Thursday, 15 March 2018

ಚೈತ್ರಾಗಮನ..

ಸಕಲಜೀವ ಕಣಗಳಲ್ಲಿ
ಸಕಲಭಾವಗಣಗಳಲ್ಲಿ
ತುಂಬಿನಿಂತ ಚೇತನ...
ನಿನಗೆ ಆದಿ- ಅಂತ್ಯವೆಲ್ಲಿ?
ಸೃಜಿಸಿದಂಥ ಕರ್ತೃವೆಲ್ಲಿ?
ಎಲ್ಲಿ ತವ ನಿಕೇತನ..?
ಅರಳಿನಿಂತ ಹೂವಿನಲ್ಲೂ
ಕೆರಳಿನಿಂತ ಹಾವಿನಲ್ಲೂ
ನೀನೇ ನೀನು ಇರುತಿಹೆ...
ತಪ್ತವಾದ ತೃಣಗಳಲ್ಲೂ
ಸಪ್ತಶರಧಿ ಗಣಗಳಲ್ಲೂ
ಬದುಕ ನೀನು ತರುತಿಹೆ...
ಸೂಸಿಹರಿವ ಝರಿಗಳಲ್ಲಿ
ಬೀಸುತಿರುವ ಗಾಳಿಯಲ್ಲಿ
ನಿನ್ನ ಮಧರಗಾಯನ....
ಮೂಡಿಬರುವ ಚುಕ್ಕೆಗಳಲಿ
ಹಾಡುತಿರುವ ಹಕ್ಕಿಗಳಲಿ
ನಿನ್ನ ಹೃದಯಸ್ಪಂದನ...
ಹಾಸಿನಿಂತ ಹಸುರಿನಲ್ಲೂ
ಬೀಗಿನಿಂತ ಬಸಿರಿನಲ್ಲೂ
ಅಮರ ನೀನು ಆಗಿಹೆ...
ಸೋತುನಿಂತ ಜೀವದಲ್ಲಿ
ಹೂತು ಹೋದ ಭಾವಗಳಲಿ
ಸಮರ ನೀನು ಹೂಡಿಹೆ....
ವಿವಿಧ ವಿವಿಧರೂಪದಲ್ಲಿ
ವಿವಿಧ ವಿವಿಧ ವರ್ಣಗಳಲಿ
ನಿನ್ನ ನೆಲೆಯ ಕಂಡಿಹೆ...
ನನ್ನ ಬದುಕಿನಲ್ಲೂ
ನಿನ್ನ ಪ್ರೇಮಸವಿಯನುಂಡಿಹೆ..
    
            *********

No comments:

Post a Comment

  ಬದುಕೆಂದರೆ ಸುಮ್ಮನೇನಾ???              ಸಾಮಾನ್ಯವಾಗಿ ಬದಲಾವಣೆಗೆ ಹೆಚ್ಚು ಅವಕಾಶವಿರದ ಬೆಂಗಳೂರು ಬದುಕಲ್ಲಿ ಒಂಚೂರೇ ಚೂರು change. ಮೈಸೂರಿನಲ್ಲಿ ಬ್ಯಾಂಕ್ನಲ್ಲಿ ...