Friday, 8 August 2025

  ಹಬ್ಬ- ಅಂದ್ರsss... 
    'ಹಬ್ಬ' - ಅಂದ್ರ ವಾರದಿಂದ ನಮ್ಮದು ಲೆಕ್ಕಾಚಾರ...ಅಡುಗೆ ಏನು ಮಾಡ ಬಹುದು? ಯಾರರ ಊರಿಂದ ಬರಬಹುದಾ? ಹೊಸ ಅಂಗಿ ದಕ್ಕಬಹು ದಾ?ಸಾಲಿ ಸೂಟಿ ಅದನೋ ಹೆಂಗ-?ನೆನೆದಷ್ಟು  ಪ್ರಶ್ನೆಗಳು...ತೀರದ ಕಲ್ಪನೆ ಗಳು...ಇಲ್ಲದ ಊಹಾಪೋಹಗಳು...
ಅದರಲ್ಲಿ ಏನು?ಎಷ್ಟು ದಕ್ಕತಿತ್ತೋ ಆ
ದೇವರಿಗೇ ಗೊತ್ತು...ಆದರೆ ಪ್ರತಿ ಹಬ್ಬದ ಮೊದಲಿನ ನಮ್ಮ ಪೃಥಾ ಇದು-ಕಥಾನೂ.
           ಅವ್ವಾ/ಅಪ್ಪನ ಚಿಂತಿ ಬ್ಯಾರೆ.
ಹತ್ರ ದುಡ್ಡು ಎಷ್ಟದ? ಅದರಲ್ಲಿ ಏನೇನು
ಕೂಡಿಸಬಹುದು?ಯಾರ್ಯಾರ್ನ ಕರೀಬ
ಹುದು?ಅದಾದ ಮ್ಯಾಲ ಮುಂದ ಆ ಖರ್ಚು ಹೆಂಗ ಸಂಭಾಳಿಸಬಹುದು?
ಮತ್ತೇನೇನೋ!!!
                 ಯಾವುದಕ್ಕೂ ಯಮನಿಯ ಮ ಅಂತ ಏನೂ ಇರದಿದ್ರೂ," ಮೊದಲಿಂ ದ ಮಾಡಿದ್ದದ, ಬಿಟ್ರ 'ವಾಗತ್ಯ'- ಅಲ್ಲ ಏನು?- ಇಂಥ tag line ಗಳ ಹೆದರಿಕೆ.
ಅಂತೂ ಇದಾವ್ದನ್ನೂ ಕೇಳದ ಹಬ್ಬವೊಂ ದು ಹೊಸ್ತಿಲದೊಳಗ ಬಂದಾಗ ದ್ರಾವಿಡ ಪ್ರಾಣಾಯಾಮ ಮಾಡಿ  ಬಗೀಹರಸೋ
ಕಲೆ ಆಗ ಎಲ್ಲರಿಗೂ ಗೊತ್ತಿತ್ತು...
               ಹಬ್ಬದ ಮಜಾಕ್ಕ ಇದಾವುದೂ
ಅಡ್ಡ ಬರ್ತಿದ್ದಿಲ್ಲ,..ತಲೆಸ್ನಾನ/ದೇವ- ದೇವತೆಗಳ ಪೂಜಾ/ಸಿಹಿಯೂಟ/ ಬಂಧುಗಳ ಆಗಮನ- ಇವೆಲ್ಲ ಯಥಾ ಪ್ರಕಾರ ನಡಿತಿದ್ವು...ಕೆಲವರ ಮನೆಯಲ್ಲಿ
ಗೌರಿ ಕೂಡಿಸುವ ಪದ್ಧತಿ ಇರದಿದ್ರ, ಇದ್ದವರ ಮನೆಗೆ ಹೋಗಿ, ಪೂಜಾವಿಧಿ
ಅಲ್ಲೇ ಮಾಡಿ, ನಂತರ ಪಂಕ್ತಿ ಊಟದ ಪದ್ಧತಿ ಇರ್ತಿತ್ತು.ಎಲ್ಲರಿಗೂ ಬೇರೆ ಬೇರೆ
ಖಾದ್ಯ ಸಿಕ್ಕು ಹಬ್ಬ ತಾನsss ಭರ್ಜರಿ
ಅನಿಸಿಬಿಡ್ತಿತ್ತು...
   ‌‌         ಈಗ ಅದೆಲ್ಲ ಒಂದು ಸುಂದರ ಕನಸು. ಯೋಗ್ಯತಾ ಇದ್ರೂ ಬದಲಾದ ಪದ್ಧತಿಗಳು/ಅಪಾರ್ಟ್ಮೆಂಟ್ ವಾಸ್ತವ್ಯ/
ಎಲ್ಲರೂ ಕೆಲಸಗಳಲ್ಲಿ ವ್ಯಸ್ತರಿರೋದು/ ಸಮಯಾಭಾವ/ಬಂಧುಗಳ ಮನೆಗಳ
ದೂರ- ಅದಕ್ಕೆ ತೆರಬೇಕಾದ ಸುಂಕ- ಇಂಥ ಅಡಚಣಿಗಳಿಂದ ಸಿಕ್ಕಿದಷ್ಟು/ ದಕ್ಕಿದಷ್ಟು- ತತ್ವ ಎಲ್ಲರದೂ...

