Wednesday, 20 September 2023

    ‌‌     ಅದು ಬಹುಶಃ ಎಂಬತ್ತನೇ
ದಶಕದ ಕೊನೆಯ ಭಾಗ.ಮಣ್ಣಿನ ಒಲೆ
ಸ್ಟೋ-ಗಳಿಗೆ Expiry date ಹತ್ತಿರವಾಗಿ
ಗ್ಯಾಸ್/ ಒಲೆಗಳ ಪ್ರವೇಶವಾಗಿತ್ತು. ಆದರೂ ಜನರಿಗೆ ಏನೋ ಅಗೋಚರ ಭಯ. ಹೀಗಾಗಿ ಭಾರತ/ಹಿಂದುಸ್ತಾನ್
(HP)/ Indane ಮುಂತಾದ ಕಂಪನಿಗಳ ಒಡೆಯರು ಎಲ್ಲೆಡೆಗೆ ಹೋಗಿ ಅವುಗಳ ಬಳಕೆ/ ಸುರಕ್ಷಿತತೆ/
ಮಿತವ್ಯಯ ಕುರಿತು ಕಾರ್ಯಕ್ರಮ ಮಾಡುತ್ತಿದ್ದರು...ಹಾಗೇ ಒಂದು ಸಲ ನಮ್ಮ ಶಾಲೆಯಲ್ಲೂ ಅದು ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ quiz
ಕಾರ್ಯಕ್ರಮವಿರುತ್ತಿತ್ತು.ಗೆದ್ದವರಿಗೆ
ಸೂಕ್ತ ಬಹುಮಾನ ಘೋಷಣೆಯ ಪ್ರೋತ್ಸಾಹ ಬೇರೆ...ಗ್ಯಾಸನ್ನು ಉಳಿತಾಯ ಮಾಡುವ ಐದು ವಿಶೇಷ 
ಸೂಚನೆಗಳ ಮಾರ್ಗ ಸೂಚಿಗಳನ್ನು
ತಿಳಿಸುವ ಕಾರ್ಯಕ್ರಮವದು.
 * ಆದಷ್ಟೂ ದೊಡ್ಡ burner ಗಳನ್ನು
ಅನವಶ್ಯಕವಾಗಿ ಬಳಸಬೇಡಿ...
* ಒಮ್ಮೆ ಪದಾರ್ಥಗಳು ಕುದಿಯುವ point ತಲುಪಿದ ಮೇಲೆ ಬರ್ನರ್ ಸಂಪೂರ್ಣ sim ಗೆ ಹಾಕಿ... ಏನೂ ವ್ಯತ್ಯಾಸವಾಗುವುದಿಲ್ಲ.
* ಎತ್ತರದ ಪಾತ್ರೆಗಳಿಗಿಂತ ಅಗಲವಾದ ಪಾತ್ರೆಗಳನ್ನು ಬಳಸುವದರಿಂದ gas ಉಳಿಸಬಹುದು.ಹಾಗೆ ಮಾಡುವದ
ರಿಂದ  ಸಮಯ ಕೂಡ ಉಳಿಸಬಹು 
ದು. 
*Direct cooking ಗಿಂತ cooker ನ
ಬಳಕೆಯಲ್ಲಿ ಹೆಚ್ಚು ಅಡಿಗೆಗಳನ್ನು ಕಡಿಮೆ ಸಮಯದಲ್ಲಿ ಮಾಡಬಹುದು.
* ಅಡಿಗೆಗೆ ಮೊದಲೇ ಎಲ್ಲ ಅವಶ್ಯಕ
ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ, ಅಕ್ಕಿ/ ಬೇಳೆಗಳನ್ನು ಮೊದಲೇ ನೆನೆಸಿಡಿ
ಒಲೆ ಹೊತ್ತಿಸಿಟ್ಟು ಅತ್ತಿತ್ತ ತಡಕಾಡುವು ದರಿಂದ gas ಹೆಚ್ಚು ಪೋಲಾಗುತ್ತದೆ-
       ‌‌     ‌ಇಂಥವೇ ಐದು ಮುಖ್ಯ ಸಲಹೆಗಳೊಂದಿಗೆ ಚಿಕ್ಕ ಪುಟ್ಟವನ್ನೂ ಸೇರಿಸಿ ಒಂದು Session ಆಯ್ತು. ಮುಖ್ಯ ಹೇಳಬೇಕಾದ ವಿಷಯವೆಂದರೆ
ಅಂದು ಕೊನೆಯಲ್ಲಿ ಎಲ್ಲವನ್ನೂ  ಚಾಚೂ ತಪ್ಪದೇ ಪುನರುಚ್ಚರಿಸಿ ಗೆದ್ದು, parker pen/ Letter pad ವೊಂದ
ನ್ನು  ಬಹುಮಾನವಾಗಿ ಪಡೆದು
ಬೀಗಿದ್ದು ನಾನು...
                 ಇದ್ದ ಮೂರು ಮಕ್ಕಳ ಹೆಸರುಗಳನ್ನು ಆರು ನಮೂನೆಯಲ್ಲಿ ಕರೆದು ನಗೆಪಾಟಲಾಗುವ ನನಗೂ ಒಂದು ಕಾಲವಿತ್ತು...ಒಂದಿಷ್ಟು ನೆನಪಿನ ಶಕ್ತಿಯಿತ್ತು...ಒಮ್ಮೆ ಬಹುಮಾನವೂ
ಬಂದಿತ್ತು...
       Please , ನನ್ನನ್ನು ನಂಬಿ...

