Tuesday, 18 October 2022

ಈ ಜಗತ್ತಿನಲ್ಲಿ
ಅನೇಕರು ಸೋಮಾರಿಗಳಾಗಿರುತ್ತಾರೆ,
ಉತ್ಸಾಹ ಕಳೆದುಕೊಂಡವರಿರುತ್ತಾರೆ,
ಬದುಕಿನಲ್ಲಿ ಹೆಚ್ಚು ಭರವಸೆ
ಉಳಿಸಿಕೊಂಡಿರುವದಿಲ್ಲ,
ಒಮ್ಮೊಮ್ಮೆ ವಿನಾಕಾರಣವಾಗಿ-
ಅದೂ ಸಹಜವೇ...
ಸದಾ ಬಾಲಕ್ಕೆ ಬೆಂಕಿ ಹಚ್ಚಿಕೊಂಡು
ಭರ್ರನೇ ಮೇಲೇರುತ್ತಲೇ ಇರಲು
ನಾವೇನೂ ಮಿಂಚಿನೋಟಗಳ
ರಾಕೆಟ್ಗಳಲ್ಲವಲ್ಲ...

ಪ್ರಕೃತಿ ಕಡೆಗೊಮ್ಮೆ ಕಣ್ತೆರೆದು ನೋಡೋಣ,
ಕೆಲವೊಮ್ಮೆ ಬಯಲುಗಳು,
ಗಿಡಮರಗಳು, 
ಪ್ರಾಣಿ- ಪಕ್ಷಿಗಳೂ
ಕೂಡ ದೀರ್ಘ ವಿಶ್ರಾಂತಿಯಲ್ಲಿ
ಇರುತ್ತವೆ.
ಕೆಲವೊಮ್ಮೆ, ಕೆಲಕಾಲ-
ಹಾಗಿರುವದೂ ಪ್ರಕೃತಿ ನಿಯಮವೇ...
ಸುದೀರ್ಘ ರಾತ್ರಿಗಳು,
ಚಂದಿರ, ಏಕಾಂತ,
ವಿಸ್ತಾರದ ಬಯಲು,
ನಿಶ್ಚಲತೆಗಳೊಂದಿಗೂ
ಆರಾಮವಾಗಿ, 
ನಿರ್ಯೋಚನೆಯಿಂದ
ಕೆಲ ಹೊತ್ತು ಕಳೆಯೋಣ...
ಮತ್ತೆ 
ಮರುಜನ್ಮ ಪಡೆಯೋಣ...

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...