ಕಾಲಾಯ ತಸ್ಮೈ ನಮಃ

      ‌‌‌‌      
 

Thursday, 7 August 2025

ಜೀನಾ ಇಸೀ ಕಾ ನಾಮ್ ಹೈ...
     ' ಇರುವು'- ಇಳಿಜಾರಿನಲ್ಲಿದೆ.ಎಂಬತ್ತು
ಕಡಿಮೆ ವಯಸ್ಸೇನೂ ಅಲ್ಲ...ಅದು ಒಂದು ಸಂಖ್ಯೆಯಷ್ಟೇ ಇರಬಹುದು ಹಲವರಿಗೆ,ಆದರೆ ಮೊದಲರ್ಧದಲ್ಲೇ ಹೆಚ್ಚು 'ಭಾಗದೌಡ್' - ಆಗಿದ್ದರೆ, ಮಕ್ಕಳೆ ಲ್ಲ ಬೇಗ settle ಆಗಿ ತಮ್ಮ ತಮ್ಮ ಪಾಡಿಗೆ ಹಾಯಾಗಿದ್ದರೆ,ಅತೀ ಮಹತ್ವಾ ಕಾಂಕ್ಷೆಯ ಆಸೆ ಇಲ್ಲದೇ ಕೊನೆಗಾದರೂ ಶಾಂತಿ- ನೆಮ್ಮದಿ ಇದ್ದರೆ ಬೇಕಾದಷ್ಟು ಆಯಿತು - ಅನ್ನುವವರಿಗೆ ಬದುಕಿನ ನಿರೀಕ್ಷೆ ಬೇರೆಯೇ ಇರುತ್ತದೆ.
     ‌       ಬಹುಶಃ ನಾನು ಆ ಕೆಟೆಗರಿಗೆ
ಸೇರಿದವಳು ಎನಿಸತೊಡಗಿದೆ...ಬೆಳಿಗ್ಗೆ
ಹೋಗುವವರು ಹೋಗಿಯಾದ ಮೇಲೆ
ನನ್ನ ಪ್ರಪಂಚ ತೆರೆಯುತ್ತದೆ...ಬಾಲ್ಕನಿಗೆ
ಬಂದು ಕುಳಿತು ಅದರಿಂದ ತೆರೆದುಕೊಳ್ಳು ವ ಮೂರು ದಾರಿಗಳು, ಅವುಗಳ
ಮುಖಾಂತರ ಕಣ್ಣೆದುರು ಕಾಣುವ ಜಗತ್ತು ನನ್ನನ್ನೂ ದಂಗಾಗಿಸುತ್ತದೆ. ಭರ ಭರ ಓಡುವ ಕಾರುಗಳು/ ಮಕ್ಕಳನ್ನು
ಹೊತ್ತು ಬಸ್ಸು ಹತ್ತಿಸಲು ಓಡುವ ಪಾಲಕ ರು/ಸ್ವಿಗ್ಗಿ- ಝೊಮ್ಯಾಟೋ ದ boys/ಕೈಲಿ
ಮೊಬೈಲ್ ಹಿಡಿದು ಅದರಲ್ಲಿ ಮುಳುಗಿದ
ಕೆಲಸದ ಹುಡುಗಿಯರು/ಗುಂಪಾಗಿ ಬರುವ ಕೆಲಸದವರ identify ಗುರುತಿಸಿ
ಒಳಬಿಡುವ ಸೆಕ್ಯುರಿಟೀಸ್/ರಸ್ತೆ signal ದಲ್ಲಿ ಸಿಕ್ಕು ಬಿಸಿ ಹಂಚಿನಮೇಲೆ ಕುಳಿತಂ ತೆ ಒದ್ದಾಡುವ ಕಾರ್‌ ಪಯಣಿಗರು- ಏನೂಂತ- ಎಷ್ಟೂಂತ ಹೇಳೋದು!!!ಮನೆಯ ಜನರಿಗೆ ಹತ್ತು ನಿಮಿಷಕ್ಕೂ ಹೆಚ್ಚು ಸಿಕ್ಕದ ಇವರು ರಸ್ತೆಯ 
ಮೇಲೆಯೇ ಕಳೆದು ಹೋಗುವ ಪರಿ ವಿಷಾದನೀಯ...
               ಇದನ್ನೆಲ್ಲ ನೋಡಿದಾಗ ಮನೆಗೂ- ನಮ್ಮ ಕೆಲಸಗಳಲ್ಲೂ ಸರಿ ಸಮಯ ವ್ಯಯಿಸಿ ಬದುಕಿನ ಬಹುಭಾಗ ಕಳೆದು, ಬರುವ pension ಹಣದಲ್ಲಿ
ತಕ್ಕಮಟ್ಟಿಗೆ ಆರಾಮಾಗಿ ಬದುಕುವ ನಾವು ಅದೃಷ್ಟಶಾಲಿಗಳೋ- ಮನದಲ್ಲಿ
ಬರುವ ಮೊದಲೇ ಪ್ರತಿಯೊಂದೂ ಕೈ ಯಲ್ಲಿ ಬಂದು ಬೀಳುವ ಭಾಗ್ಯ ಅನುಭವಿಸುತ್ತಿರುವ ನಮ್ಮ ಮಕ್ಕಳು
ಹೆಚ್ಚು ಸುಖಿಗಳೋ ಎಂಬುದಕ್ಕೆ ಉತ್ತರ
ಹುಡುಕುತ್ತಿದ್ದೇನೆ...ಸಕ್ಕಿಲ್ಲ...
              
