Saturday, 5 November 2022

ಸರಳ, ಸಾತ್ವಿಕ ಬದುಕು
ಅಪರಾಧವಲ್ಲ,
ಅದಕ್ಕಾಗಿ ನಾಚಿಕೆ ಪಡಬೇಕಿಲ್ಲ... ಯಾರನ್ನೋ
ಏನನ್ನೋ ಕಳೆದುಕೊಳ್ಳುವದು
ಬದುಕಿನ‌ ಕರಾಳತೆಯಲ್ಲ...
ಅಂಥದರಲ್ಲಿ
ನಿಮ್ಮತನವನ್ನು ಗುರುತಿಸಿ, ಉಳಿಸಿಕೊಂಬುದು
ಸಣ್ಣ ಸಾಧನೆಯೇನೂ ಅಲ್ಲ...

ನೀವೆಷ್ಟು ದೊಡ್ಡವರು?
ನಿಮ್ಮ ವಯಸ್ಸೇನು ? ಬೇಕಿಲ್ಲ...
ಉಸಿರಿದ್ದರೆ ಸಾಕು,
ಮನಸು ಹಸಿರಿದ್ದರೆ ಸಾಕು...
ಬದುಕು ಬೊಗಸೆ ತುಂಬಿ ಕೊಡುತ್ತದೆ.
ಹಿಡಿಯಷ್ಟು ಸ್ವಾತಂತ್ರ್ಯ/ ಉತ್ಸಾಹ...
ಇದ್ದರೆ ಸಾಕು, ಸ್ವರ್ಗ ತೆರೆಯುತ್ತದೆ...

ಬದುಕೆಂದರೆ ಎರಡಲಗಿನ ಕತ್ತಿ
ಇದ್ದಂತೆ...
ಗಳಿಗೆಗೆ ಖುಶಿ, ಆನಂದ ,ತೃಪ್ತಿ-
ಬದುಕು ತಂಗಾಳಿ...
ಮರುಗಳಿಗೆ ನೋವು, ವೇದನೆ, ಕಷ್ಟ-
ಆಗ ಅದು ತೀಕ್ಷ್ಣ ಬಿರುಗಾಳಿ...

ಯಾರಿಗೂ, ಯಾವುದಕ್ಕೂ,
ಏನನ್ನೂ ಇಲ್ಲಿ ಹೋಲಿಸಲಾಗದು...
ಅಕಾರಣವಾಗಿ ಸೋಲಿಸಲಾಗದು...
ಅವರೆದೆಯ ನೋವು
ಅವರಿಗೇನೇ ಗೊತ್ತು,
ನಮ್ಮದೇನಿದ್ದರೂ ನಮ್ಮ ಸೊತ್ತು...
ನಮ್ಮ ಯುದ್ಧ ಕೇವಲ ನಮ್ಮದು...
ನಮ್ಮ ಗೆಲವು/ ಸೋಲು ನಮ್ಮದೇ...
ಉಳಿದವರ ಚಿಂತೆ ನಮ್ಮದಲ್ಲ...
ನಮ್ಮ ಬದುಕು ಸಫಲವೋ/ಅಸಫಲವೋ ಚಿಂತೆ ಅವರದಲ್ಲ...

No comments:

Post a Comment

        ಧಾರವಾಡದಲ್ಲಿ ಇಂದಿಗೆ ಹತ್ತು  ದಿನ ಕಳೆದವು. ಈ ಸಲ ಅದರ ಬಗ್ಗೆ ಬರೆಯಲು ತುಂಬಾನೆ ನೋವು ಹಾಗೂ ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ......