Sunday 7 April 2024

      ನಮಗೆ 'ಅನಾರೋಗ್ಯ'- ಅನ್ನೋ ಶಬ್ದಾನೂ ಹೊಸದೆನಿಸಿದ ಕಾಲ ವೊಂದಿತ್ತು.' ಆರಾಮಿಲ್ಲಾ'-ಅನ್ನೋದು
ಮಾಮೂಲು ಹೇಳಿಕೆ...ಅಂದ್ರೆ ಸ್ವಲ್ಪು ಮೈ ಬಿಸಿ/ ಊಟ ಹೋಗ್ತಿಲ್ಲ/ ಕಫ ಕಟ್ಟಿದ ಹಾಗಿದೆ /ಸತತವಾಗಿ ಸೀನು ಬರುತ್ತಿವೆ/ಎಲ್ಲೋ ಬಿದ್ದು ಹಣೆ- ಮಂಡಿ ತರಚು, ಹೀಗೇ...ಇಂಥವೇ...
               ಅದು ಎಷ್ಟು ಮಾಮೂಲು
ಅಂದರೆ ಅಕ್ಕ ಬಾಟಲಿ ಹಿಡಿದು ಪಕ್ಕದ
ಆಯುರ್ವೇದ cum ಸಕಲ ವಿದ್ಯಾ ಪಾರಂಗತ ಡಾಕ್ಟರ್ ಅನಿಸಿಕೊಂಡವರ ಬಳಿ ಔಷಧಿ ತರುವುದು/ ಅಜ್ಜಿಯ ಮೆಣಸು, ಜೀರಿಗೆ ಮರಳಿಸಿ 'ಕಾಡೆ'-
ಊಟಕ್ಕೆ ಗಂಜಿಯಂಥ ಅಳ್ಳಕ ಅನ್ನ/ತಿಳಿ ಮೆಣಸಿನ ' ಗೊಡ್ಡು ಸಾರು' -ಊಟ, ಒಂದು ಮೂಲೆಯಲ್ಲಿ ಹಾಸಿಗೆ ಹಾಸಿ"ಹೊದ್ದು  ಗಡದ್ದು ಮಲಗು, ಬೆವರು ಬಿಟ್ಟು ಹುಶಾರಾಗ್ತೀಯಾ"- ಅಂತನ್ನುವ ಅವ್ವ, ಹೀಗೆ ನೂರಕ್ಕೆ ನೂರು, organic treatment...
ಅದೇ ಸರಿಯಾಗಿತ್ತೋ/ ಜಡ್ಡಿಗೇನೇ
ಮಜಾ ಸಿಗ್ತಿರ್ಲಿಲ್ವೋ/ ಮಕ್ಕಳೇ ಅದನ್ನು 'ಇಲ್ಲ' ಅನಿಸಿ ಓಡಿಬಿಡುತ್ತಿದ್ದ ರೋ ಅಂತೂ ಅದು ಎಂದಿಗೂ ದೊಡ್ಡ
ಸಂಗತಿಯಂತಾಗುತ್ತಿರಲೇ ಇಲ್ಲ.
ಆರ್ಥಿಕ ಸಧೃಡತೆ ಇಲ್ಲದ ಕುಟುಂಬ ಗಳೆಂದೋ/ ಹೆಚ್ಚು ಮಕ್ಕಳು, ಇಂಥವು‌ ಒಂದರ ಹಿಂದೆ ಒಂದು ಬಂದೇ ಬರು ತ್ತವೆ ಎಂಬ ಸಾಮಾನ್ಯ ಅನಿಸಿಕೆಯೋ/ ಅದೇ ಸಾರ್ವತ್ರಿಕವಾಗಿ ರೂಢಿಯಲ್ಲಿ ತ್ತೆಂದೋ ಯಾರೂ ವಿಶೇಷ ಸಂದರ್ಭ ಗಳನ್ನು ಹೊರತು ಪಡಿಸಿ ಆತಂಕಿತರಾ ಗುತ್ತಿರಲಿಲ್ಲ ಎಂದು ನನ್ನ ಅನಿಸಿಕೆ.
               ಧಾರವಾಡಕ್ಕೆ ಬಂದ ನಂತರವೂ ನಮ್ಮ ಮಕ್ಕಳ ಕಾಲಕ್ಕೂ
