Saturday, 30 June 2018

ಕ್ಷಣಗಳು

ಬದುಕಿನಲ್ಲಿಯ
ಸುಂದರ ಗಳಿಗೆಗಳನ್ನಾಯ್ದು
ಮನದಲ್ಲಿಯೇ ಕೂಡಿಸಿಟ್ಟೆ....
ಕೂಡಿಹಾಕಿದ
ಗಳಿಗೆಗಳು ದಿನಗಳಲೆಕ್ಕ_
ವಾಗಲೆಂದು
ಬಿಟ್ಟು ಬಿಟ್ಟೆ..
ಸಮಯಬಂದಾಗ
ಆನಂದಿಸುವೆ...
ವಿಹರಿಸುವೆ..
ಮನಬಂದಂತೆ
ಕಳೆಯುವೆನೆಂದು
ಕನಸುಕಂಡೆ...
ಕೊನೆಗೊಮ್ಮೆ
ಮನಸ್ಸು ಗಟ್ಟಿಮಾಡಿ
ಗೋಲಕ
ಒಡೆದಾಗ
ಆ ಹಳೆ ಕ್ಷಣಗಳು
ವರ್ತಮಾನದಲ್ಲಿ
ಚಲಾವಣೆಯಲ್ಲಿರುವದಿಲ್ಲ
ಆಯಾ ಗಳಿಗೆಗಳು
ಆಯಾ ದಿನಗಳಿಗೆ
ಎಂಬುದ ಕಂಡುಕೊಂಡೆ.
( ಹಿಂದಿ ಮೂಲ)

No comments:

Post a Comment

ಹದಿಹರಯದಲ್ಲಿ ಕಾಲೇಜು ದಿನಗಳಲ್ಲಿ 'ದೂರ ಸರಿದರು' ಕಾದಂಬರಿಯಿಂದ ಪ್ರಾರಂಭವಾದ ಭೈರಪ್ಪನವರ ಪುಸ್ತಕಗಳ ಓದು, ಮೊನ್ನೆ ಮೊನ್ನೆಯವರೆಗೆ ಅಂದರೆ ಕಣ್ಣುಗಳು ತೊಂದರೆ ಕ...