Sunday, 11 September 2022

ನಾನು ಏನು ಧರಿಸಬೇಕು?
ಹೇಗೆ ಕಾಣಿಸಿಕೊಳ್ಳಬೇಕು?
-ಹೇಳಿದ್ದೇ ಹೇಳಿದ್ದು...
ಮಾತು ಪಾಲಿಸಿದೆ, ಸರಿಹೋಗಲಿಲ್ಲ...
ಬೇರೆ ಯಾರೋ ಹೇಳಿದ ರೀತಿ,ನೀತಿ
ನನಗೆ ಒಗ್ಗಲೇಯಿಲ್ಲ...
ನನಗೆ ಭಿನ್ನವಾದದ್ದೇನೋ ಮಾಡುವಾಸೆ,
ಅಪಾಯ ಎದುರಿಸುವ ಭಯ ನನಗೆಂದಿಗೂ ಇಲ್ಲ, ನೋವುಂಡಿದ್ದೇನೆ- ನಿಜ, ಆದರೆ ಪ್ರೀತಿ ಗಳಿಸಲು
ತೆರಬೇಕಾದ ಯಾವೊಂದೂ ಬೆಲೆಯೂ ನನಗೆ ಲೆಕ್ಕವಿಲ್ಲ...ನೀವು ಒಪ್ಪಿ/ ಬಿಡಿ, ಅದು ನನ್ನ ಆಯ್ಕೆ,ಅದರಲ್ಲಿ ಸಂದೇಹವಿಲ್ಲ...
ಅದಕ್ಕಾಗಿ ನಿದ್ರೆಯಿಲ್ಲದ
ರಾತ್ರಿಗಳನ್ನು ಕಳೆದಿದ್ದೇನೆ, 
ರಾತ್ರಿಯಿಡೀ ಮಗ್ಗಲು ಬದಲಾಯಿಸಿದ್ದೇನೆ.
ಹತಾಶಳಾದ ಮಾತ್ರಕ್ಕೆ ಬದುಕುವದನ್ನು,
ಪ್ರೀತಿಸುವದನ್ನು ಬಿಟ್ಟು ಬಿಡುವಷ್ಟು ಮೂರ್ಖಳಲ್ಲ ನಾನು...
ತಪ್ಪುಗಳಿಂದ ಕಲಿತಿದ್ದೇನೆ, 
ನನ್ನ ಸುತ್ತಲೊಂದು ಎತ್ತರದ ಗೋಡೆ ಕಟ್ಟಿಕೊಂಡಿದ್ದೇನೆ...
ಬದಲಾಗಲೇಬೇಕೆಂಬ 
ಯೋಚನೆಯಿಲ್ಲ ನನಗೆ,
ಬಣ್ಣಬಣ್ಣದ ಮಾತುಗಳ,
ಸಲ್ಲದ ಕನಸುಗಳ ಹಂಬಲವಿಲ್ಲ...
ನನಗೆ ಬೇಕಾದ್ದು ನಿಜವಾದ ಪ್ರೀತಿ, ಆರ್ದ್ರ ಭಾವನೆಗಳು,ಆತ್ಮೀಯ ನೆಲೆಯಲ್ಲಿ ಸಿಗುವ ನಿಜವಾದ ಸಂಬಂಧಗಳು...
ಜಗತ್ತು ನನ್ನ ಬಗ್ಗೆ ಏನೇ ಹೇಳಲಿ, ನನ್ನನ್ನು ಒಪ್ಪಿಕೊಳ್ಳಲಿ, ಬಿಡಲಿ,
ನಾನು ಲೆಕ್ಕಿಸುವದಿಲ್ಲ,
ನನ್ನ ಒಲವು,ನಿಲುವು,ಬಲವು ಏನೆಂದು ನನಗೆ ಚನ್ನಾಗಿ ಗೊತ್ತು...
ನಾನು ದಿನದಿನ‌ಕ್ಕೆ ಉಳಿಯಬೇಕು, ಬೆಳೆಯಬೇಕು,ನಲಿಯಬೇಕು.
ಅದನ್ನು ಇಂದೇ ಈಗಲೇ ಆರಂಭಿಸಬೇಕು...
ನನಗೆ ಗೊತ್ತು, 
ಇಂದಿಲ್ಲ ಎಂದಾದರೆ ಮುಂದೆಂದೂ ಇಲ್ಲ...

No comments:

Post a Comment

ಹದಿಹರಯದಲ್ಲಿ ಕಾಲೇಜು ದಿನಗಳಲ್ಲಿ 'ದೂರ ಸರಿದರು' ಕಾದಂಬರಿಯಿಂದ ಪ್ರಾರಂಭವಾದ ಭೈರಪ್ಪನವರ ಪುಸ್ತಕಗಳ ಓದು, ಮೊನ್ನೆ ಮೊನ್ನೆಯವರೆಗೆ ಅಂದರೆ ಕಣ್ಣುಗಳು ತೊಂದರೆ ಕ...