷ್ಟು ನೆನಪಿನ ಶಕ್ತಿಯಿತ್ತು...ಒಮ್ಮೆ ಬಹುಮಾನವೂ
ಬಂದಿತ್ತು...
       Please , ನನ್ನನ್ನು ನಂಬಿ...

Monday 18 September 2023

 Nipha Virus: A bless in disguise...
      " ನಾನು ಈ ಸಲ ಗಣೇಶನ ಹಬ್ಬಕ್ಕೆ
ಇರುವುದಿಲ್ಲ, ನನ್ನ ಈ ವರ್ಷದ PhD class ನ last session, Sept 16 ರಿಂದ  26 ವರೆಗೆ ಇದೆ.ನಾನು ಕೇರಳದಲ್ಲಿ ಇರುತ್ತೇನೆ,"- ಮಗಳೆಂದಾಗ
ಏನು ಹೇಳಬೇಕೋ ತಿಳಿಯಲಿಲ್ಲ. "ನೀನು ಇರುವುದಿಲ್ಲ ಎಂದರೆ ನಾನೂ ಅಲ್ಲೇ ಇದ್ದು ಏನಾದರೂ ಮಾಡಿಕೊಳ್ಳು ತ್ತೇನೆ ಅಮ್ಮ.ನಾನೂ ಮುಂದಿನ ತಿಂಗಳು ಬರುತ್ತೇನೆ"- ಇದು Madras IIT ಯಲ್ಲಿ ಓದುತ್ತಿರುವ ಅವಳ ಮಗನ / ನನ್ನ ಮೊಮ್ಮಗನ ಶರಾ... ಅಯ್ಯೋ ದೇವರೇ, ಇದ್ದ ನಾಲ್ವರಲ್ಲಿ ಇಬ್ಬರು ಎದ್ದು ಹೋದರೆ ಎಂಬ ಹಳಹಳಿಕೆ ಸುರುವಾಯಿತು. ಅಭ್ಯಾಸದಂಥ ಮುಖ್ಯ ವಿಷಯದಲ್ಲಿ ಯಾವ ರೀತಿಯ
ರಾಜಿಯೂ ಆಗುವ ಸಾಧ್ಯತೆಯಿಲ್ಲದೇ
ಎಲ್ಲರೂ ಅಸಹಾಯಕರಾಗಬೇಕಾಯಿ ತು. 
             ಗಣೇಶನಿಗೆ ವಿಘ್ನ ವಿನಾಶಕ
ಎಂಬ ಹೆಸರು ಸುಮ್ಮನೇ ಬಂದಿದೆಯೇ ?ಹಬ್ಬ ಕೇವಲ‌ ಎರಡು ದಿನಗಳು ಬಾಕಿ ಇರುವಾಗ ಕೇರಳದಲ್ಲಿ ನಿಫಾ ವೈರಸ್ ಹಾವಳಿ ತೀರ ಹೆಚ್ಚಾಗಿ ಎಲ್ಲ ಶಾಲೆ
ಕಾಲೇಜುಗಳು ಬಂದಾಗಿ, ಕ್ಲಾಸುಗಳೆಲ್ಲ
Online ಆಗಬೇಕೆಂಬ ಕೋವಿಡ್ ಕಾಲದ ಪರಿಹಾರ ಘೋಷಿತವಾಯ್ತು. ಮಗಳು ಊರಿಗೆ ಹೋಗುವುದು cancel ಆಯ್ತು...ನೀನಿದ್ದರೆ ನಾನೂ
ಇವತ್ತೇ ಬರುತ್ತೇನೆ ಅಂದ ಮೊಮ್ಮಗ...
ಕೊನೆಯ ಕ್ಷಣದ climax ಧಿಡೀರನೇ 
ಬದಲಾದದ್ದೇ ಮನೆಯ ವಾತಾವರಣ ದಲ್ಲಿ ವಿದ್ಯುತ್ ಸಂಚಾರವಾಗಿ ಇಂದಿನ 
ಗಣೇಶನ ಹಬ್ಬ 'ದ್ವಿಗುಣ ಸಂತಸ'ದಲ್ಲಿ
ಸಂಪನ್ನವಾಯಿತು.ಯಥಾಪ್ರಕಾರ ಪಂಚ ಪಕ್ವಾನ್ನ( ಹೋಳಿಗೆ/ ಕಡುಬು/ ಮೋದಕ/ ಖೀರು/ ಪುರಿ) ಎಲ್ಲವೂ
ತಯಾರಾಗಿ ಗಣೇಶನೊಂದಿಗೆ ಭಕ್ಷಿಸಿ ನಾವೂ ಸಂಪ್ರೀತವಾದೆವು ಎನ್ನುವಲ್ಲಿಗೆ
ಈ ಕತೆ ಮುಗಿಯಿತು...

              

Wednesday 9 August 2023

ಜೀವನ 'ಸಂಧ್ಯಾರಾಗ'...

ಯೌವನದ ಗುರುತುಗಳನ್ನು ಕಳೆದು
ಕೊಂಡು ಬದುಕುವದು 
ಯಾರಿಗೂ ಸುಲಭ ಸಾಧ್ಯವಲ್ಲ...
ನಸುಕಿನಲ್ಲೆದ್ದು ಮಗ್ಗಲು ಬದಲಿಸುವಾಗ ನಡುವಿನಲ್ಲಿ ಮೊದಲಿನ ಕಸುವಿಲ್ಲ...
ಆದರೂ ಪರವಾಯಿಲ್ಲ...
ಬದುಕು ಹೆಚ್ಚು ಕಡಿಮೆ ಹಾಗೇ ಇದೆ...

ಬೆಳಿಗ್ಗೆ ಎದ್ದು ಚಹ ಮಾಡುತ್ತೇನೆ...
ಪೇಪರ್ ಓದುತ್ತೇನೆ...
ಮೊದಲಿನಂತೆ ಜೊತೆಗಾರರಾರಿಲ್ಲ,
ಮೊದ ಮೊದಲು 
ದೊಡ್ಡಮನೆಯ ಬಾಲ್ಕನಿಗಳಿಂದ 
ಮನೆ ತುಂಬ ಸೂರ್ಯಕಿರಣಗಳ ಸಂತಸವಿತ್ತು,
ಈಗ ಪುಟ್ಟ ಫ್ಲ್ಯಾಟ್ ನ ಸೂರ್ಯ,
ಕಿಟಕಿಗಳಿಂದಲೇ ಒಂದು ಗಂಟೆ ಕಾಲ
ಒಳಗಿಣುಕುತ್ತಾನೆ,

ಮಳೆ ಬಂದರೆ ಛತ್ತು ಇದೆ, 
ಛತ್ರಿಯೂ ಇದೆ...
ಉಪದೇಶ ಕೊಡಲು ಜನರಿದ್ದಾರೆ...
ಮುದ್ದಿಸಲು, ಆಲಂಗಿಸಲು ಮೊಮ್ಮಕ್ಕಳು ಇವೆ.‌
ನನ್ನದೇ ಒಂದು ಪುಟ್ಟ 
ಕೋಣೆಯೂ ಇದೆ,
ಆದರೆ ವಾಕಿಂಗ್ ನಂತರ 
ಬೆವರು ಸುಲಭದಲ್ಲಿ ಆರುವುದೇ ಇಲ್ಲ-
ಪರವಾಯಿಲ್ಲ, ಸಾಗುತಿದೆ ಬದುಕು...

ಹಾಗೆಂದು ಖುಶಿ ಖುಶಿ
ಇರುವವರನ್ನು ಕಂಡರೆ ನನಗೆ
ಅಸೂಯೆಯೇನೂ ಇಲ್ಲ...
ಕಾರಿನ ಕಿಟಕಿ ಕೆಳಗಿಳಿಸಿ
ಗಾಳಿ ಕುಡಿಯುತ್ತೇನೆ...
ಹಾಕಿದ ಹಾಡನ್ನೇ ಮತ್ತೆ 
ಮತ್ತೆ ಹಾಕಿಕೊಂಡು ಕೇಳುತ್ತೇನೆ...
ಸಾಕಿನ್ನು, ಗೆಳತಿಯರು ಅನ್ನುತ್ತೇನೆ,
ಮರುಕ್ಷಣವೇ -
ಅವರನ್ನು ಮನೆಗೆ ಕರೆಯುತ್ತೇನೆ...

