Thursday, 15 March 2018

ಸ್ವಾಗತ

ಬೇರೆ ಮನೆಯಂಗಳದಿ
ಬೆಳೆದಿರುವ ಹೂವೊಂದು
ನಮ್ಮ ಹಾರದಲಿಂದು ಶೋಭಿಸಿಹುದು...
ಮನಕದೇನೋ ತಂಪು..
ಮನೆಗದೇನೋ ಕಂಪು
ನೂರಾರು ಹೊಸಭಾವ ತಂದಿರುವದು...
ದೂರದಾವುದೋ ತಾಣ
ಅದರ ಉಗಮಸ್ಥಾನ
ನೆಲೆಯರಸಿ ನದಿಯೊಂದು ಹರಿದಿರುವದು...
ಸಾಗರದ ಸಂಗಮದ
ಹೊಂಗನಸು ನನಸಾಗೆ
ಧನ್ಯತೆಯಭಾವದಲಿ ಮಿಂದಿರುವದು...
' ತವರ ತೈಲದ ಹಣತೆ'
ಭಾವಬತ್ತಿಯ ಹೊಸೆದು
ಕುಲವಧುವು ಮನೆಬೆಳಗೆ ಬಂದಿರುವಳು..
ಹೊಸಿಲ ಅಕ್ಕಿಯ ಚಿಮ್ಮಿ..
ಮುಗುಳುನಗೆಯನು ಹೊಮ್ಮಿ
ಗ್ರಹಲಕ್ಷ್ಮಿ ಬಾಗಿಲಲಿ ನಿಂದಿರುವಳು...
ಎಲ್ಲಿಯದೋ ಸಂಬಂಧ
ಯಾವುದೋ ಅನುಬಂಧ
ಸೊಸೆಯಲ್ಲ ಮಗಳೆಂದು ತಿಳಿಯುವೆವು ನಾವು...
ಎತ್ತಣದ ಮಾಮರವೋ
ಎತ್ತಣದ ಕೋಗಿಲೆಯೋ
ಹಾಡಿನಲಿದರೆ ಸಾಕು ಮರೆಸಿ ನೋವು..

No comments:

Post a Comment

      ಅಣ್ಣನ post graduation ಮುಗಿದು, ನೌಕರಿ ಸಿಕ್ಕು ಧಾರವಾಡದಲ್ಲಿ ಮನೆಮಾಡಿ, ನಾವು ಧಾರವಾಡಕ್ಕೆ ಬಂದದ್ದು ೧೯೬೫ರಲ್ಲಿ...ನಾವಿದ್ದ ಮನೆ  ಹತ್ತು ಕೋಣೆಗಳ ಬಹು ದೊಡ್...