Monday, 24 April 2023

       ಅದು ೧೯೯೬ ನೇ ಇಸ್ವಿ.ಮಗನ ಇಂಜಿನಿಯರಿಂಗ್ ಮುಗಿದು ಬೆಂಗಳೂರಿನಲ್ಲಿ ಕೆಲಸ‌ ಮಾಡತೊಡಗಿ
ಎರಡೇ ವರ್ಷಗಳಾಗಿದ್ದವು.ಹೆಚ್ಚಿನ ಓದಿಗೋ/ ನೌಕರಿಗೋ ಪಶ್ಚಿಮಾಭಿ ಮುಖಿಗಳಾಗುವ trend ನಿಧಾನವಾಗಿ ಶುರುವಾಗಿತ್ತು.ಮಗನ ಪರಮಾಪ್ತ ಗೆಳೆಯನೊಬ್ಬ MS ಗೆಂದು ಹೊರಟು ನಿಂತಾಗ ನನ್ನ ಮಗನಲ್ಲೂ ಆಶೆಯ
ಬೀಜಾಂಕುರವಾಗಿರಬೇಕು.ಹನ್ನೆರಡನೇ ವರ್ಷಕ್ಕೇನೇ ಅಪ್ಪನನ್ನು ಕಳೆದು ಕೊಂಡದ್ದಕ್ಕೋ ಏನೋ ಅವನೆಂದೂ
ಹುಡುಗನೆಂಬ ಲೆಕ್ಕಕ್ಕೆ ಬರದೇನೇ ಪ್ರೌಢನಾಗಿದ್ದ. ವಯಸ್ಸು ಮೀರಿ matured.ತಾನು ಹೋದರೆ ನಾನು ಒಬ್ಬಳೇ ಆಗುತ್ತೇನೆಂದೋ/ ತಯಾರಿ ಮುಗಿದು ಹೊರಡುವವರೆಗೆ ವಿಷಯ ಪ್ರಸ್ತಾಪಿಸುವದೇ ಬೇಡವೆಂದೋ ಮೊದಲ ಹಂತದಲ್ಲಿ ಏನನ್ನೂ ಹೇಳಿರಲಿಲ್ಲ.ಯಾರ ಸಹಾಯ ಪಡೆ ದನೋ / ಎಲ್ಲಿಂದ ಸಾಲದ ವ್ಯವಸ್ಥೆ ಮಾಡಿಕೊಂಡನೋ / ಯಾರು ಅವನಿಗೆ guide ಮಾಡಿದರೋ ನನಗೆ
ಇಂದಿಗೂ ಗೊತ್ತಿಲ್ಲ.ಅವನ ಉದ್ದೇಶ ನೇರವಾಗಿದ್ದರಿಂದ ಬಹುಶಃ ಎಲ್ಲವೂ
ಸುಸೂತ್ರವಾಗಿ ಒಂದು ಹಂತಕ್ಕೆ ಬಂದಮೇಲೆಯೇ ನನ್ನ ಮುಂದೆ ಬಾಯಿಬಿಟ್ಟ...
          ‌        ನನಗೂ ಮಕ್ಕಳು ಆದಷ್ಟು
ಬೆಳೆಯಲಿ ಎಂಬ ಇಚ್ಛೆ ಇದ್ದರೂ ಅಂಥದೊಂದು ಕನಸು ಸಾಕುವಷ್ಟು ನಾನು ಧನಿಕಳಾಗಿರಲಿಲ್ಲ."ನನಗೆ ನಿನ್ನ ಒಪ್ಪಿಗೆಯೊಂದನ್ನು ಬಿಟ್ಟು ಬೇರೇನೂ ಬೇಡ" ಎಂದು ಅನುಮಾನಿಸುತ್ತಲೇ ಮಗ ಬೇಡಿಕೊಂಡಾಗ ಬೇಡವೆನ್ನುವ 
ಯಾವ ನೈತಿಕ ಹಕ್ಕೂ ನನಗಿರಲಿಲ್ಲ.
