Tuesday, 17 December 2024

ಸುಧಿ, 
          ನೀನಿಲ್ಲದೇ ಇಂದಿಗೆ ನಾಲ್ಕು ವರ್ಷ...ಒಂದು ದಿನವೂ ನಿನ್ನನ್ನು ನೆನಪಿಸದೇ ಇಲ್ಲ.ಪ್ರತಿಯೊಂದು ಗಳಿಗೆ
- ಎಂಥದೇ ಇರಲಿ- ಮೊದಲು ನೀನು
ಕಣ್ಣೆದುರು ಬರುತ್ತೀ...ಒಮ್ಮೊಮ್ಮೆ ನಿನ್ನ
ಜೊತೆ ಮಾತನಾಡುವ ಅದಮ್ಯ ಆಸೆಯಾಗುತ್ತದೆ.ಸ್ವಲ್ಪು ಹೊತ್ತು ಮಂಕು
ಕವಿಯುತ್ತದೆ.ಯಾವುದೇ ಎಂಥದೇ ಸುದ್ದಿ ಇರಲಿ- ಮೊದಲ ಹಂಚುವಿಕೆ-
ನಿನ್ನೊಂದಿಗಿರುತ್ತಿತ್ತು. ಹತ್ತು  ಹದಿನೈದು ನಿಮಿಷಗಳ ಕಾಲ ಹರಟೆಯಾಗುತ್ತಿತ್ತು. ಅಸಹಾಯಕತೆಗೊಂದು ಸಾಂತ್ವನ/ ಖುಶಿಗೊಂದು ಅಭಿನಂದನ/ಸಾಮಾನ್ಯ ಕರೆಯಾಗಿದ್ದರೆ ಮನಸ್ಸು ಬಿಚ್ಚಿಟ್ಟ ಶುದ್ಧ ನಿರಾಳತೆ ಅನುಭವವಾಗುತ್ತಿತ್ತು.
ತುಂಬಾ ಕಾಡುತ್ತೀ ಮಹರಾಯ!!!ಎಂಥ ಅಸಹಾಯಕತೆ  ನಮ್ಮೆಲ್ಲರದು!!! 

No comments:

Post a Comment

ರಕ್ಷಾ ಬಂಧನ... ಕೈಗೆ ಕಟ್ಟುವ ಎಳೆಗೆ ನೂರೆಂಟು ನೂಲುಗಳು.. ಮೇಲೆರೆಡು ಗಂಟುಗಳು ಬಿಗಿಯಾಗಲು... ನೂರಾರು ನೂಲುಗಳೆ ನೂರಾರು ಭಾವಗಳು.. ಹೃದಯ- ಹೃದಯದ ಬೆಸುಗೆಗಣಿಯಾಗಲು......