Saturday, 22 September 2018

ಹಾಗೇ ಸುಮ್ಮನೇ...

ಕಹಿ ಸತ್ಯ

(ಮುಂಬರುವ ಹತ್ತು- ಹದಿನೈದು ವರ್ಷಗಳಲ್ಲಿ ಒಂದು ತಲೆಮಾರಿನ ಜನ ಸಂಪೂರ್ಣವಾಗಿ ಕಾಣೆಯಾಗುವವರಿದ್ದಾರೆ...)

ರಾತ್ರಿ   ಬೇಗ ಮಲಗುವವರು..
ಬೆಳಿಗ್ಗೆ ಬೇಗ ಏಳುವವರು...
ನಸುಕಿನಲಿ
ವಾಯುವಿಹಾರ
ಮಾಡುವವರು..

ಅಂಗಳ ಹಾಗೂ
ಗಿಡಗಳಿಗೆ
ನೀರುಣಿಸುವವರು...
ದೇವರ ಪೂಜೆಗೆ
ಹೂ ಹರಿಯುವವರು..
ಪ್ರತಿದಿನ ಮಂದಿರಕ್ಕೆ
ಹೋಗುವವರು...

ದಾರಿಯಲ್ಲಿ ಕಂಡು
ಮುಗುಳ್ನಗುವವರು...
ಜನರ ಸುಖ ದುಃಖ
ವಿಚಾರಿಸುವವರು..
ಎರಡೂ ಕೈಯತ್ತಿ
ನಮಸ್ಕರಿಸುವವರು...

ಹಳೆಯ ಟೆಲಿಫೋನ್
ಬಳಸುವವರು....
ದಿನಚರಿ ಬರೆಯುವವರು...
Wrong ನಂಬರ್
ಬಂದರೂ ಒಂದೆರಡು
ಮಾತಾಡುವವರು...
ವರ್ತಮಾನ ಪತ್ರಿಕೆ
ಎರಡೆರಡು ಬಾರಿ
ಓದುವವರು...

ವೃತ ನಿಯಮ
ಪಾಲಿಸುವವರು...
ಸಮಾಜಕ್ಕೆ
ಹೆದರುವವರು..
ಹಳೆಯ ಚಪ್ಪಲಿ,
ಬನಿಯನ್ ಧರಿಸುವವರು..

ಉಪ್ಪಿನಕಾಯಿ,ಹಪ್ಪಳ
ಮಾಡುವವರು..
ಮನೆ ಮಸಾಲೆ
ಕುಟ್ಟುವವರು....
ದೃಷ್ಟಿ ತೆಗೆಯುವವರು..
ಬೀದಿ ವ್ಯಾಪಾರದವರೊಡನೆ ಎರಡಾಣೆಗೆ
ಜಿಕೇರಿ ಮಾಡುವವರು..
            **********
__ ಇಂಥವರು ಇನ್ನು ಹೆಚ್ಚು
ವರ್ಷ ನಮ್ಮೊಂದಿಗಿರುವದಿಲ್ಲ...

ಅವರೊಂದಿಗೆ ಮುಖ್ಯವಾದ ಜೀವನಪಾಠಗಳೂ ಇಲ್ಲವಾಗುತ್ತವೆ..
.ಅವರ ಜೊತೆಜೊತೆಗೆ ,

ಸರಳ ಸುಂದರ ಬದುಕು,...
ಪ್ರೇರಣೆ ತುಂಬುವ ಬದುಕು..
ನಾಟಕೀಯತೆಯಿಲ್ಲದ ಬದುಕು,
ಧರ್ಮದ ದಾರಿ ತೋರುವ ಬದುಕು,
ಇತರರಿಗಾಗಿಯೂ ಸ್ಪಂದಿಸುವವರ ಬದುಕು ಸಹ...😒😒😒
( ಹಿಂದಿಯಿಂದ)

No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...