            " ಅಲ್ಲಿ ಯಾರಿಗೆ ಯಾರೂ ಇರುವದಿಲ್ಲ.train ನಲ್ಲಿ ಲೂಟಿ ಮಾಡುತ್ತಾರೆ/ ಯಾರೋ ಇನ್ಯಾರನ್ನೋ
ಕಾರಣವಿಲ್ಲದೇ shoot ಮಾಡುತ್ತಾರೆ,
ಇದ್ದೊಬ್ಬ ಮಗನನ್ನು ದೂರ ಕಳಿಸಿ
ನಂತರ ಹಲುಬಬೇಡ-" ಎಂಬ ಬಿಟ್ಟಿ ಉಪದೇಶಗಳು ಬೇರೆ...ನಾನು /  ಮಕ್ಕಳು ತಮ್ಮ ನಂತರ ಯಾವ ಕಾರಣಕ್ಕೂ ನೋವು ಅನುಭವಿಸದೇ
ಇರಲಿ ಎಂದೇ ನನ್ನ ಮೂವತ್ಮೂರನೇ
ವರ್ಷಕ್ಕೆ, ಮೂರು ಮಕ್ಕಳನ್ನು ತಾವೇ ನೋಡಿಕೊಂಡು BEd ಮಾಡಿಸಿ ನೌಕರಿಗೆ ಹಚ್ಚಿದ ನೆನಪಾಗಿ ನಾನು ಮೌನವಾಗಿಯೇ ಸಮ್ಮತಿಸಿದೆ.
                  ಆ ಮಾತಿಗೀಗ ಮತ್ತೆ ಇಪ್ಪತ್ತಾರು ವರುಷ.ಅವನ ಮಗ/ಅಂದರೆ ನನ್ನ ಮೊಮ್ಮಗ ತೇಜಸ್ Boston ನ UMass Amherst ವಿಶ್ವವಿದ್ಯಾಲಯದಿಂದ ಪದವಿ ಪಡೆದು ಇದೇ ಇಪ್ಪತೈದನೇ ತಾರೀಕು graduation  day ದ ಸಂಭ್ರಮ ದಲ್ಲಿದ್ದಾನೆ.ನನ್ನ Visa expire ಆದ್ದರಿಂದ/ ಹೊಸ ವೀಸಾಗಳ ನಿಬಂಧನೆಗಳಿಂದಾಗಿ ನಮಗಾರಿಗೂ ಹೋಗಲಾಗುತ್ತಿಲ್ಲ.
                ನಿನ್ನೆ ವಿಷಯ ತಿಳಿಸಲು ಮಗ ಫೋನ್ ಮಾಡಿದಾಗ ಇದೆಲ್ಲ ನೆನಪಿನ ಸುರುಳಿ ಬಿಚ್ಚಿ ಕೊಂಡಿತು. ಕೇವಲ ಎರಡೂವರೆ ದಶಕಗಳಲ್ಲಿ
ಜಗತ್ತು ಬದಲಾದ ಪರಿಯೊಂದು ವಿಸ್ಮಯ...ಅವನನ್ನು ಕಳಿಸಲು ಮೌನ
ವಾಗಿ ರೋಧಿಸಿದ ನಾನೇ -ಒಂದು ಕಡಿಮೆ  ಹತ್ತು ದೇಶ- ಗಳನ್ನು (ಒಂಬತ್ತು) ಸುತ್ತಿದ್ದೇನೆ. ಮಗನ ಹತ್ತೊಂಬತ್ತು cousins ಗಳಲ್ಲಿ ಕೇವಲ‌ ಆರು ಜನರನ್ನು ಬಿಟ್ಟು ಎಲ್ಲರೂ ವಿಶ್ವದ
ಉದ್ದಗಲಗಳನ್ನು ಅಳೆಯುತ್ತಿದ್ದಾರೆ.  
