ಒಂದು ಕಾಲವಿತ್ತು, ಹಸಿವೆಯಿತ್ತು, ಸಾಕಷ್ಟು ಆಹಾರವಿರಲಿಲ್ಲ.ಆಸೆಯಿತ್ತು, ಪೂರೈಸಿಕೊಳ್ಳಲು ಹಣವಿರಲಿಲ್ಲ.ಸಾಕಷ್ಟು
ಸ್ನೇಹಿತ ವರ್ಗವಿತ್ತು, ಮೋಜಿಗೆ ಅವಕಾಶ ಗಳಿರಲಿಲ್ಲ.ಹೀಗಾಗಿ ಇಲ್ಲದ್ದನ್ನು ಪಡೆಯ ಲು ಸದಾ ತುಡಿತವಿರುತ್ತಿತ್ತು.ಸ್ವಲ್ಪೇ ದಕ್ಕಿ ದರೂ ಖುಶಿಯಿತ್ತು,ಮತ್ತೆ ಬೇಕೆಂಬ
ತುಡಿತವಿತ್ತು.ಅದಕ್ಕಾಗಿ ಸತತ ಪ್ರಯತ್ನ ವಿತ್ತು.ಬದುಕಿನಲ್ಲಿ ಲವಲವಿಕೆ ಇತ್ತು. ಹೀಗಾಗಿ ಬದುಕಿಗೆ ಅರ್ಥವಿತ್ತು...ಹರಹು
ಇತ್ತು, ಗುರಿ ಇತ್ತು,ಗತಿ ಇತ್ತು,ಪ್ರಚೋದನೆ ಯಿತ್ತು...ಬೆವರಿಗೆ ಬೆಲೆಯೂ ಇತ್ತು... ಅದರಿಂದಾಗಿ ಗೌರವವಿತ್ರು...
ದಿನಗಳು ಕಳೆದವು, ವರ್ಷಗಳು
ಉರುಳಿದವು.ವಾತಾವರಣ ಬದಲಾಯಿ ತು.ಹಣಕ್ಕೆ ಬಲ ಬಂತು.ಭಾವನೆಗಳಿಗೆ ಬರ ಬಂತು.ಸಂಬಂಧಗಳು ಶಿಥಿಲವಾದ ವು.ಮನೆಗಳು ಒಡೆದವು.ಒಬ್ಬರಿಗೊಬ್ಬರು
ಅಪರಿಚಿತರಾದರು.ಜಗತ್ತು ಗೆದ್ದೆವು- ಮನೆಯವರು ಕಳೆದು ಹೋದರು.ಎಲ್ಲ ವೂ ಅಕ್ಷರಶಃ ಎಲ್ಲವೂ ಇದ್ದೂ ಏನೂ, ಯಾರೂ ಇಲ್ಲವೆಂಬ ಹತಾಶೆ ಎಲ್ಲರನ್ನೂ
ಸತತ ಕಾಡುವಂತಾಗಿದೆ...
ನನಗೇ ಅನಿಸುತ್ತಿದೆ.ಮದುವೆ ಯಾಗಿ ಹದಿಮೂರು ವರ್ಷಗಳಿಗೆ ಒಂಟಿ ಯಾಗಿ, ಮೂರು ಚಿಕ್ಕ ಮಕ್ಕಳನ್ನು ಕಟ್ಟಿ ಕೊಂಡು,ಅಡಚಣೆಗಳು- ಅವಕಾಶಗಳು-
ಅಪಮಾನಗಳು ಎಲ್ಲವೂ ಏನೂ ಅಲ್ಲವೇ ಅಲ್ಲ ಅಂತ ನುಂಗಿಕೊಂಡು
ಬದುಕಿದ್ದ ನೆನಪುಗಳೇ ನನ್ನನ್ನುಇಂದಿಗೂ
ಕೈ ಹಿಡಿದು ನಡೆಸುತ್ತಿವೆ...ಬಲ ತುಂಬು ತ್ತಿವೆ.ಏನು ಬಂದರೂ ಎದುರಿಸಿಯೇನು
ಎಂಬ ಭಾವ ಮೂಡಿಸುತ್ತಿವೆ...
ಹುಟ್ಟಿದ ಕೂಡಲೇ ಕಾರು/ ಹುಟ್ಟುವ ಮೊದಲೇ ಆಸ್ತಿ/ಕೇಳುವ ಮೊದಲೇ ಎಲ್ಲವೂ ಕಾಲಬಳಿ ಬಂದು
ಬೀಳುವ ಅವಕಾಶ ಪಡೆದಿರುವ ಇಂದಿನ ಮಕ್ಕಳೇಕೆ ಪ್ರಸನ್ನರಾಗಿಲ್ಲ?ಬದುಕಿನಲ್ಲೇಕೆ
ಅಷ್ಟೊಂದು ತಹ...ತಹ...ಭಾಗ ದೌಡು...
ಸದಾ ಸ್ಪರ್ಧೆ...ಆದರೂ ನಿರಾಶೆ, ಮಾನಸಿ ಕ ಒತ್ತಡ,ಅಸುರಕ್ಷತೆ???
ಇದಕ್ಕೇನು ಪರಿಹಾರ??!!
No comments:
Post a Comment