ಎಲ್ಲವೂ ಬದಲಾಗಿವೆ...ನನ್ನ ನೆನಪಿನಲ್ಲಿ
ಭೂತ/ಕಣ್ಣೆದುರು ವರ್ತಮಾನ/ಕಲ್ಪನೆಯಲ್ಲಿ ಭವಿಷತ್ ಅಕ್ರರಶಃ ಕಂಗಾಲಾಗಿಸಿವೆ...ಸಹಜವೇ...ಎಂಬತ್ತು ಸಣ್ಣ ಅಂಕೆಯಲ್ಲ...ಬೆಳವಣಿಗೆಯ ಪರಿಯೂ ಚಿಕ್ಕದಿಲ್ಲ...ಹಾಗಿದ್ದಾಗ ದೂರು
ದಾಖಲಿಸುವ ಬದಲು ಸ್ವೀಕರಿಸುವುದೇ
ಮೇಲು...
ನಿನ್ನೆ ಧಾರವಾಡಕ್ಕೆ ಬಂದಿದ್ದೇನೆ. ಹದಿನೈದು ದಿನಗಳ ಚಿಕ್ಕ ಅವಧಿ ಸಿಕ್ಕಿದೆ. ಏನಾಗುತ್ತೋ/ಎಷ್ಟಾಗುತ್ತೋ ಅಷ್ಟೇ ಲಭ್ಯ...ಅಷ್ಟೇ ಸಾಕು...
ಕೈಯಲ್ಲಿ ಹಾಳೆ ಹಿಡಿದುಕೊಂಡು ಮೊದಲಿನಂತೆ ಕಾರ್ಯಕ್ರಮಗಳ ಯಾದಿ ತಯಾರಿಸಿ ಆನಂದಿಸುವ ವಯಸ್ಸೂ+ ಮನಸ್ಸು ಎರಡೂ ಈಗ ಇಲ್ಲ...ಆದರೆ ಯಾವುದೋ ಒಂದು ನೆನಪನ್ನು ನೆನೆದುಕೊಂಡು ಅದರ ಬಗ್ಗೆ ನಾಲ್ಕು ಸಾಲುಗಳನ್ನು ಬರೆಯುತ್ತ ಬಂದಿರುವ ಸದಾಕಾಲದ ಹವ್ಯಾಸವನ್ನು ಆದಷ್ಟೂ
ಜೀವಂತವಾಗಿ ಉಳಿಸಿಕೊಳ್ಳುವ ಆಸೆ
ನನ್ನದು...
ಕಾಲಾಯ ತಸ್ಮೈ ನಮಃ...
No comments:
Post a Comment