ವರ್ಷಕ್ಕೊಮ್ಮೆ ಅವರು/ ಅನಿವಾರ್ಯ ವಾದಾಗ ನಾವೆಲ್ಲರೂ ಹೋಗಿ ಬರುವದು ಸದಾ ಜಾರಿಯಲ್ಲಿದ್ದುದ ರಿಂದ ಪರದೇಶಗಳು ನಡುಮನೆ/ ಪಡಸಾಲೆ ಎಂಬಂತಾಗಿವೆ.ಆಗಿನಂತೆ ಯಾವುದೋ ಮೂಲೆಯಲ್ಲಿಯ  ಬೂತ್ ಒಂದರಲ್ಲಿ trunk call ಬುಕ್ ಮಾಡಿ/ ಒಂದು call, ಹತ್ತು ಸಲ cut
ಆಗಿ ಗೋಳಾಡುವ ದೌರ್ಭಾಗ್ಯ ಈಗಿಲ್ಲ.vedio call ಮಾಡಿದರೆ ಎದುರಾ ಎದುರೇ ಬೇಕೆನಿಸುವಷ್ಟು ಕಾಲ ಮಾತಾಡಬಹುದು.
          ‌‌ಅಷ್ಟಲ್ಲದೇ ಹೇಳುತ್ತಾರೆಯೇ? "ಪ್ರತಿಯೊಂದು ಮಹಾಯಾನವೂ 
ಮೊದಲ ಕೆಲ ಹೆಜ್ಜೆಗಳಿಂದಲೇ ಸುರುವಾಗುವದು"- ಎಂದು...
    


                  

Friday, 21 April 2023

 ಹೀಗೊಂದು ಸಿನೆಮಾ ಶೂಟಿಂಗ್ ಕಥೆ .         
  ‌‌‌‌          ೧೯೭೦-೮೦ ರ ದಶಕ. ನಮ್ಮನೆಯಲ್ಲೊಂದು ಸಿನೆಮಾ ಶೂಟಿಂಗ್ ಆಗಿತ್ತು.ಹೆಸರು ' ಕಿತಾಪತಿ'.
ಗಿರೀಶ ಕಾರ್ನಾಡ್/ ವೈಜಯಂತಿ ಕಾಶಿ/ ಡಾ, ಗೋವಿಂದ ಮಣ್ಣೂರ್/ ಶಫಿ ಇನಾಮದಾರ್ ಮುಂತಾದವರು ಪಾತ್ರವರ್ಗದಲ್ಲಿ. ಸಂಪೂರ್ಣ ಕಥೆ ನೆನಪಿಲ್ಲ.ಅದರ ಬಹುಭಾಗ ಒಂದು ಚಾಳ್ನಲ್ಲಿ ಚಿತ್ರೀಕರಣವಾಗಬೇಕಿತ್ತು.
ನಮ್ಮದು ಅಂಥದೇ ಒಂದು ಚಾಳಿದ್ದು/ನನ್ನವರಿಗೆ ಅತಿಯಾದ ನಾಟಕ- ಸಿನೆಮಾದ ಹುಚ್ಚು ಇದ್ದ ಕಾರಣಕ್ಕಾಗಿ ಅದೇ ಆರು ಮನೆಗಳುಳ್ಳ ಚಾಳು ಚಿತ್ರೀಕರಣಕ್ಕೆ ಆಯ್ಕೆಯಾಗಿತ್ತು. ಅದರಲ್ಲಿ ಒಂದು ಹೆರಿಗೆಯ ಹಾಗೂ ಮಗುವನ್ನು ತೊಟ್ಟಲಿಗೆ ಹಾಕುವ,
/ಹೀಗೆ ಮನೆಯ/ ಚಾಳಿನ ದೃಶ್ಯಗಳಿಗೆ ಸಂಬಂಧಿಸಿದ ದೃಶ್ಯಗಳಿಗೆ ಸುತ್ತಮುತ್ತ ಲಿನ ಹೆಣ್ಣುಮಕ್ಕಳನ್ನೇ ಆಯ್ದುಕೊಂಡು ಖರ್ಚು ಉಳಿಸುವ ಯೋಜನೆಯೂ ನಡೆದಿತ್ತು.ಅತ್ಯಂತ ಉತ್ಸಾಹಿ ಮಹಿಳೆ ಯರು ನಾಮುಂದು/ ತಾ ಮುಂದು ಎಂದು ಸ್ವಂತ ಇಚ್ಛೆಯಿಂದ ಮುಂದೆ ಬಂದವರಿಗೆ ಅವಕಾಶ‌ ಸಿಗುತ್ತಿತ್ತು.