Wednesday, 7 September 2022


ಅಭಯ...

ಒಂದು ಮಾತು 
ಸದಾ ನೆನಪಿಡು...
ನಾನು ಯಾವಾಗಲೂ
ನಿನ್ನೊಡನೆಯೇ ಇರುವೆ...
ಎಂದಿಗೂ ನಾ
ಮೈಮರೆಯುವದಿಲ್ಲ...

ಬೀಸುವ ಗಾಳಿಯ 
ಪ್ರತಿ ಉಸುರಿನಲ್ಲೂ
ನಾನಿರುವೆ...
ಹಿಮರಾಶಿಯ
ನೆತ್ತಿಯಮೇಲಿನ
ಮಿಂಚು- ಮಣಿಗಳಲ್ಲಿ
ನಾನಿರುವೆ...

ಮಾಗಿದ ತೆನೆಗಳ  
ಹೊನ್ನ ಬೆಳಕಿನಲಿ 
ನಾನಿರುವೆ...
ಮಾಗಿಯ ಕಾಲದ 
ತುಂತುರು ಹನಿಗಳಲ್ಲಿ 
ನಾನಿರುವೆ...

ನಸುಕಿನ ನೀರವದಲಿ  
ನಿನ್ನ ಚೇತನವಾಗಿ 
ನಾನಿರುವೆ...
ಕತ್ತಲ ರಾತ್ರಿಯ
ನಕ್ಷತ್ರಗಳ ಮಿಣುಕಿನಲಿ
ನಾನಿರುವೆ...

ನಾನಿಲ್ಲ ಎಂದು 
ಹೇಳಿದವರಾರು?
ಪ್ರತಿ ದಿನದ
ಹೊಸಬೆಳಕಿನಲ್ಲೂ
ನಿನ್ನೊಡನೆ
ನಾನಿರುವೆ...

No comments:

Post a Comment

      ಅಣ್ಣನ post graduation ಮುಗಿದು, ನೌಕರಿ ಸಿಕ್ಕು ಧಾರವಾಡದಲ್ಲಿ ಮನೆಮಾಡಿ, ನಾವು ಧಾರವಾಡಕ್ಕೆ ಬಂದದ್ದು ೧೯೬೫ರಲ್ಲಿ...ನಾವಿದ್ದ ಮನೆ  ಹತ್ತು ಕೋಣೆಗಳ ಬಹು ದೊಡ್...