Thursday, 27 June 2019

Poem...translation

ಬದುಕಿನೋಟದಲ್ಲಿ
ಅನುಭವ ಪಕ್ವವಾಗಲೇಯಿಲ್ಲ...
ಇತರರಂತೆ ಚಾಲಾಕಿತನ
ಕಲಿಯಲಾಗಲೇ ಇಲ್ಲ..
ಮನಸ್ಸು ಮಾಗಬೇಕಿತ್ತು,
ಮಾಗಲೇಯಿಲ್ಲ..

ಬೇಕೆಂದಾಗ
ನಕ್ಕು
ಬೇಕಾದ ಹಾಗೆ
ಅತ್ತು
ಕಳೆದುಬಿಟ್ಟಿತು
ಬಾಲ್ಯ...

ಈಗ ಮುಗುಳ್ನಗೆಗೂ
ಬಿಂಕ...
ಕಣ್ಣೀರಿಗೂ ಏಕಾಂತದ ಸುಂಕ...

ನಗಬೇಕೆಂದೇ ನಕ್ಕ
ಕೆಲ
ಮುಕ್ತ ಕ್ಷಣಗಳಿವೆ
ಹಳೆಯ  ಪಟಗಳಲ್ಲಿ....
ಮಾಸಿದ ನೆನಪಿನ
ಪುಟಗಳಲ್ಲಿ...

ನಕ್ಕ ಕಾರಣ 'ಈಗ'
ತಿಳಿಯಬೇಕಿದೆ...
ನಗು ನಮ್ಮನ್ನು
ನಾವು ನಗುವನ್ನು
ಹುಡುಕಬೇಕಿದೆ...

ಮೂಲ_ ಗುಲ್ಜಾರ್..
ಅನು_ ಕೃಷ್ಣಾ ಕೌಲಗಿ..

No comments:

Post a Comment

      ಅಣ್ಣನ post graduation ಮುಗಿದು, ನೌಕರಿ ಸಿಕ್ಕು ಧಾರವಾಡದಲ್ಲಿ ಮನೆಮಾಡಿ, ನಾವು ಧಾರವಾಡಕ್ಕೆ ಬಂದದ್ದು ೧೯೬೫ರಲ್ಲಿ...ನಾವಿದ್ದ ಮನೆ  ಹತ್ತು ಕೋಣೆಗಳ ಬಹು ದೊಡ್...