ನಮ್ಮ ಚಿಕ್ಕಮ್ಮ ಹುರುಪಿನ ಗಣಿ, ಅವಳದು ತೀರದ ಉತ್ಸಾಹ. ಎಲ್ಲಕ್ಕಿಂತಲೂ ಹೆಚ್ಚಾಗಿ ಸಹೃದಯಿ.ಅವಳೂ ಅದರ ಕೆಲ ದೃಶ್ಯಗಳಲ್ಲಿ ಭಾಗವಹಿಸಿ ಶೂಟಿಂಗ್ ಸಮೃದ್ಧಗೊಳಿಸಿದಳು. ನಾನು ,ನನ್ನ ಇಬ್ಬರು ಹೆಣ್ಮಕ್ಕಳು, ನನ್ನ ಯಜಮಾನರು ಎಲ್ಲರೂ ಇದ್ದುದು
ಅವಳಿಗೆ ಧೈರ್ಯ ಕೊಟ್ಟಿತ್ತು.ಅದು ಹೇಗೋ ಈ ಸುದ್ದಿ ನನ್ನ ಮೌಶಿಯ ಗಂಡನಿಗೆ ತಿಳಿದದ್ದೇ ತಡ, ಮನೆಯಲ್ಲಿ
ವಾದ, ವಿವಾದ, ಗಲಾಟೆ, ಕೂಗಾಟಗಳು ಸುರುವಾದವು.ದೃಶ್ಯಗಳು ತೊಟ್ಟಿಲ ಸಮಾರಂಭಕ್ಕೆ ಸಂಬಂಧಿಸಿದ್ದು ಅವಳ ಜೊತೆ ಹತ್ತಾರು ಹೆಣ್ಣುಮಕ್ಕಳು ಭಾಗವಹಿಸಿದ್ದರು.ಅದೊಂದು ತೊಟ್ಟಿಲು ಹಾಗೂ ಮಗುವಿನ ನಾಮಕರಣದ ದೃಶ್ಯ ಮಾತ್ರ. ಬಿಡಿಯಾಗಿ ನೋಡಿದರೆ ಸಿನೆಮಾಕ್ಕೆ
ಸಂಬಂಧಿಸಿದ್ದು ಎಂದು ಆಣೆ ಮಾಡಿ ಹೇಳಬೇಕು.ಇದೆಲ್ಲ ಬಿಡಿಸಿ ಹೇಳಿದರೂ
ನಮ್ಮ ಕಾಕಾ convince ಆಗಲೇಯಿಲ್ಲ
ಯಾರೋ ಅವರಿಗೆ ಸಿನೇಮಾ poster
ಗಳನ್ನು ಕಸದ ತೊಟ್ಟಿಯ ಮೇಲೆ/ ಅಲ್ಲಲ್ಲಿ ಗೋಡೆಗಳ ಮೇಲೆ/ಸಾರ್ವಜನಿಕ ಶೌಚಾಲಯಗಳ ಮೇಲೆ/ magazines ಪುಟಗಳಲ್ಲಿ ಹಾಕುತ್ತಾರೆ
ಎಂದು ಹೇಳಿಬಿಟ್ಟಿದ್ದರು.ಶೂಟಿಂಗನ್ನೂ
ನೋಡದ ಅವರಿಗೆ ಏನೇನೋ ಊಹೆಗಳಿಂದ ಮನೆತನದ ಮರ್ಯಾದೆ ಹರಾಜಿಗೆ ಬಿದ್ದಷ್ಟೇ ಆಘಾತ. ಕೊನೆಗೆ ನಮ್ಮನೆಯವರು " posters ಎಲ್ಲರವೂ ಮಾಡುವದಿಲ್ಲ, ಮುಖ್ಯ ದೃಶ್ಯಗಳದ್ದು ಮಾತ್ರ ಮಾಡುತ್ತಾರೆ, ನಾವು ಮಾಡಿದ ದೃಶ್ಯಕ್ಕೆ Publicity ಬೇಕಿಲ್ಲ ,ಅದು ಅಂಥ ಮುಖ್ಯ ಸೀನಲ್ಲ ಎಂದೆಲ್ಲ ಒಂದು ತಾಸು ತಿಳಿ ಹೇಳಿ,
" ಹಾಗೇನೇ ಅದರೂ ನಾನೇ ಜವಾಬ್ದಾರ "- ಎಂದು ಹೇಳಿದ ಮೇಲೆ ಮಳೆಯ ಹನಿಗಳು ನಿಂತವು.ಆದರೆ ಮರದ ಹನಿಗಳು ಮಾತ್ರ ಎಷ್ಟೋ ದಿನಗಳವರೆಗೆ ನಿಲ್ಲಲಿಲ್ಲ.ಆಗಾಗ‌ ಸಿಡಿಯುತ್ತಲೇ ಇದ್ದವು...

