Sunday, 28 May 2023

ಒಂದು ದವಾಖಾನೆಯ ದೃಶ್ಯ...

(ಒಬ್ಬ ರೋಗಿ ಡಾಕ್ಟರ್ ಬಳಿ ಬರುತ್ತಾನೆ..)

ರೋಗಿ: ನಮಸ್ಕಾರ ಡಾಕ್ಟರ್...

ಡಾಕ್ಟರ್: ಓ ಬನ್ನಿಒಳಗೆ, ಕುಳಿತುಕೊಳ್ಳಿ.(ಕುಳಿತುಕೊಳ್ಳುತ್ತಾನೆ) ಈಗ ಹೇಳಿ, ನಿಮ್ಮ ತಕರಾರು ಏನು? ಏನು ಸಮಸ್ಯೆ
ಯಾಗಿದೆ.

ರೋಗಿ:  ನನ್ನ ಹೊಟ್ಟೆ ಸರಿಯಿಲ್ಲ, ಡಾಕ್ಟರ್. ಏನೂ ತಿನ್ನುವ ಹಾಗೆ ಅನಿಸುವದೇ ಇಲ್ಲ.

ಡಾ: ಎಷ್ಟು ದಿನಗಳಿಂದ ಆಗ್ತಿದೆ ಹೀಗೆ?

ರೋಗಿ: ಸುಮಾರು ಒಂದು ವಾರದಿಂದ.

ಡಾ:  ಏನಾದರೂ ಹೊರಗಿನ ತಿಂಡಿ ತಿಂದಿದ್ದಿರಾ?

ರೋಗಿ: ಹೌದು ಡಾಕ್ಟರ್! ಒಂದು ಮದುವೆಗೆ ಹೋಗಿದ್ದೆ...

ಡಾ: ಬಹುಶಃ ಹೆಚ್ಚು ಎಣ್ಣೆಯ ಪದಾರ್ಥ/ ಮಸಾಲೆ ತಿಂದು ಹಾಗಾಗಿರಬಹುದು.

ರೋಗಿ: ಈಗ ಬಿಸಿಲು ಬಹಳ .ಅಂಥ ಊಟದಿಂದ ನೀರಡಿಕೆಯಾಗಿ ನೀರು
ಕುಡಿದಾಗಿನಿಂದ ಹಾಗಾಗಿರಬಹುದು.

ಡಾ: ಬೇಸಿಗೆಯಲ್ಲಿ ನೀರು ಶುದ್ಧವಾಗಿರುವದಿಲ್ಲ.ಕಾಸದೇ ನೀರು ಕುಡಿಯಬಾರದು. ಮನೆಯಲ್ಲಿ ನೀರು
ಕುದಿಸಿಟ್ಟು ಕುಡಿಯಿರಿ. ಕರಿದ ತಿನಿಸು
ತಿನ್ನಬೇಡಿ.ಹಗುರವಾದ ಊಟ ಮಾಡಿ.
ಊಟದ ನಂತರ ಕೂಡಲೇ ಮಲಗಬೇಡಿ.

ರೋಗಿ: ಆಯ್ತು ಡಾಕ್ಟರ್...

ಡಾ: ಔಷಧಿ ಏನೂ ಬೇಡ.ಎರಡು ದಿನ ಹಗುರ ಆಹಾರ/ ಹೆಚ್ಚು ನೀರು ಕುಡಿದು
ನೋಡಿ. ಕಡಿಮೆಯಾಗುತ್ತದೆ.



No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...