Sunday 27 November 2022

ಕನ್ನಡ ಹಿರಿಮೆ..

ಮೊದಲು ತಾಯ ಹಾಲ ಕುಡಿದು
ನಲ್ಮೆಯಿಂದ ತೊದಲಿ ನುಡಿದು
ಕೆಳೆಯರೊಡನೆ ಬೆಳೆದು ಬಂದ ಮಾತದಾವುದು 

ಸವಿಯ ಹಾಡ ಕತೆಯ ಕಟ್ಟಿ
ಕಿವಿಯಲೆರದು ಕರುಳ ತಟ್ಟಿ
ನಮ್ಮ ಜನರು ನಮ್ಮ ನಾಡು ಎನಿಸಿತಾವುದು
ನಮ್ಮ ಕವಿಗಳೆಂಬ ಕೋಡು ತಲೆಗದಾವುದು 

ಕನ್ನಡ ನುಡಿ ನಮ್ಮ ಹೆಣ್ಣು
ನಮ್ಮ ತೋಟದಿನಿಯ ಹಣ್ಣು
ಬಳಿಕ ಬೇರೆ ಬೆಳೆದ ಹೆಣ್ಣು
ಬಳಿಗೆ ಸುಳಿದಳು
ಹೊಸದು ರಸದ ಬಳ್ಳಿ ಹಣ್ಣು
ಒಳಗೆ ಸುಳಿದಳು 

ಬಲ್ಲವರಿಗೆ ಬೆರಗೆ ಇಲ್ಲಿ
ಅರಿಯದವರು ನಾಲ್ವರಲ್ಲಿ
ಕಳೆಯ ಬೆಳಕು ಹೊಳೆಯಲಂದು ದಣಿದು ಹೋದೆನು
ಬಡವನಳಿಲು ಸೇವೆ ಎಂದು ಧನ್ಯನಾದೆನು

ಸಾಹಿತ್ಯ:  ಬಿ.ಎಂ.ಶ್ರೀ

('ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಕವಿತೆಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

Friday 25 November 2022

ಕನ್ನಡವಲ್ಲ ತಿಂಗಳು ನಡೆಸುವ
ಗುಲ್ಲಿನ ಕಾಮನಬಿಲ್ಲು ;
ರವಿ ಶಶಿ ತಾರೆಯ ನಿತ್ಯೋತ್ಸವವದು,
ಸರಸತಿ ವೀಣೆಯ ಸೊಲ್ಲು.
~ಕೆ.ಎಸ್.ನಿಸಾರ್ ಅಹಮದ್

ಮೊದಲ ಮಾತು...

ಅನುವಾದ ನನ್ನ ಹುಚ್ಚು.ಒಂದು ತರಹದ ಮೋಹ.ಶಾಲೆ/ ಕಾಲೇಜು ಗಳಲ್ಲಿ ಓದುವಾಗ, ಶಿಕ್ಷಕಿಯಾಗಿ 
ಕೆಲಸದಲ್ಲಿದ್ದಾಗ ಏನೇ ಓದಿದ್ದು ಮೆಚ್ಚುಗೆಯಾಗಲೀ ಅದು ಬೇರೆ ಭಾಷೆಯಲ್ಲಿದ್ದರೆ ಮೊದಲು ಕನ್ನಡಕ್ಕೆ ಇಳಿಸುತ್ತಿದ್ದೆ.ಅದು ಎಷ್ಟು ಚಟವಾಗಿ ಬಿಟ್ಟಿತೆಂದರೆ ಇಂಗ್ಲೀಷ್/ ಹಿಂದಿಯಲ್ಲಿ ಓದಿದ ಎಲ್ಲವೂ auto translate ಆಗುವಷ್ಟು...ಆದರೆ ನನ್ನದು ಶಬ್ದಾನುವಾದವಲ್ಲ( word to word  translation) ಭಾವಾನುವಾದ, - ಮೆಚ್ಚಿದ ಕವನದ ಉತ್ತಮ ಆಶಯದ ಮೂಲಕ್ಕೆ ಧಕ್ಕೆ ಬರದಂತೆ, ನಮ್ಮ ಭಾಷೆಯ ಭಾವಕ್ಕೆ ಸರಿಹೋಗುವಂತೆ
ಮಾರ್ಪಡಿಸಿ ಕವನದ ರೂಪ ಕೊಡುವದು.ಆರಿಸುವಾಗಲೂ ಮೂಲ ಕವಿ ಯಾರು? ಅವನು ಪ್ರಸಿದ್ಧಿ/ ಜನಮನ್ನಣೆ ಪಡೆದವನೇ ಎಂಬುದಕ್ಕಿಂತ ಅವನ ಕವನ ಕೊಡುವ ಸಂದೇಶವೇನು? ಅದು ಓದುಗರ ಭಾವನೆಗಳನ್ನು ಎಷ್ಟರಮಟ್ಟಿಗೆ ಒಳಗೊಳ್ಳುತ್ತದೆ? ಎಂಬುದು ನನಗೆ ಮುಖ್ಯವಾಗುತ್ತದೆ. ಅದಕ್ಕೇ ಅದನ್ನ translation ಅನ್ನುವದಿಲ್ಲ- trans- creation ಅನ್ನುತ್ತೇನೆ.ಅನುವಾದವಲ್ಲ ,ಒಂದು ರೀತಿಯಲ್ಲಿ ರೂಪಾಂತರ ಅನ್ನ ಬಹುದೇನೋ...
              ಇನ್ನು ಸಾಧ್ಯವಾದಷ್ಟೂ ಆಯ್ದ ಕವನಗಳ ಮೂಲ ಹುಡುಕಿ
ಅವರ ಹೆಸರು/ ಫೋಟೋ ಹಾಕಿದ್ದೇನೆ.ಕೆಲವುಗಳ ಮಾಹಿತಿ ಲಭ್ಯವಿಲ್ಲದ ಕಾರಣಕ್ಕೆ unknown ಎಂದು ಕಾಣಿಸಿದ್ದೇನೆ. ನನಗೆ ತಿಳಿದ ಹಾಗೆ ಮಾಹಿತಿ ಸರಿಯಿದೆ. ಯಾರಾದರೂ ಏನಾದರೂ ಲೋಪ ಕಂಡರೆ, ನನಗೆ ತಿಳಿಸಿದರೆ ಸೂಕ್ತ ತಿದ್ದುಪಡಿ ಮಾಡುತ್ತೇನೆ.
   ‌‌          ಕೊನೆಯದಾಗಿ ಕವನಗಳ Copyright ವಿಷಯದ ವಿಶೇಷ ಮಾಹಿತಿ ನನಗಿಲ್ಲ.ಅಲ್ಲದೇ ಅನುವಾದ ಸಂಗ್ರಹಕ್ಕೆ ' ವ್ಯವಹಾರ/ಮಾರಾಟ'ದ ಉದ್ದೇಶವಿಲ್ಲ. ಅದು ಶಬ್ದಶಃ ಅನುವಾದವೂ ಅಲ್ಲ. ನನ್ನೊಳಗಿನ ಕವನ ಪ್ಗರೀತಿಗೆಳ ಅನುವಾದವಾದಮೇಲೆ ಲಭ್ಯವಿದ್ದ
ಮಾಹಿತಿ ಬರೆದಿದ್ದೇನೆ.ಅಷ್ಟು ಸಾಕಾಗಬಹುದು ಎಂಬುದು ನನ್ನ ತಿಳುವಳಿಕೆ.

