Friday 23 February 2024

ಎಪ್ಪತ್ತರಿಂದ ಎಂಬತ್ತು - ಹೀಗಿದ್ದರೆ ಗತ್ತು...

* ನನ್ನಮ್ಮ/ಅಪ್ಪ / ಅಣ್ಣ ತಮ್ಮಂದಿರು/ ಹೆಂಡತಿ ಮಕ್ಕಳು ಅಂತ ಎಲ್ಲರನ್ನೂ ಪ್ರೀತಿಸಿ/care ಮಾಡಿ ಆಗಿದೆ.ಇದೀಗ ನನ್ನನ್ನೇ ನಾನು ಪ್ರೀತಿಸತೊಡಗಿದ್ದೇನೆ...

*ನಾನು Globe ಅಲ್ಲ...ಇಡೀ ಜಗತ್ತಿನ 
ಭಾರ ಹೊತ್ತು ನಿಂತಂತೆ ನನಗೆ ಅನಿಸಬೇಕಿಲ್ಲ...

* ಹಣ್ಣು- ಕಾಯಿಪಲ್ಯ ಮಾರುವಂಥ ಚಿಲ್ಲರೆ ವ್ಯಾಪಾರಿಗಳ ಬಳಿ ನಾನೀಗ ಚೌಕಸಿ ಮಾಡುವುದಿಲ್ಲ.ಎಂಟಾಣೆ-ಒಂದು ರೂಪಾಯಿಯಿಂದ ನನಗೇನೂ ವ್ಯತ್ಯಾಸವಾಗುವುದಿಲ್ಲ.ಆದರೆ ಇಂಥ ಒಂದೊಂದೇ ರೂಪಾಯಿ ಅವರ ಮಕ್ಕಳ ಶಾಲೆಯ ಫೀಯ ಭಾರ ಕಿಂಚಿತ್ತಾದರೂ ಉಳಿಸಬಲ್ಲದು.
 
*ವಿಶೇಷ ಸಂದರ್ಭಗಳಲ್ಲಿ ಮನೆಗೆಲಸದವರಿಗೆ ಸ್ವಲ್ಪು ಹೆಚ್ಚೇ 'ಖುಶಿ' ಕೊಡುತ್ತೇನೆ...ಅವರ ಮುಖದ ಮೇಲಿನ ನಗೆಯ ಬೆಲೆ ಆ ದುಡ್ಡಿಗಿಂತ ಹೆಚ್ಚು...

*ಯಾರಾದರೂ ಹಿರಿಯರು ತಮ್ಮ ವಿಷಯ ಪದೇ ಪದೇ ಹೇಳಿದರೂ ನಾನವರನ್ನು ತಡೆಯುವುದಿಲ್ಲ.ಅವರ ನೆನಪಿನಂಗಳದಲ್ಲಿ ದಕ್ಕುವ ಖುಶಿಯಿಂದ ಅವರನ್ನು ವಂಚಿಸಲು
ಮನಸ್ಸಾಗುವುದಿಲ್ಲ...

* ಯಾರಾದರೂ ತಪ್ಪು ಮಾಡುತ್ತಿದ್ದಾರೆ ಎಂದು ತಿಳಿದರೂ ಅವರನ್ನು ತಿದ್ದುವ ಗೋಜಿಗೆ ಹೋಗುವುದಿಲ್ಲ.ಅದು ನನ್ನ ಕೆಲಸವೂ ಅಲ್ಲ.ಅಷ್ಟಕ್ಕೂ ಪರಿಪೂರ್ಣ ತೆಗಿಂತಲೂ ಮನಸ್ಸಿನ ಶಾಂತಿ ಹೆಚ್ಚು
ಹೆಚ್ಚು ಮುಖ್ಯ...

*ಒಳ್ಳೆಯ ಕೆಲಸಕ್ಕೆ ಸ್ವಲ್ಪ ಹೆಚ್ಚಾಗಿಯೇ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ.ಅದು ಅವರನ್ನು ಖುಶಿ ಪಡಿಸಿದರೆ ನನಗೂ ಮನಸ್ಸು ಅರಳುತ್ತದೆ...ಅದರಲ್ಲಿ ನಾನು ಕಳೆದುಕೊಳ್ಳುವುದೇನೂ ಇಲ್ಲ...

*ಯಾರಾದರೂ ಅನಾರೋಗ್ಯಕರ ಸ್ಪರ್ಥೆಗೆ ಇಳಿದರೆ  ಸರಿದು ನಿಂತು ಅವರಿಗೆ ದಾರಿಮಾಡಿಕೊಡುತ್ತೇನೆ... ಹೇಗ್ಹೇಗೋ ಗೆದ್ದು ಬೀಗುವುದು ನನಗಾಗದ ವಿಷಯ...

*ನನ್ನ ಭಾವನೆಗಳನ್ನು ಮುಕ್ತವಾಗಿ ಪ್ರದರ್ಶಿಸುತ್ತೇನೆ...ಭಾವನೆಗಳಿಲ್ಲದೇ ಮಾನವೀಯ ಮೌಲ್ಯಗಳಿಲ್ಲ...

*ನನ್ನ ಸಂಬಂಧಗಳು/ನನ್ನ ಅಹಮಿಕೆ ಗಳ ನಡುವೆ ಆಯ್ಕೆ ಬಂದರೆ ನನ್ನ ಆಯ್ಕೆ ಸಂಬಂಧಗಳೇ...ನನ್ನನ್ನು ಕೊನೆಯಲ್ಲಿ ಒಂಟಿಯಾಗಿಸುವ 'ಅಹಂ' ನನಗೆ ಬೇಡ...

*ನನ್ನ ಸಂತೋಷವೀಗ ನನ್ನದೇ ಜವಾಬ್ದಾರಿ...ಕಾರಣ ನನ್ನ ಸಂತೋಷ ಕ್ಕೆ ಬೇಕಾದುದನ್ನೆಲ್ಲ ಮಾಡಲು ನಾನು
ಸದಾ ಸಿದ್ಧಳಿ/ನಿದ್ದೇನೆ...
               ಏಕೆಂದರೆ ಸಂತೋಷವಾಗಿ ರುವುದೆಂದಿಗೂ ವೈಯಕ್ತಿಕ ಆಯ್ಕೆ...

Wednesday 21 February 2024

ಬಿ.ವಿ.ಭಾರತಿ...            
  ‌ನೆನಪುಗಳು ಕೆಲವೊಮ್ಮೆ ಮಧುರವೆನ್ನಿಸಿದರೆ, ಮತ್ತೆ ಕೆಲವೊಮ್ಮೆ ಶಿಕ್ಷೆಯೂ ಅನ್ನಿಸಿಬಿಡುತ್ತದೆ. ಆದರೆ ಚೆಂದದ ನೆನಪುಗಳು ಮಾತ್ರ ನನಗಿರಲಿ ಅನ್ನಲಾಗದು. ಬದುಕೆನ್ನುವ ಪ್ಯಾಕೇಜ್ ಡೀಲ್‌ ಸೂಪರ್ ಮಾರ್ಕೆಟ್‌ಗಳಲ್ಲಿ ಸಿದ್ಧ ಪಡಿಸಿಟ್ಟ ಈರುಳ್ಳಿ ಪ್ಯಾಕೆಟ್‌ನ ಹಾಗೆ. ಎಲ್ಲ ಸೈಜ಼್‌ನ ಗಡ್ಡೆಗಳ ನಡುನಡುವೆ ಒಂದೆರಡು ಕೊಳೆತವನ್ನೂ ಸೇರಿಸಿಬಿಟ್ಟಿರುತ್ತಾರೆ. ಮನೆಗೆ ಹೋಗಿ ತೆರೆದ ನಂತರವೇ ಅದು ಅರಿವಿಗೆ ಬರುವುದು. ಬದುಕಲ್ಲಿಯೂ ದೇವರು ಹೀಗೆಯೇ ಮಾಡಿರುತ್ತಾನೆ. ಹಲವು ನೋವಿನ ನೆನಪುಗಳು, ಹಲವು ಸಂಭ್ರಮದ ನೆನಪುಗಳು, ಹಲವು ವಿಷಾದದ ನೆನಪುಗಳು, ಹಲವು ದುಃಖದ ನೆನಪುಗಳು...

ಕೃಷ್ಣಾ ಮಾ ಎಂದೇ ನಾನು ಕರೆಯುವ ಕೃಷ್ಣಾ ಕೌಲಗಿಯವರ 'ಹಾಯಿ ದೋಣಿಯ ಪಯಣ'ದಲ್ಲಿನ ಎಲ್ಲ ಬರಹಗಳೂ ವಿವಿಧ ನೆನಪುಗಳು, ವಿವಿಧ ಅನಿಸಿಕೆಗಳು, ಸಂದರ್ಭಗಳು, ಸಂಭ್ರಮಗಳನ್ನು ಕುರಿತು ಬರೆದವು. ಮಾಗಿದ ಮನಸ್ಸಿನ ಬರಹಗಳು. ಏನೆಲ್ಲ  ಹೇಳುವಾಗಲೂ ಅವರದ್ದು ತಣ್ಣನೆಯ ದನಿ. ಬದಲಾದ ಬದುಕಿನ ಬಗ್ಗೆ ಬರೆಯುವಾಗಲೂ ಆಕ್ರೋಶವಿಲ್ಲ, ಚೀರಾಟವಿಲ್ಲ... ಒಪ್ಪಿಕೊಳ್ಳುವ ಸ್ಥಿತಪ್ರಜ್ಞತೆಯಷ್ಟೇ. ಅಲ್ಲಲ್ಲಿ ಸಣ್ಣ ವಿಷಾದ ತಲೆದೋರಿದರೂ, ಅದನ್ನು ಕೊಡವಿ ಮುಂದೆ ಸಾಗಿ ಯಾವುದೋ ಆಧುನಿಕ ಕಾಲದ ಬದಲಾವಣೆಯ ಬಗ್ಗೆ ಬೆರಗಿನಿಂದ ಹೇಳಲಾರಂಭಿಸುತ್ತಾರೆ! 

ಇಡೀ ಪುಸ್ತಕದಲ್ಲಿ ಅತ್ಯಂತ ನೋವಿನ ಬರಹವೆಂದರೆ ಅವರು ಓದಿ ಟೀಚರ್ ಆಗುವ ಸಂದರ್ಭ. ಇಡೀ ಪುಸ್ತಕದಲ್ಲಿನ ಎಲ್ಲ ಬರಹಗಳು ಸೇರಿ ಒಂದು ತೂಕವಾದರೆ, ಇದೊಂದು ಬರಹದ್ದೇ ಬೇರೊಂದು ತೂಕ. ಅದನ್ನು ಬರೆಯುವಾಗಿನ ಅವರ ಸಂಯಮ ನೀವು ಅವರ ಹಾಯಿ ದೋಣಿಯ ಪಯಣದಲ್ಲಿ ಜೊತೆಯಾದರಷ್ಟೇ ತಿಳಿಯುತ್ತದೆ...

ಭಾರತಿ ಬಿ ವಿ

Tuesday 20 February 2024

'ಹಾಯಿ ದೋಣಿ'ಯ ಪಯಣ'ಕ್ಕೆ ಮೊದಲು...
       ಇದ್ದಕ್ಕಿದ್ದಂತೆ ಗೊತ್ತಿಲ್ಲದೇ ಬಿರುಗಾಳಿಯೆದ್ದು ಹಾಯಿದೋಣಿಯ ಪಥ ದಿಕ್ಕೆಟ್ಟರೆ ಅದನ್ನು ತಡೆಯಲಾಗುವುದಿಲ್ಲ. ಏಕೆಂದರೆ ಹಾಯಿಯನ್ನು ಪೂರಕ್ಕೆ ಪೂರ ಬಿಚ್ಚಿಡದಿದ್ದರೆ ಅದಕ್ಕೆ ಬಿರುಗಾಳಿಗೆ ತನ್ನನ್ನು ಒಡ್ಡಿಕೊಳ್ಳಲೂ ಗೊತ್ತಾಗುವುದಿಲ್ಲ, ಅದರಿಂದ ತಪ್ಪಿಸಿಕೊಳ್ಳುವುದೂ ಗೊತ್ತಿರುವುದಿಲ್ಲ. ಸಾವಧಾನದಿಂದಿದ್ದರೆ ಈ ಎಲ್ಲ ಏರುಪೇರುಗಳಿಗೂ ಅದು ತನ್ನನ್ನು ತಾನು ಒಡ್ಡಿಕೊಂಡೂ ಗಮ್ಯವನ್ನು ಮುಟ್ಟಲು ಸಾಧ್ಯ.. 
      'ಜೀವನ' ಎಂದರೂ ಹಾಗೇ... ಉಸಿರು ನಿಲ್ಲೋ ತನಕ ಮುಗಿಯದ ಪಯಣ.ಅದೃಷ್ಟ ಶಕ್ತಿಯೊಂದು ಅದನ್ನು ನಿರ್ದೇಶಿಸುತ್ತಿರುತ್ತದೆ. ಹಾಗಾಗಿ ಈ ಪಯಣ ಎಂದರೆ ಹಾಯಿ ದೋಣಿಯ ಪಯಣವಿದ್ದಂತೆ-ಅದು ಒಯ್ದತ್ತಲೇ ನಮ್ಮ ದಾರಿ...
      ಈ ಜೀವನದಲ್ಲಿ ಎಲ್ಲ ರೀತಿಯ ವ್ಯಕ್ತಿಗಳ ಪರಿಚಯವಾಗುತ್ತದೆ. ಒಳ್ಳೆಯತನ, ಕೆಟ್ಟತನಗಳ ಅರಿವಾಗುತ್ತದೆ. ಒಮ್ಮೊಮ್ಮೆ ನಮ್ಮಲ್ಲಿ ಅತ್ಯುತ್ಸಾಹವು ತುಂಬಿ ತುಳುಕಿದರೆ ಇನ್ನೊಮ್ಮೆ ನಿರುತ್ಸಾಹವೇ ಹಾಸಿ ಹೊದೆಯುವಷ್ಟು ಮಟ್ಟಿಗೆ ಮುಸುಕುತ್ತದೆ. ಹೀಗೆ ಎಲ್ಲ ಮುಖಗಳ ಈ ಅನುಭವಗಳ ಒಟ್ಟು ಸಂಗಮವೇ  ಈ ಜೀವನ ಯಾನ... 
        ‌ ಮಕ್ಕಳು ಓದಿದರೆ ನೆನಪು ಮನದಲ್ಲಿ ಬೇರೂರುವಂತೆ, ಯುವಜನರಿಗೆ ವರುಷಗಳು ಕಳೆದಂತೆ ತಾಯಿ-ತಂದೆಯರ ಸಂಸ್ಕಾರದ ನೆನಪುಗಳು/ ತಾಯಿಗೆ ತನ್ನ ಮಕ್ಕಳ ತುಂಟಾಟಗಳು, ಆಪ್ತರಲ್ಲಿ ಜಗಳ- ಮನಸ್ತಾಪವಾದಾಗ ಅವರೊಂದಿಗೆ ಕಳೆದ ಮಧುರ ಕ್ಷಣಗಳು-ಇಂಥ ನೆನಪುಗಳ ಸಂಪುಟವನ್ನು ತೆರೆದಾಗ ಎಂಥ ಜೀವನವೂ ಕುತೂಹಲವೆನ್ನಿಸುತ್ತದೆ.
    ಒಮ್ಮೆ ಆ ಅನುಭವಗಳನ್ನು ದಾಟಿ ಬಂದೆವಾದರೆ ಆ ನೆನಪುಗಳು ಸವಿ ಸವಿ ನೆನಪುಗಳು.. ಅಂದಿನ ಕಹಿ ನೆನಪುಗಳೂ ಕೂಡ  ಇಂದಿನ ದಾರಿದೀಪಗಳಾಗಿಬಿಡುತ್ತವೆ. ಆಗೆಲ್ಲ
ಯಾವುದೇ ಭಾವನಾ ತೀವ್ರತೆಗೆ ಸಿಲುಕದೇ ಹೊರಗೆ ನಿಂತುಕೊಂಡೇ ಅವುಗಳನ್ನು ನೆನೆಯಬಹುದು...

      ಹೀಗೆಯೇ ನೆನೆಯುತ್ತಾ ಹೋದ
ನೆನಪುಗಳ ಸಂಕಲನ ' ಹಾಯಿ ದೋಣಿಯ ಪಯಣ'. ಇದು ಶ್ರೀಮತಿ ಕೃಷ್ಣಾ ಕೌಲಗಿಯವರ ಮೂರನೇಯ 
ಲಘು ಲಹರಿ ಬರೆಹಗಳ ಸಂಗ್ರಹ...
' ನೀರ ಮೇಲೆ ಅಲೆಯ ಉಂಗುರ' ಹಾಗೂ ' ತುಂತುರು ಇದು ನೀರ ಹಾಡು' ಇವೆರಡೂ ಮೊದಲಿನವು...ಪ್ರಸ್ತುತ ಪುಸ್ತಕದ ಮೊದಲ ಲೇಖನ “ಹೊಸ ವರ್ಷದ ಹೊಸ್ತಿಲಲ್ಲಿ ನಿಂತು-" ಲೇಖಕಿಗೆ ತಾವು ಶಿಕ್ಷಕಿಯಾಗಿದ್ದಾಗಿನ ಒಂದು ನೆನಪು. ಹೊಸ ವರ್ಷದ  ಶುಭಾಶಯಗಳ ವಿನಿಮಯ, ಸಿಹಿಯನ್ನು ಹಂಚುವುದು, ಪಟಾಕಿ ಹೊಡೆಯುವುದು ಎಂಬ ಇಂದಿನ ಟ್ರೆಂಡ್‌ಗಳ ಬಗ್ಗೆ ಹೇಳುತ್ತ ಲೇಖಕಿ ವಿಷಯ ವಿಸ್ತರಿಸುತ್ತ ಹೋಗುತ್ತಾರೆ... ತಮ್ಮ ಬಾಲ್ಯದಲ್ಲಿಯ: ಹೊಸವರ್ಷದ ಹಬ್ಬದ ಆಚರಣೆಗೆ ಹೋಲಿಸಿಕೊಳ್ಳುತ್ತ ಯುಗಾದಿ ಎಂದರೆ ಎಣ್ಣೆ ಮಜ್ಜನದಿಂದ ಪ್ರಾರಂಭಗೊಂಡು ಮನೆಬಾಗಿಲಿಗೆ ಛಂದದ ರಂಗೋಲಿ, ತಳಿರು ತೋರಣ, ಸಿಹಿಯೂಟ, ಹೊಸಬಟ್ಟೆ, ದೇವರ ದರ್ಶನ, ಪಂಚಾಂಗ ಶ್ರವಣಗಳ ಹೈಲೈಟ್ಸ್ ಲೇಖನದ ತಿರುಳು. ನಂತರದ ದಿನಗಳಲ್ಲಿ ಹೊಸವರ್ಷದ ಗದ್ದಲ, ಕೇಕ್‌ ಕತ್ತರಿಸುವುದು, ಅಷ್ಟೇ ಅಲ್ಲ, ಕುಡಿತ, ಕುಣಿತಗಳು ಇವುಗಳನ್ನು ನೆನೆದಾಗ - ಸಭ್ಯ ಸಂಪ್ರದಾಯದಿಂದ ಎಷ್ಟು ದೂರ ಬಂದಿದ್ದೇವೆ ಎಂದೆನ್ನಿಸುವುದು ತೀರ ಸಹಜವೇ. ಕೊನೆಯಲ್ಲಿ ಅವರವರಿಗೆ ಇಷ್ಟಬಂದಂತೆ ಹಬ್ಬಗಳನ್ನು ಆಚರಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಲೇಖಕಿ ವಿಡಂಬನಾತ್ಮಕವಾಗಿ ಜೋಕಿಸುತ್ತಾರೆ.
      ತಮ್ಮ ಗಡಿಬಿಡಿಯ ಸ್ವಭಾವದ ಬಗ್ಗೆ  ಹೇಳುತ್ತಾ ಸಮಯಕ್ಕೆಸರಿಯಾಗಿ  ಎಲ್ಲವನ್ನೂ ಮಾಡಬೇಕೆಂಬ ಆತುರ ದಲ್ಲಿ ಅನೇಕ ಎಡವಟ್ಟುಗಳೂ ಆಗುತ್ತಿದ್ದುದುಂಟೆಂದು ನೆನೆಯುವಾಗ
ಓದುಗರಿಗೆ ತಮ್ಮದೇ ಅನುಭವಗಳು
ನೆನಪಾದರೆ ಅಚ್ಚರಿ ಪಡಬೇಕಿಲ್ಲ.