ಒಮ್ಮೊಮ್ಮೆ,
ಮಾಡಿದ ಅಡುಗೆ ಸೀದು ಹೋಗುತ್ತದೆ-
ಆದರೂ ಅದೇ ಜಗತ್ತಿನ best food
ಅನಿಸುತ್ತದೆ...
ಯೋಗ ಅಂದರೆ ಆಸಕ್ತಿ ಇರಲಿಲ್ಲ,
ಈಗ ನನಗಿಂತ ಅರ್ಧವಯಸ್ಸಿನ  ' 'ಗುರು' ವಿನಿಂದ ಕಲಿಯುತ್ತಿದ್ದೇನೆ...
ಪರವಾಯಿಲ್ಲ , 
ಹೆಚ್ಚುಕಡಿಮೆ ಬದುಕು ಸಾಗಿದೆ...

ಇಂದಿಗೂ ಕನ್ನಡಿಯೆದುರು ನಿಂತು
ಮತ್ತೆ ಮತ್ತೆ ನೋಡಿಕೊಳ್ಳುತ್ತೇನೆ.
ಬಾಲ್ಯ ಯೌವನವಾಗಿ,
ಯೌವನ ಪ್ರೌಢಾವಸ್ಥೆಗೆ ತಿರುಗಿ
ನಂತರ ಇಂದಿಗೆ ಹೇಗೆ,ಯಾವಾಗ ಬದಲಾಯಿತೋ ಗೊತ್ತಾಗಲೇಯಿಲ್ಲ...
ಬದುಕು ನನ್ನನ್ನು ಪರೀಕ್ಷಿಸಿದಷ್ಟೇ ನಾನೂ ಅದನ್ನು ಪರೀಕ್ಷಿಸಿದ್ದೇನೆ...

ಕೆಲಸಗಳು ಕಡಿಮೆಯಾಗಿವೆ,
ಆದರೆ ಕೆಲ ಆಸೆಗಳು ಕಡಿಮೆಯಾಗಿಲ್ಲ...
ಹಲವರು ಹೇಳಿದ್ದನ್ನೇ ಹೇಳುತ್ತಾರೆ, ಏನೂ ಅನಿಸುವದಿಲ್ಲ...
ಬಾಲ್ಯದ ಹಲವಾರು ಗಲ್ಲಿ/ ಓಣಿ/ ಚಾಳು/ಅಂಗಡಿ/ಪೇಟೆ 
ಎಲ್ಲವೂ ನೆನಪಿನಲ್ಲಿವೆ...
ಆದರೆ ಈಗೀಗ ಏನನ್ನೂ
ಕೊಳ್ಳುವ ಮನಸ್ಸಾಗುವುದಿಲ್ಲ...
ಯಾರೇ ದಾರಿಯಲ್ಲಿ ಸಿಗಲಿ,
ಎಲ್ಲೋ ನೋಡಿದ್ದೇನೆ ಅನಿಸುತ್ತದೆ...
ಪರವಾಗಿಲ್ಲ, ಬದುಕು ಸಾಗಿದೆ...

ಮನೆಯೀಗ ಸ್ವಲ್ಪ ನೀಟಾಗಿದೆ, 
ಅಲ್ಲಲ್ಲಿ ಬಿದ್ದ ಪುಸ್ತಕಗಳು 
ಗಾಜಿನ ಕಪಾಟು ಸೇರಿವೆ...
ಸ್ನಾನದ ನೀರಿಗೆ ತಣ್ಣೀರು
ಬೆರೆಸಿಕೊಳ್ಳಬೇಕಾಗುತ್ತದೆ... 
'ರೀಲು'ಗಳನ್ನು ನೋಡುತ್ತಲೇ ಗಂಟೆಗಳನ್ನು ಕಳೆಯುತ್ತೇನೆ...
ಆದರೆ ಪಾಪ್ಕಾರ್ನ ಇಲ್ಲದೇ ಸಿನೆಮಾ
ನೋಡಲಾಗುವುದಿಲ್ಲ...
ಬದುಕು ಹೆಚ್ಚುಕಡಿಮೆ ಹಾಗೇ ಸಾಗಿದೆ..

ಆಸು ಪಾಸಿನ ಮಕ್ಕಳು
ಆಂಟಿ ಅನ್ನುವದನ್ನು ಬಿಟ್ಟು ಯಾವಾಗ ' ಅಜ್ಜಿ' ಸುರುಮಾಡಿದರೋ ಗೊತ್ತಾಗಲೇಯಿಲ್ಲ... 
ಮನಸ್ಸಿಗೆ ನೋವಾದರೆ
ಕಣ್ಣುಗಳು ಹನಿಗೂಡುತ್ತವೆ-
ಎಂಬುದು ಯಾವಾಗ ತಿಳಿಯಿತೋ, ನನಗೆ ಅರಿವಾಗಲೇಯಿಲ್ಲ...

ಪರವಾಯಿಲ್ಲ, 
ಬದುಕು ಬದಲಾದರೂ 
ಹೆಚ್ಚು ಕಡಿಮೆ ಹಾಗೇ ಸಾಗಿದೆ, 
ಆರೋಗ್ಯವಿದೆ, ಗೆಳೆತಿಯರಿದ್ದಾರೆ, 
ಇನ್ನೂ ಬಾಕಿ ಬದುಕು ಕಳೆಯುವದಿದೆ...
ಖುಶಿ ಖುಶಿಯಾಗಿ ನಗುತ್ತಾ
ಇದ್ದುದನ್ನೇ ಒಪ್ಪುತ್ತಾ, ಅಪ್ಪುತ್ತಾ  
ಬದುಕಿ ಹೋಗುವದಿದೆ...

Thursday 15 June 2023

 ನೀವೆಳೆದ ' ಗೆರೆ' ಚಿಕ್ಕದಾಗಬೇಕೇ?
 ಪಕ್ಕಕ್ಕೊಂದು 'ದೊಡ್ಡ ಗೆರೆ'       ಎಳೆಯಿರಿ... 
           
                 ಕೋವಿಡ್ ಶುರುವಾದ ಪೂರ್ವದಿಂದಲೇ ಇದ್ದ ನನ್ನ ಕಣ್ಣಪೊರೆ ಯ ತಕರಾರು ಯಾವ್ಯಾವದೋ ಕಾರಣಕ್ಕೆ ಮುಂದೆ ಮುಂದೆ ಹೋಗಿ, ನಂತರ ಕೋವಿಡ್ ನ ಎರಡು ಅಲೆಗಳ ಪರಿಣಾಮದಿಂದ ಬಾಕಿಯುಳಿದು ಕೊನೆಗೊಮ್ಮೆ 2020 ರ ಡಿಸೆಂಬರ್ ಎರಡನೇ ತಾರೀಕಿಗೆ ಸಂಪನ್ನವಾಯಿತು
ಆದರೆ ಮೂರನೇ ಅಲೆಯ ' ತೋಳ ಬಂತಲೇ ತೋಳ' - ಕಥೆಯಾಗಿ ಮೂರನೇ ಅಲೆ ಯಾವಾಗ ಬರುವದೋ ಎಂಬ ಆತಂಕದಡಿ ಆಪರೇಶನ್ ನಂತರದ check up ಆಗಿರಲೇಯಿಲ್ಲ.ಆ ಕಾರಣಕ್ಕೆ ನಿನ್ನೆ
ಪೂರ್ವಾನುಮತಿ ಪಡೆದು ನಾರಾಯಣ
ನೇತ್ರಾಲಯದ ದರ್ಶನ ಭಾಗ್ಯ ಪಡೆಯುವ ಭಾಗ್ಯ ನನ್ನದಾಯ್ತು..

