Sunday, 4 December 2022

   ‌‌‌    ಒಬ್ಬ ವ್ಯಕ್ತಿಯಿದ್ದ.ಅವನಿಗೆ ಮೈ ತುಂಬ ಬಟ್ಟೆ ಹಾಕ್ಕೊಂಡ್ರೆ ಏನೋ ಇರುಸು ಮುರಿಸು. ಹೀಗಾಗಿ ಎಲ್ಲೆ ಹೋದರೂ ಕನಿಷ್ಟತಮ ಬಟ್ಟೆಯಲ್ಲೇ ತಿರುಗುತ್ತಿದ್ದ. ಒಂದುಸಲ ಪರಿಚಯದ ವ್ಯಕ್ತಿಯೊಬ್ಬರು ," ಯಾಕಯ್ಯಾ, ಏನಿದು
ಅವತಾರ? ಹೊರಗಡೆಯಾದರೂ ಚಂದಾಗಿ dress ಮಾಡಿ ಅಡ್ಡಾಡಬಾರ್ದೇ"- ಅಂದರು.ಅವನು
ಹೇಳಿದ," ಎಂಥ ವಿಚಿತ್ರ ನೋಡಿ ಸಾರ್,
ನಾನೂ ನಿಮನ್ನು ಒಂದು ಪ್ರಶ್ನೆ  ಕೇಳ್ಬೇಕೂಂತಾನೇ ಇದ್ದೆ,ಅದೇಕೆ ಸಾರ್, ಸದಾ ಉಸಿರುಗಟ್ಟುವ ಹಾಗೇ ಮೈತುಂಬಾ ಬಟ್ಟೆ ಸುತ್ಗೋತೀರಾ? ಸ್ವಲ್ಪು ಸಡಿಲಾಗಿ ಎಷ್ಟು ಬೇಕು ಅಷ್ಟೇ
Dress ಮಾಡಿ ಹಾಯಾಗಿ ಉಸರಾಡ್ಕೊಂಡು ಇರ್ಬಾರ್ದಾ?"
ಎಂದು ಕೇಳಿದ...
              ‌ಯಾರದು ಸರಿ? ಯಾರದು
ತಪ್ಪು? ಅವರವರಿಗೆ ಅವರವರದೇ ಸರಿ. ಯಾಕೆಂದರೆ ಅವೆಲ್ಲ ವೈಯಕ್ತಿಕ
ನಿಲುವುಗಳು.ಆಚಾರ, ವಿಚಾರದಂತೆ
ಉಡುಪು ಸಹ ವ್ಯಕ್ತಿಗತ ವಿಷಯ. ನಮ್ಮ ಅಭಿಪ್ರಾಯ ಅಲ್ಲಿ ಅನಗತ್ಯ. ಹಾಗೆಯೇ ನಮ್ಮ ಅನಿಸಿಕೆಗಳು ನಮ್ಮವು.ಅವು ಇತರರಿಗೆ ಯಾವುದೇ ರೀತಿಯಲ್ಲಿ ಅಡ್ಡ ಪರಿಣಾಮವಾಗದಿದ್ರೆ  ಕೇಳುವ ಅವಶ್ಯಕತೆಯಿಲ್ಲ.
             " ಹೌದು, ಇದು ನನ್ನ ನಿಲುವು. ನಾನು ಅತಿ ಓದಿದವಳಲ್ಲ.ಯಾವುದೇ
'ಇಸಂ' ಗೆ ಸೇರಿದವಳಲ್ಲ.ಹೀಗೇ ಇರಬೇಕು ಎಂಬ ಹಟವಿಲ್ಲ. ಹೀಗೇ ಎಂದು ಹಟಹಿಡಿದು  ಸಾಧಿಸುವಷ್ಟು ಜ್ಞಾನ ಸಂಪಾದನೆಯೂ ನನ್ನದಲ್ಲ.ನನ್ನ
ಅರಿವಿಗೆ ಬಂದಷ್ಟು ಬರೆದುಕೊಂಡು, ತಿಳಿದಷ್ಟು ಅರಗಿಸಿಕೊಂಡು, ನನ್ನದೇ
ಒಂದು ಮಿತಿಯಲ್ಲಿ ಬದುಕುವದನ್ನು ಕಲಿತಿದ್ದೇನೆ.ಆದರೆ ನನ್ನ ಸ್ನೇಹಿತ ವರ್ಗ ತುಂಬ ವಿಶಾಲ ಹಾಗೂ ವೈವಿಧ್ಯಮಯ
ಎಲ್ಲನಮೂನೆಯ ಪ್ರತಿಭಾವಂತರಿದ್ದಾರೆ
ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಬೆಳೆದು ನಿಂತ ವರಿದ್ದಾರೆ.ಅದನ್ನು ಯಾವುದೇ  ಪೂರ್ವಾಗ್ರಹವಿಲ್ಲದೇ ಅನುಭವಿಸಿ
ಆನಂದಿಸುತ್ತೇನೆ.- ಎಂದೆಲ್ಲ ನನ್ನ ಮಟ್ಟಿಗೆ ನಾನು ಅಂದುಕೊಂಡದ್ದಿದೆ.
ಎಲ್ಲರನ್ನೂ ಮೀರಿದ ಅರಿವು ನನಗಿದೆ, ಪರವಾಗಿಲ್ಲ ಎಂಬುದೊಂದು ಸಣ್ಣ ಜಂಬವಿತ್ತಾ? ಗೊತ್ತಿಲ್ಲ.
      ‌‌‌         ತಿಳಿರು- ತೋರಣ ಮಾಲಿಕೆ ಯಲ್ಲಿ ಶ್ರೀವತ್ಸ ಜೋಶಿಯವರ ಇಂದಿನ ಕಂತು ಓದಿ, ಪ್ರತಿಕ್ರಿಯೆ ನೀಡಿ, ಆದಮೇಲೆ ಸಾಯಂಕಾಲ ಅವರದೇ ಒಂದು ಶತಾವಧಾನದ ಹಳೆಯ ವೀಡಿಯೋ ನೋಡಿ ಅದೇ ಗುಂಗಿನಲ್ಲಿದ್ದಾಗ ಜೋಶಿಯವರಿಗೆ ಧನ್ಯವಾದಗಳನ್ನು ಹೇಳಿದ ಶತಾವಧಾನಿ ಆರ್ ಗಣೇಶ್ ಅವರ ಧ್ವನಿಯ ಆಡಿಯೋ ಕೇಳಿದೆ.ನನ್ನ ಅಹಂ ನ ಬಲೂನಿಗೆ ಸೂಜಿ ಚುಚ್ಚಿದಂತಾಗಿ  ಚಪ್ಪಟೆಯಾದದ್ದು ಇನ್ನೂ ಸರಿಯಾಗಿಲ್ಲ...

       




No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...