Sunday, 20 July 2025

    ಹದಿನೇಳ ದಿನಗಳ ಪ್ರವಾಸ ಮುಗಿಸಿ ನಿನ್ನೆ ಬೆಂಗಳೂರಿಗೆ ವಾಪಸ್ಸಾದೆ...ಹಿಂದೆ ನಾನು ಮಾಡಿದ ಹಲವಾರು ಪ್ರವಾಸ ಗಳ ' ಗುರು'- ಇದು.ಒಬ್ಬಳೇ/ಮನೆ-ಮಕ್ಕಳ ಜೊತೆ ಸಂಬಂಧಿಕರು- ಬಂಧುಗಳು- ಸ್ನೇಹಿತ ರು-ನೆರೆಯವರು- ಬೇಕಾದವರು/ ಬೇಡವಾದವರು ಎಲ್ಲರ ಜೊತೆ ಮಾಡಿ ದ ಪ್ರವಾಸಾನುಭವಗಳ  ಒಟ್ಟು ಮೊತ್ತ.ನೋವು- ನಲಿವು- ಸಂಕಟ- ಜಿಜ್ಞಾಸೆ-ನಿರಾಶೆ- ಹೊಸ ಧಾಟಿಯಲ್ಲಿ ವಿಚಾರ ಗಳು...ಅಬ್ಬಾ ಏನೆಲ್ಲ!!! ನನ್ನ ಮಾತುಗಳು ಮೊದಲ ಬಾರಿಗೆ ಶಬ್ದಗಳ ಕೊರತೆ
ಅನುಭವಿಸಿದವು...
     ‌    ‌‌‌‌ಐದು ವರ್ಷದ ದಿವಾ-ಳಿಂದ ಹಿಡಿದು ತೊಂಬತ್ತರ ಅಂಚಿನಲ್ಲಿದ್ದ ಹಿರಿ
ಸದಸ್ಯರವರೆಗೂ ಮೊದಲಬಾರಿ ದೂರದಿಂದ- ಕುತೂಹಲದಿಂದ- ಆಸ್ಥೆ ಯಿಂದ ಆರಾಮಾಗಿ ಅವಲೋಕಿಸಿ ದಾಗ ತೆರೆದುಕೊಂಡ 'ವಿಶ್ವರೂಪ'-
ಅಗಾಧ...ಅವುಗಳನ್ನು ಒಂದೊಂದೇ
ಮೆಲುಕು ಹಾಕಬೇಕು...ಕಲಿಯುವು
ದಿದ್ದರೆ ಕಲಿತು ಬಿಡಬೇಕು...ಇಲ್ಲದಲ್ಲಿ
ಬದುಕಿನ ಪಟ್ಟುಗಳನ್ನು ಅರಿತಾದರೂ
ಅರಿಯಬೇಕು...
          ನನ್ನ  ಜಗಲಿಯಲ್ಲಿ-ನಾನು ಒಬ್ಬಳೇ ಕುಳಿತು/ಒಂದು ವಿಧಾನದಲ್ಲಿ. ನಸುಕಿನ ಗಳಿಗೆಗಳಲ್ಲಿ ಸಧ್ಯದ ನೀರವ
ವಿರಾಮಕ್ಕೆ ಹೊಸರೂಪ ಕೊಡಬೇಕು
ಅನಿಸುತ್ತಿದೆ...
          ನೋಡಬೇಕು...


No comments:

Post a Comment

ಜಗಲಿಯಿಂದ...              ಒಂದು ಕಾಲವಿತ್ತು, ಹಸಿವೆಯಿತ್ತು, ಸಾಕಷ್ಟು ಆಹಾರವಿರಲಿಲ್ಲ.ಆಸೆಯಿತ್ತು, ಪೂರೈಸಿಕೊಳ್ಳಲು ಹಣವಿರಲಿಲ್ಲ.ಸಾಕಷ್ಟು ಸ್ನೇಹಿತ ವರ್ಗವಿತ್ತು, ಮ...