Sunday, 18 March 2018

ಸಂಸಾರಿಗೊಂದು ಕಿವಿಮಾತು

ಒಂದೇ ರಥ..ಎರಡು ಗಾಲಿ
ಬಾಳೇ ಒಂದು ಪಯಣ...
ಒಂದು ಬಿಟ್ಟು ಇನ್ನೊಂದು ಚಲಿಸೆ
ಗುರಿಯು ಸಿಗದು ಕಾಣಾ...
" ರಸವೇಜನನ, ತಾ ವಿರಸ ಮರಣ"
ಕವಿವಾಣಿ ಮರೆತೆಯೇನು?..
ಸಮರಸದ ಬದುಕು ಚೇತನದ ಮೂಲ
ಎಂಬುದನು ಬಲ್ಲೆಯೇನು?
ತಪ್ಪೊ ಒಪ್ಪೊ ಅದನಪ್ಪಿಕೊಂಡು
ನೀ ಸೋತು ಗೆಲ್ಲಬೇಕು...
" ಈಸಬೇಕು..ಇದ್ದು ಜೈಸಬೇಕು"
ಈ ನಿಲುವು ನಿಲ್ಲಬೇಕು..
" ಎತ್ತು ಎರೆಗೆ..ತಾ ಕೋಣ ಕೆರೆಗೆ"
ಹೊಲ ಊಳಲೇನು ಮಣ್ಣು?
ಪ್ರೇಮ ಪಾಶದಲಿ ಬಂಧಿಯಾಗು
ಸಂಸಾರ ಫಲಿತ ಹಣ್ಣು..
ಬೆಚ್ಚನೆಯ ಮನೆಗೆ, ಇಚ್ಛೆಯಾ ಸತಿಗೆ
ವೆಚ್ಚಕ್ಕೆ ಹಣವ ಗಳಿಸು..
ಹಸಿದು ಅಳಿದರೂ ಕಸಿದು ಬಾಳೆನೆಂಬ
ನಿಜದ ಪಾಠ ಕಲಿಸು..
                  **********

No comments:

Post a Comment

  ಇರುವುದೆಲ್ಲವ ಬಿಟ್ಟು...           ಹತ್ತು- ಹನ್ನೆರಡು ಮಕ್ಕಳೊಡನೆ ಬೆಳೆದು/ ಹಿಂದಿನ ದಿನದ ಅನ್ನದ ಚಿತ್ರಾನ್ನ+ ಮೊಸರನ್ನದ  ಕೈತುತ್ತು ತಿಂದು/ ಊರ ಬಯಲಲ್ಲಿ ಆಡಿ / ...