Tuesday, 17 April 2018

ಬಯಕೆ

ಮೊಬೈಲು,ಕಂಪ್ಯೂಟರು, ಐಪ್ಯಾಡು ಇರದಂಥ ದೂರದ್ಹಳ್ಳಿಯಲೊಂದು
ಪುಟ್ಟ ಮನೆಯಿರಲಿ....
ಕಣ್ಣು ಹಾಯಿಸಿದಲ್ಲಿ ಪುಸ್ತಕದ ರಾಶಿಗಳು..
ಒಂದು ಆರಾಮಕುರ್ಚಿ ಬಯಲಿನಲ್ಲಿರಲಿ...
ಪಕ್ಕದಲ್ಲಿಯೇ ಒಂದು ಚಿಕ್ಕ ಟೀಪಾಯಿರಲಿ
ಹಾಲ್ನೊರೆಯ ಬಿಸಿ ಕಾಫಿ ಮಗ್ಗೊಂದು ಇರಲಿ..
ಖಾರಾ ಬುಂದಿಕಾಳು,ಹುರಿದ ಸೇಂಗಾಬೀಜ
ಎರಡೆರಡು ಬಟ್ಟಲಲಿ ಕೈಗೆ ಎಟುಕಿರಲಿ..
ಆಗಾಗ ಹೊರಬಂದು ಕಣ್ಣಸನ್ನೆಯಮಾಡಿ
'ಏನು ಬೇಕೆಂದುಲಿವ' ಮನದನ್ನೆಯಿರಲಿ..
' ಸಾಕುಬಿಡು ಅಪ್ಪಯ್ಯ..ನಾಳೆ ಓದುವಿರಂತೆ'
ಎಂದೆನುತ ಕನ್ನಡಕ
ಕಸಿವ ಮಗನಿರಲಿ.
' ಅವರಿಗ್ಹೇಗಿರಬೇಕೋ ಹಾಗಿರಲಿ ,ಅಣ್ಣಯ್ಯ,
ಕಾಡಬೇಡೆಂದೆನ್ನೋ ಕುವರಿ ಇರಲಿ...
ಅರಳೊ ಹೂಗಳ ಗಂಧ ಹೊತ್ತೊಯ್ಯೊ ಗಾಳಿ-
ಯದು ಲಾಲಿಯುಲಿಯುತ ಎನ್ನ ಮೊಗವ ಮುದ್ದಿಸಲಿ...
ರಾತ್ರಿ ಹಗಲೆನ್ನದಲೇ
ತೆಕ್ಕೆಯಲಿ ಸಂತೈಸಿ
ವೃದ್ಧಾಪ್ಯ ಹಿತ- ಭಾವ 
ಬದುಕು ಮೂಡಿಸಲಿ..
ಇದ್ದೆನೋ..ಇಲ್ಲವೋ..
ಎಂಬಂತೆ 'ಬದುಕಿ'ರಲಿ..
'ಹೊತ್ತು'ಕರೆದಾಗೆದ್ದು
ನಡೆದು ಬಿಡಲಿ...
         ‌‌        ***********

No comments:

Post a Comment

ಹದಿಹರಯದಲ್ಲಿ ಕಾಲೇಜು ದಿನಗಳಲ್ಲಿ 'ದೂರ ಸರಿದರು' ಕಾದಂಬರಿಯಿಂದ ಪ್ರಾರಂಭವಾದ ಭೈರಪ್ಪನವರ ಪುಸ್ತಕಗಳ ಓದು, ಮೊನ್ನೆ ಮೊನ್ನೆಯವರೆಗೆ ಅಂದರೆ ಕಣ್ಣುಗಳು ತೊಂದರೆ ಕ...