Thursday, 15 March 2018

ಪ್ರಶ್ನೆ

ದೇವ,ನಿನಗೆ ಎನಿತು ಭಕ್ತರು!
ಎನಿತು ಕಾಣಿಕೆ!! ಬೇಡಿಕೆ!!!
ನಿನ್ನ ಪದತಲದಲ್ಲಿ ಸುಖಿಸುವ
ಜನಕೆ ಎಲ್ಲಿಯ ಹೋಲಿಕೆ...
ಗಲ್ಲಿ- ಗಲ್ಲಿಗೂ,ಸೊಲ್ಲುಸೊಲ್ಲಿಗೂ
ನಿಲ್ಲದಿಹ ನಾಮಾಮೃತ...
ಫಲಗಳೆನಿತೋ..ಪುಷ್ಪವೆನಿತೋ
ಅಡಿಯಿಂದ್ಮುಡಿಗೂ ಆವೃತ...
ದೀನ- ದಲಿತರು,ಸಾಧು- ಸಂತರು
ಬಡವ- ಬಲ್ಲಿದರೆಲ್ಲರೂ...
ನಿನ್ನ ನಾಮದಬಲದ ನೆರಳಲೆ
ಮುಕುತಿ ಕನಸನು ಕಾಣ್ವರು...
ಪಾಪ ನಶಿಸಲು,ಪುಣ್ಯ ಫಲಿಸಲು
ನಿನ್ನ ಕೃಪೆಯದು ತಾರಕ...
ಸಗ್ಗ ಸುಖವನೇ ಇತ್ತು ಕರುಣಿಸೆ
ನಿನ್ನ ಅಭಯವೇ ಪೂರಕ...
ಎಂಬ ಮಾತನು ಕೇಳಿಬೆಳೆದಿಹೆ
ಎನಿತು ಸತ್ಯವೋ..ಮಿಥ್ಯವೋ...
ನಿತ್ಯ ಬದುಕಿನ ಹಲವು ಮುಖದಲಿ
ಭ್ರಮಿಸಿ ಮಿಂಚುವ ಚಿತ್ತವೋ..
ಶಂಕೆ ಸಾವಿರ..ಹಲವು ವರ್ಣ..
ನೂರು ಅನಿಸಿಕೆ ..ಹೇಳಿಕೆ...
'ಸರ್ವ ಸಮ್ಮತ ಇರುವ ತೋರು,
ಒಂದೇ ಒಂದು ಕೋರಿಕೆ...
    
                **********

No comments:

Post a Comment

      ಅಣ್ಣನ post graduation ಮುಗಿದು, ನೌಕರಿ ಸಿಕ್ಕು ಧಾರವಾಡದಲ್ಲಿ ಮನೆಮಾಡಿ, ನಾವು ಧಾರವಾಡಕ್ಕೆ ಬಂದದ್ದು ೧೯೬೫ರಲ್ಲಿ...ನಾವಿದ್ದ ಮನೆ  ಹತ್ತು ಕೋಣೆಗಳ ಬಹು ದೊಡ್...