            


         

Saturday, 2 August 2025

       ಮೊದಲು ಮೊಮ್ಮಕ್ಕಳು ಚಿಕ್ಕವಾ ಗಿದ್ದಾಗ ಅದ್ಧೂರಿಯಿಂದ ಆಗುತ್ತಿದ್ದ
ಹುಟ್ಟುಹಬ್ಬದ ಸಂಭ್ರಮ ಅವರು ದೊಡ್ಡವರಾಗುತ್ತ ಹೋದಂತೆ ಶಾಲೆ/ ಅಭ್ಯಾಸ/special ಪಾಠ ಅಂತ miss
ಆಗ್ತಾ ಬಂದದ್ದು ಸಂಜೆ ಕೇಕೊಂದನ್ನು
Cut ಮಾಡುವ ಹಂತ ತಲುಪಿ ತುಂಬ ದಿನಗಳಾಯ್ತು...ಅದೇನೋ ಈ ಸಲ ನನ್ನ ಮೂರನೇ ಮೊಮ್ಮಗನ ಇಪ್ಪತ್ಮೂ ರನೇ ಹುಟ್ಟುಹಬ್ಬದ ವೇಳೆಗೆ ಎಲ್ಲ ಐದೂ ಜನರು ಮನೆಯಲ್ಲಿ ಇದ್ದುದೇ ಹಬ್ಬವಾಗಿ ಎಲ್ಲರೂ ಕೂಡಿ ದಿನವೊಂದ ನ್ನು ಕಳೆಯುವಂತಾದುದು ನಿನ್ನಿನ ದಿನದ ವಿಶೇಷ...
        ಮೊಮ್ಮಕ್ಕಳು ದೊಡ್ಡವಾದ ಮೇಲೆ ಒಬ್ಬೊಬ್ಬರು ಒಂದೊಂದು ಕಡೆಯಾಗಿ ಅವರ ಹುಟ್ಟುಹಬ್ಬದ ಸಂಭ್ರಮ ಕಾಣದಾಗಿತ್ತು. ಶಾಲೆ/ ಅಭ್ಯಾ ಸ/ Special class ಗಳು ಅನ್ನುವ 

Wednesday, 30 July 2025

ರಕ್ಷಾ ಬಂಧನ...