Sunday 20 November 2022

ಪ್ರೀತಿ ಅಂದರೆ...

ಒಂದು 
ಮೃದು ಮಧುರ ಕಾಳಜಿ ,
ಎದೆಗೂಡಿನಲ್ಲಡಗಿದ
ಸುಪ್ತ ಸಹಾನುಭೂತಿ,
ಪ್ರತಿನಿಮಿಷ, ಪ್ರತಿಗಳಿಗೆ, 
ಪ್ರತಿಕ್ಷಣದ ಅನುಭೂತಿ...

ಎರಡು ಹೃದಯಗಳ
ದೈವಾಲಿಂಗನ...
ಕೈಯ ಬಿಸುಪು,
ಬಿಸಿ-ಬಾಹುಬಂಧನ...

ಎರಡು ಬುದ್ಧಿ /ಹೃದಯ/ 
ಆತ್ಮಗಳ ಭಾವ ವಿನಿಮಯ...
ಸದಾ ಇರುವ,ಮೊಳೆವ, 
ಚಿಗುರುವ ಬೀಜ ತಳಿ..
ಈ ಭುಮಿಯನ್ನೇ ಸಗ್ಗವಾಗಿಸುವ 
ಇಬ್ಬರು ಸಂತೃಪ್ತ  ಜೀವಿಗಳಿಗೆ
ಆ ಭಗವಂತನಿತ್ತ 
ಅಮೃತ ಸದೃಶ ಬಳುವಳಿ...

ಮೂಲ:Patricia Waiter...

Saturday 19 November 2022

ಜಯಶ್ರೀ ದೇಶಪಾಂಡೆಯವರ ಮುನ್ನುಡಿ...

*ಭಾವವೆಂಬ ಹೂವು ಅರಳಿ*

ಕವಿತೆ ಎಂದರೆ ಹೃದಯದ ಆತ್ಮನಿವೇದನೆ. ಭಾವನೆಗಳ ಉಸಿರಾಟ!
ವಿಶ್ವಾದ್ಯಂತದ ಹೃದಯಗಳು ಮಿಡಿದು ಹೊರಹೊಮ್ಮಿಸಿದ ಭಾವನೆಗಳು ಪದ್ಯವಾಗಿ ತೆರೆದುಕೊಂಡಾಗ ಅದು ಬಿಡಿಸುವ ಅಸಂಖ್ಯ ಚಿತ್ರಗಳನ್ನು ನಮ್ಮ ಭಾಷೆಯಲ್ಲಿಟ್ಟು ಅಲಂಕರಿಸಿ ನಮ್ಮೆದುರು ತಂದು ಹರವಿದ್ದಾರೆ ಶ್ರೀಮತಿ ಕೃಷ್ಣಾ ಕೌಲಗಿ. 
"ಕವಿತೆ ಕಣ್ಣಿಗೆ ಬಿದ್ದೊಡನೆ ನನ್ನ  ಮನಸ್ಸಿನಲ್ಲಿ ಅದರ ರೂಪಾಂತರದ ಚಲನೆಯೊಂದು ಆರಂಭವಾಗಿಬಿಡುತ್ತಿತ್ತು.auto translate ಆಗಿಬಿಡುವ ಥರದಲ್ಲಿ. ಇನ್ನೊಬ್ಬರ ಲೇಖನಿಯ ಸಾಲುಗಳು ನನ್ನ ಬಳಿ ಬಂದು ನಿಂತಂತೆ  ಅನಿಸುತ್ತಿತ್ತು'' ಎನ್ನುವ ಈ ಪುಸ್ತಕದ ಲೇಖಕಿ ತಮ್ಮ ಅನುವಾದ/ಪುನರ್ರೂಪಣದ ಬಹಳಷ್ಟು ಕವಿತೆಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. 

"ನಮ್ಮ ದಾರಿಗೆ ಇರಲಿ 
ನಿಮ್ಮ ಟಾರ್ಚಿನ ಬೆಳಕು,
ಸರಿರಾತ್ರಿಗಿರುವಂತೆ ಚಂದ್ರಗಿಂಡಿಯ ತುಳುಕು"
         ಎಂದು ಕವಿ  ಗೋಪಾಲಕೃಷ್ಣ ಅಡಿಗರು ಉದ್ಗರಿಸಿದ್ದನ್ನು ಇಲ್ಲಿ ನೆನಪಿಸಿಕೊಂಡರೆ ಇಲ್ಲಿರುವ ಐವತ್ತು ಆಂಗ್ಲ ಕವಿತೆಗಳನ್ನು ಕೃಷ್ಣಾ ಅವರು ಇಂಗ್ಲಿಷ್ ನಿಂದ  ಕನ್ನಡಕ್ಕೆ ತಂದಿರುವುದು ಅವರ 'ಚಂದ್ರಗಿಂಡಿಯ ತುಳುಕಿ'ನಂಥ  ಮರುನಿರ್ಮಿತ ಕವನಗಳ ಬೆಳಕಿನ ಸ್ವರೂಪದಲ್ಲಿ! 