      ಹಳ್ಳಿಗಳಲ್ಲಿಯ ಪರಸ್ಪರ ಆತ್ಮೀಯ ಸಂಬಂಧಗಳ ಬಗ್ಗೆ ತಿಳಿಸುತ್ತಾ ತಾವು ಆಚರಿಸುತ್ತಿದ್ದ ದೀಪಾವಳಿಯ ಸಂಭ್ರಮವನ್ನು ನೆನೆಯುವಾಗ ಈಗಿನ ಕುಟುಂಬಗಳಲ್ಲಿ ಜನರ ಸಂಖ್ಯೆ ಕಡಿಮೆಯಾಗಿರುವುದರಿಂದಾಗಿ  ಎಲ್ಲ ಹಬ್ಬಗಳ ಆಚರಣೆಗಳು ಕಿಂಗ ಸೈಜಿನಿಂದ ನ್ಯೂಕ್ಲಿಯರ್‌ ಸೈಜಿಗಿಳಿದಿದೆ ಎನ್ನುವ ಅಭಿಪ್ರಾಯ ಅವರದು...
       ‌‌ 
          ಸುಖವೆಂದರೆ ಐಷಾರಾಮಿ ಜೀವನ ಎಂದು ತಿಳಿದಿರುವ ಈಗಿನ ಯುವಪೀಳಿಗೆಗೆ ಹಿರಿಯ ನಾಗರಿಕರನ್ನು ಇತ್ತೀಚಿನ ದಿನಗಳಲ್ಲಿ ಮಾತನಾಡಿಸುವ ವರೇ ಇರುವುದಿಲ್ಲದುದರಿಂದ ಅವರು ಮಾತನ್ನೇ ಮರೆತಂತಾಗಿ ಮಾನಸಿಕ ವಾಗಿ ಕುಗ್ಗಿ ಮರೆವಿನ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂಬ ಎಚ್ಚರಿಕೆ ಯನ್ನೂ ರವಾನಿಸಲು ಲೇಖಕಿ ಇಲ್ಲಿ ಮರೆಯುವುದಿಲ್ಲ.ಇಂಥ ಕೆಲವನ್ನು 
ಹೇಳುವುದಕ್ಕಿಂತ ಓದಿ ಅನುಭವಿಸಿ ದರೇ ಚೆನ್ನ!ಏಕೆಂದರೆ ಜೀವನವೆಂದರೇನೇ ಅನುಭವಗಳು
ತುಂಬಿದ ಕಣಜ...ಸ್ಥಿತ್ಯಂತರಗಳು ಬದುಕಿನ ಅನಿವಾರ್ಯ ಭಾಗ. ಈಗಂತೂ ಅದರ ವೇಗ ಕಲ್ಪನೆಗೂ ನಿಲುಕದ್ದು.ತಮ್ಮ ಅರಿವಿಗೆ ಹೊಸದಾದ ವಿಷಯಗಳಲ್ಲಿ ಹಿರಿಯರೂ ತಾವೇ ಸೋತು ತಲೆಬಾಗಿ ಮಕ್ಕಳ ಮಾತಿಗೆ ಒಪ್ಪಿಕೊಳ್ಳಲೇಬೇಕು ಎನ್ನುವ ಅವರು ಅದು ಅವಶ್ಯವಷ್ಟೇ ಅಲ್ಲ, ಸಧ್ಯದ ಮಟ್ಟಿಗೆ ಬುದ್ಧಿವಂತಿಕೆಯೂ ಹೌದು ಎನ್ನುವ ನಿಲುವನ್ನು ತಾಳುತ್ತಾರೆ.
      
        
‌          ಇಂದು ಹೀಗೆ ತಮ್ಮಂಥವರನ್ನೂ ಮೊದಲ್ಗೊಂಡು ಬಹುಜನರ ಸಮಸ್ಯೆ. ಬದುಕಿನ‌ ಧಾವಂತದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಸುತ್ತಲೂ ಜನರಿದ್ದೂ ಒಂಟಿಯಾಗುವ ನಮಗೆ ಬೇಡದ ಭಾವಗಳು ಮನಸ್ಸಿನಲ್ಲಿ ದಟ್ಟವಾಗಿ ಮೋಡಗಟ್ಟುತ್ತಾ ಹೋಗುತ್ತವೆ. ತನ್ನ ಯೋಗ್ಯತೆ ಮೀರಿ ಸಾಂದ್ರತೆ ಹೆಚ್ಚಾದಾಗ ಹೊರಬಂದು ಸುರಿದು ಬರಿದಾಗಲು ತಹತಹಿಸುತ್ತವೆ. ಆ ಗಳಿಗೆಗೊಂದು ಜೊತೆ ಕಿವಿ ಬೇಕು. ಇಡಲು ಹೆಗಲು ಬೇಕು. ಒಂದಿಷ್ಟು ಆರ್ದ್ರ ಹೃದಯದ ಸಿಂಚನ ಬೇಕು ಎನ್ನುವ ಅವರ ಮಾತು ಎಲ್ಲರೂ ಒಪ್ಪಿಕೊಳ್ಳುವ ಸತ್ಯ. 
    ‌‌    ಈ ಬದುಕು ಎಲ್ಲರಿಗೂ ಏನನ್ನೋ ಕೊಡುತ್ತದಾದರೂ ಏನೋ ಒಂದನ್ನು ಕಸಿದುಕೊಂಡೇ ಕೊಡುತ್ತದೆ. ಏಕೆಂದರೆ ಬದುಕೆಂದರೆ ಹೋಟೆಲ್ ಟೇಬಲ್ ಅಲ್ಲವಲ್ಲ, ಯಾರನ್ನೋ ಕೈ ಮಾಡಿ ಕರೆದು Instant orders ಕೊಟ್ಟು ಇಲ್ಲಿ ಏನನ್ನೂ ಪಡೆಯಲಾಗುವುದಿಲ್ಲ... ಅದೊಂದು ಸದಾ ಹರಿವ ನದಿಯ ರೀತಿ. ಒಮ್ಮೆ ಗತಿ ಪಡೆದುಕೊಂಡರಾ ಯಿತು. ತನ್ನ ಮರ್ಜಿಯ ಮೇಲೆ ತನ್ನದೇ ಆದ ವೇಗದಲ್ಲಿ, ತನ್ನದೇ ರೀತಿಯಲ್ಲಿ ಹರಿಯುತ್ತಿರುತ್ತದೆ,'ಥೇಟ್ ಹಾಯಿ ದೋಣಿಯ'ದೇ ತರಹ.. ಇಂಥ ಪಯಣದ ನಡುವೆಯೇ ಜೀವನದ ಪಾಠಗಳೂ ಸಿಗುತ್ತವೆ. ಎಲ್ಲದಕ್ಕೂ ಮೈಯೊಡ್ಡಿ ಈಸಬೇಕು... ಎಂಬ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವದಕ್ಕೆ
ಈ ಸಂಗ್ರಹದಲ್ಲಿ ಅನೇಕ ಲೇಖನಗಳಿವೆ.ಹೀಗೆ ಹಲವು
ವಿಭಿನ್ನ  ನೆನಪುಗಳನ್ನೊಳಗೊಂಡ ಹೊತ್ತಿಗೆಗೆ ಮುನ್ನುಡಿ ಬರೆಯಲು ಖುಶಿ ಎನ್ನಿಸಿತು. ಧನ್ಯವಾದಗಳು ಕೃಷ್ಣಾ ಅವರೆ. ಇಂಥ ಅನೇಕ ಸುಂದರ ಅನುಭವಗಳನ್ನು ಹೊತ್ತ ಇನ್ನೂ ಅನೇಕ ಅನುಭವಗಳ ಸಂಚಿಯೇ
ಮುಂದೆಯೂ ಓದುಗರೆದುರು ಬಿಚ್ಚಲಿ ಎಂಬ ಹಾರೈಕೆಯೊಂದಿಗೆ, ನಿಮ್ಮೆಲ್ಲರ ವಿಶ್ವಾಸಿ,                        
ಮಾಲತಿ ಮುದಕವಿ
ಧಾರವಾಡ- ೭...

Sunday 18 February 2024

ನಾಳೆ ಹೇಗೆಂಬುದನು ನಾನರಿಯೆ... ‌‌‌‌ 
       ‌‌‌‌‌     
          B.A.ಆದಕೂಡಲೇ ನೌಕರಿಗೆ
ಸೇರಿದವಳಲ್ಲ ನಾನು.ಮೂರು ಮಕ್ಕಳ
ಜವಾಬ್ದಾರಿ ವಹಿಸಿಕೊಂಡು ಪ್ರತಿಶತ
ನೂರರಷ್ಟು ಗ್ರಹಿಣಿಯಾಗಿದ್ದೆ ಹತ್ತು ವರುಷ ಕಾಲ...ಮೈ ತುಂಬ ಕೆಲಸ.ದೊಡ್ಡ ಮನೆಯ ನಿರ್ವಹಣೆ. ಬರುವವರು/ಹೋಗುವವರ ನಡುವೆ ಪೂರ್ತಿಯಾಗಿಯೇ ಕಳೆದುಹೋಗಿದ್ದೆ.
ಅಂಥದರಲ್ಲಿ ಮಕ್ಕಳು " ಅವ್ವ ,ಬಾಯಿಲ್ಲೆ ನಿಂಗ ಮಜಾ ತೋರಸ್ತೇನಿ "- ಅಂತ ಬೆಳಗಿನ ಹೊತ್ತು ಕರೆದರೆ ಹೋಗಲಾಗುತ್ತಿರಲಿಲ್ಲ .ಏನೋ ಹೇಳಿ ಸಾಗಹಾಕುವುದು/ ಅವುಗಳು ಮುಖ ಮುದುಡಿಸಿಕೊಂಡು ಕೂಡುವುದೂ ಮಾಮೂಲಾಗಿತ್ತು.ಆಗ ಅವರ ಅಪ್ಪಾಜಿ ಹತ್ತಿರವಿದ್ದರೆ ಪರಿಸ್ಥಿತಿ
ಸಂಭಾಳಿಸಿ ಮಕ್ಕಳ ಜೊತೆ ಹೋಗಿ
ಅವರ ಜೊತೆ ಕೆಲ ನಿಮಿಷಗಳಿದ್ದು
ಅವರ ಮುಖ ಅರಳುವಂತೆ ಮಾಡುತ್ತಿದ್ದುದೂ ಇತ್ತು." ಹಾಗೆ ಮಕ್ಕಳ ಕುತೂಹಲ/ ಉತ್ಸಾಹ ತಣ್ಣಗಾಗಿಸಬಾ ರದು.‌ಕೆಲವೇ ನಿಮಿಷಗಳಲ್ಲಿ ಏನೂ
ಕಳೆದುಕೊಳ್ಳುವುದು ಇರುವುದಿಲ್ಲ.
ಕೆಲಸ ಬಿಟ್ಟು ಹೋಗು, ಅವರು ಹೇಳುವುದನ್ನು ಕೇಳಿಸಿಕೋ.ತಕ್ಷಣ ಮೆಚ್ಚುಗೆಯ ಎರಡು ಮಾತನಾಡು. ಅದು ಅವರ ವ್ಯಕ್ತಿತ್ವಕ್ಕೆ ಸಹಕಾರಿ"-  ಎಂದು ನನಗೂ ಒಂದು class ತೆಗೆದುಕೊಳ್ಳುತ್ತಿದ್ದರು.ಆದರೆ
ಒಂಬತ್ತೂವರೆಗೆ ಎಲ್ಲರೂ ಮನೆ ಬಿಡುವುದು ಅನಿವಾರ್ಯವಾದಾಗ
ಅದು ಕಷ್ಟ ಸಾಧ್ಯ, ಬಹಳವೇ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂಬುದೂ
ಅವರಿಗೆ ಗೊತ್ತಿತ್ತು...ಕೆಲಸದ ಗಡಿಬಿಡಿ ಯಲ್ಲಿ ರೇಗಿದರೆ ತಟ್ಟನೇ ಹಾಜರಾಗಿ ಮಕ್ಕಳನ್ನು ಸಮಾಧಾನ ಮಾಡುವುದು ಅವರ ಕೆಲಸ..." ನೋಡು, ಮಕ್ಕಳನ್ನು ಅಮ್ಮ- ಅಪ್ಪ ಇಬ್ಬರೂ ಒಂದೇ ಸಲ ಬಯ್ಯಬಾರದು.ಕಂಗಾಲಾಗುತ್ತವೆ, ಅಸಹಾಯಕರಾಗುತ್ತಾರೆ.ನಾನು ಬಯ್ದಾಗ ನೀನು ಅವರ ಪರ ನಿಲ್ಲು. ಹಾಗೇ ನೀನು ಏನಾದರೂ ಅಂದರೆ ನಾನು ಅವರನ್ನು ಸಂಭಾಳಿಸುತ್ತೇನೆ. ಅದು ಮಕ್ಕಳಿಗೆ ಬಲ ಕೊಡುತ್ತದೆ.
ನಮ್ಮ ನಮ್ಮಲ್ಲಿಯೇ ಇದು ಸದಾ ನೆನಪಿರಲಿ.ಮಕ್ಕಳ ಆತ್ಮ ವಿಶ್ವಾಸಕ್ಕೆ
ಕುಂದಾಗುವ ಹಾಗೆ ಯಾವ ಕಾರಣಕ್ಕೂ
ನಾವು ನಡೆದುಕೊಳ್ಳುವುದು ಬೇಡ..."

              ಇಂಥ ಸಣ್ಣಪುಟ್ಟ ದಿನನಿತ್ಯದ ವಿಷಯಗಳಿಗೂ ಗಮನ ಕೊಡಲೇ ಬೇಕಾದುದೂ ಹಿರಿಯರಿಲ್ಲದ ಮನೆಯ ಪ್ರಥಮ ಆದ್ಯತೆಯಾಗಿತ್ತು...ಬಹುಶಃ ಎಂಬತ್ತು- ತೊಂಬತ್ತರ ದಶಕಗಳಲ್ಲಿ
ಮಧ್ಯಮ ವರ್ಗದ ಮನೆಗಳಲ್ಲಿ ಇದು
ಸಾಮಾನ್ಯವಾಗಿ ಕಂಡು ಬರುವ ಪ್ರತಿ
ಮನೆಯ ದೃಶ್ಯವಾಗಿತ್ತು...

                ಇದೆಲ್ಲ ಈಗ ನೆನಪಾಗಲು
ಮೊನ್ನೆ ರೈಲಿನಲ್ಲಿ ನಡೆದ ಒಂದು ಘಟನೆ
ಕಾರಣ.ಕೆಲ ದಿನಗಳ ಹಿಂದೆ ' ಚನ್ನಮ್ಮ Express' ನಲ್ಲಿ ಧಾರವಾಡಕ್ಕೆ ಹೋಗಬೇಕಿತ್ತು‌.ನಮ್ಮ ಬೋಗಿಯಲ್ಲಿ
ಒಂದು ಚಿಕ್ಕ ಕುಟುಂಬವೂ ಇತ್ತು.
ಬೆಳಿಗ್ಗೆ ಐದು ಗಂಟೆಗೆ ಹುಬ್ಬಳ್ಳಿ station
ಗೆ ಬರುತ್ತಲೇ ಅಪ್ಪ ತನ್ನ ಮಗನನ್ನು
ಎಬ್ಬಿಸಲು ಸುರುವಿಟ್ಟುಕೊಂಡರು. ಎದ್ದು ಹಾಸಿಗೆ ಮಡಚಿ,Shoes ಧರಿಸಿ
ಸಾಮಾನುಗಳನ್ನು ಬಾಗಿಲ ಬಳಿ ಸರಿಸಿಟ್ಟು ಸಾವಧಾನದಿಂದ ಇಳಿಯುವ ಯೋಜನೆ ಅವರದು.ಹದಿಮೂರು- ಹದಿನಾಲ್ಕರ ಅವರ ಮಗ ಏಳಲು ತಯಾರಿಲ್ಲ.'ಏಳು - ಎಂದು ಅಪ್ಪನ ಒತ್ತಾಯ.' ಮಲಗಲಿ ಬಿಡಿ'- ಅಂತ ಅಮ್ಮನ ಜೋರು.ಇದರ ಸಂಪೂರ್ಣ ಲಾಭ ಪಡೆದ ಮಗ ಎದ್ದಿದ್ದರೂ ಕೆಳಗೆ ಬರದೇ Mobile ನಲ್ಲಿ ಮುಳುಗಿದ್ದ. ಕೊನೆಗೆ ಅಪ್ಪ ಅವನನ್ನು ಕೆಳಗಿಳಿಸಿ ಅವನ ಕಾಲನ್ನು ತನ್ನ ತೊಡೆಯ ಮೇಲೆ ತೆಗೆದುಕೊಂಡು,Shoes ಹಾಕತೊಡಗಿ ದರೂ ಅವ್ವ- ಮಗ ತುಟಿ ಪಿಟ್ಟೆನ್ನಲಿಲ್ಲ. ಅಷ್ಟೇ ಅಲ್ಲ ಒಂದು ಕಾಲಿಗೆ ಬೂಟು ಹಾಕಿಯಾದ ಮೇಲೆ, mobile
ನೋಡುತ್ತಲೇ ಮಗ,ಅದನ್ನು ಕೆಳಗಿಳಿಸಿ
ಇನ್ನೊಂದು ಕಾಲನ್ನು ಅಪ್ಪನ‌ ತೊಡೆಯ
ಮೇಲೆ ಧಪ್ ಎಂದು ಬೀಸಿ ಹಾಕಿದ. ಇಷ್ಟಾದರೂ ಅಮ್ಮ ತನ್ನದೇನೋ ಮಾಡುವದರಲ್ಲಿ ಒಂದೇ ಒಂದು ಶಬ್ದವಾಡಲಿಲ್ಲ.ಆದ ದಿಗ್ಭ್ರಮೆಯಲ್ಲಿ ಉಳಿದ ವೇಳೆ ಕಳೆದು ಧಾರವಾಡ station ನಲ್ಲಿ ನಮ್ಮ ಪಾಡಿಗೆ ನಾವಿಳಿದು ಹೋದದ್ದಷ್ಟೇ ನಾವು ಮಾಡಿದ್ದು...

              ಒಂದೋ ಎರಡೋ ಮಕ್ಕಳು, ಯಾವುದಕ್ಕೂ ಕೊರತೆ ಕಾಡುವ ಮಾತೇಯಿಲ್ಲ,ಸಮೃದ್ಧತೆಯೇ ಸುಖ ಎಂಬ ತಪ್ಪು ಭಾವನೆ...ಜೊತೆಗೆ ಸ್ವಲ್ಪು
ಹೆಚ್ಚಾಗಿಯೇ ಕೊಟ್ಟ ಸ್ವಾತಂತ್ರ್ಯ- ಪ್ರೀತಿ...

          ಇವೆಲ್ಲವುಗಳ ಒಟ್ಟು ಪರಿಣಾಮ ವಿರಬಹುದಾ?ಇದೇ ಮುಂದುವರಿದರೆ
ನಾಳೆ ಹೇಗೋ?!!
   ‌‌‌          




Wednesday 14 February 2024

ಆಟ ಮುಗಿದು ಹೋದ ಮೇಲೆ...

-ಇವತ್ತಿನ foot ball ಏನಾಯ್ತು?
- ನಾವು ಗೆದ್ವಿ...
- ಎಷ್ಟು ಗೋಲಿನಿಂದ?
- ಒಂದು...
- ಮೊದಲೆಲ್ಲ, 5-0 6-0 ಅಂತಿದ್ದೆಲ್ಲೊ...
- ಅಜ್ಜಿ, ಹಂಗ ಗೆದ್ರ ಚಲೋ ಆಟ ಅಲ್ಲ ಅದು.ಎದುರುಗಡೆ‌ team ಭಾಳ weak ಇದ್ರ ಅಂಥ result ಬರತದ. One sided ಆಟ ಆಗತದ. Cricket match ನಾಗ ಅದsss ವರ್ಷ ಬಂದ ಟೀಮ್ ಗೂ/ವಿಶ್ವಕಪ್ ಗೆದ್ದ ಟೀಮ್ಗೂ ಆಟ ಆದ್ಹಂಗ...ಎರಡೂ ಟೀಮ್ ಸಮ ಸಮ ಇರ್ಬೇಕು.ಒಬ್ರು ಗೋಲ್ ಮಾಡಲಿಕ್ಕೆ ನೋಡ್ತಿದ್ರ ,ಇನ್ನೊಂದು ಟೀಮ್ ಅದನ್ನ ತಡಿಬೇಕು.ಆ ಗೋಲ್
ಆಗಗೊಡಬಾರ್ದು, ಅದು ತುರುಸಿನ ಆಟ.ಒಂದ ಸಲ ಇವರ ' ಗೋಲ್ ಆದ್ರ
Next time ಅವರ ಗೋಲ್ ಆಗ್ಬೇಕು. ಅದು ಖರೆ ಆಟ...ಸಮಬಲದ ಟೀಮು ಜೊತೆ  ಆಡಿದ್ಹಾಂಗ...ಒಂದ ಟೀಮ್ ಆಡಿದ್ರ ಉಪಯೋಗಿಲ್ಲ
- penalty ಒಳಗ ಆದ್ರ?
- ಅದೂ ಚಲೋ ಅಲ್ಲ.ಆಗ result 50/50 ಇರ್ತದ.ಕೊನೆತನಕ tension.
- ಅಂದ್ರ ಕೊನೆ ತನಾ ಸೆಣಸಾಟ  ಇರ್ಬೇಕು ಅನ್ನು...
- ಹಾಂ...
           ಸುಮಾರು ಹತ್ತು ವರ್ಷಗಳಿಂದ
ಬೆಂಗಳೂರು foot ball clubನ ಆಟಗಾರನಾದ ಮೊಮ್ಮಗನಿಂದ ಇವತ್ತು ಕಲಿತ ಒಂದು ಬದುಕಿನ ಪಾಠವಿದು. ಬದುಕಿನಾಗ ಕೊನೆತನಕಾ ಕಲಿಯೋದು ಮುಗಿಯೂದಿಲ್ಲ. ಸಾಯೂತನ- ಅಷ್ಟ ಯಾಕ- ಹೆಂಗ ಸಾಯ್ಬೇಕು ಅನ್ನೋದನ್ನ ಸಹಾ ಕಲಿಯೋದಿರತದ...
           ಬದುಕೊದಂದ್ರನೂ ಒಂದು ಆಟsssನ...ನಮ್ಮ ಆಟಕ್ಕೆ  ಪರವಾಗಿ- ವಿರೋಧವಾಗಿ ಆಟಗಾರರು ಇದ್ದೇ ಇರ್ತಾರ.ಕೆಲವರು ನುರಿತ ಆಟಗಾರ ರಾದ್ರ ಇನ್ನೂ ಅನೇಕರು ನಮ್ಮ ಆಟಕ್ಕ ಅಡ್ಡಗಾಲು ಹಾಕೋರು.ಆಟಗಳ ತಂತ್ರಗಳನ್ನು ತಿಳಿದು,ಹುಶಾರು ತಪ್ಪದೇ
ಎದುರಾಳಿಗಳ ಪಟ್ಟುಗಳನ್ನು ಅರಿತು
ಆಡಿದರ ಗೆಲ್ಲಬಹುದು...ಎದುರಾಳಿ
ಅಸಮರ್ಥರಿದ್ದರೆ ಆಟದ ಉತ್ಸಾಹ ಇರೂದೆ ಇಲ್ಲ...ಸ್ಪರ್ಧೆಯೊಳಗ ಪರಿಣತಿ ಇಲ್ಲದವರ ಜೊತೆ ಸೆಣಸಾಟ ದಿಂದ ಆಟದ ತೃಪ್ತಿ ಸಿಗೂದಿಲ್ಲ...
            ಅಂತೇನೇನೋ ಹುಚ್ಚು ಲಾಜಿಕ್ ಶುರುವಾತು.ಹಂಗ ನೋಡಿದ್ರ ನಾನೂ ಒಂದು ಕಾಲಕ್ಕೆ ಹಳ್ಳಿಯಲ್ಲಿಯ ಆಟೋಟಗಳಲ್ಲಿ ಮುಂದಿದ್ದವಳೇ. ಆದರೆ ಅದು ಅತಿ ಸಣ್ಣ ಹಳ್ಳಿ...ಕಡಿಮೆ ಸ್ಪರ್ಧಾಭಾವದ/ ತರಬೇತಿ ಪೂರ್ಣ ಪ್ರಮಾಣದಲ್ಲಿ ಸಿಕ್ಕಿರದ ಜವಾರಿ ಆಟಗಾರಳು... ಹೈಸ್ಕೂಲ್ ಮುಗಿದ ತಕ್ಷಣ ಅವೆಲ್ಲಕ್ಕೂ ' ಜನ- ಗಣ- ಮನ' ಹಾಡಿಯಾಗಿತ್ತು. ನಂತರದ ಬದುಕಿನಲ್ಲಿ ಬದುಕೂ ಒಂದು ಆಟವೇ- ಎಂಬುದು ಅರಿವಾದಾಗ ಆಟಗಳ ಪಟ್ಟುಗಳನ್ನು ಹೆಜ್ಜೆ ಹೆಜ್ಜೆಗೂ ಕಲಿಯುವ ಅನಿವಾರ್ಯತೆ ಬಂತು. ಉಳಿದ ಆಟಗಳಂತೆ ಬೇಡವೆನಿಸಿದಾಗ ಮೈದಾನ ಬಿಟ್ಟುಹೊರಡುವ ಸ್ವಾತಂತ್ರ್ಯ
ವಿಲ್ಲದ ಆಟವದು...
          ‌‌ಎಲ್ಲವನ್ನೂ ಶಕ್ತಿಗೆ ಅನುಸಾರ ವಾಗಿ ಆಡಿ ಮುಗಿಸಿ retirement ಘೋಷಿಸಿದ ಮೇಲೆ ಮೈದಾನದಲ್ಲಿದ್ದು
ಇತರ ಆಟಗಾರರ ಆಟದ ಬಗೆಗಿನ commentary ಹೇಳುವ ಮಾಜಿ ಆಟಗಾರಳು ನಾನೀಗ ಎನಿಸಿ ಮನಸ್ಸಿನಲ್ಲೇ ನಕ್ಕೆ...