              " ನಾವೆಷ್ಟು ಸ್ವತಂತ್ರರು ಎಂದು ತಿಳಿಯಲು ಜೇಲಿಗೆ, ನಾವೆಷ್ಟು
ಅಜ್ಞಾನಿಗಳು ಎಂದು ಗೊತ್ತಾಗಲು ಗ್ರಂಥಾಲಯಗಳಿಗೆ, ನಾವೆಷ್ಟು ಆರೋಗ್ಯವಂತರು ಎಂದು ತಿಳಿಯಲು
ಆಸ್ಪತ್ರೆಗಳಿಗೆ ಆಗಾಗ ಭೇಟಿ ಕೊಡಬೇಕಂತೆ."- ಈ ಹೇಳಿಕೆಯ ನಿಜಾಂಶ ನಿನ್ನೆ ಅರಿವಾಯ್ತು ನನಗೆ...
ಇನ್ನೂ ತಾಯ ಎದೆಹಾಲು ಕುಡಿಯುವ ಮಕ್ಕಳಿಂದ ಹಿಡಿದು, ಬದುಕೆಂಬ ಬಾಗಿಲಿನ ಹೊರಬಾಗಿಲನ್ನು ಶಾಶ್ವತವಾಗಿ ಮುಚ್ಚಿಕೊಂಡು ದಾಟಿ ಹೋಗುವ ಹಂತದ ಅನೇಕರನ್ನು
ಕಣ್ಣಾರೆ ಕಂಡೆ.ನನಗೆ ಹುಟ್ಟಿನಿಂದಲೇ
ಒಂದು ಕಣ್ಣಿನ ದೋಷವಿದೆ.ಇನ್ನೊಂದ
ರ ಬಲದ ಮೇಲೆಯೇ ಕಲಿತು/ ಕಲಿಸಿ,
ಬರೆದು/ ಓದಿ ಎಂಬತ್ತರ ಅಂಚನ್ನು
ತಲುಪಿದ್ದೇನೆ.ನನಗೆ ನಾನೇ ' ನನ್ನನ್ನು ಶುಕ್ರಾಚಾರ್ಯರ ಮಗಳು / ಪಟೌಡಿ ನವಾಬನ ಬಂಧು ಎಂದು ತಮಾಷೆ ಮಾಡಿಕೊಂಡಿದ್ದೇನೆ.' ಆದರೂ ನನಗೇ ಇಷ್ಟೊಂದು ಆತಂಕವಿದ್ದಾಗ ಚಿಕ್ಕವರು- ದೊಡ್ಡವರೆನ್ನದೇ ಇನ್ನೊಬ್ಬರ ಆಧಾರ ದಿಂದ ತಡವರಿಸುತ್ತ ಹೆದರಿಕೆಯಲ್ಲಿ
ಯೇ ಹೆಜ್ಜೆ ಊರಿ ನಡೆವ ದೃಶ್ಯದಿಂದ ಕಂಗಾಲಾದೆ.ನನ್ನ ನೋವು/ ಆತಂಕ/ ಕಾಳಜಿ ಯಾವ ಲೆಕ್ಕಕ್ಕೆ !? ಎಂದು ಮೊದಲ ಬಾರಿ ಅನಿಸಿತು.ಇಷ್ಟೊಂದು ಬವಣೆ ಬದುಕಿನಲ್ಲಿದ್ದವರು
ಆಸ್ಪತ್ರೆಗಳ ಭೇಟಿಯಲ್ಲಿ ಒಟ್ಟಾಗಿ ಸಿಕ್ಕಾಗ ಆಗುವ ಮನಸ್ಸಿನ ತುಡಿತ- ಭಾವಗಳನ್ನು ದಾಖಲಿಸಲಾಗುವದಿಲ್ಲ.
ಇನ್ನು ಉಳಿದ ಒಂದೊಂದೇ ಆಸ್ಪತ್ರೆ/ ಅಲ್ಲಿಯ ನೋವು- ನರಳಿಕೆಗಳನ್ನು
ಕಣ್ಣಾರೆ ಕಂಡು ಲೆಕ್ಕ ಹಾಕಿದಾಗ, ಸಿದ್ದಾರ್ಥ ನಡುರಾತ್ರಿಯಲ್ಲಿಯೇ ಹೆಂಡತಿ, ಮಗು, ಸಾಮ್ರಾಜ್ಯಗಳನ್ನೆಲ್ಲ ತೊರೆದು ಹೋಗಿದ್ದರ ನಿಜಾರ್ಥ ಅರಿವಾದೀತು ಎಂದೆನಿಸಿಬಿಟ್ಟಿತು  ನನಗೆ.ಈ ಅನಾರೋಗ್ಯದ ಜೊತೆ ಜೊತೆಗೆ ಆರ್ಥಿಕ ಅಡಚಣೆಗಳು/ ಆಪ್ತರಿಲ್ಲದ ಅನಾಥಭಾವ / ಕಣ್ಣೆದುರೇ ಕುಣಿದು ಗಾಬರಿ ಪಡಿಸುವ ಭವಿಷ್ಯದ ಆತಂಕ ಇವೆಲ್ಲವೂ ಸೇರಿದರಂತೂ ' ನರಕ ದರ್ಶನಕ್ಕೆ'- ಪಾಪಗಳನ್ನು ಮಾಡಬೇಕಾದ ಅವಶ್ಯಕತೆಯೇ ಇಲ್ಲ ಅನಿಸಿಬಿಟ್ಟಿತು ನನಗೆ...
             ಅಂತೂ ದವಾಖಾನೆಯಲ್ಲಿಯ
ಎರಡು ಗಂಟೆಗಳಲ್ಲಿ ನನಗೆ ಅನಿಸಿದ್ದಿಷ್ಟು:-
        " ಈಗಾಗಲೇ ನೀವೆಳೆದ ಗೆರೆಯೊಂದನ್ನು ಮುಟ್ಚದೇ ಚಿಕ್ಕದಾಗಿಸ ಬೇಕಾಗಿದ್ದರೆ ಅದರ ಪಕ್ಕದಲ್ಲಿ ದೊಡ್ಡ ಗೆರೆಯೊಂದನ್ನು ಎಳೆಯಬೇಕು ಎಂಬ
ಮಾತಿದೆ. ಹಾಗೆಯೇ ನಿಮಗಿದ್ದ ಯಾವುದೇ ಸಮಸ್ಯೆ ದೊಡ್ಡದಾಗಿ ಕಾಡಿದರೆ/ ಅದನ್ನು ಚಿಕ್ಕದಾಗಿಸಬೇಕೆ? ಕಣ್ತೆರೆದು ಸುತ್ತಮುತ್ತಲಿನ ಇತರರ ದೊಡ್ಡ ದೊಡ್ಡ ಸಮಸ್ಯೆಗಳನ್ನು ಒಂದೇ ಒಂದು ಸಲ ಕಣ್ಬಿಟ್ಟು ನೋಡಿ...
        ಅಷ್ಟು ಸಾಕು...

Tuesday 13 June 2023

ಹೌದೋ...ಅಲ್ಲವೋ...ನೀವೇ ಹೇಳಿ...      
    
     " ಒಂದು ದೊಡ್ಡ Milton Hot pot" ತಗೋಬೇಕು ನೋಡು ಮುಂದಿನ ಸಲ"- ನನ್ನ ಗಾಡಿ ಇನ್ನೂ ಸುರುವಾಗಿರ ಲಿಲ್ಲ, ಇಂಜಿನ್ ಡುರ್ ಡುರ್ ಅನ್ಲಿಕ್ಕೆ ಸುರುವಾಗಿತ್ತು,ಅಷ್ಟೇ...ಆಗಲೇ Break ಬಿತ್ತು...

"ಯಾಕ? ಮೂರ್ನಾಲ್ಕು ಅವ ಅಲ್ಲ?"
"ಅವು size ಸಣ್ಣವ, ಜಾಸ್ತಿ ಇದ್ರ ದೊಡ್ಡದು ಬೇಕಾಗ್ತದ."
" ಹಂಗಾಗೋದು ಯಾವಾಗರ ಒಮ್ಮೆ, ಸದಾ ಅಲ್ಲ, ದಿನಾ ಯಾರ ಮನಿಗೆ ಯಾರ ಬರ್ತಾರ? ಹಂಗ ತಂದ್ರ ಅಡಿಗಿ ಮನೀಕಿಂತ ಗೋಡೌನ್ಯಾಗ ಜಾಸ್ತಿ ಆಗ್ತಾವ ಸಾಮಾನು..."

