Tuesday, 17 April 2018

ಅಮ್ಮಾ ,ಕ್ಷಮಿಸು...

ಅಮ್ಮಾ,
ನಾನು ನನ್ನ ಕುದುರೆಗಳ
ವಾಪಸ್ ಕಳಿಸಿದೆ..
ಆದರೆ ನನಗೆ ಬರಲಾಗಲಿಲ್ಲ...
ನನ್ನ
ಚಿಗರೆ -ವೇಗದ
ಕಾಲುಗಳು ಕೊರಡಾಗಿದ್ದವು
ಅಮ್ಮ...
ಆದರೂ ಕುದುರೆಗಳ
ಮನೆಗೆ ಕಳಿಸಿದೆ..
ಆ ರಾಕ್ಷಸರಿಗೆ
ಕೋಡುಗಳಿರಲಿಲ್ಲ...
ಉದ್ದುದ್ದ ಉಗುರುಗಳಿರಲಿಲ್ಲ..
ಆದರೂ ತುಂಬಾ
ತುಂಬಾ ನೋವುಣ್ಣಿಸಿದರಮ್ಮಾ
ನೇರಳೇ ಹೂಗಳು..
ಹಳದಿ ಚಿಟ್ಟೆಗಳುಅಸಹಾಯಕವಾಗಿ ಬಿಟ್ಟವು ಅಮ್ಮಾ...
ಅಪ್ಪ ನನಗಾಗಿ
ಹಂಬಲಿಸಿದ್ದು ಬಲ್ಲೆ..
ನನ್ನ ಹೆಸರಿನಿಂದ
ಕೂಗಿದ್ದೂ ಗೊತ್ತು...
ನಾನು ದಣಿದಿದ್ದೆ..
ನನಗೆ ಅರೆಮಂಪರು..
ರಾಕ್ಷಸರು ಅಷ್ಟೊಂದು
ಹಿಂಡಿದ್ದರು ಅಮ್ಮಾ...
ನಿನಗೆ ಅಚ್ಚರಿ ಯಾದೀತು..
ನನಗೀಗ ನಿನ್ನ
ಮಡಿಲಲ್ಲಿ ಮಲಗಿದ ಹಾಗಿದೆ...
ಕಿಂಚಿತ್ತೂ ನೋವಿಲ್ಲ..
ರಕ್ತ ಒಣಗಿದೆ..ನೇರಳೆ ಬಣ್ಣದ ಹೂಗಳು
ನನ್ನಲ್ಲಿ ಲೀನವಾಗಿದೆ...
ಆ ರಾಕ್ಷಸರು ಇನ್ನೂ ಇದ್ದಾರೆ...
ಹಾಗೆಯೇ ಬಣ್ಣಬಣ್ಣದ
ಕಥೆಗಳೂ ಸಹ...ಆ ಯಾತನಾಮಯ
ಅಧ್ಯಾಯಕ್ಕೆ
ಕಿವುಡಾಗು ಅಮ್ಮಾ....

No comments:

Post a Comment

   ಹಿರಿಯ ಅಳಿಯ ಮಾವಿನ ತೋಪು ಖರೀದಿಸಿದಾಗ ಒಮ್ಮೆ  ನೋಡಿ ಬಂದಿದ್ದೆ. ಮತ್ತೊಮ್ಮೆ ಹೋಗಲಾಗಿರಲಿಲ್ಲ. ಅಕಸ್ಮಾತ್ತಾಗಿ ನನ್ನ ಕೊನೆಯ ಮೊಮ್ಮಗ ನಿಗೆ ಎರಡನೇ PUC ಮುಗಿದು, ಅವನ...