     ‌‌‌    ಇದೀಗ ಮುಂಜಾನೆ ವಾಕಿಂಗ್ ಗೆ ಎಂದು lift ನಲ್ಲಿ ಹೋಗುತ್ತಿದ್ದೆ.
ಓಡಿ ಬಂದು ಒಬ್ಬ ಯುವತಿ ಲಿಫ್ಟನಲ್ಲಿ ಸೇರಿಕೊಂಡಳು...ಪದೇ ಪದೇ floor ನಂಬರ್ ನೋಡುತ್ತಿದ್ದಳು,ಸಿಕ್ಕಾಪಟ್ಟೆ ಎದೆಯ ಏರಿಳಿತ/ಮುಖ ಒರೆಸಿಕೊಳ್ಳು ವುದು ನಡೆದಿತ್ತು.ನನಗೆ ತಡೆಯಲಾಗ ದೇ ಕೇಳಿದೆ," ಯಾಕೆ late ಆಯ್ತಾ? - ಅಂತ...ಆಕೆ ಅಳುವುದೊಂದು ಬಾಕಿ. " ಹೌದು ಮೇಡಮ್, ಎಂಟೂ ಹದಿನೈದು ನಿಮಿಷಕ್ಕೆ ಇರಬೇಕಿತ್ತು ಎಂಟೂವರೆ 
ಮೇಲಾಯ್ತು,ಆಗಲೇ ಮೂರು ನಾಲ್ಕು
ಬಾರಿ ಫೋನ್ ಬಂದಾಗಿದೆ". ಅಂದಳು.
" ಇರಲಿ ಬಿಡು, ಐದು-ಹತ್ತು ನಿಮಿಷಗಳ ಲ್ಲಿ ಜಗತ್ತೇನೂ ಮುಳುಗಲ್ಲ,ನಾಳೆ
ಯಿಂದ ಸ್ವಲ್ಪು ಬೇಗ ಹೊರಡು. ಏನೀವಾಗ?ಎಂಥೆಂಥ ಮಶಿನ್ಗಳೆ ಕೆಟ್ಟು ನಿಲ್ಲುತ್ತವೆ, ನೀನು ಈ ಪಾಟಿ tension
ಆದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ"ಎಂದೆ. Thanks Madam ಎಂದು ಹೇಳಿ floor open ಆಯ್ತು ಅಂತ ಹೊರಟು ಹೋದಳು...
              ಅವಳ ವಯಸ್ಸು ಮೂವತ್ತೂ ಆಗಿರಲಿಲ್ಲ,ಇದ್ದರೂ ಚಿಕ್ಕ ಮಕ್ಕಳು/ ಹೊರಗೆ ದುಡಿಯುವ ಗಂಡ,ಇವಳಿಗೂ ದುಡಿಯಲೇ ಬೇಕಾದ ಅನಿವಾರ್ಯತೆ
ಏನೆಲ್ಲ ತೊಂದರೆಗಳೋ!!! ಆ ನಂತರ
ಕೂಡ ಎಷ್ಟೋ ಹೊತ್ತಿನ ನಂತರವೂ ಅವಳಂಥ ಅಸಹಾಯಕರ ಬದುಕಿನ
ಚಿತ್ರಗಳೇ ಕಣ್ಣಮುಂದೆ...
           ಇದರಲ್ಲಿ ಯಾರ ಪರ ಚಿಂತಿಸ ಬೇಕೋ ಅದೂ ತಿಳಿಯದು.ಹೆಚ್ಚಿನ ಮನೆಗಳಲ್ಲಿ ಗಂಡ- ಹೆಂಡತಿ ಇಬ್ಬರೂ
ಕೆಲಸ ಮಾಡುತ್ತಿದ್ದರೆ ಬೆಳಗಿನ ಹೊತ್ತಿನಲ್ಲಿ ಅಕ್ಷರಶಃ " ಪ್ರಪಂಚ
 ಪಾಣಿಪತ್"- ಯುದ್ಧ ನಡೆದಿರುತ್ತದೆ.
ಮಕ್ಕಳ ಬಸ್ಸು ಕ್ಷಣವೊಂದರಲ್ಲಿ miss ಆಗಬಹುದು.ಹತ್ತು ನಿಮಿಷ ಆಚೀಚೆ ಯಾದರೂ traffic ನಲ್ಲಿ ಆಗುವ ಹೆಚ್ಚಳ ನಿಜಕ್ಕೂ ಆಘಾತಕಾರಿ. ಮನೆಯ ಹೆಣ್ಣುಮಗಳೂ ಇದನ್ನೆಲ್ಲ ಒಂದು ಹಂತಕ್ಕೆ ತಂದ ಮೇಲೆಯೇ ತಮ್ಮ Work from home ಟೇಬಲ್ ಅಲಂಕರಿಸಬೇಕು.ಕೆಲಸದವರ ಮೇಲೆ ಈ ಕಾರಣಕ್ಕೆ ಪೂರ್ತಿ ಅವಲಂಬಿತ ರಾಗುವುದು ಅನಿವಾರ್ಯ. ಸ್ವಲ್ಪ ಮಟ್ಟಿಗೆ ಹೆಚ್ಚು ಕಡಿಮೆಯಾದರೂ ಕೆಲಸದವಳ ಬದಲಿಗೆ ಕೆಲಸಕ್ಕೆ ಇಟ್ಟುಕೊಂಡವರ ಸರ್ಕಸ್ ನ ಬಾರಿ... ಅವರ ಬಿಪಿಯ ಒತ್ತಡದ scale ಮೇಲೆ ಮೇಲೆ.ತಲೆಗೆ ಜಗ್ಗಿದರೆ ಕಾಲು ತಣ್ಣಗೆ...ಕಾಲಿಗೆ ಎಳೆದರೆ ತಲೆ ಹೊರಗೆ. ಅಕ್ಷರಶಃ ಉಭಯ ಸಂಕಟ.ಹಾಗೆಂದು ಕೆಲಸದವರ ಮೇಲೂ ರೇಗುವ ಹಾಗಿಲ್ಲ
ಬಿಟ್ಟು ಹೋದರೆ ಇನ್ನೂ ಅಧ್ವಾನ... ಹಾಗೆಂದು ಪೂರ್ತಿ ವಿನಾಯತಿ ತೋರಿಸಿದರೆ ಕೆಲಸದವರಿಗೂ ಸದರ
ಹೆಚ್ಚಾಗುತ್ತದೆ ಎಂಬ ಹೆದರಿಕೆ ಬೇರೆ ಕಾಡುತ್ತದೆ.ಇದಕ್ಕೆಲ್ಲ ತಮ್ಮದೇ ನೂರೆಂಟು ಸಮಸ್ಯೆಗಳ ನಡುವೆಯೂ
ಮನೆಯವರು diplomatic ಆಗಿ
ಇಂಥವುಗಳನ್ನು handle ಮಾಡುವ ಅನಿವಾರ್ಯತೆ...
  ‌‌‌              ನಾನು ಬೆಂಗಳೂರಿನಲ್ಲಿ ಇದುವರೆಗೆ ನೋಡಿದ ಕೆಲಸದವರಲ್ಲಿ ಮಕ್ಕಳ ಜೊತೆ ಇದ್ದವರು ತುಂಬಾ ಕಡಿಮೆ.ಅಜ್ಜ/ಅಜ್ಜಿಯ ಜೊತೆಯಲ್ಲೋ ಯಾವುದೋ ಒಂದು ಹಾಸ್ಟೆಲ್ ನಲ್ಲೋ
ಇರೋ ಮಕ್ಕಳೇ ಜಾಸ್ತಿ.ಗಂಡಂದಿರಿಗೆ
ಹಗಲು ರಾತ್ರಿಯ shift duty... ಮನೆ ಬಾಡಿಗೆ ತುಂಬ ಜಾಸ್ತಿ.ಎಷ್ಟು ಕೆಲಸ ಮಾಡಿದರೂ ಸರಿ ಹೋಗದ ಹೊಂದಾಣಿಕೆಯಾಗದ ಬಜೆಟ್. ಅವರು ಕಿಂಚಿತ್ತೂ slow ಆಗದೇ ಕೆಲಸ
ಮಾಡಿದರೂ ತಕ್ಕಡಿ ಸರಿದೂಗುವುದು ಕಠಿಣ.ಯಾರನ್ನು ನೋಡಿದರೂ ಓಡುತ್ತಿರುವಂತೆಯೇ ನಡೆಯುವುದು. ಸದಾ ಸಮಯದೊಂದಿಗೆ ಸೆಣಸಾಟ ಇವುಗಳದೇ ನೋಟ ಸಾಮಾನ್ಯ...
            ಇದು ಒಂದು ' ವಿಷ ಸರಪಳಿ'.
ಮದುವೆಗಾಗಿ ಹಿಡಿದ ಹುಚ್ಚಿನ ಕತೆ. ಸುಲಭ ಪರಿಹಾರ ಕಾಣುವುದಿಲ್ಲ...
ದುಡ್ಡು ಸಂಪಾದಿಸಬೇಕೆಂದರೆ ದುಡಿಯಲೇಬೇಕು...ದುಡಿತ ಹೆಚ್ಚಾಯಿತೆಂದು ಗೊಣಗಿದರೆ ಹಣ ಸಂಪಾದನೆ ಕಡಿಮೆ. ಇವರೆಲ್ಲರ Tension ನಿತ್ಯ ಧಾರಾವಾಹಿಯಂತೆ...
ದಿನಕ್ಕೊಂದು ಹೊಸ ಎಪಿಸೋಡ್...
               ಹೀಗೆ ಯೋಚಿಸುತ್ತಲೇ ದಿನ
ನಿತ್ಯದ rounds ಮುಗಿಸಿ ಮನೆಗೆ ಬರುವುದರಲ್ಲಿ ಕೆಲಸದವಳು ಬಂದಾಗಿತ್ತು...ಮನೆಯಲ್ಲಿ ಅವಳೊ ಬ್ಬಳೇ.ಅತ್ತೆಗೆ ತೊಂಬತ್ತರ ಸಮೀಪ 
ವಯಸ್ಸಾಗಿರುವುದರಿಂದ ಅವಳ ಗಂಡ ತಾಯಿಯ ಜೊತೆಗೆ ಇದ್ದಾನೆ.ಮಗನನ್ನು
ಯಾವುದೋ ಊರಲ್ಲಿ ಹಾಸ್ಟೆಲ್ ಒಂದರಲ್ಲಿ ಬಿಟ್ಟಿದ್ದಾಳೆ.ಮಗಳ ಮದುವೆ ಯಾಗಿದ್ದರೂ ಅವಳದೂ ಏನೇನೋ‌ ಬೇಡಿಕೆ. ಹೀಗಾಗಿ ಸಂಸಾರದ ನೊಗ
ಸಧ್ಯಕ್ಕೆ ಇವಳ ಕುತ್ತಿಗೆಯಿಂದ ಕೆಳಗಿಳಿಯುವ ಸಂಭವ ಕಡಿಮೆ...ಹೀಗೆ
ಏನೇನೋ ದಿನಕ್ಕೊಂದು ಸುದ್ದಿಯ addition ಇದ್ದದ್ದೇ...ಅಂದಿನ ಸ್ಪೆಶಲ್ ಎಪಿಸೋಡು ಕೇಳಲು ಅಣಿಯಾಗುತ್ತ ಲೇ ಮನೆಯೊಳಗೆ ಸೇರಿಕೊಂಡೆ...

               



Tuesday 13 February 2024

ಇಂದು ವಿಶ್ವ ರೆಡಿಯೋ ದಿನವಂತೆ...  ‌‌   
    ‌
  ‌‌‌ ನಾನು ಹದಿನೆಂಟು ವರ್ಷದವಳಾ ಗುವವರೆಗೂ ರೆಡಿಯೋ ಪದ ಕೇಳಿ ಮಾತ್ರ ಗೊತ್ತಿತ್ತು.ಊರ ಹಬ್ಬ/ ಜಾತ್ರೆ/ ಸರ್ಕಸ್ ಟೆಂಟ್ ಬಂದಾಗಲೆಲ್ಲ ಗ್ರಾಮೋಫೋನ ರಿಕಾರ್ಡಿನ ಹಾಡುಗಳ
ಕಿರಿಚುವಿಕೆ ಕಿರಿಕಿರಿಯಾದದ್ದೇ ಹೆಚ್ಚು...
ಕಲಿಯಲೆಂದು ಧಾರವಾಡಕ್ಕೆ ಬಂದಾಗ
ಮಾಲಿಕರ ಮನೆಯಲ್ಲಿ Kreft ರೆಡಿಯೋ ಮೊದಲ ಬಾರಿ ನೋಡಿದೆ.ಅವರ ಮಗಳು ನನಗಿಂತ ನಾಲ್ಕು ವರ್ಷ ಹಿರಿಯಳಾದ್ದರಿಂದಲೂ
ನಾನು ನನ್ನ ಪಾಡಿಗೆ ಬೆಳಿಗ್ಗೆ ಎದ್ದು ಕಾಲೇಜಿಗೆ ಹೋಗುತ್ತಿದ್ದರಿಂದ ಹಾಡು ಕೇಳುವುದು ಒಮ್ಮೆಲೇ ಚಟವೆಂದೇನೂ
ಆಗಲಿಲ್ಲ.ಆದರೆ ಸಾಯಂಕಾಲ ರಾತ್ರಿಯ ಹಾಡುಗಳು ಗಮನ ಸೆಳೆಯುತ್ತಿದ್ದವು.ರೇಡಿಯೋ ಅಟ್ಟದ ಮೇಲಿನ ರೂಮಿನಲ್ಲಿರುತ್ತಿದ್ದುದರಿಂದ ಸದ್ದಾಗದೇ ಮೆಟ್ಟಲ ಮೇಲೆ ಕುಳಿತು
ಒಮ್ಮೊಮ್ಮೆ ಕೇಳುತ್ತಿದ್ದೆ.ಆದರೆ ನನ್ನ ಆಯ್ಕೆಯವಲ್ಲ.ಅನಿವಾರ್ಯವಾಗಿ ಬರುತ್ತಿದ್ದುದನ್ನೇ ಕೇಳಬೇಕಿತ್ತು.ಮದುವೆ
ಯಾದ ಮೇಲೆ/ನಾದಿನಿಯೂ ಅತ್ತೆಮನೆಗೆ ಹೋದ ಕಾರಣಕ್ಕೆ ರೇಡಿಯೋ ಏನೋ ನನ್ನದಾಗಿತ್ತು. ಆದರೆ ಹೆಚ್ಚಿನ ಕಾರ್ಯಬಾಹುಲ್ಯದಿಂದ ಅಷ್ಟು ಹೊತ್ತಿಗೆ ಅದರ ಮೇಲಿನ
ಆಸಕ್ತಿ ಅಷ್ಟಾಗಿ ಉಳಿದುಕೊಳ್ಳಲಿಲ್ಲ.
              ಮತ್ತೆ ನಮ್ಮ ನಂಟು  ಸುರುವಾದದ್ದು ನಾನು ಶಿಕ್ಷಕಿಯಾದ ನಂತರವೇ.ನನಗೆ ಆಕಾಶವಾಣಿಯಲ್ಲಿ
ಕೆಲಸ ಮಾಡುವ ಅನೇಕರ ಪರಿಚಯ ವಿದ್ದದ್ದು/ನಾನು ಅದಾಗಲೇ ಅಷ್ಟಿಷ್ಟು
ಬರಹವನ್ನು ಸುರುಮಾಡಿದ್ದು ಕಾಕತಾಳೀಯವಾಗಿ ಕಾರ್ಯಕ್ರಮದ
Offers ಬರತೊಡಗಿದವು/ಆಸಕ್ತಿಯೂ ಇತ್ತು/ ಅವಶ್ಯಕತೆಯೂ ಇತ್ತು. ಅಷ್ಟರಲ್ಲಾಗಲೇ ಸಂಸಾರದ ಜವಾಬ್ದಾರಿ ನನ್ನೊಬ್ಬಳ ಮೇಲೇಯೇ
ಬಿದ್ದಾಗಿತ್ತು.ಆದಾಯಕ್ಕೂ/ಖರ್ಚಿಗೂ
ತಾಳೆ ಹೊಂದಿಸಲು ಎಂದು ಒಪ್ಪುತ್ತಿದ್ದ
ಕಾರ್ಯಕ್ರಮಗಳು ಬದುಕಿನ ಅನಿವಾರ್ಯ ಭಾಗಗಳಾಗತೊಡಗಿದ ವು. ಬೆಳಗಿನ ಚಿಂತನ/ ಗಿಳಿವಿಂಡು/ ಮಹಿಳಾರಂಗ/ ಶಾಲೆಯ ಪಠ್ಯಾಧಾರಿತ
ಎಲ್ಲ ಕಾರ್ಯಕ್ರಮಗಳು/ ಸ್ವರಚಿತ ಕವನಗಳ ಓದು- ಹೀಗೆ ಒಂದಿಲ್ಲೊಂದು
ಕಾರ್ಯಕ್ರಮವಿರುತ್ತಿದ್ದ ಕಾರಣಕ್ಕೆ ಆರ್ಥಿಕವಾಗಿಯೂ ಸಹಾಯವಾಗು ತ್ತಿದ್ದರಿಂದ ಮನೆಗೆಲಸ/ ಶಾಲಾ ಕೆಲಸ ಗಳು ಎಷ್ಟೇ ಇರಲಿ ಒಪ್ಪಂದಗಳನ್ನು
ತಪ್ಪಿಸುತ್ತಿರಲಿಲ್ಲ.
   ‌‌‌            ಹೀಗಾಗಿ ಈ ರೆಡಿಯೋ ಕಾರ್ಯಕ್ರಮಗಳು ನನ್ನ ವೇಳೆಯ ಸದುಪಯೋಗ/ ಹೆಚ್ಚಿನ ಆದಾಯ/ ಬರಹದ ಆಸಕ್ತಿಯನ್ನು ನಿರಂತರವಾಗಿ
ಸಜೀವವಾಗಿಟ್ಟು ಆಗ ಕಾದದ್ದಲ್ಲದೇ
ಅದನ್ನು ನಿಯಮಿತಗೊಳಿಸಿ ಈಗ 
ವೃದ್ಧಾಪ್ಯದಲ್ಲಿಯೂ ಸಹ ನನ್ನ ಸದಾಕಾಲದ ಸಂಗಾತಿಯನ್ನಾಗಿ ಉಳಿಸಿಕೊಂಡಿದೆ... ರಟ್ಟೀಹಳ್ಳಿಯಿಂದ ಧಾರವಾಡ/ ಧಾರವಾಡದಿಂದ ಬೆಂಗಳೂರು/ಆಗಾಗ ನಿರಂತರವಾಗಿ
ಎಲ್ಲಿ ಮಕ್ಕಳು ಕರೆಯುತ್ತರೋ ಅಲ್ಲಿಗೆ
ವಾಸ್ತವ್ಯ ಬದಲಾಯಿಸುತ್ತಲೇ ಹೋದರೂ ಎಲ್ಲಿಯೂ ' ನಾನು ಏಕಾಕಿ'- ಎನಿಸದಂತೆ  ನನ್ನನ್ನು ಕಾದಿದೆ.
ಈಗಂತೂ ನಾನಾರೀತಿಯ ರೇಡಿಯೋ ಸರಕಾರದ ಪರವಾಗಿ/ಖಾಸಗಿಯಾಗಿ
ಅಸಂಖ್ಯಾತ ಚಾನೆಲ್ಗಳು ಲಭ್ಯವಿದ್ದು
ಸುಧಾರಿತ ಫೋನಗಳ ಆವಿಭಾಜ್ಯ
ಅಂಗಗಳಾಗಿ ಅಂಗೈ ನೆಲ್ಲಿಯಾಗಿವೆ...
               ಈಗೆಷ್ಟು ಬಳಸುತ್ತೇವೆ ಅನ್ನುವದಕ್ಕಿಂತಲೂ ಅತಿ ಅವಶ್ಯಕತೆ ಇದ್ದಾಗ ನಮ್ಮನ್ನು ಅದು ಬೆಳಸಿದ ರೀತಿ / ನಮ್ಮ ವ್ಯಕ್ತಿತ್ವದ ಭಾಗವೇ ಆಗಿ
ನಮ್ಮೊಳಗೇನೇ ಇಳಿದು ಹೋದ ರೀತಿ
ಯೊಂದು ನಿಜಕ್ಕೂ ಅದ್ಭುತ.ಇದೊಂದು
ಕಾರಣಕ್ಕೆ ನಾನು ಆಕಾಶವಾಣಿಗೆ/ ರೆಡಿಯೋಗಳ ವಿವಿಧ ವಾಹಿನಿಗಳಿಗೆ
ಆ ಜೀವ ಋಣಿ...