                ಇದು ಆಗಿನ ಕಾಲದ ಜನರ ಬದುಕಿನ ರೀತಿ.ವೃತ್ತಿ ರಂಗಭೂಮಿ/ ಹವ್ಯಾಸಿ ರಂಗಭೂಮಿ / ಅಭಿನಯಾ ಸಕ್ತರನ್ನು ಹೊರತು ಪಡಿಸಿ ಸಮಾಜದ ಉಳಿದವರು ಸುಲಭವಾಗಿ ಸಾಮಾಜಿಕ Scrutiny ಗೆ ಸಿಕ್ಕು ಒದ್ದಾಡುತ್ತಿದ್ದರು. ಅದೇ ಈಗ‌ ಎಲ್ಲರಿಗೂ ವ್ಯಕ್ತಿ ಸ್ವಾತಂತ್ರ್ಯವಿದ್ದು ಎಲ್ಲರ ಆಯ್ಕೆಗಳಿಗೂ ಮುಕ್ತದ್ವಾರಗಳಿವೆ. ಇಂದಿನ ಪ್ರಸಾರ/ ಪ್ರಚಾರಗಳಲ್ಲಿ ಅದು ಸ್ಪಷ್ಟವಾಗಿ ಗೋಚರವಾಗುತ್ತದೆ. ಇಲ್ಲಿ ಯಾವುದೂ ಪ್ರಶ್ನಾರ್ಹವಲ್ಲ. ಅಷ್ಟೇ ಅಲ್ಲ, ಯಾರದೇ ಯಾವುದೇ ಕ್ರಮವನ್ನು ಬೇರೆಯವರು ಪ್ರಶ್ನಿಸಲಾರರು/ ಪ್ರಶ್ನಿಸಲಾಗದು. ನಾವೇ ಸ್ವತಃ ಸಿನೆಮಾಗಳ/ ನಾಟಕದ ಅಥವಾ ಸಾಹಿತ್ಯ ಕ್ರೇತ್ರದ ದಿಗ್ಗಜರ ಜೊತೆಯಲ್ಲಿ ನಿಂತು ಸಂಭ್ರಮಿಸುವ ಪರಿ ಯಾರಿಗೆ ಗೊತ್ತಿಲ್ಲ?ಅವರೊಂದಿಗೆ ನಿಂತುಕೊಂಡು ಫೋಟೋ ತೆಗೆಸಿಕೊಂಡು ನಾವೇ celebrities ಆದಂತೆ ಹಿಗ್ಗುವುದಿಲ್ಲ...ಎಂದೋ ಒಮ್ಮೆ ತೆಗೆಸಿಕೊಂಡ ಫೋಟೋಗಳನ್ನು
ಪದೇ  ಪದೇ ನೆಪಿಸಿಕೊಂಡು ಇಂದೇ ನಡೆದಂತೆ ಭ್ರಮೆಗೆ ಜಾರುವುದಿಲ್ಲ??
  ‌
          ಒಂದು ವಯಸ್ಸಾಗಿ ಮೊದಲಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದಾದಾಗ 
" ಕೂದಲುದುರಿದವಳು  ಹಳೆಯ  'ತುರುಬನ್ನು' ಸದಾ ನೆನೆಯುವಂತೆ 
ನೆನೆಯುವದಿಲ್ಲ!!??





       

How to treat wet cough?

🟣 How to Treat Wet Cough (Productive Cough) A wet cough is a cough that produces mucus or phlegm. It is the body’s natural way of clearing ...