ಕೈಗೆ ಕಟ್ಟುವ ಎಳೆಗೆ
ನೂರೆಂಟು ನೂಲುಗಳು..
ಮೇಲೆರೆಡು ಗಂಟುಗಳು ಬಿಗಿಯಾಗಲು...
ನೂರಾರು ನೂಲುಗಳೆ
ನೂರಾರು ಭಾವಗಳು..
ಹೃದಯ- ಹೃದಯದ ಬೆಸುಗೆಗಣಿಯಾಗಲು...

ಹಣೆಗಿಡುವ ತಿಲಕವದು
ಸೂರ್ಯತೇಜದ ಕೆಂಪು..
ಮನಸೆಂಬ ಮೋಹದಲಿ 
ಆರಕ್ತ ಗೊಳಿಸೆ...
ದೀಪ- ಧೂಪವ ದಾಟಿ
ಪ್ರೀತಿ ಎಳೆಗಳ ಮೀಟಿ
ಆರತಿಯ ತಟ್ಟೆಗಳ ಸಜ್ಜುಗೊಳಿಸೆ...

ಬಾಯೊಳಗೆ ಇಡುವ ಸಿಹಿ
ಬರಿಸಿಹಿಯು ತಾನಲ್ಲ...
ಹೃದಯ-ಭಾವಗಳೆ ಪಾಕರೂಪತಾಳಿ
ಮಧುರ ಬಾಂಧವ್ಯವದು
ಚಿಗುರೊಡೆದು ಪಲ್ಲವಿಸೆ
ಪ್ರತಿಮಾತು  ಮಧುವಾಗದಿದ್ದರ್ಹೇಳಿ

ಅಣ್ಣ- ತಮ್ಮರ ಕೊಡುಗೆ
ಇಂದ್ರ ಸಂಪತ್ತು ಸಿರಿ..
ಬೇರೇನು ಕೇಳೀತು 
ತೃಪ್ತ ಮನಸು....
ವರುಷದಲಿ ಒಂದೆಸಲ
ಬರುತಿರುವ ಈ ಗಳಿಗೆ
ಪ್ರತಿದಿನವು ಬರಲೆಂಬ ಮಧುರ ಕನಸು...

ಶ್ರೀಮತಿ ಕೃಷ್ಣಾ ಕೌಲಗಿ...

Monday, 21 July 2025

ಹೇಳು, ಸಾಕು...

ನೀನು ಹೇಗೆ ಬದುಕುತ್ತಿ- ಹೇಳಬೇಡ,
ಇತರರ ನೋವು ನಿನ್ನನ್ನೂ ನೋಯಿಸುತ್ತಾ? ಹೇಳು,ಸಾಕು...
ನಿನ್ನ ವಯಸ್ಸೆಷ್ಟು-ನನಗೆ ಬೇಡ,
ನಿನ್ನ ಪ್ರೀತಿ,ಕನಸಿಗೆ'ನಿಜದ ಬದುಕು' ಬದುಕುವ 'ಹುಂಬ'ಎನಿಸಿಕೊಳ್ಳುವ  ಧೈರ್ಯ ಉಂಟಾ?- ಹೇಳು ಸಾಕು...

ನಿನ್ನ ಬದುಕಿನ ಪರಿಭ್ರಮಣದ 
ಕಥೆ ನನಗೆ ಬೇಡ..
ನಿನ್ನ ಮನದಾಳದ ದುಃಖದ ಮೂಲ ಅರಿತಿದ್ದೀಯಾ,?
ಬದುಕಿನ ಕಷ್ಟಗಳ ಎದುರಿಸಬಲ್ಲೆಯಾ- ಹೇಳು ಸಾಕು...