Sunday 11 February 2024


 ಸ್ವಲ್ಪೇ ಕೊಟ್ಟು ಎಷ್ಟೊಂದು ಪಡೆಯಬಹುದು! ಸ್ವಲ್ಪೇ ಕೊಟ್ಟು ಎಷ್ಟೊಂದು ಪಡೆಯಬಹುದು!

       ಅದೊಂದು ಕಾರ್ಯಾಲಯ. ಅದು 103 ವರ್ಷಗಳು ಮುಗಿದು 104 ಕ್ಕೆ ಕಾಲಿಟ್ಟವರೊಬ್ಬರ ಜನ್ಮದಿನ ಕಾರ್ಯಕ್ರಮ. ನಟ್ಟ ನಡುವೆ ಒಂದು ಅಲಂಕೃತ ಕುರ್ಚಿಯ ಮೇಲೆ ಕುಳಿತ ʻಮಡಿ ಹೆಂಗಸುʼ, ಅತಿ ಶುಭ್ರ ಬಿಳಿಸೀರೆ ಉಟ್ಟುಕೊಂಡು, ಪಕ್ಕಕ್ಕೆ ಧಾರವಾಡ ಫೇಡೆಯ Box ಇಟ್ಟುಕೊಂಡು, ಬಂದು ಕಾಲಿಗೆ ನಮಸ್ಕರಿಸಿದವರ ಕೈಗೆ ಎರಡು ಫೇಡೆ ಇಟ್ಟು “ನನ್ನಂತೆಯೇ ಶತಾಯುಷಿಯಾಗು”– ಎಂದು ಅವರ ತಲೆಮೇಲೆ ಕೈ ಇಟ್ಟು ಬಾಯಿತುಂಬಾ ಹರಸುತ್ತಿದ್ದರು…ಹಾಗೆಂದು ಗಟ್ಟಿ ಮುಟ್ಟಿ ಆಳಲ್ಲ. ಗುಬ್ಬಿಯಾಕಾರದಂತೆ ಪುಟ್ಟ ದೇಹಿ. ಸಂಪೂರ್ಣ ಬಾಗಿದ ಬೆನ್ನು. ಆದರೂ ಒಂದು ಕಡೆ ಹತ್ತು ನಿಮಿಷ ಕೂಡದೇ ಏನೋ ಒಂದನ್ನು ಸದಾ ಮಾಡುತ್ತಲೇ ಇರುವ ಅಭ್ಯಾಸ… ʻಹೊತ್ತಾಯ್ತು, ಊಟ ಮೊದಲು ಮಾಡಿʼ ಎಂದರೆ ʻನನಗೆ ಹಸಿವೆಯಾ ಗುವುದಿಲ್ಲʼ, ʻಚೆನ್ನಾಗಿ ನೀರು ಕುಡಿಯಿರಿʼ ಎಂದರೆ ʻನನಗೆ ನೀರಡಿಕೆಯೇ ಆಗುವುದಿಲ್ಲʼ - ಇಂಥದೇ  ಉತ್ತರ. ಅವರ ಹೊಟ್ಟೆಗೆ ದೇವರು ಅದೇನು ಅಮೃತ ಹಾಕಿದ್ದನೋ ಗೊತ್ತಿಲ್ಲ. 
ಮನೆಯಲ್ಲಿ ಎಂಟು ಮಕ್ಕಳು, ಹಿರಿ-ಕಿರಿಯರು, ಬಂದು-ಹೋಗುವ ಜನರೂ ಹೆಚ್ಚು. ಸದಾ ಒಂದಿಲ್ಲೊಂದು ಮನೆಯ ಕೆಲಸಗಳಲ್ಲಿ ಭಾಗಿ. ಅವರಲ್ಲಿ ಕೆಲಸ ಮುಗಿದರೆ, ನಮ್ಮ ಮನೆಯಲ್ಲಿ ಇಣುಕಿ, ನನ್ನ ಕೆಲಸಗಳಲ್ಲಿ ಬೇಡವೆಂದರೂ ನೆರವಾಗುವುದು ಅವರ ರೂಢಿ. ಕೂತಲ್ಲೇ ಕಾಯಿ-ಪಲ್ಲೆ ಸ್ವಚ್ಛ ಮಾಡುವುದು, ನಾನು ಕೆಲಸದಲ್ಲಿದ್ದರೆ ನನ್ನ ಮಕ್ಕಳನ್ನು ಆಡಿಸುವುದು, ತೊಟ್ಟಿಲು ತೂಗುವುದು- ಇಂಥ ಅತಿ ಅವಶ್ಯ ಕೆಲಸಗಳಲ್ಲಿ ಕೈ ಜೋಡಿಸುವು ದು ಅವರು ಮಾಡುತ್ತಿದ್ದ ಕೆಲಸ… 
ಮೊದಲೆಲ್ಲ ಕಳೆದ ಕಷ್ಟದ ಜೀವನ ಅವರಿಗೆ ಸಾಕಷ್ಟು ಪಾಠ ಕಲಿಸಿತ್ತು, ಸಹನೆ ಕಲಿಸಿತ್ತು, ದೀರ್ಘ ಕಾಯುವಿಕೆ ಯನ್ನು ಕಲಿಸಿತ್ತು.ಆ ವಯಸ್ಸಿನಲ್ಲಿಯೂ ಒಮ್ಮೆಯೂ ಸಹ ಸಿಟ್ಟಿಗೇಳುತ್ತಿರಲಿಲ್ಲ. ಮಾತು ತುಂಬಾನೇ ಕಡಿಮೆ. ಹೀಗಾಗಿಯೇ ಅವರಿಂದ ಸದ್ದಿಲ್ಲದೇ ಕೆಲಸಗಳಾಗುತ್ತಿದ್ದವು- ಎಂಬ ನಂಬಿಕೆ ನನ್ನದು.ಹತ್ತು ವರ್ಷಗಳ ನಂತರ ಅವರಿಗೆ ನಮ್ಮ ಮನೆ ಸಣ್ಣದಾಗಿ ಬೇರೆ ಮನೆಗೆ ಹೋಗಬೇಕಾಯಿತು. ಆದರೂ ಆಗಾಗ ಮೊಮ್ಮಕ್ಕಳನ್ನು ಕಾಡಿಬೇಡಿ ಅವರ ಗಾಡಿಯ ಹಿಂದೆ ʻಮಂಗನ ಮರಿʼಯಂತೆ ಮೊಮ್ಮಕ್ಕಳನ್ನು ಅವುಚಿ ಹಿಡಿದು, ನಮ್ಮ ಮನೆಗೆ ಬಂದು ಇಳಿಯುತ್ತಿದ್ದರು. ಪಕ್ಕದ ಪರಿಚಯಸ್ಥರ ಮನೆಯಲ್ಲಿ ಒಪ್ಪತ್ತು ಉಂಡು/ ನಮ್ಮ ಮನೆಯಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಮತ್ತೆ ಮನೆಗೆ ವಾಪಾಸ್ ಆಗುತ್ತಿದ್ದರು...
ವಯಸ್ಸು ಹೆಚ್ಚಾಗುತ್ತಾ ಹೋದಂತೆ ಇದು ಸ್ವಲ್ಪಮಟ್ಟಿಗೆ ಕಡಿಮೆಯಾಯಿ ತು…“ಮಾಮಿ... ಆಯಿ ನಿಮ್ಮ ಮನೆಗೆ ಬರುತ್ತೇನೆಂದು ಹಠ ಮಾಡುತ್ತಾಳೆ. ಗಾಡಿಯಲ್ಲಿ ಹಿಂದೆ ಕೂಡಿಸಿಕೊಂಡು ಬರುವುದು ಸುಲಭವಾಗುವುದಿಲ್ಲ. ಮುಂದೆ ದಾರಿ ನೋಡಬೇಕೋ ಅಥವಾ ಹಿಂದೆ ಅವಳನ್ನು ನೋಡುತ್ತಿರ ಬೇಕೋ ಗೊಂದಲವಾಗುತ್ತದೆ. ಬಿದ್ದರೆ  ಎಂಬ ಭಯವೂ ಕಾಡುತ್ತದೆ.ನೀವು
ಊರಲ್ಲಿಲ್ಲ ಎಂದು ಹೇಳುತ್ತೇನೆ. ಎಂದಾದರೂ ಕೇಳಿದರೆ ʻಹೌದುʼ ಅನ್ನಿ Please.” ಇದು ಮೊಮ್ಮಕ್ಕಳ ಉಭಯಸಂಕಟ.“ಏನSSS… ಯಾವಾಗ ಕೇಳಿದರೂ ನೀ ಊರಾಗ ಇಲ್ಲ ಅಂತಾರ ನಮ್ಮ ಮೊಮ್ಮಕ್ಳು… ಗಂಡ, ಮಕ್ಳನ್ನ ಬಿಟ್ಗೊಟ್ಟು ಎಲ್ಲೆ ಹೋಗ್ತಿ? ಅವರೇನು ಮಾಡ್ಬೇಕು?” -ಇದು ಮುಂದೆಂದೋ ನನ್ನನ್ನು ಕಂಡಾಗ ಆಯಿ ತಪರಾಕಿ ತಗೋತಿದ್ದ ರೀತಿ…
ಇಂದು ತುಂಬಾ ಹಳೆಯ ಸುದ್ದಿ. ಈಗ ಅವರ ಮನೆಯ ಹಿರಿಯರ್ಯಾರೂ ಸಹಜವಾಗಿಯೇ ಇಲ್ಲ. ಐವತ್ತು ವರ್ಷಗಳಿಗೂ ಹಿಂದಿನ ಸುದ್ದಿ ಇದು. ಆದರೆ ನೆನಪುಗಳ ಕಸುವು ಕಳೆದಿಲ್ಲ… ಹಸಿ ಗೋಡೆಗೆ ನೆಟ್ಟ ಹರಳಂತೆ ಎದ್ಯಾಗ ನೆಟ್ಟು ಉಳದಾವ…ಅಂದ ಹಾಗ ಆ ಅಂತಃಕರಣ ಸ್ವರೂಪಿ, ಹೊರ ಜಗತ್ತನ್ನೇ ಕಾಣದ, ತಾನೇ ಒಂದು ಪುಟ್ಟ ವಿಶ್ವದಂತೆ ಇದ್ದ ಆ ನಮ್ಮ ʻಆಯಿʼಯ ಹೆಸರು 'ಅಕ್ಕೂಬಾಯಿ ಅಂಬೇಕರ್…'
               ಮೊನ್ನೆ ತಾನೇ ಆದ ನನ್ನ ಹುಟ್ಟುಹಬ್ಬದ ಗುಂಗಿನಲ್ಲಿ ಕಳೆದು ಹೋದಾಗ ಅಂದಿನ ಆಯಿಯ ಹುಟ್ಟುಹಬ್ಬದ ನೆನಪು ತುಂಬ ಕಾಲ ಕಾಡಿತು...ಅವರೆಲ್ಲ 'ಆಡದೇ ಮಾಡುವ ಉತ್ತಮ'ರು-ಕರ್ಮಜೀವಿಗಳು... ಅವರ ಆ ಹುಟ್ಟುಹಬ್ಬದ ಸಂಭ್ರಮದಲ್ಲಿ ಏನೋ ದೈವಿಕ ಭಾವವಿತ್ತು.ಯಾವುದೇ ಬಾಹ್ಯ ಆಡಂಬರವಿಲ್ಲದೇ ಕೇವಲ ಸಭ್ಯ ಶತಾಯುಷಿಯೊಬ್ಬರ ಆಶೀರ್ವಾದದ ನೆರಳಿನಲ್ಲಿ ಇನ್ನುಳಿದವರ ಶ್ರೇಯಸ್ಸು ಫಲಿತಗೊಳ್ಳಲಿ ಎಂಬ ಸದುದ್ದೇಶದ ಆ ಸಮಾರಂಭದೆದುರು ನಮ್ಮ ಆಡಂಬರ ಹೆಚ್ಚಾಯಿತೇನೋ - ಎಂಬ ಪುಟ್ಟ ಅಳುಕು ಅನಿಸಿದ್ದು ಯಾಕೋ ಗೊತ್ತಿಲ್ಲ...🙏🙏🙏

