Saturday, 28 April 2018

ಮಳೆಬಿಲ್ಲು (ಅನುವಾದ)

( ಅನುವಾದ ನನ್ನ  ಮೊದಲ ಹುಚ್ಚು..ಜಯಶ್ರಿಯವರಿಂದ ಪ್ರೇರಿತಗೊಂಡು ನಾನೂ ಪ್ರಯತ್ನಿಸಿದ್ದೇನೆ...ಅವರ ಓದು,ಬರಹದ ಆಳ ನನ್ನದಲ್ಲ...ಒಂದು ಶಿಶು ಹೆಜ್ಜೆ..ಜಯಶ್ರಿಯವರ ಹೆಜ್ಜೆಗಳ ಹಿಂದೆರಡು ಪುಟ್ಟ ಹೆಜ್ಜೆ..)
ಮುಗಿಲಿನಲ್ಲಿ
ಮಳೆಬಿಲ್ಲು ಕಂಡಾಗಲೆಲ್ಲ
ನನ್ನ
ಹೃದಯ ಮಿಡಿತ
ಆಕಾಶಕ್ಕೇ ನೆಗೆತ...
ನನ್ನ ಬದುಕು ಅಂಕುರಿಸಿದಾಗ,
ಬೆಳೆದು
ದೊಡ್ಡವನಾದಾಗಲೂ ಅಷ್ಟೇ ವರ್ಣಮಯ..
ನನ್ನದೊಂದೇ ಮನದಾಸೆ...
ಮೈಗೆ ಮುದಿತನ ಬರಲಿ..
ಸಾವು ಬಾಗಿಲು ತಟ್ಟಲಿ..
ಮಳೆಬಿಲ್ಲು ಮಾತ್ರ
ಕಣ್ಣುತುಂಬಿರಲಿ...
ಮಗುವು ಮಾನವನ ತಂದೆ...
ನನ್ನ ಮುಂಬರುವ
ದಿನಗಳು ಈ ಭಾವಬಂಧದ
ಸರಪಳಿಯಲ್ಲಿ ಸಹಜ ಸುಂದರ, ಸರಳ
ವಾಗಿ ಹೆಣೆದುಕೊಂಡಿರಲಿ...

No comments:

Post a Comment

ರಕ್ಷಾ ಬಂಧನ... ಕೈಗೆ ಕಟ್ಟುವ ಎಳೆಗೆ ನೂರೆಂಟು ನೂಲುಗಳು.. ಮೇಲೆರೆಡು ಗಂಟುಗಳು ಬಿಗಿಯಾಗಲು... ನೂರಾರು ನೂಲುಗಳೆ ನೂರಾರು ಭಾವಗಳು.. ಹೃದಯ- ಹೃದಯದ ಬೆಸುಗೆಗಣಿಯಾಗಲು......