Saturday, 11 February 2023

   ನಾನೊಮ್ಮೆ ಹಿಂದೆ TNS  Sir ಅವರನ್ನು ಕೇಳಿದ್ದೆ." ಯಾಕೆ ನಿಶ್ಚಿತ ವಾದ engagements ಗಳು ಸದಾ ಮುರಿಯುತ್ತವೆ/ ಮದುವೆಯಾದವರು
ಏಕೆ ಸುಖವಾಗಿ ಇರೋದಿಲ್ಲ/ ಏನೋ ಸರಿಯಾಯ್ತಲ್ಲ- ಅಂತ ನೆಮ್ಮದಿ
ಯಿಂದ‌ ಇರುವಾಗಲೇ ಆಕಸ್ಮಿಕವಾದ ದ್ದೊಂದು ನಡೆದು ಕಥೆ ಅನಿರೀಕ್ಷಿತ ತಿರುವು ಪಡೆಯುತ್ತದೆ."- ಎಂದು. ಆಗಾಗ ನಡೆವ ಸಂವಾದಗಳಲ್ಲೂ  ಇದೇ ಪ್ರಶ್ನೆಗಳು ಕೇಳಲ್ಪಟ್ಟಾಗ  ಅವರು ಹೇಳಿದ್ದು ಯಾವುದೋ ಒಂದು ಕೋನದಿಂದ ಸರಿಯೇ ಎಂದು ಒಪ್ಪಿಕೊಳ್ಳಲೇ ಬೇಕಾಯ್ತು., "ಸಂತೋಷದಲ್ಲಿ ಹುಟ್ಟುವ ಕಥೆಗಳಿಗಿಂತ ನೋವಿನಲ್ಲಿ ಹುಟ್ಟುವ ಕಥೆಗಳು ಅಪಾರ/ಅಸಂಖ್ಯ/ಅನಿರ್ದಿಷ್ಟ/ ಅಪರಿಮಿತ...ಹೀಗಾಗಿ
ದೊಡ್ಡ ' Canvas' ಸಿಗುತ್ತದೆ,ಕಥೆಗೆ 'ಕವಲು'ಗಳೂ ಹೆಚ್ಚು.ಹೆಚ್ಚು ಪಾತ್ರಗಳು/ ವಿಷಯಗಳು ಲಭ್ಯವಿರುವ
ದರಿಂದ ಧಾರವಾಹಿಗೂ 'ಗತಿ'  ಸುಲಭ
ವಾಗಿ ಸಿಗುತ್ತದೆ. ಹೆಚ್ಚು ಜನಸ್ಪಂದನೆಗೆ  ಕಾರಣವಾಗಿ ಬಹುಕಾಲ ಜನಮಾನಸ ದಲ್ಲಿ ಉಳಿಯುತ್ತದೆ. ಸುಖದಲ್ಲಿ  ಹಿತ 
ವಿರಬಹುದು, ಕಥೆ ಇರುವದಿಲ್ಲ,"-ಎಂದು.

            ಆಗ ನೆನಪಾದದ್ದು ನಾವು ನೋಡುತ್ತಿದ್ದ ಹಳೆಯ ಚಲನಚಿತ್ರಗಳು.
ಪಂಢರಿಬಾಯಿ/ ಮೀನಾಕುಮಾರಿ ಯರು ನೆನಪಿನಲ್ಲಿದ್ದಷ್ಟು ಗಿಡ- ಮರ ಸುತ್ತಿ duet ಹಾಡುತ್ತಿದ್ದವರಲ್ಲ. ಕೆಲವೇ ಕೆಲವರನ್ನು ಹೊರತು ಪಡಿಸಿದರೆ ನಟ- ನಟಿಯರ ಹಾಡುಗಳಿಂದಾಗಿ ಅವರನ್ನು ನೆನಪಿಸಿಕೊಳ್ಳುತ್ತಿದ್ದೆವೇ ವಿನಃ ಅವರ
ವ್ಯಕ್ತಿತ್ವದ ಪ್ರಭಾವದಿಂದಲ್ಲ ಎಂದು
ಈಗ ಅನಿಸುತ್ತದೆ.ಎರಡು ತಾಸು ಏನೇ ಕಥೆ ಬೆಳಸಿದರೂ ನಮಗೆ ಕೊನೆಗೆ ಎಲ್ಲರೂ ನಗುನಗುತ್ತ  ಒಂದು group photo/ ಶುಭಂ  ಬಂದಾಗಲೇ ಅವರೊಂದಿಗೆ ನಾವೂ ನಿರಾಳವಾಗು ವಷ್ಟು ಕಥೆಯಲ್ಲಿ ತಲ್ಲೀನರಾಗುತ್ತಿದ್ದೆವು. ಮೊದಲೇ ಎಲ್ಲವೂ ನಮ್ಮಾಶೆಗೆ/ ನಿರೀಕ್ಷೆಗೆ ತಕ್ಕುದಾಗಿ ನಡೆದುಬಿಟ್ಟರೆ ಸಿನೆಮಾ ಅರ್ಧ ಗಂಟೆಯಲ್ಲಿ ಮುಗಿದು
ನಂತರದಲ್ಲಿ ಪಾರ್ಟಿ/ ಮೇಜವಾನಿ/ ವಿದೇಶ ಪ್ರವಾಸ/share market/ Race course/ pub- bar ಗಳಲ್ಲಿ shooting ಆಗಬೇಕಾಗುತ್ತಿತ್ತು ಅನಿಸಿತು...
    ‌‌       



No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...