       ಅದೊಂದು ಕಾರ್ಯಾಲಯ. ಅದು 103 ವರ್ಷಗಳು ಮುಗಿದು 104 ಕ್ಕೆ ಕಾಲಿಟ್ಟವರೊಬ್ಬರ ಜನ್ಮದಿನ ಕಾರ್ಯಕ್ರಮ. ನಟ್ಟ ನಡುವೆ ಒಂದು ಅಲಂಕೃತ ಕುರ್ಚಿಯ ಮೇಲೆ ಕುಳಿತ ʻಮಡಿ ಹೆಂಗಸುʼ, ಅತಿ ಶುಭ್ರ ಬಿಳಿಸೀರೆ ಉಟ್ಟುಕೊಂಡು, ಪಕ್ಕಕ್ಕೆ ಧಾರವಾಡ ಫೇಡೆಯ Box ಇಟ್ಟುಕೊಂಡು, ಬಂದು ಕಾಲಿಗೆ ನಮಸ್ಕರಿಸಿದವರ ಕೈಗೆ ಎರಡು ಫೇಡೆ ಇಟ್ಟು “ನನ್ನಂತೆಯೇ ಶತಾಯುಷಿಯಾಗು”– ಎಂದು ಅವರ ತಲೆಮೇಲೆ ಕೈ ಇಟ್ಟು ಬಾಯಿತುಂಬಾ ಹರಸುತ್ತಿದ್ದರು…ಹಾಗೆಂದು ಗಟ್ಟಿ ಮುಟ್ಟಿ ಆಳಲ್ಲ. ಗುಬ್ಬಿಯಾಕಾರದಂತೆ ಪುಟ್ಟ ದೇಹಿ. ಸಂಪೂರ್ಣ ಬಾಗಿದ ಬೆನ್ನು. ಆದರೂ ಒಂದು ಕಡೆ ಹತ್ತು ನಿಮಿಷ ಕೂಡದೇ ಏನೋ ಒಂದನ್ನು ಸದಾ ಮಾಡುತ್ತಲೇ ಇರುವ ಅಭ್ಯಾಸ… ʻಹೊತ್ತಾಯ್ತು, ಊಟ ಮೊದಲು ಮಾಡಿʼ ಎಂದರೆ ʻನನಗೆ ಹಸಿವೆಯಾ ಗುವುದಿಲ್ಲʼ, ʻಚೆನ್ನಾಗಿ ನೀರು ಕುಡಿಯಿರಿʼ ಎಂದರೆ ʻನನಗೆ ನೀರಡಿಕೆಯೇ ಆಗುವುದಿಲ್ಲʼ - ಇಂಥದೇ  ಉತ್ತರ. ಅವರ ಹೊಟ್ಟೆಗೆ ದೇವರು ಅದೇನು ಅಮೃತ ಹಾಕಿದ್ದನೋ ಗೊತ್ತಿಲ್ಲ. 
ಮನೆಯಲ್ಲಿ ಎಂಟು ಮಕ್ಕಳು, ಹಿರಿ-ಕಿರಿಯರು, ಬಂದು-ಹೋಗುವ ಜನರೂ ಹೆಚ್ಚು. ಸದಾ ಒಂದಿಲ್ಲೊಂದು ಮನೆಯ ಕೆಲಸಗಳಲ್ಲಿ ಭಾಗಿ. ಅವರಲ್ಲಿ ಕೆಲಸ ಮುಗಿದರೆ, ನಮ್ಮ ಮನೆಯಲ್ಲಿ ಇಣುಕಿ, ನನ್ನ ಕೆಲಸಗಳಲ್ಲಿ ಬೇಡವೆಂದರೂ ನೆರವಾಗುವುದು ಅವರ ರೂಢಿ. ಕೂತಲ್ಲೇ ಕಾಯಿ-ಪಲ್ಲೆ ಸ್ವಚ್ಛ ಮಾಡುವುದು, ನಾನು ಕೆಲಸದಲ್ಲಿದ್ದರೆ ನನ್ನ ಮಕ್ಕಳನ್ನು ಆಡಿಸುವುದು, ತೊಟ್ಟಿಲು ತೂಗುವುದು- ಇಂಥ ಅತಿ ಅವಶ್ಯ ಕೆಲಸಗಳಲ್ಲಿ ಕೈ ಜೋಡಿಸುವು ದು ಅವರು ಮಾಡುತ್ತಿದ್ದ ಕೆಲಸ… 
ಮೊದಲೆಲ್ಲ ಕಳೆದ ಕಷ್ಟದ ಜೀವನ ಅವರಿಗೆ ಸಾಕಷ್ಟು ಪಾಠ ಕಲಿಸಿತ್ತು, ಸಹನೆ ಕಲಿಸಿತ್ತು, ದೀರ್ಘ ಕಾಯುವಿಕೆ ಯನ್ನು ಕಲಿಸಿತ್ತು.ಆ ವಯಸ್ಸಿನಲ್ಲಿಯೂ ಒಮ್ಮೆಯೂ ಸಹ ಸಿಟ್ಟಿಗೇಳುತ್ತಿರಲಿಲ್ಲ. ಮಾತು ತುಂಬಾನೇ ಕಡಿಮೆ. ಹೀಗಾಗಿಯೇ ಅವರಿಂದ ಸದ್ದಿಲ್ಲದೇ ಕೆಲಸಗಳಾಗುತ್ತಿದ್ದವು- ಎಂಬ ನಂಬಿಕೆ ನನ್ನದು.ಹತ್ತು ವರ್ಷಗಳ ನಂತರ ಅವರಿಗೆ ನಮ್ಮ ಮನೆ ಸಣ್ಣದಾಗಿ ಬೇರೆ ಮನೆಗೆ ಹೋಗಬೇಕಾಯಿತು. ಆದರೂ ಆಗಾಗ ಮೊಮ್ಮಕ್ಕಳನ್ನು ಕಾಡಿಬೇಡಿ ಅವರ ಗಾಡಿಯ ಹಿಂದೆ ʻಮಂಗನ ಮರಿʼಯಂತೆ ಮೊಮ್ಮಕ್ಕಳನ್ನು ಅವುಚಿ ಹಿಡಿದು, ನಮ್ಮ ಮನೆಗೆ ಬಂದು ಇಳಿಯುತ್ತಿದ್ದರು. ಪಕ್ಕದ ಪರಿಚಯಸ್ಥರ ಮನೆಯಲ್ಲಿ ಒಪ್ಪತ್ತು ಉಂಡು/ ನಮ್ಮ ಮನೆಯಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಮತ್ತೆ ಮನೆಗೆ ವಾಪಾಸ್ ಆಗುತ್ತಿದ್ದರು...
ವಯಸ್ಸು ಹೆಚ್ಚಾಗುತ್ತಾ ಹೋದಂತೆ ಇದು ಸ್ವಲ್ಪಮಟ್ಟಿಗೆ ಕಡಿಮೆಯಾಯಿ ತು…“ಮಾಮಿ... ಆಯಿ ನಿಮ್ಮ ಮನೆಗೆ ಬರುತ್ತೇನೆಂದು ಹಠ ಮಾಡುತ್ತಾಳೆ. ಗಾಡಿಯಲ್ಲಿ ಹಿಂದೆ ಕೂಡಿಸಿಕೊಂಡು ಬರುವುದು ಸುಲಭವಾಗುವುದಿಲ್ಲ. ಮುಂದೆ ದಾರಿ ನೋಡಬೇಕೋ ಅಥವಾ ಹಿಂದೆ ಅವಳನ್ನು ನೋಡುತ್ತಿರ ಬೇಕೋ ಗೊಂದಲವಾಗುತ್ತದೆ. ಬಿದ್ದರೆ  ಎಂಬ ಭಯವೂ ಕಾಡುತ್ತದೆ.ನೀವು
ಊರಲ್ಲಿಲ್ಲ ಎಂದು ಹೇಳುತ್ತೇನೆ. ಎಂದಾದರೂ ಕೇಳಿದರೆ ʻಹೌದುʼ ಅನ್ನಿ Please.” ಇದು ಮೊಮ್ಮಕ್ಕಳ ಉಭಯಸಂಕಟ.“ಏನSSS… ಯಾವಾಗ ಕೇಳಿದರೂ ನೀ ಊರಾಗ ಇಲ್ಲ ಅಂತಾರ ನಮ್ಮ ಮೊಮ್ಮಕ್ಳು… ಗಂಡ, ಮಕ್ಳನ್ನ ಬಿಟ್ಗೊಟ್ಟು ಎಲ್ಲೆ ಹೋಗ್ತಿ? ಅವರೇನು ಮಾಡ್ಬೇಕು?” -ಇದು ಮುಂದೆಂದೋ ನನ್ನನ್ನು ಕಂಡಾಗ ಆಯಿ ತಪರಾಕಿ ತಗೋತಿದ್ದ ರೀತಿ…
ಇಂದು ತುಂಬಾ ಹಳೆಯ ಸುದ್ದಿ. ಈಗ ಅವರ ಮನೆಯ ಹಿರಿಯರ್ಯಾರೂ ಸಹಜವಾಗಿಯೇ ಇಲ್ಲ. ಐವತ್ತು ವರ್ಷಗಳಿಗೂ ಹಿಂದಿನ ಸುದ್ದಿ ಇದು. ಆದರೆ ನೆನಪುಗಳ ಕಸುವು ಕಳೆದಿಲ್ಲ… ಹಸಿ ಗೋಡೆಗೆ ನೆಟ್ಟ ಹರಳಂತೆ ಎದ್ಯಾಗ ನೆಟ್ಟು ಉಳದಾವ…ಅಂದ ಹಾಗ ಆ ಅಂತಃಕರಣ ಸ್ವರೂಪಿ, ಹೊರ ಜಗತ್ತನ್ನೇ ಕಾಣದ, ತಾನೇ ಒಂದು ಪುಟ್ಟ ವಿಶ್ವದಂತೆ ಇದ್ದ ಆ ನಮ್ಮ ʻಆಯಿʼಯ ಹೆಸರು 'ಅಕ್ಕೂಬಾಯಿ ಅಂಬೇಕರ್…'
               ಮೊನ್ನೆ ತಾನೇ ಆದ ನನ್ನ ಹುಟ್ಟುಹಬ್ಬದ ಗುಂಗಿನಲ್ಲಿ ಕಳೆದು ಹೋದಾಗ ಅಂದಿನ ಆಯಿಯ ಹುಟ್ಟುಹಬ್ಬದ ನೆನಪು ತುಂಬ ಕಾಲ ಕಾಡಿತು...ಅವರೆಲ್ಲ 'ಆಡದೇ ಮಾಡುವ ಉತ್ತಮ'ರು-ಕರ್ಮಜೀವಿಗಳು... ಅವರ ಆ ಹುಟ್ಟುಹಬ್ಬದ ಸಂಭ್ರಮದಲ್ಲಿ ಏನೋ ದೈವಿಕ ಭಾವವಿತ್ತು.ಯಾವುದೇ ಬಾಹ್ಯ ಆಡಂಬರವಿಲ್ಲದೇ ಕೇವಲ ಸಭ್ಯ ಶತಾಯುಷಿಯೊಬ್ಬರ ಆಶೀರ್ವಾದದ ನೆರಳಿನಲ್ಲಿ ಇನ್ನುಳಿದವರ ಶ್ರೇಯಸ್ಸು ಫಲಿತಗೊಳ್ಳಲಿ ಎಂಬ ಸದುದ್ದೇಶದ ಆ ಸಮಾರಂಭದೆದುರು ನಮ್ಮ ಆಡಂಬರ ಹೆಚ್ಚಾಯಿತೇನೋ - ಎಂಬ ಪುಟ್ಟ ಅಳುಕು ಅನಿಸಿದ್ದು ಯಾಕೋ ಗೊತ್ತಿಲ್ಲ...🙏🙏🙏
       ಅದೊಂದು ಕಾರ್ಯಾಲಯ. ಅದು 103 ವರ್ಷಗಳು ಮುಗಿದು 104 ಕ್ಕೆ ಕಾಲಿಟ್ಟವರೊಬ್ಬರ ಜನ್ಮದಿನ ಕಾರ್ಯಕ್ರಮ. ನಟ್ಟ ನಡುವೆ ಒಂದು ಅಲಂಕೃತ ಕುರ್ಚಿಯ ಮೇಲೆ ಕುಳಿತ ʻಮಡಿ ಹೆಂಗಸುʼ, ಅತಿ ಶುಭ್ರ ಬಿಳಿಸೀರೆ ಉಟ್ಟುಕೊಂಡು, ಪಕ್ಕಕ್ಕೆ ಧಾರವಾಡ ಫೇಡೆಯ Box ಇಟ್ಟುಕೊಂಡು, ಬಂದು ಕಾಲಿಗೆ ನಮಸ್ಕರಿಸಿದವರ ಕೈಗೆ ಎರಡು ಫೇಡೆ ಇಟ್ಟು “ನನ್ನಂತೆಯೇ ಶತಾಯುಷಿಯಾಗು”– ಎಂದು ಅವರ ತಲೆಮೇಲೆ ಕೈ ಇಟ್ಟು ಬಾಯಿತುಂಬಾ ಹರಸುತ್ತಿದ್ದರು…ಹಾಗೆಂದು ಗಟ್ಟಿ ಮುಟ್ಟಿ ಆಳಲ್ಲ. ಗುಬ್ಬಿಯಾಕಾರದಂತೆ ಪುಟ್ಟ ದೇಹಿ. ಸಂಪೂರ್ಣ ಬಾಗಿದ ಬೆನ್ನು. ಆದರೂ ಒಂದು ಕಡೆ ಹತ್ತು ನಿಮಿಷ ಕೂಡದೇ ಏನೋ ಒಂದನ್ನು ಸದಾ ಮಾಡುತ್ತಲೇ ಇರುವ ಅಭ್ಯಾಸ… ʻಹೊತ್ತಾಯ್ತು, ಊಟ ಮೊದಲು ಮಾಡಿʼ ಎಂದರೆ ʻನನಗೆ ಹಸಿವೆಯಾ ಗುವುದಿಲ್ಲʼ, ʻಚೆನ್ನಾಗಿ ನೀರು ಕುಡಿಯಿರಿʼ ಎಂದರೆ ʻನನಗೆ ನೀರಡಿಕೆಯೇ ಆಗುವುದಿಲ್ಲʼ - ಇಂಥದೇ  ಉತ್ತರ. ಅವರ ಹೊಟ್ಟೆಗೆ ದೇವರು ಅದೇನು ಅಮೃತ ಹಾಕಿದ್ದನೋ ಗೊತ್ತಿಲ್ಲ. 
ಮನೆಯಲ್ಲಿ ಎಂಟು ಮಕ್ಕಳು, ಹಿರಿ-ಕಿರಿಯರು, ಬಂದು-ಹೋಗುವ ಜನರೂ ಹೆಚ್ಚು. ಸದಾ ಒಂದಿಲ್ಲೊಂದು ಮನೆಯ ಕೆಲಸಗಳಲ್ಲಿ ಭಾಗಿ. ಅವರಲ್ಲಿ ಕೆಲಸ ಮುಗಿದರೆ, ನಮ್ಮ ಮನೆಯಲ್ಲಿ ಇಣುಕಿ, ನನ್ನ ಕೆಲಸಗಳಲ್ಲಿ ಬೇಡವೆಂದರೂ ನೆರವಾಗುವುದು ಅವರ ರೂಢಿ. ಕೂತಲ್ಲೇ ಕಾಯಿ-ಪಲ್ಲೆ ಸ್ವಚ್ಛ ಮಾಡುವುದು, ನಾನು ಕೆಲಸದಲ್ಲಿದ್ದರೆ ನನ್ನ ಮಕ್ಕಳನ್ನು ಆಡಿಸುವುದು, ತೊಟ್ಟಿಲು ತೂಗುವುದು- ಇಂಥ ಅತಿ ಅವಶ್ಯ ಕೆಲಸಗಳಲ್ಲಿ ಕೈ ಜೋಡಿಸುವು ದು ಅವರು ಮಾಡುತ್ತಿದ್ದ ಕೆಲಸ… 
ಮೊದಲೆಲ್ಲ ಕಳೆದ ಕಷ್ಟದ ಜೀವನ ಅವರಿಗೆ ಸಾಕಷ್ಟು ಪಾಠ ಕಲಿಸಿತ್ತು, ಸಹನೆ ಕಲಿಸಿತ್ತು, ದೀರ್ಘ ಕಾಯುವಿಕೆ ಯನ್ನು ಕಲಿಸಿತ್ತು.ಆ ವಯಸ್ಸಿನಲ್ಲಿಯೂ ಒಮ್ಮೆಯೂ ಸಹ ಸಿಟ್ಟಿಗೇಳುತ್ತಿರಲಿಲ್ಲ. ಮಾತು ತುಂಬಾನೇ ಕಡಿಮೆ. ಹೀಗಾಗಿಯೇ ಅವರಿಂದ ಸದ್ದಿಲ್ಲದೇ ಕೆಲಸಗಳಾಗುತ್ತಿದ್ದವು- ಎಂಬ ನಂಬಿಕೆ ನನ್ನದು.ಹತ್ತು ವರ್ಷಗಳ ನಂತರ ಅವರಿಗೆ ನಮ್ಮ ಮನೆ ಸಣ್ಣದಾಗಿ ಬೇರೆ ಮನೆಗೆ ಹೋಗಬೇಕಾಯಿತು. ಆದರೂ ಆಗಾಗ ಮೊಮ್ಮಕ್ಕಳನ್ನು ಕಾಡಿಬೇಡಿ ಅವರ ಗಾಡಿಯ ಹಿಂದೆ ʻಮಂಗನ ಮರಿʼಯಂತೆ ಮೊಮ್ಮಕ್ಕಳನ್ನು ಅವುಚಿ ಹಿಡಿದು, ನಮ್ಮ ಮನೆಗೆ ಬಂದು ಇಳಿಯುತ್ತಿದ್ದರು. ಪಕ್ಕದ ಪರಿಚಯಸ್ಥರ ಮನೆಯಲ್ಲಿ ಒಪ್ಪತ್ತು ಉಂಡು/ ನಮ್ಮ ಮನೆಯಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಮತ್ತೆ ಮನೆಗೆ ವಾಪಾಸ್ ಆಗುತ್ತಿದ್ದರು...
ವಯಸ್ಸು ಹೆಚ್ಚಾಗುತ್ತಾ ಹೋದಂತೆ ಇದು ಸ್ವಲ್ಪಮಟ್ಟಿಗೆ ಕಡಿಮೆಯಾಯಿ ತು…“ಮಾಮಿ... ಆಯಿ ನಿಮ್ಮ ಮನೆಗೆ ಬರುತ್ತೇನೆಂದು ಹಠ ಮಾಡುತ್ತಾಳೆ. ಗಾಡಿಯಲ್ಲಿ ಹಿಂದೆ ಕೂಡಿಸಿಕೊಂಡು ಬರುವುದು ಸುಲಭವಾಗುವುದಿಲ್ಲ. ಮುಂದೆ ದಾರಿ ನೋಡಬೇಕೋ ಅಥವಾ ಹಿಂದೆ ಅವಳನ್ನು ನೋಡುತ್ತಿರ ಬೇಕೋ ಗೊಂದಲವಾಗುತ್ತದೆ. ಬಿದ್ದರೆ  ಎಂಬ ಭಯವೂ ಕಾಡುತ್ತದೆ.ನೀವು
ಊರಲ್ಲಿಲ್ಲ ಎಂದು ಹೇಳುತ್ತೇನೆ. ಎಂದಾದರೂ ಕೇಳಿದರೆ ʻಹೌದುʼ ಅನ್ನಿ Please.” ಇದು ಮೊಮ್ಮಕ್ಕಳ ಉಭಯಸಂಕಟ.“ಏನSSS… ಯಾವಾಗ ಕೇಳಿದರೂ ನೀ ಊರಾಗ ಇಲ್ಲ ಅಂತಾರ ನಮ್ಮ ಮೊಮ್ಮಕ್ಳು… ಗಂಡ, ಮಕ್ಳನ್ನ ಬಿಟ್ಗೊಟ್ಟು ಎಲ್ಲೆ ಹೋಗ್ತಿ? ಅವರೇನು ಮಾಡ್ಬೇಕು?” -ಇದು ಮುಂದೆಂದೋ ನನ್ನನ್ನು ಕಂಡಾಗ ಆಯಿ ತಪರಾಕಿ ತಗೋತಿದ್ದ ರೀತಿ…
ಇಂದು ತುಂಬಾ ಹಳೆಯ ಸುದ್ದಿ. ಈಗ ಅವರ ಮನೆಯ ಹಿರಿಯರ್ಯಾರೂ ಸಹಜವಾಗಿಯೇ ಇಲ್ಲ. ಐವತ್ತು ವರ್ಷಗಳಿಗೂ ಹಿಂದಿನ ಸುದ್ದಿ ಇದು. ಆದರೆ ನೆನಪುಗಳ ಕಸುವು ಕಳೆದಿಲ್ಲ… ಹಸಿ ಗೋಡೆಗೆ ನೆಟ್ಟ ಹರಳಂತೆ ಎದ್ಯಾಗ ನೆಟ್ಟು ಉಳದಾವ…ಅಂದ ಹಾಗ ಆ ಅಂತಃಕರಣ ಸ್ವರೂಪಿ, ಹೊರ ಜಗತ್ತನ್ನೇ ಕಾಣದ, ತಾನೇ ಒಂದು ಪುಟ್ಟ ವಿಶ್ವದಂತೆ ಇದ್ದ ಆ ನಮ್ಮ ʻಆಯಿʼಯ ಹೆಸರು 'ಅಕ್ಕೂಬಾಯಿ ಅಂಬೇಕರ್…'
               ಮೊನ್ನೆ ತಾನೇ ಆದ ನನ್ನ ಹುಟ್ಟುಹಬ್ಬದ ಗುಂಗಿನಲ್ಲಿ ಕಳೆದು ಹೋದಾಗ ಅಂದಿನ ಆಯಿಯ ಹುಟ್ಟುಹಬ್ಬದ ನೆನಪು ತುಂಬ ಕಾಲ ಕಾಡಿತು...ಅವರೆಲ್ಲ 'ಆಡದೇ ಮಾಡುವ ಉತ್ತಮ'ರು-ಕರ್ಮಜೀವಿಗಳು... ಅವರ ಆ ಹುಟ್ಟುಹಬ್ಬದ ಸಂಭ್ರಮದಲ್ಲಿ ಏನೋ ದೈವಿಕ ಭಾವವಿತ್ತು.ಯಾವುದೇ ಬಾಹ್ಯ ಆಡಂಬರವಿಲ್ಲದೇ ಕೇವಲ ಸಭ್ಯ ಶತಾಯುಷಿಯೊಬ್ಬರ ಆಶೀರ್ವಾದದ ನೆರಳಿನಲ್ಲಿ ಇನ್ನುಳಿದವರ ಶ್ರೇಯಸ್ಸು ಫಲಿತಗೊಳ್ಳಲಿ ಎಂಬ ಸದುದ್ದೇಶದ ಆ ಸಮಾರಂಭದೆದುರು ನಮ್ಮ ಆಡಂಬರ ಹೆಚ್ಚಾಯಿತೇನೋ - ಎಂಬ ಪುಟ್ಟ ಅಳುಕು ಅನಿಸಿದ್ದು ಯಾಕೋ ಗೊತ್ತಿಲ್ಲ...🙏🙏🙏

       ಅದೊಂದು ಕಾರ್ಯಾಲಯ. ಅದು 103 ವರ್ಷಗಳು ಮುಗಿದು 104 ಕ್ಕೆ ಕಾಲಿಟ್ಟವರೊಬ್ಬರ ಜನ್ಮದಿನ ಕಾರ್ಯಕ್ರಮ. ನಟ್ಟ ನಡುವೆ ಒಂದು ಅಲಂಕೃತ ಕುರ್ಚಿಯ ಮೇಲೆ ಕುಳಿತ ʻಮಡಿ ಹೆಂಗಸುʼ, ಅತಿ ಶುಭ್ರ ಬಿಳಿಸೀರೆ ಉಟ್ಟುಕೊಂಡು, ಪಕ್ಕಕ್ಕೆ ಧಾರವಾಡ ಫೇಡೆಯ Box ಇಟ್ಟುಕೊಂಡು, ಬಂದು ಕಾಲಿಗೆ ನಮಸ್ಕರಿಸಿದವರ ಕೈಗೆ ಎರಡು ಫೇಡೆ ಇಟ್ಟು “ನನ್ನಂತೆಯೇ ಶತಾಯುಷಿಯಾಗು”– ಎಂದು ಅವರ ತಲೆಮೇಲೆ ಕೈ ಇಟ್ಟು ಬಾಯಿತುಂಬಾ ಹರಸುತ್ತಿದ್ದರು…ಹಾಗೆಂದು ಗಟ್ಟಿ ಮುಟ್ಟಿ ಆಳಲ್ಲ. ಗುಬ್ಬಿಯಾಕಾರದಂತೆ ಪುಟ್ಟ ದೇಹಿ. ಸಂಪೂರ್ಣ ಬಾಗಿದ ಬೆನ್ನು. ಆದರೂ ಒಂದು ಕಡೆ ಹತ್ತು ನಿಮಿಷ ಕೂಡದೇ ಏನೋ ಒಂದನ್ನು ಸದಾ ಮಾಡುತ್ತಲೇ ಇರುವ ಅಭ್ಯಾಸ… ʻಹೊತ್ತಾಯ್ತು, ಊಟ ಮೊದಲು ಮಾಡಿʼ ಎಂದರೆ ʻನನಗೆ ಹಸಿವೆಯಾ ಗುವುದಿಲ್ಲʼ, ʻಚೆನ್ನಾಗಿ ನೀರು ಕುಡಿಯಿರಿʼ ಎಂದರೆ ʻನನಗೆ ನೀರಡಿಕೆಯೇ ಆಗುವುದಿಲ್ಲʼ - ಇಂಥದೇ  ಉತ್ತರ. ಅವರ ಹೊಟ್ಟೆಗೆ ದೇವರು ಅದೇನು ಅಮೃತ ಹಾಕಿದ್ದನೋ ಗೊತ್ತಿಲ್ಲ. 
ಮನೆಯಲ್ಲಿ ಎಂಟು ಮಕ್ಕಳು, ಹಿರಿ-ಕಿರಿಯರು, ಬಂದು-ಹೋಗುವ ಜನರೂ ಹೆಚ್ಚು. ಸದಾ ಒಂದಿಲ್ಲೊಂದು ಮನೆಯ ಕೆಲಸಗಳಲ್ಲಿ ಭಾಗಿ. ಅವರಲ್ಲಿ ಕೆಲಸ ಮುಗಿದರೆ, ನಮ್ಮ ಮನೆಯಲ್ಲಿ ಇಣುಕಿ, ನನ್ನ ಕೆಲಸಗಳಲ್ಲಿ ಬೇಡವೆಂದರೂ ನೆರವಾಗುವುದು ಅವರ ರೂಢಿ. ಕೂತಲ್ಲೇ ಕಾಯಿ-ಪಲ್ಲೆ ಸ್ವಚ್ಛ ಮಾಡುವುದು, ನಾನು ಕೆಲಸದಲ್ಲಿದ್ದರೆ ನನ್ನ ಮಕ್ಕಳನ್ನು ಆಡಿಸುವುದು, ತೊಟ್ಟಿಲು ತೂಗುವುದು- ಇಂಥ ಅತಿ ಅವಶ್ಯ ಕೆಲಸಗಳಲ್ಲಿ ಕೈ ಜೋಡಿಸುವು ದು ಅವರು ಮಾಡುತ್ತಿದ್ದ ಕೆಲಸ… 
ಮೊದಲೆಲ್ಲ ಕಳೆದ ಕಷ್ಟದ ಜೀವನ ಅವರಿಗೆ ಸಾಕಷ್ಟು ಪಾಠ ಕಲಿಸಿತ್ತು, ಸಹನೆ ಕಲಿಸಿತ್ತು, ದೀರ್ಘ ಕಾಯುವಿಕೆ ಯನ್ನು ಕಲಿಸಿತ್ತು.ಆ ವಯಸ್ಸಿನಲ್ಲಿಯೂ ಒಮ್ಮೆಯೂ ಸಹ ಸಿಟ್ಟಿಗೇಳುತ್ತಿರಲಿಲ್ಲ. ಮಾತು ತುಂಬಾನೇ ಕಡಿಮೆ. ಹೀಗಾಗಿಯೇ ಅವರಿಂದ ಸದ್ದಿಲ್ಲದೇ ಕೆಲಸಗಳಾಗುತ್ತಿದ್ದವು- ಎಂಬ ನಂಬಿಕೆ ನನ್ನದು.ಹತ್ತು ವರ್ಷಗಳ ನಂತರ ಅವರಿಗೆ ನಮ್ಮ ಮನೆ ಸಣ್ಣದಾಗಿ ಬೇರೆ ಮನೆಗೆ ಹೋಗಬೇಕಾಯಿತು. ಆದರೂ ಆಗಾಗ ಮೊಮ್ಮಕ್ಕಳನ್ನು ಕಾಡಿಬೇಡಿ ಅವರ ಗಾಡಿಯ ಹಿಂದೆ ʻಮಂಗನ ಮರಿʼಯಂತೆ ಮೊಮ್ಮಕ್ಕಳನ್ನು ಅವುಚಿ ಹಿಡಿದು, ನಮ್ಮ ಮನೆಗೆ ಬಂದು ಇಳಿಯುತ್ತಿದ್ದರು. ಪಕ್ಕದ ಪರಿಚಯಸ್ಥರ ಮನೆಯಲ್ಲಿ ಒಪ್ಪತ್ತು ಉಂಡು/ ನಮ್ಮ ಮನೆಯಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಮತ್ತೆ ಮನೆಗೆ ವಾಪಾಸ್ ಆಗುತ್ತಿದ್ದರು...
ವಯಸ್ಸು ಹೆಚ್ಚಾಗುತ್ತಾ ಹೋದಂತೆ ಇದು ಸ್ವಲ್ಪಮಟ್ಟಿಗೆ ಕಡಿಮೆಯಾಯಿ ತು…“ಮಾಮಿ... ಆಯಿ ನಿಮ್ಮ ಮನೆಗೆ ಬರುತ್ತೇನೆಂದು ಹಠ ಮಾಡುತ್ತಾಳೆ. ಗಾಡಿಯಲ್ಲಿ ಹಿಂದೆ ಕೂಡಿಸಿಕೊಂಡು ಬರುವುದು ಸುಲಭವಾಗುವುದಿಲ್ಲ. ಮುಂದೆ ದಾರಿ ನೋಡಬೇಕೋ ಅಥವಾ ಹಿಂದೆ ಅವಳನ್ನು ನೋಡುತ್ತಿರ ಬೇಕೋ ಗೊಂದಲವಾಗುತ್ತದೆ. ಬಿದ್ದರೆ  ಎಂಬ ಭಯವೂ ಕಾಡುತ್ತದೆ.ನೀವು
ಊರಲ್ಲಿಲ್ಲ ಎಂದು ಹೇಳುತ್ತೇನೆ. ಎಂದಾದರೂ ಕೇಳಿದರೆ ʻಹೌದುʼ ಅನ್ನಿ Please.” ಇದು ಮೊಮ್ಮಕ್ಕಳ ಉಭಯಸಂಕಟ.“ಏನSSS… ಯಾವಾಗ ಕೇಳಿದರೂ ನೀ ಊರಾಗ ಇಲ್ಲ ಅಂತಾರ ನಮ್ಮ ಮೊಮ್ಮಕ್ಳು… ಗಂಡ, ಮಕ್ಳನ್ನ ಬಿಟ್ಗೊಟ್ಟು ಎಲ್ಲೆ ಹೋಗ್ತಿ? ಅವರೇನು ಮಾಡ್ಬೇಕು?” -ಇದು ಮುಂದೆಂದೋ ನನ್ನನ್ನು ಕಂಡಾಗ ಆಯಿ ತಪರಾಕಿ ತಗೋತಿದ್ದ ರೀತಿ…
ಇಂದು ತುಂಬಾ ಹಳೆಯ ಸುದ್ದಿ. ಈಗ ಅವರ ಮನೆಯ ಹಿರಿಯರ್ಯಾರೂ ಸಹಜವಾಗಿಯೇ ಇಲ್ಲ. ಐವತ್ತು ವರ್ಷಗಳಿಗೂ ಹಿಂದಿನ ಸುದ್ದಿ ಇದು. ಆದರೆ ನೆನಪುಗಳ ಕಸುವು ಕಳೆದಿಲ್ಲ… ಹಸಿ ಗೋಡೆಗೆ ನೆಟ್ಟ ಹರಳಂತೆ ಎದ್ಯಾಗ ನೆಟ್ಟು ಉಳದಾವ…ಅಂದ ಹಾಗ ಆ ಅಂತಃಕರಣ ಸ್ವರೂಪಿ, ಹೊರ ಜಗತ್ತನ್ನೇ ಕಾಣದ, ತಾನೇ ಒಂದು ಪುಟ್ಟ ವಿಶ್ವದಂತೆ ಇದ್ದ ಆ ನಮ್ಮ ʻಆಯಿʼಯ ಹೆಸರು 'ಅಕ್ಕೂಬಾಯಿ ಅಂಬೇಕರ್…'
               ಮೊನ್ನೆ ತಾನೇ ಆದ ನನ್ನ ಹುಟ್ಟುಹಬ್ಬದ ಗುಂಗಿನಲ್ಲಿ ಕಳೆದು ಹೋದಾಗ ಅಂದಿನ ಆಯಿಯ ಹುಟ್ಟುಹಬ್ಬದ ನೆನಪು ತುಂಬ ಕಾಲ ಕಾಡಿತು...ಅವರೆಲ್ಲ 'ಆಡದೇ ಮಾಡುವ ಉತ್ತಮ'ರು-ಕರ್ಮಜೀವಿಗಳು... ಅವರ ಆ ಹುಟ್ಟುಹಬ್ಬದ ಸಂಭ್ರಮದಲ್ಲಿ ಏನೋ ದೈವಿಕ ಭಾವವಿತ್ತು.ಯಾವುದೇ ಬಾಹ್ಯ ಆಡಂಬರವಿಲ್ಲದೇ ಕೇವಲ ಸಭ್ಯ ಶತಾಯುಷಿಯೊಬ್ಬರ ಆಶೀರ್ವಾದದ ನೆರಳಿನಲ್ಲಿ ಇನ್ನುಳಿದವರ ಶ್ರೇಯಸ್ಸು ಫಲಿತಗೊಳ್ಳಲಿ ಎಂಬ ಸದುದ್ದೇಶದ ಆ ಸಮಾರಂಭದೆದುರು ನಮ್ಮ ಆಡಂಬರ ಹೆಚ್ಚಾಯಿತೇನೋ - ಎಂಬ ಪುಟ್ಟ ಅಳುಕು ಅನಿಸಿದ್ದು ಯಾಕೋ ಗೊತ್ತಿಲ್ಲ...🙏🙏🙏