Monday, 18 September 2023

 Nipha Virus: A bless in disguise...
      " ನಾನು ಈ ಸಲ ಗಣೇಶನ ಹಬ್ಬಕ್ಕೆ
ಇರುವುದಿಲ್ಲ, ನನ್ನ ಈ ವರ್ಷದ PhD class ನ last session, Sept 16 ರಿಂದ  26 ವರೆಗೆ ಇದೆ.ನಾನು ಕೇರಳದಲ್ಲಿ ಇರುತ್ತೇನೆ,"- ಮಗಳೆಂದಾಗ
ಏನು ಹೇಳಬೇಕೋ ತಿಳಿಯಲಿಲ್ಲ. "ನೀನು ಇರುವುದಿಲ್ಲ ಎಂದರೆ ನಾನೂ ಅಲ್ಲೇ ಇದ್ದು ಏನಾದರೂ ಮಾಡಿಕೊಳ್ಳು ತ್ತೇನೆ ಅಮ್ಮ.ನಾನೂ ಮುಂದಿನ ತಿಂಗಳು ಬರುತ್ತೇನೆ"- ಇದು Madras IIT ಯಲ್ಲಿ ಓದುತ್ತಿರುವ ಅವಳ ಮಗನ / ನನ್ನ ಮೊಮ್ಮಗನ ಶರಾ... ಅಯ್ಯೋ ದೇವರೇ, ಇದ್ದ ನಾಲ್ವರಲ್ಲಿ ಇಬ್ಬರು ಎದ್ದು ಹೋದರೆ ಎಂಬ ಹಳಹಳಿಕೆ ಸುರುವಾಯಿತು. ಅಭ್ಯಾಸದಂಥ ಮುಖ್ಯ ವಿಷಯದಲ್ಲಿ ಯಾವ ರೀತಿಯ
ರಾಜಿಯೂ ಆಗುವ ಸಾಧ್ಯತೆಯಿಲ್ಲದೇ
ಎಲ್ಲರೂ ಅಸಹಾಯಕರಾಗಬೇಕಾಯಿ ತು. 
             ಗಣೇಶನಿಗೆ ವಿಘ್ನ ವಿನಾಶಕ
ಎಂಬ ಹೆಸರು ಸುಮ್ಮನೇ ಬಂದಿದೆಯೇ ?ಹಬ್ಬ ಕೇವಲ‌ ಎರಡು ದಿನಗಳು ಬಾಕಿ ಇರುವಾಗ ಕೇರಳದಲ್ಲಿ ನಿಫಾ ವೈರಸ್ ಹಾವಳಿ ತೀರ ಹೆಚ್ಚಾಗಿ ಎಲ್ಲ ಶಾಲೆ
ಕಾಲೇಜುಗಳು ಬಂದಾಗಿ, ಕ್ಲಾಸುಗಳೆಲ್ಲ
Online ಆಗಬೇಕೆಂಬ ಕೋವಿಡ್ ಕಾಲದ ಪರಿಹಾರ ಘೋಷಿತವಾಯ್ತು. ಮಗಳು ಊರಿಗೆ ಹೋಗುವುದು cancel ಆಯ್ತು...ನೀನಿದ್ದರೆ ನಾನೂ
ಇವತ್ತೇ ಬರುತ್ತೇನೆ ಅಂದ ಮೊಮ್ಮಗ...
ಕೊನೆಯ ಕ್ಷಣದ climax ಧಿಡೀರನೇ 
ಬದಲಾದದ್ದೇ ಮನೆಯ ವಾತಾವರಣ ದಲ್ಲಿ ವಿದ್ಯುತ್ ಸಂಚಾರವಾಗಿ ಇಂದಿನ 
ಗಣೇಶನ ಹಬ್ಬ 'ದ್ವಿಗುಣ ಸಂತಸ'ದಲ್ಲಿ
ಸಂಪನ್ನವಾಯಿತು.ಯಥಾಪ್ರಕಾರ ಪಂಚ ಪಕ್ವಾನ್ನ( ಹೋಳಿಗೆ/ ಕಡುಬು/ ಮೋದಕ/ ಖೀರು/ ಪುರಿ) ಎಲ್ಲವೂ
ತಯಾರಾಗಿ ಗಣೇಶನೊಂದಿಗೆ ಭಕ್ಷಿಸಿ ನಾವೂ ಸಂಪ್ರೀತವಾದೆವು ಎನ್ನುವಲ್ಲಿಗೆ
ಈ ಕತೆ ಮುಗಿಯಿತು...

              

Smt. Veena Nayak  Flat no 402, 4th floor  Presidency Crown Court Apts, C.G.Kamath Road, Karagalapady, Mangalore 575003 Mobile: 7760774037