ನೂರು ಮೈಲುಗಳ ಮೂರು ಹೆಜ್ಜೆಗಳು.
ನಾವು ಈಗಿದ್ದ ಮನೆಗೆ ಬಂದು ಸರಿಯಾಗಿ ನಾಲ್ಕು ವರ್ಷಗಳು...ಮೊದಲಿದ್ದ ಮನೆ ಇಲ್ಲಿಂದ ಅರ್ಧ ಮೈಲು ಅಂತರದಲ್ಲಿದ್ದರೂ ಈ ಕಾಲನಿ ನೋಡಿರಲಿಲ್ಲ.
ಹೀಗಾಗಿ ಗೆಳತಿಯರೂ ಇರಲಿಲ್ಲ..ತಿಂಗಳೊಪ್ಪತ್ತಿನಲ್ಲಿ ಅನೇಕರು ಪರಿಚಯವಾದರೂ ಸ್ನೇಹದ ವಲಯ ಹೊಕ್ಕವರು ಒಬ್ಬಿಬ್ಬರು..ಸಮಾನ ಆಸಕ್ತಿ,ಸಮಾನ ಅಭಿರುಚಿಯ ಒಬ್ಬರು ಬಹುಬೇಗನೇ ಆಪ್ತರಾದರು..ಅವರ ಹೆಸರು ಸುಪ್ರಿಯಾ ಭಗಾಡೆ. ಮಹಾರಾಷ್ಟ್ರದ ನಾಗಪುರದವರು..ಪರಿಚಯವಾದುದೂ ವಿಶೇಷ ಕಾರಣಕ್ಕಾಗಿಯೇ..ಹಿರಿಯ ನಾಗರಿಕರಾದ ಅವರು ತುಂಬಾ ಕ್ರಿಯಾಶೀಲರು..ಅನೇಕ ವಿಷಯಗಳ ಮೇಲೆ ಆಸಕ್ತಿಯಿದ್ದವರು.ಕರ್ನಾಟಕದಲ್ಲಿದ್ದ ಮೇಲೆ ಕನ್ನಡ ಕಲಿಯುವದು ಕಡ್ಡಾಯವಾಗಿರಬೇಕು ಎಂಬ ನಿಲುವಿನವರು...ಅಂತೆಯೇ ಕೆಲವರು ಕೂಡಿಕೊಂಡು ಕನ್ನಡದ ಸ್ವಾಧ್ಯಾಯ ನಡೆಸಿದ್ದರು..ಅವರಿಗೊಬ್ಬ guide ನ ಅವಶ್ಯಕತೆಯಿತ್ತು...ತಪ್ಪು ಸರಿಗಳ ತುಲನಾತ್ಮಕ ಅಭ್ಯಾಸಕ್ಕಾಗಿ..ನಾನು ಅಚ್ಚಕನ್ನಡದವಳೆಂದು ಗೊತ್ತಾಗುತ್ತಲೇ ನನ್ನ ಬಳಿ ಬಂದರು...ಅನೇಕರಿಗೆ ಚನ್ನಾಗಿ ಕನ್ನಡ ಬರುತ್ತಿದ್ದರೂ ಅವರಿಗೆ ತಿಳಿಸಲು ಹಿಂದಿ / ಇಂಗ್ಲಿಷಿನ ಸಂವಹನದ ಅವಶ್ಯಕತೆಯೂ ಅನಿವಾರ್ಯವಾಗಿ ನನ್ನ ವರೆಗೆ ಬರಬೇಕಾಯಿತು...ನಾನು ಆನಂದದಿಂದ ಒಪ್ಪಿಕೊಂಡೆ. ಕಲಿಕೆಯ ಜೊತೆಜೊತೆಗೆ ಅನುವಾದ ,ಅರ್ಥ ವಿವರಣೆ ಕೂಡ ನಡೆಯುತ್ತಿತ್ತು.