Saturday, 17 September 2022


"ಹೀಗಾಗಬಾರದಿತ್ತು,"
"ನಿಮಗಾದ ನಷ್ಟಕ್ಕೆ ಖೇದವಿದೆ..."
"ಮನಸ್ಸು ಗಟ್ಟಿಮಾಡಿಕೊಳ್ಳಿ-
 ಬೇರೆ ದಾರಿಯೇನಿದೆ?..."

"ಎಲ್ಲರೂ ಒಂದಿಲ್ಲ ಒಂದುದಿನ   ಹೋಗಲೇಬೇಕು..."
'ಸಾವು ಕೊನೆಯಲ್ಲ,ಆರಂಭ'- 
ಎಂಬುದನರಿಯಲೇಬೇಕು...

"ಮೊದಲೇ ಹೋದ-
'ಅಲ್ಲಿ'ಯ ನಂಟರನ್ನು ಸೇರುತ್ತಾರೆ"...
ನಾವಲ್ಲಿ ಹೋದಾಗ ತೆರೆದ ಬಾಹುಗಳಿಂದ ಸ್ವಾಗತಿಸುತ್ತಾರೆ..."

ಅವರಾಡಿದ ಪ್ರತಿ ಪದದಲ್ಲೂ ಪ್ರೀತಿಯಿದೆ ನನಗೆ ಗೊತ್ತು...
ಪ್ರತಿಮಾತೂ ಹೃದಯದಾಳದಿಂದ
ಬಂದದ್ದು , ಅದೂ ಗೊತ್ತು...

ಆದರೆ ಆ ಎಲ್ಲ'ಮಾತುಗಳ'-
'ಪ್ರೀತಿಯ' ಒಟ್ಟು ಮೊತ್ತ'ವೂ ಸಹ
ನಿನ್ನಿಂದಾದ ಶೂನ್ಯವನ್ನು
ಎಳ್ಳಷ್ಟೂ ತುಂಬಲಾರದೆಂಬುದು-
ನನಗೆ ಮಾತ್ರ-ವೇ ಗೊತ್ತು...

No comments:

Post a Comment

        ಧಾರವಾಡದಲ್ಲಿ ಇಂದಿಗೆ ಹತ್ತು  ದಿನ ಕಳೆದವು. ಈ ಸಲ ಅದರ ಬಗ್ಗೆ ಬರೆಯಲು ತುಂಬಾನೆ ನೋವು ಹಾಗೂ ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ......