Thursday, 13 October 2022

ಕೈ ಚಲ್ಲಿ ಕೂಡಬೇಡ...

ಬದುಕಿನಲ್ಲಿ ಯಾವುದೂ ನಾವಂದುಕೊಂಡಂತೆಯೇ 
ನಡೆಯಲಿಕ್ಕಿಲ್ಲ...
ನಡೆಯಬೇಕೆಂದ  ದಾರಿ 
ನೇರ/ಸುಗಮವಾಗಿರಲಿಕ್ಕಿಲ್ಲ...
' ಸಾಲ'ವಿದ್ದಷ್ಟು 'ಜಮಾಪುಂಜಿ' ಇರಲಿಕ್ಕಿಲ್ಲ...
ನಿಟ್ಟುಸಿರಿನಷ್ಟು ನಗುವೂ ಬರಲಿಕ್ಕಿಲ್ಲ,
ಆದರೂ ಕುಗ್ಗಬೇಡ...
ಬೇಕೆಂದರೆ ವಿಶ್ರಾಂತಿ ಪಡೆ...
ಮುಂದೆ ಮುಂದಕ್ಕೆ ನಡೆ...

ಬದುಕೇ ವಿಚಿತ್ರ...ಅದರಲ್ಲಿ, ಸಾಕಷ್ಟು ತಿರುವು,ಹೊರಳುಗಳಿವೆ
ಕಲಿಯಬೇಕಾದ ಪಾಠಗಳಿವೆ...
ಗೆಲುವು ಕೈಹಿಡಿಯುವದೆಂದಾಗ ಸೋಲುಗಳೆದುರಾಗುತ್ತವೆ,
ಹೆಜ್ಜೆಗಳು ನಿಧಾನವಾಗುತ್ತವೆ
ಆದರೂ
ಮುಂದೆ ಮುಂದಕ್ಕೆ ನಡೆ...

ಅನೇಕಬಾರಿ ಗುರಿ ಹತ್ತಿರವೇ ಇರುತ್ತದೆ...
ಸೋತ/ದಣಿದ ಮನಕ್ಕದು ದೂರ- ಭಾಸವಾಗುತ್ತದೆ,
ಕೈ ಚಾಚಿದರೆ ಗೆಲವು ಸಿಗುವಾಗಲೇ ಮನ ಹತಾಶವಾಗುತ್ತದೆ.
ಮಿಂಚಿ ಹೋದಮೇಲೆ ಅದರ ಅರಿವಾಗುತ್ತದೆ...
ಕಾರಣ, ನಿಲ್ಲದೇ  
ಮುಂದೆ ಮುಂದಕ್ಕೆ ನಡೆ...

'ಜಯ' ವೆಂಬುದು ಮಗ್ಗಲು 
ಮುಗುಚಿ ಹಾಕಬೇಕಿರುವ  'ಅಪಜಯ'ವಷ್ಟೇ...
ದಟ್ಟ ಮೋಡಗಳಂಚಿಗಿರುವ
' ಬೆಳ್ಳಿಯ ಗೆರೆ 'ಯಷ್ಟೇ...
ಎಷ್ಟು ಹತ್ತರವೆಂಬುದು
ಅಂದಾಜಿಸಬಹುದು...
ದೂರದಂತೆ ಕಂಡರೂ
ಕೈಯಳತೆಯಲ್ಲೇ ಇರಬಹುದು...
ಕಾರಣ, ನಿಲ್ಲದೇ
ಮುಂದೆ ಮುಂದಕ್ಕೆ ನಡೆ...

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...