ಅನುವಾದ ಅಥವಾ ಭಾಷಾಂತರಕ್ಕಿರುವ ಮಿತಿಗಳು‌ trans creation ಅಥವಾ ಪುನರ್ರಚನೆಯಲ್ಲಿ ಅಷ್ಟಾಗಿ ಕಡ್ಡಾಯವಾಗಲಾರದು ಎನ್ನಬಹುದು.‌ ಮೂಲಪದಗಳಿಗಿರುವ ಹಲವು  ಅರ್ಥವ್ಯತ್ಯಾಸವನ್ನು ಇಲ್ಲಿ ತಮ್ಮ ರೂಪಾಂತರಣಕ್ಕೆ ಬೇಕಿರುವ ವಿನ್ಯಾಸದಲ್ಲಿ ಬಳಸಿದ್ದಾರೆ. 

ಇಲ್ಲಿನ ಐವತ್ತೂ ಕವನಗಳು ಹೊಮ್ಮಿಸುವ ಅರ್ಥ, ಭಾವ, ಲಯ, ಕಾಲಮಾನ, ಸಂವೇದನೆಗಳೆಲ್ಲ ಬೇರೆ ಬೇರೆ ಸ್ತರಗಳಿಂದ, ವ್ಯಕ್ತಿಗಳಿಂದ ಬಂದಿವೆ.
'ಅಸ್ಮಿತೆ' -ಬದುಕಿನ ನಿರೀಕ್ಷೆಗಳು , (ಸ್ಟೆಫಾನೀ ಬೆನೆಟ್ ಹೆನ್ರಿ)
 'ಪ್ರೀತಿ' ಯಾನೆ ಅನುಭಾವ,(ಗಾರ್ನೆಟ್ ಮಾತ್ಸೆರ) 
'ಮುಖಾಮುಖಿ'- ಜೀವಭಾವಗಳ ದ್ವಂದ್ವ, 'ಮಿಲನ'-(ಖಲೀಲ್ ಗಿಬ್ರಾನ್) 'ಬದುಕೆಂದರೆ'- ತೃಪ್ತಿಯಿಂದ ತುಂಬಿರುವ ಕೊನೆಗಳಿಗೆ(ರಾಲ್ಫ್ ರಾಡೋ ಎಮರ್ಸನ್)
'ಅಂತರ್ಮುಖಿ'- ಎರಿನ್ ಹ್ಯಾನ್ಸನ್. ಇವರೆಲ್ಲರ ಹಾಗೂ ಇನ್ನೂ ಅನೇಕರ ಭಾವಪ್ರಧಾನತೆಯ ಸಾಲುಗಳಿಗೆ ಕನ್ನಡದ ರೇಷ್ಮೆ ಹೊದಿಸಿದ್ದಾರೆ.
ಅಲ್ಲದೆ ರೊಮ್ಯಾಂಟಿಕ್ ಕವಿ ಎಂದು ಜನಜನಿತನಾಗಿದ್ದ ಲಾರ್ಡ್ ಬೈರನ್ನನ 'ಶೀ ವಾಕ್ಸ್ ಇನ್ ಬ್ಯೂಟಿ' ಕವಿತೆಯನ್ನು  ಬೆಳದಿಂಗಳ ಬಾಲೆಯಾಗಿಸಿ ಕಾವ್ಯದ ರಮಣೀಯತೆಗೆ ಹೊಳಪಿತ್ತಿದ್ದಾರೆ. 

ಐವತ್ತು ವಿಭಿನ್ನ ಕವಿತೆಗಳ ವೈವಿಧ್ಯಮಯ ರೂಪಗಳನ್ನು ಹೀಗೆ ಅವುಗಳದ್ದೇ ಇನ್ನೊಂದು ಸ್ವರೂಪಕ್ಕೆ ಮಾರ್ಪಡಿಸುವುದು ಒಂದು ಸಾಹಿತ್ಯಿಕ ಸಾಹಸವೇ ಹೌದು. 
ಇದನ್ನು ಮಾಡಿ ತೋರಿಸಿದ್ದಾರೆ ಕೃಷ್ಣಾ ಕೌಲಗಿ.
-ಜಯಶ್ರೀ ದೇಶಪಾಂಡೆ

Friday 18 November 2022

Life certificates copies...


[18/11, 11:08 am] Krishan Koulagi: Thank you for successfully submitting your digital life certificate. Your Pramaan id is 7058121431. You may view life certificate online at https://jeevanpramaan.gov.in/ppouser/login. Your Digital life certificate will be processed by your pension Disbursing Agency for release of pension. NICSI
[18/11, 11:28 am] Krishan Koulagi: Thank you for successfully submitting your digital life certificate. Your Pramaan id is 6030575778. You may view life certificate online at https://jeevanpramaan.gov.in/ppouser/login. Your Digital life certificate will be processed by your pension Disbursing Agency for release of pension. 


Wednesday 16 November 2022


ಬದುಕಿನಲ್ಲಿ,
ನೀನು ನಿರೀಕ್ಷಿಸುವಷ್ಟು
ನಿನ್ನನ್ನು ಯಾರೂ ಪ್ರೀತಿಸಲಾರರು...
ನಿನ್ನ ಒಳಗನ್ನು ತಾವಾಗೇ ಅರಿತು
ನಿನಗೆ ಬೇಕಾದಾಗ ಗಗನಕ್ಕೆ ನೆಗೆದು,  ನಕ್ಷತ್ರಗಳ ಹೆಕ್ಕಿ ತಂದು
ಕೈ-ಯಲ್ಲಿಡಲಾರರು...

ನೀ ಕಳೆದುಕೊಂಡ ಪಾದರಕ್ಷೆಯೊಂದ
ಹಿಡಿದು ಕುದುರೆ ಏರಿ
ನಿನ್ನ ಬಾಗಿಲಿಗಾವ 
ರಾಜಕುಮಾರನೂ ಬರುವನೆಂದು 
ನಿರೀಕ್ಷಿಸಬೇಡ...

ತಿಳಿದು ಕೋ...

ಅದಕ್ಕೆಂದೇ
ನಿನ್ನನ್ನು ನೀನು
ಅಗಾಧವಾಗಿ ಪ್ರೀತಿಸು...
ಸುದೈವದಿಂದ ಬದುಕಿನಲ್ಲಿ ಹೆಚ್ಚೇನಾದರೂ 
ಪ್ರೀತಿ ದಕ್ಕಿದ್ದೇ ಆದರೆ , 
ಅದು ನಿನ್ನ -
ಸುಂದರ ಕಿರೀಟಕ್ಕೆ
ಮತ್ತೊಂದು ಗರಿಯಷ್ಟೇ-
ಎಂದು ಭಾವಿಸು...

