Thursday, 27 June 2019

Poem...translation

ಬದುಕಿನೋಟದಲ್ಲಿ
ಅನುಭವ ಪಕ್ವವಾಗಲೇಯಿಲ್ಲ...
ಇತರರಂತೆ ಚಾಲಾಕಿತನ
ಕಲಿಯಲಾಗಲೇ ಇಲ್ಲ..
ಮನಸ್ಸು ಮಾಗಬೇಕಿತ್ತು,
ಮಾಗಲೇಯಿಲ್ಲ..

ಬೇಕೆಂದಾಗ
ನಕ್ಕು
ಬೇಕಾದ ಹಾಗೆ
ಅತ್ತು
ಕಳೆದುಬಿಟ್ಟಿತು
ಬಾಲ್ಯ...

ಈಗ ಮುಗುಳ್ನಗೆಗೂ
ಬಿಂಕ...
ಕಣ್ಣೀರಿಗೂ ಏಕಾಂತದ ಸುಂಕ...

ನಗಬೇಕೆಂದೇ ನಕ್ಕ
ಕೆಲ
ಮುಕ್ತ ಕ್ಷಣಗಳಿವೆ
ಹಳೆಯ  ಪಟಗಳಲ್ಲಿ....
ಮಾಸಿದ ನೆನಪಿನ
ಪುಟಗಳಲ್ಲಿ...

ನಕ್ಕ ಕಾರಣ 'ಈಗ'
ತಿಳಿಯಬೇಕಿದೆ...
ನಗು ನಮ್ಮನ್ನು
ನಾವು ನಗುವನ್ನು
ಹುಡುಕಬೇಕಿದೆ...

ಮೂಲ_ ಗುಲ್ಜಾರ್..
ಅನು_ ಕೃಷ್ಣಾ ಕೌಲಗಿ..

No comments:

Post a Comment

        ಧಾರವಾಡದಲ್ಲಿ ಇಪ್ಪತ್ತು ದಿನ ಕಳೆದು ಇಂದು ಬೆಂಗಳೂರಿಗೆ ಬಂದೆ... ಮೊದಲ ಸಲ ಅದರ ಬಗ್ಗೆ ಬರೆಯಲು ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ ಭಾವ ಬೇರೆ/ನೋವು ಬೇರೆ...