ನಾನು ಬೆಂಗಳೂರಿಗೆ ಬಂದಾಗ ನನ್ನನ್ನು ಮೂಲೆ ಮೂಲೆ ಸುತ್ತಾಡಿಸಿ
ರೂಢಿ ಮಾಡಿಸಿದ್ದು ಶಾಲಿನಿ...ನಾನು ಅವರನ್ನು ಅಂತಃಪುರಕ್ಕೆ ಪರಿಚಯಿಸಿ ದಾಗ ಇಬ್ಬರೂ ಅದರ ಕಾರ್ಯಕ್ರಮಗ ಳಿಗೆ ಭೇಟಿ ನೀಡುತ್ತಾ, ಸ್ನೇಹಿತರ ವಲಯದ ವಿಸ್ತಾರ ಹೆಚ್ಚಿಸುತ್ತಾ ಹೊಸ ಹೊಸ ಗೆಳತಿಯರನ್ನು ತೆಕ್ಕೆಗೆ ಸೇರಿಸುತ್ತ
ಬದುಕು ವರ್ಣಮಯ ಮಾಡಿಕೊಂಡ ದ್ದಾಯಿತು...ಅದರ ರಂಗು ಏರುತ್ತಿದ್ದಾಗ ಲೇ ಬಂದ ಎರಡು ಕೋವಿಡ್ ಅವಧಿ
ಗಳು ನಮ್ಮ ಭೇಟಿಗಳನ್ನು ಕಿರಿದು ಗೊಳಿಸುತ್ತಾ/ಸಂಖ್ಯೆಗಳನ್ನು ಇಳಿಸುತ್ತಾ
ಹೋಗಿ, ಅದೂ ಒಂದು ರೂಢಿಯಾಗಿ
ಭೇಟಿಗಳು fb /WA/ messenger
ಮೂಲಕ ಮಾತ್ರ ಉಳಿದು ಪರಸ್ಪರ ಭೇಟಿಗಳೂ ತುಟ್ಟಿಯಾಗತೊಡಗಿದವು.
ನನ್ನಂಥ ಹಿರಿಯ ನಾಗರಿಕರಿಗಂತೂ
ಒಂದೊಂದು ಭೇಟಿಯೂ ಒಂದೊಂದು
ಸವಾಲು...
ಇಂಥದರಲ್ಲಿ ಜಯಲಕ್ಷ್ಮಿ
ಪಾಟೀಲರ 'ಈ ಹೊತ್ತಿಗೆ'ಕಾರ್ಯಕ್ರಮ ಒಂದು Oasis...ಮೂರೂವರೆ ತಾಸಿನ
ಈ ಸುಂದರ ಕಾರ್ಯಕ್ರಮದಿಂದ ಆದ
ಪ್ರಾಪ್ತಿ ಬಹಳಷ್ಟು.ಜಯಶ್ರೀ ದೇಶಪಾಂಡೆ, ಮೀರಾ, ಸಂಗೀತಾ, ಪೂರ್ಣಿಮಾ, ರೇಖಾ,ಇನ್ನೂ ಅನೇಕರ
ಜೊತೆಗೆ ಕಳೆದ ಒಂದು ದಿನ ನಮಗಿನ್ನೂ
ಒಂದು ತಿಂಗಳ ಮೆಲುಕಿಗೆ ಆಹಾರ. ಅಚ್ಚುಕಟ್ಟಾಗಿ ನಡೆದ ಈ ಕಾರ್ಯಕ್ರಮ ದಲ್ಲಿ ವಿದ್ವತ್ಪೂರ್ಣ ಭಾಷಣ/ವಿವಿಧ ವಿಷಯಗಳ ಕುರಿತು ಚರ್ಚೆ/ ಸಂವಾದ
ರುಚಿಕಟ್ಟಾದ ಭೋಜನ/ಎಷ್ಟೇ ದಣಿವು
ಮುಖದ ಮೇಲಿದ್ದರೂ ಪಾದರಸದಂತೆ
ಓಡಾಡಿ ಎಲ್ಲವನ್ನೂ ಅಚ್ಚುಕಟ್ಟಾಗಿ
ನಿರ್ವಹಿಸುತ್ತಿದ್ದ ಜಯಲಕ್ಷ್ಮಿ/ವೇದಿಕೆಗೆ
ಭೂಷಣಪ್ರಾಯರಾದ ದೇವೂ ಪತ್ತಾರ/ ಜಯಶ್ರೀ ದೇಶಪಾಂಡೆ/ ಶಶಿಕಲಾ ವಸ್ತ್ರದ/ಆಶಾದೇವಿಯಂಥ
ಹಿರಿಯರ ಉಪಸ್ಥಿತಿಯ ಮೆರುಗು -
ಇವುಗಳಿಂದಾಗಿ ಮೂರು ತಾಸು ಕಳೆದದ್ದೇ ತಿಳಿಯಲಿಲ್ಲ...
ನನಗೆ ನನ್ನ ಕಾಲುನೋವಿನ
ಸಮಸ್ಯೆ ಇತ್ತೀಚೆಗೆ ಹೆಚ್ಚಾಗಿದ್ದು ಹತ್ತು
ಬಾರಿ ಯೋಚಿಸಿ, ಜಯಶ್ರೀಯವರ
ಬೆಂಬಲದ ಭರವಸೆಯ ಮೇಲೆ ಹೋಗಿದ್ದು ಸಾರ್ಥಕವಾಗಿದ್ದಲ್ಲದೇ ಅನೇಕ ಗೆಳತಿಯರ ಭೇಟಿ ಒಂದು
ಅಲಭ್ಯ ಲಾಭವೇ!!!
No comments:
Post a Comment