ಅಮ್ಮ...ಅಮ್ಮ...,ಅಮ್ಮ..ಅವಳ ಬಗ್ಗೆನೇ ಮಾತು..ಅವಳಫೋಟೋ,ಅವಳ ಬಗ್ಗೆ write up, ಕವನ,ಕಿರುಚಿತ್ರಗಳು,ವೀಡಿಯೋಗಳು,ಚಿಕ್ಕ ಪುಟ್ಟ ಘಟನೆಗಳು,ನಮನಗಳು.ಓದಿ,ಓದಿ, ಓದಿ ಮುಗಿಯುವ ಹೊತ್ತಿಗೆ ಏನು ಬರೆಯಬೇಕೆಂದು ಚಿಂತಿಸುತ್ತಿದ್ದ ನನಗೆ ಕೊನೆಗೆ ಏನೊಂದೂ ಬರೆಯದೇ ಕಣ್ಣುಮುಚ್ಚಿ ಅವಳ ಬಗ್ಗೆ ಎಷ್ಟು,ಏನು, ನೆನಪಿದೆಯೋ ಅದರಲ್ಲಿ ಕಳೆದು ಹೋಗಬೇಕೆನಿಸಿಬಿಟ್ಟಿತು.ಅಲ್ಲಿ ನಾನು ಅವಳು ಇಬ್ಬರೇ...ನಮ್ಮ ಬಾಲ್ಯ,ಬಡತನ,ದುಃಖದ ಕ್ಷಣಗಳು,ಸುಖದ ಮುಗುಳ್ನಗೆ, ಕೊರತೆ,ತೃಪ್ತಿ,ಸಾಂತ್ವನ,ಹುಸಿಕೋಪ,ಅನಾರೋಗ್ಯ,ಅಸಹಾಯಕತೆ,ಎಲ್ಲವನ್ನೂ ಎದೆಯಾಳದಲ್ಲಿ ಹುದುಗಿಸಿಟ್ಟು ಮೇಲೆ ಮೇಲೆ ಶಾಂತಳಾಗಿಯೇ ಇದ್ದು ಒಂದುದಿನ ಇಲ್ಲವಾದ ನಮ್ಮಮ್ಮ ಮಾತ್ರ ನನಗೆ ಗೊತ್ತು....ಅವಳು ಕೊಟ್ಟ ಮುತ್ತು ನೆನಪಿಲ್ಲ..ಆದರೆ ತುತ್ತೆಂದೂ ಮರೆತವಳಲ್ಲ.ಕೈ ಹಿಡಿದು ಶಾಲೆಗೆ ಕಳಿಸಿಲ್ಲ..ಆದರೆ ಶಾಲೆಯಿಂದ ಬರುವದನ್ನು ಬಾಗಿಲಿನಲ್ಲಿ ನಿಂತು ಕಾಯುತ್ತಿದ್ದುದು ನೆನಪಿದೆ....ಕೈ ಹಿಡಿದು ಅಕ್ಷರ ತಿದ್ದಿಸಿಲ್ಲ...ಆದರೆ ಬದುಕೆಂಬ ವಿಶ್ವವಿದ್ಯಾಲಯವೇ ಆಗಿ ಬದುಕಿದವಳು...ಹಣಕ್ಕೂ ಆರಾಮ ,ನೆಮ್ಮದಿಗಳಿಗೂ ನೇರ ಸಂಬಂಧವಿಲ್ಲವೆಂಬುದಕ್ಕೆ ಸ್ವತಃ ದೃಷ್ಟಾಂತವಾದವಳು...ಕೈಯಲ್ಲಿ ದುಡ್ಡಿರುತ್ತಿರಲಿಲ್ಲವಾಗಿ ಬೇಕೆಂದದ್ದು ಕೊಡಿಸಲಾಗುತ್ತಿರಲಿಲ್ಲ..ಆದರೆ ಸಿಕ್ಕಿದ್ದರಲ್ಲಿ ಸಂತೋಷದಿಂದ ಇರುವದನ್ನುಕಲಿಸಿಕೊಟ್ಟವಳು..ಸ್ವತಃ ತಾನೇ ಕರಿಮಣಿಸರ, ಗಾಜಿನ ಬಳೆ ಬಿಟ್ಟು ಬೇರೆಯದು ಬೇಡಿದವಳೇ ಅಲ್ಲ....ಆಗ ಫೋಟೋದ ಕಾಲವಲ್ಲ.. ಅಲ್ಲಲ್ಲಿ ಎಲ್ಲೋ ಒಂದು ಇದ್ದುಳ್ಳವರ ಮನೆಯಲ್ಲಿ ಅಪರೂಪಕ್ಕೆ ಕಾಣುವ luxury ಯಾಗಿತ್ತು ಅದು...ಅದೂ 25- 30 ಜನರ group photo ರೂಪದಲ್ಲಿ..ಹೀಗಾಗಿ ಮನಃಪಟಲದಲ್ಲಿ ಅಚ್ಚೊತ್ತಿದ ಫೋಟೋಗಳೆ ಲಭ್ಯ.ಕಾಲ ಕಳೆದಂತೆ ಮಸುಕು ಮಸುಕು..ಅದೇ ಹಾದಿಯಲ್ಲಿಯೇ ಹೆಚ್ಚುಕಡಿಮೆ ಪಯಣಿಸಿ ಆಗಲ್ಲದಿದ್ದರೂ, ಈಗ ಅವಳ ನೋವು - ನಲಿವುಗಳನ್ನು ಅರ್ಥೈಸಿಕೊಳ್ಳಲು ಸಿಕ್ಕ ಒಂದು ದಿನವೇ ನನ್ನ ಮಾತೆಯರ ದಿನ...
Wednesday, 16 May 2018
Subscribe to:
Post Comments (Atom)
ನೀನಿನ್ನೂ ಇರಬೇಕಿತ್ತು ಮನೋಜ... ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...
-
'ಹಬ್ಬ'ಗಳೇ 'ಹುಟ್ಟಿದ ದಿನ' ಗಳಾಗುತ್ತಿದ್ದ 'ಕಾಲಮಾನ' ನಮ್ಮದು... ಒಮ್ಮೆ ಒಬ್ಬ ಹಿರಿಯ ಸಾಧಕರಿಗೆ ನೂರು ತುಂಬಿದ ಸಂದರ್ಭದಲ್ಲಿ ...
-
ನಮ್ಮ ಊರು ರಟ್ಟೀಹಳ್ಳಿ. ಇನ್ನೊಬ್ಬ ಅಜ್ಜಿಯ ಊರು ಸರ್ವಜ್ಞನ ಮಾಸೂರು.ಎರಡರ ನಡುವೆ ಕೇವಲ ಐದು ಮೈಲುಗಳಷ್ಟು ಅಂತರ.ಆದರೂ ಒಂದೋ/ಎರಡೋ ಯಾವುದೋ ಊರಿಗೆ ಹೋಗುವ ...
-
ಮೊದಲಿನ ಹತ್ತು ವರ್ಷಗಳು ಅಮ್ಮಾ ಅಪ್ಪನ ಎಂಟು ಜನ ಮಕ್ಕಳಲ್ಲಿ ಒಬ್ಬಳಾಗಿ... ನಂತರದ ಹತ್ತು ವರ್ಷಗಳು ಓರಗೆಯ ಸಖಿಯರನ್ನು ಸೇರಿಕೊಂಡು... ಆಮೇಲಿನ ಹತ್ತು ವರ್ಷಗಳು ಧಾರವಾಡದ...
No comments:
Post a Comment