Tuesday 15 November 2022

ಪ್ರೀತಿ -

ಅಂದರೇನು?
ಅದೊಂದು ಅನುಭವವಾ? ಅನುಭಾವವಾ?

ಬದುಕಿನ ಭಾಗವಾ?
ಕೊಡು- ಕೊಳ್ಳುವಿಕೆಗೆ,-
ನೋವು-ನಲಿವಿಗೆ,-
ನೆನಪು- ನಿಂದನೆಗೆ,-

ಮೃದುವಾ? ಕಠೋರವಾ?
ಧ್ವನಿಯ ಏರಿಳಿತಗಳಂತೆ-
ಬಿಸುಪಾ? ತಂಪು- ತಂಪಾ?
ಮಳೆ ಧರೆಗಿಳಿದಂತೆ...

ನಾವು ಹೆಣೆದಿಟ್ಟ ಸಿಹಿ ನೆನಪುಗಳಾ?
ನಿನ್ನ  ಮೋಹಕ ಮುಗುಳ್ನಗೆಯಂತೆ..

ನಾನೇನೇ ನಾನಂದುಕೊಂಡರೂ
ಅದು ಬೆರಳು ತೋರಿಸುವದು
ನಿನ್ನ ಕಡೆಗೇನೇ...

ಏಕೆಂದರೆ,

ನಾನು ಕಂಡದ್ದು ನಿನ್ನನ್ನೇ...ನಿನ್ನೊಬ್ಬಳನ್ನೇ
ನದಿಯಂತೆ ಹರಿಯುವ,
ಮಳೆಯಂತೆ ಸುರಿಯುವ,
ಸರ್ವ ನೋವು ನಿವಾರಕಿಯಾದ ನಿನ್ನನ್ನೇ...ಆ ಕಾರಣಕ್ಕೇ
ನೀನು, 
ನೀನು ಮಾತ್ರ ನನ್ನವಳು...

Monday 14 November 2022

ಬೇಕಾಗಿದೆ ಒಂದು ಹಳೆಯ ಮಾಡೆಲ್...

ಕಂಡೊಡನೆ ತೊಡೆಯೇರುವ,
ಇಳಿಸಿದರೆ ಕಾಲ್ಗಳನಪ್ಪಿ ನಿಲ್ಲುವ,
'ಬೇಡ'- ಎಂದರೆ ಬಿಡದೇ ಕಾಡುವ
ಮಗುವೊಂದು ಬೇಕಾಗಿದೆ...

ಮಣ್ಣಿನಲಿ ಆಡುವ, ಬೀದಿಯಲಿ ಓಡುವ, ಕಣ್ಣರಳಿಸಿ ನೋಡುವ,
ಕನಸಿನಲೂ ಕಾಡುವ 
ಮಗುವೊಂದು ಬೇಕಿದೆ...

ಅಜ್ಜಿಯ ಕಥೆ ಕೇಳುವ, ಅಪ್ಪನ
ಹೆಗಲೇರುವ, ಸದಾ. ಅಮ್ಮನ ಸೆರೆಗೆಳೆಯುವ ಮಗುವೊಂದು
ಬೇಕಾಗಿದೆ...

ಕಂಡಲ್ಲಿ ಮರವೇರಿ
ಕಸುಗಾಯಿ ಕಚ್ಚಿ ಹಂಚಿಕೊಳ್ಳುವ, ಮಳೆಯಲ್ಲಿ ತಾ ನೆಂದರೂ
ಗೆಳೆಯನಿಗೆ ಕೊಡೆ ಹಿಡಿವ ಮಗುವೊಂದು ಬೇಕಾಗಿದೆ...

ಮುಗ್ಧತೆಯೇ ಮಗುವಾಗಿ 
ದಗ್ಧಮನಕೆ ತಂಪೆರೆದು, 
ಸ್ನಿಗ್ಧ ಮನವರಳಿಸುವಂಥ
ಮಗುವೊಂದು ಬೇಕಾಗಿದೆ...

ಬಾಲ್ಯ ಹರಯವಾಗದ,
ಹರಯ ಮುಪ್ಪೆನಿಸದ,
ಬೆಳೆದ ಮೇಲೂ ಮಗು ಮನದ
ಮಗುವೊಂದು ಬೇಕಾಗಿದೆ...








Friday 11 November 2022

ಅಂತರ್ಮುಖಿ...

ಗಾಳಿಯಲ್ಲಿ ತೇಲುವ 
ತರಗೆಲೆಯಂತೆ,
ನಾನು ಜನರ ಬದುಕಿನಿಂದ
ಒಳ- ಹೊರಗೆ ಆಗುತ್ತಲೇ ಇರುತ್ತೇನೆ,
ಹಲವುಬಾರಿ ಯಾರಿಗೂ
ಅರಿವಾಗದಂತೆ...
ಬಂಧ ಬಿಗಿಯಾಗುವ
ಮತ್ತೆ ಅದನು ಕಳೆದುಕೊಳ್ಳುವ  ನಿರಂತರ ಭಯ ನನಗೆ...
ಯಾರೊಂದಿಗೂ ಸ್ಪರ್ಧೆಗಿಳಿಯುವ
ಮನಸ್ಸಲ್ಲ ನನ್ನದು,
ಯಾವುದೇ ವಿಶೇಷ
ಗಮನ ನನ್ನ 'ಕಣ್ಣು ಕುಕ್ಕಿ'ಸುತ್ತದೆ...
ಯಾವಾಗಲೂ ಒಂದು 
ಮುಗುಳ್ನಗೆಯ ಮುಸುಕಿನಲ್ಲಿ
ಒಂದು ಪಕ್ಕಕ್ಕೆ ಸರಿದು 
ನನ್ನ ಪಾಡಿಗೆ ನಾನಿರುವದೇ
ನನ್ನ ಆಯ್ಕೆ.
ದಟ್ಟ ಸಂದಣಿಯಲ್ಲೂ
ಯಾರಿಗೂ ತಿಳಿಯದಂತೆ 
ನಾನೇ 'ನಾನಾಗಿರಬಲ್ಲೆ'-
ನಾ ಬಂದು ಹೋದದ್ದೇ
ಲೆಕ್ಕಕ್ಕಿಲ್ಲದಂತೆ...
ನಾನು ಹೋದದ್ದೂ ಯಾರನ್ನೂ ಕಿಂಚಿತ್ತೂ ಬಾಧಿಸದಂತೆ...
ಹೋದಮೇಲೂ
ಯಾರೊಬ್ಬರೂ ನೆನೆಸದಂತೆ,
ಒಂದೆರಡು ದಿನಗಳಲ್ಲೇ
ನೆನಪಿನಂಗಳದಿಂದ
ಜಾರಿ ಬಿಡುವಂತೆ...

