Monday, 19 March 2018

ವಿರಹಿಗೆ

ಭಾವನದಿ ಬತ್ತಿರಲು
ಭಾವರಸವೊಣಗಿರಲು
ಜೀವ ತಲ್ಲಣಿಸುವದು ಸಹಜವಹುದು..
ಕಾವದೇವನಿಗವಗೆ
ಭಾವೂಡಲುಗೊತ್ತು
ಕಾವ್ಯಕಾಸರೆ ತಾನೇ ಒದಗಿ ಬರಬಹುದು..
ನಸು ಮುನಿಸು,ತುಸುಪ್ರೀತಿ
ಉಪ್ಪು ಸಕ್ಕರೆಯಂತೆ
ಎರಡರದೂ ಜೊತೆ ಬೇಕು ಬಾಯಿರುಚಿಗೆ...
ಬಿಸಿಯುಸಿರು,ವಿರಹದುರಿ
ಪಿಸುಮಾತು ಸಾಂತ್ವನದ
ಮೇಳವಿದ್ದರೆ ಸೊಗಸು ಮನದ ಶುಚಿಗೆ...
ಮುಗಿಲ ಮುಸ್ಸಂಜೆಯದು
ನಿನಗೆ ಚಿಂತೆಯೇ ಬೇಡ
ಕಾರ್ಮುಗಿಲ ಕೊನೆಗೊಂದು ಬೆಳ್ಳಿಯಂಚು...
ಮತ್ತೊಂದು ಹೊಸದಿನವು
ಹೊಸಿಲಬಳಿಯಲೇ ಉಂಟು
ಗುಡುಗು ಸಿಡಿಲಿನ ಜೊತೆಗೆ ಹೊಳೆವ ಮಿಂಚು...
ಬಣ್ಣದಾಗಸದಿಂದ
ಸೂರ್ಯ ಸರಿದರೆಯೇನು?
ಮನಮುದುಡಿ ಕೂಡಲಿದು ಸಮಯವಲ್ಲ...
ಬೆಣ್ಣೆ ಮನಸಿನ ಹುಡುಗ
ಇಂದಿಲ್ಲದಿರೆ ನಾಳೆ
ಬಂದು ಕೆಂಪಾಗಿಸುವ ನಿನ್ನ ಗಲ್ಲ....

No comments:

Post a Comment

Smt. Veena Nayak  Flat no 402, 4th floor  Presidency Crown Court Apts, C.G.Kamath Road, Karagalapady, Mangalore 575003 Mobile: 7760774037