              ನಂಗ ಈ ಮಾತು ಬಿಲ್ಕುಲ್
ಅನಿರೀಕ್ಷಿತ ಅಲ್ಲ, ಮೊದಲss  ಊಹಿಸಿದ್ದೆ,  ಆದ್ರೂ ಇಂಥ ಸಂಭಾಷಣೆ ಆಗಾಗ ಆಗಲೇಬೇಕು ನಮ್ಮನ್ಯಾಗ... ನನಗೂ ನನ್ನ ಮಕ್ಕಳಿಗೂ ಈ ವಿಷಯದಾಗ ನೆಲ ಮುಗಿಲಷ್ಟು ಅಂತರ.ಅವರು ಬಹಳಾನೇ simple/ ಲೆಕ್ಕಾಚಾರ ಮೊದಲಿನಿಂದಲೂ...ಅತಿ ಅನಿವಾರ್ಯ ಆಗದ ಹೊರ್ತು ಬೇಡಿಕೆ ಯಿಲ್ಲ.ನಾನೋ ಸ್ವಲ್ಪಮಟ್ಟಿಗೆ ಆಶೆ ಬುರುಕಿ, ದೊಡ್ಡ ದೊಡ್ಡ demand 
ಗಳೆಂದಿಗೂ ಇಲ್ಲ,  ಆದರೆ ಚಿಕ್ಕ ಚಿಕ್ಕ( ಅಂಗೈ ಮುಚ್ಚುವ) ಆಶೆಗಳ ಒಲವು. ಬಹುಶಃ ಬದುಕಿನ ಓಟದಲ್ಲಿ ಮನಸ್ಸಿನಲ್ಲಿದ್ದದ್ದು ಹಣ್ಣಾಗದೇ ಉಳಿದು ಸದಾಕಾಲ ಜವಾಬ್ದಾರಿಗೆ ಪಕ್ಕಾಗಿ ಕಳೆದ ದಿನಗಳ ಶೇಷ ಪರಿಣಾಮ ಇರಬಹುದು!!! 
               ಈಗ ಮಕ್ಕಳೆಲ್ಲರೂ ಚನ್ನಾಗಿದ್ದಾರೆ, ಬೇಕಾದ್ದು ಖರೀದಿಸ ಬಹುದು,ಆದರೆ ಸದಾ ಒಂದು ಎಚ್ಚರದಲ್ಲಿಯೇ ಇರುವದು ಶ್ಲಾಘನೀಯ.ಬದುಕು /ಶಿಕ್ಷಣದಂಥ 
ಅಗತ್ಯಗಳಿಗೆ ಕ್ಷಣ ಕೂಡ ಕಿಂಚಿತ್ತೂ ಯೋಚಿಸದಿದ್ದರೂ ಅನವಶ್ಯಕವಾಗಿ
ಖಯಾಲಿಗೆ ಖರೀದಿಸಿ ಗುಡ್ಡೆ ಹಾಕುವದನ್ನು ಅವರು ವಿರೋಧಿಸು ತ್ತಾರೆ.ಅದು ಸರಿಯೂ ಹೌದು. ಮೊದಲಾದರೆ ಯಾರಿಗಾದರೂ ಕೊಟ್ಟರೆ ಖುಶಿ, ಖುಶಿಯಾಗಿ ಒಯ್ಯುತ್ತಿದ್ದರು.ಈಗ ಅದೂ ಇಲ್ಲ. ಹಳೆಯ ಸೀರೆ/ bedsheets ಬಳಸಿ
ನಾವು comforters( ದುಪ್ಪಟಿ/ ಕೌದಿ
ಹೊಲಿಸುತ್ತಿದ್ದೆವು.ಮಕ್ಕಳು ಬೆಳೆದರೆ
ಅವರ ಬಟ್ಟೆಗಳನ್ನು ಎಗ್ಗಿಲ್ಲದೇ
ಉಳಿದವರು ಪುನರ್ಬಳಕೆ ಮಾಡುತ್ತಿ ದ್ದರು. ಬುಟ್ಟಿಯಲ್ಲಿ ಪಾತ್ರೆಗಳನ್ನು ಇಟ್ಟುಕೊಂಡು ಮನೆಮನೆಗೆ ಬಂದು
ಹಳೆಯ ಬಟ್ಟೆಗಳಿಗೆ ಹೊಸಪಾತ್ರೆ ಕೊಡುವವರು ಆಗಾಗ ಬರುತ್ತಿದ್ದರು.
ಯಾವುದೂ ವ್ಯರ್ಥವಾಗದೇ ಯಾರೋ
ಒಬ್ಬರಿಗೆ ಯಾವ ರೀತಿಯಿಂದಲೋ ಬಳಕೆಯಾಗುತ್ತಿದ್ದವು.ಬಳಕೆಯಾದ ಹಳೆಯ ಪಾತ್ರೆಗಳನ್ನು ಕಂಚುಗಾರರ
ಅಂಗಡಿಗಳಲ್ಲಿ ಬದಲಾಯಿಸಿ ತರುವದು ಮಾಮೂಲಿಯಾಗಿತ್ತು. ಕಾಲ ಬದಲಾಗಿದೆ. Kitchen ಗಳ ಸ್ವರೂಪವೂ ಈಗ ಬದಲಾಗಿದೆ.Gas stove/ Microwave/ Induction ಒಲೆ/ Refrigerator/ ಇಂಥ ಆಧುನಿಕ
ಉಪಕರಣಗಳಿಗೆ ಅಗತ್ಯವಾಗಿ Modular kitchen ನ ಯುಗ‌ ಎಂದೋ ಬಂದಾಗಿದೆ. ಒಳ್ಳೆಯದೇ... 
ತಾಮ್ರ/ ಹಿತ್ತಾಳೆ/ ಕಂಚಿನ ಪಾತ್ರೆಗಳು
Interior Design ಗೆ ಬಳಕೆಯಾಗುತ್ತ
ಹೊಸ ಆಯಾಮ ಕಂಡಿವೆ... ಅಷ್ಟೇ ಏಕೆ? ನಾವು  ಬಯಸಿ ಬಯಸಿ ಮಾಡಿಸಿಕೊಂಡ ಚಿನ್ನದ ಆಭರಣಗಳೂ
ಈಗ ವಿನ್ಯಾಸ ಬದಲಿಸಿಕೊಂಡಿವೆ. ಯಾವಾಗಲಾದರೂ ಬಳಕೆಯಾದರೆ ಹೆಚ್ಚು. ಹಾಗೆಂದು ಬದಲಿಸಿ ಸುಲಭಕ್ಕೆ
ಮತ್ತೆ  ಮಾಡಿಸಿಕೊಳ್ಳಲಾಗದೆಂಬುದೂ
ಅಷ್ಟೇ ನಿಜ...ಒಟ್ಟಿನಲ್ಲಿ ಜಗತ್ತು ಬದಲಾಗುತ್ತ ಹೋಗುವ ವೇಗದ ಪರಿ ನೋಡಿದರೆ ಬೆಳಗಿನದು ಸಂಜೆಗೆ ಹಳಸಲು., ಯಾವದೂ ಹೆಚ್ಚುಕಾಲ
ಚಲಾವಣೆಯಲ್ಲಿರದು ಎಂಬುದೊಂದೇ
ಅಖಂಡ ಸತ್ಯ...ಒಟ್ಟಿನಲ್ಲಿ ನಮ್ಮ ಮಕ್ಕಳು ನಮಗಿಂತ ಬುದ್ಧಿವಂತರು. ನಾನೀಗ ಹೇಳ ಬಯಸುವದಿಷ್ಟೇ, ಸ್ಥಿತ್ಯಂತರಗಳು ಬದುಕಿನ ಅನಿವಾರ್ಯ ಭಾಗ.ಈಗಂತೂ ಅದರ ವೇಗ
ಕಲ್ಪನೆಗೂ ನಿಲುಕದ್ದು. ಅದಕ್ಕನುಗುಣ ವಾಗಿ Consumerism ಕೂಡ ಹೆಚ್ಚಾಗುತ್ತಿದೆ. ಇದನ್ನು ಗಮನಿಸಿದಾಗ
ನಾನೂ ಸೋತು ತಲೆಬಾಗಿ ಮಕ್ಕಳ ಮಾತಿಗೆ ಒಪ್ಪಿಕೊಳ್ಳುತ್ತೇನೆ.ಅದು ಅವಶ್ಯವಷ್ಟೇ ಅಲ್ಲ, ಸಧ್ಯದ ಮಟ್ಟಿಗೆ ಬುದ್ಧಿವಂತಿಕೆಯೂ ಹೌದು...




     ‌‌‌         

Friday 2 June 2023

ಆವ ರೂಪದಲಿ ಬಂದರೂ ಸರಿಯೇ...
        
        ‌‌    ‌" ಅಜ್ಜೀ, ಇದು ನಮ್ಮ ಬಸ್ ಅಲ್ಲ.ನಮ್ಮ ಬಸ್ ನಂಬರ್ 100."-
ಮೂರು ವರ್ಷದ ಮೊಮ್ಮಗ ಹೇಳಿದ.

" ಹೌದು,ಇದು 100 ನಂಬರ್ ಬಸ್ಸsss. ನೋಡಿ ಹತ್ತೇನಿ"- ನಾನು ಹೇಳಿದೆ.

" ಇಲ್ಲ ಅಜ್ಜೀ,ನಮ್ಮ ಬಸ್ double decker  ಇರೂದಿಲ್ಲ."

