Friday, 19 October 2018

( ರಾವಣರ ಮುಖವಾಡ ಬಯಲಾಗುತ್ತಿರುವ
ಸಂದರ್ಭದಲ್ಲಿ..ಒಂದು ಪುಟ್ಟ ಆತ್ಮಾವಲೋಕನ..ಮನಸ್ಸಿದ್ದವರಿಗಾಗಿ)

ರಾವಣನಾಗುವದು
ಸುಲಭವಲ್ಲ...

ರಾವಣನೆದೆಯಲ್ಲಿ
ಅಹಂಕಾರವಿತ್ತು...ನಿಜ..
ಜೊತೆಗೆ ಪಶ್ಚಾತ್ತಾಪ ಕೂಡ...

ಲಾಲಸೆ ಯಿತ್ತು..ನಿಜ..
ಆತ್ಮ_ಸಂಯಮ  ಕೂಡ...

ಸೀತೆಯನ್ನು ಅಪಹರಿಸುವ ಸಾಮರ್ಥ್ಯವಿತ್ತು...
ನಿಜ  ....
ಆದರೆ ಒತ್ತಾಯದಿಂದ
ಭೋಗಿಸಬಾರದೆಂಬ ಸಂಕಲ್ಪ ಕೂಡ....

ಸೀತೆ ಪ್ರಾಣಸಹಿತ ಮರಳಿಸಿಕ್ಕದ್ದು
ರಾಮನ ಶಕ್ತಿಯಿಂದ  ನಿಜ...
ಆದರೆ ನಿಷ್ಕಳಂಕಳಾಗಿ ಸಿಕ್ಕದ್ದು
ರಾವಣನ ಸಂಸ್ಕಾರದಿಂದ...

ಮಹಾಪ್ರಭು, ಶ್ರೀರಾಮನೇ,
ನಿನ್ನ ಯುಗದ ರಾವಣ
ಒಳ್ಳೆಯವನಾಗಿದ್ದ...

ಇದ್ದ ಹತ್ತೂ ಮುಖಗಳು
ಯಾವುದೇ ಮುಖವಾಡಗಳಿಲ್ಲದೇ
ಬಹಿರಂಗವಾಗಿದ್ದವು...

ವರುಷಕ್ಕೊಮ್ಮೆ ಸುಟ್ಟು
ಭಸ್ಮವಾಗುವ ರಾವಣನ
ಮನದಲ್ಲೇನಿದೆ?
ಒಮ್ಮೆಯಾದರೂ ಯೋಚಿಸಿದ್ದೀರಾ?

" ನನ್ನನ್ನು ಸುಡಲು ನೆರೆದ
ಗುಂಪಿನಲ್ಲಿ ಒಬ್ಬನಾದರೂ
ರಾಮನಿದ್ದೀರಾ?"...

ಎಂದು ಮತ್ತೆ ಮತ್ತೆ ಕೇಳುವ
ಧ್ವನಿ ಕೇಳಿದ್ದೀರಾ?

( ಮೂಲ- WhatsApp ದಿಂದ...ಬರೆದವರ ಹೆಸರಿಲ್ಲ...
Trans_ creation- ಶ್ರೀಮತಿ ಕೃಷ್ಣಾ ಕೌಲಗಿ...)

No comments:

Post a Comment

*Lovely poem* When wrinkles bloom and joints protest,   Don’t teach the world—just give it rest.   Even if you're right (and you often a...