ದುಃಖ ನನ್ನದಿರಲಿ,ನಿನ್ನದೇ ಇರಲಿ,
ಅಡಗಿಸದೇ,ಕಂಗೆಡಿಸದೇ,
ಸಂತೋಷದ ಗಳಿಗೆ, 
ನಿನ್ನದಿರಲಿ,ನನ್ನದೇ ಇರಲಿ,
ಮಾನವ ಮಿತಿಗಳ ಉಪದೇಶಿಸದೇ
ಟೊಳ್ಳು- ಗಟ್ಟಿಗಳ ನಿರ್ದೇಶಿಸದೇ ನನ್ನೊಡನೆ ಇರಬಲ್ಲೆಯಾ?
ಹೇಳು ಸಾಕು...

ನೀ ಹೇಳುವ ಮಾತು ಸತ್ಯವಾ?
ಸುಳ್ಳಾ?-ನನಗೆ ಬೇಕಿಲ್ಲ...
ನೀನು ನಿನ್ನಾತ್ಮವನ್ನು ವಂಚಿಸಿ
ನಿನ್ನದಲ್ಲದ ರೂಪ ತಾಳುವುದಿಲ್ಲ ತಾನೇ ಹೇಳು,ಸಾಕು...

ಎಲ್ಲ ದಿನಗಳೂ ನಮ್ಮವೇ ಆಗಿರಲಿಕ್ಕಿಲ್ಲ
ಎಲ್ಲ ಗೆಲುವೂ ಸದಾ ಜೊತೆಗಿರಲಿಕ್ಕಿಲ್ಲ
ಈ ಎಲ್ಲ ಜಯಾಪಜಯಗಳ ಮೀರಿ
ನನ್ನೊಡನಿರಬಲ್ಲೆಯಾ? 
ಹೇಳು,ಸಾಕು...

ಕೆಲವೊಮ್ಮೆ ಏಕಾಕಿಯಾಗಿಯೂ
ಖುಶಿಯಿಂದಿರಬಲ್ಲೆಯಾ?
'ಶೂನ್ಯಗಳಿಗೆ'-ಗಳಲ್ಲೂ ನಿನ್ನನ್ನು
ನೀನು ಸಂಭಾಳಿಸಬಲ್ಲೆಯಾ?
ಹೇಳು ಸಾಕು...


ಮಾನವನಿಗೆ ಜೀವನದಲ್ಲಿ ದೇವರು ದಯಪಾಲಿಸಿದ ದೊಡ್ಡ ವರಗಳೆಂದರೆ ಒಂದು ಮನೋಸ್ಥೈರ್ಯ, ಇನ್ನೊಂದು ಮರೆವು. 

ಜೀವನವೆಂಬ ಈ ಸಾಗರದಲ್ಲಿ ಅನಿರೀಕ್ಷಿತ ಆಘಾತಗಳ ಮಧ್ಯೆ ಮನೋಸ್ಥೈರ್ಯದಿಂದ ದಡ ಮುಟ್ಟಬೇಕೆನ್ನುವವರಿಗೆ ನೀವು ದಾರಿ ದೀಪ. ನಿಮ್ಮ ಅನುಭವ ಆಲಿಸಿದರೆ
ಉರ್ದು ಸಾಹಿತ್ಯ ಎರಡು ಆಶಾವಾದಿ ಶಾಯಿರಿಗಳು ನೆನಪಾಗುತ್ತವೆ. 

"गम की अंधॆरी रात मे, 
दिल बॆकरार न कर,
सुबह जरूर आयेगी,
सुबह का इंतजार कर ।"

"कल का दिन किसने देखा है, 
आज का दिन हम खोये क्यों?|
मौत आयी तो मर भी लेंगे,
मौत से पहले मरना क्यॊं ?|"

  ಹಬ್ಬ- ಅಂದ್ರsss...      'ಹಬ್ಬ' - ಅಂದ್ರ ವಾರದಿಂದ ನಮ್ಮದು ಲೆಕ್ಕಾಚಾರ...ಅಡುಗೆ ಏನು ಮಾಡ ಬಹುದು? ಯಾರರ ಊರಿಂದ ಬರಬಹುದಾ? ಹೊಸ ಅಂಗಿ ದಕ್ಕಬಹು ದಾ?ಸಾಲಿ...