       ಅದೊಂದು ಕಾರ್ಯಾಲಯ. ಅದು 103 ವರ್ಷಗಳು ಮುಗಿದು 104 ಕ್ಕೆ ಕಾಲಿಟ್ಟವರೊಬ್ಬರ ಜನ್ಮದಿನ ಕಾರ್ಯಕ್ರಮ. ನಟ್ಟ ನಡುವೆ ಒಂದು ಅಲಂಕೃತ ಕುರ್ಚಿಯ ಮೇಲೆ ಕುಳಿತ ʻಮಡಿ ಹೆಂಗಸುʼ, ಅತಿ ಶುಭ್ರ ಬಿಳಿಸೀರೆ ಉಟ್ಟುಕೊಂಡು, ಪಕ್ಕಕ್ಕೆ ಧಾರವಾಡ ಫೇಡೆಯ Box ಇಟ್ಟುಕೊಂಡು, ಬಂದು ಕಾಲಿಗೆ ನಮಸ್ಕರಿಸಿದವರ ಕೈಗೆ ಎರಡು ಫೇಡೆ ಇಟ್ಟು “ನನ್ನಂತೆಯೇ ಶತಾಯುಷಿಯಾಗು”– ಎಂದು ಅವರ ತಲೆಮೇಲೆ ಕೈ ಇಟ್ಟು ಬಾಯಿತುಂಬಾ ಹರಸುತ್ತಿದ್ದರು…ಹಾಗೆಂದು ಗಟ್ಟಿ ಮುಟ್ಟಿ ಆಳಲ್ಲ. ಗುಬ್ಬಿಯಾಕಾರದಂತೆ ಪುಟ್ಟ ದೇಹಿ. ಸಂಪೂರ್ಣ ಬಾಗಿದ ಬೆನ್ನು. ಆದರೂ ಒಂದು ಕಡೆ ಹತ್ತು ನಿಮಿಷ ಕೂಡದೇ ಏನೋ ಒಂದನ್ನು ಸದಾ ಮಾಡುತ್ತಲೇ ಇರುವ ಅಭ್ಯಾಸ… ʻಹೊತ್ತಾಯ್ತು, ಊಟ ಮೊದಲು ಮಾಡಿʼ ಎಂದರೆ ʻನನಗೆ ಹಸಿವೆಯಾ ಗುವುದಿಲ್ಲʼ, ʻಚೆನ್ನಾಗಿ ನೀರು ಕುಡಿಯಿರಿʼ ಎಂದರೆ ʻನನಗೆ ನೀರಡಿಕೆಯೇ ಆಗುವುದಿಲ್ಲʼ - ಇಂಥದೇ  ಉತ್ತರ. ಅವರ ಹೊಟ್ಟೆಗೆ ದೇವರು ಅದೇನು ಅಮೃತ ಹಾಕಿದ್ದನೋ ಗೊತ್ತಿಲ್ಲ. 
ಮನೆಯಲ್ಲಿ ಎಂಟು ಮಕ್ಕಳು, ಹಿರಿ-ಕಿರಿಯರು, ಬಂದು-ಹೋಗುವ ಜನರೂ ಹೆಚ್ಚು. ಸದಾ ಒಂದಿಲ್ಲೊಂದು ಮನೆಯ ಕೆಲಸಗಳಲ್ಲಿ ಭಾಗಿ. ಅವರಲ್ಲಿ ಕೆಲಸ ಮುಗಿದರೆ, ನಮ್ಮ ಮನೆಯಲ್ಲಿ ಇಣುಕಿ, ನನ್ನ ಕೆಲಸಗಳಲ್ಲಿ ಬೇಡವೆಂದರೂ ನೆರವಾಗುವುದು ಅವರ ರೂಢಿ. ಕೂತಲ್ಲೇ ಕಾಯಿ-ಪಲ್ಲೆ ಸ್ವಚ್ಛ ಮಾಡುವುದು, ನಾನು ಕೆಲಸದಲ್ಲಿದ್ದರೆ ನನ್ನ ಮಕ್ಕಳನ್ನು ಆಡಿಸುವುದು, ತೊಟ್ಟಿಲು ತೂಗುವುದು- ಇಂಥ ಅತಿ ಅವಶ್ಯ ಕೆಲಸಗಳಲ್ಲಿ ಕೈ ಜೋಡಿಸುವು ದು ಅವರು ಮಾಡುತ್ತಿದ್ದ ಕೆಲಸ… 
ಮೊದಲೆಲ್ಲ ಕಳೆದ ಕಷ್ಟದ ಜೀವನ ಅವರಿಗೆ ಸಾಕಷ್ಟು ಪಾಠ ಕಲಿಸಿತ್ತು, ಸಹನೆ ಕಲಿಸಿತ್ತು, ದೀರ್ಘ ಕಾಯುವಿಕೆ ಯನ್ನು ಕಲಿಸಿತ್ತು.ಆ ವಯಸ್ಸಿನಲ್ಲಿಯೂ ಒಮ್ಮೆಯೂ ಸಹ ಸಿಟ್ಟಿಗೇಳುತ್ತಿರಲಿಲ್ಲ. ಮಾತು ತುಂಬಾನೇ ಕಡಿಮೆ. ಹೀಗಾಗಿಯೇ ಅವರಿಂದ ಸದ್ದಿಲ್ಲದೇ ಕೆಲಸಗಳಾಗುತ್ತಿದ್ದವು- ಎಂಬ ನಂಬಿಕೆ ನನ್ನದು.ಹತ್ತು ವರ್ಷಗಳ ನಂತರ ಅವರಿಗೆ ನಮ್ಮ ಮನೆ ಸಣ್ಣದಾಗಿ ಬೇರೆ ಮನೆಗೆ ಹೋಗಬೇಕಾಯಿತು. ಆದರೂ ಆಗಾಗ ಮೊಮ್ಮಕ್ಕಳನ್ನು ಕಾಡಿಬೇಡಿ ಅವರ ಗಾಡಿಯ ಹಿಂದೆ ʻಮಂಗನ ಮರಿʼಯಂತೆ ಮೊಮ್ಮಕ್ಕಳನ್ನು ಅವುಚಿ ಹಿಡಿದು, ನಮ್ಮ ಮನೆಗೆ ಬಂದು ಇಳಿಯುತ್ತಿದ್ದರು. ಪಕ್ಕದ ಪರಿಚಯಸ್ಥರ ಮನೆಯಲ್ಲಿ ಒಪ್ಪತ್ತು ಉಂಡು/ ನಮ್ಮ ಮನೆಯಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಮತ್ತೆ ಮನೆಗೆ ವಾಪಾಸ್ ಆಗುತ್ತಿದ್ದರು...
ವಯಸ್ಸು ಹೆಚ್ಚಾಗುತ್ತಾ ಹೋದಂತೆ ಇದು ಸ್ವಲ್ಪಮಟ್ಟಿಗೆ ಕಡಿಮೆಯಾಯಿ ತು…“ಮಾಮಿ... ಆಯಿ ನಿಮ್ಮ ಮನೆಗೆ ಬರುತ್ತೇನೆಂದು ಹಠ ಮಾಡುತ್ತಾಳೆ. ಗಾಡಿಯಲ್ಲಿ ಹಿಂದೆ ಕೂಡಿಸಿಕೊಂಡು ಬರುವುದು ಸುಲಭವಾಗುವುದಿಲ್ಲ. ಮುಂದೆ ದಾರಿ ನೋಡಬೇಕೋ ಅಥವಾ ಹಿಂದೆ ಅವಳನ್ನು ನೋಡುತ್ತಿರ ಬೇಕೋ ಗೊಂದಲವಾಗುತ್ತದೆ. ಬಿದ್ದರೆ  ಎಂಬ ಭಯವೂ ಕಾಡುತ್ತದೆ.ನೀವು
ಊರಲ್ಲಿಲ್ಲ ಎಂದು ಹೇಳುತ್ತೇನೆ. ಎಂದಾದರೂ ಕೇಳಿದರೆ ʻಹೌದುʼ ಅನ್ನಿ Please.” ಇದು ಮೊಮ್ಮಕ್ಕಳ ಉಭಯಸಂಕಟ.“ಏನSSS… ಯಾವಾಗ ಕೇಳಿದರೂ ನೀ ಊರಾಗ ಇಲ್ಲ ಅಂತಾರ ನಮ್ಮ ಮೊಮ್ಮಕ್ಳು… ಗಂಡ, ಮಕ್ಳನ್ನ ಬಿಟ್ಗೊಟ್ಟು ಎಲ್ಲೆ ಹೋಗ್ತಿ? ಅವರೇನು ಮಾಡ್ಬೇಕು?” -ಇದು ಮುಂದೆಂದೋ ನನ್ನನ್ನು ಕಂಡಾಗ ಆಯಿ ತಪರಾಕಿ ತಗೋತಿದ್ದ ರೀತಿ…
ಇಂದು ತುಂಬಾ ಹಳೆಯ ಸುದ್ದಿ. ಈಗ ಅವರ ಮನೆಯ ಹಿರಿಯರ್ಯಾರೂ ಸಹಜವಾಗಿಯೇ ಇಲ್ಲ. ಐವತ್ತು ವರ್ಷಗಳಿಗೂ ಹಿಂದಿನ ಸುದ್ದಿ ಇದು. ಆದರೆ ನೆನಪುಗಳ ಕಸುವು ಕಳೆದಿಲ್ಲ… ಹಸಿ ಗೋಡೆಗೆ ನೆಟ್ಟ ಹರಳಂತೆ ಎದ್ಯಾಗ ನೆಟ್ಟು ಉಳದಾವ…ಅಂದ ಹಾಗ ಆ ಅಂತಃಕರಣ ಸ್ವರೂಪಿ, ಹೊರ ಜಗತ್ತನ್ನೇ ಕಾಣದ, ತಾನೇ ಒಂದು ಪುಟ್ಟ ವಿಶ್ವದಂತೆ ಇದ್ದ ಆ ನಮ್ಮ ʻಆಯಿʼಯ ಹೆಸರು 'ಅಕ್ಕೂಬಾಯಿ ಅಂಬೇಕರ್…'
               ಮೊನ್ನೆ ತಾನೇ ಆದ ನನ್ನ ಹುಟ್ಟುಹಬ್ಬದ ಗುಂಗಿನಲ್ಲಿ ಕಳೆದು ಹೋದಾಗ ಅಂದಿನ ಆಯಿಯ ಹುಟ್ಟುಹಬ್ಬದ ನೆನಪು ತುಂಬ ಕಾಲ ಕಾಡಿತು...ಅವರೆಲ್ಲ 'ಆಡದೇ ಮಾಡುವ ಉತ್ತಮ'ರು-ಕರ್ಮಜೀವಿಗಳು... ಅವರ ಆ ಹುಟ್ಟುಹಬ್ಬದ ಸಂಭ್ರಮದಲ್ಲಿ ಏನೋ ದೈವಿಕ ಭಾವವಿತ್ತು.ಯಾವುದೇ ಬಾಹ್ಯ ಆಡಂಬರವಿಲ್ಲದೇ ಕೇವಲ ಸಭ್ಯ ಶತಾಯುಷಿಯೊಬ್ಬರ ಆಶೀರ್ವಾದದ ನೆರಳಿನಲ್ಲಿ ಇನ್ನುಳಿದವರ ಶ್ರೇಯಸ್ಸು ಫಲಿತಗೊಳ್ಳಲಿ ಎಂಬ ಸದುದ್ದೇಶದ ಆ ಸಮಾರಂಭದೆದುರು ನಮ್ಮ ಆಡಂಬರ ಹೆಚ್ಚಾಯಿತೇನೋ - ಎಂಬ ಪುಟ್ಟ ಅಳುಕು ಅನಿಸಿದ್ದು ಯಾಕೋ ಗೊತ್ತಿಲ್ಲ...🙏🙏🙏

ನಿಮ್ಮೊಲುಮೆಯಿಂದಲೇ...

