Saturday, 3 December 2022

ನಾನೂ ಧಾರವಾಡದಲ್ಲಿ ಅವರ ಅಷ್ಟಾವಧಾನ ಕಾರ್ಯಕ್ರಮಗಳನ್ನು ನೋಡಿದ್ದೇನೆ.ಒಂದಂತೂ ನಮ್ಮ school ನಲ್ಲೇ ಆಯೋಜಿತವಾಗಿತ್ತು. ಸಂಸ್ಕೃತದಲ್ಲಿ ನನಗೆ ಹೆಚ್ಚಿನ ಜ್ಞಾನ ವಿಲ್ಲದಿದ್ದರೂ ಯಾವುದೇ ಪದಗಳನ್ನು ಕ್ಷಣಾರ್ಧದಲ್ಲಿ ಹೊಂದಿಸಿ/ ಪೋಣಿಸಿ ಪದ್ಯ ರಚಿಸಿ ಹೇಳುವ ಅವರ ಜಾಣ್ಮೆಗೆ
ತೆರೆದ ಬಾಯಿ ಮುಚ್ಚದೇ ನೋಡುತ್ತಿದ್ದ ನೆನಪು.ಆ ಅಪ್ರಸ್ತುತ ಅಧಿಕ ಪ್ರಸಂಗಿಯ ತಲೆ- ಬುಡವಿಲ್ಲದ ಪ್ರಶ್ನೆಗಳಂತೂ ನಮ್ಮ ತಲೆಯನ್ನು ಗಿರಿಗಿರಿ ತಿರುಗಿಸಿಬಿಟ್ಟರೆ ಅವಧಾನಿಗಳು ಎಲ್ಲಿಂದಲೋ ಕೊಂಡಿ
ಸೃಷ್ಟಿಸಿ ಧಿಡೀರ್ ಉತ್ತರ ಕೊಡುತ್ತಿದ್ದರು
ರಘು ಅಪಾರವರ  ' ಚೌ- ಚೌಪದಿ- ಯಲ್ಲಿ ಎಲ್ಲಿಂದಲೋ ಹೆಕ್ಕಿ ತೆಗೆದ ನಾಲ್ಕು ಪದಗಳನ್ನು ಬಳಸಿ ಬರೆಯಬೇಕಾದ ಆಶು- ಕವನಗಳಿಗೆ 
ಇವರ ಅಷ್ಟಾವಧಾನ ನೋಡಿದ ಅನುಭವದ ಆಧಾರದ ಮೇಲೆಯೇ
 ಬರೆದ ಕವನಗಳನ್ನು ಅದೇ ಹೆಸರಿನಲ್ಲಿ
ಪ್ರಕಟಿಸಿದ್ದು ನನ್ನ ಮೊದಲ ಪ್ರಯತ್ನ...
ಇದೀಗ 'ಜ್ಞಾನ- ಗಣಿ'ಗಳು ಅರವತ್ತು ಸಂವತ್ಸರಗಳ ಒಂದು ಸುತ್ತು ಮುಗಿಸಿ
ಎರಡನೇ ಸುತ್ತು ಓಡಲು ಅಣಿಯಾಗಿದ್ದಾರೆ.ಅವರಿಗೆ ಆಯುರಾರೋಗ್ಯ/ ದೀರ್ಘಾಯುಷ್ಯ
ನೀಡಿ ವಿಶೇಷವಾಗಿ ಆಶೀರ್ವದಿಸಲು ಆ ದೇವರಲ್ಲಿ ಪ್ರಾರ್ಥನೆ...

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...