Wednesday 9 November 2022

Till we meet again*

I will keep you safe deep in my heart...
You will live in me either as love, grief or pain
Be there, till we meet again...

My last gift was a book 
Still remember your excitement and child like look
The pages unread and crease you left will remain
So will the thoughts I want to share,
Accept them till we meet again

You helped anyone you could
Stepped up and kept promises more than anyone would
Like a tree takes a creeper in an embrace ,
Like a rock you stood by come sun or rain
I will pray for strength to do the same ,
Strengthen me till we meet again

The void you have left ,the gap that is formed 
We all struggle each day to not notice but carry on
But I will try so long as I can, to heal the pain
Correct me till we meet again

It became strangely simple since the day you were gone 
To solve a problem, to tell the right from wrong 
All I have to do is think what you would have done
I find my answer right there And I know how to move on
Guide me till we meet again

I hope you knew what you meant to me
Your love and kindness was all that people could see
Never had the right words to express so I refrain
Excuse me Till we meet again

You haven't left my mind for a second nor has the pain 
You still are my best friend , my teacher and my everything sane  Solace me till we meet again

And that you will forever remain
As my strength and guiding light, 
Trying to follow your path right
But only till we meet again.

(ಮೂಲ ಇಂಗ್ಲಿಷ ಕವನ : Sohani Hanchinamani...)

ಅನುವಾದ: ಶ್ರಿಮತಿ, ಕೃಷ್ಣಾ ಕೌಲಗಿ...


ನಾವು ಮತ್ತೆ ಭೇಟಿಯಾಗುವವರೆಗೆ...

ಅಪ್ಪಾ , ನೀನು- 
ನನ್ನ ಎದೆಯಾಳದಲ್ಲಿ ಪ್ರೀತಿಯಾಗಿ, ನೋವಾಗಿ,
ನೆನಪಾಗಿ, ಭದ್ರವಾಗಿ ಇರುವೆ...
ಅಲ್ಲೇ ಇರು, ಹಾಗೇ ಇರು
ನಾವು ಮತ್ತೆ ಭೇಟಿಯಾಗುವವರೆಗೆ...

ನಾ ನಿನಗೊಂದು ಕಾಣಿಕೆ ಕೊಟ್ಟೆ,
ನಿನ್ನ ಚಿಕ್ಕ ಮಗುವಿನ ಸಂತಸ,
ಕಣ್ಣ ಹೊಳಪು ಕಂಡು ಖುಶಿ ಪಟ್ಟೆ,
ಅದ ತೆರೆದು ನೋಡುವ 
ಮುನ್ನವೇ ನೀ ಹೊರಟುಬಿಟ್ಟೆ,
ಕಾದಿರಿಸುವೆ ನನ್ನೆಲ್ಲಾ ಅನಿಸಿಕೆಗಳ...
ನಾವು ಮತ್ತೆ ಭೇಟಿಯಾಗುವವರೆಗೆ...

ಕೇಳಿದವರಿಗೆ ಕೈನೀಡಿ ಹರಸಿದೆ...
ಕೊಟ್ಟ ಮಾತುಗಳ
ಹುಸಿ ಗೊಳಿಸದೇ ನಡೆಸಿದೆ...
ಆಸರೆ ಬಯಸಿದ ಬಳ್ಳಿಗಳಿಗೆ ಮರವಾದೆ...
ಬಿರುಗಾಳಿ, ಮಳೆಗೆ
ಕಲ್ಬಂಡೆಯಾದೆ...
ನಾನೂ 'ನೀನಾ'ಗಬೇಕು,
ನನ್ನ ಹೀಗೇ ಬಲಪಡಿಸುತ್ತಿರು , 
ನಾವು ಮತ್ತೆ ಭೇಟಿಯಾಗುವವರೆಗೆ...

ನಿನ್ನನುಪಸ್ಥಿತಿಯಿಂದಾದ ಖಾಲಿತನ,
ಅದರಿಂದುಂಟಾದ ಖಿನ್ನತೆ 
ಮೀರಿ ನಿಲ್ಲಲು,
'ನೀನಿರುವೆ 'ಎಂಬ
 ಭಾವದಲ್ಲೇ ಬದುಕಿಬಿಡಲು
ಶತಾಯಗತಾಯ ಪ್ರಯತ್ನ ನಡೆದಿದೆ.
ಅದು ಸಫಲವಾಗುವಂತೆ ಮಾಡು, 
ನಾವು ಮತ್ತೆ ಭೇಟಿಯಾಗುವವರೆಗೆ...

ನೀನು  'ಹೋದಾ'ಗಿನಿಂದ 
ಸವಾಲುಗಳನೆದುರಿಸುವದು, 
ಸರಿ/ ತಪ್ಪು ಗಳ ಗುರುತಿಸುವದು
ಕಠಿಣವೇನೂ ಅನಿಸಿಲ್ಲ...
ನಿನ್ನಂತೆ/ ನಿನ್ನದೇ ರೀತಿಯಲ್ಲಿ
ಚಿಂತಿಸಿದರೆ ಆಯಿತಲ್ಲ , 
ಸಮಸ್ಯೆಯೇಯಿಲ್ಲ,
ಹೀಗೇ ಇನ್ನು  ಮುಂದೂ ನಡೆಸು,
ನಾವು ಮತ್ತೆ ಭೇಟಿಯಾಗುವವರೆಗೆ...

ನೀನು ನಮಗೆಲ್ಲ ಏನೆಂಬುದು 
ನಿನಗೂ ಗೊತ್ತು...
ನಿನ್ನ ಪ್ರೀತಿ/ ಅಕ್ಕರೆಗಳು
ನಮಗೂ  ಗೊತ್ತು... ಅವುಗಳನ್ನು ಪದಗಳಲ್ಲಿ ಹೇಳುವಲ್ಲಿ ಮಾತ್ರ
ಸೋಲುತ್ತೇವೆ...
ಕ್ಷಮಿಸಿಬಿಡು, 
ನಾವು  ಮತ್ತೆ ಭೇಟಿಯಾಗುವ ವರೆಗೆ...

