Tuesday, 17 April 2018

ಛೆ....ಛೆ...

ಛೆ...ಛೆ...
ಪ್ರತಿಸಲ ಹೀಗೇನೇ ಆಗುತ್ತದೆ..
ಮನದ ಮಾತುಗಳು ಕಸಿವಿಸಿಗೊಂಡು ಹೊರಬಂದೇ ಬಿಡುತ್ತವೆ...
ಕೇಳುವದೇ ಇಲ್ಲ..
"ಹೇಳುವದಿಲ್ಲ...
ಎಲ್ಲ ಹೇಳುವ ತುರ್ತಾದರೂ ಏನು?
ಕೇಳಿ ಯಾರಾದರೂ ಏನು
ಮಾಡಬಲ್ಲರು????
ಕೇಳುವ ಮನಸ್ಸಿದೆಯೋ...
ಇಲ್ಲವೋ ನೋಡಬೇಡವೇ?"
ಚಿಂತನ,ಮಂಥನದ ನಡುವೆಯೇ ನುಗ್ಗಿಬರುತ್ತವೆ..ಮನದ ಮಾತುಗಳು..
ಯಾರು ಎಲ್ಲಿಗೆ ಹೋಗುತ್ತಾರೆ?
ಇಲ್ಲೇ ಹತ್ತರದಲ್ಲಿಯೇ ತಾನೇ ಇರುವದು..
ಆದರೂ  ಹೃದಯಗಳು..
ಬೇರೆ...ಬೇರೆ...
ಬಡಿತಗಳು ಬೇರೇಯೇ...
ಹುಟ್ಟುಹಬ್ಬದ ಶುಭಾಶಯಗಳನ್ನು
ಹೇಳಿದಷ್ಟು
ಸಲೀಸಲ್ಲ ಮಾತುಗಳ
ಬಿಚ್ಚಿ ಹರಹುವದು..
ಆದರೆ ನನ್ನ ಚಡಪಡಿಕೆಗೆ ಯಾರು ತಿಳಿಹೇಳಬೇಕು?...
ಎದೆಯಂಗಳದಲಿ ಮೂಡಿದ ಹೆಜ್ಜೆ ಅಳಿಸುವ ಮೊದಲೇ ಎಲ್ಲಾ ರವಾನಿಸುವ ಖಟಿಪಿಟಿ..
ಎಲ್ಲ ಹೇಳಿಸಿಬಿಟ್ಟರೇನೆ ವಿರಾಮ...
ಇತ್ತ ಮನಸೋ..
"ಸರಿಯಾ? ತಪ್ಪಾ?"
?????????????????
ಗೊಂದಲದಲ್ಲಿ ಸಿಲುಕಿದ
ಇಬ್ಬಗೆಯ ಮನಸಿಗೋ
ನಿರಂತರ ಕಸಿವಿಸಿ!!!!

No comments:

Post a Comment

      ಅಣ್ಣನ post graduation ಮುಗಿದು, ನೌಕರಿ ಸಿಕ್ಕು ಧಾರವಾಡದಲ್ಲಿ ಮನೆಮಾಡಿ, ನಾವು ಧಾರವಾಡಕ್ಕೆ ಬಂದದ್ದು ೧೯೬೫ರಲ್ಲಿ...ನಾವಿದ್ದ ಮನೆ  ಹತ್ತು ಕೋಣೆಗಳ ಬಹು ದೊಡ್...