   ನಿಮ್ಮೊಲುಮೆಯಿಂದಲೇ...
  ‌   ಒಂದು ವಿಚಾರ ಮನದಲ್ಲಿ ಮೂಡಿ,
ತಲೆಯಲ್ಲಿ ಪಲ್ಲವಿಸಿ, ಬುದ್ಧಿ ಬಲದಿಂದ 
ಬರಹದ ರೂಪ ತಾಳುವ ಪರಿಯೊಂದು ಇದೆಯಲ್ಲ,ಅದು ಸುಲಭವಲ್ಲ. ಸ್ವಂತ ಕ್ಕೂ ಮೆಚ್ಚುಗೆಯಾಗಿ ಉಳಿದವರಿಗೂ
ಹೌದೆನಿಸಿ ಪುಸ್ತಕ ರೂಪ ಧರಿಸಿ ಕೈಗೆ
ಬರುವುದೆಂದರೆ ಹೆತ್ತು- ಹೊತ್ತು ಮಗುವೊಂದು ಬಂದಂತೆ...ಆ ಅವಧಿಯಲ್ಲಿ ಕಣ್ಣಿಗೆ ಕಾಣುವ- ಕಾಣದ
ಕೈಗಳೆಷ್ಟೋ...ಅವುಗಳ ನೆರವೆಷ್ಟೋ...
              ಇದು ನನ್ನ ನಾಲ್ಕು ಪುಸ್ತಕ ಗಳನ್ನು ಹೊರತರುವಾಗಿನ ಅನುಭವ. ಬರೆಯುವಾಗ/ ಬರೆದಮೇಲೆ/ ಓದುವವರ-ಓದಿ ಮೆಚ್ಚುಗೆ ವ್ಯಕ್ತ ಪಡಿಸುವವರ ಸಹಕಾರದಿಂದ ಪ್ರಾರಂಭವಾಗುವ ಋಣಭಾರ, ಆಶಯನುಡಿ, ಮುನ್ನುಡಿ,ಬರಹಗಳನ್ನು
ಅಚ್ಚುಕಟ್ಟಾಗಿ print worthy ಯಾಗಿಸುವವರ ಕೈಚಳಕ, cover page ಆಯ್ಕೆ, ಅಂದದ ಮುದ್ರಣ ಅಂತೆಲ್ಲ ಹಂತಗಳನ್ನು ಮುಗಿಸಿ ಕೈ ಸೇರುವುದೆಂದರೆ ಎಂಥ ಅನುಭವಿಕರಿಗೂ ಒಂದು ಎದೆಗುದಿ
ಇದ್ದೇ ಇರುತ್ತದೆ.ಇನ್ನು ಆ ಕ್ಷೇತ್ರದಲ್ಲಿ
ಎಳಸಾದ ನಮಗೆ ಕೇಳುವುದೇ ಬೇಡ.
ಪರಿಚಿತರ ಸಲಹೆ- ಸಹಾಯದ ಒಂದು ಅವಶ್ಯಕತೆ ಮುಗಿಯುವುದೇ ಇಲ್ಲ...
            ಹೀಗಿದ್ದಾಗ ಅವರಿಗೊಂದು
ಆಭಾರ ಮನ್ನಣೆ ಸಲ್ಲುವುದು ಅತ್ಯಂತ
ಸಮರ್ಥನೀಯ...ನನ್ನ ಮೊದಲ
ಮಾತು ಬರೆದಕೂಡಲೇ ಮುನ್ನುಡಿಗೆ
ನೆನಪಾದವರು ನನ್ನದೇ ನೆಲದ ಬರಹಗಾರ್ತಿ ಶ್ರೀಮತಿ ಮಾಲತಿ ಮುದಕವಿ.ತಡಮಾಡದೇ ಒಂದು ಕರೆ ಮಾಡಿ ವಿನಂತಿಸಿದೆ.ನನ್ನ ಮೇಲಿನ ಸ್ನೇಹಕ್ಕೋ/ ನನ್ನ ಧ್ವನಿಯಲ್ಲಿದ್ದ ನಲ್ಮೆಯ ಒತ್ತಾಯಕ್ಕೋ ತಕ್ಷಣ ಒಪ್ಪಿದರು.ಅದು ಅವರ ಸಹೃದಯತೆ.
ಆಶಯ ನುಡಿಗಾಗಿ ಬಹುದಿನಗಳಿಂದ 
ಭಾರತಿ ಬಿ ವಿ ಯವರನ್ನು ಸಂಪರ್ಕಿಸಬೇಕು ಎಂಬುದಿತ್ತು.ಕಾರಣ ಅವರ ಬರಹಗಳೂ ಸಹ ದಿನ ನಿತ್ಯದ ಬದುಕಿನ ಪ್ರತಿ ರೂಪಗಳೇ.ಸರಳ- ವಿಶಾಲ- ಸಾರ್ವಜನಿಕ - ತಳಸ್ಪರ್ಶಿ...
ಆದರೆ ಅವರು ತಮಗೇನೇ ಸ್ವತಃ ಸಿಗಲಾರದಷ್ಟು busy ಎಂಬ ಕಾರಣಕ್ಕೆ
ಅನುಮಾನಿಸುತ್ತಲೇ ಕೇಳಿದೆ." ನಾನೀಗ
ನನ್ನ ಪುಸ್ತಕದ ಕೆಲಸ ಒಂದು ಹದಕ್ಕೆ ತಂದು ನಿಲ್ಲಿಸಿದ್ದೇನೆ ಕೃಷ್ಣಾ ಮಾ. ಬರಹದ Pdf ಕಳಿಸಿ.ಆದಷ್ಟು ಬೇಗನೇ
ಖಂಡಿತ ಬರೆದು ಕಳಿಸುತ್ತೇನೆ - ಅಂದರು.ನನಗೆ ಪುಸ್ತಕವೇ ಕೈ ಸೇರಿದಷ್ಟು ನಿರಾಳ ಭಾವ ಬಂತು.
ನಾನು ಎಲ್ಲವನ್ನೂ type ಮಾಡುವುದು
ಮೊಬೈಲ್ ನಲ್ಲೇ.ಹೀಗಾಗಿ ಅದನ್ನು computer ಗೆ ವರ್ಗಾಯಿಸಿ print worthy ಆಗಲು ಬೇಕಾದ ಎಲ್ಲ ಕೆಲಸಗಳನ್ನು ಇದುವರೆಗೆ ಮಾಡಿಕೊಟ್ಟು ಚಂದಗಾಣಿಸಿದವರು
ಶ್ರೀಮತಿ ಸುರೇಖಾ ಭೀಮಗುಳಿ.
ಇಂಥ ನುರಿತವರ ಸಹಾಯ- ಸಹಕಾರದಿಂದ ಇದೀಗ ಎಲ್ಲವೂ
ಮುಕ್ತಾಯ ಹಂತಕ್ಕೆ ಬಂದದ್ದು ಆಶ್ಚರ್ಯವೇನೂ ಅಲ್ಲ.ಇವರೆಲ್ಲರಿಗೂ
ನಾನು ಮನಸಾ ಋಣಿ ಎಂದು ಬರೆದರೆ
ಏನನ್ನೂ ಹೇಳಿದಂತಲ್ಲ ಎಂಬುದು ಗೊತ್ತಿದೆ.ಆದರೂ ಎಲ್ಲರಿಗೂ ನನ್ನ ಸಹಸ್ರ ಸಹಸ್ರ ನಮನಗಳು...
ಇನ್ನು ಪುಸ್ತಕಗಳನ್ನು ಅಂದವಾಗಿ ಮುದ್ರಿಸಿಕೊಟ್ಟ ಮಹಿಮಾ ಪ್ರಕಾಶನದವರನ್ನು ಮರೆಯಲಾದೀತೆ?!
ಈ ಹಿಂದಿನ ಎರಡು ಪುಸ್ತಕಗಳನ್ನು ಅಚ್ಚುಕಟ್ಟಾಗಿ ಮುದ್ರಿಸಿದಂತೆ ಇದರ ಕೆಲಸವನ್ನೂ ಸಂಪನ್ನಗೊಳಸಿದ್ದಾರೆ.
ಇದರೊಳಗಿನ ಲೇಖನಗಳು ಈಗಾಗಲೇ
ನನ್ನ face book ಪುಟಗಳಲ್ಲಿ ಬಂದವುಗಳೇ... ಕಾಲಕಾಲಕ್ಕೆ ಅವುಗಳನ್ನು ಓದಿ,ಮೆಚ್ಚುಗೆ ವ್ಯಕ್ತಪಡಿಸಿ
ಸಲಹೆ- ಅಭಿಪ್ರಾಯಗಳನ್ನು ಕೊಟ್ಟು
ಹುರಿದುಂಬಿಸಿದ ಎಲ್ಲಾ ಓದುಗರೇ
ಈ ಪುಸ್ತಕ ಬರಲು ಕಾರಣವೆಂದರೆ ಅತಿಶಯೋಕ್ತಿ ಖಂಡಿತ ಅಲ್ಲ.ಆ ಕಾರಣಕ್ಕೆ ಪ್ರತ್ಯಕ್ಷವಾಗಿ- ಪರೋಕ್ಷವಾಗಿ
ಈ ಪುಸ್ತಕ ಪ್ರಕಟನೆಗೆ ಕೈಗೂಡಿಸಿ ಸಹಕರಿಸಿದ ಪ್ರತಿಯೊಬ್ಬರಿಗೂ
ನನ್ನ ಹೃದಯಾಂತರಾಳದ ನಮನಗಳು...
ಇತಿ ನಿಮ್ಮ,
ಕೃಷ್ಣಾ ಕೌಲಗಿ

    ‌        

Wednesday 7 February 2024

 ಮೊದಲ ಮಾತು...
    ‌‌‌‌‌     ನಾನು ನನ್ನ ಪದವಿ ಹಾಗೂ ಪದವಿಯೋತ್ತರ ಪರೀಕ್ಷೆಗಳಲ್ಲಿ ಭಾಷೆಗಳನ್ನು ಅಭ್ಯಸಿಸಿದವಳು ಎಂಬ
ಕಾರಣಕ್ಕೋ ಏನೋ ಭಾಷೆಗಳ ಮೇಲೆ
ಅತೀವ ಪ್ರೇಮ...ನಮ್ಮನೆಯಲ್ಲಿ ಅಪ್ಪ
ನನ್ನು ಹಿಡಿದು ಎಲ್ಲರಿಗೂ ಪುಸ್ತಕ ಪ್ರೀತಿ
ಅತಿಯಾಗಿ ಇದ್ದ ಕಾರಣಕ್ಕೆ ಕೊಂಡೋ/
ಕೆಲವೊಮ್ಮೆ ಪುಸ್ತಕಗಳನ್ನು ಬೇರೆಯವರಿಂದ ಎರವಲು ಪಡೆದೋ ಓದಿನ ಗೀಳು ಹಚ್ಚಿಕೊಂಡವರು ನಾವೆಲ್ಲ... ಬರೆಯುವ ಸಾಮರ್ಥ್ಯ ವಿದ್ದರೂ ನನ್ನ ಮೊದಲ ತಂಗಿಯನ್ನು ಬಿಟ್ಟು,ಯಾಕೋ ಬೇರೆ ಯಾರೂ ಆ ಕಡೆ ಒಲವು ತೋರಿಸಿರಲಿಲ್ಲ.ನಾನು  ಮಾತ್ರ ಶಿಕ್ಷಕಿಯಾದ ವೇಳೆಯಲ್ಲಿ ಆಕಾಶವಾಣಿ ಧಾರವಾಡದಲ್ಲಿ ಹೆಚ್ಚು ಕಡಿಮೆ ಎಲ್ಲ ವಿಭಾಗಗಳಿಗೂ ಕಾರ್ಯಕ್ರಮಗಳನ್ನು ಸತತವಾಗಿ ಕೊಡುತ್ತಿದ್ದೆ.ಕಾರಣ ಅದಕ್ಕೆ ಸಿಗುತ್ತಿದ್ದ ಹೆಚ್ಚಿನ ಆದಾಯ ಹಾಗೂ single parent ಆಗಿ ಮೈಮೇಲೆ ಬಿದ್ದ ಮೂರು ಮಕ್ಕಳ ಜವಾಬ್ದಾರಿಗೊಂದು ಆಧಾರ ವಾದೀತೆಂದು...ಅದು ಒಂದು ಸತತ ಅಭ್ಯಾಸವಾಗಿ ಬದಲಾದದ್ದು- ನಾನು ವೃತ್ತಿಯಿಂದ retire ಆಗಿ/ ಮಕ್ಕಳೆಲ್ಲ ಬದುಕಿನಲ್ಲಿ Settle ಆದಮೇಲೆಯೇ...
            ಆಗಲೇ Android phone ನ‌ ಬಳಕೆ ಹೆಚ್ಚಾದ ಕಾರಣ face book ನ ಪರಿಚಯವಾಗಿ ಹೆಚ್ಚು ಸುಲಭವಾಗಿ ಟೈಪಿಸಲು ಕಲಿತದ್ದು, ಹುರುಪಿಗೆದ್ದು ದಿನಾಲೂ ಅದು- ಇದು ಎಂದುಕೊಂಡು ಬರೆಯುತ್ತಲೇ ಹೋದದ್ದು, ಒಂದು ಪುಸ್ತಕವಾಗುವಷ್ಟು ಸರಕು ತಯಾರಾದಾಗ ವಾಶಿಂಗ್ಟನ್ ಡಿಸಿ ಯ
ಪ್ರಸಿದ್ಧ ಅಂಕಣಕಾರರಾದ ಶ್ರೀವತ್ಸ ಜೋಶಿಯವರ ವಿಶೇಷ ಸಹಕಾರದಿಂದ ನನ್ನ ಮೊದಲ ಕೃತಿ 'ನೀರ ಮೇಲೆ ಅಲೆಯ ಉಂಗುರ'- ಪ್ರಕಟಗೊಂಡದ್ದು  ಎಲ್ಲವೂ ಇದೀಗ ಇತಿಹಾಸ...
     ‌        ಆದರೂ ಮತ್ತೊಮ್ಮೆ ಹೇಳುತ್ತೇನೆ, ನಾನು ಸಾಹಿತಿಯಲ್ಲ, ಸಾಹಿತ್ಯ ಪ್ರೇಮಿ.ಓದಿನ ಹುಚ್ಚು ನನ್ನನ್ನಿಲ್ಲಿಯವರೆಗೂ ಕರೆದುಕೊಂಡು ಬಂದದ್ದು.ನನ್ನ ಲೇಖನಗಳೂ ಸಹ ಕುಟುಂಬ - ಸಮಾಜ- ಪರಿಸರ-ದಿನ ನಿತ್ಯದ ಆಗು ಹೋಗುಗಳ ಸುತ್ತಲೇ ಗಿರಕಿ ಹೊಡೆಯುತ್ತವೆ.ಒಬ್ಬರ ಅನುಭವ ' ಆ ಒಬ್ಬರದೇ ಆಗಬೇಕಿಲ್ಲ'- ಎಂಬ ಕಾರಣಕ್ಕೆ ಹಲವರಿಗೆ ತಮ್ಮವೂ ಆಗಿ ಬಿಡುತ್ತವೆ.'ಸಹಿ ಹಾಕಿದರೆ ನನ್ನದೇ'. 'ಇದು ನನ್ನದೂ ಅನುಭವ', 'ಹೌದು, ಇದನ್ನು ನಾವೂ ಬದುಕಿನಲ್ಲಿ  ಅನುಭವಿಸಿದ್ದೇವೆ'- ಎನ್ನುವವರ ಅನುಮೋದನೆ ನನ್ನಿಂದ ಮತ್ತೆ ಮತ್ತೆ
ಹೆಚ್ಚು ಹೆಚ್ಚು ಬರೆಸುತ್ತದೆ.ಅತಿ ವಾದ- ವಿವಾದಗಳ, ಹೆಚ್ಚು ನಿಖರ ಮಾಹಿತಿ ಗಳನ್ನು ಬೇಡುವ, ಒಂದು ವಿಷಯಕ್ಕೆ
ಹಲವಾರು ಆಯಾಮಗಳಿರುವ, ಉಪದೇಶದ ಧಾಟಿಯ ಬರಹಗಳ
ಗೋಜಿಗೆ ನಾನು ಹೋಗುವುದಿಲ್ಲ. ನನ್ನದೇ ಅನುಭವಕ್ಕೆ ಬಂದ,ಅದು ಇನ್ನುಳಿದವರದೂ ಆಗುವಂಥ  social
Canvas ಹೊಂದಿದ ವಿಷಯಗಳಲ್ಲಿ
ನನಗೆ ಆಸಕ್ತಿ. ಅದಕ್ಕೆಂದೇ ಯಾವಾಗಲೂ ನನ್ನ ಬರಹಗಳಿಗೆ Chat centre ಎನ್ನುವುದುಂಟು ನಾನು. ಯಾವಾಗೆಂದರೆ ಆವಾಗ, ಯಾರೆಂದರೆ ಅವರು, ಎಲ್ಲೆಂದರಲ್ಲಿ ರುಚಿ ನೋಡಬೇಕೆಂದಾಗ,ನೋಡಿ  ಕೈ  ತೊಳೆದು ಹೊರಟುಬಿಡಬಹುದು. ಅದಕ್ಕೂ ಹೆಚ್ಚಿನ ಸಾಮರ್ಥ್ಯ /ಜ್ಞಾನ/ವಿಷಯ ಸಂಗ್ರಹ/ ಬರೆಯುವ ತಾಳ್ಮೆ/ನನ್ನದು ಖಂಡಿತ ಅಲ್ಲ...
         ‌  ' ಹಾಯಿ ದೋಣಿಯ ಪಯಣ'
ನನ್ನ ಮೂರನೇ ಲಘು ಬರಹ ಸಂಗ್ರಹ.
ಬರಹಗಳ ಸಂಕಲನಕ್ಕೆ ಈ ಹೆಸರು ಕೊಟ್ಟುದಕ್ಕೂ ಕಾರಣವಿದೆ.ಬದುಕಿನ ಯಾನ ತುಂಬ ದೀರ್ಘ, ಕಷ್ಟಕರ... ಅದಕ್ಕೆ ಯಾವುದೂ ತರ್ಕಸಿದ್ಧಾಂತ ಸುಲಭ ಸಾಧ್ಯವಲ್ಲ.ಯಾವುದೋ ಅದೃಶ್ಯ ಶಕ್ತಿ ದಿಕ್ಸೂಚಿಯಾಗಿ ಬದುಕಿನ‌ ಹಡಗಕ್ಕೆ ' ಹಾಯೀ ಪಟ(ಧ್ವಜ)ದ ಕೆಲಸ ಮಾಡುತ್ತದೆ.ಗಾಳಿಯೊಂದಿಗೆ ಸೇರಿ ದಡ ಮುಟ್ಟಿಸುತ್ತದೆ.ಕಡಲ ಏರಿಳಿತಗಳನ್ನು ಗುರುತಿಸುತ್ತದೆ.ಹಾಗೇ ಬದುಕು ಕೂಡ...ಅದರ ಅನೇಕ ಸಂಗತಿಗಳು ತರ್ಕಕ್ಕೆ ನಿಲುಕುವುದಿಲ್ಲ.
ದೈವ ಚಿತ್ತವೆಂದು ಬಂದುದಕ್ಕೆಲ್ಲ ಎದೆಯೊಡ್ಡುವುದು, ಪ್ರಸಾದದಂತೆ ಕೈಮುಗಿದು ಸ್ವೀಕರಿಸುವುದು ಮಾತ್ರ
ನಮಗಿದ್ದ ಸ್ವಾತಂತ್ರ್ಯ...

              'ನೀರಮೇಲೆ ಅಲೆಯ ಉಂಗುರ' ' ತುಂತುರು ಇದು ನೀರ ಹಾಡು'- ಈ ಮೊದಲಿನವು... ನೀರಿನ ಚಲನಶೀಲತೆ/ನಿರಂತರ ಹರಿವು/ ಪಾತ್ರ/ ಆಕಾರಕ್ಕೆ ಸರಿ ಹೊಂದುಕೊಳ್ಳು ವ ಅದರ ಗುಣ ಸುಂದರ ಬದುಕಿಗೂ ಬೇಕಾಗುವ ಮೂಲಸತ್ವಗಳು. ಹೀಗಾಗಿ ನನ್ನ ಬರಹ ಸಂಕಲನಗಳಿಗೆ ' ನೀರು' ಅಮೃತಮಯವಾಗಿದೆ...ಅಗಲ- ಉದ್ದ- ಆಳಗಳನ್ನು ದೊರಕಿಸಿಕೊಟ್ಟಿದೆ. ನಿರಂತರವಾಗಿ ದಿನಕ್ಕೊಂದು ವಿಷಯ ದೊರಕುವಷ್ಟು ಸಮೃದ್ಧವಾಗಿದೆ.  ಮುಖ್ಯವಾಗಿ ನನ್ನ ಅಳವಿಗೆ
( ಸಾಮರ್ಥ್ಯ)ಕ್ಕೆ ತಕ್ಕುದಾಗಿದೆ
ಎಂಬ ಬಲವಾದ ಅನಿಸಿಕೆ ನನ್ನದು...
      ‌‌‌ಮೊದಲಿನ ಎರಡು ಕೃತಿಗಳನ್ನು
ಹಾಗೂ ಐವತ್ತು ಇಂಗ್ಲಿಷ್ ಕವಿತೆಗಳ ಅನುವಾಧ ಪುಸ್ತಕ ' ಭಾವವೆಂಬ ಹೂವು ಅರಳಿ'-ಸ್ವಾಗತಿಸಿದಂತೆ ಇದನ್ನೂ ಓದಿ ಮೆಚ್ಚುವಿರೆಂಬ ಆಶಯದೊಂದಿಗೆ.

ನಿಮ್ಮ ಪ್ರೀತಿಯ,
ಶ್ರೀಮತಿ ಕೃಷ್ಣಾ ಕೌಲಗಿ...





'
 

