Monday, 19 September 2022

ಅಭಯಾರಣ್ಯ...

ಎಲ್ಲದರಿಂದ ದೂರದಲ್ಲಿ
ನನ್ನದೇ ಒಂದು ' ಅಭಯಾರಣ್ಯ'ದಲ್ಲಿ,
ಮುಂದೆ ಹಾಸಿರುವ ಹೊಲದ ಎದುರುಗಡೆ ಪುಟ್ಟ''ಗೂಡ"ನೊಂದ ಮಾಡಿಕೊಂಡಿದ್ದೇನೆ...

ನಕ್ಷತ್ರಪುಂಜಿತ ರಾತ್ರಿಯಲ್ಲಿ, ವರ್ಣಮಯ ಆಗಸದ ಕೆಳಗೆ, 
ನನ್ನ ಕೋಣೆಯಲ್ಲಿಯೇ
ಕೆಂಪು ಗುಲಾಬಿಗಳು ಅರಳುತ್ತವೆ...
ಚಂದ್ರನ ಶೀತಲ ಕಿರಣಗಳ ಹೊದ್ದು ಮಲಗಿದ ನನ್ನ ಮೇಲ್ಗಡೆ ಅಗಣಿತ ತಾರಾಗಣ ಹೊಳೆಯುತ್ತವೆ...

ಅರುಣೋದಯವಾಯಿತೋ,
ಹಾಡು ಹಕ್ಕಿಗಳ  ಸವಿಗಾನ...
ನಸುಕಿನ ಮಂದಗಾಳಿಯ ಜೊತೆಗೆ ಸೂರ್ಯ ರಶ್ಮಿಗಳ ಸ್ನಾನ...
ಮೇಲೆ ಅದರಕ್ಕರೆಯಲಿ ಮಿಂದೆದ್ದ ಬಂಗಾರದೆಲೆಗಳ ಜೋಕಾಲಿ...
ಸುತ್ತ ಗಿಡಮರಗಳ ಹೃದಯಗಾನದಲಿ.

ಕೆಳಗೆ ಭೂಮಿತಾಯ ಮಡಿಲಲ್ಲಿ ನಾನು.

ಇಂಥ ಗಳಿಗೆಗಳು ನನಗೆ 
ಅವನಿತ್ತ  ದೈವೀ ಪ್ರಸಾದ,
ಕಳೆಯಬಹುದಾದ ಬೇರೆ ಏನೆಲ್ಲ ದಾರಿಗಳಿದ್ದರೂ ಇದೇ ನನಗೆ 
ಅವನಿಂದ ದೊರೆತ ಹಸಾದ...

No comments:

Post a Comment

ಹದಿಹರಯದಲ್ಲಿ ಕಾಲೇಜು ದಿನಗಳಲ್ಲಿ 'ದೂರ ಸರಿದರು' ಕಾದಂಬರಿಯಿಂದ ಪ್ರಾರಂಭವಾದ ಭೈರಪ್ಪನವರ ಪುಸ್ತಕಗಳ ಓದು, ಮೊನ್ನೆ ಮೊನ್ನೆಯವರೆಗೆ ಅಂದರೆ ಕಣ್ಣುಗಳು ತೊಂದರೆ ಕ...