ನೀನು  ನಮ್ಮನ್ನಗಲಿದ  ನೋವು ಸುಲಭಕ್ಕೆ ಶಮನವಾಗದು...
ನಿನ್ನ ಸ್ನೇಹ/ ಮಾರ್ಗದರ್ಶನಗಳ ಹೊರತು ಏನೂ ನಡೆಯದು-
ಅದು ಹಾಗೇ ನಡೆಯಲಿ,
ನಾವು ಮತ್ತೆ ಭೇಟಿಯಾಗುವವರೆಗೆ... 

ನೀನಿಲ್ಲದೆಯೂ  
'ನಮ್ಮ ಜೊತೆಯಲ್ಲೇ' ಇರುವೆ...
ನಿನ್ನಿಂದಲೇ ಬಲಪಡೆದು, 
ನೀ ತೋರಿದ ಬೆಳಕಲ್ಲೇ ನಡೆದು,
ನಾನಿದ್ದು ಬಿಡುವೆ-
ನಾವು ಮತ್ತೆ ಭೇಟಿಯಾಗುವವರೆಗೆ...

               
ಅನುವಾದ ನನ್ನ ಹುಚ್ಚು.ಒಂದು ತರಹದ ಮೋಹ.ಶಾಲೆ/ ಕಾಲೇಜು ಗಳಲ್ಲಿ ಓದುವಾಗ, ಶಿಕ್ಷಕಿಯಾಗಿ 
ಕೆಲಸದಲ್ಲಿದ್ದಾಗ ಏನೇ ಓದಿದ್ದು ಮೆಚ್ಚುಗೆಯಾಗಲೀ ಅದು ಬೇರೆ ಭಾಷೆಯಲ್ಲಿದ್ದರೆ ಮೊದಲು ಕನ್ನಡಕ್ಕೆ ಇಳಿಸುತ್ತಿದ್ದೆ.ಅದು ಎಷ್ಟು ಚಟವಾಗಿ ಬಿಟ್ಟಿತೆಂದರೆ ಇಂಗ್ಲೀಷ್/ ಹಿಂದಿಯಲ್ಲಿ ಓದಿದ ಎಲ್ಲವೂ ಓದುತ್ತಲೇ ಮನಸ್ಸಿನಲ್ಲಿ auto translate ಆಗುವಷ್ಟು...ಆದರೆ ನನ್ನದು ಶಬ್ದಾನುವಾದವಲ್ಲ( word to word  translation) ಭಾವಾನುವಾದ, - ಮೆಚ್ಚಿದ ಕವನದ ಉತ್ತಮ ಆಶಯದ ಮೂಲಕ್ಕೆ ಧಕ್ಕೆ ಬರದಂತೆ, ನಮ್ಮ ಭಾಷೆಯ ಭಾವಕ್ಕೆ ಸರಿಹೋಗುವಂತೆ
ಮಾರ್ಪಡಿಸಿ ಕವನದ ರೂಪ ಕೊಡುವದು.ಆರಿಸುವಾಗಲೂ ಮೂಲ ಕವಿ ಯಾರು? ಅವನು ಪ್ರಸಿದ್ಧಿ/ ಜನಮನ್ನಣೆ ಪಡೆದವನೇ ಎಂಬುದಕ್ಕಿಂತ ಅವನ ಕವನ ಕೊಡುವ ಸಂದೇಶವೇನು? ಅದು ಓದುಗರ ಭಾವನೆಗಳನ್ನು ಎಷ್ಟರಮಟ್ಟಿಗೆ ಒಳಗೊಳ್ಳುತ್ತದೆ, ಓದುಗರಿಗೆ ಅದೆಷ್ಟು relate ಆಗುತ್ತದೆ ಎಂಬುದು ನನಗೆ ಮುಖ್ಯವಾಗುತ್ತದೆ. ಅದಕ್ಕೇ ಅದನ್ನ translation ಅನ್ನುವದಿಲ್ಲ- trans- creation ಅನ್ನುತ್ತೇನೆ.ಅನುವಾದವಲ್ಲ ,ಒಂದು ರೀತಿಯಲ್ಲಿ ರೂಪಾಂತರ ಅನ್ನ ಬಹುದೇನೋ...
              ಇನ್ನು ಸಾಧ್ಯವಾದಷ್ಟೂ ಆಯ್ದ ಕವನಗಳ ಮೂಲ ಹುಡುಕಿ
ಅವರ ಹೆಸರು/ ಫೋಟೋ ಹಾಕಿದ್ದೇನೆ.ಕೆಲವುಗಳ ಮಾಹಿತಿ ಲಭ್ಯವಿಲ್ಲದ ಕಾರಣಕ್ಕೆ unknown ಎಂದು ಕಾಣಿಸಿದ್ದೇನೆ. ನನಗೆ ತಿಳಿದ ಹಾಗೆ ಮಾಹಿತಿ ಸರಿಯಿದೆ.ಒಂದು ವೇಳೆ ಯಾರಿಗಾದರೂ ಏನಾದರೂ ಲೋಪ ಕಂಡರೆ, ನನಗೆ ತಿಳಿಸಿದರೆ ಸೂಕ್ತ ತಿದ್ದುಪಡಿ ಮಾಡುತ್ತೇನೆ.
   ‌‌          ಕೊನೆಯದಾಗಿ ಕವನಗಳ Copyright ವಿಷಯದ ವಿಶೇಷ ಮಾಹಿತಿ ನನಗಿಲ್ಲ.ಅಲ್ಲದೇ ಅನುವಾದ ಸಂಗ್ರಹಕ್ಕೆ ' ವ್ಯವಹಾರ/ಮಾರಾಟ'ದ ಉದ್ದೇಶವಿಲ್ಲ.ಅದು ಕವನಗಳ ಶಬ್ದಶಃ ಅನುವಾದವೂ ಅಲ್ಲ. ನನ್ನೊಳಗಿನ ಕವನ ಪ್ರೀತಿಗೆ ಸಂದ/ ಸಲ್ಲಿಸಿದ ಗೌರವ ಅಷ್ಟೇ ಹೊರತು ಬೇರೇನಿಲ್ಲ.ಅದಲ್ಲದೇ ಅನುವಾದವಾದಮೇಲೆ ಲಭ್ಯವಿದ್ದ
ಮಾಹಿತಿ ಬರೆದಿದ್ದೇನೆ.ಅಷ್ಟು ಸಾಕಾಗಬಹುದು ಎಂಬುದು ನನ್ನ ತಿಳುವಳಿಕೆ.  
   ‌‌‌‌           ಆಗಾಗ ಬರೆದ, ಬರೆಯುತ್ತಿ ರುವ ಕವನಗಳನ್ನು ಸಾಕಷ್ಟು ಸ್ನೇಹಿತರು
ಮೆಚ್ಚಿದ್ದಾರೆ ,ಪ್ರತಿಕ್ರಯಿಸುತ್ತಾರೆ. ಅದುವೇ ಬಹುಮಾನ ನನಗೆ ಎಲ್ಲರಿಗೂ ನಮಸ್ಕಾರ...