              ಆಗ ನೋಡುತ್ತೇನೆ, ಅದು ಡಬ್ಬಲ್ ಡೆಕ್ಕರ್. ಎಲ್ಲಿ ತಪ್ಪಿದೆ? ಹಿಂದಿನ stop ನಲ್ಲಿ ಮುಂದೆಯೇ ನಿಂತ ನೂರು ನಂಬರ್ ಬಸ್ ನೋಡಿಯೇ ಮುಂದೆ
ಬಂದದ್ದು, ಬಹುಶಃ ಹಿಂದಿದ್ದ ಯಾವುದೋ ಬಸ್ ಅದನ್ನು overtake ಮಾಡಿ ಮುಂದೆ ಬಂದಿರ ಬೇಕು, ಅದು ನನ್ನ ಗಮನಕ್ಕೆ ಬಂದಿರಲಿಲ್ಲ.ಪ್ರತಿ ಸೀಟಿಗೂ ಇರುವ red button ಒತ್ತಿ ಬಸ್ ನಿಲ್ಲಿಸಿ ಕೆಳಗಿಳಿದೆ.ಅಷ್ಟರಲ್ಲಿ ಬಸ್ ಎರಡು stop ಮುಂದೆ ಬಂದಾಗಿತ್ತು. ಎದುರಿಗೇನೇ Central London ನ City Central Heights ಎತ್ತರದ Apartment ಢಾಳಾಗಿ ಕಾಣುತ್ತಿತ್ತು. ಬಂದ ದಾರಿಯಲ್ಲೇ pram ದೂಡುತ್ತ ಹಿಂದಿರುಗಿ ಮುಂದುವರಿದೆ. ಆದರೆ ಅಲ್ಲಿಗೆ ತಲುಪುವದು ಹೇಗೆ
ತಿಳಿಯಲಿಲ್ಲ.ಎದುರಿಗೇನೆ under pass ಕಂಡರೂ ಅದರೊಳಗೂ ಬಿಚ್ಚಿಕೊಳ್ಳುವ ಕವಲುಗಳ ಭಯ. ಮತ್ತೆ ದಾರಿ ತಪ್ಪಿಸಿಕೊಂಡರೆ ಎನಿಸಿ
ಅಲ್ಲಿಯೇ ಇದ್ದ ಒಬ್ಬ British Student ಒಬ್ಬನ ನೆರವು ಕೇಳಿದೆ. ಅವನು ಖುಶಿ ಖುಶಿಯಾಗಿ ಮೊಮ್ಮಗನ pram ಅನ್ನೂ ನನ್ನ  backpack ನ್ನೂ ತಾನೇ ತೆಗೆದುಕೊಂಡು ನಮ್ಮನ್ನು ಆ ದಾರಿಯ ಕೊನೆಗೆ ಕರೆತಂದು ಬಿಟ್ಟು, ನನ್ನ thanks ಗೆ ಮುಗುಳನಕ್ಕು ,Take care ಎಂದು ಹೇಳಿ ಮರೆಯಾದ...

             ಆ ಮಾತಿಗೆ ಸರಿಯಾಗಿ ಈಗ ಹದಿನೆಂಟು ವರ್ಷಗಳು.ಆ ಮೊಮ್ಮಗ ನಿಗೀಗ ಇಪ್ಪತ್ತೊಂದರ ಹರಯ... ಮೊನ್ನೆ ಒಂದು ಮದುವೆಗೆ ಹೋಗಬೇಕಿತ್ತು." ಅಜ್ಜಿ ,ಹೋಗಿ ತಲುಪಲು ಮುಕ್ಕಾಲು ಗಂಟೆಗೂ ಮಿಕ್ಕಿ ಸಮಯ ಬೇಕು, ಹಿಂದಿನ ಸೀಟಿಗೆ ಆತು
ಒಂದು ನಿದ್ದೆ ಮುಗಿಸು,ಕಾರ್ಯಕ್ರಮದ
ಹೊತ್ತಿಗೆ fresh ಆಗುತ್ತದೆ"- ಎಂದ.
ನನಗೆ ಉಪದೇಶಗಳು ಯಾರಿಂದಲೇ ಬರಲಿ/ ಯಾವ ರೂಪದಲ್ಲೇ ಬರಲಿ
ಮುಕ್ತವಾಗಿ ಸ್ವೀಕರಿಸುತ್ತೇನೆ.ವಯಸ್ಸೂ
ನೋಡುವುದಿಲ್ಲ. ಸರಿಯನಿಸಿದರೆ ' ಜೈ'
ಅಂದು ಬಿಡೋದೇ...ಸರಿಯಾಗಿ ಒಂದು ಗಂಟೆಗೆ ಕಾರ್ಯಾಲಯದಲ್ಲಿ ಹಾಜರು...ಕಾರ್ಯಕ್ರಮ ಮುಗಿಸಿ ಮನೆಗೆ ಬಂದಾಗ ಹನ್ನೊಂದಾಗಿದ್ದರೂ
ಕಿಂಚಿತ್ತೂ ದಣಿವಾಗಲಿಲ್ಲ. ದಾರಿಯುದ್ದ ಕ್ಕೂ ಒಂದೇ ವಿಚಾರ...ಮಕ್ಕಳು ಅದು ಹೇಗೆ ಕಣ್ಣೆದುರೇ ಬೆಳೆದು ನಿಲ್ಲುತ್ತಾರೆ?
ನೋಡುನೋಡುತ್ತಲೇ ಅದು ಹೇಗೆ
ತಮ್ಮದೊಂದು  ವ್ಯಕ್ತಿತ್ವ ಬೆಳೆಸಿಕೊಂಡು
ವಿಸ್ಮಯ ಉಂಟು ಮಾಡುತ್ತಾರೆ? ಇನ್ನೂ ಚಿಕ್ಕವರು,  ನಮ್ಮದೇ ಕಣ್ಣಮುಂದೆ ಬೆಳೆದವರು, ನಮ್ಮಿಂದಲೇ
ಪ್ರಭಾವಿತರಾಗುತ್ತಾರೆ ಎಂಬ ಭ್ರಮೆಯಿಂದ ನಮ್ಮನ್ನು ಹೊರಗೆ ತರುತ್ತಾರೆ?- ಎಂದೆಲ್ಲ ಯೋಚಿಸುತ್ತಲೇ
ಇರುವಾಗ ಕಾರು ಮನೆ ಬಾಗಿಲಿಗೆ ಬಂದಾಗಿತ್ತು...



