Saturday, 24 March 2018

ಕಾಲ ಚಕ್ರ

ಕಾಲಚಕ್ರದ
ಇನ್ನೊಂದು ಸುತ್ತು
ಎಲ್ಲರಿಗೂ ಅದೇನೋ ಮತ್ತು..
ಹೊಸ ಹೊಸ ನಿರೀಕ್ಷೆ...
ಹೊಸದೇನೋ ಅಪೇಕ್ಷೆ..
ಭಾವಗಳಿಗೆ
ಬಣ್ಣಬಳೆದು
ನೋವುಗಳಿಗೆ
ತೆರೆಯನೆಳೆದು
ಸುಖದ ನಾಲ್ಕಾರು
ಗಳಿಗೆ ಖರೀದಿಸುವ
ಹಂಬಲ..ಮನಸಿಗೆ...
ದುಡ್ಡು ಸುರಿದು
ಜಗವ ಪಡೆವ ಕನಸು..
ಬೇರೇನೋ ಚಿಂತನೆಯಲ್ಲೇ
ಒಳಮನಸು..ಆಟ
ನಡೆಯಲೇ ಬೇಕು..
ಎಂದಿನಂತೆ..ನಿರಂತರ...
ಎಲ್ಲ ಸರಿಯಿದ್ದಂತೆ..
ಎಲ್ಲವನೂ ಗೆದ್ದಂತೆ..
ಅಡಗಿಸಬೇಕು
ಒಳ ದನಿಯ ಕೂಗು..
ತರಲೇಬೇಕು ಮೊಗದ
ಮೇಲೊಂದು ಸುಂದರ ನಗು....

No comments:

Post a Comment

ಹದಿಹರಯದಲ್ಲಿ ಕಾಲೇಜು ದಿನಗಳಲ್ಲಿ 'ದೂರ ಸರಿದರು' ಕಾದಂಬರಿಯಿಂದ ಪ್ರಾರಂಭವಾದ ಭೈರಪ್ಪನವರ ಪುಸ್ತಕಗಳ ಓದು, ಮೊನ್ನೆ ಮೊನ್ನೆಯವರೆಗೆ ಅಂದರೆ ಕಣ್ಣುಗಳು ತೊಂದರೆ ಕ...