Tuesday 8 November 2022

ಅ- ಭಯ...

ಸಗ್ಗದಲ್ಲಿಯೇ ಕುಳಿತು
ನಿನ್ನನ್ನು ನೋಡುತಿಹೆ..
ಹಿಗ್ಗುವೆನು-ಕುಗ್ಗುವೆನು ನಿನ್ನ ಜೊತೆಗೆ..
ನಿನ್ನಿಂದ ನಾನೆಂದೂ
ದೂರ ಹೋಗಿಲ್ಲೆಂದು
ಸಂಜ್ಞೆಗಳ ಕಳುಹುತಿಹೆ ನಿನ್ನ ಬಳಿಗೆ...

ನೀನು ನಕ್ಕಾಗೊಮ್ಮೆ
ನಾನೂನು ನಗುತಲಿಹೆ
ಮಲಗಿರಲು ಪಕ್ಕದಲೆ ಬಂದುಬಿಡುವೆ...
ಯಾವುದೇ ಕಾರಣಕೆ
ಕಣ್ಣು ಹನಿಗೂಡಿದೊಡೆ
ಎನ್ನ ತೋಳ್ಗಳ ಬಳಸಿ ಬಂಧಿಸಿಡುವೆ...

ಒಂದಿಲ್ಲ ಒಂದುದಿನ
ನಾನು ಬರುವೆನು ಎಂದು
ನೀನು ಕಾಯುವದೆನಗೆ ಮೊದಲೆ ಗೊತ್ತು...
ನೀನೆಂದೂ ಏಕಾಕಿ ಅಲ್ಲ, 
ಜೊತೆಯಲೆ ಇರುವೆ
ಇದ ತಿಳಿಸಬಯಸುವೆನು ಮೂರು ಹೊತ್ತು...

ನೀನಿಲ್ಲದಾ ಬಾಳು
ನನಗೇಕೆ ಬೇಕೆಂದು
ಯಾವತ್ತೂ ತರಬೇಡ ಮನದ ಒಳಗೆ...
ಇಲ್ಲಿ, ಈ  ಸಗ್ಗದಲಿ
ನಾನು ಸುಖದಿಂದಿರುವೆ
ಬಂದಾಗ ನೋಡುವಿಯಂತೆ ನನ್ನ ಬಳಿಗೆ....

ನಿನಗೆ ದಕ್ಕಿದ ಬಾಳು
ನಿನಗಿತ್ತ ಬಳುವಳಿ
ಮನಸಾರೆ ಬದುಕಿ ಬಾ ನಗುನಗುತಲಿ...
ನಿನ್ನ ಪ್ರತಿ ಉಸಿರಲ್ಲು
ನನ್ನದೂ ಇದೆಯೆಂದು
ಮತ್ತೊಮ್ಮೆ ಬದುಕುವೆನು ಹೊಸ ಹುರುಪಲಿ..

( ಕನ್ನಡ ರೂಪ: ಶ್ರೀಮತಿ,ಕೃಷ್ಣಾ ಕೌಲಗಿ)

Sunday 6 November 2022

My monthly medicine package.

Monthly medicine kit...
1) Glucomet 500mg- 60.

2) Telma- 40/5.
30.

3) Rozavel - 10 mg.- 30.

4) Neurobion forte- 30.

5) Revital ( women). 
1 bottle.

6) Mixtard -50.insulin pack.
One box of five.(with needles)

7) Vicks Vaporub- one bottle.(big)

8) Ascoril cough syrup ( suger free)
2. Bottles.

9) Acu check- 
Blood test strips + 12 needles.

10) Flucort - C .cream...

11) Thyronorm- 75 mg. (Once in three months).

12) Refresh tears- Eye drop...

Saturday 5 November 2022

ಸರಳ, ಸಾತ್ವಿಕ ಬದುಕು
ಅಪರಾಧವಲ್ಲ,
ಅದಕ್ಕಾಗಿ ನಾಚಿಕೆ ಪಡಬೇಕಿಲ್ಲ... ಯಾರನ್ನೋ
ಏನನ್ನೋ ಕಳೆದುಕೊಳ್ಳುವದು
ಬದುಕಿನ‌ ಕರಾಳತೆಯಲ್ಲ...
ಅಂಥದರಲ್ಲಿ
ನಿಮ್ಮತನವನ್ನು ಗುರುತಿಸಿ, ಉಳಿಸಿಕೊಂಬುದು
ಸಣ್ಣ ಸಾಧನೆಯೇನೂ ಅಲ್ಲ...

ನೀವೆಷ್ಟು ದೊಡ್ಡವರು?
ನಿಮ್ಮ ವಯಸ್ಸೇನು ? ಬೇಕಿಲ್ಲ...
ಉಸಿರಿದ್ದರೆ ಸಾಕು,
ಮನಸು ಹಸಿರಿದ್ದರೆ ಸಾಕು...
ಬದುಕು ಬೊಗಸೆ ತುಂಬಿ ಕೊಡುತ್ತದೆ.
ಹಿಡಿಯಷ್ಟು ಸ್ವಾತಂತ್ರ್ಯ/ ಉತ್ಸಾಹ...
ಇದ್ದರೆ ಸಾಕು, ಸ್ವರ್ಗ ತೆರೆಯುತ್ತದೆ...

ಬದುಕೆಂದರೆ ಎರಡಲಗಿನ ಕತ್ತಿ
ಇದ್ದಂತೆ...
ಗಳಿಗೆಗೆ ಖುಶಿ, ಆನಂದ ,ತೃಪ್ತಿ-
ಬದುಕು ತಂಗಾಳಿ...
ಮರುಗಳಿಗೆ ನೋವು, ವೇದನೆ, ಕಷ್ಟ-
ಆಗ ಅದು ತೀಕ್ಷ್ಣ ಬಿರುಗಾಳಿ...