 ‌

Tuesday 30 May 2023

ಮನಸಿನ ಪುಟಗಳ ನಡುವೆ...
     ‌‌‌‌        
               ಧಾರವಾಡದ ತವರು ಮನೆಯಲ್ಲಿ ಹತ್ತು ದಿನಗಳನ್ನು ಕಳೆದು ಅದೇ ತಾನೇ ಬಂದಿದ್ದೆ."ನಾಳೆ ಮಗನ ಮದುವೆಯಿದೆ, ಯಾವ ಕಾರಣಕ್ಕೂ ತಪ್ಪಿಸುವಂತಿಲ್ಲ, ಬರಲೇಬೇಕು"ಎಂದು 
ನಾದಿನಿಯ( cousin) ಫೋನು. ಅನುಮಾನ ಎಂದೆ. No way ಅಂದಳು. ಸಧ್ಯಕ್ಕಂತೂ ಇರಲಿ ಎಂದು
ಹೂಗುಟ್ಟಿದೆ.ಮೊದಲೇ ಆಮಂತ್ರಣ ಹೇಳಿ/ ಅಡ್ರೆಸ್ / map ಎಲ್ಲವೂ ತಲುಪಿಯಾಗಿತ್ತು.ಇದು Reminder...
               ಪ್ರವಾಸದ ದಣಿವಿನ್ನೂ ಆರಿರಲಿಲ್ಲ, ಆದರೂ ಮನಸ್ಸು ತಡೆಯದೇ ಹೋಗಿಯೇಬಿಟ್ಟೆ... ಹೋಗಿರದಿದ್ದರೆ ಏನು ಕಳೆದುಕೊಳ್ಳು ತ್ತಿದ್ದೆ ಎಂಬುದು ತಿಳಿದದ್ದು ನಂತರವೇ...
                 ಧಾರವಾಡದ ನಮ್ಮ ಮನೆ
ಆರು ಮನೆಗಳದೊಂದು ಚಾಳು.ಒಂದೇ ಮನೆಯಂತೆಯೇ ಇದ್ದದ್ದು...ಹತ್ತು ದಿನಗಳಿಗೊಮ್ಮೆ ಬರುವ ನಳದ ನೀರಿನಿಂದಾಗಿ ಒಬ್ಬರಿಗೊಬ್ಬರ ನಡುವೆ
ಅತಿ ಗಾಢಸಂಬಂಧ.ಸರಿರಾತ್ರಿಯಲ್ಲೂ  
ಒಬ್ಬರನ್ನೊಬ್ಬರು ಎಬ್ಬಿಸುವವರು/ಅಗತ್ಯ ಸಹಾಯಕ್ಕೆ ಹಿಂಜರಿಯದವರು ಕೈಗೆ Plaster ಬಿದ್ದರೆ ತಮ್ಮವೇ ಮನೆ ಗಳಿಂದ ಊಟ- ತಿಂಡಿ ಸರಬರಾಜು
ಮಾಡುವವರು, ನಾವು ಎಲ್ಲಿಯಾದರೂ
ಹೋಗಿದ್ದರೆ ನಮ್ಮ ಮಕ್ಕಳನ್ನು ತಮ್ಮ ಮಕ್ಕಳಂತೆಯೇನಡೆಸಿಕೊಳ್ಳುವವರು  ಎಲ್ಲರೂ ಬಂದದ್ದು ನೋಡಿ ನನ್ನ ದಣಿವು ಎಲ್ಲಿ ಮಾಯವಾಯಿತೋ  ತಿಳಿಯಲೇಯಿಲ್ಲ.ಅಕ್ಷತೆ ಬೇಗ ಇದ್ದು ಎಲ್ಲರೂ ಒಂದು ರೀತಿಯಲ್ಲಿ ವಿಶ್ರಾಂತಿಯ mood ನಲ್ಲಿ ಇದ್ದದ್ದು
Plus point...
             ಎಲ್ಲರೂ ಈಗ ೬೦+ ವಯಸ್ಸು ದಾಟಿದವರು. ಮಕ್ಕಳ ಬೆನ್ನು ಹತ್ತಿ
ಬೆಂಗಳೂರಿಗೆ ಬಂದರೂ ಧಾರವಾಡದ
ಗುಂಗು ಬಿಡದವರು/ ಮಾತಿಗೆ/ ಆತ್ಮೀಯತೆಗೆ ಸ್ವಲ್ಪಮಟ್ಟಿಗೆ ಬರಗೆಟ್ಟವರು/ ಯಾರಾದರೂ ಆತ್ಮೀಯರು ಕಂಡರೆ ಕಣ್ತುಂಬಿ ನಿಲ್ಲುವವರು/ ನೆನಪಿನ ಜೇನುಗೂಡಿಗೆ
ಕಲ್ಲು ಹೊಡೆದು ಹುಳಗಳ ಕಡಿತ/ ಜೇನಿನ ಸವಿ ಎರಡನ್ನೂ ಸಮಸಮವಾಗಿ ಹಂಚಿಕೊಳ್ಳುವವರು/
ತಮ್ಮ ಎರಡನೇ - ಮೂರನೇ ತಲೆಮಾರುಗಳ ಸುತ್ತಲೇ ಗಿರಕಿ ಹೊಡೆಯುತ್ತ ಏನೋ ಖುಶಿ/ ಭ್ರಮೆಗಳ
ನಡುವೆ ಜೀಕುವವರು/ ಎಷ್ಟು ಜನರೋ ಅಷ್ಟೊಂದು " ನೆನಪಿನ ಬಣ್ಣ ಬಣ್ಣದ ನವಿಲುಗರಿಗಳು".
               ಹಿಂದಿನವರು ದಡ್ಡರಲ್ಲ.
ಹಳೆಯದೆಲ್ಲ ಬದಿಗೆ ಸರಿಸಲೇ ಬೇಕಂತಿಲ್ಲ. ಕೂಡು ಕುಟುಂಬಗಳಲ್ಲಿ
ಬಿಡುವಿಲ್ಲದ ದುಡಿಮೆಯ ಮಧ್ಯದಲ್ಲಿಯೂ, ಪರಸ್ಪರ ಭಿನ್ನಾಭಿಪ್ರಾಯ/ ಮನಸ್ತಾಪಗಳಿಗೆ ಒಂದು ತೆರೆಯಳೆದು ಸುಖವಾಗಿಯೇ
ಇದ್ದವರು. ಅಂಥವರ ನೋವುಗಳಿಗೆಲ್ಲ
ಇಂಥ ಸಮಾರಂಭದ ಖುಶಿಯ ಅನುಭವಗಳೇ ಮದ್ದು"- ಎಂಬುದನ್ನು
ಮತ್ತೊಮ್ಮೆ/ ಮಗದೊಮ್ಮೆ ಧೃಡ ಪಡಿಸಿಕೊಂಡು ಮನೆ ಸೇರಿದಾಗ ಮನಸ್ಸು ಅರಳಿದ ಹೂವಾಗಿತ್ತು...

( ವಿಪರೀತ ಜನ/ ಎಲ್ಲರೂ ಅಲ್ಲಲ್ಲಿ busy ಆಗಿ ಕಾರ್ಯಾಲಯದ ತುಂಬ 
ಹಂಚಿ ಹೋಗಿದ್ದರಿಂದ ಒಟ್ಟಾಗಿ ಒಂದು ಫೋಟೋ ಬೇಕೆಂಬ demand - demand ಆಗಿಯೇ ಉಳಿಯಿತು.)

Sunday 28 May 2023

ಒಂದು ದವಾಖಾನೆಯ ದೃಶ್ಯ...

(ಒಬ್ಬ ರೋಗಿ ಡಾಕ್ಟರ್ ಬಳಿ ಬರುತ್ತಾನೆ..)

ರೋಗಿ: ನಮಸ್ಕಾರ ಡಾಕ್ಟರ್...

ಡಾಕ್ಟರ್: ಓ ಬನ್ನಿಒಳಗೆ, ಕುಳಿತುಕೊಳ್ಳಿ.(ಕುಳಿತುಕೊಳ್ಳುತ್ತಾನೆ) ಈಗ ಹೇಳಿ, ನಿಮ್ಮ ತಕರಾರು ಏನು? ಏನು ಸಮಸ್ಯೆ
ಯಾಗಿದೆ.

ರೋಗಿ:  ನನ್ನ ಹೊಟ್ಟೆ ಸರಿಯಿಲ್ಲ, ಡಾಕ್ಟರ್. ಏನೂ ತಿನ್ನುವ ಹಾಗೆ ಅನಿಸುವದೇ ಇಲ್ಲ.

ಡಾ: ಎಷ್ಟು ದಿನಗಳಿಂದ ಆಗ್ತಿದೆ ಹೀಗೆ?

ರೋಗಿ: ಸುಮಾರು ಒಂದು ವಾರದಿಂದ.

ಡಾ:  ಏನಾದರೂ ಹೊರಗಿನ ತಿಂಡಿ ತಿಂದಿದ್ದಿರಾ?

ರೋಗಿ: ಹೌದು ಡಾಕ್ಟರ್! ಒಂದು ಮದುವೆಗೆ ಹೋಗಿದ್ದೆ...

ಡಾ: ಬಹುಶಃ ಹೆಚ್ಚು ಎಣ್ಣೆಯ ಪದಾರ್ಥ/ ಮಸಾಲೆ ತಿಂದು ಹಾಗಾಗಿರಬಹುದು.

ರೋಗಿ: ಈಗ ಬಿಸಿಲು ಬಹಳ .ಅಂಥ ಊಟದಿಂದ ನೀರಡಿಕೆಯಾಗಿ ನೀರು
ಕುಡಿದಾಗಿನಿಂದ ಹಾಗಾಗಿರಬಹುದು.

ಡಾ: ಬೇಸಿಗೆಯಲ್ಲಿ ನೀರು ಶುದ್ಧವಾಗಿರುವದಿಲ್ಲ.ಕಾಸದೇ ನೀರು ಕುಡಿಯಬಾರದು. ಮನೆಯಲ್ಲಿ ನೀರು
ಕುದಿಸಿಟ್ಟು ಕುಡಿಯಿರಿ. ಕರಿದ ತಿನಿಸು
ತಿನ್ನಬೇಡಿ.ಹಗುರವಾದ ಊಟ ಮಾಡಿ.
ಊಟದ ನಂತರ ಕೂಡಲೇ ಮಲಗಬೇಡಿ.

ರೋಗಿ: ಆಯ್ತು ಡಾಕ್ಟರ್...

ಡಾ: ಔಷಧಿ ಏನೂ ಬೇಡ.ಎರಡು ದಿನ ಹಗುರ ಆಹಾರ/ ಹೆಚ್ಚು ನೀರು ಕುಡಿದು
ನೋಡಿ. ಕಡಿಮೆಯಾಗುತ್ತದೆ.



Saturday 27 May 2023

KEEP GOING/ KEEP GROWING
Teju...
       Heartiest Congratulations dear Tejas...YOU ARE the Pioneer to become A Graduate from US.in our Koulagi family. All smiles for you. You have made all of us PROUD...Lots and lots of blessings from All the members of our family...
GOD BLESS...
LOVE YOU...
  