ಅತೀ ವ ಮನಸ್ಸಿಟ್ಟು, ಕೊಂಚವೂ ಬೇಸರವಿಲ್ಲದೇ ಕಲಿತ ಪರಿಣಾಮ ಅವರು ಕನ್ನಡ ಪುಸ್ತಕಗಳನ್ನು ಓದುತ್ತಿದ್ದಾರೆ...ನಾನು ಅಪ್ಪಿ ತಪ್ಪಿ ಹಿಂದಿಯಲ್ಲಿ ಮಾತಾಡಿದರೂ ಅವರು ಕನ್ನಡದಲ್ಲಿಯೇ ಉತ್ತರಿಸುತ್ತಾರೆ..ಓದಿನಲ್ಲಿ / ಅರ್ಥೈಸುವದರಲ್ಲಿ ತೊಂದರೆ ಬಂದರೆ ಒಂದು ಅದರದೇ list ಮಾಡಿಕೊಂಡು ವೇಳೆ ನಿಗದಿ ಪಡಿಸಿಕೊಂಡು ಬರುತ್ತಾರೆ..ಅವರ ಬಳಿ ಸದಾ ಒಂದು note pad/ ಪೆನ್ನು ಸಿದ್ಧವಿರುತ್ತದೆ.ನನ್ನಿಂದೀ ವರೆಗೆ ಕೇಳದ ಪದ ಪ್ರಯೋಗ ವಾದರೆ ತಟ್ಟನೇ ಅದು note pad ನಲ್ಲಿ ದಾಖಲಾಗುತ್ತದೆ.
ಇವರು ನನ್ನ ಮೊದಲ students ಗಳೇನೂ ಅಲ್ಲ..ಮೊದಲ ಕಾಲನಿಯಲ್ಲೂ ನಾಲ್ಕಾರು ಜನ ತಾಯಂದಿರು ಬರುತ್ತಿದ್ದರು.ಆದರೆ ಅವರ ಗಮನ ತಾವು ಒಂದು ಹೊಸ ಭಾಷೆ ಕಲಿಯುವದಕ್ಕಿಂತಲೂ ಕನ್ನಡ ಆಯ್ದುಕೊಂಡ ತಮ್ಮ ಮಕ್ಕಳ Homework ಗಾಗಿ ಬರುತ್ತಿದ್ದರು..ನಾನೆಂದೂ ಯಾರಿಂದಲೂ ಒಂದು ಪೈಸೆ ತೆಗೆದುಕೊಳ್ಳದ ಕಾರಣ ಗೌರವದಿಂದಲೇ ಕಲಿತು ಮಕ್ಜಳ ಕನ್ಡಡ ಕಲಿಕೆ ಮುಗಿಯುತ್ತಲೇ ನಿಲ್ಲಿಸಿ ಬಿಡುತ್ತಿದ್ದರು...
ಆದರೆ ಮೇಲೆ ತಿಳಿಸಿದ ಅರವತ್ತು ಮಿಕ್ಕಿದ ಈ ಜೋಡಿ ಇತರರಿಗಿಂತ ಪೂರಶ ಭಿನ್ನ.ನೀವೀಗ ಬೆಚ್ಚಿ ಬೀಳುವ ಸುದ್ದಿ ಎಂದರೆ ಪ್ರತಿ ರಾಜ್ಯೋತ್ಸವದಂದು ಈ ದಂಪತಿ ಜೋಡಿ ಕನ್ನಡದ ಯುಗಳ ಗೀತೆ ಹಾಡುತ್ತಾರೆ..ಕನ್ನಡ channel ನೋಡುತ್ತಾರೆ, skit ಮಾಡುತ್ತಾರೆ... ಕಾಲನಿಯ NON ಕನ್ನಡಿಗರಿಗೆ ಕನ್ನಡ class ತೆಗೆದುಕೊಳ್ಳುತ್ತಾರೆ...