ಯಾರಿಗೂ, ಯಾವುದಕ್ಕೂ,
ಏನನ್ನೂ ಇಲ್ಲಿ ಹೋಲಿಸಲಾಗದು...
ಅಕಾರಣವಾಗಿ ಸೋಲಿಸಲಾಗದು...
ಅವರೆದೆಯ ನೋವು
ಅವರಿಗೇನೇ ಗೊತ್ತು,
ನಮ್ಮದೇನಿದ್ದರೂ ನಮ್ಮ ಸೊತ್ತು...
ನಮ್ಮ ಯುದ್ಧ ಕೇವಲ ನಮ್ಮದು...
ನಮ್ಮ ಗೆಲವು/ ಸೋಲು ನಮ್ಮದೇ...
ಉಳಿದವರ ಚಿಂತೆ ನಮ್ಮದಲ್ಲ...
ನಮ್ಮ ಬದುಕು ಸಫಲವೋ/ಅಸಫಲವೋ ಚಿಂತೆ ಅವರದಲ್ಲ...

Friday 4 November 2022

ನಿಮ್ಮಾತ್ಮವೇ ದಣಿದು ಹೋದರೆ,
ಮನಸ್ಸು ಏನನ್ನೂ ಸ್ವೀಕರಿಸುವದಿಲ್ಲ...
ಬದುಕು,ಪ್ರೀತಿ, ಸಾಹಸ,ಎಲ್ಲವೂ ಅರ್ಥಕಳೆದುಕೊಳ್ಳುತ್ತವೆ...
ತಿಂದನ್ನ ಕರಗುವದಿಲ್ಲ...

ಬದುಕಿನ ಆ ಬ್ರಹತ್ ಶೂನ್ಯತೆಗೆ ಸುಲಭ ಪರಿಹಾರ ಸಿಗುವದಿಲ್ಲ,
ಗಳಿಸಿಟ್ಟ ಏನೆಲ್ಲವನ್ನೂ ತೆತ್ತರೂ ಆರೋಗ್ಯ, ಆರಾಮ, ನೆಮ್ಮದಿ
ಕೊಳ್ಳಲಾಗುವದಿಲ್ಲ...
ಆನಂದದ ಬಳ್ಳಿಗೆ ಮತ್ತೆ ಮತ್ತೆ
ನೀರೆರೆಯದ ಹೊರತೂ
ಕುಬೇರನ ಆಸ್ತಿಯನೆಲ್ಲ ವ್ಯಯಿಸಿದರೂ
ಬದುಕಿನ‌ ಬಳ್ಳಿ ಹೂ ಬಿಡುವದಿಲ್ಲ...

ಅಷ್ಟೇ ಏಕೆ,
ನಿದ್ದೆಯೂ ಕೂಡ ನೆಮ್ಮದಿ ತರುವದಿಲ್ಲ...
ಆದರೆ, ಒಂದು‌ಮಾತು...
ಹಾಗೆಂದು,
ಹತಾಶರಾಗಬೇಕಿಲ್ಲ.
ನಿಮ್ಮಾತ್ಮ‌ ದಣಿದಾಗ,
ದಣಿದು ಬೇಸತ್ತಾಗ,
ನಿಮ್ಮ ಸುತ್ತುಮುತ್ತಲೇ
ಹೇರಳವಾಗಿ ,ಉಚಿತವಾಗಿ,
ಎಲ್ಲೆಲ್ಲೂ ಪರಿಹಾರಗಳು
ಕಾಣಸಿಗುತ್ತವೆ...
ಕಣ್ಣು ತೆರೆದು ಒಮ್ಮೆ ನೋಡಿ,
ದಿನನಿತ್ಯದ ಸರಳ, ಸಹಜ, ಸುಂದರ ಸಂಗತಿಗಳಲ್ಲೇ ಮನಸ್ಸು ನೆಟ್ಟು ನೋಡಿ...
ನಂಬಲಾಗದ ಖುಶಿ ನಿಮ್ಮದಾಗಬಹುದು.
ಬದುಕು ಮರಳಿ ಚಂದವಾಗಬಹುದು...

Thursday 3 November 2022

ಬದುಕಿನಲ್ಲಿ ಎಲ್ಲವೂ
ಸುಂದರ ಕತೆಯೇ ಆಗಬೇಕಿಲ್ಲ...
ಸಿಕ್ಕ ಪ್ರತಿ ಸಜ್ಜನ ವ್ಯಕ್ತಿಯೂ
ಮನಸ್ಸು ಗೆದ್ದ ಮಾತ್ರಕ್ಕೆ
ಅಲ್ಲಿಯೇ ಶಾಶ್ವತವಾಗಿ ನೆಲೆಸಬೇಕಿಲ್ಲ -
ಹಲವು ಬಾರಿ, ಹಲವರು
ನಮ್ಮ ಬದುಕಿನಲ್ಲಿ ಪ್ರೀತಿಸುವದನ್ನು
ಕಲಿಸಲೆಂದೇ ಬರಬಹುದು...

ಕೆಲವೊಮ್ಮೆ,
ಯಾರನ್ನು ಯಾವ ಕಾರಣಕ್ಕೆ 
ಹೆಚ್ಚು ಹಚ್ಚಿಕೊಳ್ಳಬಾರದು,
ಹತ್ತಿರ ಬಿಟ್ಟುಕೊಳ್ಳಬಾರದು,
ನಮಗೆ ನಾವೇ ಮಾರಕವಾಗಬಾರದು
ಎಂಬುದನ್ನೂ ಕಲಿಸುತ್ತವೆ...

ಕೆಲವೊಮ್ಮೆ ,
ಕೆಲವರು ನಮ್ಮನ್ನು ಬಿಟ್ಟು ಹೋಗುತ್ತಾರೆ, 
ಹೆದರಬೇಕಿಲ್ಲ...
ಅದೂ ಬದುಕಿನ ಭಾಗವೇ...
ಅವರಿಲ್ಲದಿದ್ದರೂ
ಅವರಿಂದ ಕಲಿತ
ಬದುಕಿನ ಪಾಠಗಳು
ನಮ್ಮೊಡನೆ ಇರುವವರೆಗೂ 
ಅವರು ನಮ್ಮೊಂದಿಗೆ ಇದ್ದಂತೆಯೇ...
ಚಿಂತಿಸಬೇಕಿಲ್ಲ...

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...