      ಅದು ೧೯೯೬ ನೇ ಇಸ್ವಿ.ಮಗನ ಇಂಜಿನಿಯರಿಂಗ್ ಮುಗಿದು ಬೆಂಗಳೂರಿನಲ್ಲಿ ಕೆಲಸ‌ ಮಾಡತೊಡಗಿ
ಎರಡೇ ವರ್ಷಗಳಾಗಿದ್ದವು.ಹೆಚ್ಚಿನ ಓದಿಗೋ/ ನೌಕರಿಗೋ ಪಶ್ಚಿಮಾಭಿ ಮುಖಿಗಳಾಗುವ trend ನಿಧಾನವಾಗಿ ಶುರುವಾಗಿತ್ತು.ಮಗನ ಪರಮಾಪ್ತ ಗೆಳೆಯನೊಬ್ಬ MS ಗೆಂದು ಹೊರಟು ನಿಂತಾಗ ನನ್ನ ಮಗನಲ್ಲೂ ಆಶೆಯ
ಬೀಜಾಂಕುರವಾಗಿರಬೇಕು.ಹನ್ನೆರಡನೇ ವರ್ಷಕ್ಕೇನೇ ಅಪ್ಪನನ್ನು ಕಳೆದು ಕೊಂಡದ್ದಕ್ಕೋ ಏನೋ ಅವನೆಂದೂ
ಹುಡುಗನೆಂಬ ಲೆಕ್ಕಕ್ಕೆ ಬರದೇನೇ ಪ್ರೌಢನಾಗಿದ್ದ. ವಯಸ್ಸು ಮೀರಿ matured.ತಾನು ಹೋದರೆ ನಾನು ಒಬ್ಬಳೇ ಆಗುತ್ತೇನೆಂದೋ/ನಾನೆಲ್ಲಿ ಹೆದರಿಕೆ/ ನೋವು ಅನುಭವಿಸು ತ್ತೇನೆಂದೋ ತಯಾರಿ ಮುಗಿದು ಹೊರಡುವದು ನಿರ್ಧರಿತವಾಗುವ ವರೆಗೆ ವಿಷಯ ಪ್ರಸ್ತಾಪಿಸುವದೇ ಬೇಡವೆಂದೋ ಮೊದಲ ಹಂತದಲ್ಲಿ ಏನನ್ನೂ ಹೇಳಿರಲಿಲ್ಲ.ಯಾರ ಸಹಾಯ ಪಡೆದನೋ / ಎಲ್ಲಿಂದ ಸಾಲದ ವ್ಯವಸ್ಥೆ ಮಾಡಿಕೊಂಡನೋ / ಯಾರು ಅವನಿಗೆ guide ಮಾಡಿದರೋ ನನಗೆ
ಇಂದಿಗೂ ಗೊತ್ತಿಲ್ಲ.ಅವನ ಉದ್ದೇಶ ನೇರವಾಗಿದ್ದರಿಂದ ಬಹುಶಃ ಎಲ್ಲವೂ
ಸುಸೂತ್ರವಾಗಿ ಒಂದು ಹಂತಕ್ಕೆ ಬಂದಮೇಲೆಯೇ ನನ್ನ ಮುಂದೆ ಬಾಯಿಬಿಟ್ಟ...
          ‌        ನನಗೂ ನನ್ನ ಮಕ್ಕಳು ಆದಷ್ಟು ಸಮೃದ್ಧರಾಗಿ ಬೆಳೆಯಲಿ ಎಂಬ ಇಚ್ಛೆ ಇದ್ದರೂ ಅಂಥದೊಂದು ಕನಸು ಸಾಕುವಷ್ಟು ನಾನು ಖಂಡಿತ ಅನುಕೂಲಸ್ಥಳಾಗಿರಲಿಲ್ಲ ."ನನಗೆ ನಿನ್ನ ಒಪ್ಪಿಗೆಯೊಂದನ್ನು ಬಿಟ್ಟು ಬೇರೇನೂ ಬೇಡ" ಎಂದು ಅನುಮಾನಿಸುತ್ತಲೇ ಮಗ ಬೇಡಿಕೊಂಡಾಗ ಬೇಡವೆನ್ನುವ 
ಯಾವ ನೈತಿಕ ಹಕ್ಕೂ ನನಗಿರಲಿಲ್ಲ.
            " ಅಲ್ಲಿ ಯಾರಿಗೆ ಯಾರೂ ಇರುವದಿಲ್ಲ.train ನಲ್ಲಿ ಲೂಟಿ ಮಾಡುತ್ತಾರೆ/ ಯಾರೋ ಇನ್ಯಾರನ್ನೋ
ಕಾರಣವಿಲ್ಲದೇ shoot ಮಾಡುತ್ತಾರೆ,
ಇದ್ದೊಬ್ಬ ಮಗನನ್ನು ದೂರ ಕಳಿಸಿ
ನಂತರ ಹಲುಬಬೇಡ-" ಎಂಬ ಬಿಟ್ಟಿ ಉಪದೇಶಗಳು ಬೇರೆ...ನಾನು /  ಮಕ್ಕಳು ತಮ್ಮ ನಂತರ ಯಾವ ಕಾರಣಕ್ಕೂ ನೋವು ಅನುಭವಿಸದೇ
ಇರಲಿ ಎಂದೇ ನನ್ನವರು ನನ್ನ ಮೂವತ್ಮೂರನೇ ವರ್ಷಕ್ಕೆ, ಮೂರು ಮಕ್ಕಳನ್ನು ತಾವೇ ನೋಡಿಕೊಂಡು BEd ಮಾಡಿಸಿ ನೌಕರಿಗೆ ಹಚ್ಚಿದ ನೆನಪಾಗಿ ನಾನು ಮೌನವಾಗಿಯೇ ಸಮ್ಮತಿಸಿದೆ.
                  ಆ ಮಾತಿಗೀಗ ಮತ್ತೆ ಇಪ್ಪತ್ತಾರು ವರುಷಗಳು.ಅವನ ಮಗ/ಅಂದರೆ ನನ್ನ ಮೊಮ್ಮಗ ತೇಜಸ್ Boston ನ UMass Amherst ವಿಶ್ವವಿದ್ಯಾಲಯದಿಂದ ಪದವಿ ಪಡೆದು ಇದೇ ಇಪ್ಪತೈದನೇ ತಾರೀಕು ಅಂದರೆ ನಿನ್ನೆ graduation  day ದ ಸಂಭ್ರಮ ದಲ್ಲಿದ್ದಾನೆ.ನನ್ನ Visa expire ಆದ್ದರಿಂದ/ ಹೊಸ ವೀಸಾಗಳ ನಿಬಂಧನೆಗಳಿಂದಾಗಿ ನಮಗಾರಿಗೂ ಅಲ್ಲಿಗೆ ಹೋಗಲಾಗಲಿಲ್ಲ...
                ನಿನ್ನೆ ವಿಷಯ ತಿಳಿಸಲು ಮಗ ಫೋನ್ ಮಾಡಿದಾಗ ಇದೆಲ್ಲ ನೆನಪಿನ ಸುರುಳಿ ಬಿಚ್ಚಿ ಕೊಂಡಿತು. ಕೇವಲ ಎರಡೂವರೆ ದಶಕಗಳಲ್ಲಿ
ಜಗತ್ತು ಬದಲಾದ ಪರಿಯೊಂದು ವಿಸ್ಮಯ...ಅವನನ್ನು ಕಳಿಸಲು ಮೌನ
ವಾಗಿ ರೋಧಿಸಿದ ನಾನೇ -ಒಂದು ಕಡಿಮೆ  ಹತ್ತು ದೇಶ- ಗಳನ್ನು (ಒಂಬತ್ತು) ಸುತ್ತಿದ್ದೇನೆ. ಮಗನ ಹತ್ತೊಂಬತ್ತು cousins ಗಳಲ್ಲಿ ಕೇವಲ‌ ಆರು ಜನರನ್ನು ಬಿಟ್ಟು ಎಲ್ಲರೂ ವಿಶ್ವದ
ಉದ್ದಗಲಗಳನ್ನು ಅಳೆಯುತ್ತಿದ್ದಾರೆ.  
ವರ್ಷಕ್ಕೊಮ್ಮೆ ಅವರು/ ಅನಿವಾರ್ಯ ವಾದಾಗ ನಾವೆಲ್ಲರೂ ಹೋಗಿ ಬರುವದು ಸದಾ ಜಾರಿಯಲ್ಲಿದ್ದುದ ರಿಂದ ಪರದೇಶಗಳು ನಡುಮನೆ/ ಪಡಸಾಲೆ ಎಂಬಂತಾಗಿವೆ.ಆಗಿನಂತೆ ಯಾವುದೋ ಮೂಲೆಯಲ್ಲಿಯ  ಬೂತ್ ಒಂದರಲ್ಲಿ trunk call ಬುಕ್ ಮಾಡಿ/ ಒಂದು call, ಹತ್ತು ಸಲ cut
ಆಗಿ ಗೋಳಾಡುವ ದೌರ್ಭಾಗ್ಯ ಈಗಿಲ್ಲ.vedio call ಮಾಡಿದರೆ ಎದುರಾ ಎದುರೇ ಬೇಕೆನಿಸುವಷ್ಟು ಕಾಲ ಮಾತಾಡಬಹುದು. ಪರಸ್ಪರರನ್ನು ನೋಡಬಹುದು.
          ‌‌ಅಷ್ಟಲ್ಲದೇ ಹೇಳುತ್ತಾರೆಯೇ? "ಪ್ರತಿಯೊಂದು ಮಹಾಯಾನವೂ 
ಮೊದಲ ಕೆಲ ಹೆಜ್ಜೆಗಳಿಂದಲೇ ಸುರುವಾಗುವದು"- ಎಂದು...
    