ಎಲ್ಲರಿಗೂ ಏನೋ ಒಂದು ಮಾಡಬೇಕೆನ್ನುವ ಆಶೆ ಇರುವದು ಅತಿ ಸಾಮಾನ್ಯ..ಆದರೆ ಅದನ್ನೇ ಒಂದು ವೃತವಾಗಿಸಿ ಸಾಧಿಸುವವರು ವಿರಳ..ಅದಕ್ಕೆ ಬೇಕಾದ ಛಲ, ಏಕಾಗ್ರತೆ, ಸಾಧಿಸಬೇಕೆಂಬ ಹಠ ಇರುವವರಿಗೆ ಅದು ಕಠಿಣವೂ ಅಲ್ಲ...ಇದರ ಅರ್ಥ ಅವರೀಗ ಕನ್ನಡದ masters ಅಂತಲ್ಲ..ಪ್ರಯತ್ನ ಜಾರಿಯಿದೆ..ಮಕ್ಕಳು ,ಮೊಮ್ಮಕ್ಕಳು,ಇನ್ನಿತರ ಚಟುವಟಿಕೆಗಳಲ್ಲಿ ವೇಳೆ ಉಳಿಸಿಕೊಂಡು ಕನ್ನಡ ಕಲಿಕೆಯನ್ನೂ ಜೀವಂತವಾಗಿ ಇಟ್ಟಿದ್ದಾರೆ
ಆದರೆ ಒಂದಿಲ್ಲ ಒಂದು ದಿನ ನಾನು ಅವರಲ್ಲಿ ಕಲಿಯಲು ಹೋಗಬೇಕೆನ್ನುವ ದಿನ ಬರುವಂತಾಗಲೀ ಎಂಬುದು ನನ್ನ ಇಚ್ಛೆ ಹಾಗೂ ಕನಸು..
Saturday, 20 April 2019
ಹಶಗೇ ಸುಮ್ಮನೇ
Subscribe to:
Post Comments (Atom)
How to treat wet cough?
🟣 How to Treat Wet Cough (Productive Cough) A wet cough is a cough that produces mucus or phlegm. It is the body’s natural way of clearing ...
-
'ಹಬ್ಬ'ಗಳೇ 'ಹುಟ್ಟಿದ ದಿನ' ಗಳಾಗುತ್ತಿದ್ದ 'ಕಾಲಮಾನ' ನಮ್ಮದು... ಒಮ್ಮೆ ಒಬ್ಬ ಹಿರಿಯ ಸಾಧಕರಿಗೆ ನೂರು ತುಂಬಿದ ಸಂದರ್ಭದಲ್ಲಿ ...
-
ಈ ಹಿಂದೆ ಎರಡು ವರ್ಷಗಳ ಕಾಲ ಕೊರೋನಾ ಹೆಸರಿನಲ್ಲಿ ಸಾರ್ವಜನಿಕರಿಗೆ ಸ್ಥಾನ ಬದ್ಧತೆಯ ಶಿಕ್ಷೆ ಯಾಗಿತ್ತು.ಅದು ಜನರನ್ನು ಎಷ್ಟು ತಟಸ್ಥರಾಗಿಸಿತ್ತೆಂದರೆ ಅದಕ...
-
ನಾನೂ ಧಾರವಾಡದಲ್ಲಿ ಅವರ ಅಷ್ಟಾವಧಾನ ಕಾರ್ಯಕ್ರಮಗಳನ್ನು ನೋಡಿದ್ದೇನೆ.ಒಂದಂತೂ ನಮ್ಮ school ನಲ್ಲೇ ಆಯೋಜಿತವಾಗಿತ್ತು. ಸಂಸ್ಕೃತದಲ್ಲಿ ನನಗೆ ಹೆಚ್ಚಿನ ಜ್ಞಾನ ವಿಲ್ಲದಿದ...
No comments:
Post a Comment