ಪ್ರತಿ ರಾತ್ರಿಗೊಂದು ಬೆಳಗಿದೆ...ಪ್ರತಿ ರಾತ್ರಿಗೊಂದು ಬೆಳಗಿದೆ...
ನಾಲ್ಕು ದಿನಗಳ ಹಿಂದೆ ನನ್ನ ತಮ್ಮನ ( 18 - _Dec) ನೆನಪಿನಲ್ಲಿ
ಮಸುಕಾಗಿದ್ದೆ ಎರಡುದಿನಗಳ ಕಾಲ. ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುವ ದಿನದಂದು ನೆಲಮಂಗಲದ ಬಳಿ ಆದ ಅಪಘಾತದ ಸುದ್ದಿ- ಫೋಟೋಗಳು
ನನ್ನನ್ನು ಅಕ್ಷರಶಃ ಹಣ್ಣಾಗಿಸಿದವು.
(ತಮ್ಮನೂ ತೀರಿದ್ದು ಅಪಘಾತದಲ್ಲಿ).
ಮತ್ತದೇ ಬೆಳಗು/ ಮತ್ತದೇ ಸಂಜೆ-
ಮತ್ತದೇ ಬೇಸರ)...
ಯಾವುದರಲ್ಲೂ ಆಸಕ್ತಿಯಿಲ್ಲ, ಹುರುಪಿಲ್ಲ...TV ಹೆಚ್ಚು ನೋಡುವುದಿಲ್ಲ.ಓದೂ ಹಿಮ್ಮೆಟ್ಟಿದೆ. ಹೊರಗೆ ಒಬ್ಬಳೇ ಅಡ್ಡಾಡುವುದಿಲ್ಲ.
ಆಗ ಮೈಸೂರಿನಿಂದ ನಮ್ಮ ಪ್ರಕಾಶಕರ ಫೋನು ಬಂತು- ಪುಸ್ತಕಗಳು ರೆಡಿ ಇವೆ.
ಯಾವ address ಗೆ ಕಳಿಸಲಿ?- ಎಂದು.Mood ಬದಲಾಗುವ ಸೂಚನೆ
ಕಂಡಿತು.ಸ್ವಲ್ಪವೇ ಮಿಸುಕಾಡಿ ಉತ್ತರಿಸಿದೆ.ಮರುದಿನ ಅವು ಮೈಸೂರಿ ನಲ್ಲಿ ಮಗಳ ಮನೆಯಲ್ಲಿದ್ದು ಅದರ ಮರುದಿನ ನನ್ನ ಆಪ್ತ ಗೆಳತಿ ಶಾಲಿನಿಯ
ಮೂಲಕ ನಮ್ಮನೆ ತಲುಪಿದವು.
ಚಂಬೆಳಕಿನ ಬೆಳ್ಳಿ ಕಿರಣಗಳು
ರಾತ್ರಿಯ ಸಂಕಟ/ ಚಡಪಡಿಕೆಗೆ ಕೆಲ ಹೊತ್ತೇ ಆದರೂ ಪರಿಹಾರ ಒದಗಿಸಿ
ಮತ್ತೆ ಸಂಚಲನ ಹುಟ್ಟಿಸಿದ್ದು ನಿಜ...
ಬದುಕಿನ ಅಗಾಧತೆಗೆ ಮತ್ತೊಂದು
ನಿದರ್ಶನ...
ಈ ಹುಚ್ಚನ್ನು ನನಗೆ ಹಚ್ಚಿದವನೂ ನನ್ನದೇ ತಮ್ಮ ಸುಧಿಯೇ.ನನ್ನನ್ನು, ನನ್ನ ಮಗಳನ್ನೂ
ಎಡೆಬಿಡದೇ ಕಾಡಿ/ ಮೊದಲ ಪುಸ್ತಕದ
Proof reading ನಿಂದ ಹಿಡಿದು ಪ್ರಕಾಶನದ ವರೆಗೆ ಒಂದು ವೃತದಂತೆ ಕೆಲಸಮಾಡಿ/ನನಗೆ ಪುಸ್ತಕಗಳನ್ನು ಕಳಿಸಿ/ ಧಾರವಾಡದಲ್ಲೆಲ್ಲ ಸ್ವತಃ ಕಾರಿನಲ್ಲಿ ಹಾಕಿಕೊಂಡು ಎಲ್ಲರಿಗೂ ತಲುಪಿಸಿದವನು ಅವನೇ...ಆ ಮಾತಿಗೆ
ಸರಿಯಾಗಿ ಐದು ವರ್ಷಗಳು ಕಳೆದವು...ಅವನಿಲ್ಲದೇ ನಾಲ್ಕು ವರ್ಷಗಳು...
