Saturday, 22 May 2021

ದೋಷ...

ಮನುಷ್ಯನೊಬ್ಬ
ಕೋಗಿಲೆಗೆ
ಹೇಳಿದ,
"ನೀನು 
ಕಪ್ಪಗಿರದಿದ್ದರೆ
ಎಷ್ಟೊಂದು
ಒಳ್ಳೆಯದಿತ್ತು!!!

ಕಡಲಿಗೆ
ಹೇಳಿದ,
"ನಿನ್ನ ನೀರು
ಉಪ್ಪಾಗಿರದಿದ್ದರೆ
ಎಷ್ಟೊಂದು
ಒಳ್ಳೆಯದಿತ್ತು!!!

ಗುಲಾಬಿಗೆ
ಹೇಳಿದ,
"ಛೆ!  ನಿನ್ನ ಸುತ್ತಲೂ
ಮುಳ್ಳುಗಳಿರದಿದ್ದರೆ
ಎಷ್ಟೊಂದು
ಒಳ್ಳೆಯದಿತ್ತು!!!

ಮೂರೂ ಸೇರಿ
ಅವನಿಗೆ
ಹೇಳಿದವು,
"ಅಯ್ಯಾ!
ನಿನಗೆ ಬರೀ
ಲೋಪಗಳನ್ನೇ
ಹುಡುಕುವ
ಗುಣವಿಲ್ಲದಿದ್ದರೆ
ಎಷ್ಟೊಂದು
ಒಳ್ಳೆಯದಿತ್ತು!!!

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...