ಹೇಳಿಕೊಳ್ಳುವಂಥ ವ್ಯತ್ಯಾಸ ಕಂಡಿರ ಲಿಲ್ಲ.ಒಬ್ಬ MBBS ಡಾಕ್ಟರೊಬ್ಬರು- ಕೆಲವೊಮ್ಮೆ ಇಬ್ಬರು- ಕುಟುಂಬ ವೈದ್ಯರ ದರ್ಜೆಯಲ್ಲಿರುತ್ತಿದ್ದುದು ಮಾಮೂಲು. ಅವರು ಹೇಳಿದ್ದೇ ವೇದ, ಅಪ್ಪಿತಪ್ಪಿಯೂ ಅಪನಂಬಿಕೆಗಳು ಅವರ ಕುರಿತಾಗಿ ಇರುತ್ತಿರಲಿಲ್ಲ. ಔಷಧಿಗಳಿಗಿಂತಲೂ ಅವರ ಮೇಲಿನ ನಂಬಿಕೆಯೇ ಕೆಲಸಮಾಡುತ್ತಿತ್ತು
ಅಕಸ್ಮಾತ್ ಸ್ವಲ್ಪಮಟ್ಟಿಗೆ ಗಂಭೀರ ಅನಿಸಿದರೆ ಸ್ವತಃ ತಾವೇ ಫೋನು
ಮಾಡಿಯೋ/ ಪತ್ರ ಬರೆದೋ ಬೇರೊಬ್ಬರ ಬಳಿ ಕಳಿಸುತ್ತಿದ್ದರು. ನಂತರದ್ದು ದೇವರಿಗೆ ಬಿಟ್ಟದ್ದು...
   ‌ ‌           ಮೊಮ್ಮಕ್ಕಳ ಹೊತ್ತಿಗೆ Medical field ಹೆಚ್ಚು ಹೆಚ್ಚು organized/ commercialised
 ಆಯಿತು ಎನ್ನಬಹುದೇನೋ!ಆರೋಗ್ಯ ವಿಮಾ - ಎಂಬುದು ಎಷ್ಟರ ಮಟ್ಟಿಗೆ ಸಾರ್ವಜನಿಕರಿಗೆ ಸಹಾಯವಾ ಯಿತೋ, ಅಷ್ಟೇ ವಿಮಾಧಾರಿತ treatment  ಕೂಡ ಸುರುವಾಯಿತು
ಎಂಬುದು ನಿಜವಾ, ಗೊತ್ತಿಲ್ಲ...
              ಈಗಂತೂ ಪ್ರತಿಯೊಂದಕ್ಕೂ
specialist ಗಳು ಇದ್ದು ಯಾರಿಗೂ
ಏನೂ ತಿಳಿಯದ ಅಯೋಮಯತೆ...
ಒಮ್ಮೆ ದಾಖಲಾಗಿ/ Insurance ನ ವಿವರ ಕೊಟ್ಟರೆ ಅದು ನೆಗಡಿಯೇ ಇರಲಿ, ಅಷ್ಟು ಮೊತ್ತ ಖರ್ಚಾಗಲೇ ಬೇಕು.ನೀವು ಅನಾರೋಗ್ಯದಿಂದ ಹೊರ ಬರುವುದಿಲ್ಲ ಅಂತಲ್ಲ, ಆ ಮೊತ್ತಕ್ಕೆ ಆಗಬಹುದಾದ ಎಲ್ಲ test
Report ಗಳು ಆಗಿ/ ಎಲ್ಲ ಮಾಮೂಲಿ ಯಾಗಿದೆ ಎಂದು ಅನಿಸಿಕೊಂಡು ಮನೆಗೆ ಬರಬೇಕು...
           ಒಟ್ಟಿನಲ್ಲಿ ಇತ್ತೀಚೆಗೆ ಸಾಮಾನ್ಯ ಮಧ್ಯಮ ವರ್ಗದ ಜನರ ಅನಾರೋಗ್ಯ ಅವರಿಗೆ ಅಪಾಯಕಾರಿ...ಆತಂಕ ಕಾರಿ...





No comments:

Post a Comment

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...