Saturday, 22 May 2021

ದೋಷ...

ಮನುಷ್ಯನೊಬ್ಬ
ಕೋಗಿಲೆಗೆ
ಹೇಳಿದ,
"ನೀನು 
ಕಪ್ಪಗಿರದಿದ್ದರೆ
ಎಷ್ಟೊಂದು
ಒಳ್ಳೆಯದಿತ್ತು!!!

ಕಡಲಿಗೆ
ಹೇಳಿದ,
"ನಿನ್ನ ನೀರು
ಉಪ್ಪಾಗಿರದಿದ್ದರೆ
ಎಷ್ಟೊಂದು
ಒಳ್ಳೆಯದಿತ್ತು!!!

ಗುಲಾಬಿಗೆ
ಹೇಳಿದ,
"ಛೆ!  ನಿನ್ನ ಸುತ್ತಲೂ
ಮುಳ್ಳುಗಳಿರದಿದ್ದರೆ
ಎಷ್ಟೊಂದು
ಒಳ್ಳೆಯದಿತ್ತು!!!

ಮೂರೂ ಸೇರಿ
ಅವನಿಗೆ
ಹೇಳಿದವು,
"ಅಯ್ಯಾ!
ನಿನಗೆ ಬರೀ
ಲೋಪಗಳನ್ನೇ
ಹುಡುಕುವ
ಗುಣವಿಲ್ಲದಿದ್ದರೆ
ಎಷ್ಟೊಂದು
ಒಳ್ಳೆಯದಿತ್ತು!!!

No comments:

Post a Comment

        Excited to share DPS East won the CBSE National Championship in Football U19 team...They had won Cluster level in July and Nationals...