Friday, 4 November 2022

ನಿಮ್ಮಾತ್ಮವೇ ದಣಿದು ಹೋದರೆ,
ಮನಸ್ಸು ಏನನ್ನೂ ಸ್ವೀಕರಿಸುವದಿಲ್ಲ...
ಬದುಕು,ಪ್ರೀತಿ, ಸಾಹಸ,ಎಲ್ಲವೂ ಅರ್ಥಕಳೆದುಕೊಳ್ಳುತ್ತವೆ...
ತಿಂದನ್ನ ಕರಗುವದಿಲ್ಲ...

ಬದುಕಿನ ಆ ಬ್ರಹತ್ ಶೂನ್ಯತೆಗೆ ಸುಲಭ ಪರಿಹಾರ ಸಿಗುವದಿಲ್ಲ,
ಗಳಿಸಿಟ್ಟ ಏನೆಲ್ಲವನ್ನೂ ತೆತ್ತರೂ ಆರೋಗ್ಯ, ಆರಾಮ, ನೆಮ್ಮದಿ
ಕೊಳ್ಳಲಾಗುವದಿಲ್ಲ...
ಆನಂದದ ಬಳ್ಳಿಗೆ ಮತ್ತೆ ಮತ್ತೆ
ನೀರೆರೆಯದ ಹೊರತೂ
ಕುಬೇರನ ಆಸ್ತಿಯನೆಲ್ಲ ವ್ಯಯಿಸಿದರೂ
ಬದುಕಿನ‌ ಬಳ್ಳಿ ಹೂ ಬಿಡುವದಿಲ್ಲ...

ಅಷ್ಟೇ ಏಕೆ,
ನಿದ್ದೆಯೂ ಕೂಡ ನೆಮ್ಮದಿ ತರುವದಿಲ್ಲ...
ಆದರೆ, ಒಂದು‌ಮಾತು...
ಹಾಗೆಂದು,
ಹತಾಶರಾಗಬೇಕಿಲ್ಲ.
ನಿಮ್ಮಾತ್ಮ‌ ದಣಿದಾಗ,
ದಣಿದು ಬೇಸತ್ತಾಗ,
ನಿಮ್ಮ ಸುತ್ತುಮುತ್ತಲೇ
ಹೇರಳವಾಗಿ ,ಉಚಿತವಾಗಿ,
ಎಲ್ಲೆಲ್ಲೂ ಪರಿಹಾರಗಳು
ಕಾಣಸಿಗುತ್ತವೆ...
ಕಣ್ಣು ತೆರೆದು ಒಮ್ಮೆ ನೋಡಿ,
ದಿನನಿತ್ಯದ ಸರಳ, ಸಹಜ, ಸುಂದರ ಸಂಗತಿಗಳಲ್ಲೇ ಮನಸ್ಸು ನೆಟ್ಟು ನೋಡಿ...
ನಂಬಲಾಗದ ಖುಶಿ ನಿಮ್ಮದಾಗಬಹುದು.
ಬದುಕು ಮರಳಿ ಚಂದವಾಗಬಹುದು...

No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...