ಇದೀಗ ಇಂದಿನ ವಿಜಯ ಕರ್ನಾಟಕದಲ್ಲೊಂದು ಸುದ್ದಿ ಓದಿದೆ..ದೂರವಿರುವ ಸಂಗಾತಿಗಳನ್ನು ಹತ್ತಿರವಾಗಿಸಲು,ಪರಸ್ಪರ ಸಮೀಪವಿರದಿದ್ದರೂಇದ್ದ ಅನುಭವ ನೀಡಲು ಒಂದು ಟೀಶರ್ಟ ತಯಾರಿಸಿದ್ದಾರಂತೆ....ಸೆನ್ಸರ್ ಮುಖಾಂತರ ಕೆಲಸ ಮಾಡುವ ಈ ಟೀಶರ್ಟ ನಿಮ್ಮ ದೇಹದ ತಾಪಮಾನ,ಹೃದಯಬಡಿತ ಗಳೆಲ್ಲವನ್ನೂ ಸಂಗಾತಿಗೆ ತಲುಪಿಸಿ ದೂರ ಸಂಬಂಧಗಳನ್ನು ಕಾಪಿಡುವ ಕೆಲಸ ಮಾಡಲಿದೆಯಂತೆ...." ಮುಂದುವರಿಯುತ್ತಿರುವ technology ಗೆ ಜೈಕಾರ ಹಾಕಲೇಬೇಕು...ಹೀಗೆ ಮುಂದುವರಿದರೆ ಯಾರೂ ಸಂಬಂಧದ ವಿಚಾರವಾಗಿ ತಲೆಕೆಡಿಸಿಕೊಳ್ಳಬೇಕಾಗಿ ಬರಲಿಕ್ಕಿಲ್ಲ....ಎಲ್ಲ ರೀತಿಯ ಸಂಬಂಧಗಳನ್ನುಆತಂಕವಿಲ್ಲದೇ ಸಂಭಾಳಿಸಿಯಾರು..ಸಮೀಪ ಇರುವದೇಯಿಲ್ಲವೆಂದಮೇಲೆ ಪರಸ್ಪರ ಕಾಳಜಿ ಮಾಡಬೇಕಿಲ್ಲ,ಜಗಳಗಳಿಲ್ಲ...ಒಬ್ಬರ ಭಾರ ಇನ್ನೊಬ್ಬರಿಗೆ ತೀರಲಾರದ ಹೊಣೆ ಅನಿಸಬೇಕಿಲ್ಲಸದಾ ಫೋನು,ಕೆಲಸಗಳಲ್ಲಿ ಒಬ್ಬರನ್ನೊಬ್ಬರು ಅಲಕ್ಷಿಸುತ್ತಾರೆ ಎಂದು ಆಪಾದಿಸಬೇಕಿಲ್ಲ...ಬೇಕೆಂದಾಗ ಟೀಶರ್ಟ ಧರಿಸಿ ಸಾಂಗತ್ಯದ ಅನುಭವಕೊಟ್ಟುಬಿಟ್ಟರೆ ಮುಗಿಯಿತು.... ಆದರೆ ಪ್ರಶ್ನೆಯೊಂದೇ...ಹಸಿವಿಗೆ ಹೋಟಲ್,ಮಾತಿಗೆ ಮೊಬೈಲು,ಸಾಂಗತ್ಯಕ್ಕೆ advanced technology ಉಡುಪುಗಳು... ಮನುಷ್ಯ ಮನುಷ್ಯನ ಸಮೀಪವೇ ಸುಳಿಯದ,ಬಾಂಧವ್ಯಗಳೇ ಉಳಿಯದ,ಭಾವನೆಗಳನ್ನೇ ತಿಳಿಯದ ಬದುಕು ' ಬದುಕೇ...? ಹೆಸರಿಗೆ ಕುಟುಂಬವೆಂಬುದೊಂದು ಇದ್ದೂ ಕುಟುಂಬ ಮೌಲ್ಯಗಳೇ ಇಲ್ಲದ ಇಂದಿನ ಬದುಕಿಗೇನೆ ಬೆಚ್ಚಿಬಿದ್ದು ಬಸವಳಿದ,ಮನುಷ್ಯನ ಮುಂದಿನ ಜೀವನ ಯಾವ ಹಂತ ತಲುಪಬಹುದೆಂದು ಯಾರಾದರೂ ಊಹಿಸಬಲ್ಲರಾ? ಅಥವಾ ಇದೇ ರೀತಿ ಒಬ್ಬರಿಗೊಬ್ಬರು ಕ್ರಮೇಣ ದೂರವಾಗುತ್ತಮಾನವ ಸಂಸ್ಕೃತಿಯೇ ಹಿನ್ನಡೆ ಅನುಭವಿಸಿ ಇಡಿ ಜಗತ್ತೆ ರೊಬೊಟ್ಗಳ ಮಾದರಿಯ ಮನುಷ್ಯರ ನೆಲೆಯಾಗುತ್ತಾ?... ಏನೊಂದು ಕಲ್ಪಿಸಲೂ ಭಯವಾಗುವ ' ಅಯೋಮಯ' ಸಮಯವಿದು...
Wednesday, 20 June 2018
Subscribe to:
Post Comments (Atom)
ನೀನಿನ್ನೂ ಇರಬೇಕಿತ್ತು ಮನೋಜ... ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...
-
'ಹಬ್ಬ'ಗಳೇ 'ಹುಟ್ಟಿದ ದಿನ' ಗಳಾಗುತ್ತಿದ್ದ 'ಕಾಲಮಾನ' ನಮ್ಮದು... ಒಮ್ಮೆ ಒಬ್ಬ ಹಿರಿಯ ಸಾಧಕರಿಗೆ ನೂರು ತುಂಬಿದ ಸಂದರ್ಭದಲ್ಲಿ ...
-
ನಮ್ಮ ಊರು ರಟ್ಟೀಹಳ್ಳಿ. ಇನ್ನೊಬ್ಬ ಅಜ್ಜಿಯ ಊರು ಸರ್ವಜ್ಞನ ಮಾಸೂರು.ಎರಡರ ನಡುವೆ ಕೇವಲ ಐದು ಮೈಲುಗಳಷ್ಟು ಅಂತರ.ಆದರೂ ಒಂದೋ/ಎರಡೋ ಯಾವುದೋ ಊರಿಗೆ ಹೋಗುವ ...
-
ಮೊದಲಿನ ಹತ್ತು ವರ್ಷಗಳು ಅಮ್ಮಾ ಅಪ್ಪನ ಎಂಟು ಜನ ಮಕ್ಕಳಲ್ಲಿ ಒಬ್ಬಳಾಗಿ... ನಂತರದ ಹತ್ತು ವರ್ಷಗಳು ಓರಗೆಯ ಸಖಿಯರನ್ನು ಸೇರಿಕೊಂಡು... ಆಮೇಲಿನ ಹತ್ತು ವರ್ಷಗಳು ಧಾರವಾಡದ...
No comments:
Post a Comment