Tuesday 6 February 2024

            ಆಟೋಟ/ ಭಾಷಣಗಳಲ್ಲಿ ಮುಂದಿದ್ದ ಕಾಲವೊಂದಿತ್ತು.ಓದಿನಲ್ಲಿ ಅತಿ ಹಿಂದೆ- ಅತಿ ಮುಂದೆ ಎಂದೇನೂ ಅಲ್ಲದ so so class.ಸ್ಪರ್ಧೆಗಳಿದ್ದರೂ
ಶಾಲಾ ಕಾರ್ಯಕ್ರಮಗಳ ಭಾಗವಾಗಿ...
ಮಾತ್ರ...ಇತರರನ್ನು ಸೋಲಿಸಬೇಕು ಎಂಬುದಕ್ಕಿಂತ ನಾವು ಗೆಲ್ಲಬೇಕು ಎಂಬ ಆಶೆಯೇ ಕಾರಣವಾಗುವಂಥ ಮುಗ್ಧತೆ. Neck tight competitions ಎಂಬ 
ವ್ಯಾಖ್ಯಾನ ಗೊತ್ತಿರದ‌ ಭಾಗವಹಿಸುವಿಕೆ
ಪಡೆದ ಒಂದು certificate ನ್ನೇ ನೋಬೆಲ್ prize ಎಂಬಂತೆ pose
ಕೊಟ್ಟು ಪಡೆದ ನೆನಪು...ಬಾಲ್ಯ/ ಬಾಲ್ಯದ ಆಟಗಳಷ್ಟು ಸುಂದರವಾದ ದ್ದು ಬೇರೇನಿದೆ ಬದುಕಿನಲ್ಲಿ!!!ಅದೇ
ಕಾರಣಕ್ಕೆ 'ನಿನಗೇನು ಬೇಕೋ ಎಲ್ಲವನ್ನೂ ನನ್ನಿಂದ ತೆಗೆದು ಕೋ!
ನನ್ನ ಬಾಲ್ಯವನ್ನು ನನಗೆ ಕೊಟ್ಟುಬಿಡು
ಎಂದು ಗಜಲ್ ಕಾರರೂ ಹಾಡಿದ್ದಾರೆ...
           ಇದನ್ನೆಲ್ಲ ನೆನಪಿಸುವ ಒಂದು ಘಟನೆ ಮೊನ್ನೆ ನಡೆಯಿತು.ನಮ್ಮ ಹೊಸ ಮನೆಗೆ ಬಂದು ಮೂರು ದಿನಗಳು ಮಾತ್ರ ಆಗಿದ್ದವು.ಮನೆ ಹೊಂದಿಸುವ ಗಲಾಟೆಯಲ್ಲಿ ಹೊರಗೆ
ಇಣುಕಿ ನೋಡಲೂ ಆಗಿರಲಿಲ್ಲ.ಆ ದಿನ Annual Sports ಇದ್ದ ಬಗ್ಗೆ ಇನ್ನೊಮ್ಮೆ WhatsApp ನಲ್ಲಿ ವಿವರವಾಗಿ ಸಂದೇಶವೊಂದು ಬಂದಿತು. ಅಪಾರ್ಟ್ಮೆಂಟ್ ಜನರನ್ನು ಒಂದೇ ಜಾಗದಲ್ಲಿ ಭೇಟಿಯಾಗಲು ಸದವಕಾಶ ಎಂದು ಮಗಳು ಹೋಗೋಣ  ಅಂದಳು.ಒಬ್ಬರದೂ ಪರಿಚಯವಿಲ್ಲ ದೆಡೆ ಹೋಗಲು ಹಿಂಜರಿಕೆ ನನಗೆ. ' 'ಮೊದಲು' ಎಂಬುದು ಎಂದಿಗೂ ಇರು
ವುದೇ ಎಂದು ಯೋಚಿಸಿ 'ಆಯಿತು'
ಎಂದೆ...ಹೋದೆವು.ಹಿರಿಯ ನಾಗರಿಕ ರಿಗೆಂದು ಎರಡು ಆಟ...Lamon- spoon ಓಟ/ Frisbee ಎಸೆತ...
ಆಗಲೇ ಸಾಕಷ್ಟು ಜನ ಹೆಸರುಕೊಟ್ಟು ಆಗಿತ್ತು.ನಾನು ಹಿಂಜರಿಕೆಯಿಂದಲೇ
ಆಚೀಚೆ ಸುತ್ತಾಡುತ್ತಿದ್ದೆ.ನನ್ನನ್ನೂ ಕೇಳಿದರು,ಮುಂದಿನ ಬಾರಿ ಎಂದೆ... ಆಟ ಶುರುವಾದವು.Frisbee ಗೆ ಮೊದಲು ಸಂಘಟಕರು ಮತ್ತೊಮ್ಮೆ
ಕೇಳಿದಾಗ ' ನಿಂತಲ್ಲೇ ಎಸೆಯುವುದು
ತಾನೇ! ಎಂಬ ಧೈರ್ಯದಿಂದ ಒಪ್ಪಿದೆ.
ನನ್ನ ಪಾಳಿ ಬಂದಾಗ ಮೈಯಲ್ಲಿ
ಬಾಲ್ಯದ ನೆನಪುಗಳು ತುಂಬಿರಬೇಕು. ಏನು ಹುರುಪು ಬಂತೋ ಕಾಣೆ. ಸುತ್ತಲಿದ್ದವರಾರೂ ಕಾಣಲಿಲ್ಲ.ನಾನು/ ಕೈಯಲ್ಲಿ ಹಾರಾಡುವ ತಟ್ಟೆ/ ಮುಂದಿನ
 Track... ಒಮ್ಮೆ ದೀರ್ಘ ಉಸಿರು ತೆಗೆದುಕೊಂಡು ಬೀಸಿ ಒಗೆದೆ.ನನ್ನದೇ
ಎಂದು ಅನುಮಾನವಾಗುವಷ್ಟು ಹಾರಿತು. ಆಗಿನ ಮಟ್ಟಿಗೆ ನನಗಾದದ್ದು ಸಂತೋಷವೋ/ಸಂಕೋಚವೋ
ತಿಳಿಯಲಿಲ್ಲ.ಸರಿದು ನಿಂತೆ.ಎರಡು rounds ಎಸೆತಗಳಾದವು.ಸಾಕಷ್ಟು
ಜನ ಭಾಗವಹಿಸಿದ್ದರು.ಸ್ವಲ್ಪು ಹೊತ್ತು
ಇದ್ದಂತೆ ಮಾಡಿ ಅದೇ ಪರಿಚಯವಾದ ಒಬ್ಬರಿಗೆ ಹೋಗುತ್ತೇನೆ ಎಂದು ಹೇಳಿ
ಹೊರಟೆ.ದೂರದಲ್ಲಿ result ತಯಾರಿ ಸುತ್ತಿದ್ದ ಸಂಘಟಿಕರಲ್ಲಿ ಒಬ್ಬರು ಓಡಿ ಬಂದು," congratulations ಆಂಟಿ, ನಿಮಗೆ ಸೆಕೆಂಡ್ prize,ಇನ್ನೇನು ಬರಿ prize distribution ಉಳಿದಿದೆ,ತೆಗೆದು
ಕೊಂಡೇ ಹೋಗಿ ಅಂದಾಗ ನಾನು
' ಬೆಬ್ಬೆಬ್ಬೆ'- ಅನ್ನುವಷ್ಟು ನನಗೆ ಅಚ್ಚರಿ.
ಮುಂದಿನದು ಒಂದು trophy/ ಒಂದು
ಫೋಟೋ ಅಷ್ಟೇ....
            ಘಟನೆ ಸಣ್ಣದು/ಪರಿಣಾಮ 
ದೊಡ್ಡದು.ಜನ ಹೇಗೋ ಏನೋ/ ಭೇಟಿ ಯಾವತ್ತು? ನನಗೆ ಹೊಸ ವಾತಾವರಣ ಹೊದೀತಾ? ಎಂತೆಲ್ಲ ಮನಸ್ಸಿನಲ್ಲಿದ್ದ ಗೊಂದಲಗಳಿಗೆ ಅರಿವೇ ಇಲ್ಲದಂತೆ ತೆರೆ ಬಿದ್ದದ್ದು ಸಣ್ಣ ವಿಷಯ ವೇನಲ್ಲ. ಯಾರೋ ಬಂದರು.ಹೆಸರು
ಕರೆದಾಯಿತು,ಅನೇಕರು ಮುಗುಳ್ನಕ್ಕ ರು.ಕೆಲವರು ಕೈ ಕುಲುಕಿದರು...
ನನ್ನ ಹೆಸರು ಕೇಳಿ, ತಮ್ಮದನ್ನು ಹೇಳಿ 
ತಾವು ಪ್ರತಿದಿನ ಸಾಯಂಕಾಲ ಸೇರುವ
ಜಾಗ/ ವೇಳೆ ತಿಳಿಸಿ ಬರಲು ಆಹ್ವಾನಿಸಿದರು...ಗೊತ್ತೇ ಆಗದಂತೆ
ನನ್ನ ಹೋಳಿಗೆ ತುಪ್ಪದಲ್ಲಿ ಜಾರಿ ಬಿದ್ದಿತ್ತು...

 



Sunday 4 February 2024

ಬದುಕು ಹಾಗೇ ಸಾಗುತ್ತಿದೆ...

 'ಸಂಧ್ಯಾ- ರಾಗ'...
     
ಯೌವನದ ಗುರುತುಗಳನ್ನು ಕಳೆದು
ಕೊಂಡು ಬದುಕುವದು 
ಯಾರಿಗೂ ಸುಲಭ ಸಾಧ್ಯವಲ್ಲ...
ನಸುಕಿನಲ್ಲೆದ್ದು ಮಗ್ಗಲು ಬದಲಿಸುವಾಗ ನಡುವಿನಲ್ಲಿ ಮೊದಲಿನ ಕಸುವಿಲ್ಲ...ಆದರೂ ಪರವಾಯಿಲ್ಲ, ಸಾಗುತಿದೆ ಬದುಕು...

ಬೆಳಿಗ್ಗೆ ಎದ್ದು ಚಹ ಮಾಡುತ್ತೇನೆ...
ಪೇಪರ್ ಓದುತ್ತೇನೆ...
ಮೊದಲಿನಂತೆ ಜೊತೆಗಾರರಾರಿಲ್ಲ,
ಮೊದ ಮೊದಲು 
ದೊಡ್ಡಮನೆಯ ಬಾಲ್ಕನಿಗಳಿಂದ 
ಮನೆ ತುಂಬ ಸೂರ್ಯಕಿರಣಗಳ ಸಂತಸವಿತ್ತು,
ಈಗ ಪುಟ್ಟ ಫ್ಲ್ಯಾಟ್ ನ ಸೂರ್ಯ,
ಕಿಟಕಿಗಳಿಂದಲೇ ಒಂದು ಗಂಟೆ
ಕಾಲ ಒಳಗಿಣುಕುತ್ತಾನೆ,
ಹಾಗೇ ಸಾಗುತಿದೆ ಬದುಕು...

ಮಳೆ ಬಂದರೆ ಛತ್ತು ಇದೆ, 
ಛತ್ರಿಯೂ ಇದೆ...
ಉಪದೇಶ ಕೊಡಲು ಜನರಿದ್ದಾರೆ...
ಮುದ್ದಿಸಲು,ಆಲಂಗಿಸಲು ಮೊಮ್ಮಕ್ಕಳು ಇವೆ.‌
ನನ್ನದೇ ಒಂದು ಪುಟ್ಟ 
ಕೋಣೆಯೂ ಇದೆ,
ಆದರೆ ವಾಕಿಂಗ್ ನಂತರ 
ಬೆವರು ಸುಲಭದಲ್ಲಿ ಆರುವುದೇ ಇಲ್ಲ-
ಒಟ್ಟಿನಲ್ಲಿ ಸಾಗುತಿದೆ ಬದುಕು...

ಹಾಗೆಂದು ಖುಶಿ ಖುಶಿ
ಇರುವವರನ್ನು ಕಂಡರೆ ನನಗೆ
ಅಸೂಯೆಯೇನೂ ಇಲ್ಲ...
ಕಾರಿನ ಕಿಟಕಿ ಕೆಳಗಿಳಿಸಿ
ಗಾಳಿ ಕುಡಿಯುತ್ತೇನೆ...
ಹಾಕಿದ ಹಾಡನ್ನೇ ಮತ್ತೆ 
ಮತ್ತೆ ಹಾಕಿಕೊಂಡು ಕೇಳುತ್ತೇನೆ...
ಸಾಕಿನ್ನು, ಗೆಳತಿಯರು ಅನ್ನುತ್ತೇನೆ,
ಮರುಕ್ಷಣವೇ -ಅವರನ್ನು ಮನೆಗೆ ಕರೆಯುತ್ತೇನೆ...
ನನ್ನದೇ ಮರ್ಜಿಯಲ್ಲಿ ಸಾಗುತಿದೆ ಬದುಕು...

ಒಮ್ಮೊಮ್ಮೆ,
ಮಾಡಿದ ಅಡುಗೆ ಸೀದು ಹೋಗುತ್ತದೆ-
ಆದರೂ ಅದೇ ಜಗತ್ತಿನ best food
ಅನಿಸುತ್ತದೆ...
ಯೋಗ ಅಂದರೆ ಆಸಕ್ತಿ ಇರಲಿಲ್ಲ,
ಈಗ ನನಗಿಂತ ಅರ್ಧವಯಸ್ಸಿನ  
'ಗುರು' ವಿನಿಂದ ಕಲಿಯುತ್ತಿದ್ದೇನೆ...
ಪರವಾಯಿಲ್ಲ , 
ಹೆಚ್ಚು-ಕಡಿಮೆ ಸಾಗುತಿದೆ ಬದುಕು...

ಇಂದಿಗೂ ಕನ್ನಡಿಯೆದುರು ನಿಂತು
ಮತ್ತೆ ಮತ್ತೆ ನೋಡಿಕೊಳ್ಳುತ್ತೇನೆ.
ಬಾಲ್ಯ ಯೌವನವಾಗಿ,
ಯೌವನ ಪ್ರೌಢಾವಸ್ಥೆಗೆ ತಿರುಗಿ
ನಂತರ ಇಂದಿಗೆ ಹೇಗೆ,ಯಾವಾಗ ಬದಲಾಯಿತೋ ಗೊತ್ತಾಗಲೇಯಿಲ್ಲ...
ಬದುಕು ನನ್ನನ್ನು ಪರೀಕ್ಷಿಸಿದಷ್ಟೇ ನಾನೂ ಅದನ್ನು ಪರೀಕ್ಷಿಸಿದ್ದೇನೆ...
ನಮ್ಮಿಬ್ಬರ ಜುಗಲ್ಬಂದಿಯಲ್ಲಿ ಸಾಗುತಿದೆ ಬದುಕು...

ಕೆಲಸಗಳು ಕಡಿಮೆಯಾಗಿವೆ,
ಆದರೆ ಕೆಲ ಆಸೆಗಳು ಕಡಿಮೆಯಾಗಿಲ್ಲ...
ಹಲವರು ಹೇಳಿದ್ದನ್ನೇ ಹೇಳುತ್ತಾರೆ, ಏನೂ ಅನಿಸುವದಿಲ್ಲ...
ಬಾಲ್ಯದ ಹಲವಾರು ಗಲ್ಲಿ/ ಓಣಿ/ ಚಾಳು/ಅಂಗಡಿ/ಪೇಟೆ 
ಎಲ್ಲವೂ ನೆನಪಿನಲ್ಲಿವೆ...
ಆದರೆ ಈಗೀಗ ಏನನ್ನೂ
ಕೊಳ್ಳುವ ಮನಸ್ಸಾಗುವುದಿಲ್ಲ...
ಯಾರೇ ದಾರಿಯಲ್ಲಿ ಸಿಗಲಿ,
ಎಲ್ಲೋ ನೋಡಿದ್ದೇನೆ ಅನಿಸುತ್ತದೆ...
ಹೀಗೇ ಒಂದು ಲಯದಲ್ಲಿ 
ನಿತ್ಯ ಸಾಗುತಿದೆ ಬದುಕು...

ಮನೆಯೀಗ ಸ್ವಲ್ಪ ನೀಟಾಗಿದೆ, 
ಅಲ್ಲಲ್ಲಿ ಬಿದ್ದ ಪುಸ್ತಕಗಳು 
ಗಾಜಿನ ಕಪಾಟು ಸೇರಿವೆ...
ಸ್ನಾನದ ನೀರಿಗೆ ತಣ್ಣೀರು
ಬೆರೆಸಿಕೊಳ್ಳಬೇಕಾಗುತ್ತದೆ... 
'ರೀಲು'ಗಳನ್ನು ನೋಡುತ್ತಲೇ ಗಂಟೆಗಳನ್ನು ಕಳೆಯುತ್ತೇನೆ...
ಆದರೆ ಪಾಪ್ಕಾರ್ನ ಇಲ್ಲದೇ ಸಿನೆಮಾ
ನೋಡಲಾಗುವುದಿಲ್ಲ...
ಹೆಚ್ಚು ಕಡಿಮೆ ಹಾಗೇ ಸಾಗುತಿದೆ ಬದುಕು..

ಆಸು ಪಾಸಿನ ಮಕ್ಕಳು
ಆಂಟಿ ಅನ್ನುವದನ್ನು ಬಿಟ್ಟು ಯಾವಾಗ ' ಅಜ್ಜಿ' ಸುರುಮಾಡಿದರೋ ಗೊತ್ತಾಗಲೇಯಿಲ್ಲ... 
ಮನಸ್ಸಿಗೆ ನೋವಾದರೆ
ಕಣ್ಣುಗಳು ಹನಿಗೂಡುತ್ತವೆ-
ಎಂಬುದು ಯಾವಾಗ ತಿಳಿಯಿತೋ, 
ಅರಿವಿಗೇ ಬರದೇ ಸಾಗುತಿದೆ ಬದುಕು.

ಪರವಾಯಿಲ್ಲ, 
ಬದುಕು ಬದಲಾದರೂ 
ಹೆಚ್ಚು ಕಡಿಮೆ ಹಾಗೇ ಸಾಗಿದೆ, 
ಆರೋಗ್ಯವಿದೆ, ಗೆಳೆತಿಯರಿದ್ದಾರೆ, 
ಇನ್ನೂ ಬಾಕಿ ಬದುಕು ಕಳೆಯುವದಿದೆ...
ಖುಶಿ ಖುಶಿಯಾಗಿ ನಗುತ್ತಾ
ಇದ್ದುದನ್ನೇ ಒಪ್ಪುತ್ತಾ, ಅಪ್ಪುತ್ತಾ  
ಬದುಕಿ ಹೋಗುವದಿದೆ...
ಎಂಬ ಜ್ಞಾನದೊಂದಿಗೆ ಸಾಗುತಿದೆ
ಬದುಕು...

( ಮೂಲ: ಹಿಂದಿಯಿಂದ...)

Friday 2 February 2024

ಅಜ್ಞಾತವಾಗಿರುವುದರಲ್ಲೂ ಮಜಾ ಇದೆ...
              ನಾವು ಕೋರಮಂಗಲಕ್ಕೆ ಬಂದು ಒಂದೇ ವಾರ...ಅದರಲ್ಲಿ ಬಹಳಷ್ಟು ಸಮಯ ಮನೆ ಹೊಂದಿಸು ವುದರಲ್ಲಿ ಕಳೆದು ಹೋಗಿದೆ.ಯಾವುದ ನ್ನು ಎಲ್ಲಿಡಬೇಕು ಎಂಬ calculation ಮೊಟ್ಟ ಮೊದಲು ಸರಿಹೋಗಬೇಕು. ದಿನ ಬಳಕೆಯ ವಸ್ತುಗಳು ಕೈಗೆಟಕು ವಂತೆ, ವಾರಕ್ಕೊಮ್ಮೆ ಬೇಕಾಗುವುದು 
ಕಪಾಟಿನ ಮೇಲ್ಭಾಗದಲ್ಲಿ, ಅಪರೂಪಕ್ಕೆ
ಬೇಕಾಗುವುದನ್ನು ಲಾಫ್ಟ ಮೇಲೆ ಸೇರಿಸಬೇಕು.ಇಲ್ಲದಿದ್ದರೆ ಆಗುವ ಗೊಂದಲ ನಂತರ ತಲೆ ಬಿಸಿಮಾಡುವು ದಲ್ಲದೇ ವ್ಯರ್ಥವಾಗಿ ಸಮಯವನ್ನು ನುಂಗಿ ಹಾಕುತ್ತದೆ.ಇದನ್ನು ಮಗಳು- ಅಳಿಯನೇ ಮಾಡಿದರೂ ನಮ್ಮ ಕೋಣೆ ನಮ್ಮದೇ ತಲೆನೋವು...
                  ತಕ್ಕ ಮಟ್ಟಿಗೆ ಪರವಾಗಿಲ್ಲ
ಅಂತಾದಾಗ ಬೆಳಗಿನ ಹೊತ್ತು ಸ್ವಲ್ಪ ಸಮಯ ಹೊರಗೆ ಸುತ್ತಾಡಲು/ಬಿಸಿಲು
ಕಾಸಲು ಸಮಯ ತೆಗೆದಿಟ್ಟುಕೊಂಡೆ. ಸಾಕಷ್ಟು ಜನ ಸಿಕ್ಕರೂ ಯಾರದೂ
ಪರಿಚಯವಿಲ್ಲ.ಒಮ್ಮೆಲೇ ಆಗುವುದೂ ಇಲ್ಲ ಬಿಡಿ.ಯಾರು ಹೇಗೋ ಗೊತ್ತಾಗು ವವರೆಗೂ ನಮಗೂ ಹಿಂಜರಿಕೆಯೇ. ನನ್ನ ಪಾಡಿಗೆ ನಾನು ಸುತ್ತುವುದೂ ಒಂದು ರೀತಿಯಲ್ಲಿಖುಶಿಯೇ.ಸುತ್ತಲೂ ಯಾರೆಲ್ಲ ಇದ್ದರೂ ಸಂಬಂಧವೇ ಇರ ದಂತೆ ನಮ್ಮಷ್ಟಕ್ಕೇನೇ ನಾವಿರುವುದೂ ಒಂದು ರೀತಿಯಲ್ಲಿ ಹಾಯೆನಿಸಿದ ಅನುಭವವಾಯಿತು.ನಿಜವಾಗಿಯೂ ಒಂದು Luxury..ಇತ್ತೀಚೆಗೆ ಇಂಗ್ಲಿಷ್/ಹಿಂದಿ ಅಂಥ ನಮ್ಮದಲ್ಲದ ಭಾಷೆಯಲ್ಲಿ ಹರಟಲು ಮನಸ್ಸಾಗುವುದಿಲ್ಲ... ನಿಜವೋ/ಸುಳ್ಳೋ ಯಾರನ್ನು ಕೇಳಿದರೂ 'ತಿಳಿಯುತ್ತದೆ, ಮಾತನಾಡ ಲು ಬರುವುದಿಲ್ಲ.- ಎಂದೇಹೇಳುವುದು. ಲೆಕ್ಕ ಇಟ್ಟು ಹೆಜ್ಜೆ ಹಾಕಿದಂಥ ಭಾವ... ಮನಸ್ಸಿನಲ್ಲಿ .ಬಂದ ಭಾವಗಳನ್ನು ಲೆಕ್ಕಾಚಾರವಿಲ್ಲದೇ ಮಾತಿಗಿಳಿಸುವ ಕಲೆ ಮಾತೃಭಾಷೆಗೆ ಸಿದ್ಧಿಸಿದಷ್ಟು ಬೇರಾವುದಕ್ಕೂ ಸಿದ್ಧಿಸದು ಮನಸ್ಸಿಗೂ ತೃಪ್ತಿಯೆನಿಸದು.ಅದು ಅನಿವಾರ್ಯ ವೆಂದಾದರೆ ಆ ಮಾತು ಬೇರೆ. ಆ ಕಾರಣಕ್ಕೆಎರಡು ದಿನ ನನ್ನನ್ನು
ನೋಡಿ ಹತ್ತಿರ ಬಂದವರೊಡನೆ ಅಷ್ಟಿಷ್ಟು ಮಾತನಾಡುವ/ಆದಷ್ಟೂ
ಪರಿಸರಕ್ಕೆ ಪರಿಚಿತಳಾಗುವ ನಿರ್ಧಾರ
ಮಾಡಿ ನಾಲ್ಕೈದು ದಿನಗಳೀಗ ಕಳೆದವು.ನೆಮ್ಮದಿಯಾಗಿದ್ದೇನೆ,ಕೆಲ ದಿನಗಳು ಕಳೆದ ಮೇಲೆ ಮತ್ತೆ ನೋಡಿದರಾಯಿತೆಂಬ ಲೆಕ್ಕದೊಂದಿಗೆ-.
ಸಂತೆಯಿಂದ ದೂರವಿದ್ದ ಕಾರಣ ನನ್ನೊಡನೆ ನಾನು ಕಳೆವ ಸಮಯ ಹೆಚ್ಚಾಗಿದೆ. ಹಿತವಾಗಿದೆ.ಅಪೇಕ್ಷಣೀಯ
ವೆನಿಸಿದೆ.ಕೈಲಾದಷ್ಟು ಕೆಲಸ/ ದಿನಕ್ಕೆರಡು ಫೋನು/ ಎರಡು TNS ಧಾರಾವಾಹಿಗಳು/ಮೊಮ್ಮಕ್ಕಳೊಂದಿಗೆ
ಸಿಕ್ಕಷ್ಟು ಹೊತ್ತು ಕಾಲಹರಣ ಇಂಥವೇ ಅನಿವಾರ್ಯ/ಅಪೇಕ್ಷಿತ/ ಅತಿ ಅವಶ್ಯಕವೆನಿಸಿದ ಚಟುವಟಿಕೆಗಳಲ್ಲಿ
ವ್ಯಸ್ತವಾಗಿರುವುದೂ ಒಂದು ಹೊಸಪ್ರಯೋಗವೇ!!!!
      ‌   ‌‌‌  ಸಧ್ಯ ಅಷ್ಟೇ ಜಾರಿಯಲ್ಲಿದೆ...





      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...