Friday, 16 September 2022

ದ್ವಂದ್ವ...

ನನಗೆ ಯಾವಾಗಲೂ ದ್ವಂದ್ವ...
ಬಯಲಾಗದೇ ಒಳಗೇ ಹುದುಗಿರಲೇ?
ಎಲ್ಲರೊಂದಿಗೆ ಮುಕ್ತವಾಗಿರಲೇ?

ಅನಿಶ್ಚಿತತೆಯ ಕಾತರತೆಯಲ್ಲಿರಲೇ?
ಅಭಯದ  ಶ್ರೀರಕ್ಷೆಯಲ್ಲಿರಲೇ?
ಸ್ವಾತಂತ್ರ್ಯಕ್ಕಾಗಿ ಹಂಬಲಿಸಲೇ?
ಬೇರುಗಳೊಂದಿಗೆ ಬೆಸೆದುಕೊಳ್ಳಲೇ?

ಪ್ರವಾಹದ ಸೆಳೆತಕ್ಕೆ ಸಿಕ್ಕು ಆಚೀಚೆ
ಸದಾ ಸ್ಥಳ ಬದಲಿಸುತ್ತಲೇ
ಇರುವ ತೆರೆಗಳಂತೆ ನಾನು...
ನಿರಂತರ ಅತ್ತಿಂದಿತ್ತ,ಇತ್ತಿಂದತ್ತ
ಹೊಯ್ದಾಡುವ ಗಡಿಯಾರದ 
ಲೋಲಕ ನಾನು...
ನಾನಾರೆಂದು ಅರಿಯಲು ಇನ್ನೆಷ್ಟು
ಸಮಯ ಕಾಯಬೇಕೋ...

No comments:

Post a Comment

        ಧಾರವಾಡದಲ್ಲಿ ಇಂದಿಗೆ ಹತ್ತು  ದಿನ ಕಳೆದವು. ಈ ಸಲ ಅದರ ಬಗ್ಗೆ ಬರೆಯಲು ತುಂಬಾನೆ ನೋವು ಹಾಗೂ ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ......