Monday, 28 May 2018

ಪ್ರಶ್ನೆ

( ಮನೋಹರ ನಾಯಕರ ಇನ್ನೊಂದು ಸವಾಲು...Thank you Sir...)
ಎಲೆಯೊಂದು
ಮರದಿಂದ
ಉದುರಿಬಿತ್ತು....
ಇದರಲ್ಲಿ
ಅದಾರ
ಕೈವಾಡವಿತ್ತು..?
ಅದನ್ನು ಹಾರಿಸಿ
ನೆಲೆ ತಪ್ಪಿಸಿದ
ಗಾಳಿಯೇ?...
ಒಣಗಿದಾಕ್ಷಣ
ಕೈ ಬಿಟ್ಟು ಬಿಡುವ
ಮರದ ಚಾಳಿಯೇ?
ಟೊಂಗೆಗಂಟಿ
ನಿಲ್ಲಲಾಗದ ಎಲೆಯದೇ
ಸೋಗೇ?...
ಹೇಳುವದು ಹೇಗೆ?
ಬದುಕಿನಲ್ಲೂ
ಥೇಟ್ ಹಾಗೇ...
ನೂರೆಂಟು
ಅರ್ಥವಾಗದ
ಆಯಾಮಗಳು...
ಅಳಿಯದೆ ಉಳಿಯಲು..
ಉಳಿದು ಬೆಳೆಯಲು..
ಬೆಳೆದು ನಲಿಯಲು
ನೂರೆಂಟು
ವ್ಯಾಯಾಮಗಳು....

No comments:

Post a Comment

   ಹಿರಿಯ ಅಳಿಯ ಮಾವಿನ ತೋಪು ಖರೀದಿಸಿದಾಗ ಒಮ್ಮೆ  ನೋಡಿ ಬಂದಿದ್ದೆ. ಮತ್ತೊಮ್ಮೆ ಹೋಗಲಾಗಿರಲಿಲ್ಲ. ಅಕಸ್ಮಾತ್ತಾಗಿ ನನ್ನ ಕೊನೆಯ ಮೊಮ್ಮಗ ನಿಗೆ ಎರಡನೇ PUC ಮುಗಿದು, ಅವನ...