ನನ್ನ ಪ್ರತಿಯೊಂದು ಹಗಲು
ಇರುಳಲ್ಲಿಯೂ ನೆನಪಾಗುತ್ತಾನೆ ಅವನು.ಸಮಾಧಾನಿಸುತ್ತಾನೆ,
ಅವನನ್ನು ನೆನೆದರೇನೇ ಎಲ್ಲೋ ಹೇಗೋ ಒಂದು ರೀತಿಯಲ್ಲಿ ಒಂದು ಸಮಾಧಾನ ಸಿಗುತ್ತದೆ.
ವರ್ಷದಿಂದ ಬೆನ್ನು ಹತ್ತಿದ
ಪುಸ್ತಕಗಳು ಪ್ರಿಂಟ್ ಆಗಿರಲೇ ಇಲ್ಲ.
ಆದಾಗ ಆಗಲಿ ಎಂದು ನಾನೂ ಬಿಟ್ಟುಬಿಟ್ಟಿದ್ದೆ.ಅಂಥವು ಈಗ ಬಂದಿವೆ,
ಸ್ವಲ್ಪಮಟ್ಟಿಗೆ ಮತ್ತೆ ಜೀವ ತುಂಬಿವೆ...
ಪ್ರತಿ ರಾತ್ರಿಗೂ ಒಂದು ಬೆಳಗಿರುತ್ತದೆ-ಎಂಬುದನ್ನು ನೆನಪಿಸಿ
ಸಮಾಧಾನಿಸುತ್ತವೆ...ನಮ್ಮನ್ನು
ಮುಂದೆ ನಡೆಸುತ್ತವೆ...
Love YOU Jindagee...
ನಾಲ್ಕು ದಿನಗಳ ಹಿಂದೆ ನನ್ನ ತಮ್ಮನ ( 18 - _Dec) ನೆನಪಿನಲ್ಲಿ
ಮಸುಕಾಗಿದ್ದೆ ಎರಡುದಿನಗಳ ಕಾಲ. ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುವ ದಿನದಂದು ನೆಲಮಂಗಲದ ಬಳಿ ಆದ ಅಪಘಾತದ ಸುದ್ದಿ- ಫೋಟೋಗಳು
ನನ್ನನ್ನು ಅಕ್ಷರಶಃ ಹಣ್ಣಾಗಿಸಿದವು.
(ತಮ್ಮನೂ ತೀರಿದ್ದು ಅಪಘಾತದಲ್ಲಿ).
ಮತ್ತದೇ ಬೆಳಗು/ ಮತ್ತದೇ ಸಂಜೆ-
ಮತ್ತದೇ ಬೇಸರ)...
ಯಾವುದರಲ್ಲೂ ಆಸಕ್ತಿಯಿಲ್ಲ, ಹುರುಪಿಲ್ಲ...TV ಹೆಚ್ಚು ನೋಡುವುದಿಲ್ಲ.ಓದೂ ಹಿಮ್ಮೆಟ್ಟಿದೆ. ಹೊರಗೆ ಒಬ್ಬಳೇ ಅಡ್ಡಾಡುವುದಿಲ್ಲ.
ಆಗ ಮೈಸೂರಿನಿಂದ ನಮ್ಮ ಪ್ರಕಾಶಕರ ಫೋನು ಬಂತು- ಪುಸ್ತಕಗಳು ರೆಡಿ ಇವೆ.