                  

Thursday 25 May 2023

       ‌    ನಾನು ನೌಕರಿಗೆ ಸೇರಿದ ಹೊಸತು.ಪ್ರಾರಂಭದಲ್ಲಿ ಪ್ರಾಥಮಿಕ ವಿಭಾಗದಲ್ಲಿದ್ದೆ.ಹೀಗಾಗಿ ಆರು/ ಏಳನೇ ಇಯತ್ತೆಗಳಿಗೆ ಕಲಿಸುತ್ತಿದ್ದೆ. ಮುಗ್ಧತೆ/ ಕಪಟವರಿಯದ ಮಕ್ಕಳು.ಅವರ ಮಧ್ಯದಲ್ಲಿ ಮನೆಯ/ ಮನಸ್ಸಿನ ದುಗುಡಗಳೆಲ್ಲದರಿಂದ ದೂರವಾಗುವು ದೇ ಒಂದು ಪವಾಡ ಸದೃಶ್ಯ ಅನುಭವ. ಏನು ಮಾಡಿದರೂ ಸಿಟ್ಟಿಗೇಳುವ ಮಾತೇ ಇಲ್ಲ...
              ಒಂದು ಸಲ ಒಂದು ಕ್ಲಾಸಿನ 
Absentee period ಗೆ ಹೋಗಿದ್ದೆ. ಮಕ್ಕಳಿಗೇನೋ ಕೆಲಸ ಕೊಟ್ಟು ನಾನು ಒಂದು magazine ಮೇಲೆ ಸುಮ್ಮನೇ ಕಣ್ಣಾಡಿಸುತ್ತಿದ್ದೆ. ಒಬ್ಬ ಹುಡುಗಿ ನನ್ನ ಬಳಿ ಬಂದು ಮುಂದಿನ table ಮೇಲೆ
ಅರ್ಧ ಮಲಗಿ, ಪತ್ರಿಕೆಯ ಮೇಲೆ ಕಣ್ಣಾಡಿಸಿ, " ಟೀಚರ್, 'ಸುಧಾ' ಏನ್ರಿ? 
ನನಗ ಈ ವಾರದ್ದು ಸಿಕ್ಕೇ ಇಲ್ರಿ, ಒಂದ ಹತ್ತು ಮಿನಿಟು ಕೊಡ್ರಿ, ನೋಡಿ ಕೊಡತೇನಿ"- ಅಂದ್ಲು.ಕೊಡಬಹುದಿತ್ತು, ಆದರೆ ಕೊಡಲಿಲ್ಲ, ಅಷ್ಟು ಚಿಕ್ಕ ಹುಡುಗಿಗೆ ಅದನ್ನು ರೂಢಿಸಬಾರದೆಂದೆ
ಹಾಗೆ ಮಾಡಿದ್ದು.‌ ಅವಳು ವಕೀಲೆ, ಇಬ್ಬರೂ ಭೇಟಿಯಾದಾಗೊಮ್ಮೆ ಕಾಯಂ ಅದನ್ನೇ ಮಾತಾಡಿ ಮಜಾ ತೆಗೆದು ಕೊಳ್ಳುತ್ತೇವೆ. ಆ ಮಾತು ಬೇರೆ.
             ಅದು ಮಸಿ ಪೆನ್ನು ಮುಗಿಯು ತ್ತಿದ್ದ ಕಾಲ. ಎಲ್ಲೆಡೆಗೆ ಬಾಲ್ ಪೆನ್
ಅದೇ ತಾನೇ ಕಾಲಿಡಲು ಪ್ರಾರಂಭವಾ ಗಿತ್ತು. ನೀಲಿ cap ಹಾಗೂ ಮಸಿ ತೀರಿ
ಖಾಲಿ ಆಗುವದನ್ನು ಸ್ಪಷ್ಟವಾಗಿ ತೋರಿ
ಸುವ ರೀತಿ ಎಲ್ಲರಿಗೂತಿಳಿಯುತ್ತಿದ್ದುದೇ
ಒಂದು ಹೊಸ ಆಕರ್ಷಣೆ.ಪೆನ್ನಿನ 
ನಿಬ್ಬಿನಿಂದ ಮಸಿ ಸೋರುವ/ ಕೈ ಮೈ ಮಸಿಯಾಗುವ ಗೋಜಿಲ್ಲ. ಎಲ್ಲರ ಕೈಯಲ್ಲೂ ಅಂಥದೇ ಪೆನ್ನುಗಳು.
ಒಮ್ಮೆ Note books correction 
ಮಾಡುತ್ತ ಕುಳಿತಿದ್ದೆ.‌ಐದನೇ ಈಯತ್ತೆ ಯ ಒಬ್ಬ ಹುಡುಗ ಬಂದು/ ಎದುರು ನಿಂತು, "ಟೀಚರ್, ಆ ಪೆನ್ ನಂದು. ನಿನ್ನೆ ಕಳೆದಿದೆ"- ಅಂದ." ಹೌದಾ, ಕೊಡುತ್ತೇನೆ, ಅದಕ್ಕೂ ಮೊದಲು class ನ್ನು ಒಂದು ಸಲ ಸುತ್ತಿ ಬಾ, ಯಾರ ಯಾರ ಹತ್ತಿರ  ಎಂಥ pen ಇದೆ, ಒಮ್ಮೆ ನೋಡಿ ಬಾ.- ಅಂದೆ. "ಬಹಳ ಮಂದಿಯ ಹತ್ತಿರ ಇವೇ ಇವೆ ಟೀಚರ್, "- ಎಂಬುದು ಅವನ ಉತ್ತರವಾಗಿತ್ತು.ಮುಖದ ತುಂಬ ಗೊಂದಲ.ನನ್ನನ್ನು ಕೇಳಿದ್ದರ ಬಗ್ಗೆ ಎಲ್ಲೋ ಚಡಪಡಿಕೆ." ಈಗ ಮನೆಗೆ ಹೋದ ಮೇಲೆ ಮನೆಯಲ್ಲೆಲ್ಲ ಒಮ್ಮೆ
ಹುಡುಕಿ ನೋಡು,ಸಿಗದಿದ್ದರೆ ನಾನು ನಿನಗೆ ಇದರ ಜೊತೆಗೆ ಇನ್ನೊಂದು ಪೆನ್ನನ್ನೂ ಕೊಡುತ್ತೇನೆ." - ಅಂದೆ. ಮರುದಿನ ಶಾಲಾ ಪ್ರಾರ್ಥನೆಗೂ ಮೊದಲೇ ಬಂದು, ಕೈಯಲ್ಲಿ ಹಿಡಿದ
ತನ್ನ ಪೆನ್ನು ಮನೆಯಲ್ಲೇ ಸಿಕ್ಕ ಸುದ್ದಿ ಕೊಟ್ಟ.ಮುಖದ ಮೇಲೆ ಪೆನ್ನು ಸಿಕ್ಕ ಶುದ್ಧ ಖುಶಿ ಬಿಟ್ಟರೆ ಬೇರೆ ಯಾವ ಭಾವವೂ ಇರಲಿಲ್ಲ...ಅದಕ್ಕೇ ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ
ಎನಿಸಿಬಿಟ್ಟಿತು ನನಗೆ.ಈಗ 
ನನ್ನದೊಂದೇ ಪ್ರಶ್ನೆ  ಬೆಳೆ ಬೆಳೆಯುತ್ತ 
ಈ ಮುಗ್ಧತೆ  ಎಲ್ಲಿ ಮಾಯವಾಗುತ್ತದೆ?

        



      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...