ಯಾವ address ಗೆ ಕಳಿಸಲಿ?- ಎಂದು.Mood ಬದಲಾಗುವ ಸೂಚನೆ
ಕಂಡಿತು.ಸ್ವಲ್ಪವೇ ಮಿಸುಕಾಡಿ ಉತ್ತರಿಸಿದೆ.ಮರುದಿನ ಅವು ಮೈಸೂರಿ ನಲ್ಲಿ ಮಗಳ ಮನೆಯಲ್ಲಿದ್ದು ಅದರ ಮರುದಿನ ನನ್ನ ಆಪ್ತ ಗೆಳತಿ ಶಾಲಿನಿಯ
ಮೂಲಕ ನಮ್ಮನೆ ತಲುಪಿದವು.
ಚಂಬೆಳಕಿನ ಬೆಳ್ಳಿ ಕಿರಣಗಳು
ರಾತ್ರಿಯ ಸಂಕಟ/ ಚಡಪಡಿಕೆಗೆ ಕೆಲ ಹೊತ್ತೇ ಆದರೂ ಪರಿಹಾರ ಒದಗಿಸಿ
ಮತ್ತೆ ಸಂಚಲನ ಹುಟ್ಟಿಸಿದ್ದು ನಿಜ...
ಬದುಕಿನ ಅಗಾಧತೆಗೆ ಮತ್ತೊಂದು
ನಿದರ್ಶನ...
ಈ ಹುಚ್ಚನ್ನು ನನಗೆ ಹಚ್ಚಿದವನೂ ನನ್ನದೇ ತಮ್ಮ ಸುಧಿಯೇ.ನನ್ನನ್ನು, ನನ್ನ ಮಗಳನ್ನೂ
ಎಡೆಬಿಡದೇ ಕಾಡಿ/ ಮೊದಲ ಪುಸ್ತಕದ
Proof reading ನಿಂದ ಹಿಡಿದು ಪ್ರಕಾಶನದ ವರೆಗೆ ಒಂದು ವೃತದಂತೆ ಕೆಲಸಮಾಡಿ/ನನಗೆ ಪುಸ್ತಕಗಳನ್ನು ಕಳಿಸಿ/ ಧಾರವಾಡದಲ್ಲೆಲ್ಲ ಸ್ವತಃ ಕಾರಿನಲ್ಲಿ ಹಾಕಿಕೊಂಡು ಎಲ್ಲರಿಗೂ ತಲುಪಿಸಿದವನು ಅವನೇ...ಆ ಮಾತಿಗೆ
ಸರಿಯಾಗಿ ಐದು ವರ್ಷಗಳು ಕಳೆದವು...ಅವನಿಲ್ಲದೇ ನಾಲ್ಕು ವರ್ಷಗಳು...
ನನ್ನ ಪ್ರತಿಯೊಂದು ಹಗಲು
ಇರುಳಲ್ಲಿಯೂ ನೆನಪಾಗುತ್ತಾನೆ ಅವನು.ಸಮಾಧಾನಿಸುತ್ತಾನೆ,
ಅವನನ್ನು ನೆನೆದರೇನೇ ಎಲ್ಲೋ ಹೇಗೋ ಒಂದು ರೀತಿಯಲ್ಲಿ ಒಂದು ಸಮಾಧಾನ ಸಿಗುತ್ತದೆ.
ವರ್ಷದಿಂದ ಬೆನ್ನು ಹತ್ತಿದ
ಪುಸ್ತಕಗಳು ಪ್ರಿಂಟ್ ಆಗಿರಲೇ ಇಲ್ಲ.
ಆದಾಗ ಆಗಲಿ ಎಂದು ನಾನೂ ಬಿಟ್ಟುಬಿಟ್ಟಿದ್ದೆ.ಅಂಥವು ಈಗ ಬಂದಿವೆ,
ಸ್ವಲ್ಪಮಟ್ಟಿಗೆ ಮತ್ತೆ ಜೀವ ತುಂಬಿವೆ...
ಪ್ರತಿ ರಾತ್ರಿಗೂ ಒಂದು ಬೆಳಗಿರುತ್ತದೆ-ಎಂಬುದನ್ನು ನೆನಪಿಸಿ
ಸಮಾಧಾನಿಸುತ್ತವೆ...ನಮ್ಮನ್ನು
ಮುಂದೆ ನಡೆಸುತ್ತವೆ...
Love YOU Jindagee...